Homeಮುಖಪುಟʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ.

- Advertisement -
- Advertisement -

ಈಗ ವಿವಾದಕ್ಕೆ ಗುರಿಯಾಗಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲ ಕಾಯ್ದೆಗೆ ಒಂದು ದೊಡ್ಡ ಇತಿಹಾಸವೇ ಇದೆ. ಗೇಣಿದಾರರ ಪರವಾಗಿ ಆರಂಭವಾದ ಹೋರಾಟವು ನಂತರದ ದಿನಗಳಲ್ಲಿ ರೈತರ ಭೂಮಿಯು ಉಳ್ಳವರ ಪಾಲಾಗದಂತೆ ತಡೆಯುವ ಕಾಯ್ದೆಯವರೆಗೆ ವಿವಿಧ ಘಟ್ಟಗಳಲ್ಲಿ ಹಾದು ಬಂದಿತು. ಗೇಣಿದಾರರ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾಗರದ ಕಾಗೋಡು ತಿಮ್ಮಪ್ಪನವರು ನಂತರ ಕಾಯ್ದೆಯು ಜಾರಿಗೆ ಬರುವ ಹೊತ್ತಿಗೆ ಶಾಸಕರಾಗಿದ್ದರು. ಹಾಗಾಗಿ ಕಾಯ್ದೆ ತಿದ್ದುಪಡಿಯಾಗುತ್ತಿರುವ ಹೊತ್ತಿನಲ್ಲಿ ಅವರನ್ನೇ ಮಾತಾಡಿಸುವುದು ಸೂಕ್ತವಾಗಿದ್ದುದರಿಂದ, ಸಾಗರದ ಜನಪರ ಹೋರಾಟಗಾರ, ಪತ್ರಕರ್ತ ಕಬಸೆ ಅಶೋಕ ಮೂರ್ತಿಯವರು ನ್ಯಾಯಪಥಕ್ಕಾಗಿ ಕಾಗೋಡು ತಿಮ್ಮಪ್ಪನವರನ್ನು ಸಂದರ್ಶಿಸಿದ್ದಾರೆ.

ಪ್ರಶ್ನೆ: ಭೂ ಸುಧಾರಣಾ ಕಾಯ್ದೆಗೆ ಈಗಿನ ಸರ್ಕಾರ ತರಲಿರುವ ತಿದ್ದುಪಡಿ ಸಣ್ಣ ತಿದ್ದುಪಡಿಯೇ ಅಥವಾ ಭೂ ಸುಧಾರಣಾ ಕಾನೂನನ್ನೇ ಕಿತ್ತು ಹಾಕುವ ಪ್ರಮಾಣದ್ದಾ?

ಉ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಮಸೂದೆ ಮಂಡಿಸಿಲ್ಲ. ಆದರೂ ಇವರ ಯೋಚನೆ ಶ್ರೀಮಂತರು, ವ್ಯಾಪಾರಸ್ಥರು ಹಣವಂತರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಕೂಡಿದೆ.

ಪ್ರಶ್ನೆ: ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು, ವಿರೋಧಕ್ಕೆ ವಿರೋಧ ಮಾಡಬಾರದು ಅಂತ ಈಗಿನ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರಲ್ಲ ಇದರ ಕುರಿತು ನಿಮ್ಮ ಅನಿಸಿಕೆ?

ಉ. ದೇವರಾಜ ಅರಸು ಕಾಲದಲ್ಲಿ ತಂದ ತಿದ್ದುಪಡಿಯಿಂದ ಗೇಣಿ ರೈತರಿಗೆ ಶೇ.100 ಅನುಕೂಲ ಆಗಿತ್ತು. ಹಿಡುವಳಿ ದೃಷ್ಟಿಯಿಂದ ಸಮಾಜವಾದಿಗಳ ಆಲೋಚನೆ ಈಡೇರಿಲ್ಲ. ಒಬ್ಬರಿಗೆ 50 ಎಕರೆ ಮಿತಿ ಎಂದು ಯೋಚಿಸಿ ಒಂದು ಕುಟುಂಬದಲ್ಲಿ 3 ಜನ ಇದ್ದರೆ 150 ಎಕರೆ ಜಮೀನು ಬರುತ್ತಿತ್ತು. ಅದು ಸರಿಯಲ್ಲವೆಂದು ಆ ಸಮಿತಿಯಲ್ಲಿದ್ದ ನಾನೂ ಸೇರಿದಂತೆ ಎಲ್ಲರೂ ವಿರೋಧಿಸಿದ್ದೆವು. ಹಿಡುವಳಿ ದೃಷ್ಟಿಯಿಂದ ಅರಸುರವರು ನಮ್ಮ ಸಲಹೆ ಒಪ್ಪಲಿಲ್ಲ. ಆದರೆ ಗೇಣಿ ರೈತರ ದೃಷ್ಟಿಯಿಂದ ನಮ್ಮ ಸಲಹೆ ಒಪ್ಪಿದ್ದರು. ಈಗಿನ ಸರ್ಕಾರದ ಉದ್ದೇಶ ಗೊತ್ತಾಗಿಲ್ಲ. ಮೇಲ್ನೋಟಕ್ಕೆ ಕಂಡುಬರುವುದೇನೆಂದರೇ, ಬಂಡವಾಳಶಾಹಿಗಳಿಗೆ ಹಣವಂತರಿಗೆ, ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ಉದ್ದೇಶ ಕಂಡುಬರುತ್ತಿದೆ. ಸರ್ಕಾರ ತನ್ನ ನಿರ್ದಿಷ್ಟ ಉದ್ದೇಶ ಖಚಿತಪಡಿಸುವವರೆಗೆ ವಿರೋಧಿಸುವುದು ಕಷ್ಟ. ಈ ಕಾನೂನಿಗೆ ತಿದ್ದುಪಡಿತರಲು ಹೊರಟಿರುವವರು ಗೇಣಿಶಾಸನ ಜಾರಿಗೆ ಬರುವ ಸಂದರ್ಭದಲ್ಲಿ ಗೇಣಿ ಶಾಸನ ಜಾರಿಗೆ ಬರುವಾಗ ಯಾವುದೇ ಸಲಹೆ ಸಹಕಾರ ನೀಡಿರಲಿಲ್ಲ. ಆಗ ಇವರುಗಳು ಗೇಣಿದಾರರ ವಿರೋಧಿಯಾಗಿದ್ದರು.

