Homeಅಂಕಣಗಳುಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ.

- Advertisement -
- Advertisement -

ಶ್ರಮಜೀವಿಯಾದ ಸದಾನಂದ ಪಟೇಲ್ ಕಷ್ಟಪಟ್ಟು ದುಡಿದು ಕೋಟ್ಯಾಂತರ ರೂಪಾಯಿಗಳ ಆಸ್ತಿಯ ಮಾಲೀಕನಾಗಿದ್ದಾನೆ. ತನ್ನ ಸಾಧನೆ ಬಗ್ಗೆ ಆತನಿಗೆ ತುಂಬಾ ಹೆಮ್ಮೆ ಇದೆ. ಹಾಗೆಯೇ ಅಶಿಕ್ಷಿತಳಾದ ಹೆಂಡತಿ ಸ್ವರ್ಣಳ ಬಗ್ಗೆ, ಇನ್ನೂ ಉಂಡಾಡಿ ಗುಂಡನಂತಾಡುವ ಮಗ ಅಜಯ್ ಬಗ್ಗೆ ಮತ್ತು ಸೌಮ್ಯ ಸ್ವಭಾವದವಳಂತೆ ಕಂಡರೂ ಒಳಗೊಳಗೆ ಕುತಂತ್ರಿಯಾದ ಸೊಸೆ ಪ್ರೀತಿ ಬಗ್ಗೆ ಸದಾನಂದನಿಗೆ ಇನ್ನಿಲ್ಲದಷ್ಟು ಕೋಪ, ಅಸಹನೆ ಮತ್ತು ಸೇಡಿನ ಭಾವನೆ. ಈ ಮೂವರೂ ತನ್ನ ಮರಣದ ನಂತರ ತಾನು ಕಷ್ಟಪಟ್ಟು ದುಡಿದಿದ್ದ ಆಸ್ತಿಯನ್ನೆಲ್ಲ ಮಜಾ ಮಾಡುತ್ತಾ ಕರಗಿಸುತ್ತಾರೆ ಎಂಬ ಗುಮಾನಿ. ಅದಕ್ಕಿಂತ ಮುಖ್ಯವಾಗಿ ಇವರೆಲ್ಲರಿಂದಾಗಿ ತನ್ನದು ಎಂಬುದು ಯಾವುದೂ ಈ ಭೂಮಿಯ ಮೇಲೆ ಉಳಿದಿರುವುದಿಲ್ಲ ಎಂಬ ಜಿಗುಪ್ಸೆ.

ಈತನ ಹೆಸರು ಸದಾನಂದ ಎಂಬುದಾದರೂ ಈತ ಕೋಪಿಷ್ಟ. ಈತ ನಕ್ಕಿದ್ದನ್ನು ನೋಡಿದವರೇ ಇಲ್ಲ. ಇತರರ ಬಗ್ಗೆ ಅಸೂಕ್ಷ್ಮವಾಗಿ ವರ್ತಿಸುವ, ಸದಾ ತನ್ನ ಬಗ್ಗೆ ಮಾತ್ರ ಯೋಚಿಸುವ ಸದಾನಂದ ಆಫೀಸಿನಲ್ಲೂ, ಮನೆಯಲ್ಲೂ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುವವನು. ಇದರಿಂದ ಬೇಸರವಾದರೂ ಸಂಪ್ರದಾಯಸ್ಥ ಗೃಹಿಣಿಯಾದ ಸ್ವರ್ಣ ಪ್ರತಿಭಟಿಸುವುದಿಲ್ಲ. ಆದರೆ ಅವರ ಮಗ ಅಜಯ್ ಹಾಗಲ್ಲ. ಕಾರಣವಿದ್ದರೂ, ಇರದಿದ್ದರೂ ತನ್ನ ಅಪ್ಪ ಸದಾನಂದ ತಾಳಿರುವ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳುವುದು ಅಜಯ್‍ನ ಸ್ವಭಾವ. ಆ ಮೂಲಕವಾದರೂ ತನ್ನನ್ನು ಸದಾ ಅವಮಾನಿಸುವ ಅಪ್ಪನ ವಿರುದ್ಧ `ಕ್ರಾಂತಿ’ ಸಾಧಿಸಿದ್ದೇನೆಂಬ ಭಾವನೆ ಅವನಿಗೆ.

