Homeಮುಖಪುಟಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ.

- Advertisement -
- Advertisement -

ಚಿಂತಕ, ಸಂಘಟಕ ಮಹೇಂದ್ರ ಕುಮಾರ್ ಅವರು ಅಕಾಲಿಕವಾಗಿ ನಿಧನರಾದ ಸುದ್ದಿಯನ್ನು ಇಂದು ಬೆಳಿಗ್ಗೆ ಕೇಳಿದಾಗ ಆಘಾವಾಯಿತು. ಹಿಂದೆ ಅವರ ಮಾತುಗಳನ್ನು ಕೇಳಿದ್ದೆ. ನಿನ್ನೆ ತೀರಾ ತಡರಾತ್ರಿ ಯಾರೋ ಶೇರ್ ಮಾಡಿದ್ದ ಪೋಸ್ಟನ್ನು ಫೇಸ್‌ಬುಕ್ ಗ್ರೂಪೊಂದರಲ್ಲಿ ಅಪ್ರೂವ್ ಮಾಡಿದ್ದೆ. ಇವತ್ತು ಬೆಳಿಗ್ಗೆ ಕೂಡಾ ಅವರ ಸಂದರ್ಶನ ಕೇಳಿದ್ದೆ. ನಂತರ ಸಮಾಜಿಕ ಜಾಲತಾಣಗಳಲ್ಲಿ ಅವರದ್ದೇ ನಿಧನದ ಸುದ್ದಿ ಮತ್ತು ಸಂತಾಪಗಳು. ಕೆಲವು ತುಂಬಾ ಭಾವನಾತ್ಮಕವಾದವುಗಳು ಕೂಡಾ. ಅದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ನನಗ್ಯಾಕೋ ಇದನ್ನು ಬರೆಯಬೇಕು ಅನಿಸಿತು.

ಅವರು ಭಜರಂಗದಳದ ಸಂಸ್ಥಾಪಕರು ಮತ್ತು ಸಂಚಾಲಕರಾಗಿದ್ದ ಕಾರಣದಿಂದಲೋ ಏನೋ ನಾನು ಮೊದಮೊದಲಿಗೆ ಅವರನ್ನು ಸಂಶಯದಿಂದಲೇ ನೋಡುತ್ತಿದ್ದೆ ಮತ್ತು ಸಂಘಪರಿವಾರ ತಂತ್ರಗಳನ್ನು ಹತ್ತಿರದಿಂದ ಬಲ್ಲವರಿಗೆ ಅದು ಸಹಜವೂ ಆಗಿತ್ತು. ಅಲ್ಲದೇ ಚರ್ಚ್ ದಾಳಿ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದುದೂ ಒಂದು ಕಾರಣ. ನಂತರದಲ್ಲಿ ಅವರ ಅನೇಕ ಅಭಿಪ್ರಾಯಗಳು ನನಗೆ ಒಪ್ಪಿಗೆಯಾದವು ಮತ್ತು ಕೆಲವು ಮೆಚ್ಚಿಗೆಯೂ ಆದವು. ಅವರು ಅನೇಕ ವಿಷಯಗಳ ಬಗ್ಗೆ ಸ್ಪಷ್ಟ ಮತ್ತು ಖಚಿತ ಅಭಿಪ್ರಾಯ ಹೊಂದಿರುವುದು ಮನವರಿಕೆಯಾಯಿತು. ವಿಚಾರ ಏನೇ ಇರಲಿ, ಅದರಲ್ಲಿ ಪ್ರಾಮಾಣಿಕತೆ ಇದ್ದಾಗ ಅದು ಗೌರವಕ್ಕೆ ಪಾತ್ರವಾಗುತ್ತದೆ. ಅವರ ಮಾತುಗಳಲ್ಲಿ ಅಂತಹ ಪ್ರಾಮಾಣಿಕತೆ ಕಾಣುತ್ತಿತ್ತು.

