Homeನಾನು ಗೌರಿಕಲ್ಬುರ್ಗಿ ಗೌರಿಯರನ್ನು ಕೊಂದದ್ದು ಒಂದೇ ಬಂದೂಕು!

ಕಲ್ಬುರ್ಗಿ ಗೌರಿಯರನ್ನು ಕೊಂದದ್ದು ಒಂದೇ ಬಂದೂಕು!

- Advertisement -
- Advertisement -

ತನಿಖೆ ಆರಂಭವಾದ ಶುರುವಿನಿಂದಲೂ, ‘ಇದು ಪೂರ್ವಾಗ್ರಹಪೀಡಿತ ತನಿಖೆ’ ಎಂದು ಒಂದು ಕಥನ ಕಟ್ಟುವ ಪ್ರಕ್ರಿಯೆ ಬಲಪಂಥೀಯ ಶಕ್ತಿಗಳಿಂದ ನಿರಂತರ ಜಾರಿಯಲ್ಲಿತ್ತು. ಈ ಸಮಸ್ಯೆಯನ್ನು ಎದುರುಗೊಂಡು ನಿಷ್ಪಕ್ಷಪಾತ ತನಿಖೆಯ ಪ್ರಕ್ರಿಯೆಯನ್ನು ಮುಂದುವರೆಸುವುದು ಹಾಗೂ ಈ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕಾದ ಒತ್ತಡ ತನಿಖಾ ತಂಡದ ಮೇಲಿತ್ತು. ಇದಲ್ಲದೆ, ತನಿಖೆಯ ದೃಷ್ಟಿ ತಮ್ಮೆಡೆಗೇ ಹರಿದಿದೆಯೆಂದು ಆರೋಪಿಗಳಿಗೆ ಆದಷ್ಟು ಕಾಲ ಸುಳಿವು ಸಿಗದಂತೆ ನೋಡಿಕೊಳ್ಳುವ ಸವಾಲೂ ಕೂಡ ತನಿಖಾ ತಂಡದ ಮುಂದಿತ್ತು.
ಈ ತನಿಖೆಯ ಮೊಟ್ಟಮೊದಲ ಸುಳಿವು ಸಿಕ್ಕಿದ್ದು ಸೆಪ್ಟೆಂಬರ್ 13ರಂದು. ಅಂದರೆ ಕೊಲೆ ನಡೆದು ಸರಿಯಾಗಿ ವಾರದ ನಂತರ. ತನಿಖೆಯ ದಿಕ್ಕನ್ನು ಬಹುತೇಕ ನಿರ್ಣಯಿಸಿದ್ದು ಇದೇ ಸುಳಿವು. ಬಲಪಂಥೀಯ ಹಿಂದೂ ಉಗ್ರವಾದವೇ ಮುಖ್ಯ ಎಳೆಯಾಗಿತ್ತು. ಆದರೆ ತನಿಖಾದಳ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದ್ದರಿಂದ ಈ ಸುಳಿವನ್ನು ಸಾರ್ವಜನಿಕಗೊಳಿಸಲಿಲ್ಲ. ಮಾಧ್ಯಮಗಳಿಂದ ಪ್ರಶ್ನೆ ಬಂದಾಗಲೂ ಅದನ್ನು ಅಲ್ಲಗಳೆಯುತ್ತಲೇ ಬಂತು.
ಏನದು ಸೆಪ್ಟೆಂಬರ್ 13, ತನಿಖಾದಳಕ್ಕೆ ಸಿಕ್ಕ ಸುಳಿವು? ಗೌರಿ ಹತ್ಯೆ ನಡೆದ ಸ್ಥಳದಲ್ಲಿ ಆಕೆಯತ್ತ ಸಿಡಿದ ನಾಲ್ಕು ಗುಂಡುಗಳ ಹೊರಕವಚ ಲಭಿಸಿದ್ದು ಅವು ದಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯಾ ಸ್ಥಳಗಳಲ್ಲಿ ಸಿಕ್ಕಂತೆಯೇ 7.65 ಮಿಲಿಮೀಟರ್ ಕ್ಯಾಲಿಬರ್‍ನ ನಾಡಪಿಸ್ತೂಲಿನವೇ ಆಗಿತ್ತು ಎಂದು ಹೇಳಿದ್ದೆನಷ್ಟೆ. ಕೂಡಲೇ ಈ ಹತ್ಯೆಗಳಿಗಿರುವ ಸಾಮ್ಯತೆಯ ಕಾರಣ ಅಲ್ಲಿ ಸಿಕ್ಕ ಗುಂಡಿನ ಹೊರಕವಚಗಳ ಜೊತೆ ಹೋಲಿಸಿದರು ವಿಧಿವಿಜ್ಞಾನ ತಜ್ಞರು. ಹೀಗೆ ಹೋಲಿಸಿದಾಗ ಎರಡು ಗುಂಡುಗಳು ಒಂದೇ ಬಂದೂಕಿನಿಂದ ಸಿಡಿದವೇ ಅಥವ ಎರಡು ಬೇರೆ ಬೇರೆ ಬಂದೂಕುಗಳಿಂದ ಸಿಡಿದವೇ ಎಂದು ಹೇಳಬಹುದು. ಹೇಗೆ? ಅದಕ್ಕೆ ಮೊದಲು ಒಂದು ಪಿಸ್ತೂಲು ಹೇಗೆ ಕೆಲಸ ಮಾಡುತ್ತದೆಂದು ತಿಳಿದುಕೊಳ್ಳಬೇಕು. ಪಿಸ್ತೂಲಿನಲ್ಲಿ ಗುಂಡುಗಳನ್ನು ತುಂಬಿರಲಾಗುತ್ತದೆ. ಪಿಸ್ತೂಲಿನ ಟ್ರಿಗರ್ ಒತ್ತಿದಾಗ, ಆ ಕೀಲು ಹೋಗಿ ಗುಂಡಿಗೆ ಬಡಿದು ಅದನ್ನು ಅಸಾಧ್ಯ ವೇಗದಲ್ಲಿ ಮುಂದೆ ತಳ್ಳುತ್ತದೆ. ಹೀಗೆ ಹೊರದಬ್ಬಿಸಿಕೊಂಡ ಗುಂಡು ಬಹುವೇಗದಲ್ಲಿ ತಿರುಗುತ್ತಾ (ಠಿiಟಿ) ಪಿಸ್ತೂಲಿನ ನಳಿಕೆಯ ಮೂಲಕ ಹೊರಹೊಮ್ಮುತ್ತದೆ. ಒಂದು ಸುರಂಗದಂತಿರುವ ನಳಿಕೆಯಲ್ಲಿ ಗುಂಡು ಆ ವೇಗದಲ್ಲಿ ತಿರುಗುತ್ತಾ ತೂರಿಕೊಂಡು ಬರುವುದರಿಂದ ಗುಂಡಿನ ಹೊರಕವಚ ಮತ್ತು ನಳಿಕೆಯ ನಡುವೆ ತಿಕ್ಕಾಟವಾಗುತ್ತದೆ (ಜಿಡಿiಛಿಣioಟಿ). ಈ ತಿಕ್ಕಾಟವು ಗುಂಡು, ಅಥವಾ ಅದರ ಹೊರಕವಚದ ಮೇಲೆ ಕೆಲವು ಗುರುತುಗಳನ್ನು ಮೂಡಿಸುತ್ತದೆ. ಇವನ್ನು ವಿಧಿವಿಜ್ಞಾನ ಪರಿಭಾಷೆಯಲ್ಲಿ sಣಡಿiಚಿಣioಟಿ mಚಿಡಿಞs ಎಂದು ಕರೆಯುತ್ತಾರೆ. ಈ ಗುರುತು ಬಂದೂಕಿನ ನಳಿಕೆ ಗುಂಡಿನ ಹೊರಕವಚದ ಮೇಲೆ ಬಿಡುವ ಬೆರಳಚ್ಚು! ಅಂದರೆ ಯಾವುದೇ ಎರಡು ಬಂದೂಕುಗಳು ಒಂದೇ ಗುರುತುಗಳನ್ನು ಮೂಡಿಸಲಾರವು. ಹೀಗೆ ಒಂದು ಗುಂಡಿನ ಹೊರಕವಚವನ್ನು ಒಂದು ನಿರ್ದಿಷ್ಟ ಬಂದೂಕಿಗೆ ತಳುಕು ಹಾಕಿದ್ದು ಮೊದಲ ಬಾರಿಗೆ 1835ರಲ್ಲಿ, ಲಂಡನ್‍ನಲ್ಲಿ. ಅದರಿಂದ ಒಂದು ಕೊಲೆ ಪ್ರಕರಣವನ್ನು ಬೇಧಿಸಲಾಯಿತು.
