Homeಮುಖಪುಟಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ...

ಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಆದರೆ ಇಂದು??

- Advertisement -
- Advertisement -

ಮಾರ್ಚ್ ಇಪ್ಪತ್ತನೇ ದಿನಾಂಕವನ್ನು ವಿಶ್ವ ಗುಬ್ಬಚ್ಚಿಗಳ ದಿನವನ್ನಾಗಿ‌ ಆಚರಿಸಲಾಗುತ್ತದೆ.‌ (World house sparrow day) ಪಕ್ಷಿ ಪ್ರೇಮಿಗಳ ಹೊರತಾಗಿ ಹೆಚ್ಚಿನವರು ಇದರ ಬಗ್ಗೆ ಆಸ್ಥೆ ತೋರುವುದೂ ಇಲ್ಲ.

‌ನಿಸ್ಸಂಶಯವಾಗಿಯೂ ಅತ್ಯಂತ ಕ್ಷಿಪ್ರಗತಿಯಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಪ್ರಮುಖ ಪಕ್ಷಿಗಳಲ್ಲಿ ಗುಬ್ಬಚ್ಚಿ ಪ್ರಮುಖವಾದುದು. ಸಾಮಾನ್ಯವಾಗಿ ಚಿಕ್ಕದಾದ ಶರೀರವಿರುವವರ ಬಗ್ಗೆ ಬರೆಯುವಾಗ
ಗುಬ್ಬಚ್ಚಿ ದೇಹದವನು/ಳು ಎಂಬ ಉಪಮೆ ಬಳಸಲಾಗುತ್ತದೆ. ಅದಕ್ಕೆ ಕಾರಣ ಗುಬ್ಬಚ್ಚಿಯ ಪುಟ್ಟ ದೇಹ.
ಗುಬ್ಬಚ್ಚಿಗಳು ಸಾಮಾನ್ಯವಾಗಿ ಜನರ ನಡುವೆಯೇ ಗೂಡು ಕಟ್ಟುವುದರಿಂದಲೇ ಅವನ್ನು ಮನೆ ಗುಬ್ಬಚ್ಚಿ ಎನ್ನುತ್ತಾರೆ.

ಗುಬ್ಬಚ್ಚಿಗಳನ್ನು ಹುಡುಕಲು ಗುಡ್ಡ, ಬೆಟ್ಟ, ತೋಟ, ಕಾಡು,ಹಳ್ಳಿಗಳಿಗೆ ಹೋಗಬೇಕಾಗಿದ್ದಿರಲಿಲ್ಲ. ಅದು ಅತ್ಯಂತ ಸರಳ ಮತ್ತು ಕಲಾತ್ಮಕ ಗೂಡುಗಳನ್ನು ಹಂಚಿನ ಕಟ್ಟಡದ ಮೇಲ್ಚಾವಣಿಯ ಒಳಭಾಗದ ಪಕ್ಕಾಸು, ರೀಪುಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟುತ್ತವೆ. ಅವು ಕಸಗಳ ರಾಶಿಯನ್ನೇ ತಂದು ಹಾಕುತ್ತವೆಂದು, ಹಿಕ್ಕೆ ಹಾಕುತ್ತವೆಂದೂ ನಾವೆಲ್ಲಾ ಅವುಗಳನ್ನು ಓಡಿಸುತ್ತೇವೆ. ನಾವೆಷ್ಟೇ ಓಡಿಸಿದರೂ ಅದು ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದು ಅಷ್ಟು ಸುಲಭವಾಗಿ ಆ ಸ್ಥಳವನ್ನು ಬಿಟ್ಟು ಹೋಗುವುದಿಲ್ಲ. ನಾವು ಮತ್ತೆ ಮತ್ತೆ ಅದರ ಗೂಡನ್ನು ಕಿತ್ತೆಸೆದರೆ ಅಪಾಯದ ಮುನ್ಸೂಚನೆಯರಿತು ಅದು ಬೇರೆ ಸ್ಥಳ ಹುಡುಕುತ್ತದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಅದು ಮನುಷ್ಯನಿಂದ ತನಗೆ ಮತ್ತು ತನ್ನ ಸಂತಾನಕ್ಕೆ ಅಪಾಯವಿಲ್ಲ ಎಂಬ ಕಾರಣಕ್ಕೂ ಮನುಷ್ಯನ ವಾಸಸ್ಥಾನವನ್ನೇ ಹೆಚ್ಚು ಇಷ್ಟಪಡುತ್ತದೆ. ಆದರೆ ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಪ್ರಸ್ತುತ ಗುಬ್ಬಚ್ಚಿಗಳ ಸಂತಾನ ಶೀಘ್ರಗತಿಯಲ್ಲಿ ಅಳಿವಿನಂಚಿಗೆ ಸಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗುಬ್ಬಚ್ಚಿಗಳನ್ನು ಚಿತ್ರದಲ್ಲೋ, ಟಿ.ವಿ.ಪರದೆಯ ಮೇಲೋ ನಮ್ಮ ಮಕ್ಕಳಿಗೆ ತೋರಿಸಬೇಕಾದ ದಿನಗಳು ಬೇಗನೇ ಬರಬಹುದು.

ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಸಾಮಾನ್ಯರಲ್ಲಿ ಸಾಮಾನ್ಯರಿಗೆ, ಎಳೆಯ ಮಕ್ಕಳಿಗೆಲ್ಲಾ ಗುಬ್ಬಚ್ಚಿಗಳ ಬಗ್ಗೆ ಒಳ್ಳೆಯ ತಿಳುವಳಿಕೆ ಇತ್ತು. ಇಂದು ಗುಬ್ಬಚ್ಚಿಗಳ ಬಗ್ಗೆ ಪಕ್ಷಿ ಶಾಸ್ತ್ರಜ್ಞರು, ಪರಿಸರ ತಜ್ಞರು ಮಾತ್ರ ಅಧಿಕೃತವಾಗಿ ಮಾತನಾಡಬಲ್ಲರೇನೋ ಎಂಬಷ್ಟರ ಮಟ್ಟಿಗೆ ಅದರ ಸಂತತಿಯೂ ವಿರಳವಾಗುತ್ತಿದೆ ಮತ್ತು ಸ್ವತಃ ಅದೂ ಮಾನವನಿಂದ ದೂರವಾಗುತ್ತಿದೆ.

ಗುಬ್ಬಚ್ಚಿ, ಪಾರಿವಾಳ, ಕಾಗೆಗಳ ಹೊರತಾದ ಹೆಚ್ಚಿನೆಲ್ಲಾ ಪಕ್ಷಿಗಳ ಜೀವನ ಶೈಲಿಯ ಬಗ್ಗೆ ಆಳವಾದ ಮಾಹಿತಿಯಿರುವುದು ಪಕ್ಷಿ ತಜ್ಞರಿಗೆ ಮತ್ತು ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಮಾತ್ರ. ಆದರೆ ಗುಬ್ಬಚ್ಚಿಯ ಜೀವನ ಶೈಲಿ, ಮೊಟ್ಟೆ ಇಡುವ ಸಮಯ ಮತ್ತು ಕ್ರಮ, ಮೊಟ್ಟೆಗೆ ಕಾವು ಕೊಡಲು ಬೇಕಾಗುವ ಸಮಯ, ಅವುಗಳ ಆಹಾರ, ಗೂಡು ಕಟ್ಟುವ ಕ್ರಮ ಇತ್ಯಾದಿಗಳ ಬಗೆಗೆಲ್ಲಾ ನಮ್ಮ ಹಿರಿಯರು ಅಧಿಕೃತವಾಗಿ ಮಾತನಾಡಬಲ್ಲಷ್ಟು ಮಾಹಿತಿ ಕೊಡುತ್ತಿದ್ದರು.ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನುಷ್ಯರೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಯಾವುದೇ ವೈವಿಧ್ಯಮಯ ಪಕ್ಷಿ ಸಂಕುಲವನ್ನು ನೋಡಬೇಕಾದರೆ ಹಳ್ಳಿಗಳಿಗೆ ಹೋಗಬೇಕಾಗುತ್ತದೆ. ಬೆಟ್ಟ, ಗುಡ್ಡ, ತೋಟ, ಕಾಡು ಮುಂತಾದ ಹಸಿರಾಗಿರುವ ಪ್ರಕೃತಿಯ ಮಡಿಲನ್ನೇ ಹೆಚ್ಚಿನ ಪಕ್ಷಿ ಸಂಕುಲ ಆಯ್ದುಕೊಳ್ಳುತ್ತವೆ. ಆದರೆ ಗುಬ್ಬಚ್ಚಿ ಮಾತ್ರ ಸರ್ವವ್ಯಾಪಿ. ಅವು ನಗರ,ಪಟ್ಟಣ, ಹಳ್ಳಿಗಳ ಗಡಿಗಳಿಲ್ಲದೇ ಎಲ್ಲೆಂದರಲ್ಲಿ ಕಾಣಸಿಗುತ್ತಿತ್ತು. ಗುಬ್ಬಚ್ಚಿ ಸಂತತಿ ವಿನಾಶದಂಚಿಗೆ ಸರಿದುದರ ಹಿಂದಿನ ಕಾರಣಗಳನ್ನು ಪಕ್ಷಿ-ಪರಿಸರ ತಜ್ಞರಷ್ಟೇ ಕರಾರುವಾಕ್ಕಾಗಿ ನಮ್ಮ ಹಿರಿಯರೂ ನೀಡಬಲ್ಲರು. ಅದಕ್ಕೆ ಕಾರಣ ಗುಬ್ಬಚ್ಚಿ ಮತ್ತು ಮನುಷ್ಯನ ನಿಕಟತೆ.

