HomeಮುಖಪುಟIAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

- Advertisement -
- Advertisement -

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, “ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು ‘ಪರಿಣಿತ ತಾಯಿ’ ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ ಶಾಹು ಜಿ ಮಹಾರಾಜ್ ವಿಶ್ವವಿದ್ಯಾಲಯದ  41ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಾ, ನೀವು ಐಎಎಸ್ ಅಧಿಕಾರಿಯೇ ಆಗಿ ಅಥವಾ ಶಿಕ್ಷಕಿಯೇ ಆಗಿ, ಮೊದಲು ಪರಿಪೂರ್ಣ ತಾಯಿಯಾಗಿ. ಹಾಗೆಯೇ ಪ್ರತಿಯೊಬ್ಬರಿಗೂ ಮನೆಯಲ್ಲಿ ಅಡುಗೆ ಮಾಡುವುದು ಗೊತ್ತಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ದರು.

ಇದೇ ಸಂದರ್ಭದಲ್ಲಿ ಎದುರಾಗುವ ಪ್ರಶ್ನೆಯೆಂದರೆ “ಇದೇ ಸಲಹೆ ಪುರುಷರಿಗೇಕೆ ಅನ್ವಯಿಸುವುದಿಲ್ಲ? ಮಗುವನ್ನು ಸಾಕುವುದು ಕೇವಲ ತಾಯಿಯ ಜವಾಬ್ದಾರಿಯೇ? ತಂದೆಗೂ ಅದರಲ್ಲಿ ಸಮಾನ ಪಾಲಿಲ್ಲವೇ? ಇಂದು ಪುರುಷರು ತಮ್ಮ ಮಗುವಿಗಾಗಿ ಪಿತೃತ್ವ ರಜೆ (Paternity leave) ಪಡೆಯುತ್ತಾ, ಡೈಪರ್ ಬದಲಾಯಿಸುತ್ತಾ, ಟಿಫಿನ್ ಬಾಕ್ಸ್ ಪ್ಯಾಕ್ ಮಾಡುತ್ತಾ, ಅಡುಗೆಮನೆಯಲ್ಲಿ ನೆರವಾಗುತ್ತಾ ತಮ್ಮ ಪತ್ನಿಯ ವೃತ್ತಿಬದುಕಿಗೆ ಆಸರೆಯಾಗಿ ನಿಲ್ಲುತ್ತಿರುವುದನ್ನು ದೇಶ ಸಂಭ್ರಮಿಸುತ್ತಿದೆ. ಇಂತಹ ಸಮಯದಲ್ಲಿ, ನಿಮ್ಮ ವೃತ್ತಿಪರ ಆಕಾಂಕ್ಷೆಗಳಿಗಿಂತ ತಾಯ್ತನವೇ ಮೊದಲು ಎಂದು ಮಹಿಳೆಯರಿಗೆ ತಾಕೀತು ಮಾಡುವುದನ್ನು ನೋಡಿದರೆ ಕಾಲ ಚಕ್ರವನ್ನು ಮತ್ತೆ ಹಿಂದಕ್ಕೆ ಒಯ್ಯುತ್ತಿರುವಂತೆ ಭಾಸವಾಗುತ್ತದೆ.

ಯಾವುದೇ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಯುವಕರಿಗೆ, “ನೀವು ಸಿವಿಲ್ ಸರ್ವೆಂಟ್ ಆಗುವ ಮೊದಲು ಪರಿಣಿತ ತಂದೆಯಾಗಿ, ಅಥವಾ ಸರ್ಕಾರಿ ನೌಕರಿಯ ಕನಸು ಕಾಣುವ ಮುನ್ನ ಮಗುವನ್ನು ಸಾಕುವುದು ಹೇಗೆಂದು ಕಲಿಯಿರಿ ಎಂದು ಯಾರಾದರೂ ಸಾಂವಿಧಾನಿಕ ಹುದ್ದೆಯಲ್ಲಿದ್ದವರಿಂದ ಈ ರೀತಿ ಹೇಳಿಕೆ ಬಂದಿದೆಯೇ ಎಂದು ನೋಡಿದರೆ ಖಂಡಿತಾ ಇಲ್ಲ.