ಬಲಪಂಥೀಯರು ಎನಿಸಿಕೊಂಡಿದ್ದ ಮಹೇಂದ್ರ ಕುಮಾರ್ ಅವರು ನಿಧಾನವಾಗಿ ಎಡಪಂಥದ ಕಡೆಗೆ ನಡಿಗೆ ಆರಂಭಿಸಿದುದರಲ್ಲಿ ನನಗೆ ಅಚ್ಚರಿಯೇನೂ ಕಾಣಿಸಿರುವುದಿಲ್ಲ. ಇಂದು ಚಿಂತಕರಾಗಿ ಹೆಸರಾಗಿರುವ ಒಂದು ತಲೆಮಾರಿನ ಬಾಲಕರನೇಕರು ಆರೆಸ್ಸೆಸ್ ವಿಷಪಾಠ ನುಂಗಿ, ನಂತರ ನಿಜ ತಿಳಿದು ಅದನ್ನು ಉಗುಳಿ ಬಂದವರು ಮತ್ತು ಇಂದು ಅದು ಪ್ರತಿಪಾದಿಸುವ ಮೇಲ್ಜಾತಿಯ ಸರ್ವಾಧಿಪತ್ಯ, ಮೇಲ್ಜಾತಿ- ವರ್ಗಗಳ ಗುಲಾಮಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಕುತಂತ್ರ, ಇಬ್ಬಗೆ ನೀತಿ ಇತ್ಯಾದಿ ಎಲ್ಲವನ್ನೂ ಸಕ್ರಿಯವಾಗಿ ವಿರೋಧಿಸುತ್ತಿರುವವರು. ಇದಕ್ಕೆ ಕಾರಣವೆಂದರೆ ಸಂಘದ ಶಾಖೆಗಳಲ್ಲಿ ಆಕರ್ಷಕ ಮತ್ತು ಪ್ರಿಯವಾದ ದೇಶಪ್ರೇಮದ ಹೆಸರಿನಲ್ಲಿ ಅಮಾಯಕ ಬಾಲಕರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಚೆನ್ನಾಗಿ ಯೋಜಿಸಲಾದ ಆಟಗಳು ಮತ್ತು ತಿರುಚಿದ ಕಟ್ಟುಕತೆಗಳಿಂದ ಮುಗ್ಧ ಮನಸ್ಸುಗಳನ್ನು ತೊಳೆದು ದ್ವೇಷದ ವಿಷ ಮತ್ತು ಗುಲಾಮಿಯ ಕೊಳಕನ್ನು ತುಂಬಿಸಿ, ಸ್ವತಂತ್ರ ಚಿಂತನೆಯನ್ನು ಕೊಂದುಬಿಡಲಾಗುತ್ತದೆ.

ನಿಜವಾಗಿಯೂ ದೇಶವನ್ನು- ಅಂದರೆ, ಅದರಲ್ಲಿರುವ ಎಲ್ಲಾ ಜನರನ್ನು ಪ್ರೀತಿಸುವವರು, ಅವರ ಈ ಸಂಘಟನೆಯ ನಿಜ ಉದ್ದೇಶವನ್ನು ಬೇಗನೇ ತಿಳಿದುಕೊಂಡು ಅದರ ಕಟ್ಟಾ ವಿರೋಧಿಗಳಾಗುತ್ತಾರೆ. ಅಂತವರು ಎಡಪಂಥೀಯ ವಿಚಾರಗಳತ್ತ ಸರಿಯುತ್ತಾರೆ. (ವೈಯಕ್ತಿಕವಾಗಿ ನಾನೂ ಹೈಸ್ಕೂಲು ಬಾಲಕನಾಗಿದ್ದಾಗ ಕಲ್ಲಡ್ಕ ಪ್ರಭಾವಕ್ಕೆ ಬಿದ್ದು ಅವರ ಅಚ್ಚು ಮೆಚ್ಚಾಗಿದ್ದೆ. ಆದರೆ, ಅವರ ಬೇಗಡೆ ದೇಶಪ್ರೇಮ ಮತ್ತು ಕ್ರೂರ ದ್ವೇಷ ಮನೋಭಾವ, ಅಪ್ರಾಮಾಣಿಕ ಠಕ್ಕುತನಗಳನ್ನು ಬೇಗನೇ ತಿಳಿದು ಹೊರಬಂದು ಎಡಪಂಥೀಯನಾದೆ.)

