Homeಚಳವಳಿಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

ಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

- Advertisement -
ಎಸ್‍ಐಟಿ ತಂಡ ತನಿಖೆ ಬಿಗಿಗೊಳಿಸಿದಂತೆಲ್ಲ `ಕ್ಯಾಪ್ಟನ್’ ಗೌರಿ ಹತ್ಯೆಯ ಒಂದೊಂದೇ ಸಿಕ್ಕುಗಳು ಬಿಡಿಸಿಕೊಳ್ಳುತ್ತಿವೆ. ಜೊತೆಗೆ ಕೊಲೆಗಡುಕ ಹಿಂದೂತ್ವವಾದಿಗಳ ಬಯಲಾಟವೂ ಬೆತ್ತಲಾಗುತ್ತಿದೆ. ಅರೆಸ್ಟಾದ ಹನ್ನೊಂದೂ ಜನರ ಬೇರುಗಳು ಒಂದಿಲ್ಲೊಂದು ರೂಪದಲ್ಲಿ ಸಂಘ ಪರಿವಾರದೊಡನೆ ನಂಟು ಹೊಂದಿರುವುದು ಖಾತ್ರಿಯಾಗುತ್ತಿದ್ದಂತೆಯೇ ಎಲ್ಲರ ಊಹೆಗಳು ದಿಟವಾಗುತ್ತಿವೆ. ನೋ ಡೌಟ್, ಸನಾತನಿ ಮನಸ್ಥಿತಿಗಳೇ ಗೌರಿಯನ್ನು ಕೊಂದಿವೆ! ಕೆಲ ಆಪಾದಿತರ ಪರ ವಾದಿಸಲು ಹಿಂದೂ ಸಂಘಟನೆಗಳೇ ವಕೀಲರನ್ನು ನೇಮಕ ಮಾಡೋದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿರೋದು ಇದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುತ್ತದೆ.
ಆದರೆ, ಅಷ್ಟೂ ಅರೆಸ್ಟುಗಳಲ್ಲಿ ಕೊಡಗಿನ ರಾಜೇಶ್ ಬಂಗೇರಾನ ಬಂಧನವಿದೆಯಲ್ಲ ಅದು, ಕಾಂಗ್ರೆಸ್ ಎಂಬ ಪೊಲಿಟಿಕಲ್ ಪಾರ್ಟಿ ಕೊಡಗಿನ ಮಟ್ಟಿಗೆ ಅದೆಷ್ಟು ಹೊಣೆಗೇಡಿ ಕೂಟದಂತಾಗಿದೆ ಅನ್ನೋದನ್ನೂ ಸಾಬೀತುಮಾಡಿದೆ. ಈ ರಾಜೇಶ್ ಬಂಗೇರಾ ಸಂಘ ಪರಿವಾರದ ಹಿನ್ನೆಲೆಯವ ಅನ್ನೋದು ಎಷ್ಟು ಸತ್ಯವೋ, ಕಾಂಗ್ರೆಸ್‍ನ ಎಂಎಲ್‍ಸಿ ವೀಣಾ ಅಚ್ಚಯ್ಯ ಎಂಬ ಹೆಂಗಸಿನ ಆಪ್ತ ಕಾರ್ಯದರ್ಶಿಯಾಗಿದ್ದವ ಅನ್ನೋದೂ ಅಷ್ಟೇ ಆಘಾತಕಾರಿ ಸಂಗತಿ! ಕೊಡಗಿನ ಕಾಂಗ್ರೆಸ್ಸನ್ನು ಇಡಿಯಾಗಿ ನಿಯಂತ್ರಿಸುತ್ತಿರೋದು ಇದೇ ಹೆಂಗಸು. ಖರ್ಗೆ ಸಾಹೇಬರ ಖಡಕ್ ಕೃಪೆಯೇ ವೀಣಮ್ಮಳನ್ನು ಈ ಪರಿ ಪ್ರಭಾವಿಯಾಗಿ ಬೆಳೆಸಿದೆ. ಇಲ್ಲೇ ಇರೋದು ನೋಡಿ ಕಾಂಗ್ರೆಸ್‍ನ ದುರಂತ. ತನ್ನ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ತದ್ವಿರುದ್ಧ ನಿಲುವಿನ ವ್ಯಕ್ತಿಯೊಬ್ಬನನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುವಷ್ಟು ರಾಜಕೀಯ ಮುಠ್ಠಾಳರು ಅಥವಾ ಅವಕಾಶವಾದಿಗಳ ಕೈಯಲ್ಲಿ ಕಾಂಗ್ರೆಸ್‍ನ ತಳಮಟ್ಟದ ಚುಕ್ಕಾಣಿ ಸಿಕ್ಕಿರೋದೆ ಆ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಹೀಗೆ ಮುಗ್ಗರಿಸಲು ಕಾರಣ.
