HomeUncategorizedತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

- Advertisement -
- Advertisement -

‘ದೇಶದ್ರೋಹ’: ಈ ಮೊದಲು ಯಾವುದೋ ನಕ್ಸಲ್ ಕೇಸಲ್ಲಿ ಅದಕ್ಕೂ ಮುಂಚೆ ಖಲಿಸ್ತಾನ್ ಕೇಸುಗಳಲ್ಲಿ, ಮತ್ತಂಥದ್ಯಾವುದೋ ಕೇಸುಗಳಲ್ಲಿ ನಾವು ಪೇಪರಿನಲ್ಲಿ ಓದುತ್ತಿದ್ದೆವು. ನಮ್ಮ ಸುತ್ತಲಿನ ನಿತ್ಯದ ಬದುಕಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಇರಲಿಲ್ಲ.

‘ದೇಶದ್ರೋಹ’ದ ಆಪಾದನೆಗಳು ಒಂದು ಕಾಲಘಟ್ಟದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಎಪ್ಪತ್ತರ ದಶಕದ ಎಮರ್ಜೆನ್ಸಿ ಸಮಯದಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ಅದೊಂದು ನಿತ್ಯದ ಅಪರಾಧವಾಗಿತ್ತು. ದೇಶದ್ರೋಹದ ಆಪಾದನೆಯಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿರಲಿಲ್ಲ. ನಮ್ಮ ದ.ರಾ ಬೇಂದ್ರೆಯವರನ್ನು ಕಾಡಿತ್ತು ದೇಶದ್ರೋಹದ ಶಿಕ್ಷೆ. ಅವರ ‘ನಾದಲೀಲೆ’ ಕವನಸಂಕಲನ ಆ ಸಮಯದಲ್ಲಿ ಬರೆದದ್ದು.

ಅಷ್ಟಕ್ಕೂ ಏನಿದು ‘ದೇಶದ್ರೋಹ’? ನಮ್ಮ ಕಾನೂನಿನಲ್ಲಿ, ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಕಾನೂನಾತ್ಮಕವಾಗಿ ನಡೆಸುತ್ತಿರುವ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಶಾಂತಿಭಂಗವಾಗುವಂಥ ವಾತಾವರಣ ಸೃಷ್ಟಿ ಮಾಡುವುದು ‘ದೇಶದ್ರೋಹ’ವೆನ್ನಲಾಗುತ್ತದೆ.

ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಅಧಿಕಾರ ನಮಗಿಲ್ಲವೇ? ಅದೆಷ್ಟೋ ಜನ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ತಾರೆ – ವಿರೋಧಪಕ್ಷವಾಗಲೀ, ಮಾಧ್ಯಮದವರಾಗಲೀ ತಮ್ಮ ಹದ್ದಿನಕಣ್ಣಿನಿಂದ ಯಾವಾಗಲೂ ನೋಡುತ್ತಿರುತ್ತಾರೆ ಹಾಗೂ ಪ್ರತಿ ಚಿಕ್ಕತಪ್ಪನ್ನು ಎತ್ತಿಹಿಡಿಯುತ್ತಾರೆ. ಅದೇನಾದರೂ ಭ್ರಷ್ಟತೆಯ ಆರೋಪವಾದರೆ ಮುಗಿಯಿತು ಸರ್ಕಾರವನ್ನು ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಎಂತೆಂಥದೋ ಕೆಟ್ಟ ಶಬ್ದಗಳನ್ನ ಉಪಯೋಗಿಸಲಾಗುತ್ತದೆ. ಅದೇ ಅಲ್ಲವೇ ಪ್ರಜಾಪ್ರಭುತ್ವವೆಂದರೆ ಎಂದು ನೀವು ಕೇಳಬಹುದು. ಆಶ್ಚರ್ಯದ ಸಂಗತಿ ಏನೆಂದರೆ ಸುಪ್ರೀಂಕೋರ್ಟು, ಹೈಕೋರ್ಟುಗಳು ಕೂಡ ಇದನ್ನೇ ಹೇಳುತ್ತವೆ. ಹಾಗಾದರೆ ಅದು ಅಪರಾಧ ಹೇಗಾಯಿತು?

