Homeಚಳವಳಿಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

ಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

- Advertisement -
ಎಸ್‍ಐಟಿ ತಂಡ ತನಿಖೆ ಬಿಗಿಗೊಳಿಸಿದಂತೆಲ್ಲ `ಕ್ಯಾಪ್ಟನ್’ ಗೌರಿ ಹತ್ಯೆಯ ಒಂದೊಂದೇ ಸಿಕ್ಕುಗಳು ಬಿಡಿಸಿಕೊಳ್ಳುತ್ತಿವೆ. ಜೊತೆಗೆ ಕೊಲೆಗಡುಕ ಹಿಂದೂತ್ವವಾದಿಗಳ ಬಯಲಾಟವೂ ಬೆತ್ತಲಾಗುತ್ತಿದೆ. ಅರೆಸ್ಟಾದ ಹನ್ನೊಂದೂ ಜನರ ಬೇರುಗಳು ಒಂದಿಲ್ಲೊಂದು ರೂಪದಲ್ಲಿ ಸಂಘ ಪರಿವಾರದೊಡನೆ ನಂಟು ಹೊಂದಿರುವುದು ಖಾತ್ರಿಯಾಗುತ್ತಿದ್ದಂತೆಯೇ ಎಲ್ಲರ ಊಹೆಗಳು ದಿಟವಾಗುತ್ತಿವೆ. ನೋ ಡೌಟ್, ಸನಾತನಿ ಮನಸ್ಥಿತಿಗಳೇ ಗೌರಿಯನ್ನು ಕೊಂದಿವೆ! ಕೆಲ ಆಪಾದಿತರ ಪರ ವಾದಿಸಲು ಹಿಂದೂ ಸಂಘಟನೆಗಳೇ ವಕೀಲರನ್ನು ನೇಮಕ ಮಾಡೋದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿರೋದು ಇದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುತ್ತದೆ.
ಆದರೆ, ಅಷ್ಟೂ ಅರೆಸ್ಟುಗಳಲ್ಲಿ ಕೊಡಗಿನ ರಾಜೇಶ್ ಬಂಗೇರಾನ ಬಂಧನವಿದೆಯಲ್ಲ ಅದು, ಕಾಂಗ್ರೆಸ್ ಎಂಬ ಪೊಲಿಟಿಕಲ್ ಪಾರ್ಟಿ ಕೊಡಗಿನ ಮಟ್ಟಿಗೆ ಅದೆಷ್ಟು ಹೊಣೆಗೇಡಿ ಕೂಟದಂತಾಗಿದೆ ಅನ್ನೋದನ್ನೂ ಸಾಬೀತುಮಾಡಿದೆ. ಈ ರಾಜೇಶ್ ಬಂಗೇರಾ ಸಂಘ ಪರಿವಾರದ ಹಿನ್ನೆಲೆಯವ ಅನ್ನೋದು ಎಷ್ಟು ಸತ್ಯವೋ, ಕಾಂಗ್ರೆಸ್‍ನ ಎಂಎಲ್‍ಸಿ ವೀಣಾ ಅಚ್ಚಯ್ಯ ಎಂಬ ಹೆಂಗಸಿನ ಆಪ್ತ ಕಾರ್ಯದರ್ಶಿಯಾಗಿದ್ದವ ಅನ್ನೋದೂ ಅಷ್ಟೇ ಆಘಾತಕಾರಿ ಸಂಗತಿ! ಕೊಡಗಿನ ಕಾಂಗ್ರೆಸ್ಸನ್ನು ಇಡಿಯಾಗಿ ನಿಯಂತ್ರಿಸುತ್ತಿರೋದು ಇದೇ ಹೆಂಗಸು. ಖರ್ಗೆ ಸಾಹೇಬರ ಖಡಕ್ ಕೃಪೆಯೇ ವೀಣಮ್ಮಳನ್ನು ಈ ಪರಿ ಪ್ರಭಾವಿಯಾಗಿ ಬೆಳೆಸಿದೆ. ಇಲ್ಲೇ ಇರೋದು ನೋಡಿ ಕಾಂಗ್ರೆಸ್‍ನ ದುರಂತ. ತನ್ನ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ತದ್ವಿರುದ್ಧ ನಿಲುವಿನ ವ್ಯಕ್ತಿಯೊಬ್ಬನನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುವಷ್ಟು ರಾಜಕೀಯ ಮುಠ್ಠಾಳರು ಅಥವಾ ಅವಕಾಶವಾದಿಗಳ ಕೈಯಲ್ಲಿ ಕಾಂಗ್ರೆಸ್‍ನ ತಳಮಟ್ಟದ ಚುಕ್ಕಾಣಿ ಸಿಕ್ಕಿರೋದೆ ಆ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಹೀಗೆ ಮುಗ್ಗರಿಸಲು ಕಾರಣ.
