Homeಮುಖಪುಟಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ : ಇನ್ಸಲ್ಟ್ ಉತ್ತರ ಕರ್ನಾಟಕ - ರಿಯಲ್ ಎಸ್ಟೇಟ್ ಧಮಾಕ..

ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ : ಇನ್ಸಲ್ಟ್ ಉತ್ತರ ಕರ್ನಾಟಕ – ರಿಯಲ್ ಎಸ್ಟೇಟ್ ಧಮಾಕ..

2010 ಜೂನ್ 4, 5ರಂದು ಬೆಂಗಳೂರಲ್ಲಿ ಒಂದು ಗ್ಲೋಬಲ್ ಇನ್ವೆಸ್ಟ್‌ ಮೀಟ್ ನಡೆದಿತ್ತು. ಆದರೆ ಅಭಿವೃದ್ದಿಯ ಬದಲು ರಾಜ್ಯದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲಾಗಿತ್ತು.. ಅದರ ಮುಂದಿನ ಭಾಗ ಇದು..

- Advertisement -
- Advertisement -

‘ಇನ್ವೆಸ್ಟ್ ಕರ್ನಾಟಕ’ ಎಂಬ 8 ತಾಸುಗಳ ಡ್ರಾಮಾ ಆಡುವ ಮೂಲಕ ‘ಇನ್ಸಲ್ಟ್ ಉತ್ತರ ಕರ್ನಾಟಕ’ ಎಂಬ ಅಪಹಾಸ್ಯವನ್ನು ಫೆ.14ರಂದು ಯಡಿಯೂರಪ್ಪ ಮತ್ತವರ ಬಳಗ ಹುಬ್ಬಳ್ಳಿಯಲ್ಲಿ ಮಾಡಿ ಹೋಗಿದೆ. ನೆರೆ ಸಂತ್ರಸ್ರರಿಗೆ ತಲೆ ಮೇಲೆ ನೆರಳು ಕೊಡಲಾಗದ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಉದ್ಯಮಿಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಾರಂತೆ…!

ಇವರು ಹೀಗೆ ಹೇಳುವ ಹೊತ್ತಿನಲ್ಲಿ ವೇದಿಕೆ ಮೇಲಿದ್ದ ಗಣಿ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು, ತಿಂಗಳ ಹಿಂದಷ್ಟೇ ತಮ್ಮ ನರಗುಂದ ಕ್ಷೇತ್ರದ ನೆರೆಪೀಡಿತ ಗ್ರಾಮಗಳಲ್ಲಿ ಸಂಚರಿಸುವಾಗ, ಗ್ರಾಮಸ್ಥರು ಎಕ್ಕುಟ್ಟಿ ಹೋದ ರಸ್ತೆ ರಿಪೇರಿ ಮಾಡಿಸಿ ಎಂದಾಗ, ಎಲ್ಲಿಂದ ರೊಕ್ಕ ತರಲಿ? ಬೊಕ್ಕಸದಲ್ಲಿ ಪುಟ್ಟಿ ಮಣ್ಣಿಗೂ ದುಡ್ಡಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಯ ಅಧೋಗತಿಯನ್ನು ಸಾಂಕೇತಿಕವಾಗಿ ಹೇಳಿದ್ದರು.

 

ಅದಿರಲಿ, ಇಡೀ ಕಾರ್ಯಕ್ರಮ ಒಂದು ಪ್ರಹಸನದಂತೆ ಭಾಸವಾಗುತ್ತಿತ್ತು. ಭಾಷಣಕಾರರೆಲ್ಲ ಉತ್ತರ ಕರ್ನಾಟಕದ ಸಮಸ್ಯೆಗಳೇ ಬಗೆಹರಿದವು ಎಂಬಂತೆ ಮಾತಾಡುತ್ತಿದ್ದರು. ವೇದಿಕೆ ಹತ್ತಿದ ಉದ್ಯಮಿಗಳಂತೂ ಬಾಯಿ ತೆರೆದರೆ ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತೇವೆ ಎನ್ನುತ್ತಿದ್ದುದು ಬಾಯಿಪಾಠದ ಸಾಲಿನಂತಿರುತ್ತಿತ್ತು.
ಎಲ್ಲಕ್ಕಿಂತ ಅಪಾಯಕಾರಿ ಸಂಗತಿ ಎಂದರೆ, ಬೆಂಗಳೂರು ಸುತ್ತಮುತ್ತ ಕೈಗಾರಿಕೆ ಹೆಸರಲ್ಲಿ ಭೂಮಿ ಹೊಡೆದವರು ಈಗ ಇಲ್ಲಿಗೂ ದಾಳಿ ಇಟ್ಟಿರುವುದು. ಮೂಲಭೂತ ಸೌಕರ್ಯಗಳಿಲ್ಲದೇ ಹೂಡಿಕೆ ಮಾಡಲು ಯಾವ ಉದ್ಯಮಿಯೂ ಮೂರ್ಖನಲ್ಲ. ಮೂಲಭೂತ ಸೌಕರ್ಯ ಕಲ್ಪಿಸಲು ಬಿಡಿ, ನೆರೆ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯ ಕೊಡಲೂ ಆಗದ ದುಸ್ಥಿತಿಯಲ್ಲಿ ಸರ್ಕಾರವಿದೆ.

