Homeಮುಖಪುಟಮೋದಿಯ ಕೊರೋನ "ಪ್ಯಾಕೇಜ್" : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ - ಪಿ. ಸಾಯಿನಾಥ್

ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್

- Advertisement -
- Advertisement -

ಭಾಗ-1

…..
ಕೋವಿಡ್-19 ಉಂಟುಮಾಡಿರುವ ಮಹಾಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರಕಾರ ಘೋಷಿಸಿರುವ “ಪ್ಯಾಕೇಜ್” ಎಂಬುದು ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ ಎನ್ನುತ್ತಾರೆ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಜಗತ್ಪ್ರಸಿದ್ಧ ಗ್ರಾಮೀಣ ಪತ್ರಕರ್ತ ಪಿ. ಸಾಯಿನಾಥ್. ಅವರು, ಈ ಪ್ಯಾಕೇಜ್ ಕಣ್ಕಟ್ಟನ್ನು ಉದಾಹರಣೆ ಸಹಿತ ಬಯಲಿಗೆಳೆದಿದ್ದಾರೆ.
…..

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ಕುರಿತ ತನ್ನ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಬಟ್ಟಲು, ಜಾಗಟೆ ಬಾರಿಸಿ, ದುಷ್ಟ ಶಕ್ತಿಗಳನ್ನು ಬೆದರಿ ತತ್ತರಿಸುವಂತೆ ಮಾಡಿದರು. ತನ್ನ ಎರಡನೇ ಭಾಷಣದಲ್ಲಿ ನಾವೆಲ್ಲರೂ ಬೆದರಿ ತತ್ತರಿಸುವಂತೆ ಮಾಡಿದ್ದಾರೆ.

ಮುಂಬರುವ ವಾರಗಳಲ್ಲಿ ಜನರು, ಅದರಲ್ಲೂ ಮುಖ್ಯವಾಗಿ ಬಡವರು, ಆಹಾರ ಮತ್ತು ಇತರ ಅತ್ಯಗತ್ಯ ವಸ್ತುಗಳನ್ನು ಹೇಗೆ ಪಡೆಯಬೇಕು ಎಂಬ ಕುರಿತು ಒಂದೇ ಒಂದು ಶಬ್ದವನ್ನು ಆಡದೇ ಇರುವ ಮೂಲಕ, ಆಗಲೇ ಸ್ಫೋಟಿಸಲು ಕಾಯುತ್ತಿದ್ದ ದಿಗಿಲಿಗೆ ಕಿಡಿಹಚ್ಚಿದರು. ಮಧ್ಯಮ ವರ್ಗದವರು ಖರೀದಿಗಾಗಿ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಗುಂಪುಗುಂಪಾಗಿ ನುಗ್ಗಿದರು- ಇದು ಬಡವರಿಗೆ ಸುಲಭವಲ್ಲ. ದೊಡ್ಡ ವ್ಯಾಪಾರಿಗಳಿಂದ ಖರೀದಿಸಿ ಮಾರುವ ಸಣ್ಣಪುಟ್ಟ ವ್ಯಾಪಾರಿಗಳು, ಮನೆಗೆಲಸದವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಇದು ಸುಲಭವಲ್ಲ. ರಾಬಿ ಫಸಲಿನ ಕೊಯ್ಲಿಗೆ ಕಾಯುತ್ತಿರುವ ಅಥವಾ ಕೊಯ್ಲು ಮುಗಿಸಿದರೂ ಫಸಲನ್ನು ಮಾರಲಾಗದ ರೈತರಿಗೂ ಇದು ಸುಲಭವಲ್ಲ. ಕಡೆಗಣಿಸಲ್ಪಟ್ಟ ಕೋಟ್ಯಂತರ ಭಾರತೀಯರಿಗಂತೂ ಇದು ಸಾಧ್ಯವೇ ಇಲ್ಲ.