ರಾಜೇಶ್ ಬಂಗೇರಾನ ಬಂಧನವಾಗುತ್ತಿದ್ದಂತೆಯೇ ತನ್ನ ತಪ್ಪಿನ ಅರಿವಾಗಿರುವ ವೀಣಮ್ಮ ಕಂಡಕಂಡಲ್ಲೆಲ್ಲ ನನಗೂ ಆತನಿಗೂ ಎಂಥ ಸಂಬಂಧವೂ ಇಲ್ಲ, ಕೆಲಕಾಲ ನನ್ನ ಆಪ್ತಸಹಾಯಕ ಆಗಿದ್ದ ಅಷ್ಟೇ ಅಂತ ಸ್ಪಷ್ಟೀಕರಣದ ಪ್ಲೇಕಾರ್ಡ್ ಹಿಡಿದುಕೊಂಡು ಓಡಾಡುವಂತಾಗಿದೆ. ಮೇಲ್ನೋಟಕ್ಕೆ ಅದು ನಿಜದಂತೆಯೇ ಕಂಡುಬರುತ್ತದಾದರು ವೀಣಾ ಅಚ್ಚಯ್ಯ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ಈ ಅವಾಂತರದ ಫಸಲುಗಳನ್ನು ಅನುಭವಿಸಲೇಬೇಕಿದೆ. ಯಾಕೆಂದರೆ ರಾಜೇಶ್ ಬಂಗೇರಾನ ಸೈದ್ಧಾಂತಿಕ ನಿಲುವು ಅದೇನೆ ಆಗಿರಲಿ, ಕನಿಷ್ಠ ಪಕ್ಷ ಅವನ ಪೊಲಿಟಿಕಲ್ ಹಿನ್ನೆಲೆಯನ್ನು ಗಮನಿಸಿದ ಎಂಥದ್ದೇ ರಾಜಕೀಯ ಗಮಾರ ಕೂಡಾ, ಕಾಂಗ್ರೆಸ್ ಎಂಎಲ್‍ಸಿಯೊಬ್ಬರಿಗೆ ಆಪ್ತ ಸಹಾಯಕನಾಗಲು ಈತ ನಾಲಾಯಕ್ಕು ಅಂತ ಹೇಳಿಬಿಡುತ್ತಾನೆ. ಯಾಕೆಂದರೆ ಶಿಕ್ಷಣ ಇಲಾಖೆಯ ಸರ್ಕಾರಿ ನೌಕರನಾಗಿದ್ದರೂ ಈತ ಈ ಹಿಂದೆ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿಕುಶಾಲಪ್ಪನಿಗೆ ಪಿಎ ಆಗಿ ಕೆಲಸ ಮಾಡಿದ್ದವ! ತನ್ನ ವಿರೋಧಿ ಪಕ್ಷದ ನಾಯಕನ ಪಿಎ ಆಗಿದ್ದವನನ್ನೇ ತನ್ನ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆಂದರೆ ಈ ವೀಣಮ್ಮನ ಕಾಮನ್‍ಸೆನ್ಸು, ಪೊಲಿಟಿಕಲ್ ನಾಲೆಡ್ಜು ಅದಿನ್ನೆಂತದ್ದಿರಬೇಡ.