ಅಂದರೆ ಹಲವು ಸಿಡಿದ ಗುಂಡಿನ ಹೊರಕವಚಗಳನ್ನು ಕಲಸುಮೇಲೊಗರ ಮಾಡಿದರೂ, ತಜ್ಞರು ಒಂದು ನಿರ್ದಿಷ್ಟ ಬಂದೂಕಿನಿಂದ ಸಿಡಿದ ಗುಂಡುಗಳನ್ನು ಗುರುತಿಸಿ ಪ್ರತ್ಯೇಕಿಸಬಲ್ಲರು. ಒಂದೇ ಬಂದೂಕಿನಿಂದಾದ ಯಾವುದೇ ಸರಣಿ ಕೊಲೆ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಶಕ್ತಿ. ಏಕೆಂದರೆ ಹಲವು ಅಪರಾಧ ಪ್ರಕರಣಗಳಲ್ಲಿ ಒಂದೇ ಬಂದೂಕು ಬಳಸಲಾಗಿದೆಯೇ ಇಲ್ಲವೇ ಎಂದು ತೀರ್ಮಾನಿಸುವುದು ಸುಲಭ. ಯಾವುದೇ ಸರಣಿ ಪ್ರಕರಣದಲ್ಲಿ ಹಲವು ಅಪರಾಧ ಕೃತ್ಯಗಳ ಹಿಂದೆ ಒಂದೇ ಅಪರಾಧಿ ಅಥವಾ ಒಂದೇ ಗುಂಪಿದೆ ಎಂದು ಸಾಬೀತು ಮಾಡಬೇಕೆಂದರೆ, ಮೊದಲು ಈ ಪ್ರಕರಣಗಳ ನಡುವಿನ ಕೊಂಡಿಯನ್ನು ನಿರೂಪಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಆದದ್ದೂ ಅದೇ.
ಕರ್ನಾಟಕ ರಾಜ್ಯ ಪೊಲೀಸರ ಬಳಿ ಕಲ್ಬುರ್ಗಿಯನ್ನು ಕೊಂದ ಗುಂಡಿನ ಹೊರಕವಚಗಳು ಮಾತ್ರ ಇದ್ದವು. ಹಾಗಾಗಿ ಗೌರಿ ಮತ್ತು ಕಲ್ಬುರ್ಗಿಯರನ್ನು ಕೊಂದ ಗುಂಡುಗಳ ಪರೀಕ್ಷೆ ನಡೆಯಿತು. ಕಲ್ಬುರ್ಗಿ ಮತ್ತು ಗೌರಿ ಇಬ್ಬರನ್ನೂ ಒಂದೇ ಪಿಸ್ತೂಲಿನಿಂದ ಸಿಡಿದ ಗುಂಡುಗಳು ಕೊಂದವು ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ನೀಡಿತು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ. ಅವತ್ತು ಸೆಪ್ಟೆಂಬರ್ 13, 2017. ಆದರೆ ಏನು ಬಂತು? ಕಲ್ಬುರ್ಗಿ ಪ್ರಕರಣವನ್ನು ಇನ್ನೂ ಬೇಧಿಸಿಲ್ಲ; ಆದ್ದರಿಂದ ಎರಡೂ ಕೊಲೆಗಳನ್ನು ಒಂದೇ ಗುಂಪು ಮಾಡಿರಬಹುದಾದರೂ ಅವರ ಗುರುತು ಪತ್ತೆ ಆಗಿಲ್ಲದ ಕಾರಣ ಈ ಫೊರೆನ್ಸಿಕ್ ವರದಿ ತನಿಖೆಗೆ ನಿಜಕ್ಕೂ ಸಹಾಯ ಮಾಡಿತೆ ಎಂಬುದು ಪ್ರಶ್ನೆ. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ.
ಅದಕ್ಕೆ ನಾವು ದಭೊಲ್ಕರ್, ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿ ಇವರನ್ನು ಕೊಂದ ಗುಂಡಿನ ಹೊರಕವಚಗಳ ಪರೀಕ್ಷೆಯ ವರದಿಗಳೆಲ್ಲವನ್ನೂ ಅಭ್ಯಸಿಸಬೇಕು. ಕಲ್ಬುರ್ಗಿ ಅವರ ಕೊಲೆಯ ತನಿಖೆ ನಡೆಸುತ್ತಿದ್ದ ರಾಜ್ಯ ಸಿಐಡಿ ದಭೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಕೊಲೆಯ ಸ್ಥಳದಲ್ಲಿ ಸಿಕ್ಕ ಎಲ್ಲ ಗುಂಡಿನ ಹೊರಕವಚಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಿತು. ಆ ವರದಿಯ ಪ್ರಕಾರ ದಭೋಲ್ಕರ್ ಮತ್ತು ಕಲ್ಬುರ್ಗಿಯರನ್ನು ಎರಡು ಬೇರೆ ಬೇರೆ ಬಂದೂಕುಗಳನ್ನು ಬಳಸಿ ಕೊಲ್ಲಲಾಗಿತ್ತು. ಈ ಬಂದೂಕುಗಳನ್ನು ನಾವು `ಅ’ ಮತ್ತು `ಬ’ ಎಂದು ಪರಿಗಣಿಸೋಣ. ಆದರೆ ಈ ಎರಡು ಕೊಲೆಗಳ ನಡುವೆ ನಡೆದ ಪನ್ಸಾರೆ ಅವರ ಕೊಲೆಗೆ ಎರಡು ಬಂದೂಕುಗಳು ಬಳಕೆಯಾಗಿದ್ದವು. ಅಲ್ಲಿ ಸಿಕ್ಕ ಗುಂಡಿನ ಹೊರಕವಚಗಳಲ್ಲಿ ಕೆಲವು ಬಂದೂಕು `ಅ’ ಮತ್ತು ಇನ್ನು ಕೆಲವು ಬಂದೂಕು `ಬ’ ಇಂದ ಸಿಡಿದವು ಎಂದು ವರದಿ ನೀಡಿತು. ಅಂದರೆ ಒಂದೇ ಗುಂಪು ಎರಡು ಬಂದೂಕುಗಳನ್ನು ಬಳಸಿ ಮೂರು ಕೊಲೆ ಮಾಡಿತ್ತು. ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಎರಡೂ ಬಂದೂಕು ಬಳಕೆಯಾದದ್ದು ತನಿಖಾಧಿಕಾರಿಗಳ ಅದೃಷ್ಟವೆಂದೇ ಹೇಳಬೇಕು. ಇಲ್ಲದಿದ್ದರೆ ಬಂದೂಕು `ಅ’ ಮತ್ತು ಬಂದೂಕು `ಬ’ ಅನ್ನು ಲಿಂಕ್ ಮಾಡಲು ಆಗುತ್ತಿರಲಿಲ್ಲ. ಇದರೊಂದಿಗೆ ದಭೊಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಪ್ರಕರಣಗಳು ತಳುಕು ಹಾಕಿಕೊಂಡಿದ್ದವು. ಈಗ ಗೌರಿಯನ್ನು ಕೊಂದ ಗುಂಡುಗಳು ಕಲ್ಬುರ್ಗಿಯನ್ನು ಕೊಂದ ಗುಂಡುಗಳ ಸಿಡಿದ ಬಂದೂಕಿನಿಂದಲೇ ಸಿಡಿದವು ಎಂಬ ವರದಿ ಹೇಳಿದ್ದು, ಮತ್ತೆ ಬಂದೂಕು `ಬ’ ಅನ್ನು ಬಳಸಿ ಗೌರಿಯನ್ನು ಕೊಲ್ಲಲಾಯಿತೆಂದು. ಅಲ್ಲಿಗೆ ಈ ಬಂದೂಕು ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿಯರನ್ನು ಕೊಂದಿದೆ. ಇದೇ ಗುಂಪಿನ ಬಳಿಯಿರುವ ಬಂದೂಕು `ಅ’ ದಭೋಲ್ಕರ್ ಮತ್ತು ಪನ್ಸಾರೆಯವರ ಕೊಲೆಗೆ ಬಳಸಲಾಗಿದೆ.