ಹಣಕಾಸು ಮಂತ್ರಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಒಂದೇ ಒಂದು ಒಳ್ಳೆಯ ಅಂಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೊಡಲಾಗುತ್ತಿರುವ ಪ್ರತೀ ವ್ಯಕ್ತಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿಗೆ ಹೆಚ್ಚುವರಿಯಾಗಿ, ಮೂರು ತಿಂಗಳುಗಳ ಕಾಲ ಐದು ಕೆಜಿ ಉಚಿತ. ಅಲ್ಲಿಯೂ, ಹಿಂದೆ ಇದ್ದ ಐದು ಕೆಜಿ ಕೂಡಾ ಉಚಿತವೇ ಅಥವಾ ಅದಕ್ಕೆ ಪಾವತಿ ಮಾಡಬೇಕೇ ಎಂಬುದು ಸ್ಪಷ್ಟವೇ ಆಗಿಲ್ಲ. ಅದಕ್ಕೂ ಪಾವತಿ ಮಾಡಬೇಕೆಂದಾದರೆ, ಅದು ಪ್ರಯೋಜನವಿಲ್ಲ.

ಈ ಪ್ಯಾಕೇಜ್‌ನಲ್ಲಿರುವ ಅಂಶಗಳಿಗೆ ಒದಗಿಸಲಾಗಿರುವ ಮೊತ್ತವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಪಡಿಸಿದ್ದಾಗಿದೆ. ಉದ್ಯೋಗ ಖಾತರಿ ಯೋಜನೆ (ಮಹಾತ್ಮಾ ಗಾಂಧಿ ಎನ್‌ಆರ್‌ಇಜಿಎ)ಯ ಕೂಲಿಯನ್ನು 20 ರೂ. ಹೆಚ್ಚು ಮಾಡಲಾಗಿದ್ದು, ಅದು ಇಲ್ಲದಿದ್ದರೂ ವಾರ್ಷಿಕವಾಗಿ ಆಗಲೇಬೇಕಾದುದು. ಕೆಲಸಗಳ ದಿನಗಳನ್ನೇನಾದರೂ ಹೆಚ್ಚು ಮಾಡಲಾಗಿದೆಯೇ? (ಇಲ್ಲ!). ತಕ್ಷಣಕ್ಕೆ ಅವರು ಯಾವ ಕೆಲಸ ಮಾಡಿಸುತ್ತಾರೆ? ಯಾವ ರೀತಿಯ ಕೆಲಸ ಮಾಡಿಸುತ್ತಾರೆ? ಸಾಮಾಜಿಕ ಅಂತರ ಕಾಯ್ದುಕೊಳ್ಳುವ (social distancing) ನಿಯಮಗಳನ್ನು ಹೇಗೆ ಪಾಲಿಸುತ್ತಾರೆ? (ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ). ಇದಕ್ಕಾಗಿ ಬೇಕಾದ ಪ್ರಮಾಣದಲ್ಲಿ ಕೆಲಸಗಳನ್ನು ರೂಪಿಸಲು ಬೇಕಾಗಿರುವ ಹಲವಾರು ವಾರಗಳ ತನಕ ಜನರು ಏನು ಮಾಡಬೇಕು? ಹೇಗೆ ಬದುಕಬೇಕು? ಅವರ ಆರೋಗ್ಯ ಕೆಲಸಕ್ಕೆ ತಕ್ಕುದಾಗಿ ಇರುವುದೆ? ಕೆಲಸವಿರಲಿ, ಇಲ್ಲದೆಯೇ ಇರಲಿ, ನಾವು ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಪ್ರತಿಯೊಬ್ಬ ಕಾರ್ಮಿಕ ಮತ್ತು ರೈತರಿಗೆ ಈ ಬಿಕ್ಕಟ್ಟು ಮುಂದುವರಿಯುವ ವರೆಗೆ ಕೊಡಬೇಕಾಗಿದೆ.

ಪ್ಯಾಕೇಜಿನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಧಾನಮಂತ್ರಿ-ಕಿಸಾನ್ ಯೋಜನೆಯ ಅಡಿಯಲ್ಲಿ 2,000 ರೂ. ಈಗಾಗಲೇ ಇದ್ದು, ವಿತರಿಸುವ ಸಮಯ ಬಂದಿದೆ- ಹೀಗಿರುವಾಗ ಹೆಚ್ಚುವರಿಯಾಗಿರುವುದು ಏನು? ಪ್ರತೀ ನಾಲ್ಕನೇ ತಿಂಗಳಲ್ಲಿ ಕೊಡಬೇಕಾದನ್ನು ಸ್ವಲ್ಪ ಬೇಗ- ಮೊದಲ ತಿಂಗಳಿಗೆ ಹಿಂದೂಡಲಾಗಿದೆ ಅಷ್ಟೇ. ಹಣಕಾಸು ಸಚಿವರು ಎಲ್ಲಿಯೂ ಈ 1.7 ಲಕ್ಷ ಕೋಟಿ ರೂ. ಪ್ಯಾಕೇಜಿನ ವಿಷಯವಾರು ವಿವರಗಳನ್ನು ಈ ಪಿಡುಗು ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ನೀಡಿಲ್ಲ. ಹೀಗಿರುವಾಗ ಇದರಲ್ಲಿರುವ ಹೊಸ ಅಂಶಗಳೇನು? ಪ್ಯಾಕೇಜ್ ಮೊತ್ತದ ಎಷ್ಟು ಮೊತ್ತವನ್ನು ಹಳೆಯ ಮತ್ತು ಈಗಿರುವ ಯೋಜನೆಗಳನ್ನು ಹೊಲಿಗೆ ಹಾಕುವ ಮೂಲಕ ಅಂಕಿಅಂಶಗಳ ಕಸರತ್ತು ಮಾಡಲಾಗಿದೆ? ಇವು ಖಂಡಿತವಾಗಿಯೂ ತುರ್ತು ಪರಿಹಾರ ಕ್ರಮಗಳೆಂದು ಕರೆಸಿಕೊಳ್ಳಲು ಅರ್ಹವಲ್ಲ!

ಅದಲ್ಲದೇ ಪಿಂಚಣಿದಾರರು, ವಿಧವೆಯರು, ಅಂಗವಿಕಲರು ಒಂದು ಸಲ ಮಾತ್ರ ನೀಡಲಾಗುವ 1,000 ರೂ.ಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಎರಡು ಕಂತುಗಳಲ್ಲಿ ಪಡೆಯಲಿದ್ದಾರೆ. ಜನ ಧನ ಯೋಜನೆಯಲ್ಲಿ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳುಗಳಲ್ಲಿ ತಲಾ ಕೇವಲ 500 ರೂ. ಸಿಗಲಿದೆ. ಇದು ನೌಟಂಕಿಗಿಂತಲೂ ಕೆಳಮಟ್ಟದ್ದು ಮತ್ತು ನಾಚಿಕೆಗೇಡಿನದ್ದು.

ಈಗ ನಿಗದಿಪಡಿಸಲಾಗಿರುವ ಸಾಲವನ್ನು ಪಡೆಯುವುದೇ ಒಂದು ದುಃಸ್ವಪ್ನವಾಗಿರುವಾಗ, ಸಾಲದ ಮಿತಿಯನ್ನು ಬರೇ ಏರಿಸುವುದರಿಂದ ಸ್ವಸಹಾಯ ಗುಂಪುಗಳಿಗೆ ಹೇಗೆ ನೆರವಾಗುತ್ತದೆ? ದೂರದೂರದ ಊರುಗಳಲ್ಲಿ ಸಿಕ್ಕಿಬಿದ್ದು, ತಮ್ಮ ಗ್ರಾಮಗಳಿಗೆ ಮರಳಲು ಯತ್ನಿಸುತ್ತಿರುವ ಲೆಕ್ಕವಿಲ್ಲದಷ್ಟು ವಲಸೆ ಕಾರ್ಮಿಕರಿಗೆ ಈ ಪ್ಯಾಕೇಜ್ ನಿರ್ದಿಷ್ಟವಾಗಿ ಹೇಗೆ ನೆರವಾಗಲಿದೆ? ಇದು ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂಬ ಬಾಯ್ಮಾತಿನ ದಾವೆಗೆ ಆಧಾರಗಳೇ ಇಲ್ಲ. ಒಂದು ಗಂಭೀರವಾದ ತುರ್ತು ಕ್ರಮಗಳ ಸರಣಿಯನ್ನು ನೀಡಲು ಈ ಪ್ಯಾಕೇಜಿನ ವೈಫಲ್ಯವು ದಿಗಿಲು ಹುಟ್ಟಿಸುವಂತಿದ್ದರೆ, ಈ ಪ್ಯಾಕೇಜನ್ನು ನೀಡಿದವರ ಮನೋಸ್ಥಿತಿ ಭಯಂಕರವಾಗಿದೆ. ನೆಲಮಟ್ಟದ ಪರಿಸ್ಥಿತಿಯ ಕುರಿತು ಅವರಿಗೆ ಯಾವುದೇ ತಿಳುವಳಿಕೆ ಇದ್ದಂತೆ ಕಾಣುವುದಿಲ್ಲ.