ಕಾಂಗ್ರೆಸ್‍ನೊಳಗೆ ಕಮಲದ ಕಲರವ
ಕೊಡಗು ಕಾಂಗ್ರೆಸ್ ದುಸ್ಥಿತಿಯ ವಿಚಾರಕ್ಕೆ ಮರಳುವುದಾದರೆ ಕೈ ಪಾರ್ಟಿಯ ಕೀ ಪೊಸೀಷನ್‍ಗಳಲ್ಲಿ ಸಂಘ ಪರಿವಾರದ ಮನಸ್ಸುಗಳೇ ಅಧಿಕೃತವಾಗಿ ಠಳಾಯಿಸಿವೆ! ಕಾಂಗ್ರೆಸಿನಲ್ಲಿ ಸೈದ್ಧಾಂತಿಕ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸಂಘ ಪರಿವಾರದವರೇ ಬೇರೂರಿದ್ದಾರೆ. ಮೇಲ್ನೋಟಕ್ಕೆ ಇವರು ಕಾಂಗ್ರೆಸಿಗರು ಅನಿಸಿದರು ಕೂಡ, ಸಂಘ ಪರಿವಾರದ ಅಜೆಂಡಾಗಳು ಸುಲಭವಾಗಿ ಕೊಡಗು ಜಿಲ್ಲೆಯ ಕಾಂಗ್ರೆಸಿನಲ್ಲಿ ಕಾರ್ಯಾಚರಣೆಗೆ ಬರುತ್ತದೆ. ಇದಕ್ಕೊಂದು ಸೂಕ್ತ ನಿದರ್ಶನ ಟಿಪ್ಪು ಜಯಂತಿ. ಸ್ವತಃ ತಮ್ಮದೇ ಕಾಂಗ್ರೆಸ್ ಸರ್ಕಾರ ಪಣತೊಟ್ಟು, ಕೋಮುವಾದಿಗಳಿಗೆ ಸೆಡ್ಡು ಹೊಡೆದು ಟಿಪ್ಪು ಜಯಂತಿಗೆ ಅಡಿಗಲ್ಲು ಹಾಕಿದ್ದರೂ, ಬಿಜೆಪಿ ಹಾಗೂ ಸಂಘ ಪರಿವಾರ ವಿರೋಧಿಸುತ್ತದೆನ್ನುವ ಕಾರಣಕ್ಕೆ ಟಿಪ್ಪು ಜಯಂತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯೂ ವಿರೋಧಿಸುತ್ತದೆ! ಅದೇರೀತಿ, ಬಿಜೆಪಿ ಬೆಂಬಲಿಸುವ ಕೊಡಗು ಪ್ರತ್ಯೇಕತಾ ಹೋರಾಟವನ್ನು ಕೂಡ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಬೆಂಬಲಿಸುತ್ತಾರೆ!!
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್‍ರ ಒಂದು ವ್ಯಂಗ್ಯೋಕ್ತಿ ಇಡೀ ಕೊಡಗು ಕೈ ಪಾರ್ಟಿಯ ಅಧೋಗತಿಯನ್ನು ಸಮಗ್ರವಾಗಿ ಕಟ್ಟಿಕೊಡುತ್ತೆ. ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರು ಯಾರಾಗಬೇಕೆನ್ನುವ ಭರ್ಜರಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ ರಮಾನಾಥ್ ಹೀಗೆ ಹೇಳಿದ್ದರು, `ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸಿಗೆ ಪ್ರತ್ಯೇಕ ಅಧ್ಯಕ್ಷರು ಬೇಡ, ಬಿಜೆಪಿಗೂ, ಕಾಂಗ್ರೆಸಿಗೇ ಒಬ್ಬರೇ ಅಧ್ಯಕ್ಷರು ಸಾಕು!’. ಕಳೆದ ಒಂದು ದಶಕದಿಂದ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯನವರು ಕೂಡಾ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್‍ನ ರಾಜ್ಯ ನಾಯಕರ್ಯಾರೂ ತಲೆಕೆಡಿಸಿಕೊಂಡಿಲ್ಲ.