ಪ್ರಶ್ನೆ: ಈ ಕಾಯ್ದೆ ಬಂದು ಮೂರುವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. ಹಾಗಾದರೆ ಏನೂ ಬದಲಾವಣೆ ಬೇಕಿರಲಿಲ್ಲವಾ?

ಉ. ಭೂಸುಧಾರಣೆ ಕಾನೂನು ಜಾರಿಗೆ ಬಂದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಹತ್ತಾರು ವರ್ಷಗಳಿಂದ ಗೇಣಿದಾರರಾಗಿದ್ದವರು ಭೂ ಮಾಲೀಕರಾಗಿದ್ದಾರೆ. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಶ್ನೆ: ದಕ್ಷಿಣ ಭಾರತದ ಉಳಿದ ರಾಜ್ಯಗಳು ಸೇರಿದಂತೆ ಹಲವಾರು ಕಡೆ ಇರದೇ ಇದ್ದ ನಿರ್ಬಂಧಗಳನ್ನು ಕರ್ನಾಟಕದಲ್ಲಿ ಹಾಕಲಾಗಿತ್ತು; ಅದನ್ನಷ್ಟೇ ತೆಗೆದಿದೆ ಎಂದು ಹೇಳುತ್ತಾರೆ. ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಉ. ವಾಸ್ತವವಾಗಿ ಕರ್ನಾಟಕದಲ್ಲಿ ಬಂದಷ್ಟು ಪರಿಣಾಮಕಾರಿಯಾಗಿ ಭೂ ಸುಧಾರಣಾ ಕಾನೂನು ಭಾರತದ ಯಾವ ರಾಜ್ಯದಲ್ಲಿಯೂ ಬಂದಿಲ್ಲ; ಇವರಿಗೆ ಸುಧಾರಣೆ ತರಬೇಕೆಂದು ಅನ್ನಿಸಿದ್ದರೆ, ಈಗ ಅತ್ಯಧಿಕ ಭೂಮಿ ಹೊಂದಿದವರಿಂದ ಭೂಮಿಯನ್ನು ಕಿತ್ತುಕೊಂಡು ಭೂ ರಹಿತರಿಗೆ ಹಂಚುವ ಕೆಲಸ ಮಾಡಬೇಕಿತ್ತು.

ಪ್ರಶ್ನೆ: ನಾವು ತಿದ್ದುಪಡಿ ಮಾಡದಿದ್ದರೂ ಎಸಿ.ಗಳಿಗೆ ದುಡ್ಡುಕೊಟ್ಟು ಭೂಮಿ ಕೊಂಡುಕೊಳ್ಳುವುದು ನಡೆಯುತ್ತಲೇ ಇತ್ತು. ಅದನ್ನು ಈಗ ಕಾನೂನು ಬದ್ಧಗೊಳಿಸಿದ್ದೇವೆ ಎಂಬದು ಸರ್ಕಾರದ ಇನ್ನೊಂದು ಸಮಜಾಯಿಷಿ. ಇದಕ್ಕೇನು ಹೇಳುತ್ತೀರಿ?

ಉ. ಭೂ ನ್ಯಾಯ ಮಂಡಳಿಯಲ್ಲಿ ಎ.ಸಿ.ಯವರು ಅಧ್ಯಕ್ಷರಾಗಿರುತ್ತಾರೆ. ಶಾಸಕರು ಆ ಸಮಿತಿಯಲ್ಲಿರುತ್ತಾರೆ. ಅಂತಹಾ ಅವ್ಯವಹಾರ ಕಂಡು ಬಂದರೆ ಸರಿಯಾದ ತನಿಖೆ ನಡೆಸಿ ಅಂತಹವರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡಲಿ.

