Homeಅಂಕಣಗಳುಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ.

- Advertisement -
- Advertisement -

ಶ್ರಮಜೀವಿಯಾದ ಸದಾನಂದ ಪಟೇಲ್ ಕಷ್ಟಪಟ್ಟು ದುಡಿದು ಕೋಟ್ಯಾಂತರ ರೂಪಾಯಿಗಳ ಆಸ್ತಿಯ ಮಾಲೀಕನಾಗಿದ್ದಾನೆ. ತನ್ನ ಸಾಧನೆ ಬಗ್ಗೆ ಆತನಿಗೆ ತುಂಬಾ ಹೆಮ್ಮೆ ಇದೆ. ಹಾಗೆಯೇ ಅಶಿಕ್ಷಿತಳಾದ ಹೆಂಡತಿ ಸ್ವರ್ಣಳ ಬಗ್ಗೆ, ಇನ್ನೂ ಉಂಡಾಡಿ ಗುಂಡನಂತಾಡುವ ಮಗ ಅಜಯ್ ಬಗ್ಗೆ ಮತ್ತು ಸೌಮ್ಯ ಸ್ವಭಾವದವಳಂತೆ ಕಂಡರೂ ಒಳಗೊಳಗೆ ಕುತಂತ್ರಿಯಾದ ಸೊಸೆ ಪ್ರೀತಿ ಬಗ್ಗೆ ಸದಾನಂದನಿಗೆ ಇನ್ನಿಲ್ಲದಷ್ಟು ಕೋಪ, ಅಸಹನೆ ಮತ್ತು ಸೇಡಿನ ಭಾವನೆ. ಈ ಮೂವರೂ ತನ್ನ ಮರಣದ ನಂತರ ತಾನು ಕಷ್ಟಪಟ್ಟು ದುಡಿದಿದ್ದ ಆಸ್ತಿಯನ್ನೆಲ್ಲ ಮಜಾ ಮಾಡುತ್ತಾ ಕರಗಿಸುತ್ತಾರೆ ಎಂಬ ಗುಮಾನಿ. ಅದಕ್ಕಿಂತ ಮುಖ್ಯವಾಗಿ ಇವರೆಲ್ಲರಿಂದಾಗಿ ತನ್ನದು ಎಂಬುದು ಯಾವುದೂ ಈ ಭೂಮಿಯ ಮೇಲೆ ಉಳಿದಿರುವುದಿಲ್ಲ ಎಂಬ ಜಿಗುಪ್ಸೆ.

ಈತನ ಹೆಸರು ಸದಾನಂದ ಎಂಬುದಾದರೂ ಈತ ಕೋಪಿಷ್ಟ. ಈತ ನಕ್ಕಿದ್ದನ್ನು ನೋಡಿದವರೇ ಇಲ್ಲ. ಇತರರ ಬಗ್ಗೆ ಅಸೂಕ್ಷ್ಮವಾಗಿ ವರ್ತಿಸುವ, ಸದಾ ತನ್ನ ಬಗ್ಗೆ ಮಾತ್ರ ಯೋಚಿಸುವ ಸದಾನಂದ ಆಫೀಸಿನಲ್ಲೂ, ಮನೆಯಲ್ಲೂ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುವವನು. ಇದರಿಂದ ಬೇಸರವಾದರೂ ಸಂಪ್ರದಾಯಸ್ಥ ಗೃಹಿಣಿಯಾದ ಸ್ವರ್ಣ ಪ್ರತಿಭಟಿಸುವುದಿಲ್ಲ. ಆದರೆ ಅವರ ಮಗ ಅಜಯ್ ಹಾಗಲ್ಲ. ಕಾರಣವಿದ್ದರೂ, ಇರದಿದ್ದರೂ ತನ್ನ ಅಪ್ಪ ಸದಾನಂದ ತಾಳಿರುವ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳುವುದು ಅಜಯ್‍ನ ಸ್ವಭಾವ. ಆ ಮೂಲಕವಾದರೂ ತನ್ನನ್ನು ಸದಾ ಅವಮಾನಿಸುವ ಅಪ್ಪನ ವಿರುದ್ಧ `ಕ್ರಾಂತಿ’ ಸಾಧಿಸಿದ್ದೇನೆಂಬ ಭಾವನೆ ಅವನಿಗೆ.