ಏಕೆಂದರೆ, ನಮ್ಮ ಸಮಾಜದಲ್ಲಿ ಪುರುಷನ ವೃತ್ತಿಜೀವನ ಯಾವುದೇ ಕಾರಣಕ್ಕೂ ರಾಜಿಯಾಗದ ಅಂತಿಮ ಸತ್ಯ. ತಂದೆಯಾಗುವುದು ಅವನ ವೃತ್ತಿಬದುಕಿನ ಜೊತೆಜೊತೆಗೇ ತಾನಾಗಿಯೇ ನಡೆದುಹೋಗುವ ಪ್ರಕ್ರಿಯೆ. ಮಕ್ಕಳನ್ನು ಬೆಳೆಸುವ ಮತ್ತು ಕುಟುಂಬ ನಿರ್ವಹಣೆಯ ದೊಡ್ಡ ಜವಾಬ್ದಾರಿಯನ್ನು ಮಹಿಳೆಯೇ ಹೊರಬೇಕು ಎಂಬಂತಹ ಅಲಿಖಿತ ನಿಯಮಗಳು. ಆದರೆ ಇಂದಿಗೂ ಮಹಿಳೆಯರು ತಮ್ಮ ಆಸೆ, ಕನಸುಗಳನ್ನು ಬೆನ್ನಟ್ಟಲು ಸಮಾಜದ ಅನುಮತಿ ಪಡೆಯಬೇಕಾದ ಪರಿಸ್ಥಿತಿಯಿದೆ.

‘ಪರಿಪೂರ್ಣ ತಂದೆ’ ಎಂದಾಕ್ಷಣ, ಈ ಪ್ರಶ್ನೆಯೇ ನಮ್ಮ ಸಮಾಜದಲ್ಲಿ ದ್ವಂದ್ವ ನೀತಿಯನ್ನು ಬಿಚ್ಚಿಡುತ್ತದೆ. ನಮ್ಮ ಸಾಂಸ್ಕೃತಿಕ ಕಲ್ಪನೆಯಲ್ಲೇ ‘ಪರಿಣಿತ ತಂದೆ’ (Expert Father) ಎಂಬ ಪರಿಕಲ್ಪನೆಯೇ ಇಲ್ಲಎಂದು ವಾದಿಸುತ್ತಾ, ಯಾವುದೇ ವೇದಿಕೆಯ ಮೇಲಿಂದ ರಾಜ್ಯಪಾಲರು ಯುವಕರಿಗೆ ‘ಮೊದಲು ಜವಾಬ್ದಾರಿಯುತ ತಂದೆಯಾಗಿ ಆಮೇಲೆ ಅಧಿಕಾರಿಯಾಗಿ ಎಂದು ಕರೆ ನೀಡುವುದಿಲ್ಲ. 

ಚಾರಿತ್ರಿಕವಾಗಿಯೂ ಮಹಿಳೆಯರನ್ನು ಕೇವಲ ಮನೆಗೆಲಸ ಮತ್ತು ಮಗು ಸಾಕುವ ಚೌಕಟ್ಟಿನೊಳಗೆ ಕಟ್ಟಿಹಾಕಲಾಗಿದೆ, ಪುರುಷರನ್ನು ನಾಯಕತ್ವ ಮತ್ತು ವೃತ್ತಿಬದುಕಿಗೆ ಸೀಮಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ, ತಂದೆಯಾದವನು ಮಗುವಿನ ಜೊತೆ ಸ್ವಲ್ಪ ಸಮಯ ಕಳೆದರೆ ಸಾಕು, ಸಮಾಜ ಅವನನ್ನು ಕೊಂಡಾಡುತ್ತದೆ. ಆದರೆ, ತಾಯಿಯಾದವಳು ತನ್ನ ವೃತ್ತಿಜೀವನದಲ್ಲೂ ಶ್ರೇಷ್ಠತೆ ಮೆರೆಯಬೇಕು, ಜೊತೆಗೆ ಮಗುವನು ಪೋಷಿಸುವ ಮತ್ತು ಮನೆಕೆಲಸದ ಜವಾಬ್ದಾರಿಯನ್ನು ಒಂಟಿಯಾಗಿ ಹೊರಲೇಬೇಕು.

