Homeಚಳವಳಿಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ಆರೋಗ್ಯ ಶುಶ್ರೂಸೆ ಬೇಕಾಗುತ್ತದೆ.

- Advertisement -
- Advertisement -

ಭಾರತವು ಕೊರೋನ ಪಿಡುಗು ಮತ್ತು ನಂತರ ಹೇರಲಾದ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಿಂದ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಈ ನಿರ್ಧಾರದ ಅಯೋಜಿತ ಮತ್ತು ಕಠೋರ ಸ್ವರೂಪವು ಆರೋಗ್ಯ ಮತ್ತು ಶುಶ್ರೂಷೆಯ ಬಿಕ್ಕಟ್ಟಿನ ಹೊರತಾಗಿ ದೊಡ್ಡ ಪ್ರಮಾಣದ ಮಾನವೀಯ ದುರಂತಕ್ಕೆ ಕಾರಣವಾಯಿತು. ಅತ್ಯಂತ ಕಣ್ಣಿಗೆ ರಾಚುವ ದುಷ್ಪರಿಣಾಮವು ಅನೌಪಚಾರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲಾಯಿತು. ಅವರು ಹತಾಶರಾಗಿ ನಗರಗಳಿಂದ ನೂರಾರು ಮೈಲಿ ದೂರದಲ್ಲಿರುವ ತಮ್ಮ ಊರುಗಳಿಗೆ ಧಾವಿಸಬೇಕಾಯಿತು. ಇನ್ನೂ ಕೂಡಾ ಅವರು ಆದಾಯ ನಷ್ಟ, ಉಪವಾಸ ಮತ್ತು ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೆ, ಕಣ್ಣಿಗೆ ಬೀಳದ ಪರಿಣಾಮವು ಮಹಿಳೆಯರು, ಹೆಣ್ಣು ಮಕ್ಕಳು ಮತ್ತು ಅಸಮ ಲಿಂಗತ್ವವಿರುವ ವ್ಯಕ್ತಿಗಳ ಮೇಲಾಗಿದ್ದು, ಅವರು ಮೌನವಾಗಿ ತಮ್ಮ ನೋವನ್ನು ಅದುಮಿಕೊಂಡು ಕಷ್ಟಪಡುತ್ತಿದ್ದಾರೆ.

ಈ ಬಿಕ್ಕಟ್ಟಿನ ಮುಂಚೂಣಿಯಲ್ಲಿ ಆರೋಗ್ಯ ಕಾರ್ಯಕರ್ತೆಯರಾಗಿರುವ, ಆಯಾಗಳು, ದಾದಿಯರು ಮತ್ತು ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ 70 ಶೇಕಡಾದಷ್ಟು ಮಹಿಳೆಯರೇ ಇರುವುದೆಂದು ನಮಗೆಲ್ಲಾ ಗೊತ್ತಿದೆ. ಆದರೂ, ಅವರ ಸಹಜ ಹಕ್ಕುಗಳಿಗೆ ಯಾವುದೇ ಖಾತರಿಯಿಲ್ಲ. ಸಾಮಾನ್ಯವಾಗಿ ಆರೋಗ್ಯ ವ್ಯವಸ್ಥೆಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ ಇರುವವರೇ ಮಹಿಳೆಯರು. 10 ಲಕ್ಷಕ್ಕೂ ಹೆಚ್ಚು  ಹಲವಾರು ರಾಜ್ಯಗಳಲ್ಲಿ ಕನಿಷ್ಟ ವೇತನವನ್ನೂ ಪಡೆಯದೇ ಅತ್ಯಂತ ಹೆಚ್ಚು ಅಪಾಯವಿರುವ ಸಮುದಾಯ ಕಣ್ಗಾವಲಿನಲ್ಲಿ ತೊಡಗಿರುವುದು ನಮಗೆ ಕಾಣಿಸುತ್ತಿಲ್ಲ.

