Homeಕರ್ನಾಟಕಈ ಹೊತ್ತಿನಲ್ಲಿ ʼಹಳ್ಳಿ ಮಕ್ಕಳʼ ಕುರಿತು: ಒಂದು ರಚನಾತ್ಮಕ ಆಲೋಚನೆ - ಕೆ.ಪಿ.ಸುರೇಶ

ಈ ಹೊತ್ತಿನಲ್ಲಿ ʼಹಳ್ಳಿ ಮಕ್ಕಳʼ ಕುರಿತು: ಒಂದು ರಚನಾತ್ಮಕ ಆಲೋಚನೆ – ಕೆ.ಪಿ.ಸುರೇಶ

ಕೊರೊನಾ ಲಾಕ್‌ಡೌನ್‌ನ ಕಾರಣಕ್ಕೆ ಹಳ್ಳಿ ಮಕ್ಕಳು ಅಭದ್ರತೆಯಿಂದ ಊರ ಕಡೆ ಹೊರಟಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನೆಂದು ಊಹಿಸಿ ಈಗಲೇ ಕಾರ್ಯಪ್ರವೃತ್ತರಾಗದಿದ್ದರೆ, ಮೂರು ತಿಂಗಳ ನಂತರ ಎದುರಿಸಬೇಕಾಗುವ ಸಮಸ್ಯೆಗಳನ್ನು ತಡೆಗಟ್ಟಲಾಗದು..

- Advertisement -
- Advertisement -

ಪ್ರಿಯ ಓದುಗರೇ,

ನಮ್ಮ ಕೃಷಿಯಲ್ಲಿ ಅಷ್ಟೊಂದು ಕಡಿಮೆ ಆದಾಯವಿದ್ದರೂ ಗ್ರಾಮೀಣ ಭಾಗ ಹೇಗೆ ಬದುಕುತ್ತಿದೆ ಎಂಬುದಕ್ಕೆ ಇದ್ದ ಮೂರ್ನಾಲ್ಕು ಉತ್ತರಗಳಲ್ಲಿ ಒಂದು ʼನಗರಗಳಲ್ಲಿ ದುಡಿಯುವ ಹಳ್ಳಿ ಮಕ್ಕಳು ಹಳ್ಳಿಗಳಿಗೆ ಹಣ ಕಳಿಸಿ ಕ್ರಾಸ್‌ ಸಬ್ಸಿಡೈಸ್‌ ಮಾಡುವುದರ ಮುಖಾಂತರʼ ಎಂಬುದೂ ಒಂದು. ಈಗ ಆ ಹಳ್ಳಿ ಮಕ್ಕಳು ಊರಿನ ಕಡೆಗೆ ಮುಖ ಮಾಡಿದ್ದಾರೆ. ಇದರ ಪರಿಣಾಮವೇನಾಗಬಹುದು ಎಂದಷ್ಟೇ ಚರ್ಚೆ ಮಾಡದೇ, ಪರಿಹಾರವೇನಿರಬಹುದು ಎಂಬುದನ್ನೂ ಹುಡುಕಬೇಕಿದೆ. ಇಂಥದ್ದರ ಬಗ್ಗೆಯೇ ತಲೆ ಕೆಡಿಸಿಕೊಂಡು ತಳಮಟ್ಟದಲ್ಲಿ ಪ್ರಾಯೋಗಿಕವಾದ ಸಲಹೆಗಳನ್ನು ಮುಂದಿಡುವುದರಲ್ಲಿ ಕೆ.ಪಿ.ಸುರೇಶ ಅವರು ಸದಾ ಮುಂದು.