ದುರಂತವೆಂದರೆ ಸ್ವಾತಂತ್ರ್ಯಾನಂತರ ದೇಶದ್ರೋಹದ ಅಪರಾಧವನ್ನು ಕಾನೂನಲ್ಲಿ ಉಳಿಸಿಕೊಳ್ಳಲಾಯಿತು. ಈ ಅಪರಾಧ ಊರ್ಜಿತವಲ್ಲವೆಂದು, ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದಾಗ ದೇಶದ್ರೋಹ ಉಳಿಯುವ ಅವಕಾಶವಿಲ್ಲವೆಂದು ಕೇದಾರನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಲಾಯಿತು. ಅಂದಿನ ಕಾಲಘಟ್ಟದಲ್ಲಿನ ಸ್ಥಿತಿಗಳು ಆ ಅಪರಾಧದ ಕಾನೂನನ್ನು ಉಳಿಸಿಕೊಳ್ಳುವ ಅವಶ್ಯಕತೆಯನ್ನ ಒಪ್ಪಿಸಿದ್ದವು. ಇಂದಿಗೂ ಕೇದಾರನಾಥ್ ಪ್ರಕರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲು.

ಕೇದಾರನಾಥ್ ಪ್ರಕರಣದ ಮುಖ್ಯ ತೀರ್ಪೆಂದರೆ ಎಲ್ಲವುದೂ ದೇಶದ್ರೋಹವಲ್ಲ. 124ಎ ನಲ್ಲಿಯೇ ಅದಕ್ಕೆ ರಕ್ಷಣೆ ಕೊಡಲಾಗಿದೆ. ಸರ್ಕಾರದ ನೀತಿಗಳಿಗೆ ವಿರೋಧ ವ್ಯಕ್ತಪಡಿಸುವುದು, ಸರಿಯಿಲ್ಲವೆನ್ನುವುದು, ಮೂರ್ಖತ್ವದಿಂದ ಕೂಡಿದೆಯೆಂಬುದು, ಜನವಿರೋಧಿ ಎನ್ನುವುದು, ಮತ್ತು ಯಾವುದೇ ರೀತಿಯ ವಿಮರ್ಶೆಯನ್ನು ಅಲ್ಲಿ ರಕ್ಷಿಸಲಾಗಿದೆ. ಅದಿಲ್ಲದೇ ಇದ್ದರೇ ಪ್ರತಿ ವಿರೋಧಪಕ್ಷದ ರಾಜಕಾರಣಿಯನ್ನು ಜೈಲಲ್ಲಿಡಬಹುದು – ಅದು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.

ಕೇದಾರನಾಥ್ ತೀರ್ಪು ಎಷ್ಟೇ ಸರಿಯಿದ್ದರೂ, ಸರ್ಕಾರಗಳೆಂದೂ ತುಂಬಾ ಶ್ರದ್ಧೆಯಿಂದ ಆ ತೀರ್ಪನ್ನು ಕಡೆಗಣಿಸಿವೆ ಎಂಬುದು ಚಾರಿತ್ರಿಕ ಸತ್ಯ. ಆದರೆ ಇದನ್ನ ಯಾರ ಮೇಲೆ ಪ್ರಯೋಗಿಸಲಾಯಿತು ಎಂದರೆ, ಸಾಮಾನ್ಯವಾಗಿ ಜನಪರ ಚಳವಳಿಗಳ ಮೇಲೆ. ಅವುಗಳ ನಾಯಕರನ್ನು ಯಾವಾಗಲೂ ದೇಶದ್ರೋಹದ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಇರಲಿ, ಕಮ್ಯೂನಿಸ್ಟ್ ನಾಯಕರಿರಲಿ, ಅಟಲ್ ಬಿಹಾರಿ ವಾಜಪೇಯಿಯವರಿರಲಿ ಒಂದು ಚಳವಳಿಯ ನೇತಾರರಾಗಿದ್ದರೆ ದೇಶದ್ರೋಹದ ಆರೋಪ ಕಟ್ಟಿಟ್ಟಬುತ್ತಿ ಎಂಬಂತಿದೆ. ಇಂದಿಗೂ ಆ ಸ್ಥಿತಿ ಬದಲಾಗಿಲ್ಲ.

ಎಮರ್ಜೆನ್ಸಿ ಸಮಯದಲ್ಲಂತೂ ಈ ಅಪರಾಧ ಕಾನೂನನ್ನು, ಸರ್ಕಾರದ ಮಾತನ್ನು ವಿರೋಧಿಸಿದವರೆಲ್ಲರ ಮೇಲೂ ಉಪಯೋಗಿಸಲಾಯಿತು. ಅದರ ಪರಿಣಾಮ ನಮಗೆಲ್ಲರಿಗೂ ತಿಳಿದ ಇತಿಹಾಸ.

