HomeUncategorizedಥೂ....ಮುಂದಿನ ಎಲೆಕ್ಷನ್ನಿನ್ಯಾಗೆ ನಾನು ಬ್ಲೂಜೆಪಿ ಪರುವಾಗಿ ಪ್ರಚಾರ ಮಾಡಕಿಲ್ಲ, ಮಾಡಕಿಲ್ಲ, ಮಾಡಕಿಲ್ಲsss

ಥೂ….ಮುಂದಿನ ಎಲೆಕ್ಷನ್ನಿನ್ಯಾಗೆ ನಾನು ಬ್ಲೂಜೆಪಿ ಪರುವಾಗಿ ಪ್ರಚಾರ ಮಾಡಕಿಲ್ಲ, ಮಾಡಕಿಲ್ಲ, ಮಾಡಕಿಲ್ಲsss

- Advertisement -
- Advertisement -

ಪ್ರಿಯ ಕೇಳುಗರಿಗೆಲ್ಲ ನಮಸ್ಕಾರ. ಆಘಾತವಾಣಿ ವಾರ್ತಾವಾಚನಕ್ಕೆ ಸ್ವಾಗತ. ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಇದೀಗ ವಾರ್ತೆಗಳ ವಿವರ.
ಬಾಬಾ ಲಾಂದೇವನಿಂದ ಹೆಡ್ಡಾಫೀಸಿಗೆ ಬಗನಿಗೂಟ: ಕಂಗಾಲಾಗಿ ಕುಳಿತುಕೊಂಡಿವೆ ನಾಗಪುರದ ಕ್ರಿಮಿಕೀಟ
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಣ್ಣ ಹಜಾರೆ ಜೊತೆ ಸೇರಿ ಭ್ರಷ್ಟಾಚಾರ ನಿರ್ಮೂಲನೆ, ಲೋಕಪಾಲ ಮಸೂದೆ ಇನ್ನಿತ್ಯಾದಿ ಜನಪ್ರಿಯ ಸ್ಲೋಗನ್‍ಗಳ ರಿಯಾಯಿತಿ ದರದ ಮಾರಾಟಕ್ಕಿಳಿದಿದ್ದ ಬಾಬಾ ಲಾಂದೇವ್ ನಂತರ ಬ್ಲೂಜೆಪಿ ಗೆದ್ದ ನಂತರ ಧರಿಸಿದ್ದ ಚೂಡಿದಾರ್ ಸಮೇತ ನಾಗಪುರದ ಕುದುರೆರೇಸ್ ಹೆಡ್ಡಾಫೀಸಿನ ಬಚ್ಚಲುಮನೆಗೆ ನೆಗೆದಿದ್ದರು. ತನ್ನ ಮೂರಡಿ ಗಡ್ಡವನ್ನು ನಿರ್ಮಾಪುಡಿ ನೀರಿನಲ್ಲಿ ನೆನೆಸಿ ನಾಗಪುರದ ಹೆಡ್ಡಾಫೀಸ್ ನೆಲ ಒರೆಸುತ್ತ ತನ್ನ ತಪಂಜಲಿ ಕಂಪನಿಯನ್ನು ಬೆಳೆಸಿಕೊಂಡ ಲಾಂದೇವ್ ಇದೀಗ ಹೆಡ್ಡಾಫೀಸ್ ಗಢವಗಳ ಮುಖಕ್ಕೆ ಡಿಚ್ಚಿ ಹೊಡೆದಿರುವ ವರ್ತಮಾನ ಲಭ್ಯವಾಗಿದೆ. ಮುಂದಿನ ಎಲೆಕ್ಷನ್ನಿನಲ್ಲಿ ನಾನು ಬ್ಲೂಜೆಪಿ ಪರವಾಗಿ ಪ್ರಚಾರ ಮಾಡುವುದಿಲ್ಲ, ನನ್ನ ಬಾಯೊಳಗೆ ಹುಣ್ಣಾಗಿದ್ದು ಮೊದಲಿನಂತೆ ಈಗ ಭಾಷಣ ಜಡಿಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಬ್ಲೂಜೆಪಿಯವರು ಅವರ ಗುಂಡಿಯನ್ನು ಅವರೇ ತೋಡಿಕೊಳ್ಳಲಿ, ಬೇಕಿದ್ರೆ, ಅದೇ ಗುಂಡಿಯೊಳಗೆ ಬಿದ್ದು ಅವರ ಮುಖದ ಮೇಲೆ ಅವರೇ ಮಣ್ಣು ಎಳೆದುಕೊಳ್ಳಲಿ, ನಾನು ಗೋಮೂತ್ರವನ್ನು 100 ಡಿಗ್ರಿಯಲ್ಲಿ ಕುದಿಸಿ, ಅದಕ್ಕೆ ಕರ್ಪೂರ ಚಕ್ಕೆ ಲವಂಗ ಮಿಕ್ಸ್ ಮಾಡಿ ಪೆಟ್ರೋಲ್ ಕಂಡುಹಿಡಿದು 35 ರುಪಾಯಿಗೆ ಲೀಟರಿನಂತೆ ಮಾರಿಕೊಂಡು ಬದುಕ್ಕೋತೀನಿ ಎಂದ ಲಾಂದೇವನ ಮಾತು ಕೇಳಿದ ನಾಗಪುರದ ವಯೋವೃದ್ಧ ಕ್ರಿಮಿಕೀಟಗಳು ಗಾಬರಿಬಿದ್ದು ಮೂಛೆರ್É ಹೋಗಿದ್ದಾರೆಂದು ತಿಳಿದುಬಂದಿದೆ.

