Homeಕರ್ನಾಟಕದಯವಿಟ್ಟು ಇದನ್ನು ಮಾಧ್ಯಮ ವೈರಸ್ ಎಂದು ಕರೆಯಬೇಡಿ. ಏಕೆಂದರೆ..

ದಯವಿಟ್ಟು ಇದನ್ನು ಮಾಧ್ಯಮ ವೈರಸ್ ಎಂದು ಕರೆಯಬೇಡಿ. ಏಕೆಂದರೆ..

- Advertisement -
- Advertisement -

ದಯವಿಟ್ಟು ಕನ್ನಡಿಗರಲ್ಲಿ ಒಂದು ಮನವಿ. ಇಡೀ ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್ ಕೊನೆಗೆ ನಮ್ಮ ಮಾಧ್ಯಮ ಮಿತ್ರರನ್ನೂ ಬಿಟ್ಟಿಲ್ಲ. ಅದಕ್ಕಾಗಿ ಕರೋನಾ ಕಂಟಕವನ್ನು ಮಾಧ್ಯಮ ಕಂಟಕ, ಮಾಧ್ಯಮ ವೈರಸ್ ಎಂದು ಕರೆಯಬೇಡಿ. ಯಾರೂ ನಮ್ಮ ಮಾಧ್ಯಮ ಮಿತ್ರರನ್ನು TV9 ವೈರಸ್ ಎನ್ನಬೇಡಿ, ಸುವರ್ಣ TV ವೈರಸ್ ಎಂದು ಹೇಳಲೇಬೇಡಿ. ಇನ್ನೂ PUBLIC TV ವೈರಸ್ ಎಂದು ಮಾತ್ರ ಮೊದಲೇ ಕರೆಯಬೇಡಿ. ಅವರನ್ನು ದಯವಿಟ್ಟು ಅವಮಾನಿಸಬೇಡಿ. ಇದು ಜಸ್ಟ್ ಒಂದು ಖಾಯಿಲೆ ಅಷ್ಟೇ…!

ಈ ಮೇಲಿನ ಸಾಲುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಬರಹ. ಅಸಲಿಗೆ ಸಾಮಾನ್ಯ ಜನ ಮಾಧ್ಯಮಗಳ ಬಗೆಗೆ ಅದೆಂತಹಾ ತಾತ್ಸಾರಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಇದೊಂದೇ ಬರಹದ ಉದಾಹರಣೆ ಸಾಕೇನೋ?. ಆದರೆ, ಮಾಧ್ಯಮಗಳು ಇಂತಹ ತಾತ್ಸಾರಕ್ಕೆ ಒಳಗಾಗಲು ಇತ್ತೀಚೆಗಿನ ಅವರ ನಡೆಯೇ ಕಾರಣ ಎಂದರೂ ತಪ್ಪಾಗಲಾರದು.

ಯಾವ ಮಾಧ್ಯಗಳು ಸತತವಾಗಿ ತಬ್ಲಿಘಿ ವೈರಸ್ ಜಿಹಾದ್, ನಂಜನಗೂಡಿನ ನಂಜು, ಪಾದರಾಯಪುರ ಪುಂಡರು, ಬಿಹಾರಿ ವೈರಸ್ ಕಂಟಕ ಎಂದು ಸರಣಿ ಸುದ್ದಿ ಮಾಡಿದ್ದವೋ? ಆಂಕರ್‍ಗಳು ತಾವೇ ನ್ಯಾಯಾಧೀಶರಂತೆ ವರ್ತಿಸುತ್ತಾ ಅರಚಾಡಿ-ಕಿರುಚಾಡಿ ಸಮಾಜದಲ್ಲಿ ಅಶಾಂತಿಗೆ ಕಾರಣರಾದರೋ? ಅದೇ ಸುದ್ದಿಗಳು ಇಂದು ಅವೇ ಸುದ್ದಿ ಮಾಧ್ಯಮಗಳಿಗೆ ಕಂಟಕವಾಗಿ ಪರಿಮಿಸಿರುವುದು ಮಾತ್ರ ವಿಪರ್ಯಾಸ.