ಸಮಾಜಶಾಸ್ತ್ರಜ್ಞರು ಇದನ್ನು ಸೆಕೆಂಡ್ ಶಿಫ್ಟ್ ಎಂದು ಕರೆಯುತ್ತಾರೆ. ಅಂದರೆ, ಮಹಿಳೆ ಆಫೀಸ್‌ನಲ್ಲಿ ತನ್ನ ಎಂಟು ಗಂಟೆಗಳ ದುಡಿಮೆಯನ್ನು ಮುಗಿಸಿ ಮನೆಗೆ ಬಂದ ಮೇಲೆಯೂ, ಕಂಟಿನ್ಯೂ ಆಗುವ ಸಂಬಳವಿಲ್ಲದ ಮನೆಯ ಕೆಲಸದ ಎರಡನೇ ಪಾಳಿ. ತಾಯಿಯಾಗುವ ಬಹುಮುಖ್ಯ ಘಟ್ಟಕ್ಕೂ ಮುನ್ನವೇ, ಅಂದರೆ ಬಾಲ್ಯದಲ್ಲೇ ಹೆಣ್ಣುಮಕ್ಕಳಿಗೆ ಈ ಪಾಠ ಶುರುವಾಗುತ್ತದೆ. 11-12 ವರ್ಷ ತುಂಬುತ್ತಿದ್ದಂತೆಯೇ ಹೆಣ್ಣುಮಕ್ಕಳಿಗೆ  ನೀನು ಬೇರೆ ಮನೆಗೆ ಹೋಗಬೇಕಾದವಳು, ಸಂಸಾರ ತೂಗಿಸಬೇಕಾದವಳು, ಮಕ್ಕಳನ್ನು ಸಾಕಿ ಸಲಹಬೇಕಾದವಳು” ಎಂಬ ಸೂತ್ರಗಳನ್ನು ಬೋಧಿಸಲಾಗುತ್ತದೆ.

ಆದರೆ, ಗಂಡುಮಕ್ಕಳಿಗೆ ನೀಡಲಾಗುವ ಸಂದೇಶವೇ ಬೇರೆ ಚೆನ್ನಾಗಿ ಓದು, ದೊಡ್ಡ ಕಾಲೇಜು ಸೇರು, ಒಳ್ಳೆಯ ಕೆರಿಯರ್ ರೂಪಿಸಿಕೊ ಹೀಗೆ. ಅವರು ವಯಸ್ಕರಾಗುವಷ್ಟರಲ್ಲಿ ಈ ತಾರತಮ್ಯದ ಆಲೋಚನೆಗಳು ರಕ್ತದಲ್ಲೇ ಬೆರೆತುಹೋಗಿರುತ್ತವೆ. ಹಾಗಾಗಿಯೇ, ಮಹಿಳೆಯೇ ತಾಯ್ತನಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ರಾಜ್ಯಪಾಲರ ಹೇಳಿಕೆ ಸಮಾಜಕ್ಕೆ ವಿಚಿತ್ರವಾಗಿ ಕಾಣದೆ, ತೀರಾ ‘ಸಾಮಾನ್ಯ’ ಮಾತಿನಂತೆ ಒಪ್ಪಿತವಾಗುವುದೂ ಅಪಾಯವೇ..