ಯಾವುದೇ ಗಂಭೀರವಾದ ಸಾಮಾಜಿಕ ಬೆಂಬಲ ಅಥವಾ ಯೋಜನೆ ಇಲ್ಲದಿರುವಾಗ- ನಾವು ಅನುಭವಿಸುತ್ತಿರುವ ಲಾಕ್‌ಡೌನ್‌ಗಳು ಹಿಮ್ಮುಖ ವಲಸೆ (reverse migrations, ಅಂದರೆ, ನಗರದಿಂದ ಹಳ್ಳಿಗೆ)ಗಳಿಗೆ ಕಾರಣವಾಗಬಹುದು ಅಥವಾ ಈಗಾಗಲೇ ಕಾರಣವಾಗಿದೆ. ನಿರ್ದಿಷ್ಟವಾಗಿ ಈ ವಲಸೆಗಳ ಪ್ರಮಾಣ ಮತ್ತು ತೀವ್ರತೆಗಳ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಅಸಾಧ್ಯ. ತಾವು ಕೆಲಸಮಾಡುವ ನಗರ ಪಟ್ಟಣಗಳು ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗುತ್ತಿರುವಂತೆ, ದೊಡ್ಡ ಸಂಖ್ಯೆಯ ಜನರು ತಮ್ಮತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ ಎಂದು ಹಲವಾರು ರಾಜ್ಯಗಳಿಂದ ಬರುತ್ತಿರುವ ವರದಿಗಳು ಸೂಚಿಸುತ್ತಿವೆ.

ಸಾವಿರಾರು ಜನರು ಈಗ ತಮಗೆ ಲಭ್ಯವಿರುವ ಏಕೈಕ ಸಾರಿಗೆಯನ್ನು ಬಳಸುತ್ತಿದ್ದಾರೆ- ಅದೆಂದರೆ, ತಮ್ಮ ಸ್ವಂತ ಕಾಲುಗಳು. ಕೆಲವರು ಸೈಕಲ್‌ಗಳಲ್ಲಿ ಮನೆಗೆ ಹೊರಟಿದ್ದಾರೆ. ರೈಲು, ಬಸ್ಸು, ವ್ಯಾನ್‌ಗಳು ಏಕಾಏಕಿ ನಿಂತುದರಿಂದ ಸಾವಿರಾರು ಜನರು ಅರ್ಧ ದಾರಿಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಇದು ಭಯ ಹುಟ್ಟಿಸುವಂತದ್ದು. ಈ ಬಿಕ್ಕಟ್ಟು ತೀವ್ರಗೊಂಡರೆ, ನರಕವೇ ತಲೆಯ ಮೇಲೆ ಕಳಚಿ ಬೀಳಬಹುದು.

ಗುಜರಾತಿನ ನಗರಗಳಿಂದ ರಾಜಸ್ತಾನದ ಗ್ರಾಮಗಳಿಗೆ; ಹೈದರಾಬಾದಿನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ದೂರದೂರದ ಹಳ್ಳಿಗಳಿಗೆ; ದಿಲ್ಲಿಯಿಂದ ಉತ್ತರ ಪ್ರದೇಶ ಮಾತ್ರವಲ್ಲ, ಬಿಹಾರಕ್ಕೂ; ಮುಂಬಯಿಯಿಂದ… ಯಾರಿಗೂ ಗೊತ್ತಿಲ್ಲ ಎಲ್ಲೆಲ್ಲಿಗೆಂದು- ದೊಡ್ಡದೊಡ್ಡ ಗುಂಪುಗಳು ನಡೆದು ಹೋಗುತ್ತಿರುವುದನ್ನು ಊಹಿಸಿ ನೋಡಿ. ಅವರಿಗೆ ನೆರವು, ಆಹಾರ, ನೀರು ಸಿಗದೇ ಹೋದಲ್ಲಿ ಮಹಾದುರಂತವೇ ಸಂಭವಿಸಬಹುದು. ಅವರ ಶೌಚದ ಮಹಾಸಮಸ್ಯೆಯನ್ನೂ ಊಹಿಸಿನೋಡಿ. ಅವರು ಅತಿಸಾರ (diarrhoea), ಕಾಲರಾ (cholera) ಮುಂತಾದ ಹಳೆಕಾಲದ ರೋಗಗಳಿಗೇ ಬಲಿಯಾಗಬಹುದು; ಕೊರೋನವೇ ಆಗಬೇಕೆಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...