ಸದಾನಂದನ ಸೊಸೆ ಪ್ರೀತಿ ಮೇಲುನೋಟಕ್ಕೆ ತಗ್ಗಿಬಗ್ಗಿ ನಡೆಯುವ ಯುವತಿಯಂತೆ ಕಂಡರೂ ಆಕೆ ಧನಪಿಶಾಚಿ. ಮುಂದೊಂದು ದಿನ ಸದಾನಂದ ಸತ್ತು ಆತನ ಆಸ್ತಿಯೆಲ್ಲಾ ಅಜಯ್ ಪಾಲಿಗೆ ಬರುತ್ತೆ ಎಂಬ ಕಾರಣಕ್ಕೇ ಆ ಉಂಡಾಡಿಗುಂಡನನ್ನು ಮದುವೆ ಆಗಿರುವವಳು.

ಈ ಮೂವರಲ್ಲದೆ ಸದಾನಂದನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವವಳು ಮಧ್ಯವಯಸ್ಕಿನ ಮಹಿಳೆ ಕಿರಣ್ ಮೆಣಸಿನಕಾಯಿ. ಸದಾನಂದನ ಕಂಪನಿಯ ಬೋರ್ಡ್‍ನಲ್ಲಿ ಪ್ರಮುಖ ಸದಸ್ಯೆಯಾಗಿರುವ ಕಿರಣ್ ಸದಾನಂದನ ಪ್ರೇಯಸಿ ಕೂಡ ಹೌದು. ಬೇರೆಯವರ ಬದುಕನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈಯಾದ ಸದಾನಂದ ತನ್ನ ಮತ್ತು ಕಿರಣ್ ನಡುವಿನ ಸಂಬಂಧದ ಬಗ್ಗೆ ಬೇರೆಯವರಿಗೆ ಸುಳಿವು ಸಿಗಕೂಡದೆಂದು ಆಕೆಗೆ ಕುಡುಕನೊಬ್ಬನೊಂದಿಗೆ ಮದುವೆ ಮಾಡಿರುತ್ತಾನೆ. ಹಾಗೆ ಮಾಡುವ ಮೂಲಕ ಆಕೆಗೆ ಸಮಾಜದಲ್ಲಿ ಸ್ಥಾನಮಾನ, ಆಕೆಯ ಗಂಡನಿಗೆ ದಿನನಿತ್ಯ ಗುಂಡು ಮತ್ತು ತನಗೆ ಓರ್ವ ಸುಂದರ ಮತ್ತು ದಕ್ಷ ನಲ್ಲೆ ಸಿಗುವಂತೆ ಏರ್ಪಾಡು ಮಾಡಿಕೊಂಡಿರುತ್ತಾನೆ.

ಗುಂಡು, ಸಿಗರೇಟು ಹವ್ಯಾಸಗಳನ್ನು ಹೊಂದಿರುವ ಸದಾನಂದ ಹೈ ಬಿಪಿ, ಡಯಾಬಿಟೀಸ್ ಮತ್ತು ಹೈ ಕೊಲೆಸ್ಟರಾಲ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ತಾನು ಬದುಕಿರುವಾಗ ತನ್ನ ಸುತ್ತಲಿನವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಸದಾನಂದ ತಾನು ಸತ್ತ ಮೇಲೂ ಅವರೆಲ್ಲರ ಮೇಲೆ ನಿಯಂತ್ರಣ ಹೊಂದಿರುವುದು ಹೇಗೆ ಎಂದು ಯೋಚಿಸುತ್ತಾನೆ. ತನ್ನ ಅಪಾರ ಸಂಪತ್ತಿನಲ್ಲಿ ನಯಾಪೈಸೆಗೂ ತನ್ನ ಪತ್ನಿ ಸ್ವರ್ಣ, ಮಗ ಅಜಯ್, ಸೊಸೆ ಪ್ರೀತಿ ಮತ್ತು ಕೊನೆಗೆ ನಲ್ಲೆ ಕಿರಣ್ ಕೂಡ ಅರ್ಹರಲ್ಲ ಎಂದೇ ನಂಬಿರುವ ಸದಾನಂದ ಸಾಯುವ ಮುನ್ನ ಒಂದು ವಿಚಿತ್ರ ವಿಲ್ ಬರೆದಿಡುತ್ತಾನೆ.