ವೈರಸ್ ಪೀಡಿತರನ್ನು ಸಾಮಾಜಿಕ ಕಳಂಕಿತರಂತೆ ಬಿಂಬಿಸಿದ್ದ ಮಾಧ್ಯಮಗಳು

ಅಸಲಿಗೆ ಕೊರೋನಾ ವೈರಸ್ ಕಳೆದ ಡಿಸೆಂಬರ್ ತಿಂಗಳಲ್ಲೇ ಚೀನಾ ದೇಶದಲ್ಲಿ ಗದ್ದಲ ಎಬ್ಬಿಸಿತ್ತು. ಜನವರಿ ವೇಳೆಗೆ ಸಾಲು ಸಾಲು ಹೆಣ ಬೀಳಿಸಿತ್ತು. ಅಲ್ಲಿಂದಲೇ ಇಟಲಿಗೂ ವ್ಯಾಪಿಸಿದ್ದ ಕೊರೋನಾ, ಜನವರಿ ಅಂತ್ಯದ ವೇಳೆಗೆ 2,300 ಕ್ಕೂ ಅಧಿಕ ಸಾವಿಗೆ ಕಾರಣವಾಗಿತ್ತು. ಆಗಲೇ ಹಲವಾರು ತಜ್ಞರು ಮತ್ತು ವಿಜ್ಞಾನಿಗಳು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಈ ವೈರಸ್ ಭಾರತಕ್ಕೂ ಕಂಟಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು..

ಆದರೆ, ಕೇಂದ್ರ ಸರ್ಕಾರ ಆ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಮೊಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆಯಲ್ಲಿ ಬ್ಯುಸಿ ಆಗಿತ್ತು. ಮಾಧ್ಯಮಗಳೂ ಈ ಸುದ್ದಿ ಕವರೇಜ್‍ನಲ್ಲಿ ಬ್ಯುಸಿ ಆಗಿದ್ದವು. ಈ ಕಾರ್ಯಕ್ರಮದ ನಂತರ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಎಂದಿನಂತೆ ಮತ್ತೆ ಬ್ಯುಸಿ ಆದವು. ಆದರೆ, ಕೊರೋನಾ ಕುರಿತು ಯಾರೂ ಎಚ್ಚರಿಕೆ ವಹಿಸಲೇ ಇಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳಲೇ ಇಲ್ಲ.

ಕೊರೋನಾ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಜನವರಿಯಿಂದಲೂ ಇಡೀ ವಿಶ್ವವನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದವು. ದಿ ಡಾನ್, ಟೆಲಿಗ್ರಾಪ್, ಅಲ್ ಜಜೀರಾದಂತಹ ಮಾಧ್ಯಮಗಳು ಸಾಲು ಸಾಲು ವರದಿ ಮಾಡಿದವು. ಪರಿಣಾಮ ಚೀನಾದ ಮಗ್ಗುಲಲ್ಲೆ ಇರುವ ತೈವಾನ್ ಎಂಬ ಪುಟ್ಟ ದ್ವೀಪ ರಾಷ್ಟ್ರ ತನ್ನ ನೆಲಕ್ಕೆ ಕೊರೋನಾ ಕಾಲಿಡದಂತೆ ಎಚ್ಚರಿಕೆ ವಹಿಸಿತ್ತು. WHO ಕರೋನಾ ವೈರಸ್ ಅನ್ನು ಮಹಾಮಾರಿ ಅಂತ ಘೋಷಿಸಿದ್ದರು ಸಹಿತ ಮೋದಿ ಸರಕಾರ ಕ್ಯಾರೆ ಅನ್ನಲಿಲ್ಲ..

ಇದೇರೀತಿ ಭಾರತದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳು ಸಹ ಈ ಕುರಿತು ವರದಿ ಪ್ರಕಟಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬಹುದಿತ್ತು. ತಮ್ಮ ಮಾಧ್ಯಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬಹುದಿತ್ತು. ಆದರೆ, ಇಂತಹ ಕೆಲಸಗಳಿಗೆ ನಮ್ಮ ಮಾಧ್ಯಮಗಳು ಸುತಾರಾಂ ಮುಂದಾಗಲೇ ಇಲ್ಲ.

