Homeಅಂಕಣಗಳುಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ...

ಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ…

- Advertisement -
- Advertisement -

ಖಾಸಗೀಕರಣಕ್ಕೆ ಹಾತೊರೆಯುತ್ತಿರುವ ಸರ್ಕಾರ ನಮ್ಮ ಸಾರ್ವಜನಿಕ ಉದ್ಯಮಗಳು ನಷ್ಟಕ್ಕೆ ಏಕೆ ಒಳಗಾದವು? ಅವುಗಳನ್ನು ಲಾಭದಾಯಕ ಮಾಡುವುದು ಹೇಗೆ ಎಂಬುದರ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅವುಗಳನ್ನು ಮುಚ್ಚಿಸಿ, ಖಾಸಗಿಯವರಿಗೆ ದೋಚಲು ಅವಕಾಶ ಮಾಡಿಕೊಡಲು ಹೊರಟಿರುವುದು ದೇಶದ ದೌರ್ಭಾಗ್ಯವೇ ಸರಿ.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡುವುದು ಮೋದಿ ಸರ್ಕಾರದ ಧೋರಣೆಯಾಗಿದೆ. ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳು ಅನೇಕ ವರ್ಷದಿಂದ ನಷ್ಟದಲ್ಲಿ ನಡೆಯುತ್ತಿವೆ. ಅವುಗಳನ್ನು ಮುಚ್ಚಲು ಅಭ್ಯಂತರವಿಲ್ಲ. ಆದರೆ ಕೆಲವು ಲಾಭದಾಯಕವಾದ ಸಂಸ್ಥೆಗಳನ್ನು ಅವುಗಳನ್ನು ನಿರ್ವಹಿಸುತ್ತಿದ್ದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಷ್ಟದಲ್ಲಿ ನಡೆಯುವಂತೆ ಮಾಡಿ ಕಬಳಿಸಿದ್ದೂ ಉಂಟು.

ಭಾರತದ ಆಭರಣಗಳೆಂದು ಕರೆಯಲ್ಪಡುತ್ತಿದ್ದ ಸಾರ್ವಜನಿಕವಲಯದ ಉದ್ದಿಮೆಗಳನ್ನು ಜವಹಾರ್‍ಲಾಲ್ ನೆಹರು ಅವರು ಆರಂಭಿಸಿದ್ದರು. ಆ ಹೆಮ್ಮೆಯ ದಿನಗಳು ಆಗಿಹೋಯಿತು. ಈಗ ಅವುಗಳನ್ನೆಲ್ಲ ನಷ್ಟದಲ್ಲಿ ನಡೆಯುತ್ತಿದೆಯೆಂದು ಹೆಸರಿಸಿ ಅವುಗಳನ್ನು ತಮಗೆ ಬೇಕಾದ ಉದ್ದಿಮೆದಾರರಿಗೆ ಮಾರಾಟ ಮಾಡುವ ಹುನ್ನಾರ ನಡದಿದೆ. ಉದಾಹರಣೆಗೆ BEML, BEL ಮುಂತಾದ ಲಾಭದಾಯಕ ಉದ್ಯಮಗಳನ್ನು ಮಾರಾಟ ಮಾಡುವ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸ್ವಾತಂತ್ರ್ಯ ಬಂದ ಮೊದಲ ಕೆಲವು ವರ್ಷಗಳ ಕಾಲ ಖಾಸಗಿ ಉದ್ದಿಮೆದಾರರು ಲಕ್ಷಾಂತರ ಹಣ ಹೂಡಿ ಉದ್ಯಮಗಳನ್ನು ಆರಂಭಿಸಲು ಬಂಡವಾಳ ಹಾಕಲು ಹಿಂದೇಟು ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ನೆಹರು ಅವರು ಉತ್ತೇಜನ ಕೊಟ್ಟರು. ಅವೆಲ್ಲ ಲಾಭದಾಯಕ ಸಂಸ್ಥೆಗಳಾಗಿ ಮುಂದುವರೆದವು. ಅದರಿಂದ ದೇಶದ ಆರ್ಥಿಕತೆ ದೌಡಾಯಿಸಿತು. ಆರ್ಥಿಕ ಪ್ರಗತಿ ಆಯಿತು.