ಪ್ರತ್ಯೇಕತಾ ಹೋರಾಟವನ್ನು ನಡೆಸುತ್ತಿರುವ ಸಿ.ಎನ್.ಸಿ. ಸಂಘಟನೆಯ ಎನ್.ಯು. ನಾಚಪ್ಪ ಬಿಜೆಪಿಯ ಸುಬ್ರಹ್ಮಣ್ಯಸ್ವಾಮಿಯವರನ್ನು ಕರೆಸಿ, ಅವರ ಬಾಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಾಚಾಮಗೋಚರ ಟೀಕಿಸುವಂತೆ ಮಾಡಿದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸಿನ ರಾಷ್ಟ್ರೀಯ ವಕ್ತಾರ ಎನಿಸಿಕೊಳ್ಳುವ ಬ್ರಿಜೇಶ್ ಕಾಳಪ್ಪ ಹಾಗೂ ವೀಣಾ ಅಚ್ಚಯ್ಯ ಸನ್ಮಾನ ಸ್ವೀಕರಿಸಿ ಮರಳುತ್ತಾರೆ. ಹೀಗೆ ಬಿಜೆಪಿಮಯವಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬೆರಳೆಣಿಕೆಯಷ್ಟಿರುವ ಜಾತ್ಯತೀತ ನಿಲುವಿನ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಅಂತವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಕಾಂಗ್ರೆಸಿನ ಸಮಸ್ತ ಅಧಿಕಾರ ಕಮಲ-ಕಾಂಗ್ರೆಸಿಗರ ಕೈಯಲ್ಲಿದೆ. ಈ ಕಮಲ-ಕಾಂಗ್ರೆಸಿನ ಚುಕ್ಕಾಣಿ ಹಿಡಿದು ಕೂತಿರೋದು ಇದೇ ವೀಣಾ ಅಚ್ಚಯ್ಯ!
ಇಲ್ಲದೇ ಹೋಗಿದ್ದರೆ, ಸತತವಾಗಿ ಬಿಜೆಪಿ ನಾಯಕರಿಗೇ ಪಿಎ ಆಗುತ್ತಿದ್ದ ವ್ಯಕ್ತಿಯನ್ನು ಕರೆತಂದು ತನ್ನ ಪಿಎ ಆಗಿ ನೇಮಿಸಿಕೊಳ್ಳುತ್ತಿರಲಿಲ್ಲ. ಇವತ್ತು ಗೌರಿ ಲಂಕೇಶ್‍ರ ಹತ್ಯೆಯ ಕೇಸಿನಲ್ಲಿ ಅರೆಸ್ಟಾಗಿರುವ ರಾಜೇಶ್ ಬಂಗೇರಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿ ಕುಶಾಲಪ್ಪ ಎಂಬ ಖಟ್ಟರ್ ಆರೆಸ್ಸೆಸ್ಸಿಗ-ಕಂ-ಬಿಜೆಪಿ ಆಸಾಮಿಗೆ ಪಿಎ ಆಗಿದ್ದ. ಆ ನೇಮಕಾತಿಯ ಹಿಂದೆ ಸಂಘ ಪರಿವಾರ ಕೆಲಸ ಮಾಡಿತ್ತು. ರವಿ ಕುಶಾಲಪ್ಪನ ನಂತರ ಬಿಜೆಪಿಯ ಶರೀನ್ ಸುಬ್ಬಯ್ಯ ಎಂಬಾತ ಜಿಪಂ ಅಧ್ಯಕ್ಷನಾಗಿದ್ದಾಗಲು ಈ ಬಂಗೇರಾನೆ ಪಿಎ ಆಗಿ ಮುಂದುವರೆದ. ಆದರೆ ಆಮೇಲೆ, ಜಿಪಂ ಚುಕ್ಕಾಣಿ ಕೆ.ಜಿ.