ಮಹೇಂದ್ರ ಕುಮಾರ್ ಅವರ ಮಾತುಗಳನ್ನು ಕೇಳಿದಾಗ, ಅವುಗಳಲ್ಲಿ ಕಾಣುವುದು ಜನಪ್ರೀತಿ. ಭಾರತದ ಬಹುತೇಕ ಜನರು ಬೇರೆಬೇರೆ ಪ್ರಮಾಣಗಳಲ್ಲಿ ಧರ್ಮ ಮತ್ತು ದೈವನಿಷ್ಟರು. ಈ ನಂಬಿಕೆಗಳನ್ನು ಬಳಸಿಕೊಂಡು ಜನರನ್ನು ವಂಚಿಸಲೂ ಸಾಧ್ಯ ಮತ್ತು ಅವರ ಕರ್ತೃತ್ವ ಶಕ್ತಿಯನ್ನು ಬಡಿದೆಬ್ಬಿಸಲೂ ಸಾಧ್ಯ. ಈ ಎರಡನೆಯ ಸಾಧ್ಯತೆ ಮಹೇಂದ್ರ ಕುಮಾರ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಸಾರಸಗಟಾಗಿ ಧರ್ಮ ದೇವರುಗಳನ್ನು ತಿರಸ್ಕರಿಸಿ, ನಿಂದಿಸಿದರೆ, ಜನರು ದೂರವಾಗುತ್ತಾರೆ ಎಂಬುದು ಸತ್ಯ.

ಮಹೇಂದ್ರ ಕುಮಾರ್ ಅವರು ತಮ್ಮ ನಿಧನದ ಹೊತ್ತಿನಲ್ಲಿ ಇಂತಹಾ ಸಮನ್ವಯರ ಸಂಧಿಕಾಲದಲ್ಲಿದ್ದರೆ?. ನನಗೆ ಅವರ ನೇರ ಪರಿಚಯ ಇರಲಿಲ್ಲವಾದರೂ, ಅವರ ನಿಧನದ ಸುದ್ದಿ ಕೇಳಿ, ಅವರ ವ್ಯಕ್ತಿತ್ವದ ಚಿತ್ರ ನನ್ನ ಕಣ್ಣಮುಂದೆ ಸುಳಿದಾಗ ನನಗೆ ತಕ್ಷಣ ನೆನಪಾದುದು ಫ್ರೀಯ್ ಬ್ರಿಟ್ಟೋ ಎಂಬ ಡೊಮಿನಿಕನ್ ಪಾದ್ರಿ ನಡೆಸಿದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ದೀರ್ಘ ಸಂದರ್ಶನದ ಪುಸ್ತಕ- “ಫಿಡೆಲ್ ಎಂಡ್ ರಿಲೀಜನ್”.  ನಾನಿದನ್ನು ಮೂರು ದಶಕಗಳ ಹಿಂದೆ ಓದಿದ್ದು, ನನ್ನ ಮೇಲೆ ಭಾರೀ ಪ್ರಭಾವ ಬೀರಿತ್ತು. ಇದು ನಿಜವಾದ ಧಾರ್ಮಿಕ ಪ್ರಜ್ಞೆ ಮತ್ತು ಸಮಾಜವಾದಿ ಮಾನವೀಯ ಪ್ರಜ್ಞೆಯ ಮುಖಾಮುಖಿಯಾಗಿತ್ತು. ಮಹೇಂದ್ರ ಕುಮಾರ್ ಅವರಿಗೂ ಫಿಡೆಲ್‌ಗೆ ಸಂಬಂಧಿಸಿದ ವಿಚಾರಗಳಿಗೂ ಏನು ಸಂಬಂಧ ಎಂದು ನಿಮಗೆ ಅಚ್ಚರಿಯಾಗಬಹಃದು. ನೀವೇ ಇದನ್ನಿಲ್ಲಿ ನೋಡಬಹುದು.

ಕೆಲವರಿಗೆ ಆಶ್ಚರ್ಯ ಆಗಬಹುದು- ಚರ್ಚ್ ಮತ್ತು ನಾಸ್ತಿಕ ಕ್ರಾಂತಿಕಾರಿಗಳು ಸಶಸ್ತ್ರ ಹೋರಾಟ ನಡೆಸಿದ ದೊಡ್ಡ ಪರಂಪರೆಯೇ ಲ್ಯಾಟಿನ್ ಅಮೇರಿಕಾದಲ್ಲಿದೆ. ಫ್ರೀಯ್ ಬ್ರಿಟ್ಟೋ ಧಾರ್ಮಿಕ ವ್ಯಕ್ತಿ; ನಾಸ್ತಿಕನಲ್ಲ. ಕ್ಯಾಸ್ಟ್ರೊ ಘೋಷಿತ ನಾಸ್ತಿಕ. ಆದರೆ, ಇಬ್ಬರೂ ಕರ್ಮಠರಲ್ಲ. ಇಬ್ಬರೂ ಸಮಾಜವಾದಿ ವಿಚಾರಗಳ ಎಡಪಂಥೀಯರು.

