Homeಮುಖಪುಟಮೋದಿಯ ಕೊರೋನ "ಪ್ಯಾಕೇಜ್" : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ - ಪಿ. ಸಾಯಿನಾಥ್

ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್

- Advertisement -
- Advertisement -

ಭಾಗ-1

…..
ಕೋವಿಡ್-19 ಉಂಟುಮಾಡಿರುವ ಮಹಾಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರಕಾರ ಘೋಷಿಸಿರುವ “ಪ್ಯಾಕೇಜ್” ಎಂಬುದು ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ ಎನ್ನುತ್ತಾರೆ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಜಗತ್ಪ್ರಸಿದ್ಧ ಗ್ರಾಮೀಣ ಪತ್ರಕರ್ತ ಪಿ. ಸಾಯಿನಾಥ್. ಅವರು, ಈ ಪ್ಯಾಕೇಜ್ ಕಣ್ಕಟ್ಟನ್ನು ಉದಾಹರಣೆ ಸಹಿತ ಬಯಲಿಗೆಳೆದಿದ್ದಾರೆ.
…..

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ಕುರಿತ ತನ್ನ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಬಟ್ಟಲು, ಜಾಗಟೆ ಬಾರಿಸಿ, ದುಷ್ಟ ಶಕ್ತಿಗಳನ್ನು ಬೆದರಿ ತತ್ತರಿಸುವಂತೆ ಮಾಡಿದರು. ತನ್ನ ಎರಡನೇ ಭಾಷಣದಲ್ಲಿ ನಾವೆಲ್ಲರೂ ಬೆದರಿ ತತ್ತರಿಸುವಂತೆ ಮಾಡಿದ್ದಾರೆ.

ಮುಂಬರುವ ವಾರಗಳಲ್ಲಿ ಜನರು, ಅದರಲ್ಲೂ ಮುಖ್ಯವಾಗಿ ಬಡವರು, ಆಹಾರ ಮತ್ತು ಇತರ ಅತ್ಯಗತ್ಯ ವಸ್ತುಗಳನ್ನು ಹೇಗೆ ಪಡೆಯಬೇಕು ಎಂಬ ಕುರಿತು ಒಂದೇ ಒಂದು ಶಬ್ದವನ್ನು ಆಡದೇ ಇರುವ ಮೂಲಕ, ಆಗಲೇ ಸ್ಫೋಟಿಸಲು ಕಾಯುತ್ತಿದ್ದ ದಿಗಿಲಿಗೆ ಕಿಡಿಹಚ್ಚಿದರು. ಮಧ್ಯಮ ವರ್ಗದವರು ಖರೀದಿಗಾಗಿ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಗುಂಪುಗುಂಪಾಗಿ ನುಗ್ಗಿದರು- ಇದು ಬಡವರಿಗೆ ಸುಲಭವಲ್ಲ. ದೊಡ್ಡ ವ್ಯಾಪಾರಿಗಳಿಂದ ಖರೀದಿಸಿ ಮಾರುವ ಸಣ್ಣಪುಟ್ಟ ವ್ಯಾಪಾರಿಗಳು, ಮನೆಗೆಲಸದವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಇದು ಸುಲಭವಲ್ಲ. ರಾಬಿ ಫಸಲಿನ ಕೊಯ್ಲಿಗೆ ಕಾಯುತ್ತಿರುವ ಅಥವಾ ಕೊಯ್ಲು ಮುಗಿಸಿದರೂ ಫಸಲನ್ನು ಮಾರಲಾಗದ ರೈತರಿಗೂ ಇದು ಸುಲಭವಲ್ಲ. ಕಡೆಗಣಿಸಲ್ಪಟ್ಟ ಕೋಟ್ಯಂತರ ಭಾರತೀಯರಿಗಂತೂ ಇದು ಸಾಧ್ಯವೇ ಇಲ್ಲ.

