Homeಚಳವಳಿನಾವೂ ನೋಡುತ್ತೇವೆ, ಸಾಕ್ಷಿಯಾಗುತ್ತೇವೆ: ಈ ದುರಿತ ಕಾಲದಲ್ಲಿ ಮತ್ತೆ ನೆನಪಾಗುವ ಫೈಜ್‌ ಕವನ

ನಾವೂ ನೋಡುತ್ತೇವೆ, ಸಾಕ್ಷಿಯಾಗುತ್ತೇವೆ: ಈ ದುರಿತ ಕಾಲದಲ್ಲಿ ಮತ್ತೆ ನೆನಪಾಗುವ ಫೈಜ್‌ ಕವನ

ಇಂದು ಭಾರತವೂ ಸಹ ಆ ಎಪ್ಪತ್ತು-ಎಂಬತ್ರರ ದಶಕದ ಪಾಕಿಸ್ತಾನದ ನಿರಂಕುಶ ಪ್ರಬುತ್ವದ, ಮತೀಯವಾದದ ವ್ಯವಸ್ಥೆಗೆ ಜಾರುತ್ತಿದೆ. ಸಂಘ ಪರಿವಾರದ ಸುಳ್ಳುಗಳು ತಾಂಡವವಾಡುತ್ತಿವೆ, ಸತ್ಯದ ದನಿ ಕ್ಷೀಣಗೊಂಡಿದೆ.

- Advertisement -
- Advertisement -

(ಪತ್ರಿಕಾ ವರದಿ : ಕಳೆದ ವಾರ ಐಐಟಿ – ಖರಗಪುರನ ವಿದ್ಯಾರ್ಥಿಗಳು ‘ಜಾಮಿಯ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್‌ನಲ್ಲಿ ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ವಿರುದ್ದ ದಾಳಿ ಮಾಡಿದ ಪೋಲೀಸರ ಕೃತ್ಯದ ವಿರುದ್ದ’ ಪ್ರತಿಭಟಿಸುತ್ತಿದ್ದರು. ಆದರೆ ಇವರು ದ್ವೇಷವನ್ನು ಹರಡುತ್ತಿದ್ದಾರೆ’ ಎಂದು ಅಲ್ಲಿಯ ಪ್ರಾಧ್ಯಾಪಕರೊಬ್ಬರು ಆರೋಪಿಸಿದರು. ಇಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಕಾರಣವೇನೆಂದರೆ ಅಹಿಂಸಾತ್ಮಕವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಫೈಜ್ ಅವರ ಪ್ರಖ್ಯಾನ ಕವಿತೆ ‘ನಾವೂ ನೋಡುತ್ತೇವೆ’ (ಹಮ್ ಬೀ ದೇಖೇಂಗೆ) ಯ ಕೆಲ ಸಾಲುಗಳನ್ನು ಬಳಸಿಕೊಂಡಿದ್ದರು. ಫೈಜ್ ಈ ಸಾಲುಗಳು ಆ ಪ್ರಾದ್ಯಾಪಕರ ಪ್ರಕಾರ ದ್ವೇಷ ಬಿತ್ತುತ್ತವೆ !!)