ನೆಹರು ಅವರು ಈ ಸರ್ಕಾರಿ ಉದ್ಯಮಗಳನ್ನು ಆರಂಭಿಸಲು ಮತ್ತೊಂದು ಪ್ರಬಲ ಉದ್ದೇಶವಿತ್ತು. ಅದೇನೆಂದರೆ ಜನತೆಗೆ ಉದ್ಯೋಗ ಒದಗಿಸುವುದು. ಉದ್ಯಮೀಕರಣ ದಾಪುಗಾಲಿಟ್ಟಿತಾದರೂ ಜನತೆಗೆ ಉದ್ಯೋಗ ಒದಗಿಸುವ ಗುರಿ ತಲುಪಲಾಗಲಿಲ್ಲ. ನಿರ್ವಹಣೆಯ ಅನಾದರದಿಂದ ಹಾಗೂ ಕಾರ್ಮಿಕ ಸಂಘಟನೆಗಳ ಕಾಟದಿಂದ ಉದ್ಯಮಗಳು ಸೊರಗಲು ಆರಂಭವಾದವು.

ಕೇಂದ್ರದಿಂದ ಆರಂಭವಾದ ಸಾರ್ವಜನಿಕ ವಲಯದ ಉದ್ಯಮಗಳು ಲಾಭದಾಯಕವಾಗಿಯೇ ನಡೆದವಾದರೂ, ರಾಜ್ಯಗಳು ಆರಂಭಿಸಿದ ಸಾರ್ವಜನಿಕ ವಲಯದ ಉದ್ಯಮಗಳು ಕಾಲಕ್ರಮೇಣ ನೆಲಕಚ್ಚಿದವು. ಅವುಗಳಿಗೆ ಆಕ್ಸಿಜನ್ ಕೊಟ್ಟು ಜೀವಂತವಾಗಿಡಲು ವರ್ಷ ವರ್ಷ ಲಕ್ಷಾಂತರ ರೂಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕಾಯಿತು.

1991ರಲ್ಲಿ ಉದಾರೀಕರಣ ಖಾಸಗೀಕರಣದತ್ತ ಸರ್ಕಾರ ವಾಲಿತು. ಈ ರಾಷ್ಟ್ರೀಕೃತ ಉದ್ಯಮಗಳಿಗಿಂತ ಉತ್ತಮವಾಗಿ ಖಾಸಗಿ ಉದ್ಯಮಗಳು ನಡೆಯುತ್ತಿದ್ದುದರಿಂದ ಸರ್ಕಾರಿ ಉದ್ಯಮಗಳನ್ನು ಸರ್ಕಾರ ಸ್ಥಗಿತ ಗೊಳಿಸಿದವು. ಅವುಗಳ ಷೇರುಗಳನ್ನು ಮಾರಲು ಆರಂಭವಾಯಿತು. ಸರ್ಕಾರ ಕೆಲವು ಕಂಪನಿಗಳ ಷೇರುಗಳನ್ನು ಸಂಪೂರ್ಣವಾಗಿ ಇನ್ನು ಕೆಲವು ಕಂಪನಿಗಳ ಷೇರುಗಳನ್ನು ಭಾಗಶಃ ಮಾರಾಟ ಮಾಡಿದವು ಈ ನಿಲುವಿಗೆ ಸರ್ಕಾರ ತನ್ನ ಸಮರ್ಥನೆ ನೀಡಿತು.