ಕಾರಣಗಳು 

ಹೆಂಚಿನ ಮನೆ-ಕಟ್ಟಡಗಳು ಕಡಿಮೆಯಾಗಿ ಆರ್.ಸಿ.ಸಿ. ಕಟ್ಟಡಗಳು ಹೆಚ್ಚಿದ್ದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನನುಕೂಲವುಂಟಾಗಿದೆ. ಆರ್.ಸಿ.ಸಿ. ಮನೆಗಳಲ್ಲಿ ಪಕ್ಕಾಸು, ರೀಪುಗಳು ಇಲ್ಲದ್ದರಿಂದ ಅವುಗಳಲ್ಲಿ ಗೂಡು ಕಟ್ಟಲು ಆಧಾರಗಳಿಲ್ಲ.

-ಹೆಂಚಿನ ಮನೆಗಳಲ್ಲಾದರೂ ಹದಿನೈದಿಪ್ಪತ್ತು ವರ್ಷಗಳ ಹಿಂದೆ ಇಂದಿನಂತೆ ಫ್ಯಾನ್‌ಗಳ ಬಳಕೆ ವ್ಯಾಪಕವಾಗಿರಲಿಲ್ಲ. ಗುಬ್ಬಚ್ಚಿ ಸದಾ ಚಟುವಟಿಕೆಯಲ್ಲಿರುವ ಪಕ್ಷಿಯಾದ್ದರಿಂದ ಒಂದೇ ಕಡೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸಹಜ ಸ್ವಭಾವದಂತೆ ಆಚೀಚೆ ಹಾರಾಡುತ್ತಿರುತ್ತದೆ. ಫ್ಯಾನ್‌ಗಳು ಚಾಲೂ ಇದ್ದಾಗೆಲ್ಲಾ ಫ್ಯಾನ್ ರೆಕ್ಕೆಗಳಿಗೆ ಸಿಕ್ಕಿ ಗುಬ್ಬಚ್ಚಿಗಳು ಸಾಯುವುದು ಹೆಚ್ಚಾಯಿತು.

-ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಬೇಕಾಗುವ ಅನುಕೂಲತೆಗಳು ಕ್ಷೀಣಿಸಿದುದರ ಪರಿಣಾಮ ಅವುಗಳ ಮೊಟ್ಟೆಗಳು ನಾಶವಾಗಿ ಗುಬ್ಬಚ್ಚಿ ಸಂತಾನ ಕ್ಷೀಣಿಸಲಾರಂಭವಾಯಿತು.

-ಮಾನವ ಪರಿಸರದಲ್ಲಿರುವ ಗುಬ್ಬಚ್ಚಿ ಗೂಡುಗಳ ಮೇಲೆ ಮಾನವನ ಕ್ರೌರ್ಯದಿಂದ ಮೊಟ್ಟೆಗಳು ನಾಶಗೊಂಡು ಸಂತತಿ ಕ್ಷೀಣಿಸುತ್ತಿದೆ.

-ಮೊಬೈಲ್ ಫೋನ್ ಬಳಕೆ ವ್ಯಾಪಕವಾದುದರ ಪರಿಣಾಮ ನೆಟ್‌ವರ್ಕ್ ಕವರೇಜ್‌ಗಾಗಿ ಹಳ್ಳಿ ಹಳ್ಳಿಗಳಲ್ಲೂ, ಅರಣ್ಯ ಪ್ರದೇಶಗಳ ಮಧ್ಯೆಯೂ ಮೊಬೈಲ್ ಗೋಪುರಗಳು ಹೆಚ್ಚಾಗುತ್ತಾ ಅದರ ಪರಿಣಾಮ ಗುಬ್ಬಚ್ಚಿ ಸಂತತಿಗಳ ಮೇಲೆ ಬೀರುತ್ತಿದೆ. ಒಟ್ಟಿನಲ್ಲಿ ಹೆಚ್ಚುತ್ತಿರುವ ಸೂಕ್ಷ್ಮ ತರಂಗ ಗೋಪುರಗಳು ಗುಬ್ಬಚ್ಚಿ ಸಂತಾನಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ.

-ಗುಬ್ಬಚ್ಚಿಗಳ ಮುಖ್ಯ ಆಹಾರ ಹೊಲಗದ್ದೆಗಳಲ್ಲಿರುವ ಚಿಕ್ಕ ಪುಟ್ಟ ಕ್ರಿಮಿ ಕೀಟಗಳು ಮತ್ತು ಕಾಳುಗಳು. ಹೊಲಗದ್ದೆಗಳು ಕಡಿಮೆಯಾಗುತ್ತಾ ಅವುಗಳ ಆಹಾರ ಮೂಲಗಳ ಮೇಲೂ ಪರಿಣಾಮವುಂಟಾಯಿತು.

– ಗುಬ್ಬಚ್ಚಿಗಳು ತಮ್ಮ ಆಹಾರವನ್ನು ಹೊಲಗದ್ದೆಗಳಲ್ಲಿ ಹುಡುಕುವುದರಿಂದ ಹೊಲಗದ್ದೆಗಳಿಗೆ ಸಿಂಪಡಿಸುವ ಕ್ರಿಮಿ, ಕೀಟ ನಾಶಕಗಳು ಗುಬ್ಬಚ್ಚಿಗಳ ಪ್ರಾಣಕ್ಕೂ ಎರವಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...