ಎಂಭತ್ತರ, ತೊಂಭತ್ತರ ದಶಕ ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ದಶಕದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಕಂಡರೂ (ಬಹುಶಃ ಮೈತ್ರಿ ಸರ್ಕಾರಗಳ ಕಾರಣವಿರಬಹುದು) ಕಳೆದೈದು ವರ್ಷಗಳಲ್ಲಿ ಇದರ ದುರುಪಯೋಗ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲೆಂದೆ ತಂದ UAPA ಕಾಯ್ದೆ ನಂತರದ ರೂಪಗಳಲ್ಲಿ, TADA ಹಾಗೂ POTA ಕಾಯ್ದೆಗಳಿಗೆ ಪರ್ಯಾಯವಾಗಿ ಬದಲಾವಣೆಯಾಗಿದ್ದು ಚಾರಿತ್ರಿಕ ಸತ್ಯ. ಯಾವುದೋ ಆತಂಕವಾದಿ ಸಂಘಟನೆಯನ್ನು ಬಹಿಷ್ಕರಿಸುವ ಹಾಗೂ ಅದರ ಕಾರ್ಯಗಳನ್ನು ಕಟ್ಟಿಹಾಕುವ ಹಾಗೂ ಯಾವುದೇ ಅಂಥಾ ಘಟನೆಗಳಿಗೆ ಶಿಕ್ಷಿಸುವಂಥಾ ಉದ್ದೇಶವನ್ನು ಹೊಂದಿದ್ದು ತನ್ನ ಹೊಸ ಅವತಾರದಲ್ಲಿ ಯಾರನ್ನಾದರೂ ಅದರಡಿಯಲ್ಲಿ ಜೈಲಿಗೆ ತಳ್ಳಬಹುದಾದ ಮತ್ತು ಸಂವಿಧಾನ ಜನಿತ ಹಕ್ಕುಗಳನ್ನು ಇಲ್ಲದಂತೆ ಮಾಡುವ ಅಧಿಕಾರವನ್ನು ಹೊಂದಿದೆ.

ಅದರ ತೀವ್ರ ದುರುಪಯೋಗ ಇಂದು ನಾವೆಲ್ಲ ಕಾಣುತ್ತಿದ್ದೇವೆ. ಬೀದರಿನ ಶಾಲೆಯಲ್ಲಿ ನಾಟಕಕ್ಕೆಂದು ಮಗುವಿಗೆ ಹಳೆಯ ಚಪ್ಪಲಿಯೊಂದು ಕೊಟ್ಟಿದ್ದು ತಾಯಿಯ ದೇಶದ್ರೋಹವಾಗುವಷ್ಟು, ಒಂದು ಕವನ ಬರೆದರೆ, ಒಂದು ಕಾರ್ಟೂನನ್ನು ಶೇರ್ ಮಾಡಿದರೆ, ಕಾರ್ಟೂನ್ ಚಿತ್ರಿಸಿದರೆ, ಒಂದು ಸ್ಲೋಗನ್ ಕೂಗಿದರೂ ದೇಶದ್ರೋಹ ಪ್ರಕರಣ ದಾಖಲಿಸುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಮಾನವ ಹಕ್ಕುಗಳನ್ನು ಕೇಳುವವರನ್ನು ಜೈಲಿಗಟ್ಟುತ್ತಿದೇವೆ. ಅದು ಒಬ್ಬ ಕವಿಯಿರಲಿ, ಪ್ರಾಧ್ಯಾಪಕನಿರಲಿ, ವಿದ್ಯಾರ್ಥಿಯಿರಲಿ, ಬಸರಿಯಿರಲಿ, ಸಂವಿಧಾನಿಕ ರೀತಿಯ ಹೋರಾಟವನ್ನು ತನ್ನದಾಗಿಸಿಕೊಂಡವನಿರಲಿ, ಸರ್ಕಾರಗಳು ಸಹಿಸುತ್ತಿಲ್ಲ. ಇಂದು ಇಂಥಾ ಕಾನೂನುಗಳಲ್ಲಿ ಆರೋಪಿಸುವುದಕ್ಕೆ ಬಲವಾದ ಕಾರಣಗಳೂ ಬೇಕಿಲ್ಲ.

ಇವು ನಾವು ನಮಗಾಗಿ ಬರೆದುಕೊಂಡಿರುವ, ನಮ್ಮದಾದ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಿವೆ. ಇಂಥಾ ಕರಾಳ ಕಾಯ್ದೆಗಳ ಮರುಪರಿಶೀಲನೆ ಅತ್ಯವಶ್ಯವಾಗಿದೆ. ಇಂಥಾ ಕಾನೂನುಗಳ ದುರುಪಯೋಗ ನಿಲ್ಲಬೇಕಿದೆ.


ಇದನ್ನು ಓದಿ: ಪತಂಜಲಿ ಕೊರೊನಾ ಔಷಧಿ ಮಾರಿದರೆ ಕ್ರಮ: ರಾಜಸ್ಥಾನ ಸಚಿವರ ಎಚ್ಚರಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...