Homeಮುಖಪುಟಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ

ಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ

ಈ ಸರಕಾರ ಮತ್ತೆ ಅಧಿಕಾರಕ್ಕೆ ಬಂದ ಒಂದೇ ವರ್ಷದ ಒಳಗೆ ಒಂದೇ ಹೊತ್ತಿಗೆ ಬಹುದೊಡ್ಡ ಸಂಖ್ಯೆಯ ಜನರಿಗೆ ಭಾರೀ ಸಂಕಷ್ಟಗಳನ್ನು ಒಡ್ಡಿದ ಮೂರನೆಯ ಅಧಿಕೃತ ಕೃತ್ಯವಿದು.

- Advertisement -
- Advertisement -

ಕೊರೊನಾ ಪಿಡುಗನ್ನು ಎದುರಿಸಲು ಹೇರಲಾದ ತಯಾರಿಯೇ ಇಲ್ಲದ ಸಂಪೂರ್ಣ ಲಾಕ್‌ಡೌನ್ ಸೇರಿದಂತೆ ನರೇಂದ್ರ ಮೋದಿ ಸರಕಾರವು ಈ ತನಕ ತೆಗೆದುಕೊಂಡ ನಿರಂಕುಶ ಕ್ರಮಗಳೆಲ್ಲವೂ ಕೋಟ್ಯಂತರ ಜನರಿಗೆ ಬಹಳಷ್ಟು ಸಂಕಟವನ್ನೊಡ್ಡಿವೆ. ಅರೆಬೆಂದ ನಿರ್ಧಾರಗಳನ್ನು ಜಾರಿ ಮಾಡುತ್ತಿರುವ ಸರಕಾರದ ಬಳಿ ನಿರ್ದಿಷ್ಟ ಕಾರ್ಯತಂತ್ರ ಇದ್ದಂತೆ ಕಾಣುವುದಿಲ್ಲ. ಅಷ್ಟೇ ಅಲ್ಲ, ಮಾನವೀಯತೆಯ ಲವಲೇಶವೂ ಕಾಣುವುದಿಲ್ಲ.

ಸಿದ್ಧಾರ್ಥ ಭಾಟಿಯಾ

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ರಾಷ್ಟ್ರೀಯ ಪೌರತ್ವ ನೋಂದಣಿ (ತಿದ್ದುಪಡಿ) ಕಾಯಿದೆಯ ಪ್ರಕ್ರಿಯೆಯು ಭಾರತದ ಲಕ್ಷಾಂತರ ಜನರನ್ನು ದೇಶರಹಿತರನ್ನಾಗಿ ಮಾಡಬಹುದಿತ್ತು. ಏಕಾಏಕಿಯಾಗಿ ಲಾಕ್‌ಡೌನ್ ಹೇರಲಾದ ಕೆಲವೇ ದಿನಗಳಲ್ಲಿ ಲೆಕ್ಕವೇ ಇಲ್ಲದಷ್ಟು ಭಾರತೀಯರು ಮನೆಯೇ ಇಲ್ಲದವರಾಗಿದ್ದಾರೆ. ತಾವು ಎಲ್ಲಿದ್ದೆವೋ ಅಲ್ಲಿಯೇ ಅವರು ವಸ್ತುಶಃ ಕಟ್ಟುಬಿದ್ದಿದ್ದಾರೆ; ಅವರಿಗೆ ಹೋಗಲು ಯಾವುದೇ ಜಾಗವಿಲ್ಲ. ಅವರು ತಮ್ಮ ಹಿಂದಿನ ವಾಸಸ್ಥಾನವನ್ನು ಬಿಟ್ಟುಹೋದವರು ಮತ್ತು ಅವರೀಗ ಹಳ್ಳಿಗಳಲ್ಲಿರುವ ತಮ್ಮ ಮನೆಗಳನ್ನು ತಲಪುವಂತಿಲ್ಲ. ಏಕೆಂದರೆ ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚಿವೆ.

ಅವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಕೆಲವು ರಾಜಕಾರಣಿಗಳು ಬಯಸಿದ್ದಾರೆ. ಇನ್ನು, ಆಳುವ ಪಕ್ಷದ ಕೆಲವು ನಾಯಕರು ಈ ಬಡಪಾಯಿಗಳೇ ಇದಕ್ಕೆ ಹೊಣೆಗಾರರು ಮತ್ತು ಈ ಕಡ್ಡಾಯ ರಜೆಯ ಲಾಭಪಡೆದು ತಮ್ಮ ಮನೆಗಳಿಗೆ ಹೋಗಬಯಸುವ ಬೇಜವಾಬ್ದಾರಿ ಜನರು ಎಂದು ಭಾವಿಸಿದ್ದಾರೆ.

ಈ ವಲಸೆ ಕಾರ್ಮಿಕರ ಬಳಿ ಆಹಾರವಿಲ್ಲ, ಆಶ್ರಯವಿಲ್ಲ, ಆಶಾವಾದವೂ ಇಲ್ಲ. ಅವರಲ್ಲಿ ಅನೇಕರು ಕೆಲಸ ಕಳೆದುಕೊಂಡವರು; ಯಾಕೆಂದರೆ, ಅವರ ಸಂಬಳವನ್ನು ಮುಂದುವರಿಸಲು ಅವರ ಮಾಲಕರಿಗೆ ಸಾಧ್ಯವಿಲ್ಲ. ಇಂತಹಾ ಪರಿಸ್ಥಿತಿಯಲ್ಲಿ ಆಹಾರ ಕೊಳ್ಳಲಾಗಲಿ, ಬಾಡಿಗೆ ನೀಡಲಾಗಲಿ ಅವರಿಗೆ ಸಾಧ್ಯವಾಗುವಂತಿರಲಿಲ್ಲ. ತಾವು ಕಾಯಿಲೆ ಬೀಳಬಹುದು ಎಂಬ ಭಯವೂ ಅವರನ್ನು ಕಾಡುತ್ತಿರಬಹುದು. ಇಂತಹಾ ಸಂದರ್ಭದಲ್ಲಿ ತಾವು ಸುರಕ್ಷಿತವಾಗಿರಬಹುದಾದ ಒಂದೇ ಒಂದು ಸ್ಥಳಕ್ಕೆ- ಅಂದರೆ, ತಮ್ಮತಮ್ಮ ಮನೆಗಳಿಗೆ ಅವರು ಹೊರಟರು. ಆದರೀಗ ಗಡಿಗಳನ್ನು ಮುಚ್ಚಿರುವುದರಿಂದ ಅದೂ ದೂರದ ಕನಸಾಗಿದೆ. ಜನರ ಗುಂಪುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇವು ಮಾನವೀಯ ದುರಂತವೊಂದು ರೂಪುಗೊಳ್ಳುತ್ತಿರುವುದರ ಲಕ್ಷಣಗಳು.

ಇದು ಮೋದಿ ಉಂಟು ಮಾಡಿದ “ಸಾಮಾಜಿಕ ಅಂತರ”

ಈ ಸರಕಾರ ಮತ್ತೆ ಅಧಿಕಾರಕ್ಕೆ ಬಂದ ಒಂದೇ ವರ್ಷದ ಒಳಗೆ ಒಂದೇ ಹೊತ್ತಿಗೆ ಬಹುದೊಡ್ಡ ಸಂಖ್ಯೆಯ ಜನರಿಗೆ ಭಾರೀ ಸಂಕಷ್ಟಗಳನ್ನು ಒಡ್ಡಿದ ಮೂರನೆಯ ಅಧಿಕೃತ ಕೃತ್ಯವಿದು. ಸ್ವಲ್ಪ ಹಿಂದೆ ಹೋದರೆ, ನೋಟು ಅಮಾನ್ಯೀಕರಣವನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಬಹುದು. ಈ  ಪ್ರತಿಯೊಂದು ನಿರಂಕುಶ ನಿರ್ಧಾರಗಳಲ್ಲಿ ಸಮಾನ ಅಂಶಗಳಿವೆ. ಅವೆಂದರೆ, ಯಾವುದೇ ಪೂರ್ವಯೋಜನೆ ಇಲ್ಲದಿರುವುದು ಮತ್ತು ಅಧ್ವಾನದ ಅನುಷ್ಟಾನ. ಇಲ್ಲಿ ಇನ್ನೊಂದು ಕಣ್ಣಿಗೆ ರಾಚುವ ಅಂಶವಿದೆ- ಅದೆಂದರೆ, ಮಾನವ ಸಂಕಷ್ಟಗಳ ಕುರಿತು ಸಂಪೂರ್ಣ ಅಸಡ್ಡೆ.

