Homeಮುಖಪುಟಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ...

ಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಆದರೆ ಇಂದು??

- Advertisement -
- Advertisement -

ಮಾರ್ಚ್ ಇಪ್ಪತ್ತನೇ ದಿನಾಂಕವನ್ನು ವಿಶ್ವ ಗುಬ್ಬಚ್ಚಿಗಳ ದಿನವನ್ನಾಗಿ‌ ಆಚರಿಸಲಾಗುತ್ತದೆ.‌ (World house sparrow day) ಪಕ್ಷಿ ಪ್ರೇಮಿಗಳ ಹೊರತಾಗಿ ಹೆಚ್ಚಿನವರು ಇದರ ಬಗ್ಗೆ ಆಸ್ಥೆ ತೋರುವುದೂ ಇಲ್ಲ.

‌ನಿಸ್ಸಂಶಯವಾಗಿಯೂ ಅತ್ಯಂತ ಕ್ಷಿಪ್ರಗತಿಯಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಪ್ರಮುಖ ಪಕ್ಷಿಗಳಲ್ಲಿ ಗುಬ್ಬಚ್ಚಿ ಪ್ರಮುಖವಾದುದು. ಸಾಮಾನ್ಯವಾಗಿ ಚಿಕ್ಕದಾದ ಶರೀರವಿರುವವರ ಬಗ್ಗೆ ಬರೆಯುವಾಗ
ಗುಬ್ಬಚ್ಚಿ ದೇಹದವನು/ಳು ಎಂಬ ಉಪಮೆ ಬಳಸಲಾಗುತ್ತದೆ. ಅದಕ್ಕೆ ಕಾರಣ ಗುಬ್ಬಚ್ಚಿಯ ಪುಟ್ಟ ದೇಹ.
ಗುಬ್ಬಚ್ಚಿಗಳು ಸಾಮಾನ್ಯವಾಗಿ ಜನರ ನಡುವೆಯೇ ಗೂಡು ಕಟ್ಟುವುದರಿಂದಲೇ ಅವನ್ನು ಮನೆ ಗುಬ್ಬಚ್ಚಿ ಎನ್ನುತ್ತಾರೆ.

ಗುಬ್ಬಚ್ಚಿಗಳನ್ನು ಹುಡುಕಲು ಗುಡ್ಡ, ಬೆಟ್ಟ, ತೋಟ, ಕಾಡು,ಹಳ್ಳಿಗಳಿಗೆ ಹೋಗಬೇಕಾಗಿದ್ದಿರಲಿಲ್ಲ. ಅದು ಅತ್ಯಂತ ಸರಳ ಮತ್ತು ಕಲಾತ್ಮಕ ಗೂಡುಗಳನ್ನು ಹಂಚಿನ ಕಟ್ಟಡದ ಮೇಲ್ಚಾವಣಿಯ ಒಳಭಾಗದ ಪಕ್ಕಾಸು, ರೀಪುಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟುತ್ತವೆ. ಅವು ಕಸಗಳ ರಾಶಿಯನ್ನೇ ತಂದು ಹಾಕುತ್ತವೆಂದು, ಹಿಕ್ಕೆ ಹಾಕುತ್ತವೆಂದೂ ನಾವೆಲ್ಲಾ ಅವುಗಳನ್ನು ಓಡಿಸುತ್ತೇವೆ. ನಾವೆಷ್ಟೇ ಓಡಿಸಿದರೂ ಅದು ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದು ಅಷ್ಟು ಸುಲಭವಾಗಿ ಆ ಸ್ಥಳವನ್ನು ಬಿಟ್ಟು ಹೋಗುವುದಿಲ್ಲ. ನಾವು ಮತ್ತೆ ಮತ್ತೆ ಅದರ ಗೂಡನ್ನು ಕಿತ್ತೆಸೆದರೆ ಅಪಾಯದ ಮುನ್ಸೂಚನೆಯರಿತು ಅದು ಬೇರೆ ಸ್ಥಳ ಹುಡುಕುತ್ತದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಅದು ಮನುಷ್ಯನಿಂದ ತನಗೆ ಮತ್ತು ತನ್ನ ಸಂತಾನಕ್ಕೆ ಅಪಾಯವಿಲ್ಲ ಎಂಬ ಕಾರಣಕ್ಕೂ ಮನುಷ್ಯನ ವಾಸಸ್ಥಾನವನ್ನೇ ಹೆಚ್ಚು ಇಷ್ಟಪಡುತ್ತದೆ. ಆದರೆ ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಪ್ರಸ್ತುತ ಗುಬ್ಬಚ್ಚಿಗಳ ಸಂತಾನ ಶೀಘ್ರಗತಿಯಲ್ಲಿ ಅಳಿವಿನಂಚಿಗೆ ಸಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗುಬ್ಬಚ್ಚಿಗಳನ್ನು ಚಿತ್ರದಲ್ಲೋ, ಟಿ.ವಿ.ಪರದೆಯ ಮೇಲೋ ನಮ್ಮ ಮಕ್ಕಳಿಗೆ ತೋರಿಸಬೇಕಾದ ದಿನಗಳು ಬೇಗನೇ ಬರಬಹುದು.

ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಸಾಮಾನ್ಯರಲ್ಲಿ ಸಾಮಾನ್ಯರಿಗೆ, ಎಳೆಯ ಮಕ್ಕಳಿಗೆಲ್ಲಾ ಗುಬ್ಬಚ್ಚಿಗಳ ಬಗ್ಗೆ ಒಳ್ಳೆಯ ತಿಳುವಳಿಕೆ ಇತ್ತು. ಇಂದು ಗುಬ್ಬಚ್ಚಿಗಳ ಬಗ್ಗೆ ಪಕ್ಷಿ ಶಾಸ್ತ್ರಜ್ಞರು, ಪರಿಸರ ತಜ್ಞರು ಮಾತ್ರ ಅಧಿಕೃತವಾಗಿ ಮಾತನಾಡಬಲ್ಲರೇನೋ ಎಂಬಷ್ಟರ ಮಟ್ಟಿಗೆ ಅದರ ಸಂತತಿಯೂ ವಿರಳವಾಗುತ್ತಿದೆ ಮತ್ತು ಸ್ವತಃ ಅದೂ ಮಾನವನಿಂದ ದೂರವಾಗುತ್ತಿದೆ.

ಗುಬ್ಬಚ್ಚಿ, ಪಾರಿವಾಳ, ಕಾಗೆಗಳ ಹೊರತಾದ ಹೆಚ್ಚಿನೆಲ್ಲಾ ಪಕ್ಷಿಗಳ ಜೀವನ ಶೈಲಿಯ ಬಗ್ಗೆ ಆಳವಾದ ಮಾಹಿತಿಯಿರುವುದು ಪಕ್ಷಿ ತಜ್ಞರಿಗೆ ಮತ್ತು ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಮಾತ್ರ. ಆದರೆ ಗುಬ್ಬಚ್ಚಿಯ ಜೀವನ ಶೈಲಿ, ಮೊಟ್ಟೆ ಇಡುವ ಸಮಯ ಮತ್ತು ಕ್ರಮ, ಮೊಟ್ಟೆಗೆ ಕಾವು ಕೊಡಲು ಬೇಕಾಗುವ ಸಮಯ, ಅವುಗಳ ಆಹಾರ, ಗೂಡು ಕಟ್ಟುವ ಕ್ರಮ ಇತ್ಯಾದಿಗಳ ಬಗೆಗೆಲ್ಲಾ ನಮ್ಮ ಹಿರಿಯರು ಅಧಿಕೃತವಾಗಿ ಮಾತನಾಡಬಲ್ಲಷ್ಟು ಮಾಹಿತಿ ಕೊಡುತ್ತಿದ್ದರು.ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನುಷ್ಯರೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಯಾವುದೇ ವೈವಿಧ್ಯಮಯ ಪಕ್ಷಿ ಸಂಕುಲವನ್ನು ನೋಡಬೇಕಾದರೆ ಹಳ್ಳಿಗಳಿಗೆ ಹೋಗಬೇಕಾಗುತ್ತದೆ. ಬೆಟ್ಟ, ಗುಡ್ಡ, ತೋಟ, ಕಾಡು ಮುಂತಾದ ಹಸಿರಾಗಿರುವ ಪ್ರಕೃತಿಯ ಮಡಿಲನ್ನೇ ಹೆಚ್ಚಿನ ಪಕ್ಷಿ ಸಂಕುಲ ಆಯ್ದುಕೊಳ್ಳುತ್ತವೆ. ಆದರೆ ಗುಬ್ಬಚ್ಚಿ ಮಾತ್ರ ಸರ್ವವ್ಯಾಪಿ. ಅವು ನಗರ,ಪಟ್ಟಣ, ಹಳ್ಳಿಗಳ ಗಡಿಗಳಿಲ್ಲದೇ ಎಲ್ಲೆಂದರಲ್ಲಿ ಕಾಣಸಿಗುತ್ತಿತ್ತು. ಗುಬ್ಬಚ್ಚಿ ಸಂತತಿ ವಿನಾಶದಂಚಿಗೆ ಸರಿದುದರ ಹಿಂದಿನ ಕಾರಣಗಳನ್ನು ಪಕ್ಷಿ-ಪರಿಸರ ತಜ್ಞರಷ್ಟೇ ಕರಾರುವಾಕ್ಕಾಗಿ ನಮ್ಮ ಹಿರಿಯರೂ ನೀಡಬಲ್ಲರು. ಅದಕ್ಕೆ ಕಾರಣ ಗುಬ್ಬಚ್ಚಿ ಮತ್ತು ಮನುಷ್ಯನ ನಿಕಟತೆ.