ಪಾಕಿಸ್ತಾನದ ಲೇಖಕ, ಕವಿ ಫೈಜ್ ‘ನಾವೂ ನೋಡುತ್ತೇವೆ’ ಕವಿತೆಯನ್ನು ಸರ್ವಾಧಿಕಾರಿ ಜಿಯಾ-ಉಲ್-ಹಕ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ 1979ರಲ್ಲಿ ಬರೆದರು. ಇದು ಬಂಡಾಯ ಕವಿತೆ. ಜಿಯಾ ಉಲ್ ಹಕ್ ಸಾಂಪ್ರದಾಯಿಕ ಇಸ್ಲಾಂ ಧರ್ಮವನ್ನು ತನ್ನ ಸರ್ವಾಧಿಕಾರಕ್ಕೆ ಆಯುಧವಾಗಿ ಬಳಸಿಕೊಂಡು ತನ್ನ ನಿರಂಕುಶ ಪ್ರಭುತ್ವದ ಹಿಡಿತ ಗಟ್ಟಿಗೊಳಿಸಿಕೊಂಡ. ಫೈಜ್ ‘ಜಿಯಾ ಅದಿಕಾರದ ಹುಚ್ಚು ಹಿಡಿಸಿಕೊಂಡಿದ್ದಾರೆ, ಅವರು ದೈವ ಭಕ್ತರಲ್ಲ’ ಎಂದು ಹೇಳಲು ತಮ್ಮ ಈ ಕವಿತೆಯಲ್ಲಿ ಧರ್ಮವನ್ನು ಸಾಂಕೇತಿಕವಾಗಿ ಬಳಸಿಕೊಂಡು ನಂಬಿಕೆಯ ಪ್ರತಿಮಾ ಸೃಷ್ಟಿಯ ಮೂಲಕ ಬಂಡಾಯದ ದನಿ ಸಿಡಿಸಿದ್ದಾರೆ

ಈ ಕವಿತೆಯ (ಒರಟಾದ) ಭಾವಾನುವಾದ

ನಾವೂ ನೋಡುತ್ತೇವೆ —

ನಾವು ನೋಡುತ್ತೇವೆ, ನಿಜಕ್ಕೂ, ನಾವೂ  ಸಾಕ್ಷಿಯಾಗಬೇಕು
ಎಲ್ಲಾ ಚಿರಕಾಲದ ಮೇಲೆ ನಾವು ಕೆತ್ತಿದ ವಾಗ್ದಾನದ ದಿನಕ್ಕೆ

ನಿರಂಕುಶದ, ಶೋಷಣೆಯ ಬೆಟ್ಟಗಳು ಹತ್ತಿಯಂತೆ ಹಾರಿ ಹೋಗುವಾಗ  ನಮ್ಮ ಕಾಲ ಕೆಳಗಿರುವ ಶೋಷಿತರ ಭೂಮಿಯು ಕಂಪಿಸಿ ನಡುಗುವಾಗ  ಆರ್ಭಟಿಸುವ ಗುಡುಗು, ಸೀಳುವ ಮಿಂಚು ಆಳುವವರ ಮೇಲೆ ಠಳಾಯಿಸುವಾಗ
ನಾವು ಖಂಡಿತ ಸಾಕ್ಷಿಯಾಗುತ್ತೇವೆ

ಅಸತ್ಯದ ವಿಗ್ರಹಗಳನ್ನು ದೇವರ ಕಾಬಾದ ನೆಲೆಯಿಂದಾಚೆ ಎಸೆದುಬಿಡುವಾಗ
ನಾವು-ಶುದ್ದರು, ಪವಿತ್ರ ಸ್ಥಳದಿಂದ ಹೊರದೂಡಲ್ಪಟ್ಟವರು (ಶೋಷಿತರು) ಸಿಂಹಾಸನಗಳ ಮೇಲೆ ಅದಿಕಾರ ಸ್ಥಾಪಿಸುತ್ತೇವಾಗ
ಕಿರೀಟಗಳನ್ನು ಎಸೆದುಬಿಡುವಾಗ,  ಸಿಂಹಾಸನಗಳನ್ನು ದ್ವಂಸಗೊಳಿಸುವಾಗ

ಆಗ ಹೆಸರು ಮಾತ್ರ ಉಳಿದುಕೊಳ್ಳುತ್ತದೆ, ಅದು ಅಗೋಚರವೂ ಹೌದು ಮತ್ತು ಗೋಚರವೂ ಹೌದು
ಅವೆರೆಡೂ ನೋಟವೂ ಹೌದು, ನೋಡುಗನೂ ಹೌದು, ಸತ್ಯದ ದನಿಯು ಮುಗಿಲೆತ್ತರಕ್ಕೆ