ರಾಜೇಶ್ ಬಂಗೇರಾನ ಬಂಧನವಾಗುತ್ತಿದ್ದಂತೆಯೇ ತನ್ನ ತಪ್ಪಿನ ಅರಿವಾಗಿರುವ ವೀಣಮ್ಮ ಕಂಡಕಂಡಲ್ಲೆಲ್ಲ ನನಗೂ ಆತನಿಗೂ ಎಂಥ ಸಂಬಂಧವೂ ಇಲ್ಲ, ಕೆಲಕಾಲ ನನ್ನ ಆಪ್ತಸಹಾಯಕ ಆಗಿದ್ದ ಅಷ್ಟೇ ಅಂತ ಸ್ಪಷ್ಟೀಕರಣದ ಪ್ಲೇಕಾರ್ಡ್ ಹಿಡಿದುಕೊಂಡು ಓಡಾಡುವಂತಾಗಿದೆ. ಮೇಲ್ನೋಟಕ್ಕೆ ಅದು ನಿಜದಂತೆಯೇ ಕಂಡುಬರುತ್ತದಾದರು ವೀಣಾ ಅಚ್ಚಯ್ಯ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ಈ ಅವಾಂತರದ ಫಸಲುಗಳನ್ನು ಅನುಭವಿಸಲೇಬೇಕಿದೆ. ಯಾಕೆಂದರೆ ರಾಜೇಶ್ ಬಂಗೇರಾನ ಸೈದ್ಧಾಂತಿಕ ನಿಲುವು ಅದೇನೆ ಆಗಿರಲಿ, ಕನಿಷ್ಠ ಪಕ್ಷ ಅವನ ಪೊಲಿಟಿಕಲ್ ಹಿನ್ನೆಲೆಯನ್ನು ಗಮನಿಸಿದ ಎಂಥದ್ದೇ ರಾಜಕೀಯ ಗಮಾರ ಕೂಡಾ, ಕಾಂಗ್ರೆಸ್ ಎಂಎಲ್‍ಸಿಯೊಬ್ಬರಿಗೆ ಆಪ್ತ ಸಹಾಯಕನಾಗಲು ಈತ ನಾಲಾಯಕ್ಕು ಅಂತ ಹೇಳಿಬಿಡುತ್ತಾನೆ. ಯಾಕೆಂದರೆ ಶಿಕ್ಷಣ ಇಲಾಖೆಯ ಸರ್ಕಾರಿ ನೌಕರನಾಗಿದ್ದರೂ ಈತ ಈ ಹಿಂದೆ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿಕುಶಾಲಪ್ಪನಿಗೆ ಪಿಎ ಆಗಿ ಕೆಲಸ ಮಾಡಿದ್ದವ! ತನ್ನ ವಿರೋಧಿ ಪಕ್ಷದ ನಾಯಕನ ಪಿಎ ಆಗಿದ್ದವನನ್ನೇ ತನ್ನ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆಂದರೆ ಈ ವೀಣಮ್ಮನ ಕಾಮನ್‍ಸೆನ್ಸು, ಪೊಲಿಟಿಕಲ್ ನಾಲೆಡ್ಜು ಅದಿನ್ನೆಂತದ್ದಿರಬೇಡ.