ಪ್ರವಾಸೋದ್ಯಮ, ಹೊಟೇಲ್ ನಡೆಸುವುದು ದಿನಬಳಕೆಯ ವಸ್ತುಗಳ ಉತ್ಪಾದನೆ, ಸಾರಿಗೆವಾಹನಗಳ ಉತ್ಪಾದನೆಗಳನ್ನು ಖಾಸಗಿ ಉದ್ಯಮಿಗಳು ಯಶಸ್ವಿಯಾಗಿ ನಡೆಸುವರಾಗಿದ್ದರಿಂದ ಸರ್ಕಾರ ಈ ಉದ್ಯಮಗಳಿಗೆ ಕೈಹಾಕಬಾರದು. ಸಾರ್ವಜನಿಕ ಉದ್ಯಮಗಳ ಆರೋಗ್ಯಕ್ಕೆ ಸಂಬಂಧಪಟ್ಟ ವಿದ್ಯಮಾನಗಳನ್ನು ಬಲಪಡಿಸುವುದು ಸರ್ಕಾರದ ನಿಲುವಾಯಿತು.

ತದನಂತರ ಅಸ್ತಿತ್ವಕ್ಕೆ ಬಂದ ಸರ್ಕಾರಗಳೂ ಲಾಭದಾಯಕವಾಗಿ ನಡೆಯುತ್ತಿದ್ದ ಸಾರ್ವಜನಿಕ ಉದ್ದಿಮೆಗಳ ಷೇರುಗಳನ್ನು ಮಾರಾಟ ಮಾಡಿ ಒಂದು ಲಕ್ಷ ಕೋಟಿ ರೂಗಳ ಬಂಡವಾಳ ಹಿಂಪಡೆಯಬೇಕೆಂದು ನಿರ್ಧರಿಸಿದವು. ಸಾರ್ವಜನಿಕ ವಲಯದ ಉದ್ಯಮಗಳನ್ನು ಬೆಳೆಸುವುದು ಅನವಶ್ಯಕ. ಖಾಸಗೀಕರಣವೇ ಮುಕ್ತಿದಾಯಕ ಎಂದು ಸರ್ಕಾರ ಭಾವಿಸಿತು. ಸಾರ್ವಜನಿಕ ವಲಯದ ಉದ್ಯಮಗಳ ಷೇರುಗಳ ಮಾರಾಟದ ಜೊತೆಗೆ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣ ಮಾಡತೊಡಗಿದವು. ಹಣಕಾಸಿನ ಕೊರತೆ ಖಾಸಗೀಕರಣಕ್ಕೆ ಕಾರಣ ಎಂದು ಸಬೂಬು ಹೇಳಿತು. ಭಾರತ್ ಪೆಟ್ರೋಲಿಯಂನಂತಹ ಲಾಭದಾಯಕ, ಪ್ರತಿಷ್ಠಿತ ಉದ್ಯಮದ ಷೇರುಗಳನ್ನು ಕೂಡ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ದುರ್ದೈವ.

ಸಾಮಾನ್ಯ ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು, ಉತ್ತಮ ಶಿಕ್ಷಣ ಪಡೆಯಲು ಇದ್ದ ಅವಕಾಶವನ್ನು ಸರ್ಕಾರ ಲಾಭಕೋರ ಖಾಸಗಿ ಸಂಸ್ಥೆಗಳಿಗೆ ವಹಿಸಿ ಪ್ರಜಾದ್ರೋಹ ಎಸಗಲಾಗಿದೆ.

