HomeUncategorizedತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

- Advertisement -
- Advertisement -

‘ದೇಶದ್ರೋಹ’: ಈ ಮೊದಲು ಯಾವುದೋ ನಕ್ಸಲ್ ಕೇಸಲ್ಲಿ ಅದಕ್ಕೂ ಮುಂಚೆ ಖಲಿಸ್ತಾನ್ ಕೇಸುಗಳಲ್ಲಿ, ಮತ್ತಂಥದ್ಯಾವುದೋ ಕೇಸುಗಳಲ್ಲಿ ನಾವು ಪೇಪರಿನಲ್ಲಿ ಓದುತ್ತಿದ್ದೆವು. ನಮ್ಮ ಸುತ್ತಲಿನ ನಿತ್ಯದ ಬದುಕಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಇರಲಿಲ್ಲ.

‘ದೇಶದ್ರೋಹ’ದ ಆಪಾದನೆಗಳು ಒಂದು ಕಾಲಘಟ್ಟದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಎಪ್ಪತ್ತರ ದಶಕದ ಎಮರ್ಜೆನ್ಸಿ ಸಮಯದಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ಅದೊಂದು ನಿತ್ಯದ ಅಪರಾಧವಾಗಿತ್ತು. ದೇಶದ್ರೋಹದ ಆಪಾದನೆಯಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿರಲಿಲ್ಲ. ನಮ್ಮ ದ.ರಾ ಬೇಂದ್ರೆಯವರನ್ನು ಕಾಡಿತ್ತು ದೇಶದ್ರೋಹದ ಶಿಕ್ಷೆ. ಅವರ ‘ನಾದಲೀಲೆ’ ಕವನಸಂಕಲನ ಆ ಸಮಯದಲ್ಲಿ ಬರೆದದ್ದು.

ಅಷ್ಟಕ್ಕೂ ಏನಿದು ‘ದೇಶದ್ರೋಹ’? ನಮ್ಮ ಕಾನೂನಿನಲ್ಲಿ, ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಕಾನೂನಾತ್ಮಕವಾಗಿ ನಡೆಸುತ್ತಿರುವ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಶಾಂತಿಭಂಗವಾಗುವಂಥ ವಾತಾವರಣ ಸೃಷ್ಟಿ ಮಾಡುವುದು ‘ದೇಶದ್ರೋಹ’ವೆನ್ನಲಾಗುತ್ತದೆ.

ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಅಧಿಕಾರ ನಮಗಿಲ್ಲವೇ? ಅದೆಷ್ಟೋ ಜನ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ತಾರೆ – ವಿರೋಧಪಕ್ಷವಾಗಲೀ, ಮಾಧ್ಯಮದವರಾಗಲೀ ತಮ್ಮ ಹದ್ದಿನಕಣ್ಣಿನಿಂದ ಯಾವಾಗಲೂ ನೋಡುತ್ತಿರುತ್ತಾರೆ ಹಾಗೂ ಪ್ರತಿ ಚಿಕ್ಕತಪ್ಪನ್ನು ಎತ್ತಿಹಿಡಿಯುತ್ತಾರೆ. ಅದೇನಾದರೂ ಭ್ರಷ್ಟತೆಯ ಆರೋಪವಾದರೆ ಮುಗಿಯಿತು ಸರ್ಕಾರವನ್ನು ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಎಂತೆಂಥದೋ ಕೆಟ್ಟ ಶಬ್ದಗಳನ್ನ ಉಪಯೋಗಿಸಲಾಗುತ್ತದೆ. ಅದೇ ಅಲ್ಲವೇ ಪ್ರಜಾಪ್ರಭುತ್ವವೆಂದರೆ ಎಂದು ನೀವು ಕೇಳಬಹುದು. ಆಶ್ಚರ್ಯದ ಸಂಗತಿ ಏನೆಂದರೆ ಸುಪ್ರೀಂಕೋರ್ಟು, ಹೈಕೋರ್ಟುಗಳು ಕೂಡ ಇದನ್ನೇ ಹೇಳುತ್ತವೆ. ಹಾಗಾದರೆ ಅದು ಅಪರಾಧ ಹೇಗಾಯಿತು?