ಸದಾನಂದನ ಸೊಸೆ ಪ್ರೀತಿ ಮೇಲುನೋಟಕ್ಕೆ ತಗ್ಗಿಬಗ್ಗಿ ನಡೆಯುವ ಯುವತಿಯಂತೆ ಕಂಡರೂ ಆಕೆ ಧನಪಿಶಾಚಿ. ಮುಂದೊಂದು ದಿನ ಸದಾನಂದ ಸತ್ತು ಆತನ ಆಸ್ತಿಯೆಲ್ಲಾ ಅಜಯ್ ಪಾಲಿಗೆ ಬರುತ್ತೆ ಎಂಬ ಕಾರಣಕ್ಕೇ ಆ ಉಂಡಾಡಿಗುಂಡನನ್ನು ಮದುವೆ ಆಗಿರುವವಳು.

ಈ ಮೂವರಲ್ಲದೆ ಸದಾನಂದನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವವಳು ಮಧ್ಯವಯಸ್ಕಿನ ಮಹಿಳೆ ಕಿರಣ್ ಮೆಣಸಿನಕಾಯಿ. ಸದಾನಂದನ ಕಂಪನಿಯ ಬೋರ್ಡ್‍ನಲ್ಲಿ ಪ್ರಮುಖ ಸದಸ್ಯೆಯಾಗಿರುವ ಕಿರಣ್ ಸದಾನಂದನ ಪ್ರೇಯಸಿ ಕೂಡ ಹೌದು. ಬೇರೆಯವರ ಬದುಕನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈಯಾದ ಸದಾನಂದ ತನ್ನ ಮತ್ತು ಕಿರಣ್ ನಡುವಿನ ಸಂಬಂಧದ ಬಗ್ಗೆ ಬೇರೆಯವರಿಗೆ ಸುಳಿವು ಸಿಗಕೂಡದೆಂದು ಆಕೆಗೆ ಕುಡುಕನೊಬ್ಬನೊಂದಿಗೆ ಮದುವೆ ಮಾಡಿರುತ್ತಾನೆ. ಹಾಗೆ ಮಾಡುವ ಮೂಲಕ ಆಕೆಗೆ ಸಮಾಜದಲ್ಲಿ ಸ್ಥಾನಮಾನ, ಆಕೆಯ ಗಂಡನಿಗೆ ದಿನನಿತ್ಯ ಗುಂಡು ಮತ್ತು ತನಗೆ ಓರ್ವ ಸುಂದರ ಮತ್ತು ದಕ್ಷ ನಲ್ಲೆ ಸಿಗುವಂತೆ ಏರ್ಪಾಡು ಮಾಡಿಕೊಂಡಿರುತ್ತಾನೆ.

ಗುಂಡು, ಸಿಗರೇಟು ಹವ್ಯಾಸಗಳನ್ನು ಹೊಂದಿರುವ ಸದಾನಂದ ಹೈ ಬಿಪಿ, ಡಯಾಬಿಟೀಸ್ ಮತ್ತು ಹೈ ಕೊಲೆಸ್ಟರಾಲ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ತಾನು ಬದುಕಿರುವಾಗ ತನ್ನ ಸುತ್ತಲಿನವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಸದಾನಂದ ತಾನು ಸತ್ತ ಮೇಲೂ ಅವರೆಲ್ಲರ ಮೇಲೆ ನಿಯಂತ್ರಣ ಹೊಂದಿರುವುದು ಹೇಗೆ ಎಂದು ಯೋಚಿಸುತ್ತಾನೆ. ತನ್ನ ಅಪಾರ ಸಂಪತ್ತಿನಲ್ಲಿ ನಯಾಪೈಸೆಗೂ ತನ್ನ ಪತ್ನಿ ಸ್ವರ್ಣ, ಮಗ ಅಜಯ್, ಸೊಸೆ ಪ್ರೀತಿ ಮತ್ತು ಕೊನೆಗೆ ನಲ್ಲೆ ಕಿರಣ್ ಕೂಡ ಅರ್ಹರಲ್ಲ ಎಂದೇ ನಂಬಿರುವ ಸದಾನಂದ ಸಾಯುವ ಮುನ್ನ ಒಂದು ವಿಚಿತ್ರ ವಿಲ್ ಬರೆದಿಡುತ್ತಾನೆ.