ಕಾಂಗ್ರೆಸ್‍ನೊಳಗೆ ಕಮಲದ ಕಲರವ
ಕೊಡಗು ಕಾಂಗ್ರೆಸ್ ದುಸ್ಥಿತಿಯ ವಿಚಾರಕ್ಕೆ ಮರಳುವುದಾದರೆ ಕೈ ಪಾರ್ಟಿಯ ಕೀ ಪೊಸೀಷನ್‍ಗಳಲ್ಲಿ ಸಂಘ ಪರಿವಾರದ ಮನಸ್ಸುಗಳೇ ಅಧಿಕೃತವಾಗಿ ಠಳಾಯಿಸಿವೆ! ಕಾಂಗ್ರೆಸಿನಲ್ಲಿ ಸೈದ್ಧಾಂತಿಕ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸಂಘ ಪರಿವಾರದವರೇ ಬೇರೂರಿದ್ದಾರೆ. ಮೇಲ್ನೋಟಕ್ಕೆ ಇವರು ಕಾಂಗ್ರೆಸಿಗರು ಅನಿಸಿದರು ಕೂಡ, ಸಂಘ ಪರಿವಾರದ ಅಜೆಂಡಾಗಳು ಸುಲಭವಾಗಿ ಕೊಡಗು ಜಿಲ್ಲೆಯ ಕಾಂಗ್ರೆಸಿನಲ್ಲಿ ಕಾರ್ಯಾಚರಣೆಗೆ ಬರುತ್ತದೆ. ಇದಕ್ಕೊಂದು ಸೂಕ್ತ ನಿದರ್ಶನ ಟಿಪ್ಪು ಜಯಂತಿ. ಸ್ವತಃ ತಮ್ಮದೇ ಕಾಂಗ್ರೆಸ್ ಸರ್ಕಾರ ಪಣತೊಟ್ಟು, ಕೋಮುವಾದಿಗಳಿಗೆ ಸೆಡ್ಡು ಹೊಡೆದು ಟಿಪ್ಪು ಜಯಂತಿಗೆ ಅಡಿಗಲ್ಲು ಹಾಕಿದ್ದರೂ, ಬಿಜೆಪಿ ಹಾಗೂ ಸಂಘ ಪರಿವಾರ ವಿರೋಧಿಸುತ್ತದೆನ್ನುವ ಕಾರಣಕ್ಕೆ ಟಿಪ್ಪು ಜಯಂತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯೂ ವಿರೋಧಿಸುತ್ತದೆ! ಅದೇರೀತಿ, ಬಿಜೆಪಿ ಬೆಂಬಲಿಸುವ ಕೊಡಗು ಪ್ರತ್ಯೇಕತಾ ಹೋರಾಟವನ್ನು ಕೂಡ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಬೆಂಬಲಿಸುತ್ತಾರೆ!!
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್‍ರ ಒಂದು ವ್ಯಂಗ್ಯೋಕ್ತಿ ಇಡೀ ಕೊಡಗು ಕೈ ಪಾರ್ಟಿಯ ಅಧೋಗತಿಯನ್ನು ಸಮಗ್ರವಾಗಿ ಕಟ್ಟಿಕೊಡುತ್ತೆ. ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರು ಯಾರಾಗಬೇಕೆನ್ನುವ ಭರ್ಜರಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ ರಮಾನಾಥ್ ಹೀಗೆ ಹೇಳಿದ್ದರು, `ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸಿಗೆ ಪ್ರತ್ಯೇಕ ಅಧ್ಯಕ್ಷರು ಬೇಡ, ಬಿಜೆಪಿಗೂ, ಕಾಂಗ್ರೆಸಿಗೇ ಒಬ್ಬರೇ ಅಧ್ಯಕ್ಷರು ಸಾಕು!’. ಕಳೆದ ಒಂದು ದಶಕದಿಂದ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯನವರು ಕೂಡಾ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್‍ನ ರಾಜ್ಯ ನಾಯಕರ್ಯಾರೂ ತಲೆಕೆಡಿಸಿಕೊಂಡಿಲ್ಲ.
