Homeಕರ್ನಾಟಕಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

- Advertisement -
- Advertisement -

ಕೊರೊನಾ ಬಗ್ಗೆ ಇರುವ ಹಾಗೂ ಹರಡುತ್ತಿರುವ ಸುಳ್ಳು ಸುದ್ದಿಗಳಾಚೆಗೆ ಕರ್ನಾಟಕದ ಕೊರೊನಾ ಸೋಂಕಿನಿಂದ ಗುಣಮುಖರಾದ ಮೊದಲ ವ್ಯಕ್ತಿ ವೆಂಕಟ್ ಪಿ.ಕೆ. ಅವರು ತನ್ನ ಮನದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಜೊತೆಗೆ ಕೊರೊನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳ ಬಗ್ಗೆ ಕೂಡಾ ಜಾಗೃತರಾಗುವಂತೆ ಹೇಳಿ ಸೋಂಕು ಬಂದರೂ ಭಯಪಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಅವರೇ ಹೇಳಿಕೊಂಡಿರುವಂತೆ ವೆಂಕಟ್ ಪಿ.ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ. ಕೊರೊನಾ ವೈರಸ್ ಸೋಂಕಿದ್ದರಿಂದ ಇವರು ರಾಜಿವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಕೆಲವು ದಿನಗಳಿದ್ದ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

ಹಲವಾರು ಜನ ಇವರೊಂದಿಗೆ, ನಿಮಗೆ ಹೇಗೆ ಕೊರೊನಾ ಬಂತು ಎಂದು ಕೇಳಿದ್ದರಿಂದ ಹಾಗೂ ಸೋಂಕಿನ ಬಗ್ಗೆ ಹಲವಾರು ತಪ್ಪು ಅಭಿಪ್ರಾಯಗಳು ಇರುವುದರಿಂದ ಈ ವಿಡಿಯೊ ಮಾಡುತ್ತಿದ್ದೇನೆ ಎಂದು ವೆಂಕಟ್ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

“ನಾನು ಮಾರ್ಚ್ ಮೊದಲ ವಾರದಲ್ಲಿ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದೆ. ನಾನು ಆದಷ್ಟು ಜಾಗರೂಕನಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಸೋಂಕಿರುವವರು ಬಳಸಿದ ಬಾತ್‌ರೂಮಿನಿಂದ, ಸೆಕ್ಯೂರಿಟಿಗಾಗಿ ಬಳಸುವ ಬೆರಳಚ್ಚು ಸ್ಕಾನ್‌ನಿಂದ ಅಥವಾ ಸೋಂಕಿರುವವರು ಉಸಿರಾಡಿದ ಗಾಳಿ ಕುಡಿದಿದ್ದರಿಂದಲೂ ಇದು ನನಗೆ ಬಂದಿರಬಹುದು” ಎಂದು ವೆಂಕಟ್ ಹೇಳುತ್ತಾರೆ.

ವೆಂಕಟ್ ಹೇಳುವಂತೆ “ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವಾಗಲೆ ನನಗೆ ಜ್ವರ ಶುರುವಾಗಿತ್ತು. ನಾನು ಮೊದಲಿಗೆ ಸಾಧಾರಣ ಜ್ವರ ಆಗಿರಬಹುದು ಎಂದು ಭಾವಿಸಿ ಕೆಲವು ಮಾತ್ರೆಗಳನ್ನು ತೆಗೆದುಕೊಂಡೆ. ನಾನು ವಾಪಾಸು ಬಂದು ಏರ್‌ಪೋರ್ಟಿನಲ್ಲಿ ನನ್ನ ಜ್ವರದ ಬಗ್ಗೆ ಹೇಳಿದೆ. ಏರ್‌ಪೋರ್ಟಿನ ಡಾಕ್ಟರುಗಳ ಕೈಯ್ಯಲ್ಲಿ ಸಾಕಷ್ಟು ವೈದ್ಯಕೀಯ ಸಲಕರಣೆಗಳು ಇರಲಿಲ್ಲ, ಯಾಕೆಂದರೆ ಅವರಿನ್ನೂ ಅದರ ತಯಾರಿಯಲ್ಲಿದ್ದರು.” ಎನ್ನುತ್ತಾರೆ.

“ಅಲ್ಲಿಂದ ಕ್ಲಿಯರೆನ್ಸ್ ಪಡೆದು ಮನೆಗೆ ಬಂದೆನಾದರೂ ನನ್ನ ಹೆಂಡತಿಯೊಂದಿಗೆ ನನಗೆ ಏನೋ ಆಗುತ್ತಿದೆ, ನನ್ನಿಂದ ಅಂತರದಲ್ಲಿರುವಂತೆ ಹೇಳಿ ನನ್ನ ಮನೆಯ ಮಹಡಿಗೆ ಹೋದೆ. ನಂತರ ನಾನು ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾದೆ. ಪರೀಕ್ಷೆಗೊಳಗಾದ ಮರುದಿನ ಮಧ್ಯಾನ್ಹ ನನ್ನಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗುವಂತೆ ಆಸ್ಪತ್ರೆಯಿಂದ ಫೋನ್ ಬಂತು. ನಾನು ತಕ್ಷಣವೇ ಮನೆಯಿಂದ ಹೊರಟು ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾದೆ” ಎಂದು ವೆಂಕಟ್ ಹೇಳುತ್ತರೆ.