ಈ ಪುಸ್ತಕದಲ್ಲಿ ಒಂದು ಕಡೆ ಕ್ರಿಸ್ತನ ಪವಾಡಗಳ ಬಗ್ಗೆ ಫಿಡೆಲ್ ಅವರು ಮಾತನಾಡುತ್ತಾರೆ. ನನಗೆ ನೆನಪಿರುವಂತೆ ಅವರು ಹೇಳಿದ್ದು ಹೀಗೆ- “ಏಸು ಕ್ರಿಸ್ತ ಪವಾಡಗಳನ್ನು ಮಾಡಿದ. ಬ್ರೆಡ್ ಮತ್ತು ವೈನನ್ನು ದ್ವಿಗುಣಗೊಳಿಸಿದ, ಹೆಚ್ಚಿಸಿದ! -ಹಸಿದವರಿಗಾಗಿ. ನಾವು ಕಮ್ಯುನಿಸ್ಟರು ಕ್ರಾಂತಿಯಿಂದ ಏನು ಮಾಡುತ್ತಿದ್ದೇವೆ? ಹಸಿದವರಿಗೆ ಅಹಾರೋತ್ಪನ್ನ ಹೆಚ್ಚಿಸುವುದು, ಆಸ್ಪತ್ರೆಗಳನ್ನು ಹೆಚ್ಚಿಸುವುದು,

ಮಕ್ಕಳಿಗೆ ಶಾಲೆಗಳನ್ನು ಹೆಚ್ಚಿಸುವುದು, ದುಡಿಯುವ ಕೈಗಳಿಗೆ ಉದ್ಯೋಗ ಹೆಚ್ಚಿಸುವುದು… ಜನರ ಜೀವನ ಮಟ್ಟ ಹೆಚ್ಚಿಸುವುದು!.. ಕ್ರಿಸ್ತ ಮಾಡಿದ್ದಕ್ಕೂ, ನಾವು ಮಾಡುತ್ತಿರುವುದಕ್ಕೂ ಏನು ವ್ಯತ್ಯಾಸವಿದೆ?”

ಅಮೇರಿಕಾದ ಫ್ರುಟ್ ಇಂಡಸ್ಟ್ರಿಯ ಅಡಿಯಾಳಾಗಿದ್ದ ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯ ಹುಟ್ಟಡಗಿಸಿದ್ದ ಫಿಡೆಲ್, ಚೆ, ರೌಲ್, ಕ್ಯಾಮಿಲಿಯೊರಂತಹ ಬೆರಳೆಣಿಕೆಯ ಮತ್ತು ಆ ಕಾಲದಲ್ಲಿ ಅರೆಬೆಂದಿದ್ದ ಯುವ ಕಮ್ಯುನಿಸ್ಟರು,  ಸೈದ್ಧಾಂತಿಕತೆಯನ್ನೇ ಮುಂದುಮಾಡಿಕೊಂಡು ನಿಷ್ಕ್ರಿಯವಾಗಿದ್ದ ಕ್ಯೂಬನ್  ಕಮ್ಯುನಿಸ್ಟ್ ಪಾರ್ಟಿಯ ಕಣ್ಣೆದುರೇ ಕ್ರಾಂತಿ ಮಾಡಿದರಲ್ಲ. ಎಲ್ಲಾ ಟೀಕೆ, ವಿರೋಧಗಳ ನಡುವೆ ದೇಶ ಕಟ್ಟಿದರಲ್ಲ! ಅದು ಹೇಗೆ ಸಾಧ್ಯವಾಯಿತು? ಇಂತಹಾ ವಿಷಯಗಳಲ್ಲೇ ಮಹೇಂದ್ರ ಕುಮಾರ್ ಅಂತವರ ಸಂಘಟನಾ ಶಕ್ತಿಯ ಮಹತ್ವವಿರುವುದು.

