Homeಎಕಾನಮಿಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು.

- Advertisement -
- Advertisement -

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು. ಸಿಮೋನ್ ಡಿ ಬೋವಾ ನಾನು ಮಹಿಳೆಯಾಗಿ ಹುಟ್ಟಲಿಲ್ಲ, ಆದರೆ ಆಗಲ್ಪಟ್ಟೆ ಎಂದಿದ್ದರು. ಸಮಾಜ ವ್ಯಕ್ತಿ ಮತ್ತು ವ್ಯಕ್ತಿತ್ವದ ಸೃಷ್ಟಿಗೆ ನೀಡುವ ಅಪಾರವಾದ ಸಕಾರಾತ್ಮಕ ಅಥವ ನಕಾರಾತ್ಮಕ ಕೊಡುಗೆಯನ್ನು ಈ ಹೇಳಿಕೆಗಳಲ್ಲಿ ಕಾಣಬಹುದು.

ಥಾಮಸ್ ಪಿಕೆಟಿ

ಈ ಶತಮಾನದ ಅತಿ ಹೆಚ್ಚು ಪ್ರಭಾವಿಸಿದ ಅರ್ಥಶಾಸ್ರಜ್ಞರನ್ನಾಗಿ ಥಾಮಸ್ ಪಿಕೆಟಿಯವರನ್ನು ಗುರುತಿಸುತ್ತಾರೆ. ಅವರ ಕ್ಯಾಪಿಟಲ್ ಇನ್ ದಿ 21ನೇ ಶತಮಾನದ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ಅವರ ಇತ್ತೀಚಿನ ಪುಸ್ತಕ ಕ್ಯಾಪಿಟಲ್ ಅಂಡ್ ಐಡಿಯಾಲಜಿ ಕೂಡಾ ಅದೇ ಮಟ್ಟದಲ್ಲಿ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಪುಸ್ತಕ. 1039 ಪುಟದ ಈ ಪುಸ್ತಕ ಒತ್ತಿ ಹೇಳುವುದು ಆರ್ಥಿಕ ಅಸಮಾನತೆಗೆ ಸಾಮಾಜಿಕ, ಸಾಂಸ್ಥಿಕ, ಸೈದ್ಧಾಂತಿಕ ಮತ್ತು ರಾಜಕೀಯ ಆಯಾಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು.

ಕಾರ್ಲ್ ಮಾರ್ಕ್ಸ್ ನ ವರ್ಗ ಸಂಘರ್ಷದ ಹೊರತಾಗಿ, ಸಾಮಾಜಿಕ ಆಯಾಮಗಳಾದ ಜಾತಿ, ಲಿಂಗ, ಬಣ್ಣ, ಧಾರ್ಮಿಕ ಸಂಘಟನೆಗಳು ವ್ಯಕ್ತಿಯನ್ನು ಕೃತಕವಾಗಿ ಮೇಲಿನ ಸ್ಥರದಲ್ಲಿಟ್ಟು ಬಹುಜನರನ್ನು ಹತ್ತಿಕ್ಕಿ ಹತೋಟಿಯಲ್ಲಿಡುವ ಕಾರ್ಯವನ್ನು ಪಿಕೆಟಿ ಐತಿಹಾಸಿಕವಾಗಿ ವಿಸ್ತರಿಸುತ್ತಾ ಹೋಗುತ್ತಾರೆ. ಅಂಕಿ ಅಂಶಗಳಿಲ್ಲದೆ ಪಿಕೆಟಿ ಏನನ್ನೂ ಹೇಳಹೋಗುವುದಿಲ್ಲ. ನಮ್ಮಲ್ಲಿ ಹೀಗೆ ಹೇಳುವುದುಂಟು, ದತ್ತಾಂಶಗಳನ್ನು ನೀಡಿದರೆ ನನ್ನ ದಿಕ್ಕು ಬದಲಿಸುತ್ತೇನೆ ಎಂದು. ಇದಕ್ಕೆ ತಕ್ಕಂತೆ ಪಿಕೆಟಿ ಅನೇಕ ದೇಶಗಳ ಮತ್ತು ಸಾಮ್ರಾಜ್ಯಗಳ ಆಡಳಿತ, ಶ್ರೇಣೀಕೃತ ವರ್ಗ, ಕಾನೂನು ಮತ್ತು ತೆರಿಗೆಗಳ ಮೂಲಕ ಹೇಗೆ ಆರ್ಥಿಕ ಅಸಮಾನತೆಯನ್ನು ಉಂಟುಮಾಡಿವೆ ಎನ್ನುವುದನ್ನು ವಿಸ್ತರಿಸುತ್ತಾರೆ.