ಬೋಪಯ್ಯನ ಆಪ್ತ ಹರೀಶ್ ತೆಕ್ಕೆಗೆ ಜಾರಿದಾಗ ಪಿಎ ಹುದ್ದೆ ಬಂಗೇರಾನ ಪಾಲಿಗೆ ಉಳಿಯಲಿಲ್ಲ. ಯಾಕೆಂದರೆ ಒಂದೇ ಪಕ್ಷದ ಬೋಪಯ್ಯ ಮತ್ತು ರವಿ ಕುಶಾಲಪ್ಪನದು ಹಾವು ಮುಂಗುಸಿ ಸಂಬಂಧ. ಕಳೆದ ಎಲೆಕ್ಷನ್‍ನಲ್ಲೇ ಬೋಪಯ್ಯಗೆ ಟಿಕೆಟ್ ತಪ್ಪಿಸಿ ತಾನೇ ವಿರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಲು ರವಿ ಕುಶಾಲಪ್ಪ ತಂತ್ರ ನಡೆಸಿದ್ದ. ಅದೂಅಲ್ಲದೆ, ಯಡ್ಯೂರಪ್ಪನ ಪಕ್ಕಾ ಫಾಲೋವರ್ ಥರಾ ವರ್ತಿಸುವ ಬೋಪಯ್ಯನೆಂದರೆ ಸಂಘ ಪರಿವಾರಕ್ಕೂ ಅಷ್ಟಕ್ಕಷ್ಟೇ. ಬೋಪಯ್ಯನಿಗೂ ಪರಿವಾರದ ಮೇಲೆ ಸೇಮ್-ಟು-ಸೇಮ್ ಮಮಕಾರ! ಆ ಕಾರಣಕ್ಕೆ ರವಿಯ ಆಪ್ತ ಬಳಗದ, ಸಂಘ ಪರಿವಾರ ಲಿಂಕಿನ ರಾಜೇಶ್ ಬಂಗೇರಾಗೆ ಗೇಟ್‍ಪಾಸ್ ಕೊಟ್ಟು ಗದುಮಿದ ಬೋಪಯ್ಯ ತನ್ನ ಭಂಟನ ದೇಖಾರೇಖಿಗೆಂದು ಬೇರೊಬ್ಬ ಸಹಾಯಕನನ್ನು ಗೊತ್ತು ಮಾಡಿದ್ದ.
ತನ್ನ ಚೇಲಾ ಬಂಗೇರಾಗೆ ಹೇಗಾದರು ಸರ್ಕಾರಿ ಸೋಗಿನ ರಾಜಕೀಯ ಪುನರ್ವಸತಿ ಕಲ್ಪಿಸುವ ಅನಿವಾರ್ಯತೆಗೆ ಬಿದ್ದ ರವಿ ಕುಶಾಲಪ್ಪ ಎಡತಾಕಿದ್ದು ತನ್ನದೇ ಶಾಂತೆಯಂಡ ಕುಟುಂಬಸ್ಥೆಯಾದ ಕಾಂಗ್ರೆಸ್‍ನ ವೀಣಾ ಅಚ್ಚಯ್ಯರನ್ನು. ಪಕ್ಷದ ಸಿದ್ಧಾಂತ, ರಾಜಕೀಯ ನಿಲುವು ಯಾವುದೂ ಲೆಕ್ಕಕ್ಕಿರದ ವೀಣಾ ಮೇಡಮ್ಮು ಕಳ್ಳುಬಳ್ಳಿ ಸಂಬಂಧಕ್ಕೆ ಬೆಲೆಕೊಟ್ಟು ರವಿಕುಶಾಲಪ್ಪನ ಭಂಟ ಬಂಗೇರಾನನ್ನು ತನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು! ಸಂಘ ಪರಿವಾರದ ಈ ಆಸಾಮಿ ಕಾಂಗ್ರೆಸಿನ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲೂ ಕೈ ಆಡಿಸುತ್ತಿದ್ದುದಲ್ಲದೆ ಅಲ್ಪಸಂಖ್ಯಾತ ವರ್ಗದವರು ಯಾವುದಾದರೂ ಕೆಲಸ ಕಾರ್ಯಗಳಿಗೆ ವೀಣಾ ಅಚ್ಚಯ್ಯಗೆ ಮನವಿ ನೀಡಿದರೆ, ಆ ಮನವಿಯೇ ಕಡತದಿಂದ ನಾಪತ್ತೆಯಾಗುವಂತೆ ಮಾಡಿಬಿಡುತ್ತಿದ್ದನಂತೆ!! ಇನ್ನು ಕಾಂಗ್ರೆಸ್ ಹೇಗೆ ತಾನೆ ಉದ್ದಾರವಾದೀತು….
– ಬಿ.ಎನ್. ಮನುಶೆಣೈ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...