Homeಚಳವಳಿಅಂಬೇಡ್ಕರ್ ಪಟ - ತ್ರಿವರ್ಣ ಧ್ವಜ ಹಿಡಿದ ಮುಸ್ಲಿಂ ಮಹಿಳೆಯರು:ದೆಹಲಿಯಲ್ಲಿ ಹರ್ ಶಾಮ್ ಶಾಹೀನ್ ಬಾಗ್!

ಅಂಬೇಡ್ಕರ್ ಪಟ – ತ್ರಿವರ್ಣ ಧ್ವಜ ಹಿಡಿದ ಮುಸ್ಲಿಂ ಮಹಿಳೆಯರು:ದೆಹಲಿಯಲ್ಲಿ ಹರ್ ಶಾಮ್ ಶಾಹೀನ್ ಬಾಗ್!

ಮೊದಲ ರಾತ್ರಿ ಇಲ್ಲಿ ಪ್ರತಿಭಟನೆಗೆ ಸೇರಿದವರು ಕೇವಲ ನಾಲ್ವರು ಮಹಿಳೆಯರು. ಅಲ್ಲಿಂದ ಅದು ಒಂದೂವರೆ ಲಕ್ಷಕ್ಕೆ ಏರಿದೆ...

- Advertisement -
- Advertisement -

ರಾಮ್ ರಾಮ್, ಅಲ್ಲಾ ಹೋ ಅಕ್ಬರ್, ವಾಹೇ ಗುರೂ… ಹಿಂದು-ಮುಸ್ಲಿಮ್-ಸಿಖ್- ಕ್ರೈಸ್ತ ಧಾರ್ಮಿಕ ಜಯಕಾರಗಳು, ಜನಗಣಮನ… ಒಂದೇ ಚಪ್ಪರದಡಿ ಕುಳಿತ ಜನಸಮೂಹದಿಂದ ಮೊಳಗುತ್ತವೆ… ಪುರೋಹಿತರು ಹವನ ನೆರವೇರಿಸಿದರೆ ಮುಸಲ್ಮಾನರು ಭಕ್ತಿಯಿಂದ ಕೈ ಮುಗಿದು ಕುಳಿತಿರುತ್ತಾರೆ… ಖುರಾನ್, ಗೀತೆ, ಬೈಬಲ್ ಹಾಗೂ ಗುರು ಗ್ರಂಥಸಾಹೇಬದ ಪಠಣ ಅಕ್ಕಪಕ್ಕದಲ್ಲಿ ಜರುಗುತ್ತದೆ.. ದೇಶಭಕ್ತಿಯ ಘೋಷಣೆಗಳು, ಸಂವಿಧಾನದ ಮುನ್ನುಡಿಯ ವಾಚನ.. ಪ್ರತಿಭಟನೆಯ ಕವಿತೆಗಳು, ಚರ್ಚೆಗಳು, ಭಾಷಣಗಳು.. ಅಂಬೇಡ್ಕರ್- ಗಾಂಧೀ ಚಿತ್ರಪಟಗಳು, ಮೇಣದ ಬತ್ತಿ ಮೆರವಣಿಗೆಗಳು, ತಲೆಗಳಿಗೆ ಸುತ್ತಿಕೊಂಡ ತ್ರಿವರ್ಣ ಧ್ವಜಗಳು.. ಕತ್ತಲಲ್ಲಿ ತಾರೆಗಳಂತೆ ಒಮ್ಮೆಲೆ ಮಿನುಗುವ ಸಾವಿರಾರು ಮೊಬೈಲ್ ಫೋನುಗಳ ಬೆಳಕು… ದೆಹಲಿಯ ಶಾಹೀನ್ ಬಾಗ್ ನಲ್ಲಿ ನಿತ್ಯ ರಾತ್ರಿ ಕಾಣಬರುತ್ತಿರುವ ಮನತುಂಬುವ ಈ ನೋಟಗಳಿಗೆ, ಕಿವಿ ತುಂಬುವ ದನಿಗಳಿಗೆ ತಿಂಗಳು ತುಂಬಿದೆ.

ಎನ್.ಆರ್.ಸಿ-ಸಿಎಎ ವಿರೋಧಿಸಿ ನಡೆಯುತ್ತಿರುವ ಈ ಶಾಂತಿಯುತ ಪ್ರತಿಭಟನಾ ಸಭೆ ದಿನದಿಂದ ದಿನಕ್ಕೆ ದಾಖಲೆ ಸೃಷ್ಟಿಸತೊಡಗಿದೆ. ಇತಿಹಾಸ ರಚಿತವಾಗುತ್ತಿದೆ. ಮೊನ್ನೆ ಭಾನುವಾರ ಇಲ್ಲಿ ಸೇರಿದ್ದ ಜನಸಮೂಹದ ಅಂದಾಜು ಒಂದೂವರೆ ಲಕ್ಷ! ಪುಟ್ಟ ಮುಸ್ಲಿಮ್ ಬಾಲಕಿಯ ಕೈಯಲ್ಲಿನ ಭಿತ್ತಿಪತ್ರ ಇಲ್ಲಿನ ಪ್ರದರ್ಶನಕಾರರ ಮಾಡು ಇಲ್ಲವೇ ಮಡಿ ಹೋರಾಟದ ಮನೋಧರ್ಮವನ್ನು ಪ್ರತಿನಿಧಿಸುತ್ತದೆ.

ಜಹಾಂ ಪೈದಾ ಹುಯೋ ವಹಾಂ

ದಫನ್ ಭೀ ಹೋಂಗೇ (ಪಕ್ಕದಲ್ಲಿ ಭಾರತದ ಪುಟ್ಟ ಭೂಪಟ)

ಜೀತ್ ಗಯೇ ತೋ ವತನ್

ಮುಬಾರಕ್

ಹಾರ್ ಗಯೇ ತೋ ಕಫನ್

ಮುಬಾರಕ್

ನೋ ಎನ್.ಆರ್.ಸಿ.

ನೋ ಸಿಎಎ

(ಎಲ್ಲಿ ಜನಿಸಿದ್ದೇವೆಯೋ ಅಲ್ಲಿಯೇ

ಮಣ್ಣಾಗುತ್ತೇವೆ ಕೂಡ

ಗೆದ್ದರೆ ದೇಶ ದಕ್ಕುವ

ಅಭಿನಂದನೆ

ಸೋತರೆ ಸಾವಿನ

ಅಭಿನಂದನೆ)

ತ್ರಿವರ್ಣ ಧ್ವಜಗಳನ್ನು ಹಿಡಿದು ಬೀಸುತ್ತ ಆಜಾದಿ ಘೋಷಣೆಗಳ ಕೂಗುವ ಜನಸಮೂಹ. ತಾಪಮಾನ ಹತ್ತು ಡಿಗ್ರಿಗಳಿಗೆ ಕುಸಿದರೂ, ಚಳಿ ಮೈ ಮರಗಟ್ಟಿಸಿದರೂ ಜಗ್ಗದ ಜನಸಮೂಹ. ಶಾಹೀನ್ ಬಾಗ್ ನ ಸಾರ್ವಜನಿಕ ರಸ್ತೆಯಲ್ಲೇ ಎದ್ದು ನಿಂತಿರುವ ಪ್ರತಿಭಟನಾ ನೆಲೆಯಿದು. ನೆಲದ ಮೇಲೆ ಬಿಡಿಸಿದ ಸಿಎಎ-ಎನ್.ಆರ್.ಸಿ. ವಿರೋಧಿ ಬೃಹತ್ ಚಿತ್ರಗಳು… ಅವುಗಳ ಪಕ್ಕ ಉರಿಯುವ ಮೇಣದ ಬತ್ತಿಗಳು. ಬಾನೆತ್ತರದಲ್ಲಿ ಹಾರಾಡುವ ಕೇಸರಿ ಬಿಳಿ ಹಸಿರಿರುವ ಬಲೂನುಗಳು…

ಮರಗಟ್ಟಿಸುವ ಚಳಿ, ಮಳೆ, ಬೆದರಿಕೆಗಳಿಗೆ ಜಗ್ಗದ ಹೆಣ್ಣುಮಕ್ಕಳು ಇವರು. ನಮ್ಮ ಸಂವಿಧಾನ, ನಮ್ಮ ದೇಶ, ನಮ್ಮ ಉಳಿವಿಗಾಗಿ ಇಲ್ಲಿ ಸೇರುತ್ತಿದ್ದೇವೆ ಎನ್ನುತ್ತಾರೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯಕ್ಕೆ ನುಗ್ಗಿ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಮನಬಂದಂತೆ ಥಳಿಸಿ, ಗುಂಡು ಹಾರಿಸಿ ಪುಂಡಾಟ ನಡೆಸಿದ ಪೊಲೀಸರ ಹೇಯ ವರ್ತನೆಯ ನಂತರ ಆರಂಭವಾದ ಪ್ರತಿಫಟನೆಯಿದು. ಮೊದಲ ರಾತ್ರಿ ಇಲ್ಲಿ ಪ್ರತಿಭಟನೆಗೆ ಸೇರಿದವರು ಕೇವಲ ನಾಲ್ವರು ಮಹಿಳೆಯರು ಮತ್ತು ಆರು ಮಂದಿ ಪುರುಷರು. ಮರುದಿನದಿಂದ ಪುರುಷರು ಉದ್ಯೋಗಕ್ಕೆ ಹೋದರೂ ಮಹಿಳೆಯರ ಸಂಖ್ಯೆ ಏರುತ್ತಲೇ ಹೋಯಿತು.

ಈ ಪ್ರತಿಭಟನೆಯಲ್ಲಿ ಮಹಿಳೆಯರೇ ಮುಖ್ಯ ಸಭಿಕರು. ಹಸುಗೂಸು ಮಕ್ಕಳಿಂದ ಹಿಡಿದು ವೃದ್ದೆಯರವರೆಗೆ ಎಲ್ಲ ವಯೋಮಾನದ ಮಹಿಳೆಯರು. ಹಸಿ ಬಾಣಂತಿಯರು… ಪುಟ್ಟ ಮಕ್ಕಳನ್ನು ಕರೆತಂದ ಅಮ್ಮಂದಿರು..ಯುವತಿಯರು… ವಿದ್ಯಾರ್ಥಿನಿಯರು… ಎಲ್ಲರೂ ನಿರ್ಭೀತರು… ಮನಸಿನ ಮಾತನ್ನು ಗಟ್ಟಿದನಿಯಲ್ಲಿ ಹೇಳುವವರು.. ತಾತ ಮುತ್ತಾತಂದಿರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಸತ್ತವರು…ಇದೇ ನಾವು ಹುಟ್ಟಿದ ಮಣ್ಣು….ಇಲ್ಲಿಯೇ ಮಣ್ಣು ಸೇರುತ್ತೇವೆ… ನಮಗೆ ನಾಗರಿಕತೆ ನಿರಾಕರಿಸುವುದು ಪರಮ ಅನ್ಯಾಯ… ಈ ಕಾನೂನು ವಾಪಸಾಗುವ ತನಕ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎನ್ನುವವರು… ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಜನಸಮೂಹ ಹಿಗ್ಗುತ್ತದೆಯೇ ವಿನಾ ಕುಗ್ಗುವುದಿಲ್ಲ.

ಟ್ರಕ್ಕುಗಳಲ್ಲಿ ಚಹಾ, ಹಾಲು, ಊಟ ಬರುತ್ತದೆ.. ಅಜ್ಞಾತ ಹಿತೈಷಿಗಳ ಕೊಡುಗೆ. ಸ್ಥಳೀಯ ರಾಜಕಾರಣಿಗಳನ್ನು ದೂರ ಇರಿಸಲಾಗಿದೆ.

ಗುಂಪು ಹತ್ಯೆಗಳಿಗೆ ಮುಸಲ್ಮಾನರು ಬಲಿಯಾದಾಗ ಬೀದಿಗಿಳಿಯದ ಮುಸಲ್ಮಾನ ಹೆಣ್ಣುಮಕ್ಕಳು ಈಗ ಪ್ರತಿಭಟನೆಯ ಕಣಕ್ಕೆ ಇಳಿದಿದ್ದಾರೆ… ಹಿಮ್ಮೆಟ್ಟುವುದಿಲ್ಲ ಎನ್ನುವ ದೃಢನಿಶ್ಚಯ ಅವರದು. ಬುರ್ಖಾಗಳನ್ನು ಹಿಂದಿಟ್ಟು ಬಂದಿದ್ದಾರೆ… ಕಳೆದು ಹೋಗಿದ್ದ ದನಿಗಳನ್ನು ಮರಳಿ ಪಡೆದು ಬಂದಿದ್ದಾರೆ… ನಮ್ಮ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಿದು, ನಮ್ಮ ಮಕ್ಕಳು ಮೊಮ್ಮಕ್ಕಳ ಭವಿಷ್ಯದ ಪ್ರಶ್ನೆ… ನಮ್ಮ ಅಪ್ಪಂದಿರು… ತಾತಂದಿರು ಕೂಡ ಈ ಮಣ್ಣಿಗಾಗಿ ತ್ಯಾಗ ಮಾಡಿದ್ದಾರೆ.. ನಮ್ಮನ್ನೇಕೆ ಹೊರದಬ್ಬಲಾಗುತ್ತಿದೆ… ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಅರ್ಥವೇನು ಎಂಬ ನೋವಿನ ಕಣ್ಣೀರು ಕೆನ್ನೆಗಿಳಿಯುತ್ತವೆ… ಹಿಂದುಸ್ತಾನ್ ಎಂಬುದು ಗುಲದಸ್ತಾನ್… ಈ ಹೂಗೊಂಚಲಿನಲ್ಲಿ ಬಗೆಬಗೆಯ ಹೂವುಗಳು… ಪರಿಮಳಗಳು ಇಲ್ಲದಿದ್ದರೆ ಹೂಗೊಂಚಲಿನ ವಿಶೇಷತೆಯೇನು ಉಳಿಯುತ್ತದೆ? ಮುಸ್ಲಿಂ ಮಹಿಳೆಯರ ಕಷ್ಟ ಕಣ್ಣೀರು ಅಳಿಸಲೆಂದು ತ್ರಿವಳಿ ತಲಾಖ್ ರದ್ದುಗೊಳಿಸಿ ಕಾನೂನು ತಂದ ನರೇಂದ್ರ ಮೋದಿಯವರಿಗೆ ನಮ್ಮ ಈಗಿನ ಸಂಕಟ ಯಾಕೆ ಅರ್ಥವಾಗುತ್ತಿಲ್ಲ? ನಮಗೆ ಗುಂಡೇಟು, ಲಾಠಿಯೇಟು ಬಿದ್ದರೂ ನಾವು ಲೆಕ್ಕಿಸುವುದಿಲ್ಲ ಎನ್ನುತ್ತಾರೆ.

ಈ ಪ್ರತಿಭಟನೆ ಈಗಾಗಲೆ ಕಣ್ಣುಗಳನ್ನು ಕೆಂಪಾಗಿಸಿದೆ… ದಮನದ ಸಿಡಿಲು ಯಾವ ಕ್ಷಣದಲ್ಲಿ ಬಡಿಯುವುದೋ ಬಲ್ಲವರಾರು… ಆದರೆ ಈ ಮಹಿಳೆಯರ ಮನೋನಿಶ್ಚಯ ದಮನಗಳ ಬಿಸಿಗೆ ಕರಗುವಂತಹುದಲ್ಲ. ಲಕ್ಷ ವಾಹನಗಳು ಸಂಚರಿಸುವ ಈ ರಸ್ತೆಯನ್ನು ಪುನಃ ಸಂಚಾರಕ್ಕೆ ತೆರೆಯಬೇಕೆಂಬ ಅಹವಾಲು ಹೈಕೋರ್ಟ್ ಮೆಟ್ಟಿಲೇರಿದೆ. ಬಲಪ್ರಯೋಗ ನಡೆಸದೆ ಈ ಕ್ರಮ ಜರುಗಿಸುವಂತೆ ನ್ಯಾಯಾಲಯ ಹೇಳಿದೆ.

ಕೈಫಿ ಆಜ್ಮಿಯವರ ಉಠ್ ಮೇರೀ ಜಾನ್.. ಕವಿತೆಯ ಕೆಲ ಸಾಲುಗಳು…

ಉಠ್ ಮೇರೀ ಜಾನ್ ಮೇರೇ ಸಾಥ್ ಹೀ ಚಲನಾ ಹೈ ತುಝೇ

ಖಲ್ಬ್ ಎ ಮಾಹೋಲ್ ಮೇ ಲರ್ಜಾ ಶರರ್ ಎ ಜಂಗ್ ಹೈ ಆಜ್

ಹೋಸಲೇ ವಕ್ತ್ ಕೇ ಔರ್ ಜೀಸ್ತ್ ಕೆ ಯಕ್-ರಂಗ್ ಹೈ ಆಜ್

ಅಬಾಗೀನೋ ಮೇ ತಪಾಂ ವಲ್ವಲಾ-ಎ-ಸಂಗ್ ಹೈ ಆಜ್

ಹುಸ್ನ್ ಔರ್ ಇಶ್ಕ್ ಹಮ್ ಆವಾಜ್ ಓ ಹಮ್- ಆಹಂಗ್ ಹೈ ಆಜ್

ಜಿಸ್ ಮೇಂ ಜಲತಾ ಹೂಂ ಉಸೀ ಆಗ ಮೇ ಜಲನಾ ಹೈ ತುಝೇ

ಉಠ್ ಮೇರೀ ಜಾನ್ ಮೇರೇ ಸಾಥ್ ಹೀ ಚಲನಾ ಹೈ ತುಝೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...