ಅವರ ಈ ಬರಹದೊಂದಿಗೆ ಆರಂಭಿಸಿ ಇದನ್ನೊಂದು ರಚನಾತ್ಮಕ ಆಂದೋಲನವನ್ನಾಗಿ ಮಾಡುವ ಕುರಿತು ನಾನುಗೌರಿ.ಕಾಂ ಗಂಭೀರವಾಗಿ ಆಲೋಚಿಸಿದೆ. ನೀವೆಲ್ಲರೂ ಕೈ ಜೋಡಿಸಬೇಕೆಂದು ತಮ್ಮಲ್ಲಿ ಮನವಿ. ಹೇಗೆ ಮುಂದುವರೆಯಬಹುದು ಎಂಬುದರ ಕುರಿತು ಕೆಲವು ಸಂಗತಿಗಳು ನಿಮಗೆ ಇದನ್ನು ಓದಿದರೆ ಸ್ಪಷ್ಟವಾಗುತ್ತವೆ. ಮುಖ್ಯವಾಗಿ ಈ ಚರ್ಚೆಯನ್ನು ಬೆಳೆಸುವುದು ಮತ್ತು ಅದು ಕ್ರಿಯಾಶೀಲತೆಗೆ ದಾರಿ ಮಾಡಿಕೊಡುವುದು ಆಗಬೇಕು. ನಿಮ್ಮ ಪ್ರತಿಕ್ರಿಯೆಗಳನ್ನು 9353666821 ಅಥವಾ [email protected]ಗೆ ಕಳಿಸಬಹುದು.

                                                    • ಸಂಪಾದಕ

ಕೊರೊನಾ ಸಂದರ್ಭದಲ್ಲಿ ವಲಸೆಯೆಂಬ ವಿದ್ಯಮಾನ

ನಮ್ಮ ಗ್ರಾಮಾಂತರದಲ್ಲಿ ಭೀಕರ ಅಕಾಲಿಕ ರಿವರ್ಸ್ ವಲಸೆ ನಿಜವಾಗಿದೆ.  ಲಕ್ಷಾಂತರ ಯುವಕರು ಮರಳಿ ಹುಟ್ಟೂರಿಗೆ ಬಂದಿದ್ದಾರೆ. ಇದು ಸೃಷ್ಟಿಸಿರುವ ಬಿಕ್ಕಟ್ಟು ದೀರ್ಘಕಾಲಿಕವಾದರೆ ಅದನ್ನು ನಿಭಾಯಿಸುವುದು ಹೇಗೆ?

ಮೂಲತಃ ಅಸಂಘಟಿತ ನಗರ ಕಾರ್ಮಿಕರಾಗಿದ್ದ ಇವರು ನಿಗದಿತವಾಗಿ ಊರಿಗೆ ಹಣ ಕಳಿಸುತ್ತಿದ್ದರು. ಈಗ ಬರಬೇಕಾದ ಹಣವೂ ಇಲ್ಲದೇ ಹಠಾತ್ ಉದ್ಯೋಗ ಅಂತ್ಯವಾಗಿ ಮರಳುವ ಅವರ ಮಾನಸಿಕ ಸ್ಥಿತಿ ಬಗ್ಗೆ ಯೋಚಿಸಬೇಕಿದೆ.  ಒಂದು ಹಳ್ಳಿಯ ಸಶಕ್ತ ಯುವ ಪಡೆ ಇದು. ತಕ್ಕ ಮಟ್ಟಿಗೆ ಬುದ್ಧಿಶಾಲಿಗಳು ಕೂಡಾ. (ಹೀಗಿದ್ದವರಷ್ಟೇ ನಗರದಲ್ಲಿ ಏಗಬಹುದಷ್ಟೇ!).

 ಹಳ್ಳಿಯ ತಮ್ಮ ತಮ್ಮ ಕುಟುಂಬಗಳಿಗೆ ಅನ್ನದಾತರಾಗಿದ್ದವರು ಈಗ ತಾವೇ ಅವಲಂಬಿತರಾಗುವ ಸನ್ನಿವೇಶ ಇದೆ.