ಅದು ನಾನು ಮತ್ತು ನೀನು, ಮತ್ತು ದೇವರ ಮಕ್ಕಳು ಆಳ್ವಿಕೆ ನಡೆಸುತ್ತಾರೆ
ಅದು ನಾನು ಮತ್ತು ನೀನು
ನಾವು ಸಾಕ್ಷಿಯಾಗುತ್ತೇವೆ, ಖಂಡಿತವಾಗಿ ನಾವೂ ಸಾಕ್ಷಿಯಾಗಬೇಕು

ಸಹಜವಾಗಿಯೆ ಸರ್ವಾದಿಕಾರಿ ಜಿಯಾ ಈ ಕ್ರಾಂತಿಕಾರಿ ಕವಿತೆಯನ್ನು ನಿಷೇಧಿಸಿದರು. ಆದರೆ 1986ರಲ್ಲಿ ಪಾಕಿಸ್ತಾನದ ಖ್ಯಾತ ಗಜಲ್ ಗಾಯಕಿ ಇಕ್ಬಾಲ್ ಬಾನು ಈ ಕವಿತೆಯನ್ನು ಪ್ರೇಕ್ಷಕರ ಮುಂದೆ ಹಾಡಿದಾಗ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ಮುಗಿಲು ಮುಟ್ಟಿತು. ಸುಹಾಂತ್ ಸಿಂಗ್ ಬರೆಯುತ್ತಾರೆ ‘ಆದಿನ ಪ್ರೇಕ್ಷಕರು ಕಿರೀಟಗಳನ್ನು ಎಸೆದು ಬಿಡುತ್ತೇವೆ, ಸಿಂಹಾಸನಗಳನ್ನು ಉರುಳಿಸುತ್ತೇವೆ (ಸಬ್ ತಾಜ್ ಉಚಾಲೆ ಜಾಯೆಂಗೆ, ಸಬ್ ತಕ್ತ್ ಗಿರಾಯೆ ಜಾಯೆಂಗೆ) ಎಂದು ಹುರುಪಿನಿಂದ ಹಾಡುತ್ತಿದ್ದರು’

ಇದು ಕವಿತೆಗಿರುವ ಶಕ್ತಿ. ಆದರೆ ಜೊತೆಗೆ ಕವಿ, ಲೇಖಕನ ನೈತಿಕತೆ ಮತ್ತು ಬದ್ದತೆ ಸಹ ಮುಖ್ಯವಾಗುತ್ತದೆ. ಫೈಜ್ ಅವರ ನೈತಿಕತೆ ಮತ್ತು ಮೌಲ್ಯಗಳ ಕುರಿತು ಪಾಕಿಸ್ತಾನ ಪ್ರಜೆಗಳಿಗೆ ಚಿರಪರಿಚಿತವಾಗಿತ್ತು. ಜನರನ್ನು ಬಹುದಿನಗಳ ಕಾಲ ಅದುಮಿಡಲು ಸಾದ್ಯವಿಲ್ಲ. ದಂಗೆಗಾಗಿ ಕಾಯುತ್ತಾರೆ. ಆ ಹೊಳಹು ಕವಿತೆಯ ರೂಪದಲ್ಲಿಯೂ ಇರಬಹುದು ಎಂಬುದಕ್ಕೆ ‘ನಾವೂ ನೋಡುತ್ತೇವೆ’ ಕವಿತೆ ಸಾಕ್ಷಿ. ಆದರೆ ಇಂದು ಭಾರತವೂ ಸಹ ಆ ಎಪ್ಪತ್ತು-ಎಂಬತ್ರರ ದಶಕದ ಪಾಕಿಸ್ತಾನದ ನಿರಂಕುಶ ಪ್ರಬುತ್ವದ, ಮತೀಯವಾದದ ವ್ಯವಸ್ಥೆಗೆ ಜಾರುತ್ತಿದೆ. ಸಂಘ ಪರಿವಾರದ ಸುಳ್ಳುಗಳು ತಾಂಡವವಾಡುತ್ತಿವೆ, ಸತ್ಯದ ದನಿ ಕ್ಷೀಣಗೊಂಡಿದೆ. ಆ ಸತ್ಯದ ದನಿಯನ್ನು ಮುಗಿಲೆತ್ತರಕ್ಕೇರಿಸುವವರೂ ಸಹ ದಿಕ್ಕು ತೋಚದಂತಾಗಿದ್ದಾರೆ. ಫೈಜ್ ಮತ್ತೆ ಮತ್ತೆ ನಮಗೆ ಸಾಕ್ಷಿಪ್ರಜ್ಞೆಯಾಗುತ್ತಾರೆ.