ಈ ಅಸಮಾನತೆಯ ನಿರೀಕ್ಷೆಗಳು ಕೇವಲ ಮಹಿಳೆಯರನ್ನಷ್ಟೇ ಅಲ್ಲ, ಪುರುಷರನ್ನೂ ತೀವ್ರವಾಗಿ ಸಂಕಟಕ್ಕೆ ಈಡುಮಾಡುತ್ತವೆ. ಮಗುವನ್ನು ಸಾಕುವ ಜವಾಬ್ದಾರಿಯಿಂದ ಪುರುಷನನ್ನು ದೂರವಿಟ್ಟಾಗ, ಕುಟುಂಬಕ್ಕೆ ದುಡಿದು ಹಾಕುವ ದೊಡ್ಡ ಹೊಣೆಗಾರಿಕೆ ಆತನೊಬ್ಬನ ಮೇಲೆಯೇ ಬೀಳುತ್ತದೆ. ಕೆಲಸ ಕಳೆದುಕೊಂಡಾಗ ಆತ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಅನುಭವಿಸುತ್ತಾನೆ. ಜೊತೆಗೆ, ಸಮಾಜದ ಕಟ್ಟುಪಾಡುಗಳಿಂದಾಗಿ ತನ್ನ ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳನ್ನು ಯಾರ ಬಳಿಯಾದರೂ ಹಂಚಿಕೊಳ್ಳಲು ಆತನಿಗೆ ಸಾಧ್ಯವಾಗುವುದಿಲ್ಲ. ಅಂದರೆ, ಈ ಪಿತೃ ಪ್ರದಾನ ಧೋರಣೆ ಗಂಡು- ಹೆಣ್ಣಿಬ್ಬರನ್ನೂ ಭಿನ್ನ ರೀತಿಯಲ್ಲೇ ಪೀಡಿಸುತ್ತಿದೆ. ಆದರೆ ಹೆಚ್ಚು ಬಾಧಿತರಾಗುವುದು ಮಹಿಳೆ ಎಂಬುದರಲ್ಲಿ ಎರಡು ಮಾತಿಲ್ಲ.

“ಮಗುವಿನ ಜನನ ಇಬ್ಬರಿಂದ ಸಾಧ್ಯವಾಗುತ್ತದೆ. ಆದರೆ ‘ಪರಿಣಿತ ಪೋಷಕತ್ವ’ದ ಪರೀಕ್ಷೆಯನ್ನು ಕೇವಲ ಮಹಿಳೆಯಿಂದ ಮಾತ್ರ ನಿರೀಕ್ಷಿಸಲಾಗುತ್ತದೆ. ತಂದೆಯಾದವನು ಮಗುವಿನ ಬೆಳೆವಣಿಗೆಯಲ್ಲಿ ಭಾಗವಹಿಸಿದರೆ ಅದನ್ನೊಂದು ದೊಡ್ಡ ಸಾಧನೆ ಎಂದು ಕೊಂಡಾಡಲಾಗುತ್ತದೆ. ಆದರೆ ತಾಯಿಯಾದವಳು ಈ ಕಷ್ಟದ ಕೆಲಸವನ್ನು ನಿಶ್ಯಬ್ದವಾಗಿ, ಯಾವುದೇ ಚಕಾರವೆತ್ತದೆ ಮಾಡಬೇಕಾಗುತ್ತದೆ.

ಹಾಗಂತ ನಮ್ಮಲ್ಲಿ ಹೆಣ್ಣಿನಷ್ಟೆ ಮಕ್ಕಳನ್ನು ಪೋಷಿಸು ಗಂಡಸರು ಇಲ್ಲವೇ ಇಲ್ಲ ಎಂದೇನಿಲ್ಲ, ಅಂತಹ ಗಂಡಸರು ಇದ್ದಾರೆ. ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಮನೆ ಮತ್ತು ಮಗುವಿನ ಜವಬ್ದಾರಿಯನ್ನು ನಿರ್ವಹಿಸುತ್ತ, ಪ್ರತಿಯೊಂದು ಆಯ್ಕೆಯಲ್ಲಿಯೂ ಸಮಾನವಾಗಿ ಜವಬ್ದಾರಿ ಹಂಚಿಕೊಳ್ಳುವ ಅನೇಕ ಪುರುಷರು ಇದ್ದಾರೆ. ಆದರೆ ಅದರ ಸಂಖ್ಯೆ ತೀರಾ ಕಡಿಮೆ. ಆದರೆ ಅದನ್ನೆ ಉದಾಹರೆಣೆಯಾಗಿಟ್ಟುಕೊಂಡು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಥವಾ ಸಂವಿಧಾನಿಕ ಹುದ್ದೆಯಲ್ಲಿರುವ ಯಾರಾದರೂ ನೀವು ಏನಾಗುವ ಮೊದಲು ಪರಿಪೂರ್ಣ ತಂದೆ ಅಥವಾ ಪರಿಣಿತ ತಂದೆಯಾಗಿ ಎಂದು ಕರೆ ನೀಡಿರುವ ಉದಾಹರಣೆ ಇಲ್ಲ.

