Homeಚಳವಳಿಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

ಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

- Advertisement -
ಎಸ್‍ಐಟಿ ತಂಡ ತನಿಖೆ ಬಿಗಿಗೊಳಿಸಿದಂತೆಲ್ಲ `ಕ್ಯಾಪ್ಟನ್’ ಗೌರಿ ಹತ್ಯೆಯ ಒಂದೊಂದೇ ಸಿಕ್ಕುಗಳು ಬಿಡಿಸಿಕೊಳ್ಳುತ್ತಿವೆ. ಜೊತೆಗೆ ಕೊಲೆಗಡುಕ ಹಿಂದೂತ್ವವಾದಿಗಳ ಬಯಲಾಟವೂ ಬೆತ್ತಲಾಗುತ್ತಿದೆ. ಅರೆಸ್ಟಾದ ಹನ್ನೊಂದೂ ಜನರ ಬೇರುಗಳು ಒಂದಿಲ್ಲೊಂದು ರೂಪದಲ್ಲಿ ಸಂಘ ಪರಿವಾರದೊಡನೆ ನಂಟು ಹೊಂದಿರುವುದು ಖಾತ್ರಿಯಾಗುತ್ತಿದ್ದಂತೆಯೇ ಎಲ್ಲರ ಊಹೆಗಳು ದಿಟವಾಗುತ್ತಿವೆ. ನೋ ಡೌಟ್, ಸನಾತನಿ ಮನಸ್ಥಿತಿಗಳೇ ಗೌರಿಯನ್ನು ಕೊಂದಿವೆ! ಕೆಲ ಆಪಾದಿತರ ಪರ ವಾದಿಸಲು ಹಿಂದೂ ಸಂಘಟನೆಗಳೇ ವಕೀಲರನ್ನು ನೇಮಕ ಮಾಡೋದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿರೋದು ಇದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುತ್ತದೆ.
ಆದರೆ, ಅಷ್ಟೂ ಅರೆಸ್ಟುಗಳಲ್ಲಿ ಕೊಡಗಿನ ರಾಜೇಶ್ ಬಂಗೇರಾನ ಬಂಧನವಿದೆಯಲ್ಲ ಅದು, ಕಾಂಗ್ರೆಸ್ ಎಂಬ ಪೊಲಿಟಿಕಲ್ ಪಾರ್ಟಿ ಕೊಡಗಿನ ಮಟ್ಟಿಗೆ ಅದೆಷ್ಟು ಹೊಣೆಗೇಡಿ ಕೂಟದಂತಾಗಿದೆ ಅನ್ನೋದನ್ನೂ ಸಾಬೀತುಮಾಡಿದೆ. ಈ ರಾಜೇಶ್ ಬಂಗೇರಾ ಸಂಘ ಪರಿವಾರದ ಹಿನ್ನೆಲೆಯವ ಅನ್ನೋದು ಎಷ್ಟು ಸತ್ಯವೋ, ಕಾಂಗ್ರೆಸ್‍ನ ಎಂಎಲ್‍ಸಿ ವೀಣಾ ಅಚ್ಚಯ್ಯ ಎಂಬ ಹೆಂಗಸಿನ ಆಪ್ತ ಕಾರ್ಯದರ್ಶಿಯಾಗಿದ್ದವ ಅನ್ನೋದೂ ಅಷ್ಟೇ ಆಘಾತಕಾರಿ ಸಂಗತಿ! ಕೊಡಗಿನ ಕಾಂಗ್ರೆಸ್ಸನ್ನು ಇಡಿಯಾಗಿ ನಿಯಂತ್ರಿಸುತ್ತಿರೋದು ಇದೇ ಹೆಂಗಸು. ಖರ್ಗೆ ಸಾಹೇಬರ ಖಡಕ್ ಕೃಪೆಯೇ ವೀಣಮ್ಮಳನ್ನು ಈ ಪರಿ ಪ್ರಭಾವಿಯಾಗಿ ಬೆಳೆಸಿದೆ. ಇಲ್ಲೇ ಇರೋದು ನೋಡಿ ಕಾಂಗ್ರೆಸ್‍ನ ದುರಂತ. ತನ್ನ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ತದ್ವಿರುದ್ಧ ನಿಲುವಿನ ವ್ಯಕ್ತಿಯೊಬ್ಬನನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುವಷ್ಟು ರಾಜಕೀಯ ಮುಠ್ಠಾಳರು ಅಥವಾ ಅವಕಾಶವಾದಿಗಳ ಕೈಯಲ್ಲಿ ಕಾಂಗ್ರೆಸ್‍ನ ತಳಮಟ್ಟದ ಚುಕ್ಕಾಣಿ ಸಿಕ್ಕಿರೋದೆ ಆ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಹೀಗೆ ಮುಗ್ಗರಿಸಲು ಕಾರಣ.