ಇಂದು ಭಾರತದಲ್ಲಿ ಕರಾಳ ಶಾಸನಗಳಾದ ಸಿಎಎ-ಎನ್‌ಆರ್‌ಸಿ ವಿರುದ್ದ ನಾಗರಿಕರು, ವಿದ್ಯಾರ್ಥಿಗಳು ದಂಗೆ ಎದ್ದಿದ್ದಾರೆ. ಇಂದು ಈ ಸಿಎಎ ಶಾಸನವು ಮೂಲಬೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್‍ಯ ಮತ್ತು ಬಂಧುತ್ವಗಳನ್ನು ಉಲ್ಲಂಘಿಸುತ್ತದೆ. ಆ ಮೂಲಕ ದೇಶದ ಘನತೆ ಸಹ ನಾಶವಾಗುತ್ತಿದೆ. ಮೋದಿ-ಶಾ-ಆರೆಸ್ಸಸ್ ಜೋಡಿಗೆ ಸುಳ್ಳುಗಳನ್ನು ಎತ್ತರದ ದನಿಯಲ್ಲಿ ಮಾತನಾಡಿದರೆ ಅದನ್ನು ಜನರಿಗೆ ತಲುಪಿಸಬಹುದು ಎಂದು ನಂಬಿದ್ದಾರೆ. ಚುನಾವಣೆಗಳಲ್ಲಿ ಅವರ ಗೆಲುವು ಇವರ ಈ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. ಇವರ ಸುಳ್ಳುಗಳಿಗೆ, ಮತೀಯವಾದಕ್ಕೆ ತಲೆದೂಗಿಸುವಂತಹ ಬಕ್ತರ ಶೇಕಡಾವಾರು ಪ್ರಮಾಣ ಇಂದಿಗೂ ಕಡಿಮೆಯಾಗಿಲ್ಲ.

ಇಲ್ಲಿ ಆಳುವವರಿಗೂ ಸಂವಿದಾನದ ಪೀಠಿಕೆಯ, ನಿತಿಸಂಹಿತೆಗಳ ಅರಿವಿಲ್ಲ ಮತ್ತು ಅವರು ಅದನ್ನು ತಿರಸ್ಕರಿಸಿದ್ದಾರೆ ಆದರೆ ಆಳಿಸಿಕೊಳ್ಳುವವರೂ ಸಹ ಇದೆ ಹಾದಿಯಲ್ಲಿರುವುದೆ ಇಂದಿನ ಭಾರತದ ದುರಂತ. ‘ಕಿರೀಟಗಳನ್ನು ಎಸೆದು ಬಿಡುತ್ತೇವೆ, ಸಿಂಹಾಸನಗಳನ್ನು ಉರುಳಿಸುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಮಾತನಾಡುವ ಬಂಡಾಯಗಾರರು ಇಂದಿಗೂ ಅಲ್ಪಸಂಖ್ಯೆಯಲ್ಲಿದ್ದಾರೆ. ಈ ಸಿಎಎ-ಎನ್‌ಆರ್‌ಸಿ ವಿರುದ್ದದ ಹೋರಾಟದ ಬಿರುಸು ದಿನದಿನಕ್ಕೂ ಹೆಚ್ಚುತ್ತಿರುವುದು ನಿಜ. ಆದರೆ ಪೌರತ್ವ, ದೇಶ, ಪ್ರಜೆ ಇವುಗಳ ಸಮಜೋ-ಸಾಂಸ್ಕೃತಿಕ-ರಾಜಕೀಯ ಸಂಕೀರ್ಣತೆಯನ್ನು ಜನತೆಗೆ ಮನದಟ್ಟು ಮಾಡಿಕೊಡದಿದ್ದರೆ ಮುಂದಿನ ದಿನಗಳು ದುರಂತಮಯವಾಗಲಿದೆ