ಇದು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ ವರದಿ. ಆದರೆ ಬಂದೂಕು `ಅ’ ಕುರಿತು ಒಂದು ದೊಡ್ಡ ಗೊಂದಲ ಇದೆ. ಇವತ್ತು ದಭೋಲ್ಕರ್, ಪನ್ಸಾರೆ ಪ್ರಕರಣಗಳಲ್ಲಿ ಆರೋಪಿಗಳ ಪರ ವಕೀಲರಿಗೆ ಇದೇ ದೊಡ್ಡ ಅಸ್ತ್ರ. ಆಗಸ್ಟ್ 20, 2013ರಂದು ಮುಂಜಾನೆ 7:30ರ ಸುಮಾರಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ನರೇಂದ್ರ ದಭೋಲ್ಕರ್ ಅವರ ಕೊಲೆಯಾಯಿತು. ಸುಮಾರು ಮೂರೂವರೆ ಘಂಟೆಗಳ ತರುವಾಯ ನವಿ ಮುಂಬಯಿ ಪೊಲೀಸರು ವಿಕಾಸ್ ಖಂಡೇಲವಾಲ ಮತ್ತು ಮನೀಷ್ ನಗೋರಿ ಎಂಬಿಬ್ಬರು ಗನ್‍ರನ್ನರ್‍ಗಳನ್ನು ಬಂಧಿಸುತ್ತಾರೆ, ಅವರಿಂದ ಕೆಲವು ನಾಡಪಿಸ್ತೂಲುಗಳನ್ನು ವಶಪಡಿಸಿಕೊಳ್ಳುತ್ತಾರೆ. ಹೀಗೆ ವಶಪಡಿಸಿಕೊಂಡ ನಾಡಪಿಸ್ತೂಲುಗಳನ್ನು ಮುಂಬಯಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿಕೊಡಲಾಗುತ್ತದೆ. ಇದೇ ಪ್ರಯೋಗಾಲಯವು ದಭೋಲ್ಕರ್ ಅವರ ಹತ್ಯೆಗೆ ಬಳಸಿದ ಗುಂಡಿನ ಹೊರಕವಚಗಳ ಪರೀಕ್ಷೆಯನ್ನೂ ನಡೆಸುತ್ತಿತ್ತು. ಹಾಗಾಗಿ ಎರಡನ್ನೂ ಹೋಲಿಸಿದಾಗ, ಈ ಹೊರಕವಚಗಳು ವಶಪಡಿಸಿಕೊಂಡ ಒಂದು ನಾಡಪಿಸ್ತೂಲಿನೊಂದಿಗೆ ಸರಿ ಹೊಂದುತ್ತದೆ ಎಂದು ವರದಿ ನೀಡಿತು. ಅಲ್ಲಿಗೆ ದಭೊಲ್ಕರ್ ಅವರ ಪ್ರಕರಣವನ್ನು ಬೇಧಿಸಲಾಯಿತೆಂದು ವಿಕಾಸ ಖಂಡೇಲವಾಲ ಮತ್ತು ಮನೀಷ್ ನಗೋರಿ ಅವರನ್ನು ಪುಣೆಯ ಪೊಲೀಸರು ಬಂಧಿಸಿದರು. ಆದರೆ ತನಿಖೆ ಮುಂದೆ ಸಾಗಲೇ ಇಲ್ಲ. ಇವರಿಬ್ಬರೂ ದಭೊಲ್ಕರ್ ಕೊಲೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಲಿಲ್ಲ, ಪುಣೆಯ ಪೊಲೀಸರು ಅವರ ಮೇಲೆ ಯಾವುದೇ ಸಾಕ್ಷಿಗಳನ್ನು ನೀಡದಾದರು. ಅವರು ಜಾಮೀನಿನ ಮೇಲೆ ಹೊರಬಂದರು. ಆದರೆ ದಭೋಲ್ಕರ್ ಅವರ ದೇಹ ಹೊಕ್ಕ ಗುಂಡುಗಳ ಹೋಲಿಕೆಯಿದ್ದ ಬಂದೂಕು ಪೊಲೀಸರ ವಶದಲ್ಲೇ ಇತ್ತು. 2015ರ ಫೆಬ್ರವರಿಯಲ್ಲಿ ಕೊಲ್ಹಾಪುರದಲ್ಲಿ ಗೋವಿಂದ ಪನ್ಸಾರೆ ಮತ್ತು ಅದೇ ವರ್ಷ ಆಗಸ್ಟ್‍ನಲ್ಲಿ ಧಾರವಾಡದಲ್ಲಿ ಎಂ.ಎಂ. ಕಲ್ಬುರ್ಗಿ ಅವರ ಕೊಲೆಗಳಾದವು. ಬೆಂಗಳೂರು ಪ್ರಯೋಗಾಲಯವು ದಭೋಲ್ಕರ್ ಅವರನ್ನು ಕೊಲ್ಲಲು ಬಳಸಿದ ಬಂದೂಕನ್ನು ಮತ್ತೆ ಪನ್ಸಾರೆ ಅವರ ಕೊಲೆಯಲ್ಲೂ ಬಳಸಲಾಗಿದೆಯೆಂದು ವರದಿ ನೀಡಿತು. ಅಸಲು ದಭೋಲ್ಕರ್ ಅವರನ್ನು ಕೊಂದ ಪಿಸ್ತೂಲನ್ನು ಕೊಲೆ ನಡೆದ ಮೂರು ಘಂಟೆಗಳಲ್ಲಿ ಪೊಲೀಸರು ವಶಪಡಿಸಿಕೊಂಡು ಅವರ ಸುಪರ್ದಿಯಲ್ಲಿಟ್ಟುಕೊಂಡಿದ್ದರೆ, ಆ ಪಿಸ್ತೂಲನ್ನು ಸುಮಾರು ಎರಡು ವರ್ಷದ ಬಳಿಕ ಪನ್ಸಾರೆ ಅವರ ಕೊಲೆಗೆ ಹೇಗೆ ಬಳಸಲಾಯಿತು ಎಂಬುದು ಸರಳ ಪ್ರಶ್ನೆ.
ಅವತ್ತಿಗೆ ದಭೊಲ್ಕರ್ ಅವರ ತನಿಖೆಯನ್ನು ಸಿಬಿಐ ನಡೆಸುತ್ತಿತ್ತು. ಬೆಂಗಳೂರು ಪ್ರಯೋಗಾಲಯದ ವರದಿಯನ್ನು ಮತ್ತೆ ಪರೀಕ್ಷಿಸಲು ಗುಜರಾತಿನ ಪ್ರಯೋಗಾಲಯಕ್ಕೆ ನೀಡಲಾಯಿತು. ಗುಜರಾತಿನ ಪ್ರಯೋಗಾಲಯವೂ ಸಹ ಬೆಂಗಳೂರಿನ ವರದಿಯನ್ನೇ ಎತ್ತಿ ಹಿಡಿಯಿತು. ಮೂರನೇ ಅಭಿಪ್ರಾಯ ಪಡೆಯಲು ಸಿಬಿಐ ಜಗತ್ತಿನ ಶ್ರೇಷ್ಠ ಪೊಲೀಸ್ ಸಂಸ್ಥೆಯೆನಿಸಿದ ಸ್ಕಾಟ್‍ಲ್ಯಾಂಡ್ ಯಾರ್ಡ್‍ಗೆ ನೀಡಲು ಮುಂದಾಯಿತಾದರೂ ಅವರು ಒಪ್ಪಲಿಲ್ಲ. ಈಗ ಮುಂಬಯಿಯ ವರದಿಯನ್ನು ಬೆಂಗಳೂರು ಮತ್ತು ಗುಜರಾತಿನ ಪ್ರಯೋಗಾಲಯದ ವರದಿಗಳು ಅಲ್ಲಗಳೆದಿವೆ. ಮುಂಬಯಿ ಪ್ರಯೋಗಾಲಯವು ಹೀಗೇಕೆ ವರದಿ ನೀಡಿತೆಂದೂ ಸಿಬಿಐ ತನಿಖೆ ನಡೆಸಿತು. ಮುಂಬಯಿ ಪ್ರಯೋಗಾಲಯದ ವರದಿಯು Iಟಿಣegಡಿಚಿಣeಜ ಃಚಿಟಟisಣiಛಿ Iಜeಟಿಣiಜಿiಛಿಚಿಣioಟಿ Sಥಿsಣem ಅನ್ನು ಬಳಸಿ ದಭೋಲ್ಕರ್ ಅವರ ಹತ್ಯೆಯ ಸ್ಥಳದಲ್ಲಿ ಸಿಕ್ಕ ಗುಂಡಿನ ಹೊರಕವಚಗಳು ಮತ್ತು ವಿಕಾಸ್ ಖಂಡೇಲವಾಲನ ಬಳಿ ಸಿಕ್ಕ ನಾಡಪಿಸ್ತೂಲನ್ನು ಹೋಲಿಸಿತ್ತು. ಅಸಲು ತಪ್ಪು ನಡೆದಿದ್ದೇ ಇಲ್ಲಿ. Iಟಿಣegಡಿಚಿಣeಜ ಃಚಿಟಟisಣiಛಿ Iಜeಟಿಣiಜಿiಛಿಚಿಣioಟಿ Sಥಿsಣem ಎಂಬುದು ಕಾರ್ಖಾನೆಯಲ್ಲಿ ಮಾಡಿದ ಆಧುನಿಕ ಪಿಸ್ತೂಲುಗಳನ್ನು ಹೋಲಿಸಲು ಇರುವ ಜಚಿಣಚಿbಚಿse & soಜಿಣತಿಚಿಡಿe. ಅದರಲ್ಲಿ ಕಚ್ಚಾ ನಾಡಪಿಸ್ತೂಲಿನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ನಾಡಪಿಸ್ತೂಲು ಮತ್ತು ನಾಡಪಿಸ್ತೂಲಿನಿಂದ ಹೊಮ್ಮಿದ್ದ ಗುಂಡಿನ ಹೊರಕವಚವನ್ನು ಈ soಜಿಣತಿಚಿಡಿeನಲ್ಲಿ ಹೋಲಿಸಿದ್ದಕ್ಕೆ ಈ ರೀತಿಯ ತಪ್ಪು ವರದಿ ಬಂತೆಂದು ತೇಲಿತು.
ಈ ನಾಲ್ಕು ಕೊಲೆಗಳ ಒಪ್ಪಿತ ವಿಧಿವಿಜ್ಞಾನ ವರದಿಯನ್ನು ಕೋಷ್ಠಕದಲ್ಲಿ ವಿವರಿಸಲಾಗಿದೆ. ಸೆಪ್ಟೆಂಬರ್ 13, 2017ರಂದು ವಿಶೇಷ ತನಿಖಾದಳಕ್ಕೆ ಈ ವರದಿ ತಲುಪಿತು. ನಾಲ್ಕು ಕೊಲೆಗಳನ್ನು ಒಂದೇ ಗುಂಪು ಮಾಡಿದೆಯೆಂಬುದನ್ನು ಈ ವರದಿ ಸೂಚಿಸುತ್ತಿತ್ತೇ ಹೊರತು ಕೊಲೆ ಮಾಡಿದ್ದು ಯಾರು ಎಂಬುದನ್ನಲ್ಲ. ಈ ಹಿನ್ನೆಲೆಯಲ್ಲಿ ಇದೇ ಗುಂಪು ನಡೆಸಿದ ಇತರ ಪಾತಕಗಳ ಬಗ್ಗೆ ಅಭ್ಯಾಸ ಮಾಡುವುದು ಅನಿವಾರ್ಯ.
ಸೆಪ್ಟೆಂಬರ್ 2015ರಲ್ಲಿ ಪನ್ಸಾರೆ ಅವರ ಕೊಲೆ ಸಂಬಂಧ ಮಹಾರಾಷ್ಟ್ರದ ವಿಶೇಷ ತನಿಖಾದಳ ಗೋವೆ ಮೂಲದ ಸನಾತನ ಸಂಸ್ಥೆಯ ನಂಟು ಹೊಂದಿದ ಸಮೀರ ಗಾಯಕ್ವಾಡ್ ಎಂಬುವನನ್ನು ಬಂಧಿಸಿತ್ತು. ಸನಾತನ ಸಂಸ್ಥೆಯೂ ಸಹ ಆತ ತಮ್ಮ ಸಂಸ್ಥೆಯ ನಂಟು ಹೊಂದಿದ್ದನ್ನು ನಿರಾಕರಿಸಿರಲಿಲ್ಲ. ಬದಲಿಗೆ ಆತ ಅಮಾಯಕ ಎಂದು ವಾದಿಸಿತ್ತು. ಸನಾತನ ಸಂಸ್ಥೆಯ ನಂಟು ಹೊಂದಿದ್ದ ಕೆಲವು ವ್ಯಕ್ತಿಗಳು ಈ ಹಿಂದೆ 2007ರಲ್ಲಿ ಮಹಾರಾಷ್ಟ್ರದ ವಾಶಿ, ಥಾಣೆ ಮತ್ತು ಪನ್ವೇಲ್ ಊರುಗಳಲ್ಲಿ ನಡೆದ ಬಾಂಬ್ ಸ್ಫೋಟಗಳು ಮತ್ತು 2009ರಲ್ಲಿ ಗೋವೆಯ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧಿತರಾಗಿದ್ದರು. ಇವರ ಮೇಲೆ ಭಯೋತ್ಪಾದನಾ ನಿಗ್ರಹ ಕಾನೂನುಗಳನ್ನು ಅನ್ವಯಿಸಲಾಗಿತ್ತು. 2011ರಲ್ಲಿ ಮಹಾರಾಷ್ಟ್ರದ ನ್ಯಾಯಾಲಯವು ವಾಶಿ, ಥಾಣೆ ಮತ್ತು ಪನ್ವೇಲ್ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಯೆಂದು ಘೋಷಿಸಿ 10 ವರ್ಷಗಳ ಸಜೆ ವಿಧಿಸಿತು. ಅವರು ಇವತ್ತಿಗೂ ಸಜೆ ಅನುಭವಿಸುತ್ತಿದ್ದಾರೆ. ಇನ್ನು ಗೋವೆಯ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಹಲವರು – ರುದ್ರ ಪಾಟೀಲ್, ಸಾರಂಗ ಅಕೋಳ್ಕರ್, ವಿನಯ್ ಪವಾರ್ ಮತ್ತಿತರರು ಅವತ್ತಿನಿಂದ ತಲೆಮರೆಸಿಕೊಂಡಿದ್ದು ದಭೋಲ್ಕರ್ ಪ್ರಕರಣದಲ್ಲಿ ಸಿಬಿಐ ಸೆಪ್ಟೆಂಬರ್ 2016ರಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಾರಂಗ ಅಕೋಳ್ಕರ್ ಮತ್ತು ವಿನಯ ಪವಾರ್ ಅವರೇ ಬೈಕಿನ ಮೇಲೆ ಬಂದು ದಭೋಲ್ಕರ್ ಅವರನ್ನು ಗುಂಡಿಟ್ಟು ಕೊಂದರು ಎಂದು ಹೇಳಿದ್ದರು. ಇವರ ಮೇಲೆ ಕೇಂದ್ರ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಈ ಚಾರ್ಜ್‍ಶೀಟ್ ಸಲ್ಲಿಕೆಗೆ ಮೂರು ತಿಂಗಳ ಹಿಂದೆ 2016ರ ಜೂನ್‍ನಲ್ಲಿ ಸಿಬಿಐ ಮುಂಬಯಿ ಬಳಿಯ ಪನ್ವೇಲ್‍ನಿಂದ ಇಎನ್‍ಟಿ ಸರ್ಜನ್ ಆದ ಡಾ. ವೀರೇಂದ್ರ ತಾವ್ಡೆಯನ್ನು ಬಂಧಿಸಿತ್ತು. ದಭೋಲ್ಕರ್ ಅವರ ಕೊಲೆಯ ಬಗ್ಗೆ ಡಾ. ತಾವ್ಡೆ ಮತ್ತು ಸಾರಂಗ ಅಕೋಳ್ಕರ್ ನಡೆಸಿದ ಇ-ಮೇಲ್ ಸಂಭಾಷಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಡಾ. ತಾವ್ಡೆ ಸನಾತನ ಸಂಸ್ಥೆಯ ಜೊತೆ ನಿಕಟ ಸಂಪರ್ಕ ಹೊಂದಿರುವ 2002ರಲ್ಲಿ ರಚಿತವಾದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಎಂದು ಸಿಬಿಐ ಹೇಳಿತ್ತು. ಇನ್ನು ಕಲ್ಬುರ್ಗಿ ಅವರ ಕೊಲೆ ಪ್ರಕರಣವನ್ನು ಇದುವರೆಗೂ ಬೇಧಿಸಲಾಗಿಲ್ಲವಾದರೂ ಸಿಐಡಿ ತನಿಖೆಯು ಇದೇ ಜಾಲದತ್ತ ಬಂದು ನಿಂತಿತ್ತು. ಉಮಾ ಕಲ್ಬುರ್ಗಿ ಅವರ ಸಹಾಯದಿಂದ ತಯಾರಿಸಲಾದ ರೇಖಾಚಿತ್ರವು ಸದ್ಯ ತಲೆಮರೆಸಿಕೊಂಡಿರುವ ರುದ್ರ ಪಾಟೀಲನಿಗೆ ಹೋಲುತ್ತದೆ ಎಂದೇ ಇವತ್ತಿಗೂ ನಂಬಲಾಗಿದೆ.