ಪ್ರತ್ಯೇಕತಾ ಹೋರಾಟವನ್ನು ನಡೆಸುತ್ತಿರುವ ಸಿ.ಎನ್.ಸಿ. ಸಂಘಟನೆಯ ಎನ್.ಯು. ನಾಚಪ್ಪ ಬಿಜೆಪಿಯ ಸುಬ್ರಹ್ಮಣ್ಯಸ್ವಾಮಿಯವರನ್ನು ಕರೆಸಿ, ಅವರ ಬಾಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಾಚಾಮಗೋಚರ ಟೀಕಿಸುವಂತೆ ಮಾಡಿದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸಿನ ರಾಷ್ಟ್ರೀಯ ವಕ್ತಾರ ಎನಿಸಿಕೊಳ್ಳುವ ಬ್ರಿಜೇಶ್ ಕಾಳಪ್ಪ ಹಾಗೂ ವೀಣಾ ಅಚ್ಚಯ್ಯ ಸನ್ಮಾನ ಸ್ವೀಕರಿಸಿ ಮರಳುತ್ತಾರೆ. ಹೀಗೆ ಬಿಜೆಪಿಮಯವಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬೆರಳೆಣಿಕೆಯಷ್ಟಿರುವ ಜಾತ್ಯತೀತ ನಿಲುವಿನ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಅಂತವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಕಾಂಗ್ರೆಸಿನ ಸಮಸ್ತ ಅಧಿಕಾರ ಕಮಲ-ಕಾಂಗ್ರೆಸಿಗರ ಕೈಯಲ್ಲಿದೆ. ಈ ಕಮಲ-ಕಾಂಗ್ರೆಸಿನ ಚುಕ್ಕಾಣಿ ಹಿಡಿದು ಕೂತಿರೋದು ಇದೇ ವೀಣಾ ಅಚ್ಚಯ್ಯ!
ಇಲ್ಲದೇ ಹೋಗಿದ್ದರೆ, ಸತತವಾಗಿ ಬಿಜೆಪಿ ನಾಯಕರಿಗೇ ಪಿಎ ಆಗುತ್ತಿದ್ದ ವ್ಯಕ್ತಿಯನ್ನು ಕರೆತಂದು ತನ್ನ ಪಿಎ ಆಗಿ ನೇಮಿಸಿಕೊಳ್ಳುತ್ತಿರಲಿಲ್ಲ. ಇವತ್ತು ಗೌರಿ ಲಂಕೇಶ್‍ರ ಹತ್ಯೆಯ ಕೇಸಿನಲ್ಲಿ ಅರೆಸ್ಟಾಗಿರುವ ರಾಜೇಶ್ ಬಂಗೇರಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿ ಕುಶಾಲಪ್ಪ ಎಂಬ ಖಟ್ಟರ್ ಆರೆಸ್ಸೆಸ್ಸಿಗ-ಕಂ-ಬಿಜೆಪಿ ಆಸಾಮಿಗೆ ಪಿಎ ಆಗಿದ್ದ. ಆ ನೇಮಕಾತಿಯ ಹಿಂದೆ ಸಂಘ ಪರಿವಾರ ಕೆಲಸ ಮಾಡಿತ್ತು. ರವಿ ಕುಶಾಲಪ್ಪನ ನಂತರ ಬಿಜೆಪಿಯ ಶರೀನ್ ಸುಬ್ಬಯ್ಯ ಎಂಬಾತ ಜಿಪಂ ಅಧ್ಯಕ್ಷನಾಗಿದ್ದಾಗಲು ಈ ಬಂಗೇರಾನೆ ಪಿಎ ಆಗಿ ಮುಂದುವರೆದ. ಆದರೆ ಆಮೇಲೆ, ಜಿಪಂ ಚುಕ್ಕಾಣಿ ಕೆ.ಜಿ.