ಸಂವಿಧಾನ ಪ್ರಸ್ತಾವನೆಯಲ್ಲಿನ ಆರಂಬದ ಸಾಲುಗಳಾದ ಸ್ವಾಯತ್ತತೆ, ಸಮಾಜವಾದ, ಪ್ರಜಾಪ್ರಬುತ್ವ ಮತ್ತು ಗಣರಾಜ್ಯ ತತ್ವಗಳು ಭಾರತ ದೇಶದ ಅಡಿಪಾಯಗಳು. ಆದರೆ ಈ ಕುರಿತು ನಮ್ಮ ಜನಮಾನಸದಲ್ಲಿ ಅರಿವು, ಆಳವಾದ ಬದ್ದತೆ ಮತ್ತು ಸಂವೇದನೆಯ ಕೊರತೆ ಇದೆ. ಸಂವಿದಾನದ ಅನುಚ್ಚೇಧ 14, 15, 16, 17, 21 22, 23, 24, 25 ಸಾರ್ವತ್ರಿಕವಾಗಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತವೆ. ಸಂವಿದಾನದ ಪ್ರಸ್ತಾವನೆ ಮತ್ತು ಅನುಚ್ಚೇಧಗಳ ಅನುಸಾರ ದೇಶವೆಂದರೆ ಒಂದು ಬಹುತ್ವದ ಸಮಾಜ, ನೈತಿಕತೆ, ಐಕ್ಯತೆ. ಅಕ್ರಮ ವಲಸಿಗರು ಎಂದರೆ ಅವರು ಮನುಶ್ಯರು ಎಂದರ್ಥ. ಅವರು ನಾಗರಿಕರು ಎಂಬದೂ ನಿಜ. ಆದರೆ ಅವರ ಘನತೆ ಕುಂದಿಸುವ ಹಕ್ಕು ಯಾವ ಪ್ರಬುತ್ವಕ್ಕೂ ಇಲ್ಲ. ಈ ಮನುಷ್ಯ ಮತ್ತು ಮಾನವೀಯತೆಯನ್ನು ರಾಜಕೀಯಗೊಳಿಸಿ ಅವರನ್ನೆಲ್ಲ ನಿರ್ದಿಷ್ಟ ಪ್ರದೇಶದ ಗಡಿಯೊಳಗೆ ನಾಗರಿಕರೆಂದು ಮೌಲ್ಯಮಾಪನ ಮಾಡುವುದೆ ಸಂವಿದಾನದ ನೀತಿಸಂಹಿತೆಗಳ ಉಲ್ಲಂಘನೆಯಾಗುತ್ತದೆ.