ವಿಜಯನಗರ ಸಾಮ್ರಾಜ್ಯದಲ್ಲಿ ಬ್ರಾಹ್ಮಣ ಕ್ಷತ್ರಿಯ ವರ್ಣಗಳ ಒಡಂಬಡಿಕೆ, ಬ್ರಾಹ್ಮಣರಿಗೆ ಭೂದಾನಗಳನ್ನು ಮಾಡಿದ್ದು ಹಾಗೂ ಪುದುಕೊಟ್ಟೆಯಲ್ಲಿ ಕಲಾರ್ಸ್ ದಲಿತರು ಪಟ್ಟಕ್ಕೇರಿದ ಮೇಲೇ ಅವರನ್ನು ಕ್ಷತ್ರಿಯ ವರ್ಣಕ್ಕೆ ಸೇರಿಸಲು ಬ್ರಾಹ್ಮಣ ವರ್ಗದ ಮುದ್ರೆಯ ಅವಶ್ಯಕತೆ ಉಂಟುಮಾಡಿ, ಆ ಪಟ್ಟಕ್ಕಾಗಿ ಬ್ರಾಹ್ಮಣರು ಗಿಟ್ಟಿಸಿಕೊಂಡ ಭೂಮಿ ಮತ್ತು ಗಳಿಸಿದ ಸಂಪತ್ತನ್ನು ವಿವರಿಸುತ್ತಾನೆ. ಶಿವಾಜಿ ಮಹರಾಜ ಕೂಡಾ ಇದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಬೇಕಾದ ಪ್ರಸಂಗವು ಬರುತ್ತದೆ. ಈ ರೀತಿ ಆರ್ಥಿಕ ಮುಗ್ಗಟ್ಟಿಗೆ ಅಸಮಾನತೆಗೆ ಸಾಮಾಜಿಕ ಆಯಾಮ ಹೇಗೆ ಕಾರಣ ಎಂದು ಗಣನೀಯವಾಗಿ ಪರಿಗಣಿಸಿ ವಿವರಿಸುತ್ತಾರೆ ಪಿಕೆಟಿ.

ಇಂದಿಗೂ ಸಹ ರಾಜಕಾರಣ, ರಾಜ್ಯ ಮತ್ತು ಕೈಗಾರಿಕೋದ್ಯಮಿಗಳು ಹೇಗೆ ಪರಸ್ಪರ ತಮ್ಮ ತಮ್ಮನ್ನು ಭದ್ರಪಡಿಸಿಕೊಳ್ಳಲು ತಮಗೆ ಬೇಕಾದ ಕಾನೂನು ಮತ್ತು ನಿಯಮಾವಳಿಗಳನ್ನು ಆಗ್ಗಿಂದಾಗ್ಗೆ ರೂಪಿಸಿಕೊಳ್ಳುತ್ತಾರೆ (Regulated regulate regulators)ಎಂಬುದನ್ನು ವಿವರಿಸುತ್ತಾರೆ. ಇದೇ ಸಮಯದಲ್ಲಿ ಈ ಪ್ರಸಂಗ ನೆನಪಾಗುತ್ತದೆ: ಹಿಂದೊಮ್ಮೆ ಆಯವ್ಯಯದ ಮುಂಗಡ ಪತ್ರ ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲೇ ಅಂಬಾನಿ ಮನೆಯಲ್ಲಿ ರೇಡ್ ಆದಾಗ ಸಿಕ್ಕಿಬಿತ್ತು. ಆಗ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇದು ಹಣಕಾಸು ಸಚಿವಾಲಯ ಅಂಬಾನಿಗೆ ಮೊದಲೇ ಕೊಟ್ಟಿದ್ದೋ ಅಥವಾ ಅಂಬಾನಿಯೇ ಕೊಟ್ಟ ಪ್ರತಿಯೋ ಎಂದು ಬರೆದಿದ್ದರು. ನ್ಯೂಯಾರ್ಕರ್ ನಿಯತಕಾಲಿಕದ ಕಾರ್ಟೂನ್ ಒಂದು ಹೀಗೆ ಹೇಳುತ್ತದೆ., ಉದ್ಯೋಗಪತಿಗೆ ಒಬ್ಬ ಕೇಳುತ್ತಾನೆ, ನೀವು ಟೀಂ ಪ್ಲೇಯರ್ರೇ?ಎಂದು. ಆತ ಹೇಳುತ್ತಾನೆ, ಇಲ್ಲ, ನಾನು ಟೀಂ ಓನರೆಂದು. ನಮ್ಮ ಕ್ರಿಕೆಟ್ ಟೀಂಗೂ ಇದನ್ನು ಹೋಲಿಸಬಹುದು.