ದಾದಿಯರು ಹೇಗೆ ಆಸ್ಪತ್ರೆಗಳು ಸಂಬಳವಿಲ್ಲದೇ ಕೆಲಸ ಮಾಡಲು ಕೆಲವು ತಿಂಗಳುಗಳಿಂದ ಒತ್ತಾಯಿಸುತ್ತಿವೆ ಎಂಬ ಕುರಿತು ಗಮನ ಸೆಳೆಯಲು ಸಾಂಕೇತಿಕ ಮುಷ್ಕರವನ್ನೂ ನಡೆಸಿದ್ದಾರೆ. ವೈದ್ಯರುಗಳಿಗಿಂತ ಹೆಚ್ಚು ಸಮಯವನ್ನು ಕೊರೋನ ರೋಗಿಗಳ ಸಂಪರ್ಕದಲ್ಲಿ ಕಳೆಯುವ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಾದ ಪಿಪಿಇ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಮಹಿಳಾ ದಾದಿಯರು ಅಶೌಚ ಮತ್ತು ಅಸುರಕ್ಷಿತ ತಾಣಗಳಲ್ಲಿ ರಾತ್ರಿ ಹೊತ್ತು ಉಳಿಯುವಂತೆ ಮಾಡಲಾಗಿದ್ದರೆ, ಹೆಚ್ಚಾಗಿ ಪುರುಷರೇ ಆಗಿರುವ ವೈದ್ಯರುಗಳನ್ನು ಹೊಟೇಲುಗಳಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ.

ಮನೆಯೊಳಗೂ ಮಹಿಳೆಯರು ಮಾಡುವ ಸಂಬಳವಿಲ್ಲದ ಕಾಯಕದ ಹೊರೆಯು ಹೆಚ್ಚಿದೆ.  ಏಕೆಂದರೆ, ಮನೆಯಲ್ಲಿ ಅಸ್ವಸ್ಥ ಕುಟುಂಬದ ಸದಸ್ಯರ ಆರೈಕೆ ಮಾಡುವವರೂ ಅವರೇ, ಕ್ವಾರಂಟೈನ್‌ನಲ್ಲಿರುವವರನ್ನು ನೋಡಿಕೊಳ್ಳುವವರೂ ಅವರೇ, ಮನೆಗಳಿಗೆ ಪಡಿತರ ತರುವವರು, ಕೆಲವು ಕಡೆಗಳಲ್ಲಿ ದೂರದೂರದಿಂದ ನೀರು ತರುವವರೂ ಅವರೇ. ಇವೆಲ್ಲವೂ ಅವರನ್ನು ಹೆಚ್ಚಿನ ಸೋಂಕು ಅಪಾಯಕ್ಕೆ ತಳ್ಳುತ್ತದೆ.

ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮತ್ತು ಅಂಗನವಾಡಿಗಳ ಪೌಷ್ಠಿಕ ಪೂರಕ ಆಹಾರ ಲಭಿಸದೇ ಇರುವುದರಿಂದ ಮತ್ತು ನಗರಗಳಿಗೆ ವಲಸೆ ಹೋಗಿದ್ದ ಹೆಚ್ಚಿನ ಪುರುಷರು ಮನೆಗೆ ಮರಳಿರುವುದರಿಂದ ಪ್ರತಿಯೊಂದು ಮನೆಯಲ್ಲಿ, ಮುಖ್ಯವಾಗಿ ಬಡವರ ಮನೆಗಳಲ್ಲಿ ಆಹಾರಕ್ಕಾಗಿ ಒತ್ತಡವು ಹೆಚ್ಚಿದೆ. ಸಾಮಾನ್ಯವಾಗಿ ಮಹಿಳೆಯರು ಕೊನೆಗೆ ಉಣ್ಣುತ್ತಾರೆ ಮತ್ತು ಪುರುಷರಿಗೆ ಹೋಲಿಸಿದರೆ ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಈಗ ಆಹಾರದ ಲಭ್ಯತೆ ಕಡಿಮೆಯಾಗಿರುವಾಗ, ಮುಖ್ಯವಾಗಿ ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರ ಪರಿಸ್ಥಿತಿ ಹದಗೆಡಲಿದೆ. ಇದು ಒಂದು ಆತಂಕಕಾರಿ ವಿಷಯವಾಗಿದೆ. ಯಾಕೆಂದರೆ, ಭಾರತವು ಈಗಾಗಲೇ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ದೈಹಿಕ ದೌರ್ಬಲ್ಯದ ಮಟ್ಟದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದು, ನಾಚಿಕೆಗೇಡಿನ ಪರಿಸ್ಥಿತಿಯಲ್ಲಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 2016 (NFHS-4) ತೋರಿಸಿರುವಂತೆ, ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರೂ ಸೇರಿದಂತೆ ಒಟ್ಟಾರೆ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಮನೆಗಳ ಒಳಗೆಯೇ, ಅತ್ಯಂತ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಲಾಕ್‌ಡೌನ್ ಸಮಯದಲ್ಲಿ ಹಿಂಸಾಚಾರದ ವರದಿ ಮಾಡುವುದು ಅಥವಾ ಔಷಧಾಲಯಗಳು ಮುಚ್ಚಿರುವುದರಿಂದ ಸೂಕ್ತವಾದ ಚಿಕಿತ್ಸೆ ಪಡೆಯುವುದು ಕೂಡಾ ಅತ್ಯಂತ ಕಷ್ಟಸಾಧ್ಯ ವಿಷಯವಾಗಿದೆ. ಅದಕ್ಕಿಂತ ಹೆಚ್ಚಾಗಿ ಹಿಂಸಾತ್ಮಕವಾಗಿ ಲಾಕ್‌ಡೌನ್ ಅನುಷ್ಟಾನಗೊಳಿಸುತ್ತಿರುವ ಪೊಲೀಸರನ್ನು ಸಂಪರ್ಕಿಸಿ ನೆರವು ಪಡೆಯುವುದೂ ಕೂಡಾ ತುಂಬಾ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಮತ್ತು ಅಸಮ ಲಿಂಗತ್ವ ಹೊಂದಿರುವ ವ್ಯಕ್ತಿಗಳು ಹಾಗೂ ಲೈಂಗಿಕ ಕಾರ್ಮಿಕರು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಕಿರುಕುಳ ಹೊಂದಿರುವ ಸಾಧ್ಯತೆಗಳು ಇವೆ. ಅವರಿಗೆ ಈ ಬಲಾತ್ಕಾರದ ಲಾಕ್‌ಡೌನ್ ಸಂದರ್ಭದಲ್ಲಿ ರಕ್ಷಣೆ, ಸಂತಾನೋತ್ಪತ್ತಿ ನಿರೋಧಕ ಸಾಧನಗಳ ಲಭ್ಯತೆ ಇರುವುದು ಸಾಧ್ಯವಿಲ್ಲ. ಇದು ಎಚ್ಐವಿ ಮತ್ತಿತರ ಲೈಂಗಿಕವಾಗಿ ಹರಡುವ ರೋಗಗಳ, ಬಯಸದಿರುವ ಗರ್ಭ, ಗರ್ಭಪಾತ ಇತ್ಯಾದಿ ಅಪಾಯಗಳನ್ನು ಗಣನೀಯವಾಗಿ ಹೆಚ್ಚುಮಾಡುತ್ತದೆ.

ಭಾರತದಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಪ್ರತಿಷ್ಠಾನ (FRHSI) ಅಧ್ಯಯನದ ಪ್ರಕಾರ ಈ ಲಾಕ್‌ಡೌನ್ ಎಂಟು ಲಕ್ಷಕ್ಕೂ ಹೆಚ್ಚು ಅಸುರಕ್ಷಿತ ಗರ್ಭಪಾತಕ್ಕೆ ಕಾರಣವಾಗಲಿದೆ. 23 ಲಕ್ಷ ಬಯಸದ ಗರ್ಭಗಳಿಂದ 1,750ರಷ್ಟು ತಾಯಂದಿರ ಮರಣವು (ಎಂಎಂಅರ್) ಸಂಭವಿಸಲಿವೆ. ಹೆಣ್ಣುಮಕ್ಕಳ ಋತುಕಾಲದ (ಮುಟ್ಟು ಕಾಲದ) ಸುರಕ್ಷಾ ಸಾಧನಗಳು ಸ್ಯಾನಿಟರಿ ಪ್ಯಾಡ್) ಇತ್ಯಾದಿ ಇಲ್ಲಿಯವರೆಗೆ ಶಾಲೆಯಿಂದ, ಅಂಗನವಾಡಿಯಿಂದ ಅಥವಾ ಆಶಾ ಕಾರ್ಯಕರ್ತೆಯರಿಂದ ದೊರಕುತ್ತಿದ್ದವು. ಈಗ ಅದೂ ಇಲ್ಲವಾಗಿದೆ. ದುಬಾರಿಯಾದ ಇಂತಹ ಉತ್ಪನ್ನಗಳನ್ನು ಖರೀದಿಸಲು ಎಷ್ಟು ಹೆಣ್ಣುಮಕ್ಕಳಿಗೆ ಸಾಧ್ಯವಿದೆ ಮತ್ತು ಎಷ್ಟು ಜನ ಈ ಲಾಕ್‌ಡೌನ್ ಸಂದರ್ಭದಲ್ಲಿ ಹೋಗಿ ಕೊಳ್ಳಲು ಸಾಧ್ಯ?

ಅವಸರದ ಲಾಕ್‌ಡೌನ್ ನಿರ್ಧಾರದ ಸಂದರ್ಭದಲ್ಲಿ ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ವಿಶೇಷ ಶುಶ್ರೂಷೆ ಬೇಕಾಗಿರುವ ಹೆರಿಗೆ ಸಂಬಂಧಿ ಕಷ್ಟಗಳು ಎದುರಾಗುತ್ತವೆ ಎಂಬುದೂ ಸರಕಾರಕ್ಕೆ ಮರೆತುಹೋದಂತಿದೆ. ಇಂತವರಿಗೆ ಸರಕಾರಿ ಆಗಲೀ, ಖಾಸಗಿಯಾಗಲೀ ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

 

ಲಾಕ್‌ಡೌನ್‌ನ ಅವಸರದ ನಿರ್ಧಾರದ ಈ ಸಂದರ್ಭದಲ್ಲಿ ಹಲವಾರು ಗರ್ಭಿಣಿಯರು ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ ಮಾಧ್ಯಮ ವರದಿಗಳಿವೆ. ಅವುಗಳು ರೋಗಿಗಳನ್ನು ದಾಖಲಿಸಲು ಹಿಂಜರಿಯುತ್ತಿರುವುದೇ ಇದಕ್ಕೆ ಕಾರಣ. ಮಹಿಳೆಯರು ಮನೆಗಳಲ್ಲಿ, ರೈಲುಗಳಲ್ಲಿ, ವಾಹನಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂತಹ ಪ್ರಕರಣಗಳ ಕುರಿತು ದೂರುಗಳು ತೆಲಂಗಾಣ, ಮುಂಬಯಿ ಮತ್ತು ದಿಲ್ಲಿ ಹೈಕೋರ್ಟ್‌ಗಳಲ್ಲಿ ದಾಖಲಾಗಿವೆ. ಹಲವಾರು ಮಹಿಳೆಯರು ಬಹಿರಂಗವಾಗಿ ತಮ್ಮ ಊರುಗಳಿಗೆ ನೂರಾರು ಮೈಲಿ ನಡೆಯುತ್ತಾ ರಸ್ತೆಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಮಾಲಕರಾಗಲೀ, ಸರಕಾರವಾಗಲೀ ಅವರ ನೆರವಿಗೆ ಬಂದಿಲ್ಲ. ಇದಕ್ಕಿಂತ ನಾಚಿಕೆಗೆಡು ಬೇರೆ ಇದೆಯೇ ಒಂದು ದೇಶಕ್ಕೆ?

ಇದು ಭಾರತವು ಎದುರಿಸಬೇಕಾಗಿರುವ ಮೊದಲ ಬಿಕ್ಕಟ್ಟು ಏನೂ ಅಲ್ಲ. ಈ ದೇಶದಲ್ಲಿ ಮಹಿಳೆಯರು ಮತ್ತವರ ಆರೋಗ್ಯದ ಬಗ್ಗೆ ದಂಗುಬಡಿಸುವಂತಹ ಅಸಡ್ಡೆ ತೋರಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗವು ಪುರುಷರು, ಮಹಿಳೆಯರು, ಅಸಮ ಲಿಂಗತ್ವ ಹೊಂದಿರುವವರು ಮತ್ತು ಮಕ್ಕಳ ಮೇಲೆ ಬೇರೆಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎಂಬ ಸೂಕ್ಷ್ಮತೆಯನ್ನು ನಮ್ಮ ಯೋಜಕರು ತಿಳಿದುಕೊಳ್ಳಬೇಕಾಗುತ್ತದೆ. ಜಾತಿ, ಧರ್ಮ, ಅಂತಸ್ತು, ಪ್ರಾದೇಶಿಕತೆ, ಸಂಪನ್ಮೂಲ ಮತ್ತು ಸೌಲಭ್ಯಗಳ ಲಭ್ಯತೆಯ ಆಧಾರದಲ್ಲೂ ಇವುಗಳು ಬದಲಾಗುತ್ತವೆ ಎಂಬುದನ್ನು ಕೂಡಾ ಅವರು ತಿಳಿದುಕೊಳ್ಳಬೇಕು. ಈ ಪಿಡುಗು ಈಗಾಗಲೇ ನಮ್ಮ ಸಮಾಜದಲ್ಲಿ ಇರುವ ಲಿಂಗತ್ವ ಸಂಬಂಧಿ ಕಂದರವನ್ನು ಇನ್ನಷ್ಟು ಆಲ, ಅಗಲ ಮಾಡದಂತೆ ತಡೆಯಬೇಕು.

  • ಜಶೋಧರ ದಾಸ್‌ಗುಪ್ತಾ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...