********

ರೋಗಪೀಡಿತ ಮಂತ್ರಿಗಳೆಲ್ಲ ಫಾರಿನ್ನಿಗೆ ಹಾರ್ತಾವ್ರಲ್ಲ: ಚರಂಡಿಗ್ಯಾಸ್ ತಜ್ಞ ಮೋದಿ ಮಾತಿಗೆ ಬೆಲೆಯೇ ಇಲ್ಲ
ಜಿಲ್ಲೆಗೊಂದರಂತೆ ಆಯುರ್ವೇದ ಆಸ್ಪತ್ರೆ ತೆಗೀತೀನಿ, ಅಡ್ಮಿಟ್ ಆದವ್ರಿಗೆ ಗ್ಲೂಕೋಸ್ ಬದಲು ಗಂಜಲ ಹೆಟ್ಟಿ ರೋಗ ವಾಸಿ ಮಾಡ್ತೀನಿ, ಆಹಾರಪಥ್ಯಕ್ಕೆ ಬದಲಾಗಿ ಗೋವಿನಸೆಗಣಿ, ಹಾಸಿಗೆ ಬೆಡ್ ಬದಲು ಭತ್ತದ ಹುಲ್ಲಿನ ಮೆದೆ ಮೇಲೆ ರೋಗಿ ಮಲಗಿಸ್ತೀನಿ, ಹೀಗೆಂದು ಎರಡೂ ಕೈಯಲ್ಲಿ ಢಮಢಮನೆ ಎದೆ ಚಚ್ಚಿಕೊಂಡು ಆಯುರ್ವೇದದ ಬಗ್ಗೆ ಕಕ್ಕಿಕೊಂಡ ಮೋದಿ ಮಾತನ್ನು ಯಾರೂ ಮೂಸದೆ ಇರುವ ವರ್ತಮಾನ ತಿಳಿದುಬಂದಿದೆ. ಈ ಫುಲ್‍ಟೈಂ ಮೆಮೋರಿ ಲಾಸ್ ಗಿರಾಕಿಯ ಕ್ರಿಸ್ತಪೂರ್ವ ಕಾಲದ ಹೆಲ್ತ್ ಟ್ರೀಟ್‍ಮೆಂಟ್ ತಗೊಂಡ್ರೆ ಅಡ್ಮಿಟ್ ಆದ ಎರಡೇ ಗಂಟೆಗೆ ಕೈಲಾಸಕ್ಕೆ ಪಾರ್ಸೆಲ್ ಆಗೋದು ಗ್ಯಾರಂಟಿ ಎಂದರಿತ ಗೋವಾ ಮುಖ್ಯಮಂತ್ರಿ ಮನೋಹರ ಟುರಿಕ್ಕರ್ ಮೊನ್ನೆಯಷ್ಟೇ ಅಮೆರಿಕಕ್ಕೆ ಚಿಕಿತ್ಸೆಗಂತ ಓಡಿಹೋಗಿ ವಾಪಸ್ ಬಂದರು. ಇದೀಗ ಕೇಂದ್ರ ಕೆಮಿಕಲ್ & ಗೊಬ್ಬರದ ಮಂತ್ರಿ ಡೆಂಟಲ್ ಅನಂತ್ಕುಮಾರ್ ಲಂಡನ್ನಿಗೆ ಆರೋಗ್ಯ ಚಿಕಿತ್ಸೆಗೆ ಓಡಿಹೋಗಿದ್ದಾರೆ. ನಮ್ಮ ಟಣಾಟಣ ಸಂಸ್ಕøತಿಯ ಆರೋಗ್ಯವಿದ್ಯೆ, ವೇದಪುರಾಣ, ಆಯುರ್ವೇದ ಚರಕ ಪಂಡಿತನ ಜ್ಞಾನ ಆಧರಿಸಿದ ಚಿಕಿತ್ಸೆ ತಗೊಳ್ಳಿ ಎಂದು ಪುಂಗುವ ಈ ಪುಂಗಿವಾದಕರು ತಮಗೇನಾದರೂ ರೋಗ ಬಡಿದರೆ ಊರಿಗೆ ಮುಂಚೆ ದೇಶ ಬಿಟ್ಟು ವಿದೇಶಿ ಲಕ್ಸುರಿ ಆಸ್ಪತ್ರೆಗಳ ಬೆಡ್ ಮೇಲೆ ಮಕಾಡೆ ಮಲಗುವ ಈ ಐಚಿತ್ರಕ್ಕೆ ಭಕ್ತಗಣವೇ ಬೇಸ್ತುಬಿದ್ದಿರುವುದಾಗಿ ತಿಳಿದುಬಂದಿದೆ. ‘ಸ್ವದೇಶಿ ವೈದ್ಯಪದ್ದತಿಯ ಬಗ್ಗೆ ರಾತ್ರಿಹಗಲು ಬಡಬಡಿಸುವ ಈ ಮಂದಿ ಚಿಕಿತ್ಸೆಗಾಗಿ ಫಾರಿನ್‍ಗೆ ಹಾರುತ್ತಿದ್ದಾರೆಂದರೆ ಇವರಿಗೆ ಯಾವುದೋ ಗುಹ್ಯರೋಗಳು ಒಕ್ಕರಿಸಿಕೊಂಡಿರಬಹುದು; ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಫಾರಿನ್‍ಗೆ ಹಾರುತ್ತಿರಬಹುದು’ ಎಂಬ ವಿಶ್ಲೇಷಣೆ ಅವರ ವಿರೋಧಿಗಳ ಪಡಸಾಲೆಯಿಂದ ಕೇಳಿಬಂದಿದೆ.