ಭಾರತದೇಶ ಸಾಮಾಜಿಕ ಚಲನಶೀಲತೆಯಲ್ಲಿ ಅತ್ಯಂತ ಕಳಪೆ ಸ್ಥಾನವನ್ನು ಹೊಂದಿದೆ. ಕಳೆದ ವರ್ಷ 82 ದೇಶಗಳಲ್ಲಿ 76ನೇ ಸ್ಥಾನವನ್ನು ಪಡೆದಿತ್ತು. ಅತ್ಯಂತ ಕೆಳಮಟ್ಟದ ಈ ಸ್ಥಾನಕ್ಕೆ ನಮ್ಮಲ್ಲಿನ ಜಾತಿ, ವರ್ಣಬೇಧ ನೀತಿ, ಆರ್ಥಿಕ ಅಸಮಾನತೆ ಕಾರಣ. ಇವೆಲ್ಲವೂ ಸಾಮಾಜಿಕ ಮುಗ್ಗಟ್ಟಿನ ಚಕ್ರವ್ಯೂಹದಿಂದ ಹೊರಕ್ಕೆ ದಾಟಿ ಹೋಗದಂತೆ ತಡೆಗೋಡೆ ಹಾಕಿ ನೋಡಿಕೊಳ್ಳುತ್ತವೆ. ಸೋಶಿಯಲ್ ಮೊಬಿಲಿಟಿ ಇಂಡೆಕ್ಸ್ ಎಂದು ಹೇಳುವ ಈ ಸಾಮಾಜಿಕ ಚಲನಶೀಲತೆಗೆ ನಮ್ಮ ಸಾಂಸ್ಥಿಕ ಸಂಘಟನೆಗಳು, ಧರ್ಮ ಮತ್ತು ಜಾತಿ ವ್ಯವಸ್ಥೆ ಬಲಿಷ್ಟ ತಡೆಗೋಡೆಗಳಾಗಿ ನಿಂತಿವೆ. ಆರ್ಥಿಕ ಅಸಮಾನತೆ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಗತಿ. ವಿಪರ್ಯಾಸವೆಂದರೆ ಕೊರೊನ ಮಹಾಮಾರಿಯ ಕಾಲದಲ್ಲೂ ಬಿಲಿಯನೇರ್‌ಗಳ ಆಸ್ತಿ ಕೊರೋನ ಸೋಂಕು ಮತ್ತು ಸಾವನ್ನು ಮೀರಿ ಬೆಳೆಯುತ್ತಿದೆ. ಅಮೇರಿಕಾದ ಪ್ರಜಾಪ್ರಭುತ್ವವನ್ನು,‘by the 1%, of the 1%, for the 1%’  ಎನ್ನುವುದುಂಟು. ಆಸ್ತಿ ತೆರಿಗೆಯನ್ನು ಸಮಗ್ರವಾಗಿ ಅನುಸ್ಠಾನಗೊಳಿಸಿದ್ದಲ್ಲಿ ಆರ್ಥಿಕ ಅಸಮಾನತೆಯನ್ನು ಹೇಗೆ ತಡೆಗಟ್ಟಬಹುದು ಎನ್ನುವುದನ್ನು ಪಿಕೆಟಿ ಅನೇಕ ಉದಾಹರಣೆಗೊಳೊಂದಿಗೆ ವಿವರಿಸುತ್ತಾನೆ. ಫ್ರಾನ್ಸ್ ದೇಶದಲ್ಲಿ 19ನೇ ಶತಮಾನದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬರುವ ಆಸ್ತಿಯ ಮೇಲೆ ಹಾಕಿದ ಕನಿಷ್ಟ ತೆರಿಗೆಯಿಂದ ಹೇಗೆ ಅಸಮಾನತೆಯನ್ನು ಹಿಂದಿಕ್ಕಲು ಸಾಧ್ಯವಾಯಿತೆಂದು ವಿವರಿಸುತ್ತಾನೆ. ಇಂದಿನ ಈ 1% ಪ್ರಜಾಪ್ರಭುತ್ವವನ್ನು ತಡೆಗಟ್ಟಲು ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.


ಇದನ್ನೂ ಓದಿ: ಭಾರತದಲ್ಲಿ ಧರ್ಮಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿತ್ತಿದ್ದೇವೆಯೇ? : ಬಿ. ಶ್ರೀಪಾದ ಭಟ್

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಕೊರೊನ ಸಮಯದ ಮತ್ತು ಕೊರೊನೋತ್ತರ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಮಾಡುತ್ತಿರುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...