ಇದೇ ಕೊರೋನಾ ವೈರಸ್ ಭಾರತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದ ನಂತರ ಮಾತ್ರ ಮಾಧ್ಯಮಗಳು ಈ ಕುರಿತು ಸಾಲು ಸಾಲು ವರದಿ ಮಾಡಿದವು. ಆಕರ್ಷಕ ಶೀರ್ಷಿಕೆಗಳನ್ನು ನೀಡುವ ಮೂಲಕ ಸುದ್ದಿಯನ್ನು ಅತಿರಂಜಕವಾಗಿಸಿದವು. ತಬ್ಲಿಘಿ ಜಿಹಾದ್, ನಂಜನಗೂಡಿನ ನಂಜು, ಪಾದರಾಯಪುರ ಪುಂಡರು, ಬಿಹಾರಿ ವೈರಸ್ ಕಂಟಕ ಎಂದರು. ಅಬ್ಬಬ್ಬಾ ಮಾಧ್ಯಮಗಳ ಕ್ರೀಯಾಶೀಲ ಶೀರ್ಷಿಕೆಗಳ ಆರ್ಭಟ ಒಂದೇ ಎರಡೇ.

ಇಷ್ಟೇ ಆಗಿದ್ದರೂ ಸಮಸ್ಯೆ ಇರಲಿಲ್ಲ. ಆದರೆ, ಕೆಲವು ಮಾಧ್ಯಮದ ಮುಖ್ಯಸ್ಥರೇ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದರು. ಲಾಕ್ಡೌನ್ ನಿಯಮಗಳನ್ನು ಮುರಿದು ಮನೆಯಿಂದ ಹೊರಬರುವವರನ್ನು ಕ್ರಿಮಿನಲ್‍ಗಳ ರೀತಿಯಲ್ಲಿ ಬಿಂಬಿಸಿದ್ದರು. ಮನೆಯಿಂದ ಹೀಗೆ ಹೊರಬರುವ ಬದಲು ಆತ್ಮಹತ್ಯೆ ಮಾಡಿಕೊಳ್ಳಿ, ಇಂತವರನ್ನು ಗುಂಡಿಟ್ಟು ಕೊಲ್ಲಿ ಎಂದು ಪ್ರೇರೇಪಿಸಿದ್ದರು. ಈ ಮೂಲಕ ಕೊರೋನಾ ವೈರಸ್ ಪೀಡಿತರು ಸಾಮಾಜಕ್ಕೆ ಕಳಂಕ ಎಂಬಂತೆ ಬಿಂಬಿಸುವ ಕೆಲಸ ವ್ಯಾಪಕವಾಗಿ ನಡೆದಿತ್ತು.

ಕೊರೋನಾ ವೈರಸ್ ಅನ್ನು ಸಾಮಾಜಿಕ ಕಳಂಕ ಎಂದು ಬಿಂಬಿಸಿದರಿಂದಲೇ ಸಮಾಜದಲ್ಲಿ ವೈರಸ್ ಪೀಡಿತರು ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ತಮಗೆ ವೈರಸ್ ತಗುಲಿರುವುದು ಗೊತ್ತಾದರೆ ನಮ್ಮನ್ನು ನೋಡುವ ರೀತಿ ಬದಲಾಗುತ್ತದೆ. 14 ದಿನ ಏಕಾಂತಗೊಳಿಸಲಾಗುತ್ತದೆ ಎಂಬ ಭಯದಿಂದಲೇ ಯಾರೂ ಪರೀಕ್ಷೆಗೆ, ಕ್ವಾರಂಟೈನ್‍ಗೆ ಮುಂದಾಗುತ್ತಿಲ್ಲ. ಎಲ್ಲರೂ ಖಾಯಿಲೆ ಉಲ್ಭಣವಾದ ನಂತರ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರನ್ನು ಬದುಕಿಸುವುದೂ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದಾರೆ ನುರಿತ ವೈದ್ಯರು. ಆದರೆ, ಮಾಧ್ಯಮಗಳು ಮಾತ್ರ ಎಂದಿನಂತೆ ಕೊರೋನಾ ಪೀಡಿತರನ್ನು ಸಾಮಾಜಿಕ ಕಳಂಕ ಎಂದು ಬಿಂಬಿಸುವುದರಲ್ಲೇ ನಿರತವಾಗಿತ್ತು.

ಒಂದು ಹಂತದಲ್ಲಿ ಭಾರತದಲ್ಲಿ ಕೊರೋನಾ ಹುಟ್ಟಿಸಿದ್ದ ಭೀತಿಗಿಂತ ಮಾಧ್ಯಮಗಳು ಹುಟ್ಟಿಸಿದ್ದ ಭೀತಿಗೆ ಜನ ಭಯಭೀತರಾಗಿದ್ದರು ಎಂದರೆ ತಪ್ಪಾಗಲಾರದು.