ರಾಜೇಶ್ ಬಂಗೇರಾನ ಬಂಧನವಾಗುತ್ತಿದ್ದಂತೆಯೇ ತನ್ನ ತಪ್ಪಿನ ಅರಿವಾಗಿರುವ ವೀಣಮ್ಮ ಕಂಡಕಂಡಲ್ಲೆಲ್ಲ ನನಗೂ ಆತನಿಗೂ ಎಂಥ ಸಂಬಂಧವೂ ಇಲ್ಲ, ಕೆಲಕಾಲ ನನ್ನ ಆಪ್ತಸಹಾಯಕ ಆಗಿದ್ದ ಅಷ್ಟೇ ಅಂತ ಸ್ಪಷ್ಟೀಕರಣದ ಪ್ಲೇಕಾರ್ಡ್ ಹಿಡಿದುಕೊಂಡು ಓಡಾಡುವಂತಾಗಿದೆ. ಮೇಲ್ನೋಟಕ್ಕೆ ಅದು ನಿಜದಂತೆಯೇ ಕಂಡುಬರುತ್ತದಾದರು ವೀಣಾ ಅಚ್ಚಯ್ಯ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ಈ ಅವಾಂತರದ ಫಸಲುಗಳನ್ನು ಅನುಭವಿಸಲೇಬೇಕಿದೆ. ಯಾಕೆಂದರೆ ರಾಜೇಶ್ ಬಂಗೇರಾನ ಸೈದ್ಧಾಂತಿಕ ನಿಲುವು ಅದೇನೆ ಆಗಿರಲಿ, ಕನಿಷ್ಠ ಪಕ್ಷ ಅವನ ಪೊಲಿಟಿಕಲ್ ಹಿನ್ನೆಲೆಯನ್ನು ಗಮನಿಸಿದ ಎಂಥದ್ದೇ ರಾಜಕೀಯ ಗಮಾರ ಕೂಡಾ, ಕಾಂಗ್ರೆಸ್ ಎಂಎಲ್‍ಸಿಯೊಬ್ಬರಿಗೆ ಆಪ್ತ ಸಹಾಯಕನಾಗಲು ಈತ ನಾಲಾಯಕ್ಕು ಅಂತ ಹೇಳಿಬಿಡುತ್ತಾನೆ. ಯಾಕೆಂದರೆ ಶಿಕ್ಷಣ ಇಲಾಖೆಯ ಸರ್ಕಾರಿ ನೌಕರನಾಗಿದ್ದರೂ ಈತ ಈ ಹಿಂದೆ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿಕುಶಾಲಪ್ಪನಿಗೆ ಪಿಎ ಆಗಿ ಕೆಲಸ ಮಾಡಿದ್ದವ! ತನ್ನ ವಿರೋಧಿ ಪಕ್ಷದ ನಾಯಕನ ಪಿಎ ಆಗಿದ್ದವನನ್ನೇ ತನ್ನ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆಂದರೆ ಈ ವೀಣಮ್ಮನ ಕಾಮನ್‍ಸೆನ್ಸು, ಪೊಲಿಟಿಕಲ್ ನಾಲೆಡ್ಜು ಅದಿನ್ನೆಂತದ್ದಿರಬೇಡ.