ಆ ವಿಲ್‍ನಲ್ಲಿ ತನ್ನ ಸರ್ವ ಸಂಪತ್ತನ್ನು ಒಂದು ಟ್ರಸ್ಟ್‍ಗೆ ಬರೆದಿರುತ್ತಾನೆ. ಆ ಟ್ರಸ್ಟ್‍ಗೆ ಕಿರಣ್‍ಳನ್ನೇ ಟ್ರಸ್ಟೀ ಮಾಡಿರುತ್ತಾನೆ. ತನ್ನ 23ರ ಹರೆಯದ ಮಗ ಅಜಯ್‍ಗೆ 45 ವರ್ಷ ವಯಸ್ಸು ತುಂಬಿದಾಗ ಟ್ರಸ್ಟ್ ಅನ್ನು ಇಲ್ಲವಾಗಿಸಿ ತನ್ನ ಇಡೀ ಆಸ್ತಿ ಮಗನಿಗೆ ಬರಬೇಕು ಎಂದು ಆದೇಶಿಸಿರುತ್ತಾನೆ. ಆದರೆ ಅದಕ್ಕೂ ಹತ್ತಾರು ಶರತ್ತುಗಳನ್ನು ವಿಧಿಸಿರುತ್ತಾನೆ. ಪ್ರತಿದಿನ ಅಜಯ್ ಆಫೀಸಿಗೆ ಹಾಜರಾಗಬೇಕೆಂದೂ, ತನಗೆ ಇಷ್ಟವಾದ ಹಲ್ವಾವನ್ನು ಸಕ್ಕರೆ ಕಾಯಿಲೆಯಿಂದಾಗಿ ತಿನ್ನಲಾಗಿದ್ದರಿಂದ ಮಗನೂ ತನ್ನ ಜೀವಮಾನವಿಡೀ ಹಲ್ವಾ ತಿನ್ನಬಾರದೆಂದೂ ಶರತ್ತು ಹಾಕಿರುತ್ತಾನೆ. ಮನೆ ನಿರ್ವಹಣೆಗೆ, ಕೈಕಾಸಿಗೆ ತನ್ನ ಕುಟುಂಬದ ಮೂವರಿಗಲ್ಲದೆ ಟ್ರಸ್ಟಿ ಆಗಿರುವ ಕಿರಣ್‍ಳಿಗೂ ಮಾಸಾಶನವನ್ನು ನಿಗದಿ ಮಾಡಿರುತ್ತಾನೆ. ಹೀಗೆ ತನ್ನ ಸಮಾಧಿಯಿಂದಲೂ ತನ್ನ ಕುಟುಂಬದ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಹವಣಿಸುವ ಸದಾನಂದ ತನ್ನ ನಲ್ಲೆ ಕಿರಣ್‍ಳನ್ನು ಸುಮ್ಮನೆ ಬಿಡುತ್ತಾನೆಯೇ? ಆಕೆ ಕೂಡ ತನ್ನ ಕುಡುಕ ಗಂಡನನ್ನು ತೊರೆದು ತನ್ನ ಮನೆಯಲ್ಲೇ ತನ್ನ ಸಂಸಾರದ ಸದಸ್ಯೆಯಂತೆ ವಾಸಿಸಬೇಕು ಎಂದು ಆದೇಶಿಸಿರುತ್ತಾನೆ. ತಾನು ವಿಧಿಸಿರುವ ಶರತ್ತುಗಳಲ್ಲಿ ಒಂದೇ ಒಂದನ್ನೂ ತನ್ನ ಕುಟುಂಬದ ಸದಸ್ಯರು ಪಾಲಿಸದಿದ್ದರೆ ತನ್ನ ಇಡೀ ಆಸ್ತಿಯನ್ನು ತಾನು ಪಟ್ಟಿ ಮಾಡಿರುವ ಸಂಘ ಸಂಸ್ಥೆಗಳಿಗೆ ದಾನ ಮಾಡಿ ತನ್ನ ಕುಟುಂಬಕ್ಕೆ ನಯಾಪೈಸೆ ಸಿಗಕೂಡದೆಂದು ಹೇಳಿರುತ್ತಾನೆ. ಆದರೆ ಈ ವಿಲ್‍ಅನ್ನು ಸದಾನಂದ ಗೌಪ್ಯವಾಗಿಟ್ಟಿರುತ್ತಾನೆ.