ಕಾರಣಗಳು 

ಹೆಂಚಿನ ಮನೆ-ಕಟ್ಟಡಗಳು ಕಡಿಮೆಯಾಗಿ ಆರ್.ಸಿ.ಸಿ. ಕಟ್ಟಡಗಳು ಹೆಚ್ಚಿದ್ದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನನುಕೂಲವುಂಟಾಗಿದೆ. ಆರ್.ಸಿ.ಸಿ. ಮನೆಗಳಲ್ಲಿ ಪಕ್ಕಾಸು, ರೀಪುಗಳು ಇಲ್ಲದ್ದರಿಂದ ಅವುಗಳಲ್ಲಿ ಗೂಡು ಕಟ್ಟಲು ಆಧಾರಗಳಿಲ್ಲ.

-ಹೆಂಚಿನ ಮನೆಗಳಲ್ಲಾದರೂ ಹದಿನೈದಿಪ್ಪತ್ತು ವರ್ಷಗಳ ಹಿಂದೆ ಇಂದಿನಂತೆ ಫ್ಯಾನ್‌ಗಳ ಬಳಕೆ ವ್ಯಾಪಕವಾಗಿರಲಿಲ್ಲ. ಗುಬ್ಬಚ್ಚಿ ಸದಾ ಚಟುವಟಿಕೆಯಲ್ಲಿರುವ ಪಕ್ಷಿಯಾದ್ದರಿಂದ ಒಂದೇ ಕಡೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸಹಜ ಸ್ವಭಾವದಂತೆ ಆಚೀಚೆ ಹಾರಾಡುತ್ತಿರುತ್ತದೆ. ಫ್ಯಾನ್‌ಗಳು ಚಾಲೂ ಇದ್ದಾಗೆಲ್ಲಾ ಫ್ಯಾನ್ ರೆಕ್ಕೆಗಳಿಗೆ ಸಿಕ್ಕಿ ಗುಬ್ಬಚ್ಚಿಗಳು ಸಾಯುವುದು ಹೆಚ್ಚಾಯಿತು.

-ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಬೇಕಾಗುವ ಅನುಕೂಲತೆಗಳು ಕ್ಷೀಣಿಸಿದುದರ ಪರಿಣಾಮ ಅವುಗಳ ಮೊಟ್ಟೆಗಳು ನಾಶವಾಗಿ ಗುಬ್ಬಚ್ಚಿ ಸಂತಾನ ಕ್ಷೀಣಿಸಲಾರಂಭವಾಯಿತು.

-ಮಾನವ ಪರಿಸರದಲ್ಲಿರುವ ಗುಬ್ಬಚ್ಚಿ ಗೂಡುಗಳ ಮೇಲೆ ಮಾನವನ ಕ್ರೌರ್ಯದಿಂದ ಮೊಟ್ಟೆಗಳು ನಾಶಗೊಂಡು ಸಂತತಿ ಕ್ಷೀಣಿಸುತ್ತಿದೆ.

-ಮೊಬೈಲ್ ಫೋನ್ ಬಳಕೆ ವ್ಯಾಪಕವಾದುದರ ಪರಿಣಾಮ ನೆಟ್‌ವರ್ಕ್ ಕವರೇಜ್‌ಗಾಗಿ ಹಳ್ಳಿ ಹಳ್ಳಿಗಳಲ್ಲೂ, ಅರಣ್ಯ ಪ್ರದೇಶಗಳ ಮಧ್ಯೆಯೂ ಮೊಬೈಲ್ ಗೋಪುರಗಳು ಹೆಚ್ಚಾಗುತ್ತಾ ಅದರ ಪರಿಣಾಮ ಗುಬ್ಬಚ್ಚಿ ಸಂತತಿಗಳ ಮೇಲೆ ಬೀರುತ್ತಿದೆ. ಒಟ್ಟಿನಲ್ಲಿ ಹೆಚ್ಚುತ್ತಿರುವ ಸೂಕ್ಷ್ಮ ತರಂಗ ಗೋಪುರಗಳು ಗುಬ್ಬಚ್ಚಿ ಸಂತಾನಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ.

-ಗುಬ್ಬಚ್ಚಿಗಳ ಮುಖ್ಯ ಆಹಾರ ಹೊಲಗದ್ದೆಗಳಲ್ಲಿರುವ ಚಿಕ್ಕ ಪುಟ್ಟ ಕ್ರಿಮಿ ಕೀಟಗಳು ಮತ್ತು ಕಾಳುಗಳು. ಹೊಲಗದ್ದೆಗಳು ಕಡಿಮೆಯಾಗುತ್ತಾ ಅವುಗಳ ಆಹಾರ ಮೂಲಗಳ ಮೇಲೂ ಪರಿಣಾಮವುಂಟಾಯಿತು.

– ಗುಬ್ಬಚ್ಚಿಗಳು ತಮ್ಮ ಆಹಾರವನ್ನು ಹೊಲಗದ್ದೆಗಳಲ್ಲಿ ಹುಡುಕುವುದರಿಂದ ಹೊಲಗದ್ದೆಗಳಿಗೆ ಸಿಂಪಡಿಸುವ ಕ್ರಿಮಿ, ಕೀಟ ನಾಶಕಗಳು ಗುಬ್ಬಚ್ಚಿಗಳ ಪ್ರಾಣಕ್ಕೂ ಎರವಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...