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಂತಹ ಕೆಲವೇ ಕ್ರಮಗಳನ್ನು ಬಿಟ್ಟರೆ, ಭಾರತದಲ್ಲಿ ಸಾಮಾಜಿಕ ಸುರಕ್ಷೆಯ ಯಾವುದೇ ಬಲೆ ಅಥವಾ ವ್ಯವಸ್ಥೆ ಇಲ್ಲ. ಏನಾದರೊಂದು ಸ್ವಲ್ಪ ಮಟ್ಟಿಗೆ ಇದ್ದರೆ, ಅದೂ ಕೂಡಾ ಈಗ ಅಸ್ತವ್ಯಸ್ತಗೊಂಡಿದೆ. ಧೋರಣೆಗಳು ನಮ್ಮಲ್ಲಿ ಬಡವರ ಅಗತ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಅಪರೂಪ. ಆದರೆ, ನಾವೀಗ ಸಂಪೂರ್ಣವಾದ ಅಸಹಾನುಭೂತಿಯನ್ನಷ್ಟೇ ನೋಡುತ್ತಿದ್ದೇವೆ. ಈ ಲಾಕ್‌ಡೌನ್‌ ನಂತರ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾದವರನ್ನೇ ಸಮಾನ ಒಳಿತನ್ನು ಕುರಿತು ಯೋಚಿಸದ ದೇಶವಿರೋಧಿಗಳೆಂಬಂತೆ ಚಿತ್ರಿಸುವ ಘೋರ ಅಮಾವೀಯತೆಯನ್ನು ತೋರಿಸಲಾಗುತ್ತಿದೆ.

ಮೋದಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ಅಗತ್ಯವಾಗಿದ್ದು, ಅಂತಿಮವಾಗಿ ದೇಶಕ್ಕೆ ಲಾಭ ತಂದುಕೊಡುವಂತವುಗಳು ಎಂದು ಆತ ಮತ್ತಾತನ ಬೆಂಬಲಿಗರು ವಾದಿಸಬಹುದು. ಆ ಕುರಿತು ಅವರು ಆಗಲೇ ನ್ಯಾಯತೀರ್ಮಾನ ಮಾಡಿ ಆಗಿದೆ. ಆದರೂ, ನಾವು ಅವುಗಳನ್ನು ಒಂದೊಂದಾಗಿ ಮತ್ತು ಚುಟುಕಾಗಿ ಪರಿಶೀಲಿಸೋಣ.

