Homeಮುಖಪುಟಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

ಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

- Advertisement -
- Advertisement -

ಗರುಡ ಪುರಾಣವನ್ನು ಓದಿದಾಗ ಗ್ರಹಿಕೆಗೆ ಸಿಕ್ಕುವುದು ವೈರಾಗ್ಯದ ಸಾರ. ಪ್ರಾಣವಾಯುವಿನ ಸೂಕ್ಷ್ಮತೆಗಳನ್ನು ಪ್ರತಿಮಾರೂಪದಲ್ಲಿ, ಒಗಟುಗಳಲ್ಲಿ ವಿವರಿಸಿದಂತೆ ತೋರುತ್ತದೆ. ಪ್ರಸ್ತುತ ಜೀವನ ಮತ್ತು ಜೀವನದಾಚೆಯ ಮರ್ಮ – ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುವಂತಹ ಸೂಕ್ಷ್ಮ ಮಾರ್ಗಗಳನ್ನು, ಸಂವೇದನೆಗಳನ್ನು ಗ್ರಹಿಸಲು ಸಾಧ್ಯವೆಂಬಂತೆ ಭಾಸವಾಗುತ್ತದೆ. ಪ್ರಾಣವು ಚಲಿಸುವಂತದ್ದು ಮತ್ತು ಅದು ಚಲನೆಯಲ್ಲಿರುವುದು. ಹಾಗೆ ಚಲಿಸುವಾಗ ಅದನ್ನು ಮನಸ್ಸೆಂಬುದನ್ನು ಹೇಗೆ ಗ್ರಹಿಸುತ್ತದೆ? ಬುದ್ಧಿ ಹೇಗೆ ವಿಶ್ಲೇಷಿಸಬಹುದು? ಇತ್ಯಾದಿಗಳನ್ನು ಈ ಪ್ರಾಣದ ಪ್ರಯಾಣ ಸೂಚಿಸುವುದರಿಂದಲೇ ಹಾರುವ ಗರುಡನ ಪ್ರತಿಮೆ ಇಲ್ಲಿ ರೂಪಕವಾಗಿದೆ ಎಂದು ಗ್ರಹಿಸಬಹುದು. ಆದರೆ ಇದು ಬರಿಯ ಒಂದು ಮಗ್ಗುಲಿನ ಆಲೋಚನೆಯಾಗುತ್ತದೆ. ಅದರ ಆಳ ಮತ್ತು ವಿಸ್ತಾರದ ಜೊತೆಗೆ ನಂತರ ಸೇರ್ಪಡೆಯಾದ ಹುನ್ನಾರಗಳು ಕೂಡ ಅಧ್ಯಯನ ವ್ಯಾಪ್ತಿಯು ಹಿರಿದಾಗಿಸುತ್ತದೆ.

ಗರುಡ ಪುರಾಣವನ್ನು ಓದಿದರೆ ವೈರಾಗ್ಯವುಂಟಾಗಿ ಸಂಸಾರದ ಮೇಲೆ ಜಿಗುಪ್ಸೆ ಬರಬಹುದೆಂಬ ಕಾರಣದಿಂದ ನಿಷೇಧವನ್ನು ಹೇರಿರಬೇಕು. ಗರುಡ ಪುರಾಣ ಉಂಟು ಮಾಡುವ ವೈರಾಗ್ಯದ ಗಾಢ ಪ್ರಭಾವವನ್ನು ಗಮನಿಸಿರುವವರಿಗೆ ಇದು ನಿಜವೆನಿಸುತ್ತದೆ. ಸಾವು ಸಂಭವಿಸಿದಾಗ ಓದುವುದರಿಂದ ಹದಿನೈದು ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಆಘಾತಕಾರಿಯಾದ ಅವಘಡ ಅಲ್ಲ, ಸಹಜವಾದದ್ದು, ನೈಸರ್ಗಿಕವಾದದ್ದು ಎಂಬ ಅರಿವು ಉಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಕಾಲಾನಂತರದಲ್ಲಿ ಇದು ವಾಡಿಕೆಯಾಯಿತು.

ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿರುವ ಗರುಡ ಪುರಾಣ ನಾನಾ ಕಾರಣಗಳಿಂದ ಆಕರ್ಷಕ. ಸಾಮಾನ್ಯ ಜನರಿಗೆ ತಿಳಿದಿರುವ ಹಾಗೆ ಅದು ನರಕದ ವರ್ಣನೆ, ಸಾವಿನ ಕುರಿತಾದದ್ದು ಎಂಬ ಭಾವ. ಅದು ನಿಜವಾದರೂ ಅದರ ವಿಚಾರವೇ ಇಡೀ ಗರುಡ ಪುರಾಣವೇನಲ್ಲ. ಪ್ರೇತಕಾಂಡ ಅಥವಾ ಪ್ರೇತಕಲ್ಪವು ಅದರ ಒಂದು ಭಾಗ ಅಷ್ಟೇ. ಎಲ್ಲಾ ಪುರಾಣಗಳನ್ನೂ ಅನಾದಿ, ಪುರಾತನ ಎಂದು ಹೇಗೆ ಕರೆಯಲು ಸಾಧ್ಯವಿಲ್ಲವೋ ಹಾಗೆಯೇ ಗರುಡ ಪುರಾಣವೂ ಕೂಡ ಪೂರ್ಣ ಪುರಾತನವೇನಲ್ಲ. ಕಾಲದಿಂದ ಕಾಲಕ್ಕೆ ಹಲವಾರು ಕರ್ತೃಗಳು ಇದರಲ್ಲಿ ಲೇಖನಿಗಳನ್ನಾಡಿಸುತ್ತಾ ಕೃತಿಯನ್ನು ವಿಸ್ತರಿಸಿದ್ದಾರೆ. ಹಾಗಾಗಿ ಇಡೀ ಗರುಡಪುರಾಣ ಏನನ್ನು ಧ್ವನಿಸಲು ಹೊರಟಿತ್ತು, ಈಗ ಅದರಲ್ಲಿ ಏನೇನೆಲ್ಲಾ ಇದೆ ಎಂದು ಚುಟುಕಾಗಿ ಹೇಳಲು ಕಷ್ಟವಾಗುವುದು.

ಗರುಡನೊಬ್ಬ ಅಪ್ರತಿಮ ವೀರ. ದಾಸ್ಯದ ವಿರುದ್ಧ ದನಿ ಎತ್ತಿದ ಬಂಡಾಯಗಾರ. ಹಾಗೂ ಆರ್ಯರ ಕುಟಿಲತನಕ್ಕೆ ಮೋಸ ಹೋದ ಮತ್ತು ಸೋತ ದುರಂತ ಪ್ರತಿಮೆ ಕೂಡಾ. ನಾಗ ಮತ್ತು ಗರುಡ ಈ ಎರಡೂ ಗಣಗಳು ಅಥವಾ ಕುಲಗಳೂ ಒಂದೇ ಮೂಲದಿಂದ ಬಂದಿರುವವಾದರೂ ತಮ್ಮ ಆಂತರಿಕ ಕಲಹದಿಂದ ಅಥವಾ ದಾಯಾದೀ ಜಗಳದಿಂದ ಆರ್ಯರ ರಾಜಕೀಯ ತಂತ್ರಕ್ಕೆ ಬಲಿಪಶುಗಳಾದರು. ನಾಗಕುಲವಾದರೂ ದೇವತೆಗಳ ವಿರುದ್ಧ ಸೆಣೆಸುತ್ತಲೇ ಬಂತು. ಆದರೆ ಗರುಡ, ದೇವತೆಗಳ ತಂತ್ರಕ್ಕೆ ಬಲಿಯಾಗಿ ತಮ್ಮದೇ ಮೂಲದ ಗಣದವರಿಗೆ ಶತ್ರುಗಳಾದರು. ಗರುಡ ವಿಷ್ಣುವಿನ ವಾಹನವೆಂದರೆ, ಆರ್ಯರ ರೂಪಕವಾದ ವಿಷ್ಣುವು ಬುಡಕಟ್ಟಿನ ಗರುಡನನ್ನು ತನ್ನ ಅಧೀನದಲ್ಲಿಟ್ಟುಕೊಂಡು, ನಂತರ ವಿರೋಧಿಗಳಾದ ನಾಗರ ಮೇಲೆ ತನ್ನ ವೈಷಮ್ಯವನ್ನು ಸಾಧಿಸುವುದರ ಸಂಕೇತ.
ಆರ್ಯ ರಾಜಕೀಯ ಹುಟ್ಟಿಹಾಕಿದ ಮೌಢ್ಯಕ್ಕೆ ನಮ್ಮ ಜನ ಇಂದೂ ಸಹೋದರರಾದ ನಾಗ ಮತ್ತು ಗರುಡರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜೊತೆಗೆ ಗರುಡ ಮಚ್ಚೆ ಇದ್ದರೆ ಹಾವುಗಳು ಬಾಧಿಸವು, ಸರ್ಪದೋಷ ಬಾರದು ಎಂಬ ಮೌಢ್ಯಗಳು ಬೇರೆ. ಗರುಡನಂತ ಮುಗ್ಧ ಮತ್ತು ವೀರನನ್ನು ತಮ್ಮ ಕಾವಲು ಭಟನಂತೆ ಅಥವಾ ಸಾರಥಿಯಂತೆ ವಾಹಕವನ್ನಾಗಿ ಮಾಡಿಕೊಂಡ ಕತೆಯನ್ನು ಪುರಾಣಗಳು ತಿಳಿಸುತ್ತವೆ.

ಗರುಡನ ಪುರಾಣದ ಕಥೆಯನ್ನು ಗಮನಿಸಿದರೆ ಕದ್ರು ಮತ್ತು ವಿನುತೆಯರಿಬ್ಬರೂ ತಾಯಾಳಿಕೆಯವರಾಗಿದ್ದವರೆಂದು ತೋರುತ್ತದೆ. ಜೊತೆಗೆ ಅವರಿಬ್ಬರೂ ಕೂಡ ಗಣಗಳ ಮತ್ತು ಬಣಗಳ ಒಡತಿಯರೆಂದು ಕೂಡ ಕಾಣುತ್ತದೆ. ಅವರಿಬ್ಬರಲ್ಲಿ ನಡೆಯುವ ಸಂಘರ್ಷದ ಕತೆಯು ಮಕ್ಕಳಿಗೆ ಮುಂದುವರಿದಿತ್ತು. ಪಂಥವು ಅದೇನೇ ಇರಲಿ, ನಾಗರನ್ನು ದ್ವೇಷಿಸಲು ಇಂದ್ರನು, ಆರ್ಯರ ದೇವರಾಜನು ಕುಮ್ಮಕ್ಕು ಕೊಡುತ್ತಾನೆ. ಅವರಿಬ್ಬರನ್ನೂ ಒಂದಾಗಲು ಬಿಡುವುದಿಲ್ಲ. ಒಡೆದು ಆಳುವ ನೀತಿಯನ್ನು ಆರ್ಯರಲ್ಲಿ ಕಾಣುತ್ತೇವೆ. ಆದರೆ ಅದೇ ಇಂದ್ರ ಅಮೃತವನ್ನು ಕದಿಯುತ್ತಾನೆ.

ಅದೇನೇ ಇರಲಿ, ಕರ್ನಾಟಕದಲ್ಲಿಯೂ ಸ್ವಾಮಿನಿಷ್ಠ ಸಾಹಸಿಗಳನ್ನು, ಪ್ರಾಣವನ್ನೇ ಮುಡಿಪಿಟ್ಟು ತಮ್ಮ ದಣಿಯನ್ನು ಕಾಪಾಡುತ್ತಿದ್ದ ನಿಷ್ಠರನ್ನು ಗರುಡ ಎಂದು ಕರೆಯುವುದು ಕಾಕತಾಳೀಯವೇನಲ್ಲ. ಪೌರಾಣಿಕ ಗರುಡನ ಸ್ವಾಮಿನಿಷ್ಠತೆಯು ಇಲ್ಲಿಯವರೆಗೂ ಧ್ವನಿಸಿದೆ.
ಇಂಥಾ ಗರುಡನಿಗೆ ಯಮಮಾರ್ಗದ ಬಗ್ಗೆ ವಿಷ್ಣುವು ಹೇಳುತ್ತಾನೆ.

ಇಂತೆಲ್ಲಾ ಮಾಹಿತಿಗಳಿಂದ ಗರುಡ ಪುರಾಣವು ಪರಿಷ್ಕೃತಗೊಂಡಿರುವುದು ಮಹಾಭಾರತದ ನಂತರದ ಕಾಲದಲ್ಲಿ ಎಂದು ಅವಲೋಕಿಸಬಹುದು. ಅದೂ ಚಾರ್ವಾಕರ ನಂತರ. ಚಾರ್ವಾಕರ ಪ್ರಭಾವ ದಟ್ಟವಾಗುತ್ತಿದ್ದ ಸಮಯದಲ್ಲಿ ಜನಗಳಲ್ಲಿ ತಾವು ಮಾಡುವ ಕರ್ಮಗಳ ಭಯ ಹುಟ್ಟಿಸುವ ಅಗತ್ಯ ವೈದಿಕರಿಗಿತ್ತು. ಹಾಗಾಗಿ ಗರುಡಪುರಾಣದಲ್ಲಿ ನರಕದ ಬಾಧೆ ಸೇರಿಸಲಾಯಿತು.

ಸಾವಿನ ಭಯವನ್ನು ಗೆಲ್ಲಲು ಮತ್ತು ಬದುಕಿರುವಾಗ ನೈತಿಕತೆಯನ್ನು ಮೀರದಿರುವ ಆಶಯ ಗರುಡ ಪುರಾಣ ಕೃತಿಯಲ್ಲಿ ಅಡಗಿದೆ. ವಿಪರೀತದ ಪ್ರತಿಮಾ ರೂಪಕಗಳನ್ನು ನೇರವಾಗಿ ಗ್ರಹಿಸಿದರೆ ಗರುಡ ಪುರಾಣದ ಓದು ಮೌಢ್ಯತೆಯ ಪಾಲಾಗುತ್ತದೆ.‌

  • ಯೋಗೇಶ್‌ ಮಾಸ್ಟರ್

ಇದನ್ನೂ ಓದಿ: ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...