ಹೀಗೆ ಸೆಪ್ಟೆಂಬರ್ 13ರಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಾಲ್ಕು ಕೊಲೆಗಳನ್ನು ಒಂದೇ ಗುಂಪು ನಡೆಸಿರುವ ಸಾಧ್ಯತೆಯನ್ನು ನಿಚ್ಚಳಗೊಳಿಸಿದಾಗ, ನಿಖರ ವ್ಯಕ್ತಿಗಳೆಡೆ ಬೊಟ್ಟು ಮಾಡದಿದ್ದರೂ ತನಿಖೆಯ ದಿಕ್ಕನ್ನು ಖಂಡಿತ ನಿರ್ಣಯಿಸಿತು.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)
ನಿಖೆ ಆರಂಭವಾದ ಶುರುವಿನಿಂದಲೂ, ‘ಇದು ಪೂರ್ವಾಗ್ರಹಪೀಡಿತ ತನಿಖೆ’ ಎಂದು ಒಂದು ಕಥನ ಕಟ್ಟುವ ಪ್ರಕ್ರಿಯೆ ಬಲಪಂಥೀಯ ಶಕ್ತಿಗಳಿಂದ ನಿರಂತರ ಜಾರಿಯಲ್ಲಿತ್ತು. ಈ ಸಮಸ್ಯೆಯನ್ನು ಎದುರುಗೊಂಡು ನಿಷ್ಪಕ್ಷಪಾತ ತನಿಖೆಯ ಪ್ರಕ್ರಿಯೆಯನ್ನು ಮುಂದುವರೆಸುವುದು ಹಾಗೂ ಈ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕಾದ ಒತ್ತಡ ತನಿಖಾ ತಂಡದ ಮೇಲಿತ್ತು. ಇದಲ್ಲದೆ, ತನಿಖೆಯ ದೃಷ್ಟಿ ತಮ್ಮೆಡೆಗೇ ಹರಿದಿದೆಯೆಂದು ಆರೋಪಿಗಳಿಗೆ ಆದಷ್ಟು ಕಾಲ ಸುಳಿವು ಸಿಗದಂತೆ ನೋಡಿಕೊಳ್ಳುವ ಸವಾಲೂ ಕೂಡ ತನಿಖಾ ತಂಡದ ಮುಂದಿತ್ತು.
ಈ ತನಿಖೆಯ ಮೊಟ್ಟಮೊದಲ ಸುಳಿವು ಸಿಕ್ಕಿದ್ದು ಸೆಪ್ಟೆಂಬರ್ 13ರಂದು. ಅಂದರೆ ಕೊಲೆ ನಡೆದು ಸರಿಯಾಗಿ ವಾರದ ನಂತರ. ತನಿಖೆಯ ದಿಕ್ಕನ್ನು ಬಹುತೇಕ ನಿರ್ಣಯಿಸಿದ್ದು ಇದೇ ಸುಳಿವು. ಬಲಪಂಥೀಯ ಹಿಂದೂ ಉಗ್ರವಾದವೇ ಮುಖ್ಯ ಎಳೆಯಾಗಿತ್ತು. ಆದರೆ ತನಿಖಾದಳ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದ್ದರಿಂದ ಈ ಸುಳಿವನ್ನು ಸಾರ್ವಜನಿಕಗೊಳಿಸಲಿಲ್ಲ. ಮಾಧ್ಯಮಗಳಿಂದ ಪ್ರಶ್ನೆ ಬಂದಾಗಲೂ ಅದನ್ನು ಅಲ್ಲಗಳೆಯುತ್ತಲೇ ಬಂತು.
ಏನದು ಸೆಪ್ಟೆಂಬರ್ 13, ತನಿಖಾದಳಕ್ಕೆ ಸಿಕ್ಕ ಸುಳಿವು? ಗೌರಿ ಹತ್ಯೆ ನಡೆದ ಸ್ಥಳದಲ್ಲಿ ಆಕೆಯತ್ತ ಸಿಡಿದ ನಾಲ್ಕು ಗುಂಡುಗಳ ಹೊರಕವಚ ಲಭಿಸಿದ್ದು ಅವು ದಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯಾ ಸ್ಥಳಗಳಲ್ಲಿ ಸಿಕ್ಕಂತೆಯೇ 7.65 ಮಿಲಿಮೀಟರ್ ಕ್ಯಾಲಿಬರ್‍ನ ನಾಡಪಿಸ್ತೂಲಿನವೇ ಆಗಿತ್ತು ಎಂದು ಹೇಳಿದ್ದೆನಷ್ಟೆ. ಕೂಡಲೇ ಈ ಹತ್ಯೆಗಳಿಗಿರುವ ಸಾಮ್ಯತೆಯ ಕಾರಣ ಅಲ್ಲಿ ಸಿಕ್ಕ ಗುಂಡಿನ ಹೊರಕವಚಗಳ ಜೊತೆ ಹೋಲಿಸಿದರು ವಿಧಿವಿಜ್ಞಾನ ತಜ್ಞರು. ಹೀಗೆ ಹೋಲಿಸಿದಾಗ ಎರಡು ಗುಂಡುಗಳು ಒಂದೇ ಬಂದೂಕಿನಿಂದ ಸಿಡಿದವೇ ಅಥವ ಎರಡು ಬೇರೆ ಬೇರೆ ಬಂದೂಕುಗಳಿಂದ ಸಿಡಿದವೇ ಎಂದು ಹೇಳಬಹುದು. ಹೇಗೆ? ಅದಕ್ಕೆ ಮೊದಲು ಒಂದು ಪಿಸ್ತೂಲು ಹೇಗೆ ಕೆಲಸ ಮಾಡುತ್ತದೆಂದು ತಿಳಿದುಕೊಳ್ಳಬೇಕು. ಪಿಸ್ತೂಲಿನಲ್ಲಿ ಗುಂಡುಗಳನ್ನು ತುಂಬಿರಲಾಗುತ್ತದೆ. ಪಿಸ್ತೂಲಿನ ಟ್ರಿಗರ್ ಒತ್ತಿದಾಗ, ಆ ಕೀಲು ಹೋಗಿ ಗುಂಡಿಗೆ ಬಡಿದು ಅದನ್ನು ಅಸಾಧ್ಯ ವೇಗದಲ್ಲಿ ಮುಂದೆ ತಳ್ಳುತ್ತದೆ. ಹೀಗೆ ಹೊರದಬ್ಬಿಸಿಕೊಂಡ ಗುಂಡು ಬಹುವೇಗದಲ್ಲಿ ತಿರುಗುತ್ತಾ (ಠಿiಟಿ) ಪಿಸ್ತೂಲಿನ ನಳಿಕೆಯ ಮೂಲಕ ಹೊರಹೊಮ್ಮುತ್ತದೆ. ಒಂದು ಸುರಂಗದಂತಿರುವ ನಳಿಕೆಯಲ್ಲಿ ಗುಂಡು ಆ ವೇಗದಲ್ಲಿ ತಿರುಗುತ್ತಾ ತೂರಿಕೊಂಡು ಬರುವುದರಿಂದ ಗುಂಡಿನ ಹೊರಕವಚ ಮತ್ತು ನಳಿಕೆಯ ನಡುವೆ ತಿಕ್ಕಾಟವಾಗುತ್ತದೆ (ಜಿಡಿiಛಿಣioಟಿ). ಈ ತಿಕ್ಕಾಟವು ಗುಂಡು, ಅಥವಾ ಅದರ ಹೊರಕವಚದ ಮೇಲೆ ಕೆಲವು ಗುರುತುಗಳನ್ನು ಮೂಡಿಸುತ್ತದೆ. ಇವನ್ನು ವಿಧಿವಿಜ್ಞಾನ ಪರಿಭಾಷೆಯಲ್ಲಿ sಣಡಿiಚಿಣioಟಿ mಚಿಡಿಞs ಎಂದು ಕರೆಯುತ್ತಾರೆ. ಈ ಗುರುತು ಬಂದೂಕಿನ ನಳಿಕೆ ಗುಂಡಿನ ಹೊರಕವಚದ ಮೇಲೆ ಬಿಡುವ ಬೆರಳಚ್ಚು! ಅಂದರೆ ಯಾವುದೇ ಎರಡು ಬಂದೂಕುಗಳು ಒಂದೇ ಗುರುತುಗಳನ್ನು ಮೂಡಿಸಲಾರವು. ಹೀಗೆ ಒಂದು ಗುಂಡಿನ ಹೊರಕವಚವನ್ನು ಒಂದು ನಿರ್ದಿಷ್ಟ ಬಂದೂಕಿಗೆ ತಳುಕು ಹಾಕಿದ್ದು ಮೊದಲ ಬಾರಿಗೆ 1835ರಲ್ಲಿ, ಲಂಡನ್‍ನಲ್ಲಿ. ಅದರಿಂದ ಒಂದು ಕೊಲೆ ಪ್ರಕರಣವನ್ನು ಬೇಧಿಸಲಾಯಿತು.