ದುರಂತವೆಂದರೆ ಸ್ವಾತಂತ್ರ್ಯಾನಂತರ ದೇಶದ್ರೋಹದ ಅಪರಾಧವನ್ನು ಕಾನೂನಲ್ಲಿ ಉಳಿಸಿಕೊಳ್ಳಲಾಯಿತು. ಈ ಅಪರಾಧ ಊರ್ಜಿತವಲ್ಲವೆಂದು, ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದಾಗ ದೇಶದ್ರೋಹ ಉಳಿಯುವ ಅವಕಾಶವಿಲ್ಲವೆಂದು ಕೇದಾರನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಲಾಯಿತು. ಅಂದಿನ ಕಾಲಘಟ್ಟದಲ್ಲಿನ ಸ್ಥಿತಿಗಳು ಆ ಅಪರಾಧದ ಕಾನೂನನ್ನು ಉಳಿಸಿಕೊಳ್ಳುವ ಅವಶ್ಯಕತೆಯನ್ನ ಒಪ್ಪಿಸಿದ್ದವು. ಇಂದಿಗೂ ಕೇದಾರನಾಥ್ ಪ್ರಕರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲು.

ಕೇದಾರನಾಥ್ ಪ್ರಕರಣದ ಮುಖ್ಯ ತೀರ್ಪೆಂದರೆ ಎಲ್ಲವುದೂ ದೇಶದ್ರೋಹವಲ್ಲ. 124ಎ ನಲ್ಲಿಯೇ ಅದಕ್ಕೆ ರಕ್ಷಣೆ ಕೊಡಲಾಗಿದೆ. ಸರ್ಕಾರದ ನೀತಿಗಳಿಗೆ ವಿರೋಧ ವ್ಯಕ್ತಪಡಿಸುವುದು, ಸರಿಯಿಲ್ಲವೆನ್ನುವುದು, ಮೂರ್ಖತ್ವದಿಂದ ಕೂಡಿದೆಯೆಂಬುದು, ಜನವಿರೋಧಿ ಎನ್ನುವುದು, ಮತ್ತು ಯಾವುದೇ ರೀತಿಯ ವಿಮರ್ಶೆಯನ್ನು ಅಲ್ಲಿ ರಕ್ಷಿಸಲಾಗಿದೆ. ಅದಿಲ್ಲದೇ ಇದ್ದರೇ ಪ್ರತಿ ವಿರೋಧಪಕ್ಷದ ರಾಜಕಾರಣಿಯನ್ನು ಜೈಲಲ್ಲಿಡಬಹುದು – ಅದು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.

ಕೇದಾರನಾಥ್ ತೀರ್ಪು ಎಷ್ಟೇ ಸರಿಯಿದ್ದರೂ, ಸರ್ಕಾರಗಳೆಂದೂ ತುಂಬಾ ಶ್ರದ್ಧೆಯಿಂದ ಆ ತೀರ್ಪನ್ನು ಕಡೆಗಣಿಸಿವೆ ಎಂಬುದು ಚಾರಿತ್ರಿಕ ಸತ್ಯ. ಆದರೆ ಇದನ್ನ ಯಾರ ಮೇಲೆ ಪ್ರಯೋಗಿಸಲಾಯಿತು ಎಂದರೆ, ಸಾಮಾನ್ಯವಾಗಿ ಜನಪರ ಚಳವಳಿಗಳ ಮೇಲೆ. ಅವುಗಳ ನಾಯಕರನ್ನು ಯಾವಾಗಲೂ ದೇಶದ್ರೋಹದ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಇರಲಿ, ಕಮ್ಯೂನಿಸ್ಟ್ ನಾಯಕರಿರಲಿ, ಅಟಲ್ ಬಿಹಾರಿ ವಾಜಪೇಯಿಯವರಿರಲಿ ಒಂದು ಚಳವಳಿಯ ನೇತಾರರಾಗಿದ್ದರೆ ದೇಶದ್ರೋಹದ ಆರೋಪ ಕಟ್ಟಿಟ್ಟಬುತ್ತಿ ಎಂಬಂತಿದೆ. ಇಂದಿಗೂ ಆ ಸ್ಥಿತಿ ಬದಲಾಗಿಲ್ಲ.

ಎಮರ್ಜೆನ್ಸಿ ಸಮಯದಲ್ಲಂತೂ ಈ ಅಪರಾಧ ಕಾನೂನನ್ನು, ಸರ್ಕಾರದ ಮಾತನ್ನು ವಿರೋಧಿಸಿದವರೆಲ್ಲರ ಮೇಲೂ ಉಪಯೋಗಿಸಲಾಯಿತು. ಅದರ ಪರಿಣಾಮ ನಮಗೆಲ್ಲರಿಗೂ ತಿಳಿದ ಇತಿಹಾಸ.