ಕಾಂಗ್ರೆಸ್‍ನೊಳಗೆ ಕಮಲದ ಕಲರವ
ಕೊಡಗು ಕಾಂಗ್ರೆಸ್ ದುಸ್ಥಿತಿಯ ವಿಚಾರಕ್ಕೆ ಮರಳುವುದಾದರೆ ಕೈ ಪಾರ್ಟಿಯ ಕೀ ಪೊಸೀಷನ್‍ಗಳಲ್ಲಿ ಸಂಘ ಪರಿವಾರದ ಮನಸ್ಸುಗಳೇ ಅಧಿಕೃತವಾಗಿ ಠಳಾಯಿಸಿವೆ! ಕಾಂಗ್ರೆಸಿನಲ್ಲಿ ಸೈದ್ಧಾಂತಿಕ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸಂಘ ಪರಿವಾರದವರೇ ಬೇರೂರಿದ್ದಾರೆ. ಮೇಲ್ನೋಟಕ್ಕೆ ಇವರು ಕಾಂಗ್ರೆಸಿಗರು ಅನಿಸಿದರು ಕೂಡ, ಸಂಘ ಪರಿವಾರದ ಅಜೆಂಡಾಗಳು ಸುಲಭವಾಗಿ ಕೊಡಗು ಜಿಲ್ಲೆಯ ಕಾಂಗ್ರೆಸಿನಲ್ಲಿ ಕಾರ್ಯಾಚರಣೆಗೆ ಬರುತ್ತದೆ. ಇದಕ್ಕೊಂದು ಸೂಕ್ತ ನಿದರ್ಶನ ಟಿಪ್ಪು ಜಯಂತಿ. ಸ್ವತಃ ತಮ್ಮದೇ ಕಾಂಗ್ರೆಸ್ ಸರ್ಕಾರ ಪಣತೊಟ್ಟು, ಕೋಮುವಾದಿಗಳಿಗೆ ಸೆಡ್ಡು ಹೊಡೆದು ಟಿಪ್ಪು ಜಯಂತಿಗೆ ಅಡಿಗಲ್ಲು ಹಾಕಿದ್ದರೂ, ಬಿಜೆಪಿ ಹಾಗೂ ಸಂಘ ಪರಿವಾರ ವಿರೋಧಿಸುತ್ತದೆನ್ನುವ ಕಾರಣಕ್ಕೆ ಟಿಪ್ಪು ಜಯಂತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯೂ ವಿರೋಧಿಸುತ್ತದೆ! ಅದೇರೀತಿ, ಬಿಜೆಪಿ ಬೆಂಬಲಿಸುವ ಕೊಡಗು ಪ್ರತ್ಯೇಕತಾ ಹೋರಾಟವನ್ನು ಕೂಡ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಬೆಂಬಲಿಸುತ್ತಾರೆ!!
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್‍ರ ಒಂದು ವ್ಯಂಗ್ಯೋಕ್ತಿ ಇಡೀ ಕೊಡಗು ಕೈ ಪಾರ್ಟಿಯ ಅಧೋಗತಿಯನ್ನು ಸಮಗ್ರವಾಗಿ ಕಟ್ಟಿಕೊಡುತ್ತೆ. ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರು ಯಾರಾಗಬೇಕೆನ್ನುವ ಭರ್ಜರಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ ರಮಾನಾಥ್ ಹೀಗೆ ಹೇಳಿದ್ದರು, `ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸಿಗೆ ಪ್ರತ್ಯೇಕ ಅಧ್ಯಕ್ಷರು ಬೇಡ, ಬಿಜೆಪಿಗೂ, ಕಾಂಗ್ರೆಸಿಗೇ ಒಬ್ಬರೇ ಅಧ್ಯಕ್ಷರು ಸಾಕು!’. ಕಳೆದ ಒಂದು ದಶಕದಿಂದ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯನವರು ಕೂಡಾ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್‍ನ ರಾಜ್ಯ ನಾಯಕರ್ಯಾರೂ ತಲೆಕೆಡಿಸಿಕೊಂಡಿಲ್ಲ.