ಅಂದರೆ ಹಲವು ಸಿಡಿದ ಗುಂಡಿನ ಹೊರಕವಚಗಳನ್ನು ಕಲಸುಮೇಲೊಗರ ಮಾಡಿದರೂ, ತಜ್ಞರು ಒಂದು ನಿರ್ದಿಷ್ಟ ಬಂದೂಕಿನಿಂದ ಸಿಡಿದ ಗುಂಡುಗಳನ್ನು ಗುರುತಿಸಿ ಪ್ರತ್ಯೇಕಿಸಬಲ್ಲರು. ಒಂದೇ ಬಂದೂಕಿನಿಂದಾದ ಯಾವುದೇ ಸರಣಿ ಕೊಲೆ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಶಕ್ತಿ. ಏಕೆಂದರೆ ಹಲವು ಅಪರಾಧ ಪ್ರಕರಣಗಳಲ್ಲಿ ಒಂದೇ ಬಂದೂಕು ಬಳಸಲಾಗಿದೆಯೇ ಇಲ್ಲವೇ ಎಂದು ತೀರ್ಮಾನಿಸುವುದು ಸುಲಭ. ಯಾವುದೇ ಸರಣಿ ಪ್ರಕರಣದಲ್ಲಿ ಹಲವು ಅಪರಾಧ ಕೃತ್ಯಗಳ ಹಿಂದೆ ಒಂದೇ ಅಪರಾಧಿ ಅಥವಾ ಒಂದೇ ಗುಂಪಿದೆ ಎಂದು ಸಾಬೀತು ಮಾಡಬೇಕೆಂದರೆ, ಮೊದಲು ಈ ಪ್ರಕರಣಗಳ ನಡುವಿನ ಕೊಂಡಿಯನ್ನು ನಿರೂಪಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಆದದ್ದೂ ಅದೇ.
ಕರ್ನಾಟಕ ರಾಜ್ಯ ಪೊಲೀಸರ ಬಳಿ ಕಲ್ಬುರ್ಗಿಯನ್ನು ಕೊಂದ ಗುಂಡಿನ ಹೊರಕವಚಗಳು ಮಾತ್ರ ಇದ್ದವು. ಹಾಗಾಗಿ ಗೌರಿ ಮತ್ತು ಕಲ್ಬುರ್ಗಿಯರನ್ನು ಕೊಂದ ಗುಂಡುಗಳ ಪರೀಕ್ಷೆ ನಡೆಯಿತು. ಕಲ್ಬುರ್ಗಿ ಮತ್ತು ಗೌರಿ ಇಬ್ಬರನ್ನೂ ಒಂದೇ ಪಿಸ್ತೂಲಿನಿಂದ ಸಿಡಿದ ಗುಂಡುಗಳು ಕೊಂದವು ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ನೀಡಿತು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ. ಅವತ್ತು ಸೆಪ್ಟೆಂಬರ್ 13, 2017. ಆದರೆ ಏನು ಬಂತು? ಕಲ್ಬುರ್ಗಿ ಪ್ರಕರಣವನ್ನು ಇನ್ನೂ ಬೇಧಿಸಿಲ್ಲ; ಆದ್ದರಿಂದ ಎರಡೂ ಕೊಲೆಗಳನ್ನು ಒಂದೇ ಗುಂಪು ಮಾಡಿರಬಹುದಾದರೂ ಅವರ ಗುರುತು ಪತ್ತೆ ಆಗಿಲ್ಲದ ಕಾರಣ ಈ ಫೊರೆನ್ಸಿಕ್ ವರದಿ ತನಿಖೆಗೆ ನಿಜಕ್ಕೂ ಸಹಾಯ ಮಾಡಿತೆ ಎಂಬುದು ಪ್ರಶ್ನೆ. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ.
ಅದಕ್ಕೆ ನಾವು ದಭೊಲ್ಕರ್, ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿ ಇವರನ್ನು ಕೊಂದ ಗುಂಡಿನ ಹೊರಕವಚಗಳ ಪರೀಕ್ಷೆಯ ವರದಿಗಳೆಲ್ಲವನ್ನೂ ಅಭ್ಯಸಿಸಬೇಕು. ಕಲ್ಬುರ್ಗಿ ಅವರ ಕೊಲೆಯ ತನಿಖೆ ನಡೆಸುತ್ತಿದ್ದ ರಾಜ್ಯ ಸಿಐಡಿ ದಭೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಕೊಲೆಯ ಸ್ಥಳದಲ್ಲಿ ಸಿಕ್ಕ ಎಲ್ಲ ಗುಂಡಿನ ಹೊರಕವಚಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಿತು. ಆ ವರದಿಯ ಪ್ರಕಾರ ದಭೋಲ್ಕರ್ ಮತ್ತು ಕಲ್ಬುರ್ಗಿಯರನ್ನು ಎರಡು ಬೇರೆ ಬೇರೆ ಬಂದೂಕುಗಳನ್ನು ಬಳಸಿ ಕೊಲ್ಲಲಾಗಿತ್ತು. ಈ ಬಂದೂಕುಗಳನ್ನು ನಾವು `ಅ’ ಮತ್ತು `ಬ’ ಎಂದು ಪರಿಗಣಿಸೋಣ. ಆದರೆ ಈ ಎರಡು ಕೊಲೆಗಳ ನಡುವೆ ನಡೆದ ಪನ್ಸಾರೆ ಅವರ ಕೊಲೆಗೆ ಎರಡು ಬಂದೂಕುಗಳು ಬಳಕೆಯಾಗಿದ್ದವು. ಅಲ್ಲಿ ಸಿಕ್ಕ ಗುಂಡಿನ ಹೊರಕವಚಗಳಲ್ಲಿ ಕೆಲವು ಬಂದೂಕು `ಅ’ ಮತ್ತು ಇನ್ನು ಕೆಲವು ಬಂದೂಕು `ಬ’ ಇಂದ ಸಿಡಿದವು ಎಂದು ವರದಿ ನೀಡಿತು. ಅಂದರೆ ಒಂದೇ ಗುಂಪು ಎರಡು ಬಂದೂಕುಗಳನ್ನು ಬಳಸಿ ಮೂರು ಕೊಲೆ ಮಾಡಿತ್ತು. ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಎರಡೂ ಬಂದೂಕು ಬಳಕೆಯಾದದ್ದು ತನಿಖಾಧಿಕಾರಿಗಳ ಅದೃಷ್ಟವೆಂದೇ ಹೇಳಬೇಕು. ಇಲ್ಲದಿದ್ದರೆ ಬಂದೂಕು `ಅ’ ಮತ್ತು ಬಂದೂಕು `ಬ’ ಅನ್ನು ಲಿಂಕ್ ಮಾಡಲು ಆಗುತ್ತಿರಲಿಲ್ಲ. ಇದರೊಂದಿಗೆ ದಭೊಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಪ್ರಕರಣಗಳು ತಳುಕು ಹಾಕಿಕೊಂಡಿದ್ದವು. ಈಗ ಗೌರಿಯನ್ನು ಕೊಂದ ಗುಂಡುಗಳು ಕಲ್ಬುರ್ಗಿಯನ್ನು ಕೊಂದ ಗುಂಡುಗಳ ಸಿಡಿದ ಬಂದೂಕಿನಿಂದಲೇ ಸಿಡಿದವು ಎಂಬ ವರದಿ ಹೇಳಿದ್ದು, ಮತ್ತೆ ಬಂದೂಕು `ಬ’ ಅನ್ನು ಬಳಸಿ ಗೌರಿಯನ್ನು ಕೊಲ್ಲಲಾಯಿತೆಂದು. ಅಲ್ಲಿಗೆ ಈ ಬಂದೂಕು ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿಯರನ್ನು ಕೊಂದಿದೆ. ಇದೇ ಗುಂಪಿನ ಬಳಿಯಿರುವ ಬಂದೂಕು `ಅ’ ದಭೋಲ್ಕರ್ ಮತ್ತು ಪನ್ಸಾರೆಯವರ ಕೊಲೆಗೆ ಬಳಸಲಾಗಿದೆ.