ಅದರಂತೆಯೇ ಷಿಪ್ಪಿಂಗ್ ಇಂಡಸ್ಟ್ರಿ ಆಫ್ ಇಂಡಿಯಾ ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಲು ತೀರ್ಮಾನಿಸಿರುವುದರ ಲಾಜಿಕ್ ಏನು ಎಂಬುದು ಒಂದು ಚಿದಂಬರ ರಹಸ್ಯವಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಸಾರ್ವಜನಿಕ ಸೇವಾಉದ್ಯಮಗಳ ಶೇ.51ರಷ್ಟು ಷೇರುಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಿರುವ ಏಕೈಕ ಕಾರಣ ಇಂದಿನ ಸರ್ಕಾರಕ್ಕೆ ಉಡಾಯಿಸಲು ಹಣ ಬೇಕು. ಅದೇ ದೃಷ್ಟಿಯಿಂದ ರಿಸರ್ವ್ ಬ್ಯಾಂಕಿನ ರಿಸರ್ವ್ ಫಂಡಿನಲ್ಲಿ ಒಂದು ಭಾಗ ಅಂದರೆ ಎಷ್ಟೋ ಕೋಟಿ ಹಣ ಸರ್ಕಾರಕ್ಕೆ ಕೊಡಿ ಎಂಬ ಒತ್ತಾಯ ಬಂದಿದೆ. ನವರತ್ನಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಂಪನಿಯನ್ನು ಮಾರಲು ಹೊರಟಿವುದರ ರಹಸ್ಯವೇನು? ಇದರಿಂದ ನಾವು ಕಲಿಯಬಹುದಾದ ಪಾಠ ಯಾವುದು?

ಲಾಭದಾಯಕವೋ, ನಷ್ಟವೋ PSUಗಳನ್ನು ಮಾರಾಟ ಮಾಡುವುದು ನಮ್ಮ ಧ್ಯೇಯ ಎಂದು ಸರ್ಕಾರ ಭಾವಿಸಿರಬಹುದು.

ಖಾಸಗೀಕರಣಕ್ಕೆ ಹಾತೊರೆಯುತ್ತಿರುವ ಸರ್ಕಾರ ನಮ್ಮ ಸಾರ್ವಜನಿಕ ಉದ್ಯಮಗಳು ನಷ್ಟಕ್ಕೆ ಏಕೆ ಒಳಗಾದವು? ಅವುಗಳನ್ನು ಲಾಭದಾಯಕ ಮಾಡುವುದು ಹೇಗೆ ಎಂಬುದರ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅವುಗಳನ್ನು ಮುಚ್ಚಿಸಿ, ಖಾಸಗಿಯವರಿಗೆ ದೋಚಲು ಅವಕಾಶ ಮಾಡಿಕೊಡಲು ಹೊರಟಿರುವುದು ದೇಶದ ದೌರ್ಭಾಗ್ಯವೇ ಸರಿ.

PSUಗಳನ್ನು ಮುಗಿಸುವುದಕ್ಕೆ ಕಾರಣಗಳೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರಿಸರ್ವ್ ಬ್ಯಾಂಕಿನ ರಿಸರ್ವ್ ಫಂಡಿಗೆ ಏಕೆ ಲಗ್ಗೆ ಹಾಕಬೇಕು ಎಂಬುದನ್ನು ಜನತೆಗೆ ಸ್ಪಷ್ಟ ನುಡಿಗಳಲ್ಲಿ ಮನವರಿಕೆ ಮಾಡಿಕೊಡಬೇಕು. ಈ ಬಗೆಗೆ ಸರ್ಕಾರದ ಪಾಲಿಸಿ ಏನು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕು. PSUಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಮ್ಮ ಭವಿಷ್ಯದ ಬಗೆಗೆ ಗಾಬರಿ ಉಂಟಾಗುತ್ತದೆ.

ಚುನಾಯಿತ ಸರ್ಕಾರ ಅಭಿವೃದ್ಧಿ ಮತ್ತು ಸಮಾನತೆಗೆ ಬದ್ಧನಾಗಿರಬೇಕು. ಅಭಿವೃದ್ಧಿಯ ಎಲ್ಲ ಆಯಾಮಗಳನ್ನು ಪಟ್ಟಭದ್ರ ಹಿತಾಸಕ್ತಿಗಳೇ ನಿರ್ಧರಿಸುವುದಾದರೆ ಜನಸಾಮಾನ್ಯರ ಪಾಡೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...