ಬೋಪಯ್ಯನ ಆಪ್ತ ಹರೀಶ್ ತೆಕ್ಕೆಗೆ ಜಾರಿದಾಗ ಪಿಎ ಹುದ್ದೆ ಬಂಗೇರಾನ ಪಾಲಿಗೆ ಉಳಿಯಲಿಲ್ಲ. ಯಾಕೆಂದರೆ ಒಂದೇ ಪಕ್ಷದ ಬೋಪಯ್ಯ ಮತ್ತು ರವಿ ಕುಶಾಲಪ್ಪನದು ಹಾವು ಮುಂಗುಸಿ ಸಂಬಂಧ. ಕಳೆದ ಎಲೆಕ್ಷನ್‍ನಲ್ಲೇ ಬೋಪಯ್ಯಗೆ ಟಿಕೆಟ್ ತಪ್ಪಿಸಿ ತಾನೇ ವಿರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಲು ರವಿ ಕುಶಾಲಪ್ಪ ತಂತ್ರ ನಡೆಸಿದ್ದ. ಅದೂಅಲ್ಲದೆ, ಯಡ್ಯೂರಪ್ಪನ ಪಕ್ಕಾ ಫಾಲೋವರ್ ಥರಾ ವರ್ತಿಸುವ ಬೋಪಯ್ಯನೆಂದರೆ ಸಂಘ ಪರಿವಾರಕ್ಕೂ ಅಷ್ಟಕ್ಕಷ್ಟೇ. ಬೋಪಯ್ಯನಿಗೂ ಪರಿವಾರದ ಮೇಲೆ ಸೇಮ್-ಟು-ಸೇಮ್ ಮಮಕಾರ! ಆ ಕಾರಣಕ್ಕೆ ರವಿಯ ಆಪ್ತ ಬಳಗದ, ಸಂಘ ಪರಿವಾರ ಲಿಂಕಿನ ರಾಜೇಶ್ ಬಂಗೇರಾಗೆ ಗೇಟ್‍ಪಾಸ್ ಕೊಟ್ಟು ಗದುಮಿದ ಬೋಪಯ್ಯ ತನ್ನ ಭಂಟನ ದೇಖಾರೇಖಿಗೆಂದು ಬೇರೊಬ್ಬ ಸಹಾಯಕನನ್ನು ಗೊತ್ತು ಮಾಡಿದ್ದ.
ತನ್ನ ಚೇಲಾ ಬಂಗೇರಾಗೆ ಹೇಗಾದರು ಸರ್ಕಾರಿ ಸೋಗಿನ ರಾಜಕೀಯ ಪುನರ್ವಸತಿ ಕಲ್ಪಿಸುವ ಅನಿವಾರ್ಯತೆಗೆ ಬಿದ್ದ ರವಿ ಕುಶಾಲಪ್ಪ ಎಡತಾಕಿದ್ದು ತನ್ನದೇ ಶಾಂತೆಯಂಡ ಕುಟುಂಬಸ್ಥೆಯಾದ ಕಾಂಗ್ರೆಸ್‍ನ ವೀಣಾ ಅಚ್ಚಯ್ಯರನ್ನು. ಪಕ್ಷದ ಸಿದ್ಧಾಂತ, ರಾಜಕೀಯ ನಿಲುವು ಯಾವುದೂ ಲೆಕ್ಕಕ್ಕಿರದ ವೀಣಾ ಮೇಡಮ್ಮು ಕಳ್ಳುಬಳ್ಳಿ ಸಂಬಂಧಕ್ಕೆ ಬೆಲೆಕೊಟ್ಟು ರವಿಕುಶಾಲಪ್ಪನ ಭಂಟ ಬಂಗೇರಾನನ್ನು ತನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು! ಸಂಘ ಪರಿವಾರದ ಈ ಆಸಾಮಿ ಕಾಂಗ್ರೆಸಿನ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲೂ ಕೈ ಆಡಿಸುತ್ತಿದ್ದುದಲ್ಲದೆ ಅಲ್ಪಸಂಖ್ಯಾತ ವರ್ಗದವರು ಯಾವುದಾದರೂ ಕೆಲಸ ಕಾರ್ಯಗಳಿಗೆ ವೀಣಾ ಅಚ್ಚಯ್ಯಗೆ ಮನವಿ ನೀಡಿದರೆ, ಆ ಮನವಿಯೇ ಕಡತದಿಂದ ನಾಪತ್ತೆಯಾಗುವಂತೆ ಮಾಡಿಬಿಡುತ್ತಿದ್ದನಂತೆ!! ಇನ್ನು ಕಾಂಗ್ರೆಸ್ ಹೇಗೆ ತಾನೆ ಉದ್ದಾರವಾದೀತು….
– ಬಿ.ಎನ್. ಮನುಶೆಣೈ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...