ರಜಾಕ್ಕೆ ಬಂದಾಗ ಬಹುತೇಕ ಓಡಾಡಿಕೊಂಡೇ ರಿಲಾಕ್ಸ್ ಆಗುತ್ತಿದ್ದ ಇಂಥಾ ಯುವಕರನ್ನು ನಾನು ನೋಡಿದ್ದೇನೆ.  ತೇಜಸ್ವಿಯವರ ಕತೆಯಲ್ಲಿ ಬರುವಷ್ಟು ಕ್ಯಾರಿಕೇಚರ್ ಅಲ್ಲದಿದ್ದರೂ ಕೃಷಿ ಕೆಲಸಕ್ಕೆ ಒಲಿಯುವ ಹಂತ  ದಾಟಿದ್ದಾರೆ.

ಕನಿಷ್ಠ ಮುಂದಿನ ಆರು ತಿಂಗಳ ಕಾಲ (ಪವಾಡದ ಹೊರತಾಗಿ) ಈ ಯುವಕರಿಗೆ ನಗರದ ಉದ್ಯೋಗ ಲಭ್ಯವಾಗುವುದು ಕಷ್ಟವೇ.  ಈ ಕಟು ವಾಸ್ತವದ ಹಿನ್ನೆಲೆಯಲ್ಲಿ ದಿನಗಳೆದಂತೆ ಅವರ  ಮನೆಯಲ್ಲಿ ಅವರ ಪಾತ್ರ  ಏನಾಗುತ್ತದೆ?  ಕುಟುಂಬದ ಆದಾಯದ ಮೂಲ ಬತ್ತುತ್ತಾ ಕೃಷಿ ಹಂಗಾಮಿನ ಕೆಲಸಗಳಿಗೆ ಬಂಡವಾಳ ಹೂಡಲೇಬೇಕಾದ ಒತ್ತಡದಲ್ಲಿ ಇವರ ಉಪಯುಕ್ತತೆಯನ್ನು ಹೆಚ್ಚಿಸದಿದ್ದರೆ ಇವರೆಲ್ಲಾ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುವ ಸಾಧ್ಯತೆ ಇದೆ.

ಹಾಗಾದರೆ ಏನು ಮಾಡಬಹುದು?

ಆದರೆ ಈ ಸದ್ಯೋಸ್ಥಿತಿಯಲ್ಲಿ ಒಂದು ಆಶಾಕಿರಣವೂ ಇದೆ. ಈ ಯುವಕರು ನಗರ ನೋಡಿದವರು. ಸುಮಾರಾಗಿ ಹೊಸ ತಂತ್ರೋಪಕರಣ, ಜ್ಞಾನವನ್ನು ಬಳಸುವ ಕೌಶಲ್ಯ ಅಷ್ಟಿಷ್ಟಾದರೂ ಬೆಳೆಸಿಕೊಂಡವರು.

ಇವರಿಗಿರುವ ಕೌಶಲ್ಯವನ್ನು ಬಳಸಿಕೊಂಡು ಗ್ರಾಮಗಳ ಸ್ವಾವಲಂಬೀ ಕೊಡು-ಕೊಳು ವಸ್ತು ಉತ್ಪಾದನೆಗೆ  ಸಹಾಯವಾಗಬಹುದು. ಮಿಶ್ರ ಬೆಳೆಯ ಆಹಾರೋತ್ಪಾದನೆಯ ಬೇಸಾಯದಿಂದ ಹಿಡಿದು ಸಣ್ಣ ಮಟ್ಟಿನ ಮೌಲ್ಯವರ್ಧನೆ, ಯಂತ್ರೋಪಕರಣ ರಿಪೇರಿ ಇವನ್ನೆಲ್ಲಾ ಸಾಧ್ಯಗೊಳಿಸಬಹುದು. ಈ ಲಾಕ್‌ಡೌನ್ ಇನ್ನೊಂದು ತಿಂಗಳು ಮುಂದುವರೆದರೂ ಹಳ್ಳಿಗಳಲ್ಲಿ ಕೃಷಿ ಸಂಬಂಧೀ ಜೀವನೋಪಾಯಗಳ ಬಗ್ಗೆ ವಿಚಾರ ವಿನಿಮಯದ ಸಭೆಗಳನ್ನು ಮಾಡುವುದೂ ತ್ರಾಸದಾಯಕ. ಆದರೆ ಒಂದಷ್ಟು ಗ್ರಾಮಾಭಿವೃದ್ಧೀ- ಕೃಷಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ವ್ಯಕ್ತಿಗಳು ಏನು ಮಾಡಬಹುದು ಎಂಬುದನ್ನು  ವಿಡಿಯೋ ಮುಖಾಂತರ ವಾಟ್ಸಪ್ ನಂಬರ್‌ಗೆ (9353666821) ಮೂಲಕ ಹಂಚಿಕೊಳ್ಳಬಹುದು.