ಆದರೆ, ಯಾವ ಕೊರೋನಾವನ್ನು ಮಾಧ್ಯಮಗಳು ಕೆಲವು ಜಾತಿ, ಧರ್ಮ, ಪ್ರದೇಶಗಳಿಗೆ ಆರೋಪಿಸಿ ವೈಭವೀಕರಿಸಿ ಸುದ್ದಿ ಬಿತ್ತರಿಸಿತ್ತೋ? ಇವರೆಲ್ಲರೂ ಸಮಾಜಕ್ಕೆ ಕಳಂಕಿತರು ಎಂಬ ಅಭಿಪ್ರಾಯ ರೂಪಿಸಿತ್ತೋ? ಇಂದು ತಾನು ಸೃಷ್ಟಿಸಿದ ಅದೇ ಜೇಡರ ಬಲೆಯಲ್ಲಿ ಮಾಧ್ಯಮಗಳು ಸಿಲುಕಿವೆ. ಪರಿಣಾಮ ಈ ಹಿಂದೆ ಜೋರು ಶಬ್ಧದಲ್ಲಿ ಅಬ್ಬರಿಸುತ್ತಿದ್ದ ದ್ವನಿಗಳು ಇಂದು ಹುಡುಗಿ ಹೋಗಿವೆ.

ಮೀಡಿಯಾ ಕಂಟಕ

ಅಸಲಿಗೆ ಕೊರೋನಾ ಭೀತಿ ಭಾರತದಲ್ಲಿ ಆರಂಭವಾದ ದಿನದಿಂದಲೂ ಮಾಧ್ಯಮದವರು ಎಲ್ಲೆಡೆ ಓಡಾಡಿ ಕೆಲಸ ಮಾಡಿದ್ದಾರೆ. ತಮ್ಮ ತಮ್ಮ ಸಂಸ್ಥೆಗಳಿಗಾಗಿ ದುಡಿದಿದ್ದಾರೆ. ಹೀಗಾಗಿ ಮಾಧ್ಯಮದವರಿಗೂ ಏಕೆ ಕೊರೋನಾ ಪರೀಕ್ಷೆ ನಡೆಸಬಾರದು? ಎಂಬ ವಾದವೊಂದು ಮುನ್ನೆಲೆಗೆ ಬರುತ್ತಿದ್ದಂತೆ ಮೊದಲ ಪರೀಕ್ಷೆಗೊಳಗಾದದ್ದೆ ಮುಂಬೈ ಪತ್ರಕರ್ತರು.

ಕಳೆದ ವಾರ ಮುಂಬೈ ಪತ್ರಕರ್ತರನ್ನು ಪರೀಕ್ಷೆ ಮಾಡಲಾಗಿ ಸುಮಾರು 51 ಜನರಲ್ಲಿ ಈ ಸೋಂಕು ಇರುವುದು ಪತ್ತೆಯಾಗಿತ್ತು. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಇಡೀ ಭಾರತದ ಪತ್ರಿಕೋದ್ಯಮ ಬೆಚ್ಚಿ ಬಿದ್ದಿತ್ತು.

ಮಹಾರಾಷ್ಟ್ರದ ನಂತರದ ಕರ್ನಾಟಕದಲ್ಲೂ ಪತ್ರಕರ್ತರಿಗೆ ಉಚಿತವಾಗಿ ಏಪ್ರಿಲ್ 24ರಂದು ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ಕ್ಯಾಮೆರಾ ಜರ್ನಲಿಸ್ಟ್ ಒಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಪರಿಣಾಮ ಅವರ ಜೊತೆಗೆ ಸಂಪರ್ಕ ಹೊಂದಿದ್ದ ವಿವಿಧ ಸುದ್ದಿ ಸಂಸ್ಥೆಗಳ ಸುಮಾರು 35 ಜನ ಪತ್ರಕರ್ತರನ್ನು ಒಂದು ಖಾಸಗಿ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಅಸಲಿಗೆ ಕರ್ನಾಟಕದಲ್ಲಿ ಕೊರೋನಾ ಕರಿಛಾಯೆ ಆವರಿಸಿದ್ದ ಸಂದರ್ಭದಲ್ಲೇ ಹಲವು ಸುದ್ದಿ ಮಾಧ್ಯಮಗಳ ಪತ್ರಕರ್ತರು ವರದಿಗಾರರು ತಾವು ಕಚೇರಿಯಿಂದ ಹೊರಹೋಗಿ ಸುದ್ದಿ ಮಾಡಲು ಭಯ ವ್ಯಕ್ತಪಡಿಸಿದ್ದಾರೆ. ಆದರೆ, ಸುದ್ದಿ ಮಾಧ್ಯಮ ಸಂಸ್ಥೆಗಳು ಮಾತ್ರ ರಸ್ತೆಗೆ ಇಳಿದು ಕೆಲಸ ಮಾಡಿ ಇಲ್ಲವೇ ಕೆಲಸ ಬಿಡಿ ಎಂಬ ಅಮಾನವೀಯ ಆಯ್ಕೆಯನ್ನು ಮುಂದಿಟ್ಟಿವೆ. ಸ್ವಾಭಾವಿಕವಾಗಿ ಕೆಲಸದ ಅನಿಶ್ಚಿತತೆಯ ನಡುವೆಯೇ ಬದುಕುತ್ತಿರುವ ಪತ್ರಕರೂ ಸಹ ಬೇರೆ ದಾರಿ ಕಾಣದೆ ರಸ್ತೆಗಿಳಿದಿದ್ದಾರೆ. ಪರಿಣಾಮ ಇಂದು ಮಾರಣಾಂತಿಕ ಖಾಯಿಲೆಗೆ ಅವರು ಒಳಗಾಗಿದ್ದಾರೆ.