ಮಕ್ಕಳನ್ನು ಬೆಳೆಸುವುದು ಅತ್ಯಂತ ಜವಾಬ್ದಾರಿಯ ಕೆಲಸ ಎಂದಾದರೆ, ಅದನ್ನು ತಾಯಿಯೊಬ್ಬಳ ಅಗ್ನಿಪರೀಕ್ಷೆ ಮತ್ತು ತಂದೆಯೊಬ್ಬನ ಆಯ್ಕೆ ಎಂದು ಏಕೆ ನೋಡಬೇಕು. ನಾವು ಮಹಿಳೆಯರನ್ನು ‘ಪರಿಣಿತ ತಾಯಿ’ಯಾಗಲು ಕೋರುವ ಬದಲು ಸಮಾಜವನ್ನು ಪರಿಣಿತ ಸಮಾಜ’ ವನ್ನಾಗಿ ಮಾಡಬೇಕಿದೆ. ಮಹಿಳೆಯು ತಾಯ್ತನವನ್ನು ಆಯ್ಕೆ ಮಾಡಿಕೊಳ್ಳಲಿ ಅಥವಾ ಮಾಡದಿರಲಿ ಆಕೆಯ ಆಶಯಗಳನ್ನು ಗೌರವಿಸುವ ಮತ್ತು ತಂದೆಯಾದವನನ್ನು ಸಹಾಯಕನಂತೆ ನೋಡದೆ ಸಮಾನ ಪೋಷಕನನ್ನಾಗಿ ನೋಡುವ ವಾತಾವರಣ ನಿರ್ಮಾಣ ಮಾಡಬೇಕಿದೆ.

ವಾಸ್ತವವಾಗಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿರುವುದು ಪರಿಪೂರ್ಣ ಎಂಬುದೇ ಒಂದು ಮಿತ್, ಇಲ್ಲಿ ಯಾರೂ ಮತ್ತು ಯಾವುದೂ ಪರಿಪೂರ್ಣ ಅಲ್ಲ. ಪರಿಪೂರ್ಣ ಎಂದು ಹೇಳುವ ಮೂಲಕ ಈ ವ್ಯವಸ್ಥೆ ಹೆಣ್ಣು ಮತ್ತು ಗಂಡಿನ ಮೇಲೆ ಒಂದು ರೀತಿಯ ಹೇರಿಕೆಯನ್ನು ಹುಟ್ಟುಹಾಕುತ್ತಾ ಮಾನಸಿಕ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತಿದೆ. 

ನಾವು ಮಹಿಳೆಯರನ್ನು ‘ಪರಿಣಿತ ತಾಯಿ’ಯಾಗಲು ಬಲವಂತಪಡಿಸುವ ಬದಲು, ಸಮಾಜವನ್ನು ಪರಿಣಿತ ಸಮಾಜವನ್ನಾಗಿ ಮಾಡಬೇಕಿದೆ. ಮಹಿಳೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳಲಿ ಅಥವಾ ವೃತ್ತಿ ಬದುಕನ್ನು ಆಯ್ದುಕೊಳ್ಳಲಿ, ಆಕೆಯ ಆಶಯಗಳನ್ನು ಗೌರವಿಸುವ ಮತ್ತು ಪುರುಷನನ್ನು ಕೇವಲ ‘ಸಹಾಯಕರನನ್ನಾಗಿ’ ನೋಡದೆ ‘ಸಮಾನ ಪೋಷಕ’ನನ್ನಾಗಿ ನೋಡುವ ವಾತಾವರಣವನ್ನು ನಿರ್ಮಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...

ಉಪವಾಸ ಕೊನೆಗೊಳಿಸಲು ನಿರಾಕರಿಸಿದ ಸೋನಮ್ ವಾಂಗ್‌ಚುಕ್ : 19ನೇ ದಿನವೂ ಮುಂದುವರಿದ ಸತ್ಯಾಗ್ರಹ; ಇನ್ನಷ್ಟು ಹದಗೆಟ್ಟ ಆರೋಗ್ಯ

ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಸಹ, ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ...