Homeಎಕಾನಮಿಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು.

- Advertisement -
- Advertisement -

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು. ಸಿಮೋನ್ ಡಿ ಬೋವಾ ನಾನು ಮಹಿಳೆಯಾಗಿ ಹುಟ್ಟಲಿಲ್ಲ, ಆದರೆ ಆಗಲ್ಪಟ್ಟೆ ಎಂದಿದ್ದರು. ಸಮಾಜ ವ್ಯಕ್ತಿ ಮತ್ತು ವ್ಯಕ್ತಿತ್ವದ ಸೃಷ್ಟಿಗೆ ನೀಡುವ ಅಪಾರವಾದ ಸಕಾರಾತ್ಮಕ ಅಥವ ನಕಾರಾತ್ಮಕ ಕೊಡುಗೆಯನ್ನು ಈ ಹೇಳಿಕೆಗಳಲ್ಲಿ ಕಾಣಬಹುದು.

ಥಾಮಸ್ ಪಿಕೆಟಿ

ಈ ಶತಮಾನದ ಅತಿ ಹೆಚ್ಚು ಪ್ರಭಾವಿಸಿದ ಅರ್ಥಶಾಸ್ರಜ್ಞರನ್ನಾಗಿ ಥಾಮಸ್ ಪಿಕೆಟಿಯವರನ್ನು ಗುರುತಿಸುತ್ತಾರೆ. ಅವರ ಕ್ಯಾಪಿಟಲ್ ಇನ್ ದಿ 21ನೇ ಶತಮಾನದ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ಅವರ ಇತ್ತೀಚಿನ ಪುಸ್ತಕ ಕ್ಯಾಪಿಟಲ್ ಅಂಡ್ ಐಡಿಯಾಲಜಿ ಕೂಡಾ ಅದೇ ಮಟ್ಟದಲ್ಲಿ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಪುಸ್ತಕ. 1039 ಪುಟದ ಈ ಪುಸ್ತಕ ಒತ್ತಿ ಹೇಳುವುದು ಆರ್ಥಿಕ ಅಸಮಾನತೆಗೆ ಸಾಮಾಜಿಕ, ಸಾಂಸ್ಥಿಕ, ಸೈದ್ಧಾಂತಿಕ ಮತ್ತು ರಾಜಕೀಯ ಆಯಾಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು.

ಕಾರ್ಲ್ ಮಾರ್ಕ್ಸ್ ನ ವರ್ಗ ಸಂಘರ್ಷದ ಹೊರತಾಗಿ, ಸಾಮಾಜಿಕ ಆಯಾಮಗಳಾದ ಜಾತಿ, ಲಿಂಗ, ಬಣ್ಣ, ಧಾರ್ಮಿಕ ಸಂಘಟನೆಗಳು ವ್ಯಕ್ತಿಯನ್ನು ಕೃತಕವಾಗಿ ಮೇಲಿನ ಸ್ಥರದಲ್ಲಿಟ್ಟು ಬಹುಜನರನ್ನು ಹತ್ತಿಕ್ಕಿ ಹತೋಟಿಯಲ್ಲಿಡುವ ಕಾರ್ಯವನ್ನು ಪಿಕೆಟಿ ಐತಿಹಾಸಿಕವಾಗಿ ವಿಸ್ತರಿಸುತ್ತಾ ಹೋಗುತ್ತಾರೆ. ಅಂಕಿ ಅಂಶಗಳಿಲ್ಲದೆ ಪಿಕೆಟಿ ಏನನ್ನೂ ಹೇಳಹೋಗುವುದಿಲ್ಲ. ನಮ್ಮಲ್ಲಿ ಹೀಗೆ ಹೇಳುವುದುಂಟು, ದತ್ತಾಂಶಗಳನ್ನು ನೀಡಿದರೆ ನನ್ನ ದಿಕ್ಕು ಬದಲಿಸುತ್ತೇನೆ ಎಂದು. ಇದಕ್ಕೆ ತಕ್ಕಂತೆ ಪಿಕೆಟಿ ಅನೇಕ ದೇಶಗಳ ಮತ್ತು ಸಾಮ್ರಾಜ್ಯಗಳ ಆಡಳಿತ, ಶ್ರೇಣೀಕೃತ ವರ್ಗ, ಕಾನೂನು ಮತ್ತು ತೆರಿಗೆಗಳ ಮೂಲಕ ಹೇಗೆ ಆರ್ಥಿಕ ಅಸಮಾನತೆಯನ್ನು ಉಂಟುಮಾಡಿವೆ ಎನ್ನುವುದನ್ನು ವಿಸ್ತರಿಸುತ್ತಾರೆ.

ವಿಜಯನಗರ ಸಾಮ್ರಾಜ್ಯದಲ್ಲಿ ಬ್ರಾಹ್ಮಣ ಕ್ಷತ್ರಿಯ ವರ್ಣಗಳ ಒಡಂಬಡಿಕೆ, ಬ್ರಾಹ್ಮಣರಿಗೆ ಭೂದಾನಗಳನ್ನು ಮಾಡಿದ್ದು ಹಾಗೂ ಪುದುಕೊಟ್ಟೆಯಲ್ಲಿ ಕಲಾರ್ಸ್ ದಲಿತರು ಪಟ್ಟಕ್ಕೇರಿದ ಮೇಲೇ ಅವರನ್ನು ಕ್ಷತ್ರಿಯ ವರ್ಣಕ್ಕೆ ಸೇರಿಸಲು ಬ್ರಾಹ್ಮಣ ವರ್ಗದ ಮುದ್ರೆಯ ಅವಶ್ಯಕತೆ ಉಂಟುಮಾಡಿ, ಆ ಪಟ್ಟಕ್ಕಾಗಿ ಬ್ರಾಹ್ಮಣರು ಗಿಟ್ಟಿಸಿಕೊಂಡ ಭೂಮಿ ಮತ್ತು ಗಳಿಸಿದ ಸಂಪತ್ತನ್ನು ವಿವರಿಸುತ್ತಾನೆ. ಶಿವಾಜಿ ಮಹರಾಜ ಕೂಡಾ ಇದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಬೇಕಾದ ಪ್ರಸಂಗವು ಬರುತ್ತದೆ. ಈ ರೀತಿ ಆರ್ಥಿಕ ಮುಗ್ಗಟ್ಟಿಗೆ ಅಸಮಾನತೆಗೆ ಸಾಮಾಜಿಕ ಆಯಾಮ ಹೇಗೆ ಕಾರಣ ಎಂದು ಗಣನೀಯವಾಗಿ ಪರಿಗಣಿಸಿ ವಿವರಿಸುತ್ತಾರೆ ಪಿಕೆಟಿ.

ಇಂದಿಗೂ ಸಹ ರಾಜಕಾರಣ, ರಾಜ್ಯ ಮತ್ತು ಕೈಗಾರಿಕೋದ್ಯಮಿಗಳು ಹೇಗೆ ಪರಸ್ಪರ ತಮ್ಮ ತಮ್ಮನ್ನು ಭದ್ರಪಡಿಸಿಕೊಳ್ಳಲು ತಮಗೆ ಬೇಕಾದ ಕಾನೂನು ಮತ್ತು ನಿಯಮಾವಳಿಗಳನ್ನು ಆಗ್ಗಿಂದಾಗ್ಗೆ ರೂಪಿಸಿಕೊಳ್ಳುತ್ತಾರೆ (Regulated regulate regulators)ಎಂಬುದನ್ನು ವಿವರಿಸುತ್ತಾರೆ. ಇದೇ ಸಮಯದಲ್ಲಿ ಈ ಪ್ರಸಂಗ ನೆನಪಾಗುತ್ತದೆ: ಹಿಂದೊಮ್ಮೆ ಆಯವ್ಯಯದ ಮುಂಗಡ ಪತ್ರ ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲೇ ಅಂಬಾನಿ ಮನೆಯಲ್ಲಿ ರೇಡ್ ಆದಾಗ ಸಿಕ್ಕಿಬಿತ್ತು. ಆಗ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇದು ಹಣಕಾಸು ಸಚಿವಾಲಯ ಅಂಬಾನಿಗೆ ಮೊದಲೇ ಕೊಟ್ಟಿದ್ದೋ ಅಥವಾ ಅಂಬಾನಿಯೇ ಕೊಟ್ಟ ಪ್ರತಿಯೋ ಎಂದು ಬರೆದಿದ್ದರು. ನ್ಯೂಯಾರ್ಕರ್ ನಿಯತಕಾಲಿಕದ ಕಾರ್ಟೂನ್ ಒಂದು ಹೀಗೆ ಹೇಳುತ್ತದೆ., ಉದ್ಯೋಗಪತಿಗೆ ಒಬ್ಬ ಕೇಳುತ್ತಾನೆ, ನೀವು ಟೀಂ ಪ್ಲೇಯರ್ರೇ?ಎಂದು. ಆತ ಹೇಳುತ್ತಾನೆ, ಇಲ್ಲ, ನಾನು ಟೀಂ ಓನರೆಂದು. ನಮ್ಮ ಕ್ರಿಕೆಟ್ ಟೀಂಗೂ ಇದನ್ನು ಹೋಲಿಸಬಹುದು.

ಭಾರತದೇಶ ಸಾಮಾಜಿಕ ಚಲನಶೀಲತೆಯಲ್ಲಿ ಅತ್ಯಂತ ಕಳಪೆ ಸ್ಥಾನವನ್ನು ಹೊಂದಿದೆ. ಕಳೆದ ವರ್ಷ 82 ದೇಶಗಳಲ್ಲಿ 76ನೇ ಸ್ಥಾನವನ್ನು ಪಡೆದಿತ್ತು. ಅತ್ಯಂತ ಕೆಳಮಟ್ಟದ ಈ ಸ್ಥಾನಕ್ಕೆ ನಮ್ಮಲ್ಲಿನ ಜಾತಿ, ವರ್ಣಬೇಧ ನೀತಿ, ಆರ್ಥಿಕ ಅಸಮಾನತೆ ಕಾರಣ. ಇವೆಲ್ಲವೂ ಸಾಮಾಜಿಕ ಮುಗ್ಗಟ್ಟಿನ ಚಕ್ರವ್ಯೂಹದಿಂದ ಹೊರಕ್ಕೆ ದಾಟಿ ಹೋಗದಂತೆ ತಡೆಗೋಡೆ ಹಾಕಿ ನೋಡಿಕೊಳ್ಳುತ್ತವೆ. ಸೋಶಿಯಲ್ ಮೊಬಿಲಿಟಿ ಇಂಡೆಕ್ಸ್ ಎಂದು ಹೇಳುವ ಈ ಸಾಮಾಜಿಕ ಚಲನಶೀಲತೆಗೆ ನಮ್ಮ ಸಾಂಸ್ಥಿಕ ಸಂಘಟನೆಗಳು, ಧರ್ಮ ಮತ್ತು ಜಾತಿ ವ್ಯವಸ್ಥೆ ಬಲಿಷ್ಟ ತಡೆಗೋಡೆಗಳಾಗಿ ನಿಂತಿವೆ. ಆರ್ಥಿಕ ಅಸಮಾನತೆ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಗತಿ. ವಿಪರ್ಯಾಸವೆಂದರೆ ಕೊರೊನ ಮಹಾಮಾರಿಯ ಕಾಲದಲ್ಲೂ ಬಿಲಿಯನೇರ್‌ಗಳ ಆಸ್ತಿ ಕೊರೋನ ಸೋಂಕು ಮತ್ತು ಸಾವನ್ನು ಮೀರಿ ಬೆಳೆಯುತ್ತಿದೆ. ಅಮೇರಿಕಾದ ಪ್ರಜಾಪ್ರಭುತ್ವವನ್ನು,‘by the 1%, of the 1%, for the 1%’  ಎನ್ನುವುದುಂಟು. ಆಸ್ತಿ ತೆರಿಗೆಯನ್ನು ಸಮಗ್ರವಾಗಿ ಅನುಸ್ಠಾನಗೊಳಿಸಿದ್ದಲ್ಲಿ ಆರ್ಥಿಕ ಅಸಮಾನತೆಯನ್ನು ಹೇಗೆ ತಡೆಗಟ್ಟಬಹುದು ಎನ್ನುವುದನ್ನು ಪಿಕೆಟಿ ಅನೇಕ ಉದಾಹರಣೆಗೊಳೊಂದಿಗೆ ವಿವರಿಸುತ್ತಾನೆ. ಫ್ರಾನ್ಸ್ ದೇಶದಲ್ಲಿ 19ನೇ ಶತಮಾನದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬರುವ ಆಸ್ತಿಯ ಮೇಲೆ ಹಾಕಿದ ಕನಿಷ್ಟ ತೆರಿಗೆಯಿಂದ ಹೇಗೆ ಅಸಮಾನತೆಯನ್ನು ಹಿಂದಿಕ್ಕಲು ಸಾಧ್ಯವಾಯಿತೆಂದು ವಿವರಿಸುತ್ತಾನೆ. ಇಂದಿನ ಈ 1% ಪ್ರಜಾಪ್ರಭುತ್ವವನ್ನು ತಡೆಗಟ್ಟಲು ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.


ಇದನ್ನೂ ಓದಿ: ಭಾರತದಲ್ಲಿ ಧರ್ಮಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿತ್ತಿದ್ದೇವೆಯೇ? : ಬಿ. ಶ್ರೀಪಾದ ಭಟ್

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಕೊರೊನ ಸಮಯದ ಮತ್ತು ಕೊರೊನೋತ್ತರ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಮಾಡುತ್ತಿರುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...