ಪ್ರತ್ಯೇಕತಾ ಹೋರಾಟವನ್ನು ನಡೆಸುತ್ತಿರುವ ಸಿ.ಎನ್.ಸಿ. ಸಂಘಟನೆಯ ಎನ್.ಯು. ನಾಚಪ್ಪ ಬಿಜೆಪಿಯ ಸುಬ್ರಹ್ಮಣ್ಯಸ್ವಾಮಿಯವರನ್ನು ಕರೆಸಿ, ಅವರ ಬಾಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಾಚಾಮಗೋಚರ ಟೀಕಿಸುವಂತೆ ಮಾಡಿದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸಿನ ರಾಷ್ಟ್ರೀಯ ವಕ್ತಾರ ಎನಿಸಿಕೊಳ್ಳುವ ಬ್ರಿಜೇಶ್ ಕಾಳಪ್ಪ ಹಾಗೂ ವೀಣಾ ಅಚ್ಚಯ್ಯ ಸನ್ಮಾನ ಸ್ವೀಕರಿಸಿ ಮರಳುತ್ತಾರೆ. ಹೀಗೆ ಬಿಜೆಪಿಮಯವಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬೆರಳೆಣಿಕೆಯಷ್ಟಿರುವ ಜಾತ್ಯತೀತ ನಿಲುವಿನ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಅಂತವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಕಾಂಗ್ರೆಸಿನ ಸಮಸ್ತ ಅಧಿಕಾರ ಕಮಲ-ಕಾಂಗ್ರೆಸಿಗರ ಕೈಯಲ್ಲಿದೆ. ಈ ಕಮಲ-ಕಾಂಗ್ರೆಸಿನ ಚುಕ್ಕಾಣಿ ಹಿಡಿದು ಕೂತಿರೋದು ಇದೇ ವೀಣಾ ಅಚ್ಚಯ್ಯ!
ಇಲ್ಲದೇ ಹೋಗಿದ್ದರೆ, ಸತತವಾಗಿ ಬಿಜೆಪಿ ನಾಯಕರಿಗೇ ಪಿಎ ಆಗುತ್ತಿದ್ದ ವ್ಯಕ್ತಿಯನ್ನು ಕರೆತಂದು ತನ್ನ ಪಿಎ ಆಗಿ ನೇಮಿಸಿಕೊಳ್ಳುತ್ತಿರಲಿಲ್ಲ. ಇವತ್ತು ಗೌರಿ ಲಂಕೇಶ್‍ರ ಹತ್ಯೆಯ ಕೇಸಿನಲ್ಲಿ ಅರೆಸ್ಟಾಗಿರುವ ರಾಜೇಶ್ ಬಂಗೇರಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿ ಕುಶಾಲಪ್ಪ ಎಂಬ ಖಟ್ಟರ್ ಆರೆಸ್ಸೆಸ್ಸಿಗ-ಕಂ-ಬಿಜೆಪಿ ಆಸಾಮಿಗೆ ಪಿಎ ಆಗಿದ್ದ. ಆ ನೇಮಕಾತಿಯ ಹಿಂದೆ ಸಂಘ ಪರಿವಾರ ಕೆಲಸ ಮಾಡಿತ್ತು. ರವಿ ಕುಶಾಲಪ್ಪನ ನಂತರ ಬಿಜೆಪಿಯ ಶರೀನ್ ಸುಬ್ಬಯ್ಯ ಎಂಬಾತ ಜಿಪಂ ಅಧ್ಯಕ್ಷನಾಗಿದ್ದಾಗಲು ಈ ಬಂಗೇರಾನೆ ಪಿಎ ಆಗಿ ಮುಂದುವರೆದ. ಆದರೆ ಆಮೇಲೆ, ಜಿಪಂ ಚುಕ್ಕಾಣಿ ಕೆ.ಜಿ.