ರಿಯಲ್‌ ಎಸ್ಟೇಟ್‌ ದಂಧೆ..

ಹಾಗಿದ್ದರೆ ಈ ಉದ್ಯಮಿಗಳು ಹೂಡಿಕೆ ಭರವಸೆ ನೀಡಿದ್ದು ಯಾವ ಆಧಾರದ ಮೇಲೆ? ಇಲ್ಲೇ ಶುರುವಾಗುತ್ತದೆ ರಿಯಲ್ ಎಸ್ಟೇಟ್ ದಂಧೆಯ ಕತೆ. ಈಗ ಸ್ವಲ್ಪ ಫ್ಲಾಶಬ್ಯಾಕ್‌ಗೆ ಹೋಗೋಣ. 2010 ಜೂನ್ 4, 5ರಂದು ಬೆಂಗಳೂರಲ್ಲಿ ಒಂದು ಗ್ಲೋಬಲ್ ಇನ್ವೆಸ್ಟರ್‍ಸ್‌ ಮೀಟ್ ನಡೆಯಿತು. ಹುಬ್ಬಳ್ಳಿಯಲ್ಲಿ ವೇದಿಕೆ ಮೇಲಿದ್ದ ಬಹುಪಾಲು ಮುಖಗಳೇ ಅವತ್ತು ಬೆಂಗಳೂರಿನ ವೇದಿಕೆ ಮೇಲಿದ್ದವು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿ. ಆ ‘ಜಾತ್ರೆ’ಯಲ್ಲಿ ಸ್ಟೀಲ್ ಸೆಕ್ಟರ್ ಒಂದರಲ್ಲೇ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದಗಳಾದವು. ಆಗ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿಯ ಬ್ರಹ್ಮಣಿ ಸ್ಟೀಲ್ಸ್ ಕಂಪನಿ ಬಳ್ಳಾರಿ ಸಮೀಪ 36 ಸಾವಿರ ಕೋಟಿ ರೂ. ಬಂಡವಾಳ ಹೂಡಿ, 6 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಯ ಫ್ಯಾಕ್ಟರಿ ಸ್ಥಾಪಿಸುವುದಾಗಿ ಒಡಂಬಡಿಕೆ ಮಾಡಿಕೊಂಡಿತು.

ಅದಕ್ಕಾಗಿ ರಿಯಾಯತಿ ದರದಲ್ಲಿ ಸುಮಾರು 1,500 ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆಯಿತು. ಕೇವಲ ಎಂಟೇ ತಿಂಗಳಲ್ಲಿ, ಮುಂಬೈ ಮೂಲದ ಮಿಗ್ಲಾನಿ ಕುಟುಂಬದ ಉತ್ತಮ್ ಗಲ್ವಾ ಸ್ಟೀಲ್ಸ್ ಕಂಪನೆಗೆ ಮಾರಿಬಿಟ್ಟರು. ವಿಚಿತ್ರ ಎಂದರೆ, ಬ್ರಹ್ಮಣಿ ಎನ್ನುವ ಕಂಪನಿ ಅಸ್ತಿತ್ವದಲ್ಲೇ ಇರಲಿಲ್ಲ. ರೆಡ್ಡಿಗೆ ಸ್ಟೀಲ್ ಫ್ಯಾಕ್ಟರಿ ಮಾಡುವ ಉದ್ದೇಶವೂ ಇರಲಿಲ್ಲ. ಹಾಗಾದರೆ ಉತ್ತಮ್ ಗಲ್ವಾ ಕಂಪನಿಗೆ ಮಾರಿದ್ದೇನು? ಬಳ್ಳಾರಿ ಜಿಲ್ಲೆಯ ಫಲವತ್ತಾದ ಭೂಮಿಯನ್ನು, ನೆನಪಿರಲಿ ಸಾವಿರಾರು ಕೋಟಿಯ ಮಾರುಕಟ್ಟೆ ಬೆಲೆಗೆ!

2007ರಲ್ಲಿ ಆಂಧ್ರದಲ್ಲಿ ವೈಎಸ್‌ಆರ್ ಸರ್ಕಾರವಿದ್ದಾಗ ಅಲ್ಲೂ ಬ್ರಹ್ಮಣಿ ಹೆಸರಲ್ಲಿ ವೈಎಸ್‌ಆರ್ ಮತ್ತು ಜನಾರೆಡ್ಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದರು. ಅಲ್ಲಿ ಬ್ರಹ್ಮಣಿ ಸ್ಟೀಲ್ಸ್ ಹೆಸರಲ್ಲಿ 2 ಮಿಲಿಯನ್ ಟನ್ ಸ್ಟೀಲ್ ಫ್ಯಾಕ್ಟರಿಗೆ ಬಂಡವಾಳ ಹೂಡುವುದಾಗಿ, ಕಡಪಾ ಜಿಲ್ಲೆಯಲ್ಲಿ ಎಕರೆಗೆ ಕೇವಲ 18 ಸಾವಿರದಂತೆ, 10,760 ಎಕರೆ (ಒಟ್ಟು ಮೊತ್ತ ಕೇವಲ 19 ಕೋಟಿ ರೂ) ಮತ್ತು ಏರ್‌ಪೋರ್ಟ್ ಮಾಡುವುದಾಗಿ 78 ಕೋಟಿಗೆ 3,115 ಎಕರೆ ಭೂಮಿಯನ್ನು ಪಡೆದಿದ್ದರು.