********

ಸರ್ಕಾರಿ ಬ್ಯಾಂಕ್ ಹೆಸರು ಕಿವಿಗೆ ಬಿದ್ದರೆ ಶ್ರೀಸಾಮಾನ್ಯ ಪರಾರಿ: ದರೋಡೆಕೋರರ ಕಷ್ಟ ನಿವಾರಿಸಲು ಏಕಗವಾಕ್ಷಿ ನೀತಿ ಜಾರಿ
ಓದು ಬರಹ ಗೊತ್ತಿಲ್ಲದ ಅನ್ನೆಜುಕೇಟೆಡ್ ಮುಠ್ಠಾಳರ ಕೊಂಪೆಯಾಗಿರುವ ಕೇಂದ್ರ ಸರ್ಕಾರದ ಮಟಾಶ್ ಯೋಜನೆಗಳಿಂದ ದೇಶದ ಸರ್ಕಾರಿ ಬ್ಯಾಂಕುಗಳು ಕಾಲು ಕಿಸಿದುಕೊಂಡು ಮಲಗಿರುವ ಹೊತ್ತಿನಲ್ಲೇ, ಜನರು ಈ ಬ್ಯಾಂಕ್‍ಗಳಲ್ಲಿ ಹಣ ಡಿಪಾಸಿಟ್ ಮಾಡುವ ಅಂದರ್‍ಬಾಹರ್ ಅಪಾಯಕಾರಿ ಆಟಕ್ಕೆ ಬೆನ್ನು ತಿರುಗಿಸಿ ದಿಕ್ಕಾಪಾಲಾಗಿ ಓಡುತ್ತಿರುವ ಸುದ್ದಿ ಬಂದಿದೆ. ಸರ್ಕಾರಿ ಬ್ಯಾಂಕುಗಳಲ್ಲಿ ಜನರು ಇಡುತ್ತಿದ್ದ ಠೇವಣಿಯ ಮೊತ್ತ ಕಳೆದ 4 ದಶಕಗಳಲ್ಲೇ ಅತ್ಯಂತ ಕನಿಷ್ಠಮಟ್ಟ ತಲುಪಿದೆಯೆಂದು ಸರ್ಕಾರದ ವರದಿಯಿಂದಲೇ ಬಯಲಾಗಿದೆ. ಜನರ ಠೇವಣಿ ದುಡ್ಡನ್ನು ಬ್ಯಾಂಕುಗಳು ವಂಚಕ ಕಂಪನಿಗಳಿಗೆ ಕೊಡುವುದು, ಕಂಪನಿ ಮಾಲೀಕರು, ಕೇಂದ್ರ ಸರ್ಕಾರದ ಮೂರೂಬಿಟ್ಟ ಮಂತ್ರಿಗಳಿಗೆ ಪುಳಿಯೊಗರೆ ಪಾರ್ಟಿ ಕೊಟ್ಟು ಹಣದ ಸಮೇತ ದೇಶ ಬಿಟ್ಟು ಓಡಿಹೋಗುವುದು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಹಣವಿಡುವುದಕ್ಕಿಂತ ಆ ದುಡ್ಡನ್ನು ನಾವೇ ಪರಪರ ಹರಿದು ಬಿಸಾಕುವುದು ಬೆಟರ್ ಎಂಬ ತೀರ್ಮಾನಕ್ಕೆ ಜನರು ಬಂದಿರುವ ಸೂಚನೆಯಿದೆಯೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದರೊಡನೆ ದೇನಾ ಬ್ಯಾಂಕ್, ವಿಜಯಾಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಬ್ಯಾಂಕ್‍ಗಳನ್ನು ಒಂದುಗೂಡಿಸಿ ಒಂದೇ ಬ್ಯಾಂಕ್ ಮಾಡಲು ಹೊರಟಿರೋ ಮುಠ್ಠಾಳ ಮಡೆಯರ ಹುನ್ನಾರವೇನೆಂದು ಆರ್ಥಿಕತಜ್ಞರಲ್ಲಿ ವಿಚಾರಿಸಿದಾಗ.. ಬ್ಯಾಂಕ್ ವಂಚಕರು ಸೆಪರೇಟ್ ಸೆಪರೇಟಾಗಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಮುಂಡಾಮೋಚಲು ತೊಂದರೆಯಾಗಿರುವುದರಿಂದ ಒಂದೇ ಬ್ಯಾಂಕಿನಲ್ಲಿ ದೊಡ್ಡಮೊತ್ತದ ಸಾಲದ ದರೋಡೆ ನಡೆಸಲು “ಏಕಗವಾಕ್ಷಿ ಟ್ಯಾಕ್ಸ್‍ಮನಿ ದರೋಡೆ’ ಸ್ಕೀಂ ಕೆಳಗೆ ಈ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