ವಿಡಿಯೋ ನೋಡಿ

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

Posted by Naanu Gauri on Thursday, April 2, 2020

“ಜ್ವರವು ಮುಂಜಾನೆ 102 ಡಿಗ್ರಿ ಹಾಗೂ ಹಗಲು ಹೊತ್ತು 100 ಡಿಗ್ರಿ ಆಗಿರುತ್ತಿತ್ತು. ನನಗೆ ಮೊದಲಿಗೆ ಅನಿಸಿದ್ದು ನನ್ನ ದೇಶಕ್ಕೆ ಕಟ್ಟಿದ್ದ ತೆರಿಗೆ ಸಾರ್ಥಕ ಆಗಿದೆ ಎಂದು. ಯಾಕೆಂದರೆ ಅಷ್ಟೊಂದು ಸೇವಾ ಮನೋಭಾವದ ವೈದ್ಯರು ಅಲ್ಲಿದ್ದರು. ಸಾಮಾನ್ಯಾಗಿ ಆಂಟಿಬಯಾಟಿಕ್ಸ್ ಕೊಡುತ್ತಿದ್ದರು. ಸುಸ್ತಾದಾಗ ಐವಿ ಕೇಳಿ ಐವಿಯನ್ನು ಹಾಕುತ್ತಿದ್ದೆ. ಎರಡು ವಾರಗಳವರೆಗೂ ಜ್ವರ ಇತ್ತು. ಸಾಮಾನ್ಯವಾಗಿ ನನಗೆ ಇಷ್ಟು ದಿನದ ಜ್ವರದ ಅನುಭವವೇ ಆಗಿರಲಿಲ್ಲ. ಎರಡು ವಾರಗಳ ನಂತರ ನನ್ನ ಜ್ವರ ನಿಂತಿತು. ಜ್ವರ ಬಿಟ್ಟು ಐದು ಪರೀಕ್ಷೆಗಳು ನಡೆಸಿದ ನಂತರ ಕೊರೊನಾ ನೆಗೆಟಿವ್ ಆಗಿರುವುದು ತಿಳಿದು ಬಂತು” ಎಂದು ಅವರು ಹೇಳುತ್ತಾರೆ.

ಸ್ವತಃ ವೆಂಕಟ್ ಕೊರೊನವನ್ನು ತಡೆಯಬಹುದಾಗಿದೆ ಎಂದು ಧೈರ್ಯ ತುಂಬುತ್ತಾರೆ. “ಸೋಂಕಿನ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹರಡುತ್ತಿವೆ. ಇದನ್ನು ಮೂರು ದಾರಿಯಲ್ಲಿ ತಡೆಗಟ್ಟಬಹುದಾಗಿದೆ. ಮೊದಲನೆಯದಾಗಿ ಮುಖಕ್ಕೆ ಮಾಸ್ಕ್ ಹಾಕುವುದರ ಮೂಲಕ ಇನ್ನೊಬ್ಬರಿಗೆ ರೋಗ ಹರಡದಿರುವಂತೆ ಮಾಡಬಹುದು. ಎರಡನೆಯದಾಗಿ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಹಾಗೂ ನಿಮ್ಮ ಮುಖವನ್ನು ಕೈ ತೊಳೆಯದೆ ಮುಟ್ಟದಿರಿ. ಮೂರನೆಯದಾಗಿ ನಿಮ್ಮ ವಸ್ತುಗಳನ್ನು ಪ್ರತ್ಯೇಕವಾಗಿ ಇಟ್ಟು ಬಿಡಿ” ಎಂದು ವೆಂಕಟ್ ಹೇಳುತ್ತಾರೆ.

ಈ ರೋಗವು ತಡೆಗಟ್ಟುವಂತದ್ದಾಗಿದೆ ಎನ್ನುವ ವೆಂಕಟ್, “ನೀವು ಅದರಿಂದ ಹೊರಗೆ ಬರಬಹುದಾಗಿದೆ. ಸೋಂಕಿತರಿಗೆ ನನ್ನ ಶುಭ ಹಾರೈಕೆ ಇರುತ್ತದೆ. ಭಯದಿಂದ ದೂರವಿರಿ, ಇದು ನಿಮಗೆ ಬರದೇ ಇರಲಿ, ಒಂದು ವೇಳೆ ಬಂದರೂ ಅದನ್ನು ತಡೆಗಟ್ಟಬಹುದಾಗಿದೆ” ಎಂದು ಅವರ ತನ್ನ ವಿಡಿಯೊದಲ್ಲಿ ಧೈರ್ಯ ಹೇಳುತ್ತಾರೆ.

ವೆಂಕಟ್‌ರವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹಾಕಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು ಬಹಳಷ್ಟು ಜನ ಷೇರ್‌ ಮಾಡಿದ್ದಾರೆ. ಹಾಗೆಯೇ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ: ಕೊರೊನ ಸಾಂಕ್ರಾಮಿಕ ಬಿಕ್ಕಟ್ಟಿನ ಬೆಂಕಿಗೆ ಪುಳ್ಳೆಯಿಟ್ಟ ವೈಜ್ಞಾನಿಕ ಮನೋಭಾವದ ಅಭಾವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...