ಈ ಭೂಮಿಯನ್ನೆಲ್ಲ ಆಕ್ಸಿಸ್ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಜನಾರ್ಧನ ರೆಡ್ಡಿ, 350 ಕೋಟಿ ರೂ ಸಾಲ ಎತ್ತಿದ್ದರು! ಮುಂದಿನ ಸರ್ಕಾರ ಈ ಒಪ್ಪಂದವನ್ನೇ ರದ್ದು ಮಾಡಿತು. ರೆಡ್ಡಿಯ ಈ ದಂಧೆ ಕುರಿತು 2012ರಲ್ಲಿ ಇಂಗ್ಲಿಷ್ ಪತ್ರಿಕೆಯೊಂದಿಗೆ ಮಾತಾಡಿದ್ದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಆತನಿಗೆ ಸ್ಟೀಲ್ ಫ್ಯಾಕ್ಟರಿ ಮಾಡುವ ಯಾವ ಉದೇಶವೂ ಇಲ್ಲ. ಸರ್ಕಾರದಿಂದ ತುಂಬ ಕಡಿಮೆ ಬೆಲೆಗೆ ಭೂಮಿ ಪಡೆಯುವುದು, ಅದನ್ನು 50-60 ಪಟ್ಟಿಗೆ ಮಾರಿಬಿಡುವುದೇ ಆತನ ‘ಮೊಡಸ್ ಅಪರೆಂಡಿ’ ಎಂದಿದ್ದರು.

ಹುಬ್ಬಳ್ಳಿಯಲ್ಲೂ ರಿಯಲ್ ಎಸ್ಟೇಟ್ ಧಮಾಕ?
ಸಚಿವ ಜಗದೀಶ ಶೆಟ್ಟರ್ ಸಹೋದರ ಎಂಎಲ್‌ಸಿ ಪ್ರದೀಪ ಶೆಟ್ಟರ್ ಹೇಳಿಕೇಳಿ ರಿಯಲ್‌ಎಸ್ಟೇಟ್ ವ್ಯವಹಾರದವರು. ಹಿಂದೆ ಹುಬ್ಬಳ್ಳಿಯ ಸುಪ್ರಸಿದ್ಧ ಜಿಮಖಾನಾ ಕ್ಲಬ್ ಮತ್ತು ಅದರ ಭೂಮಿಯನ್ನು ಎಗರಿಸಲು ಶೆಟ್ಟರ್, ಜೋಶಿ ಯತ್ನಿಸಿದ್ದರು. ಇದರ ವಿರುದ್ಧ ಎಸ್‌.ಆರ್ ಹಿರೇಮಠ ಕಾನೂನು ಹೋರಾಟ ಮಾಡಿದ್ದರು. ಪಾಟೀಲ ಪುಟ್ಟಪ್ಪ ಉಪವಾಸ ಕುಳಿತಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ಹೀಗಾಗಿ ಕಳೆದ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದಲ್ಲೂ ಭೂ ದರೋಡೆಯ ವಾಸನೆ ಹೊಡೆಯುತ್ತಿತ್ತು. ಹಾಗೆಯೇ ಸಮಸ್ಯೆಯಲ್ಲಿರುವ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿತ್ತು. ಸಾರ್ವಜನಿಕವಾಗಿ ನಡೆಯಬೇಕಿದ್ದ ಈ ಕಾರ್ಯಕ್ರಮ ಡೆನಿಸನ್ಸ್ ಎಂಬ ಐಷಾರಾಮಿ ಹೊಟೆಲ್ ಒಳಗಡೆ ಕೇವಲ ವಿಐಪಿಗಳ ನಡುವೆ ಜರುಗಿತು.

ಎಲ್ಲಕ್ಕಿಂತ ಮುಖ್ಯವಾಗಿ ಪುಟ್ಟಿ ಮಣ್ಣಿಗೂ ರೊಕ್ಕ ಇಲ್ಲ ಎಂದು ನೆರೆಪೀಡಿತರನ್ನು ಅವಮಾನಿಸಿದ ಸರ್ಕಾರ ಎ.ಸಿ. ಹಾಲ್‌ನಲ್ಲಿ ಕುಳಿತು, ಉದ್ಯಮಿಗಳ ಬಾಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಹೇಳಿಸುವ ಮೂಲಕ ಉತ್ತರ ಕರ್ನಾಟದ ಜನರನ್ನೇ ಅವಮಾನಿಸಿದೆ ಅಷ್ಟೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...