ಕಪ್ಪು ಹಣವನ್ನು ನಿವಾರಿಸಲು ಅಮಾನ್ಯೀಕರಣ ಅತ್ಯಗತ್ಯವಾಗಿತ್ತು ಎಂದು ವಾದಿಸಲಾಯಿತು. (ಅದು ಹೇಗೆ ಭಯೋತ್ಪಾದನೆಯ ಬೆನ್ನು ಮೂಳೆ ಮುರಿಯಲಿದೆ ಎಂದೂ ಹೇಳಲಾಯಿತು. ವಾಸ್ತವವಾಗಿ ಆ ಬಳಿಕವೇ ಅನೇಕ ಗಂಭೀರ ಭಯೋತ್ಪಾದಕ ದಾಳಿಗಳು ನಡೆದದ್ದು!) ಅದರ ಪರಿಣಾಮ ಏನಾಯಿತು ಎಂಬುದನ್ನು ನಾವೆಲ್ಲರೂ ಕಂಡಿದ್ದೇವೆ- ಅಲ್ಪಾವಧಿಗೆ ಮಾತ್ರವಲ್ಲ; ದೀರ್ಘಾವಧಿಗೂ ಕೂಡಾ. ಅದರಿಂದ ಬಡವರೇ ಅತ್ಯಂತ ಹೆಚ್ಚು ಬಾಧಿತರಾದರು. ಈಗಲೂ ನಗದು ವ್ಯವಹಾರ ಮತ್ತು ಕಪ್ಪು ಹಣ ಹಾಗೆಯೇ ಇದೆ. ಹಾಗಿರುವಾಗ ಮೋದಿ ಜನರಿಗೆ ವ್ಯರ್ಥವಾಗಿ ಅಷ್ಟೊಂದು ಪೀಡೆ ನೀಡಿದ್ದಾದರೂ ಏಕೆ?

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಕಾಶ್ಮೀರದಲ್ಲಿ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಯಿತು. ಇಂಟರ್ನೆಟ್ ಕೂಡಾ ಸ್ಥಗಿತಗೊಳಿಸಲಾಯಿತು. ಇದನ್ನು ಮೋದಿಯ ಮೇಲೆ ಅಂತಹಾ ಪ್ರೀತಿ ಇಲ್ಲದವರು ಕೂಡಾ ಕೇವಲ ಹುಸಿ ದೇಶಪ್ರೇಮದ ಬಲೆಗೆ ಬಿದ್ದು ಹೊಗಳಿದರು. ಆದರೆ, ಇದು ಮತ್ತೆ ಎಪ್ಪತ್ತು ಲಕ್ಷ ಜನಸಾಮಾನ್ಯರಿಗೆ ಇನ್ನಿಲ್ಲದ ಸಂಕಷ್ಟವನ್ನು ತಂದೊಡ್ಡಿತು.

ಮೋದಿಯ ಕಾಶ್ಮೀರ ಲಾಕ್‌ಡೌನ್ ಅಮಾನವೀಯತೆ

“ಕಾಶ್ಮೀರವು ಕೊನೆಗೂ ಭಾರತದ ಭಾಗವಾಯಿತು” ಎಂದು ಹೊರಗೆ ಕುಳಿತು, ಅತಿರೇಕದ ಹುಸಿ ದೇಶಪ್ರೇಮ ತೋರುವ ಅನಿವಾಸಿ ಭಾರತೀಯರು ಘೋಷಿಸಿದರೂ, ಈ ಕ್ರಮವು ವ್ಯಾಪಕವಾದ ಅಂತರರಾಷ್ಟ್ರೀಯ ಖಂಡನೆಗೆ ಗುರಿಯಾಯಿತು. ಜಗತ್ತಿಗೆ ಕಾಶ್ಮೀರದ ಮೇಲೆ ಭಾರತದ ಹಕ್ಕಿನ ಕುರಿತು ಎಂದಿಗೂ ಸಂಪೂರ್ಣವಾಗಿ ಮನವರಿಕೆ ಆಗಿರಲಿಲ್ಲ. ಆದರೆ, ನಿಯಮಿತ ಚುನಾವಣೆಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಈ ನಿಟ್ಟಿನಲ್ಲಿ ಭಾರತದ ನಿಲುವಿಗೆ ಬಲ ಒದಗಿಸಿದ್ದವು. ಈ ಹೊತ್ತಿನಲ್ಲಿ, ಚುನಾಯಿತ ಜನಪ್ರತಿನಿಧಿಗಳನ್ನೇ ಯಾವುದೇ ಆರೋಪ ಇಲ್ಲದೇ ತಿಂಗಳುಗಟ್ಟಲೆ ಬಂಧನದಲ್ಲಿ ಇರಿಸಿರುವಾಗ, ನಮಗೀಗ ಯಾವ ನೈತಿಕತೆ ಉಳಿದಿದೆ?