ಬೋಪಯ್ಯನ ಆಪ್ತ ಹರೀಶ್ ತೆಕ್ಕೆಗೆ ಜಾರಿದಾಗ ಪಿಎ ಹುದ್ದೆ ಬಂಗೇರಾನ ಪಾಲಿಗೆ ಉಳಿಯಲಿಲ್ಲ. ಯಾಕೆಂದರೆ ಒಂದೇ ಪಕ್ಷದ ಬೋಪಯ್ಯ ಮತ್ತು ರವಿ ಕುಶಾಲಪ್ಪನದು ಹಾವು ಮುಂಗುಸಿ ಸಂಬಂಧ. ಕಳೆದ ಎಲೆಕ್ಷನ್‍ನಲ್ಲೇ ಬೋಪಯ್ಯಗೆ ಟಿಕೆಟ್ ತಪ್ಪಿಸಿ ತಾನೇ ವಿರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಲು ರವಿ ಕುಶಾಲಪ್ಪ ತಂತ್ರ ನಡೆಸಿದ್ದ. ಅದೂಅಲ್ಲದೆ, ಯಡ್ಯೂರಪ್ಪನ ಪಕ್ಕಾ ಫಾಲೋವರ್ ಥರಾ ವರ್ತಿಸುವ ಬೋಪಯ್ಯನೆಂದರೆ ಸಂಘ ಪರಿವಾರಕ್ಕೂ ಅಷ್ಟಕ್ಕಷ್ಟೇ. ಬೋಪಯ್ಯನಿಗೂ ಪರಿವಾರದ ಮೇಲೆ ಸೇಮ್-ಟು-ಸೇಮ್ ಮಮಕಾರ! ಆ ಕಾರಣಕ್ಕೆ ರವಿಯ ಆಪ್ತ ಬಳಗದ, ಸಂಘ ಪರಿವಾರ ಲಿಂಕಿನ ರಾಜೇಶ್ ಬಂಗೇರಾಗೆ ಗೇಟ್‍ಪಾಸ್ ಕೊಟ್ಟು ಗದುಮಿದ ಬೋಪಯ್ಯ ತನ್ನ ಭಂಟನ ದೇಖಾರೇಖಿಗೆಂದು ಬೇರೊಬ್ಬ ಸಹಾಯಕನನ್ನು ಗೊತ್ತು ಮಾಡಿದ್ದ.
ತನ್ನ ಚೇಲಾ ಬಂಗೇರಾಗೆ ಹೇಗಾದರು ಸರ್ಕಾರಿ ಸೋಗಿನ ರಾಜಕೀಯ ಪುನರ್ವಸತಿ ಕಲ್ಪಿಸುವ ಅನಿವಾರ್ಯತೆಗೆ ಬಿದ್ದ ರವಿ ಕುಶಾಲಪ್ಪ ಎಡತಾಕಿದ್ದು ತನ್ನದೇ ಶಾಂತೆಯಂಡ ಕುಟುಂಬಸ್ಥೆಯಾದ ಕಾಂಗ್ರೆಸ್‍ನ ವೀಣಾ ಅಚ್ಚಯ್ಯರನ್ನು. ಪಕ್ಷದ ಸಿದ್ಧಾಂತ, ರಾಜಕೀಯ ನಿಲುವು ಯಾವುದೂ ಲೆಕ್ಕಕ್ಕಿರದ ವೀಣಾ ಮೇಡಮ್ಮು ಕಳ್ಳುಬಳ್ಳಿ ಸಂಬಂಧಕ್ಕೆ ಬೆಲೆಕೊಟ್ಟು ರವಿಕುಶಾಲಪ್ಪನ ಭಂಟ ಬಂಗೇರಾನನ್ನು ತನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು! ಸಂಘ ಪರಿವಾರದ ಈ ಆಸಾಮಿ ಕಾಂಗ್ರೆಸಿನ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲೂ ಕೈ ಆಡಿಸುತ್ತಿದ್ದುದಲ್ಲದೆ ಅಲ್ಪಸಂಖ್ಯಾತ ವರ್ಗದವರು ಯಾವುದಾದರೂ ಕೆಲಸ ಕಾರ್ಯಗಳಿಗೆ ವೀಣಾ ಅಚ್ಚಯ್ಯಗೆ ಮನವಿ ನೀಡಿದರೆ, ಆ ಮನವಿಯೇ ಕಡತದಿಂದ ನಾಪತ್ತೆಯಾಗುವಂತೆ ಮಾಡಿಬಿಡುತ್ತಿದ್ದನಂತೆ!! ಇನ್ನು ಕಾಂಗ್ರೆಸ್ ಹೇಗೆ ತಾನೆ ಉದ್ದಾರವಾದೀತು….
– ಬಿ.ಎನ್. ಮನುಶೆಣೈ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...