ಅಜ್ಞಾನ, ಬಡತನ, ನಮ್ಮ ಹಿಂದೂತ್ವವಾದದಂತೆ ಇದ್ದ ಸ್ಪಾನಿಷ್ ಬ್ರಾಂಡಿನ- “ಕ್ರಿಸ್ತನನ್ನು ಮರೆತ ಕ್ರೂರ ಗುಲಾಮಿ ಕ್ರಿಶ್ಚಿಯಾನಿಟಿ”ಯ ಅಡಿಯಾಳುಗಳಾಗಿದ್ದ ಬಡಜನರಿಗೆ ನೀವು ಮೂರ್ಖರು, ಏಸುವಿನ ಪವಾಡ ಸುಳ್ಳು ಇತ್ಯಾದಿ ನಾಸ್ತಿಕ ಪ್ರವಚನ ಉದುರಿಸುತ್ತಿದ್ದರೆ, ಆ ಜನರು ಈ ಕ್ರಾಂತಿಕಾರಿಗಳನ್ನು- ಅವರ ಉದ್ದೇಶ ಎಷ್ಟೇ ಚೆನ್ನಾಗಿರಲಿ ಒದ್ದೋಡಿಸುತ್ತಿದ್ದರು. ಗ್ರ್ಯಾನ್ಮಾ ಎಂಬ ತಗಡು ಹಡಗಿನಲ್ಲಿ ಸ್ವಾತಂತ್ರ್ಯದ ಕನಸು ಹೊತ್ತು ಬಂದ ನೂರು ಚಿಲ್ಲರೆ ಯುವಕರಲ್ಲಿ ಮೊದಲ ದಾಳಿಯಲ್ಲಿ ಬದುಕುಳಿದ ಒಂದು ಡಜನ್ ಜನರು, ಒಂದು ವರ್ಷದೊಳಗೆ ಜನಸಾಗರವಾಗಿ, ಅಧಿಕಾರ ಹಿಡಿಯುತ್ತಿರಲಿಲ್ಲ.

ಜನರೇನಿದ್ದಾರೋ, ಅದೇ ಆಗಿದ್ದಾರೆ! ನಿಮ್ಮ ತತ್ತ್ವಕ್ಕಾಗಿ ಜನರಿಲ್ಲ. ಜನರಿಗಾಗಿ ನಿಮ್ಮ ತತ್ತ್ವವಿದೆ. ಸೈದ್ಧಾಂತಿಕ ಶುದ್ಧತೆ ಇರಲಿ ಬಿಡಿ, ಅಹಿಂದರು ಕೇಳುತ್ತಿರುವ ಸಮಾನತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಯುವಕರು ಅವರ ದಾರಿ ಹಿಡಿಯುತ್ತಾರೆ. ಬಹುಶಃ ಮಹೇಂದ್ರ ಕುಮಾರ್ ಇಂತದ್ದೇ ಚಿಂತನೆ ಹೊಂದಿದ್ದರು.

ನನಗೆ ಅವರ ಸಂದರ್ಭದಲ್ಲಿ ಇದೇ ವಿಷಯ ನೆನಪಿಗೆ ಬರಲು ಕಾರಣವೆಂದರೆ, ಕೆಲವು ದಿನಗಳ ಕಾಲ ನಡೆದ ಈ ದೀರ್ಘ ಸಂದರ್ಶನದ ಬಳಿಕ ನಂತರದ ದಿನಗಳಲ್ಲಿ ಬ್ರಿಟ್ಟೋ ಮತ್ತು ಕ್ಯಾಸ್ಟ್ರೊ ಹೇಳಿದ ಮಾತುಗಳು.

“ಒಂದು ದಿನ ಯಾರಾದರೂ ನನ್ನನ್ನು ನಾಸ್ತಿಕ ಕಮ್ಯುನಿಸ್ಟ್ ಆಗಿ ಮಾಡಲು ಸಾಧ್ಯವಿದ್ದರೆ, ಅದು ಫಿಡೆಲ್ ಕ್ಯಾಸ್ಟ್ರೊರಿಂದ ಮಾತ್ರ ಸಾಧ್ಯ” ಎಂದು ಫ್ರೀಯ್ ಬ್ರಿಟ್ಟೋ ಹೇಳಿದರೆ, ಫಿಡೆಲ್ ಕ್ಯಾಸ್ಟ್ರೊ ಹೇಳಿದ್ದು ಹೀಗೆ: “ಯಾರಾದರೂ ಒಂದು ದಿನ ನನ್ನನ್ನು ಆಸ್ತಿಕನಾಗಿ ಪರಿವರ್ತಿಸಿದರೆ, ಅದು ಆ ಪಾದ್ರಿ ಫ್ರೀಯ್ ಬ್ರಿಟ್ಟೋ”.

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ. ತೀರಾ ಅನಿರೀಕ್ಷಿತ ಮತ್ತು ಅಕಾಲಿಕ ಅಗಲುವಿಕೆಯ ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ಇಂತಹಾ ಚಿಂತನೆಯ ಸಂಧಿಕಾಲದಲ್ಲಿದ್ದರು ಎಂದು ನನಗನಿಸುತ್ತದೆ.


ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್‌ ಇನ್ನಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...