ಇನ್ನೂ ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ.

  1. ಸಣ್ಣ ರೈತರಿಗೆ ಈ ಬಾರಿ ಆಹಾರದ ಸ್ವಾವಲಂಬಿತನ ಮುಖ್ಯ ಎಂಬುದನ್ನು ಒತ್ತಿ ಹೇಳಬೇಕಿದೆ. ಇದಕ್ಕೆ ದೊಡ್ಡ ಮಟ್ಟಿನ ಒಳಸುರಿಗಳ ಅಗತ್ಯವೂ ಇಲ್ಲ.  ತನಗಿರುವ ಜಮೀನಿನ ಅರ್ಧಾಂಶದಲ್ಲಾದರೂ ಶೇ.60 ಆಹಾರ ಬೆಳೆ, ಶೇ.20 ದ್ವಿದಳ ಧಾನ್ಯ ಉಳಿದ ಶೇ.20ರಲ್ಲಿ ತರಕಾರಿ ಇತ್ಯಾದಿ ಬೆಳೆಸುವ ಬೆಳೆ ವಿನ್ಯಾಸವನ್ನು ರೈತರಿಗೆ ಹೇಳಬೇಕಿದೆ.
  2. ಇದಕ್ಕೆ ಬೇಕಾದ ಬೀಜ ಲಭ್ಯತೆಯನ್ನು ಒದಗಿಸುವುದು ಸವಾಲೇ ಸರಿ. ಆದರೆ  ಒಂದಷ್ಟು ಕೆಲಸ ಮಾಡಿದರೆ ಈ  ಬೀಜದ ಕೊಡು-ಕೊಳು ಕಷ್ಟವಲ್ಲ.
  3. ಕೆಲವು ಸರಳ ದ್ರವ ಗೊಬ್ಬರಗಳನ್ನು ತಯಾರಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡುವುದು ಕಷ್ಟವಲ್ಲ( ಉದಾ: ಪಂಚಗವ್ಯ ಇತ್ಯಾದಿ)
  4. ಸ್ವಸಹಾಯ ಸಂಘದ ಮಹಿಳೆಯರು  ಈ ಬಾರಿಯ ಬೇಸಾಯದ ಬೆಳೆಗಳ ಆದ್ಯತೆ ಏನು ಎಂಬುದನ್ನು ನಿರ್ಧರಿಸುವಂತಾಗಬೇಕು. ಬಂಡವಾಳವೂ ಅವರಿಂದಲೇ ಬರಬೇಕಷ್ಟೇ!!
  5. ಇದರೊಂದಿಗೇ ಈ ಬೇಸಿಗೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಸಣ್ಣ ಪ್ರಮಾಣದ ಪ್ರಾಥಮಿಕ ಮೌಲ್ಯ ವರ್ಧನೆಗೆ ಎಲ್ಲೆಲ್ಲಿ ಅವಕಾಶ ಇದೆ ಅಲ್ಲೆಲ್ಲಾ ಮಾಡುವಂತೆ ಪ್ರೇರೇಪಿಸಬೇಕಿದೆ (ಉದಾ: ತೊಕ್ಕು, ಉಪ್ಪಿನಕಾಯಿ ಇತ್ಯಾದಿ)  ಈ ಉತ್ಪನ್ನಗಳಿಗೆ ನೆರೆ-ಕರೆ; ಅಕ್ಕಪಕ್ಕದ ಸಣ್ಣ ಹೋಬಳಿಗಳಲ್ಲೂ ಬೇಡಿಕೆ ಕುದುರುವುದು ಖಂಡಿತ . (ಈ ಲಾಕ್‌ಡೌನ್ ಕಾರಣದಿಂದ ಇಂಥಾ ವಸ್ತುಗಳ ಸಪ್ಲೈ ಚೈನ್ ಪೂರಾ ಕುಸಿದಿದೆ)
  6. ಯಂತ್ರೋಪಕರಣ ರಿಪೇರಿ ಇತ್ಯಾದಿಗೆ ಈ ವಾಪಾಸು ಬಂದ ಯುವಕರ ಕೌಶಲ್ಯವನ್ನೇ ಇಟ್ಟುಕೊಂಡು ಸಮುದಾಯ ಮಟ್ಟದ ಸಹಕಾರೀ ರಿಪೇರಿ ಮೈಂಟೈನೆನ್ಸ್  ಸಾಧ್ಯವಾದರೆ ಪಟ್ಟಣಗಳಿಗೆ ಹೋಗುವ ಪರದಾಟ ನಿಂತೀತು.