ಮಹೇಶ್ ದತ್ತಾನಿ

ಒಂದು ದಿನ ಸದಾನಂದ ಹೃದಯಘಾತದಿಂದ ಸತ್ತೇ ಹೋಗುತ್ತಾನೆ. ತಾನು ಬರೆದಿಟ್ಟಿರುವ ವಿಲ್‍ಗೆ ತನ್ನ ಕುಟುಂಬದ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡಲು ಆತನ ಆತ್ಮ ಅಲ್ಲೇ ಅವರೆಲ್ಲರ ಮಧ್ಯೆ ಸುಳಿದಾಡುತ್ತಿರುತ್ತದೆ. ಆದರೆ ಅವರು ಯಾರಿಗೂ ಆತನ ಆತ್ಮ ತಮ್ಮ ಮಧ್ಯೆ ಇರುವುದು ಗೊತ್ತಿರುವುದಿಲ್ಲ.

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ. ಅವರು ಇಂತಹ ಪರಿಸ್ಥಿತಿಯಲ್ಲಿರುವಾಗಲೇ ಅವರೊಂದಿಗೆ ವಾಸಿಸಲು ಕಿರಣ್ ಬರುತ್ತಾಳೆ.

ಸದಾನಂದನ ವಿಲ್‍ನಿಂದಾಗಿ ಆತನ ಕುಟುಂಬದ ಸದಸ್ಯರ ಬದುಕೇ ಉಲ್ಟಾ ಪಲ್ಟಾ ಅಗಿದೆ. ಆದರೆ ವಿಧಿ ಇಲ್ಲ. ಆತನ ಕೋಟ್ಯಾಂತರ ರೂಪಾಯಿಗಳ ಆಸ್ತಿ ಬರಬೇಕೆಂದರೆ ಆತನ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು. ಅಜಯ್ ಕೊನೆಗೂ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ಕಲಿಯುತ್ತಾನೆ. ಆತನ ಹೆಂಡತಿ ಸ್ವರ್ಣ ಗೃಹಿಣಿಯಾಗಿ, ಹೆಂಡತಿಯಾಗಿ ತನ್ನ ಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಸೊಸೆ ಪ್ರೀತಿ ಕೂಡ ಬದುಕಿನಲ್ಲಿ ಹಣವೇ ಮುಖ್ಯವಲ್ಲ ಎಂದು ಮನಗಾಣುತ್ತಾಳೆ. ಇನ್ನು ಕಿರಣ್‍ಳಲ್ಲೂ ಬದಲಾವಣೆಗಳಾಗುತ್ತವೆ. ಸದಾನಂದ ಹೇಗೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಮರಣೋತ್ತರವೂ ನಿಯಂತ್ರಿಸುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ಕೊನೆಗೆ ಅವರೆಲ್ಲ ಜೊತೆಗೂಡಿ ಸದಾನಂದನ ಕೀಲುಬೊಂಬೆಗಳಾಗಿ ಬದುಕುವುದನ್ನು ನಿಲ್ಲಿಸುವ ಮೂಲಕ ಆತನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.

-ಇದು ಯಾವುದೋ ಸಿನಿಮಾದ ಕತೆಯಲ್ಲ. ಬದಲಾಗಿ ನನ್ನ ಹಲವಾರು ವರ್ಷಗಳ ಸ್ನೇಹಿತನೂ, ಸಾಹಿತಿಯೂ ಆಗಿರುವ ಮಹೇಶ್ ದತ್ತಾನಿ ಬರೆದಿರುವ ಒಂದು ನಾಟಕದ ಕಥಾಸಾರಾಂಶ. ಇದನ್ನು ಒಂದು ಸೀರಿಯಸ್ ವಿಷಯದ ಸುತ್ತ ಹೆಣೆದಿದ್ದರೂ ಡೈಲಾಗ್‍ಗಳು ತುಂಬಾ ಮಜವಾಗಿದ್ದು ಇದೊಂದು ಕಾಮಿಡಿ ನಾಟಕವಾಗಿದೆ. ಈ ಇಂಗ್ಲಿಷ್ ನಾಟಕದ ಹೆಸರು `Where there is a will’. ಈಗ ಈ ನಾಟಕವು ಬೆಂಗಳೂರು ಮತ್ತು ಅಲಹಾಬಾದ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದೆ.

ಆಗಸ್ಟ್ 14, 2013


ಇದನ್ನು ಓದಿ: ನೆರೆಯ ಕೇರಳ ಮಾದರಿ ಅನುಸರಿಸಲು ಸರ್ಕಾರ ಸಿದ್ದವಿಲ್ಲವೇಕೆ? : ಕುಮಾರಸ್ವಾಮಿ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...