ಹಣಕಾಸು ಮಂತ್ರಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಒಂದೇ ಒಂದು ಒಳ್ಳೆಯ ಅಂಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೊಡಲಾಗುತ್ತಿರುವ ಪ್ರತೀ ವ್ಯಕ್ತಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿಗೆ ಹೆಚ್ಚುವರಿಯಾಗಿ, ಮೂರು ತಿಂಗಳುಗಳ ಕಾಲ ಐದು ಕೆಜಿ ಉಚಿತ. ಅಲ್ಲಿಯೂ, ಹಿಂದೆ ಇದ್ದ ಐದು ಕೆಜಿ ಕೂಡಾ ಉಚಿತವೇ ಅಥವಾ ಅದಕ್ಕೆ ಪಾವತಿ ಮಾಡಬೇಕೇ ಎಂಬುದು ಸ್ಪಷ್ಟವೇ ಆಗಿಲ್ಲ. ಅದಕ್ಕೂ ಪಾವತಿ ಮಾಡಬೇಕೆಂದಾದರೆ, ಅದು ಪ್ರಯೋಜನವಿಲ್ಲ.

ಈ ಪ್ಯಾಕೇಜ್‌ನಲ್ಲಿರುವ ಅಂಶಗಳಿಗೆ ಒದಗಿಸಲಾಗಿರುವ ಮೊತ್ತವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಪಡಿಸಿದ್ದಾಗಿದೆ. ಉದ್ಯೋಗ ಖಾತರಿ ಯೋಜನೆ (ಮಹಾತ್ಮಾ ಗಾಂಧಿ ಎನ್‌ಆರ್‌ಇಜಿಎ)ಯ ಕೂಲಿಯನ್ನು 20 ರೂ. ಹೆಚ್ಚು ಮಾಡಲಾಗಿದ್ದು, ಅದು ಇಲ್ಲದಿದ್ದರೂ ವಾರ್ಷಿಕವಾಗಿ ಆಗಲೇಬೇಕಾದುದು. ಕೆಲಸಗಳ ದಿನಗಳನ್ನೇನಾದರೂ ಹೆಚ್ಚು ಮಾಡಲಾಗಿದೆಯೇ? (ಇಲ್ಲ!). ತಕ್ಷಣಕ್ಕೆ ಅವರು ಯಾವ ಕೆಲಸ ಮಾಡಿಸುತ್ತಾರೆ? ಯಾವ ರೀತಿಯ ಕೆಲಸ ಮಾಡಿಸುತ್ತಾರೆ? ಸಾಮಾಜಿಕ ಅಂತರ ಕಾಯ್ದುಕೊಳ್ಳುವ (social distancing) ನಿಯಮಗಳನ್ನು ಹೇಗೆ ಪಾಲಿಸುತ್ತಾರೆ? (ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ). ಇದಕ್ಕಾಗಿ ಬೇಕಾದ ಪ್ರಮಾಣದಲ್ಲಿ ಕೆಲಸಗಳನ್ನು ರೂಪಿಸಲು ಬೇಕಾಗಿರುವ ಹಲವಾರು ವಾರಗಳ ತನಕ ಜನರು ಏನು ಮಾಡಬೇಕು? ಹೇಗೆ ಬದುಕಬೇಕು? ಅವರ ಆರೋಗ್ಯ ಕೆಲಸಕ್ಕೆ ತಕ್ಕುದಾಗಿ ಇರುವುದೆ? ಕೆಲಸವಿರಲಿ, ಇಲ್ಲದೆಯೇ ಇರಲಿ, ನಾವು ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಪ್ರತಿಯೊಬ್ಬ ಕಾರ್ಮಿಕ ಮತ್ತು ರೈತರಿಗೆ ಈ ಬಿಕ್ಕಟ್ಟು ಮುಂದುವರಿಯುವ ವರೆಗೆ ಕೊಡಬೇಕಾಗಿದೆ.

ಪ್ಯಾಕೇಜಿನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಧಾನಮಂತ್ರಿ-ಕಿಸಾನ್ ಯೋಜನೆಯ ಅಡಿಯಲ್ಲಿ 2,000 ರೂ. ಈಗಾಗಲೇ ಇದ್ದು, ವಿತರಿಸುವ ಸಮಯ ಬಂದಿದೆ- ಹೀಗಿರುವಾಗ ಹೆಚ್ಚುವರಿಯಾಗಿರುವುದು ಏನು? ಪ್ರತೀ ನಾಲ್ಕನೇ ತಿಂಗಳಲ್ಲಿ ಕೊಡಬೇಕಾದನ್ನು ಸ್ವಲ್ಪ ಬೇಗ- ಮೊದಲ ತಿಂಗಳಿಗೆ ಹಿಂದೂಡಲಾಗಿದೆ ಅಷ್ಟೇ. ಹಣಕಾಸು ಸಚಿವರು ಎಲ್ಲಿಯೂ ಈ 1.7 ಲಕ್ಷ ಕೋಟಿ ರೂ. ಪ್ಯಾಕೇಜಿನ ವಿಷಯವಾರು ವಿವರಗಳನ್ನು ಈ ಪಿಡುಗು ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ನೀಡಿಲ್ಲ. ಹೀಗಿರುವಾಗ ಇದರಲ್ಲಿರುವ ಹೊಸ ಅಂಶಗಳೇನು? ಪ್ಯಾಕೇಜ್ ಮೊತ್ತದ ಎಷ್ಟು ಮೊತ್ತವನ್ನು ಹಳೆಯ ಮತ್ತು ಈಗಿರುವ ಯೋಜನೆಗಳನ್ನು ಹೊಲಿಗೆ ಹಾಕುವ ಮೂಲಕ ಅಂಕಿಅಂಶಗಳ ಕಸರತ್ತು ಮಾಡಲಾಗಿದೆ? ಇವು ಖಂಡಿತವಾಗಿಯೂ ತುರ್ತು ಪರಿಹಾರ ಕ್ರಮಗಳೆಂದು ಕರೆಸಿಕೊಳ್ಳಲು ಅರ್ಹವಲ್ಲ!

ಅದಲ್ಲದೇ ಪಿಂಚಣಿದಾರರು, ವಿಧವೆಯರು, ಅಂಗವಿಕಲರು ಒಂದು ಸಲ ಮಾತ್ರ ನೀಡಲಾಗುವ 1,000 ರೂ.ಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಎರಡು ಕಂತುಗಳಲ್ಲಿ ಪಡೆಯಲಿದ್ದಾರೆ. ಜನ ಧನ ಯೋಜನೆಯಲ್ಲಿ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳುಗಳಲ್ಲಿ ತಲಾ ಕೇವಲ 500 ರೂ. ಸಿಗಲಿದೆ. ಇದು ನೌಟಂಕಿಗಿಂತಲೂ ಕೆಳಮಟ್ಟದ್ದು ಮತ್ತು ನಾಚಿಕೆಗೇಡಿನದ್ದು.

ಈಗ ನಿಗದಿಪಡಿಸಲಾಗಿರುವ ಸಾಲವನ್ನು ಪಡೆಯುವುದೇ ಒಂದು ದುಃಸ್ವಪ್ನವಾಗಿರುವಾಗ, ಸಾಲದ ಮಿತಿಯನ್ನು ಬರೇ ಏರಿಸುವುದರಿಂದ ಸ್ವಸಹಾಯ ಗುಂಪುಗಳಿಗೆ ಹೇಗೆ ನೆರವಾಗುತ್ತದೆ? ದೂರದೂರದ ಊರುಗಳಲ್ಲಿ ಸಿಕ್ಕಿಬಿದ್ದು, ತಮ್ಮ ಗ್ರಾಮಗಳಿಗೆ ಮರಳಲು ಯತ್ನಿಸುತ್ತಿರುವ ಲೆಕ್ಕವಿಲ್ಲದಷ್ಟು ವಲಸೆ ಕಾರ್ಮಿಕರಿಗೆ ಈ ಪ್ಯಾಕೇಜ್ ನಿರ್ದಿಷ್ಟವಾಗಿ ಹೇಗೆ ನೆರವಾಗಲಿದೆ? ಇದು ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂಬ ಬಾಯ್ಮಾತಿನ ದಾವೆಗೆ ಆಧಾರಗಳೇ ಇಲ್ಲ. ಒಂದು ಗಂಭೀರವಾದ ತುರ್ತು ಕ್ರಮಗಳ ಸರಣಿಯನ್ನು ನೀಡಲು ಈ ಪ್ಯಾಕೇಜಿನ ವೈಫಲ್ಯವು ದಿಗಿಲು ಹುಟ್ಟಿಸುವಂತಿದ್ದರೆ, ಈ ಪ್ಯಾಕೇಜನ್ನು ನೀಡಿದವರ ಮನೋಸ್ಥಿತಿ ಭಯಂಕರವಾಗಿದೆ. ನೆಲಮಟ್ಟದ ಪರಿಸ್ಥಿತಿಯ ಕುರಿತು ಅವರಿಗೆ ಯಾವುದೇ ತಿಳುವಳಿಕೆ ಇದ್ದಂತೆ ಕಾಣುವುದಿಲ್ಲ.