ಇಂದು ಮೋದಿ-ಶಾ ಜೋಡಿಯು ದೇಶವನ್ನು ಇಲ್ಲಿನ ನಾಗರಿಕರನ್ನು ಒಂದು ಬೌಗೋಳಿಕತೆಗೆ ಸೀಮಿತಗೊಳಿಸಿ ಅವರಲ್ಲಿ ಬಹುಸಂಖ್ಯಾತರಿಗೆ ಮಾತ್ರ ಪೌರತ್ವ ಕೊಡಿಸುವ ಮತಾಂಧ ರಾಜಕಾರಣ ಹೇರುತ್ತಿದ್ದಾರೆ. ಮುಸ್ಲಿಂರು ಎನ್ನುವ ಆದಾರದ ಮೇಲೆ ವಲಸಿಗರನ್ನು ವರ್ಗೀಕರಿಸುವ ಮೂಲಕ ಸಂವಿದಾನದ ಆಶಯವಾದ ಬಂದುತ್ವವನ್ನೆ ನಾಶ ಮಾಡಲಾಗುತ್ತಿದೆ. ಆ ಮೂಲಕ ಸೆಕ್ಯುಲರಿಸಂ ಸಹ ಧೂಳಿಪಟವಾಗುತ್ತದೆ. ಬಿಜೆಪಿ ಪಕ್ಷದ ಈ ಸರ್ವಾದಿಕಾರಿ ರಾಜಕಾರಣಕ್ಕೆ ಮುಖಾಮುಖಿಯಾಗುವ ದಿಟ್ಟತೆ, ಬದ್ದತೆ ಇಂಡಿಯಾದ ರಾಜಕೀಯ ಪಕ್ಷಗಳಿಲ್ಲ. ಮತ್ತೊಂದೆಡೆ ಸಂಘ ಪರಿವಾರವು ಈ ದೇಶದ ಬಹುಸಂಖ್ಯಾತರನ್ನು ಈ ಮತೀಯ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ಮನದಟ್ಟು ಮಾಡಿಕೊಡಲು ಪ್ರಗತಿಪರರು ಮತ್ತೆ ಮತ್ತೆ ಸೋಲುತ್ತಿದ್ದಾರೆ. ಇದು ಕೇವಲ ಅದ್ಯಯನದ ಕೊರತೆ ಮಾತ್ರವಲ್ಲ, ಸಮಾಜ, ನಮ್ಮ ಬದುಕಿನ ದೃಷ್ಟಿಕೋನ ಮತ್ತು ನಮ್ಮ ಹೋರಾಟ ಮೂರರ ನಡುವಿನ ಸಂವಹನ, ನಂಬಿಕೆ ಮತ್ತು ತಾಳಮೇಳದ ಕೊರತೆ ಇದೆ. ಇದನ್ನು ಮೀರುವುದು ಹೇಗೆ?

ಅಚನ್ ವೈನಿಕ್ ಅವರು “ಹೋರಾಟದಲ್ಲಿ ರಾಶ್ಟ್ರೀಯತೆ ಕಲ್ಪನೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ಪರ್ದಾತ್ಮಕ ರಾಶ್ಟ್ರೀಯತೆಗಳು ಯಾಕಿವೆ ಮತ್ತು ನಾವು ಯಾವ ದಿಕ್ಕೆನೆಡೆಗೆ ಸಾಗಬೇಕು ಎಂದು ನಿರ್ಣಯಿಸಬೇಕಾಗಿದೆ. ರಾಶ್ಟ್ರೀಯತೆಯು ಹಳೆಯದೆ ಅಥವಾ ಹೊಸದೆ? ರಾಶ್ಟ್ರೀಯತೆಯು ವಸ್ತುನಿಶ್ಟ ಪರಿಚೆಗಳ ಮೇಲೆ ಆದಾರವಾಗಿದೆಯೆ? ಅತವಾ ವ್ಯಕ್ತಿನಿಶ್ಟ ಗುಣಲಕ್ಷಣಗಳ ಮೇಲೆ ಆದಾರವಾಗಿದೆಯೆ? ರಾಶ್ಟ್ರೀಯತೆಯು ಪೌರಸಂಬಂದಿತವೆ ಅಥವಾ ಜನಾಂಗೀಯತೆಯೆ? ಅಥವಾ ಅವೆರಡೂ? ರಾಶ್ಟ್ರೀಯತೆಯು ವಿಶ್ವಾವ್ಯಾಪಿಯೆ ಅಥವಾ ವೈಯುಕ್ತಿಕವಾದಿಯೆ? ಅಥವಾ ಅವೆರಡೂ? ರಾಶ್ಟ್ರೀಯತೆ ತತ್ವ ಸಿದ್ದಾಂತವೆ? ಬಾವಾವೇಶವೆ? ಅಥವಾ ಅವೆರಡೂ? ರಾಶ್ಟ್ರೀಯತೆಯು ಒಳಗೊಳ್ಳುವಿಕೆಯೆ? ಹೊರಗಿಡುವಿಕೆಯೆ? ಅಥವಾ ಅವೆರಡೂ? ಅದು ಸಾಂಸ್ಕೃತಿಕವೆ? ರಾಜಕೀಯವೆ? ಅತವಾ ಅವೆರಡೂ? ಅದು ಒಳ್ಳೆಯದೆ? ಕೆಟ್ಟದೆ? ಅಥವಾ ಅವೆರಡೂ? ಕೆಲಸಂದರ್ಬದಲ್ಲಿ ಅದು ಒಳ್ಳೆಯದೆ? ಅದರಲ್ಲಿ ಕೆಲ ಕೆಟ್ಟ ಅಂಶಗಳಿವೆಯೆ? ಅದು ತೀರಾ ಕೆಟ್ಟದಾಗಿದರೂ ಸಹ ಕೆಲವೊಮ್ಮೆ ಅದರಲ್ಲಿ ಒಳ್ಳೆಯ ಅಂಶಗಳಿರುತ್ತದೆಯೆ?” ಎಂದು ಬರೆಯುತ್ತಾರೆ.