ಆ ವಿಲ್‍ನಲ್ಲಿ ತನ್ನ ಸರ್ವ ಸಂಪತ್ತನ್ನು ಒಂದು ಟ್ರಸ್ಟ್‍ಗೆ ಬರೆದಿರುತ್ತಾನೆ. ಆ ಟ್ರಸ್ಟ್‍ಗೆ ಕಿರಣ್‍ಳನ್ನೇ ಟ್ರಸ್ಟೀ ಮಾಡಿರುತ್ತಾನೆ. ತನ್ನ 23ರ ಹರೆಯದ ಮಗ ಅಜಯ್‍ಗೆ 45 ವರ್ಷ ವಯಸ್ಸು ತುಂಬಿದಾಗ ಟ್ರಸ್ಟ್ ಅನ್ನು ಇಲ್ಲವಾಗಿಸಿ ತನ್ನ ಇಡೀ ಆಸ್ತಿ ಮಗನಿಗೆ ಬರಬೇಕು ಎಂದು ಆದೇಶಿಸಿರುತ್ತಾನೆ. ಆದರೆ ಅದಕ್ಕೂ ಹತ್ತಾರು ಶರತ್ತುಗಳನ್ನು ವಿಧಿಸಿರುತ್ತಾನೆ. ಪ್ರತಿದಿನ ಅಜಯ್ ಆಫೀಸಿಗೆ ಹಾಜರಾಗಬೇಕೆಂದೂ, ತನಗೆ ಇಷ್ಟವಾದ ಹಲ್ವಾವನ್ನು ಸಕ್ಕರೆ ಕಾಯಿಲೆಯಿಂದಾಗಿ ತಿನ್ನಲಾಗಿದ್ದರಿಂದ ಮಗನೂ ತನ್ನ ಜೀವಮಾನವಿಡೀ ಹಲ್ವಾ ತಿನ್ನಬಾರದೆಂದೂ ಶರತ್ತು ಹಾಕಿರುತ್ತಾನೆ. ಮನೆ ನಿರ್ವಹಣೆಗೆ, ಕೈಕಾಸಿಗೆ ತನ್ನ ಕುಟುಂಬದ ಮೂವರಿಗಲ್ಲದೆ ಟ್ರಸ್ಟಿ ಆಗಿರುವ ಕಿರಣ್‍ಳಿಗೂ ಮಾಸಾಶನವನ್ನು ನಿಗದಿ ಮಾಡಿರುತ್ತಾನೆ. ಹೀಗೆ ತನ್ನ ಸಮಾಧಿಯಿಂದಲೂ ತನ್ನ ಕುಟುಂಬದ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಹವಣಿಸುವ ಸದಾನಂದ ತನ್ನ ನಲ್ಲೆ ಕಿರಣ್‍ಳನ್ನು ಸುಮ್ಮನೆ ಬಿಡುತ್ತಾನೆಯೇ? ಆಕೆ ಕೂಡ ತನ್ನ ಕುಡುಕ ಗಂಡನನ್ನು ತೊರೆದು ತನ್ನ ಮನೆಯಲ್ಲೇ ತನ್ನ ಸಂಸಾರದ ಸದಸ್ಯೆಯಂತೆ ವಾಸಿಸಬೇಕು ಎಂದು ಆದೇಶಿಸಿರುತ್ತಾನೆ. ತಾನು ವಿಧಿಸಿರುವ ಶರತ್ತುಗಳಲ್ಲಿ ಒಂದೇ ಒಂದನ್ನೂ ತನ್ನ ಕುಟುಂಬದ ಸದಸ್ಯರು ಪಾಲಿಸದಿದ್ದರೆ ತನ್ನ ಇಡೀ ಆಸ್ತಿಯನ್ನು ತಾನು ಪಟ್ಟಿ ಮಾಡಿರುವ ಸಂಘ ಸಂಸ್ಥೆಗಳಿಗೆ ದಾನ ಮಾಡಿ ತನ್ನ ಕುಟುಂಬಕ್ಕೆ ನಯಾಪೈಸೆ ಸಿಗಕೂಡದೆಂದು ಹೇಳಿರುತ್ತಾನೆ. ಆದರೆ ಈ ವಿಲ್‍ಅನ್ನು ಸದಾನಂದ ಗೌಪ್ಯವಾಗಿಟ್ಟಿರುತ್ತಾನೆ.