ಯಾವುದೇ ಗಂಭೀರವಾದ ಸಾಮಾಜಿಕ ಬೆಂಬಲ ಅಥವಾ ಯೋಜನೆ ಇಲ್ಲದಿರುವಾಗ- ನಾವು ಅನುಭವಿಸುತ್ತಿರುವ ಲಾಕ್‌ಡೌನ್‌ಗಳು ಹಿಮ್ಮುಖ ವಲಸೆ (reverse migrations, ಅಂದರೆ, ನಗರದಿಂದ ಹಳ್ಳಿಗೆ)ಗಳಿಗೆ ಕಾರಣವಾಗಬಹುದು ಅಥವಾ ಈಗಾಗಲೇ ಕಾರಣವಾಗಿದೆ. ನಿರ್ದಿಷ್ಟವಾಗಿ ಈ ವಲಸೆಗಳ ಪ್ರಮಾಣ ಮತ್ತು ತೀವ್ರತೆಗಳ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಅಸಾಧ್ಯ. ತಾವು ಕೆಲಸಮಾಡುವ ನಗರ ಪಟ್ಟಣಗಳು ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗುತ್ತಿರುವಂತೆ, ದೊಡ್ಡ ಸಂಖ್ಯೆಯ ಜನರು ತಮ್ಮತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ ಎಂದು ಹಲವಾರು ರಾಜ್ಯಗಳಿಂದ ಬರುತ್ತಿರುವ ವರದಿಗಳು ಸೂಚಿಸುತ್ತಿವೆ.

ಸಾವಿರಾರು ಜನರು ಈಗ ತಮಗೆ ಲಭ್ಯವಿರುವ ಏಕೈಕ ಸಾರಿಗೆಯನ್ನು ಬಳಸುತ್ತಿದ್ದಾರೆ- ಅದೆಂದರೆ, ತಮ್ಮ ಸ್ವಂತ ಕಾಲುಗಳು. ಕೆಲವರು ಸೈಕಲ್‌ಗಳಲ್ಲಿ ಮನೆಗೆ ಹೊರಟಿದ್ದಾರೆ. ರೈಲು, ಬಸ್ಸು, ವ್ಯಾನ್‌ಗಳು ಏಕಾಏಕಿ ನಿಂತುದರಿಂದ ಸಾವಿರಾರು ಜನರು ಅರ್ಧ ದಾರಿಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಇದು ಭಯ ಹುಟ್ಟಿಸುವಂತದ್ದು. ಈ ಬಿಕ್ಕಟ್ಟು ತೀವ್ರಗೊಂಡರೆ, ನರಕವೇ ತಲೆಯ ಮೇಲೆ ಕಳಚಿ ಬೀಳಬಹುದು.

ಗುಜರಾತಿನ ನಗರಗಳಿಂದ ರಾಜಸ್ತಾನದ ಗ್ರಾಮಗಳಿಗೆ; ಹೈದರಾಬಾದಿನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ದೂರದೂರದ ಹಳ್ಳಿಗಳಿಗೆ; ದಿಲ್ಲಿಯಿಂದ ಉತ್ತರ ಪ್ರದೇಶ ಮಾತ್ರವಲ್ಲ, ಬಿಹಾರಕ್ಕೂ; ಮುಂಬಯಿಯಿಂದ… ಯಾರಿಗೂ ಗೊತ್ತಿಲ್ಲ ಎಲ್ಲೆಲ್ಲಿಗೆಂದು- ದೊಡ್ಡದೊಡ್ಡ ಗುಂಪುಗಳು ನಡೆದು ಹೋಗುತ್ತಿರುವುದನ್ನು ಊಹಿಸಿ ನೋಡಿ. ಅವರಿಗೆ ನೆರವು, ಆಹಾರ, ನೀರು ಸಿಗದೇ ಹೋದಲ್ಲಿ ಮಹಾದುರಂತವೇ ಸಂಭವಿಸಬಹುದು. ಅವರ ಶೌಚದ ಮಹಾಸಮಸ್ಯೆಯನ್ನೂ ಊಹಿಸಿನೋಡಿ. ಅವರು ಅತಿಸಾರ (diarrhoea), ಕಾಲರಾ (cholera) ಮುಂತಾದ ಹಳೆಕಾಲದ ರೋಗಗಳಿಗೇ ಬಲಿಯಾಗಬಹುದು; ಕೊರೋನವೇ ಆಗಬೇಕೆಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...