ಪ್ರಶ್ನೆ: ಎ.ಪಿ.ಎಂ.ಸಿ. ಕಾಯ್ದೆಗೆ ತಂದ ತಿದ್ದುಪಡಿಯು ಗುತ್ತಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿಯಾಗಿದೆಯೆಂದು ಹೇಳಲಾಗುತ್ತದೆ. ಇವೆಲ್ಲವೂ ಭಾರತದ/ ಕರ್ನಾಟಕದ ಕೃಷಿ ಕ್ಷೇತ್ರ ಉಂಟು ಮಾಡುವ ಪರಿಣಾಮಗಳೇನು?

ಉ. ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ. ಭೂ ಹಿಡುವಳಿ ಹೊಂದಿದವರು ಹೆಚ್ಚಿನ ಹಣದಾಸೆಗಾಗಿ ಭೂಮಿ ಮಾರಿಕೊಂಡು ಭೂ ರಹಿತರಾಗುತ್ತಾರೆ, ಹಣವಂತರು, ಕೈಗಾರಿಕೋದ್ಯಮಿಗಳ ಕೈಗೆ ಕೃಷಿ ಭೂಮಿ ಹೋಗುತ್ತದೆ, ಸಮಾಜದಲ್ಲಿ ಮತ್ತೆ ಅಸಮಾನತೆ ಮೂಡುತ್ತದೆ.

ಪ್ರಶ್ನೆ: ಯಡಿಯೂರಪ್ಪನವರೂ ರೈತರ ಪರ ಕೆಲವು ಹೋರಾಟಗಳನ್ನು ನಡೆಸಿದವರು, ಇದೇ ಜಿಲ್ಲೆಯವರು. ಅವರೇಕೆ ಇಂತಹ ತೀರ್ಮಾನಗಳಿಗೆ ಮುಂದಾಗುತ್ತಿದ್ದಾರೆ?

ಉ. ಯಡಿಯೂರಪ್ಪನವರು ಯಾವ ಹೋರಾಟ ಮಾಡಿದ್ದಾರೆ?

ಪ್ರಶ್ನೆ: ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದ್ದಾರೆ. ಆದರೆ ಈ ರೀತಿ ಹೇಳಿಕೆಗಳನ್ನಷ್ಟೇ ನೀಡಿ ಸುಮ್ಮನಾಗಿ ಬಿಟ್ಟರೆ ಸಾಕೇ? ಕಾಂಗ್ರೆಸ್ ಇನ್ನೂ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಲ್ಲವೇ?

ಉ. ಡಿ.ಕೆ.ಶಿವಕುಮಾರ್‌ರವರು ಈಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಂಡು ಭೂ ಸುಧಾರಣೆ ತಿದ್ದುಪಡಿಯ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡುತ್ತದೆ.

ಪ್ರಶ್ನೆ: ಗೇಣಿದಾರರ ಪರವಾಗಿ ಹೋರಾಟ ಮಾಡಿದ ನೀವು ಈ ಸಂದರ್ಭದಲ್ಲಿ ಏನು ಮಾಡುತ್ತೀರಿ ಸುಮ್ಮನಿರುವುದು ಸರಿಯೇ?

ಭೂ ಸುಧಾರಣಾ ತಿದ್ದುಪಡಿಯ ಬಗ್ಗೆ ನನ್ನ ವಿರೋಧ ಇದ್ದೇ ಇದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಪ್ರಶ್ನೆ: ಭೂಮಿಯನ್ನು ಪಡೆದು ಉಳುಮೆ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಈ ಕಾನೂನಿನಿಂದ ಅನುಕೂಲವಾಗುತ್ತದಲ್ಲವೇ?

ಉ. ಭೂಮಿ ಹೊಂದಿ ಕೃಷಿ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಭೂಮಿ ನೀಡುವ ಅಭಿಲಾಷೆ ಸರ್ಕಾರಕ್ಕಿದ್ದರೆ ಭೂ ತಿದ್ದುಪಡಿಯನ್ನು ಮಾಡುವ ಅಗತ್ಯವಿಲ್ಲ. ಸರ್ಕಾರದ ಹತ್ತಿರ ಇರುವ ಭೂಮಿಯನ್ನು ಅಂತಹವರಿಗೆ ನೀಡಬಹುದಲ್ಲ.

ಸಂದರ್ಶಕರು: ಕಬಸೆ ಅಶೋಕಮೂರ್ತಿ ಮತ್ತು ನಾಗರಾಜ


ಇದನ್ನೂ ಓದಿ: ಹಳೆ ಕಾಂಗ್ರೆಸ್ ಸಂಸ್ಕೃತಿ ಮತ್ತು ದುಡ್ಡು ಎಂಬ ಡಿಕೆಶಿ ಮಾದರಿ ವರ್ಕ್‌ಔಟ್ ಆಗುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...