ಮಹೇಶ್ ದತ್ತಾನಿ

ಒಂದು ದಿನ ಸದಾನಂದ ಹೃದಯಘಾತದಿಂದ ಸತ್ತೇ ಹೋಗುತ್ತಾನೆ. ತಾನು ಬರೆದಿಟ್ಟಿರುವ ವಿಲ್‍ಗೆ ತನ್ನ ಕುಟುಂಬದ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡಲು ಆತನ ಆತ್ಮ ಅಲ್ಲೇ ಅವರೆಲ್ಲರ ಮಧ್ಯೆ ಸುಳಿದಾಡುತ್ತಿರುತ್ತದೆ. ಆದರೆ ಅವರು ಯಾರಿಗೂ ಆತನ ಆತ್ಮ ತಮ್ಮ ಮಧ್ಯೆ ಇರುವುದು ಗೊತ್ತಿರುವುದಿಲ್ಲ.

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ. ಅವರು ಇಂತಹ ಪರಿಸ್ಥಿತಿಯಲ್ಲಿರುವಾಗಲೇ ಅವರೊಂದಿಗೆ ವಾಸಿಸಲು ಕಿರಣ್ ಬರುತ್ತಾಳೆ.

ಸದಾನಂದನ ವಿಲ್‍ನಿಂದಾಗಿ ಆತನ ಕುಟುಂಬದ ಸದಸ್ಯರ ಬದುಕೇ ಉಲ್ಟಾ ಪಲ್ಟಾ ಅಗಿದೆ. ಆದರೆ ವಿಧಿ ಇಲ್ಲ. ಆತನ ಕೋಟ್ಯಾಂತರ ರೂಪಾಯಿಗಳ ಆಸ್ತಿ ಬರಬೇಕೆಂದರೆ ಆತನ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು. ಅಜಯ್ ಕೊನೆಗೂ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ಕಲಿಯುತ್ತಾನೆ. ಆತನ ಹೆಂಡತಿ ಸ್ವರ್ಣ ಗೃಹಿಣಿಯಾಗಿ, ಹೆಂಡತಿಯಾಗಿ ತನ್ನ ಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಸೊಸೆ ಪ್ರೀತಿ ಕೂಡ ಬದುಕಿನಲ್ಲಿ ಹಣವೇ ಮುಖ್ಯವಲ್ಲ ಎಂದು ಮನಗಾಣುತ್ತಾಳೆ. ಇನ್ನು ಕಿರಣ್‍ಳಲ್ಲೂ ಬದಲಾವಣೆಗಳಾಗುತ್ತವೆ. ಸದಾನಂದ ಹೇಗೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಮರಣೋತ್ತರವೂ ನಿಯಂತ್ರಿಸುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ಕೊನೆಗೆ ಅವರೆಲ್ಲ ಜೊತೆಗೂಡಿ ಸದಾನಂದನ ಕೀಲುಬೊಂಬೆಗಳಾಗಿ ಬದುಕುವುದನ್ನು ನಿಲ್ಲಿಸುವ ಮೂಲಕ ಆತನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.

-ಇದು ಯಾವುದೋ ಸಿನಿಮಾದ ಕತೆಯಲ್ಲ. ಬದಲಾಗಿ ನನ್ನ ಹಲವಾರು ವರ್ಷಗಳ ಸ್ನೇಹಿತನೂ, ಸಾಹಿತಿಯೂ ಆಗಿರುವ ಮಹೇಶ್ ದತ್ತಾನಿ ಬರೆದಿರುವ ಒಂದು ನಾಟಕದ ಕಥಾಸಾರಾಂಶ. ಇದನ್ನು ಒಂದು ಸೀರಿಯಸ್ ವಿಷಯದ ಸುತ್ತ ಹೆಣೆದಿದ್ದರೂ ಡೈಲಾಗ್‍ಗಳು ತುಂಬಾ ಮಜವಾಗಿದ್ದು ಇದೊಂದು ಕಾಮಿಡಿ ನಾಟಕವಾಗಿದೆ. ಈ ಇಂಗ್ಲಿಷ್ ನಾಟಕದ ಹೆಸರು `Where there is a will’. ಈಗ ಈ ನಾಟಕವು ಬೆಂಗಳೂರು ಮತ್ತು ಅಲಹಾಬಾದ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದೆ.

ಆಗಸ್ಟ್ 14, 2013


ಇದನ್ನು ಓದಿ: ನೆರೆಯ ಕೇರಳ ಮಾದರಿ ಅನುಸರಿಸಲು ಸರ್ಕಾರ ಸಿದ್ದವಿಲ್ಲವೇಕೆ? : ಕುಮಾರಸ್ವಾಮಿ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...