ಇಂಥಾ ಹತ್ತಾರು ವಿಚಾರಗಳನ್ನು ಇತರರೂ ತಮ್ಮ ತಮ್ಮ ಗ್ರಾಮದ ಸ್ಥಿತಿಗನುಗುಣವಾಗಿ ರೂಪಿಸಬಹುದು.

 ಈ ಯುವಕರು ವಾಪಾಸು ಬಂದಿದ್ದು ನಮ್ಮ ಗ್ರಾಮಕ್ಕೆ ವರ ಎಂಬ ಭಾವವನ್ನು ನಮ್ಮ ಗ್ರಾಮಸ್ಥರು ಬೆಳೆಸದಿದ್ದರೆ ಕೌಟುಂಬಿಕ ಮಟ್ಟದಲ್ಲೂ ಖಿನ್ನತೆ ವಿಷಮಗೊಂಡೀತು.

ರೈತರ ಜೊತೆ ಕೆಲಸ ಮಾಡುತ್ತಿರುವ ಒಂದಷ್ಟು ಸಂಸ್ಥೆಗಳ ಗೆಳೆಯರ ಜೊತೆ ಚರ್ಚಿಸಿದ ಅಂಶಗಳನ್ನು ಇಲ್ಲಿ ಬರೆಹ ರೂಪಕ್ಕಿಳಿಸಿದ್ದೇನೆ. ಈಗ ಇದನ್ನೊಂದು ಅಭಿಯಾನವನ್ನಾಗಿ ಮಾಡುವುದು ನಿಮ್ಮೆಲ್ಲರಿಗೆ ಬಿಟ್ಟಿದ್ದು. ನಾನುಗೌರಿ.ಕಾಂ ಅವರು ಇದಕ್ಕೊಂದು ವೇದಿಕೆ ಕಲ್ಪಿಸಿದ್ದು ಒಳ್ಳೆಯದು. ಆದರೆ ಇದನ್ನು ಎಲ್ಲರೂ ಮಾಡಬೇಕು ಮತ್ತು ಸರ್ಕಾರದ ನೀತಿ ನಿರ್ಧಾರಕ ಸ್ಥಾನಗಳಲ್ಲಿರುವವರಿಗೂ ಇದನ್ನು ಟ್ಯಾಗ್‌ ಮಾಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...