ಈ ಎಲ್ಲಾ ಪ್ರಶ್ನೆಗಳಿಗೆ ನಾವು ಸೂಕ್ತ ಉತ್ತರಗಳನ್ನು ಕಂಡುಕೊಳ್ಳುವುದು ಮಾತ್ರವಲ್ಲ ಇಂದು ಪೌರತ್ವದ ಉಮೇದಿಯಲ್ಲಿ, ಹಪಾಹಪಿತನದಲ್ಲಿರುವ ಬಹುಸಂಖ್ಯಾತರಿಗೂ ಇದರ ಅರಿವು ಸಂವೇದನೆ ಮೂಡಿಸುವ ಜವಬ್ದಾರಿ ಇಲ್ಲಿನ ಪ್ರಜ್ಞಾವಂತರ ಮೇಲಿದೆ. ಇದು ದೊಡ್ಡ ಸವಾಲು. ಈ ಹೊಣೆಗಾರಿಕೆಯನ್ನು ಎಚ್ಚರಿಕೆಯಿಂದ, ಸಾಮಾನ್ಯ ಜ್ಞಾನದಿಂದ ನಿಭಾಯಿಸದಿದ್ದರೆ ಎಲ್ಲಾ ಹೋರಾಟಗಳೂ ವ್ಯರ್ಥವಾಗುತ್ತವೆ. ಇಂದಿನ ಹೋರಾಟಗಳಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಘೋಶಣೆ ಮೊಳಗುತ್ತಿದೆ. ಈ ಘೋಶಣೆಗೆ ರಚನಾತ್ಮಕ ಗಾಲಿಗಳನ್ನು ಜೋಡಿಸುವ, ಆ ಮೂಲಕ ಹೊಸ ಪಯಣವನ್ನು ಆರಂಬಿಸುವ ಸವಾಲು ನಮ್ಮ ಮುಂದಿದೆ. ಏಕೆಂದರೆ ನಾವೂ ನೋಡುತ್ತೇವೆ, ನಾವೂ ಸಾಕ್ಷಿಯಾಗುತ್ತೇವೆ ಎನ್ನುವ ಕವಿತೆಯ ಸಾಲುಗಳನ್ನು ಹಾಡುವ, ಗುನುಗುನಿಸುದಕ್ಕೂ ಎದೆಗಾರಿಕೆ ಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...