ಭಾರತದಲ್ಲಿ ಕೊರೋನಾ ಹರಡುತ್ತಿದ್ದಂತೆ ಒಂದು ಜಾತಿ, ಧರ್ಮ ಪ್ರದೇಶದ ಜನರಿಗೆ ಆರೋಪಿಸಿ ಸುದ್ದಿ ಮಾಡಿದ್ದ ಕನ್ನಡ ಮಾಧ್ಯಮಗಳು ಮಾತ್ರ ಪ್ರಸ್ತುತ ತಮ್ಮ ಸಂಸ್ಥೆಯ ಒಳಗೇ ಹೆಡೆ ಎತ್ತಿರುವ ಕೊರೋನಾ ಭೀತಿಯ ಕುರಿತು ಈವರೆಗೆ ಸುದ್ದಿ ಮಾಡಲೇ ಇಲ್ಲ. ತಮ್ಮ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುವ ಭೀತಿ ಒಡ್ಡಿಯೇ ಕೆಲಸಕ್ಕೆಂದು ರಸ್ತೆಗೆ ಇಳಿಸಲಾಯಿತು ಎಂದು ಅವರು ಅಪ್ಪಿತಪ್ಪಿಯೂ ಒಪ್ಪಿಕೊಳ್ಳುತ್ತಿಲ್ಲ.

ಇದರ ಜೊತೆಗೆ ಜಿಲ್ಲಾ ವರದಿಗಾರರಿಗೆ ಯಾವುದೇ ಕಾರಣಕ್ಕು ಕರೋನಾ ಟೆಸ್ಟ್ ಮಾಡಿಸಿಕೊಳ್ಳಬೇಡಿ ಎಂದು ಚಾನಲ್‍ನ ಎಸಿ ರೂಂ ನಲ್ಲಿ ಕುಳಿತು ಕೆಲಸ ಮಾಡುವವರು ಫರ್ಮಾನು ಹೊರಡಿಸಿದ್ದಾರೆ, ಆದರೆ ಈ ವಿಷಯವನ್ನು ಪಬ್ಲಿಕ್ ಆಗಿ ಹೇಳುತ್ತಿಲ್ಲ, ಇದು ಪತ್ರಕರ್ತರಿಗೆ ಸುವರ್ಣ ಕಾಲವಂತು ಅಲ್ಲ, ಹಗಲಿರಳೆನ್ನದೆ ಜನರ ಮಧ್ಯ ದುಡಿಯುತ್ತಿರುವ ವರದಿಗಾರರ ಬಗ್ಗೆ ಚಾನಲ್ ಮುಖ್ಯಸ್ಥರ ಸದಭಿಪ್ರಾಯ,,, ಇದಕ್ಕೆ ಯಾವ ವಾಹಿನಿಯು ಹೊರತಲ್ಲ..