ಎಂಭತ್ತರ, ತೊಂಭತ್ತರ ದಶಕ ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ದಶಕದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಕಂಡರೂ (ಬಹುಶಃ ಮೈತ್ರಿ ಸರ್ಕಾರಗಳ ಕಾರಣವಿರಬಹುದು) ಕಳೆದೈದು ವರ್ಷಗಳಲ್ಲಿ ಇದರ ದುರುಪಯೋಗ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲೆಂದೆ ತಂದ UAPA ಕಾಯ್ದೆ ನಂತರದ ರೂಪಗಳಲ್ಲಿ, TADA ಹಾಗೂ POTA ಕಾಯ್ದೆಗಳಿಗೆ ಪರ್ಯಾಯವಾಗಿ ಬದಲಾವಣೆಯಾಗಿದ್ದು ಚಾರಿತ್ರಿಕ ಸತ್ಯ. ಯಾವುದೋ ಆತಂಕವಾದಿ ಸಂಘಟನೆಯನ್ನು ಬಹಿಷ್ಕರಿಸುವ ಹಾಗೂ ಅದರ ಕಾರ್ಯಗಳನ್ನು ಕಟ್ಟಿಹಾಕುವ ಹಾಗೂ ಯಾವುದೇ ಅಂಥಾ ಘಟನೆಗಳಿಗೆ ಶಿಕ್ಷಿಸುವಂಥಾ ಉದ್ದೇಶವನ್ನು ಹೊಂದಿದ್ದು ತನ್ನ ಹೊಸ ಅವತಾರದಲ್ಲಿ ಯಾರನ್ನಾದರೂ ಅದರಡಿಯಲ್ಲಿ ಜೈಲಿಗೆ ತಳ್ಳಬಹುದಾದ ಮತ್ತು ಸಂವಿಧಾನ ಜನಿತ ಹಕ್ಕುಗಳನ್ನು ಇಲ್ಲದಂತೆ ಮಾಡುವ ಅಧಿಕಾರವನ್ನು ಹೊಂದಿದೆ.

ಅದರ ತೀವ್ರ ದುರುಪಯೋಗ ಇಂದು ನಾವೆಲ್ಲ ಕಾಣುತ್ತಿದ್ದೇವೆ. ಬೀದರಿನ ಶಾಲೆಯಲ್ಲಿ ನಾಟಕಕ್ಕೆಂದು ಮಗುವಿಗೆ ಹಳೆಯ ಚಪ್ಪಲಿಯೊಂದು ಕೊಟ್ಟಿದ್ದು ತಾಯಿಯ ದೇಶದ್ರೋಹವಾಗುವಷ್ಟು, ಒಂದು ಕವನ ಬರೆದರೆ, ಒಂದು ಕಾರ್ಟೂನನ್ನು ಶೇರ್ ಮಾಡಿದರೆ, ಕಾರ್ಟೂನ್ ಚಿತ್ರಿಸಿದರೆ, ಒಂದು ಸ್ಲೋಗನ್ ಕೂಗಿದರೂ ದೇಶದ್ರೋಹ ಪ್ರಕರಣ ದಾಖಲಿಸುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಮಾನವ ಹಕ್ಕುಗಳನ್ನು ಕೇಳುವವರನ್ನು ಜೈಲಿಗಟ್ಟುತ್ತಿದೇವೆ. ಅದು ಒಬ್ಬ ಕವಿಯಿರಲಿ, ಪ್ರಾಧ್ಯಾಪಕನಿರಲಿ, ವಿದ್ಯಾರ್ಥಿಯಿರಲಿ, ಬಸರಿಯಿರಲಿ, ಸಂವಿಧಾನಿಕ ರೀತಿಯ ಹೋರಾಟವನ್ನು ತನ್ನದಾಗಿಸಿಕೊಂಡವನಿರಲಿ, ಸರ್ಕಾರಗಳು ಸಹಿಸುತ್ತಿಲ್ಲ. ಇಂದು ಇಂಥಾ ಕಾನೂನುಗಳಲ್ಲಿ ಆರೋಪಿಸುವುದಕ್ಕೆ ಬಲವಾದ ಕಾರಣಗಳೂ ಬೇಕಿಲ್ಲ.

ಇವು ನಾವು ನಮಗಾಗಿ ಬರೆದುಕೊಂಡಿರುವ, ನಮ್ಮದಾದ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಿವೆ. ಇಂಥಾ ಕರಾಳ ಕಾಯ್ದೆಗಳ ಮರುಪರಿಶೀಲನೆ ಅತ್ಯವಶ್ಯವಾಗಿದೆ. ಇಂಥಾ ಕಾನೂನುಗಳ ದುರುಪಯೋಗ ನಿಲ್ಲಬೇಕಿದೆ.


ಇದನ್ನು ಓದಿ: ಪತಂಜಲಿ ಕೊರೊನಾ ಔಷಧಿ ಮಾರಿದರೆ ಕ್ರಮ: ರಾಜಸ್ಥಾನ ಸಚಿವರ ಎಚ್ಚರಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...