********

ಕಾಲೆತ್ತಿಕೊಂಡ ಧಡಿಯೂರಪ್ಪನ ಆಪರೇಷನ್ ಕಮಲ: ಬೆರಕೆ ಸರ್ಕಾರ ಉರುಳಿಸೋ ಯತ್ನ ವಿಫಲ
ಅಧಿಕಾರದಲ್ಲಿದ್ದಾಗ ಚೆಕ್ಕು, ಡಿಡಿ, ಮನಿಯಾರ್ಡರ್‍ನಲ್ಲೆಲ್ಲ ಲಂಚ ಗೆಬರಿದ ಕಳ್ಳಗಂಟನ್ನು ಬಿಚ್ಚದೆ, ಬೆಂಗಳೂರು ಸಕಲೇಶಪುರ ಮುಂತಾದ ಊರುಗಳ ಪಿಕ್‍ಪಾಕೆಟರ್‍ಗಳು, ದರೋಡೆಕೋರರು, ಮಣ್ಣುಕಳ್ಳರ ಹಿಂದೆ ಬಿದ್ದಿರುವ ಧಡಿಯೂರಪ್ಪ ‘ನಿನ್ನ ಮಿನಿಸ್ಟರ್ ಮಾಡ್ತೀನಿ ಕೈ-ದಳ ಪಕ್ಷದ ಎಮ್ಮೆಲ್ಲೆಗಳನ್ನ ಪರ್ಚೇಸ್ ಮಾಡ್ಕೊಡು’ ಎಂದು ದುಂಬಾಲು ಬಿದ್ದಿದ್ದರೆಂಬ ಸುದ್ದಿ ವರದಿಯಾಗಿದೆ. ಅತ್ತ ಜಾರಕಿಹೊಳಿ ಬ್ರದರ್ಸ್ ಒದ್ದ ಎಡಗಾಲಿನ ಏಟಿಗೆ ಬುರುಡೆ ತೂತು ಮಾಡಿಕೊಂಡು ಬ್ಯಾಂಡೇಜ್ ಹಾಕಿಸಿಕೊಳ್ಳೋ ಲೆವೆಲ್ಲಿಗೆ ಬಂದಿರುವ ಬ್ಲೂಜೆಪಿ ಪಕ್ಷದ ಪ್ಲಾನು ಎರಡೂ ಕಾಲೆತ್ತಿಕೊಂಡು ಕಿಸಕೊಂಡು ಬಿದ್ದಿದ್ದು ಮತ್ತೊಮ್ಮೆ ಮುಖಭಂಗವಾಗಿದೆ. ಹೊಲಿಸಿಕೊಂಡಿದ್ದ ಹೊಸ ಕೋಟನ್ನು ಮಡಚಿಡುತ್ತ ಗೋಳಾಡುತ್ತಲೇ ವಾಮಿಟ್ ಶಾಗೆ ಫೋನ್ ಮಾಡಿದ ಧಡಿಯೂರಪ್ಪ ‘ಹಲೋ ಹಲೋ, ನಮ್ ಪ್ಲಾನಿಗೆ ವಾಂತಿಬೇಧಿಯಾಗಿ ಸ್ಕೆಚ್ಚು.. ಪಚ್ಚ್ ಎಂದಿದೆ.. ಮುಂದೆ ಯಾವತಿಪ್ಪೆ ಸೆಗಣಿ ತಿಂದರೆ ಅಧಿಕಾರ ಪಡೆಯಬಹುದು ಹೇಳಿ’ ಎಂದು ಕೇಳಿದರಂತೆ. ಅದಕ್ಕೆ ವಾಮಿಟ್ ಶಾ “ಅರೇ ಧಡಿಯೂರಪ್ಪಾಜೀ.. ಆಪ್ ಕೈಕೂ ಬಾರ್ ಬಾರ್ ಅಗಣಿ ಹಾಕಕ್ಕೆ ಹೋಗಿ.. ಉಸ್ಕೋ ಸಿಗಿಸ್ಕೋತೀರಿ, ಫಿರ್‍ಸೆ ಮತ್ ಫೋನ್ ಕರ್ನಾ.. ಮುಝೆ ಬಹೋತ್ ದರ್ದ್ ಹೋತಾ ಹಯ್, ಆಪ್ ಏಕ್ ಕಾಮ್ ಕೀಜಿಯೇ, ಏಕ್ ಚೊಂಬು ಉಠಾಕೆ ಕೋಯಿ ಡ್ಯಾಮ್ ಕಡೀಕೆ ಜಾವೋ. ವಾಪಸ್ ಮತ್ ಆನಾ.. ಡ್ಯಾಮ್ ಕೆ ಅಂದರ್ ಜಂಪ್ ಮಾರ್ಕೆ ಡೂಬ್ ಮರೋ” ಎಂದು ಬೈದು ಫೋನ್ ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.
ಇಲ್ಲಿಗೆ ನಮ್ಮ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ, ಮುಂದಿನವಾರ ಇದೇ ಸಮಯಕ್ಕೆ. ಮತ್ತೆ ಸಿಗೋಣ. ಅಲ್ಲಿಯವರೆಗೂ ನಮಸ್ಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...