ಇದು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ ವರದಿ. ಆದರೆ ಬಂದೂಕು `ಅ’ ಕುರಿತು ಒಂದು ದೊಡ್ಡ ಗೊಂದಲ ಇದೆ. ಇವತ್ತು ದಭೋಲ್ಕರ್, ಪನ್ಸಾರೆ ಪ್ರಕರಣಗಳಲ್ಲಿ ಆರೋಪಿಗಳ ಪರ ವಕೀಲರಿಗೆ ಇದೇ ದೊಡ್ಡ ಅಸ್ತ್ರ. ಆಗಸ್ಟ್ 20, 2013ರಂದು ಮುಂಜಾನೆ 7:30ರ ಸುಮಾರಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ನರೇಂದ್ರ ದಭೋಲ್ಕರ್ ಅವರ ಕೊಲೆಯಾಯಿತು. ಸುಮಾರು ಮೂರೂವರೆ ಘಂಟೆಗಳ ತರುವಾಯ ನವಿ ಮುಂಬಯಿ ಪೊಲೀಸರು ವಿಕಾಸ್ ಖಂಡೇಲವಾಲ ಮತ್ತು ಮನೀಷ್ ನಗೋರಿ ಎಂಬಿಬ್ಬರು ಗನ್‍ರನ್ನರ್‍ಗಳನ್ನು ಬಂಧಿಸುತ್ತಾರೆ, ಅವರಿಂದ ಕೆಲವು ನಾಡಪಿಸ್ತೂಲುಗಳನ್ನು ವಶಪಡಿಸಿಕೊಳ್ಳುತ್ತಾರೆ. ಹೀಗೆ ವಶಪಡಿಸಿಕೊಂಡ ನಾಡಪಿಸ್ತೂಲುಗಳನ್ನು ಮುಂಬಯಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿಕೊಡಲಾಗುತ್ತದೆ. ಇದೇ ಪ್ರಯೋಗಾಲಯವು ದಭೋಲ್ಕರ್ ಅವರ ಹತ್ಯೆಗೆ ಬಳಸಿದ ಗುಂಡಿನ ಹೊರಕವಚಗಳ ಪರೀಕ್ಷೆಯನ್ನೂ ನಡೆಸುತ್ತಿತ್ತು. ಹಾಗಾಗಿ ಎರಡನ್ನೂ ಹೋಲಿಸಿದಾಗ, ಈ ಹೊರಕವಚಗಳು ವಶಪಡಿಸಿಕೊಂಡ ಒಂದು ನಾಡಪಿಸ್ತೂಲಿನೊಂದಿಗೆ ಸರಿ ಹೊಂದುತ್ತದೆ ಎಂದು ವರದಿ ನೀಡಿತು. ಅಲ್ಲಿಗೆ ದಭೊಲ್ಕರ್ ಅವರ ಪ್ರಕರಣವನ್ನು ಬೇಧಿಸಲಾಯಿತೆಂದು ವಿಕಾಸ ಖಂಡೇಲವಾಲ ಮತ್ತು ಮನೀಷ್ ನಗೋರಿ ಅವರನ್ನು ಪುಣೆಯ ಪೊಲೀಸರು ಬಂಧಿಸಿದರು. ಆದರೆ ತನಿಖೆ ಮುಂದೆ ಸಾಗಲೇ ಇಲ್ಲ. ಇವರಿಬ್ಬರೂ ದಭೊಲ್ಕರ್ ಕೊಲೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಲಿಲ್ಲ, ಪುಣೆಯ ಪೊಲೀಸರು ಅವರ ಮೇಲೆ ಯಾವುದೇ ಸಾಕ್ಷಿಗಳನ್ನು ನೀಡದಾದರು. ಅವರು ಜಾಮೀನಿನ ಮೇಲೆ ಹೊರಬಂದರು. ಆದರೆ ದಭೋಲ್ಕರ್ ಅವರ ದೇಹ ಹೊಕ್ಕ ಗುಂಡುಗಳ ಹೋಲಿಕೆಯಿದ್ದ ಬಂದೂಕು ಪೊಲೀಸರ ವಶದಲ್ಲೇ ಇತ್ತು. 2015ರ ಫೆಬ್ರವರಿಯಲ್ಲಿ ಕೊಲ್ಹಾಪುರದಲ್ಲಿ ಗೋವಿಂದ ಪನ್ಸಾರೆ ಮತ್ತು ಅದೇ ವರ್ಷ ಆಗಸ್ಟ್‍ನಲ್ಲಿ ಧಾರವಾಡದಲ್ಲಿ ಎಂ.ಎಂ. ಕಲ್ಬುರ್ಗಿ ಅವರ ಕೊಲೆಗಳಾದವು. ಬೆಂಗಳೂರು ಪ್ರಯೋಗಾಲಯವು ದಭೋಲ್ಕರ್ ಅವರನ್ನು ಕೊಲ್ಲಲು ಬಳಸಿದ ಬಂದೂಕನ್ನು ಮತ್ತೆ ಪನ್ಸಾರೆ ಅವರ ಕೊಲೆಯಲ್ಲೂ ಬಳಸಲಾಗಿದೆಯೆಂದು ವರದಿ ನೀಡಿತು. ಅಸಲು ದಭೋಲ್ಕರ್ ಅವರನ್ನು ಕೊಂದ ಪಿಸ್ತೂಲನ್ನು ಕೊಲೆ ನಡೆದ ಮೂರು ಘಂಟೆಗಳಲ್ಲಿ ಪೊಲೀಸರು ವಶಪಡಿಸಿಕೊಂಡು ಅವರ ಸುಪರ್ದಿಯಲ್ಲಿಟ್ಟುಕೊಂಡಿದ್ದರೆ, ಆ ಪಿಸ್ತೂಲನ್ನು ಸುಮಾರು ಎರಡು ವರ್ಷದ ಬಳಿಕ ಪನ್ಸಾರೆ ಅವರ ಕೊಲೆಗೆ ಹೇಗೆ ಬಳಸಲಾಯಿತು ಎಂಬುದು ಸರಳ ಪ್ರಶ್ನೆ.
ಅವತ್ತಿಗೆ ದಭೊಲ್ಕರ್ ಅವರ ತನಿಖೆಯನ್ನು ಸಿಬಿಐ ನಡೆಸುತ್ತಿತ್ತು. ಬೆಂಗಳೂರು ಪ್ರಯೋಗಾಲಯದ ವರದಿಯನ್ನು ಮತ್ತೆ ಪರೀಕ್ಷಿಸಲು ಗುಜರಾತಿನ ಪ್ರಯೋಗಾಲಯಕ್ಕೆ ನೀಡಲಾಯಿತು. ಗುಜರಾತಿನ ಪ್ರಯೋಗಾಲಯವೂ ಸಹ ಬೆಂಗಳೂರಿನ ವರದಿಯನ್ನೇ ಎತ್ತಿ ಹಿಡಿಯಿತು. ಮೂರನೇ ಅಭಿಪ್ರಾಯ ಪಡೆಯಲು ಸಿಬಿಐ ಜಗತ್ತಿನ ಶ್ರೇಷ್ಠ ಪೊಲೀಸ್ ಸಂಸ್ಥೆಯೆನಿಸಿದ ಸ್ಕಾಟ್‍ಲ್ಯಾಂಡ್ ಯಾರ್ಡ್‍ಗೆ ನೀಡಲು ಮುಂದಾಯಿತಾದರೂ ಅವರು ಒಪ್ಪಲಿಲ್ಲ. ಈಗ ಮುಂಬಯಿಯ ವರದಿಯನ್ನು ಬೆಂಗಳೂರು ಮತ್ತು ಗುಜರಾತಿನ ಪ್ರಯೋಗಾಲಯದ ವರದಿಗಳು ಅಲ್ಲಗಳೆದಿವೆ. ಮುಂಬಯಿ ಪ್ರಯೋಗಾಲಯವು ಹೀಗೇಕೆ ವರದಿ ನೀಡಿತೆಂದೂ ಸಿಬಿಐ ತನಿಖೆ ನಡೆಸಿತು. ಮುಂಬಯಿ ಪ್ರಯೋಗಾಲಯದ ವರದಿಯು Iಟಿಣegಡಿಚಿಣeಜ ಃಚಿಟಟisಣiಛಿ Iಜeಟಿಣiಜಿiಛಿಚಿಣioಟಿ Sಥಿsಣem ಅನ್ನು ಬಳಸಿ ದಭೋಲ್ಕರ್ ಅವರ ಹತ್ಯೆಯ ಸ್ಥಳದಲ್ಲಿ ಸಿಕ್ಕ ಗುಂಡಿನ ಹೊರಕವಚಗಳು ಮತ್ತು ವಿಕಾಸ್ ಖಂಡೇಲವಾಲನ ಬಳಿ ಸಿಕ್ಕ ನಾಡಪಿಸ್ತೂಲನ್ನು ಹೋಲಿಸಿತ್ತು. ಅಸಲು ತಪ್ಪು ನಡೆದಿದ್ದೇ ಇಲ್ಲಿ. Iಟಿಣegಡಿಚಿಣeಜ ಃಚಿಟಟisಣiಛಿ Iಜeಟಿಣiಜಿiಛಿಚಿಣioಟಿ Sಥಿsಣem ಎಂಬುದು ಕಾರ್ಖಾನೆಯಲ್ಲಿ ಮಾಡಿದ ಆಧುನಿಕ ಪಿಸ್ತೂಲುಗಳನ್ನು ಹೋಲಿಸಲು ಇರುವ ಜಚಿಣಚಿbಚಿse & soಜಿಣತಿಚಿಡಿe. ಅದರಲ್ಲಿ ಕಚ್ಚಾ ನಾಡಪಿಸ್ತೂಲಿನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ನಾಡಪಿಸ್ತೂಲು ಮತ್ತು ನಾಡಪಿಸ್ತೂಲಿನಿಂದ ಹೊಮ್ಮಿದ್ದ ಗುಂಡಿನ ಹೊರಕವಚವನ್ನು ಈ soಜಿಣತಿಚಿಡಿeನಲ್ಲಿ ಹೋಲಿಸಿದ್ದಕ್ಕೆ ಈ ರೀತಿಯ ತಪ್ಪು ವರದಿ ಬಂತೆಂದು ತೇಲಿತು.