ಅದಿರಲಿ ಇಷ್ಟು ದಿನ ಕೊರೋನಾವನ್ನು ಸಾಮಾಜಿಕ ಕಳಂಕ ಎಂದು ಟಿವಿ ಪರದೆಯ ಮುಂದೆ ಅಬ್ಬರಿಸುತ್ತಿದ್ದವರು, ಆತ್ಮಹತ್ಯೆ ಮಾಡಿಕೊಳ್ಳಿ, ಇಂತವರನ್ನು ಗುಂಡಿಕ್ಕಿ ಕೊಲ್ಲಿ ಎಂದು ದೊಡ್ಡ ದ್ವನಿಯಲ್ಲಿ ಪ್ರೇರೇಪಿಸುತ್ತಿದ್ದವರು ಇಂದು ತಣ್ಣಗಾಗಿದ್ದಾರೆ. ದ್ವನಿ ಅಡಗಿಹೋಗಿದೆ. ಅಷ್ಟೇ ಅಲ್ಲ ಈ ಸೋಂಕನ್ನು ದಯವಿಟ್ಟು tigmatize ಮಾಡಬೇಡಿ. ಇದು ಎಲ್ಲರಿಗೂ ಬರುವ ಸಾಮಾನ್ಯ ಸೋಂಕು ಎಂದು ಹೇಳುವ ಮಟ್ಟಕ್ಕೆ ಬಂದಿದ್ದಾರೆ.

ಆದರೆ, ಮುಖ್ಯವಾಹಿನಿ ಮಾಧ್ಯಮಗಳಿಂದ ಮರೆಮಾಚಲಾದ ಈ ಸುದ್ದಿಗಳಿಗೆ ಸಾಮಾಜಿಕ ಮಾಧ್ಯಮಗಳು ಸ್ಥಾನ ಕಲ್ಪಿಸಿವೆ. ಮಾಧ್ಯಮ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ಹರಡಿರುವ ಸುದ್ದಿ ಕಳೆದ ಮೂರು-ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಮತ್ತು ನಗೆ ಪಾಟಲಿಗೆ ಒಳಗಾಗುತ್ತಿದೆ. ಅಲ್ಲದೆ, ಆರಂಭದಲ್ಲಿ ಮಾಧ್ಯಮಗಳು ಈ ಸೋಕನ್ನು ಬಿಹಾರಿ ಕಂಟಕ, ನಂಜನಗೂಡು ನಂಜು, ತಬ್ಲಿಘಿ ಜಿಹಾದ್ ವೈರಸ್ ಎಂದು ಹೀಯಾಳಿಸಿತ್ತು. ಹೀಗಾಗಿ ನಾವೇಕೆ ಈಗ TV9 ವೈರಸ್, ಸುವರ್ಣ TV ವೈರಸ್, ಪಬ್ಲಿಕ್ TV ವೈರಸ್ ಎಂದು ಕರೆಯಬಾರದು ಎಂದು ಹಲವರು ಪ್ರಶ್ನೆ ಎಬ್ಬಿಸುತ್ತಿದ್ದಾರೆ.

ಆದರೆ, ಮಾಧ್ಯಮದವರು ಕೆಲವು ಸಂದರ್ಭದಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದ ಮಾತ್ರಕ್ಕೆ ಜನ ಸಾಮಾನ್ಯರೂ ಸಹ ಹಾಗೆ ವರ್ತಿಸಬೇಕು ಎಂದೇನಿಲ್ಲ. ಅವರು ತಬ್ಲಿಘಿಗಳೇ ಇರಲಿ, ಬಿಹಾರಿಗಳೇ ಇರಲಿ ಅಥವಾ ಮಾಧ್ಯಮದವರೇ ಇರಲಿ ಯಾರೂ ಬೇಕೆಂದು ಈ ಸೋಂಕಿಗೆ ಒಳಗಾಗಿರುವುದಿಲ್ಲ. ಅಲ್ಲದೆ, ಎಲ್ಲಾ ಸೋಂಕಿತರನ್ನೂ ಪ್ರೀತಿಯಿಂದ ಕಾಣಬೇಕಾದದ್ದು ಮತ್ತು ಅವರು ಶೀಘ್ರ ಗುಣಮುಖರಾಗಲು ಶ್ರಮಿಸಬೇಕಾದದ್ದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಆದ್ಯ ಕರ್ತವ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಇದು “ಮಾಧ್ಯಮ ವೈರಸ್” ಎಂದು ಮಾತ್ರ ಯಾರೂ ಕರೆಯದಿರಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Don’t justify TV media it is not just virus, virus attack can be cured call these people as AIDS, Cancer and call some TV media’s has pimp ‘s of ruling party,
    these people will go to any extent just for money, people use to call fourth piller of Democracy those days, these people are shame in democracy.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...