ನ್ಯಾಯಾಲಯದ ಆದೇಶದಂತೆ ಅಸ್ಸಾಮಿನಲ್ಲಿ ನಡೆದ ಇಡೀ ಎನ್‌ಆರ್‌ಸಿ ಪ್ರಕ್ರಿಯೆಯು ಉಂಟುಮಾಡಿದ ಮಹಾ ಗೊಂದಲ, ಗೋಜಲುಗಳು ಅದರ ಪರಿಣಾಮಗಳ ಬಗ್ಗೆ ಮೋದಿ ಸರಕಾರಕ್ಕೆ ಮನವರಿಕೆ ಮಾಡಬೇಕಾಗಿತ್ತು. ಆದರೆ, ಅದಕ್ಕೆ ಬದಲಾಗಿ ಸರಕಾರವು ಅದನ್ನು ಇಡೀ ದೇಶದಲ್ಲಿ ನಡೆಸುವುದಾಗಿ ಘೋಷಿಸಿತು. ಪರಿಣಾಮವಾಗಿ ಅಸ್ಸಾಮಿನಲ್ಲಿ 19 ಲಕ್ಷ ಜನರು ಈಗ ಭಾರತೀಯ ಪೌರತ್ವ ಕಳೆದುಕೊಳ್ಳುವ ಭಯವನ್ನು ಎದುರಿಸುತ್ತಿರುವುದು ಮಾತ್ರವಲ್ಲ; ಲಕ್ಷಾಂತರ ಇತರ ಭಾರತೀಯರೂ ಇದೇ ಪರಿಸ್ಥಿತಿಯನ್ನು ಎದುರು ನೋಡುತ್ತಿದ್ದಾರೆ.

ಅಸ್ಸಾಮಿನ ಎನ್‌ಆರ್‌ಸಿ ಬಂಧನ ಕೇಂದ್ರಗಳ ಅಮಾನವೀಯತೆ

ಇದು ದೇಶದಾದ್ಯಂತ ಹುಟ್ಟುಹಾಕಿದ ವ್ಯಾಪಕ ಪ್ರತಿಭಟನೆಗಳು ಸರಕಾರಕ್ಕೆ ಈ ವಿನಾಶಕಾರಿ ಕ್ರಮವನ್ನು ಹಿಂತೆಗೆದುಕೊಳ್ಳಲು ಪ್ರೇರಣೆ ನೀಡಬೇಕಾಗಿತ್ತು. ಆದರೆ, ಯಾವುದನ್ನೂ ಯೋಚಿಸದೇ ಮುಂದಡಿಯಿಟ್ಟು, ನಂತರ ಕೂಡಾ ಎಂದಿಗೂ ಮರುಚಿಂತನೆ ಮಾಡದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇದನ್ನು ಮಾಡುವ. ಸಾಧ್ಯತೆಯಿಲ್ಲ. ಏಕೆಂದರೆ, ಸರಕಾರದ ಮೇಲಿನ ಕ್ರಮಗಳೆಲ್ಲವುಗಳಲ್ಲಿ ಕೇವಲ ಪೂರ್ವಯೋಜನೆ ಮಾತ್ರವಲ್ಲ; ಎಳ್ಳಷ್ಟು ಮಾನವೀಯತೆಯೂ ಕಾಣುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನೀವು ಅವರ ಸ್ಥಾನ ದಲ್ಲಿ ಆಲೋಚನೆ ಮಾಡಿ ನಿಮ್ಮ ಮನಸಿಗೆ ಬಂದಿದ್ದವು ಬರೆದು ಹಾಕಬೇಡಿ ಅವರು ಏನು ಅಂತ ಜನಕ್ಕೆ ಗೊತ್ತು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...