ಈ ನಾಲ್ಕು ಕೊಲೆಗಳ ಒಪ್ಪಿತ ವಿಧಿವಿಜ್ಞಾನ ವರದಿಯನ್ನು ಕೋಷ್ಠಕದಲ್ಲಿ ವಿವರಿಸಲಾಗಿದೆ. ಸೆಪ್ಟೆಂಬರ್ 13, 2017ರಂದು ವಿಶೇಷ ತನಿಖಾದಳಕ್ಕೆ ಈ ವರದಿ ತಲುಪಿತು. ನಾಲ್ಕು ಕೊಲೆಗಳನ್ನು ಒಂದೇ ಗುಂಪು ಮಾಡಿದೆಯೆಂಬುದನ್ನು ಈ ವರದಿ ಸೂಚಿಸುತ್ತಿತ್ತೇ ಹೊರತು ಕೊಲೆ ಮಾಡಿದ್ದು ಯಾರು ಎಂಬುದನ್ನಲ್ಲ. ಈ ಹಿನ್ನೆಲೆಯಲ್ಲಿ ಇದೇ ಗುಂಪು ನಡೆಸಿದ ಇತರ ಪಾತಕಗಳ ಬಗ್ಗೆ ಅಭ್ಯಾಸ ಮಾಡುವುದು ಅನಿವಾರ್ಯ.
ಸೆಪ್ಟೆಂಬರ್ 2015ರಲ್ಲಿ ಪನ್ಸಾರೆ ಅವರ ಕೊಲೆ ಸಂಬಂಧ ಮಹಾರಾಷ್ಟ್ರದ ವಿಶೇಷ ತನಿಖಾದಳ ಗೋವೆ ಮೂಲದ ಸನಾತನ ಸಂಸ್ಥೆಯ ನಂಟು ಹೊಂದಿದ ಸಮೀರ ಗಾಯಕ್ವಾಡ್ ಎಂಬುವನನ್ನು ಬಂಧಿಸಿತ್ತು. ಸನಾತನ ಸಂಸ್ಥೆಯೂ ಸಹ ಆತ ತಮ್ಮ ಸಂಸ್ಥೆಯ ನಂಟು ಹೊಂದಿದ್ದನ್ನು ನಿರಾಕರಿಸಿರಲಿಲ್ಲ. ಬದಲಿಗೆ ಆತ ಅಮಾಯಕ ಎಂದು ವಾದಿಸಿತ್ತು. ಸನಾತನ ಸಂಸ್ಥೆಯ ನಂಟು ಹೊಂದಿದ್ದ ಕೆಲವು ವ್ಯಕ್ತಿಗಳು ಈ ಹಿಂದೆ 2007ರಲ್ಲಿ ಮಹಾರಾಷ್ಟ್ರದ ವಾಶಿ, ಥಾಣೆ ಮತ್ತು ಪನ್ವೇಲ್ ಊರುಗಳಲ್ಲಿ ನಡೆದ ಬಾಂಬ್ ಸ್ಫೋಟಗಳು ಮತ್ತು 2009ರಲ್ಲಿ ಗೋವೆಯ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧಿತರಾಗಿದ್ದರು. ಇವರ ಮೇಲೆ ಭಯೋತ್ಪಾದನಾ ನಿಗ್ರಹ ಕಾನೂನುಗಳನ್ನು ಅನ್ವಯಿಸಲಾಗಿತ್ತು. 2011ರಲ್ಲಿ ಮಹಾರಾಷ್ಟ್ರದ ನ್ಯಾಯಾಲಯವು ವಾಶಿ, ಥಾಣೆ ಮತ್ತು ಪನ್ವೇಲ್ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಯೆಂದು ಘೋಷಿಸಿ 10 ವರ್ಷಗಳ ಸಜೆ ವಿಧಿಸಿತು. ಅವರು ಇವತ್ತಿಗೂ ಸಜೆ ಅನುಭವಿಸುತ್ತಿದ್ದಾರೆ. ಇನ್ನು ಗೋವೆಯ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಹಲವರು – ರುದ್ರ ಪಾಟೀಲ್, ಸಾರಂಗ ಅಕೋಳ್ಕರ್, ವಿನಯ್ ಪವಾರ್ ಮತ್ತಿತರರು ಅವತ್ತಿನಿಂದ ತಲೆಮರೆಸಿಕೊಂಡಿದ್ದು ದಭೋಲ್ಕರ್ ಪ್ರಕರಣದಲ್ಲಿ ಸಿಬಿಐ ಸೆಪ್ಟೆಂಬರ್ 2016ರಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಾರಂಗ ಅಕೋಳ್ಕರ್ ಮತ್ತು ವಿನಯ ಪವಾರ್ ಅವರೇ ಬೈಕಿನ ಮೇಲೆ ಬಂದು ದಭೋಲ್ಕರ್ ಅವರನ್ನು ಗುಂಡಿಟ್ಟು ಕೊಂದರು ಎಂದು ಹೇಳಿದ್ದರು. ಇವರ ಮೇಲೆ ಕೇಂದ್ರ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಈ ಚಾರ್ಜ್‍ಶೀಟ್ ಸಲ್ಲಿಕೆಗೆ ಮೂರು ತಿಂಗಳ ಹಿಂದೆ 2016ರ ಜೂನ್‍ನಲ್ಲಿ ಸಿಬಿಐ ಮುಂಬಯಿ ಬಳಿಯ ಪನ್ವೇಲ್‍ನಿಂದ ಇಎನ್‍ಟಿ ಸರ್ಜನ್ ಆದ ಡಾ. ವೀರೇಂದ್ರ ತಾವ್ಡೆಯನ್ನು ಬಂಧಿಸಿತ್ತು. ದಭೋಲ್ಕರ್ ಅವರ ಕೊಲೆಯ ಬಗ್ಗೆ ಡಾ. ತಾವ್ಡೆ ಮತ್ತು ಸಾರಂಗ ಅಕೋಳ್ಕರ್ ನಡೆಸಿದ ಇ-ಮೇಲ್ ಸಂಭಾಷಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಡಾ. ತಾವ್ಡೆ ಸನಾತನ ಸಂಸ್ಥೆಯ ಜೊತೆ ನಿಕಟ ಸಂಪರ್ಕ ಹೊಂದಿರುವ 2002ರಲ್ಲಿ ರಚಿತವಾದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಎಂದು ಸಿಬಿಐ ಹೇಳಿತ್ತು. ಇನ್ನು ಕಲ್ಬುರ್ಗಿ ಅವರ ಕೊಲೆ ಪ್ರಕರಣವನ್ನು ಇದುವರೆಗೂ ಬೇಧಿಸಲಾಗಿಲ್ಲವಾದರೂ ಸಿಐಡಿ ತನಿಖೆಯು ಇದೇ ಜಾಲದತ್ತ ಬಂದು ನಿಂತಿತ್ತು. ಉಮಾ ಕಲ್ಬುರ್ಗಿ ಅವರ ಸಹಾಯದಿಂದ ತಯಾರಿಸಲಾದ ರೇಖಾಚಿತ್ರವು ಸದ್ಯ ತಲೆಮರೆಸಿಕೊಂಡಿರುವ ರುದ್ರ ಪಾಟೀಲನಿಗೆ ಹೋಲುತ್ತದೆ ಎಂದೇ ಇವತ್ತಿಗೂ ನಂಬಲಾಗಿದೆ.
ಹೀಗೆ ಸೆಪ್ಟೆಂಬರ್ 13ರಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಾಲ್ಕು ಕೊಲೆಗಳನ್ನು ಒಂದೇ ಗುಂಪು ನಡೆಸಿರುವ ಸಾಧ್ಯತೆಯನ್ನು ನಿಚ್ಚಳಗೊಳಿಸಿದಾಗ, ನಿಖರ ವ್ಯಕ್ತಿಗಳೆಡೆ ಬೊಟ್ಟು ಮಾಡದಿದ್ದರೂ ತನಿಖೆಯ ದಿಕ್ಕನ್ನು ಖಂಡಿತ ನಿರ್ಣಯಿಸಿತು.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...