Homeಚಳವಳಿಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ಆರೋಗ್ಯ ಶುಶ್ರೂಸೆ ಬೇಕಾಗುತ್ತದೆ.

- Advertisement -
- Advertisement -

ಭಾರತವು ಕೊರೋನ ಪಿಡುಗು ಮತ್ತು ನಂತರ ಹೇರಲಾದ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಿಂದ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಈ ನಿರ್ಧಾರದ ಅಯೋಜಿತ ಮತ್ತು ಕಠೋರ ಸ್ವರೂಪವು ಆರೋಗ್ಯ ಮತ್ತು ಶುಶ್ರೂಷೆಯ ಬಿಕ್ಕಟ್ಟಿನ ಹೊರತಾಗಿ ದೊಡ್ಡ ಪ್ರಮಾಣದ ಮಾನವೀಯ ದುರಂತಕ್ಕೆ ಕಾರಣವಾಯಿತು. ಅತ್ಯಂತ ಕಣ್ಣಿಗೆ ರಾಚುವ ದುಷ್ಪರಿಣಾಮವು ಅನೌಪಚಾರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲಾಯಿತು. ಅವರು ಹತಾಶರಾಗಿ ನಗರಗಳಿಂದ ನೂರಾರು ಮೈಲಿ ದೂರದಲ್ಲಿರುವ ತಮ್ಮ ಊರುಗಳಿಗೆ ಧಾವಿಸಬೇಕಾಯಿತು. ಇನ್ನೂ ಕೂಡಾ ಅವರು ಆದಾಯ ನಷ್ಟ, ಉಪವಾಸ ಮತ್ತು ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೆ, ಕಣ್ಣಿಗೆ ಬೀಳದ ಪರಿಣಾಮವು ಮಹಿಳೆಯರು, ಹೆಣ್ಣು ಮಕ್ಕಳು ಮತ್ತು ಅಸಮ ಲಿಂಗತ್ವವಿರುವ ವ್ಯಕ್ತಿಗಳ ಮೇಲಾಗಿದ್ದು, ಅವರು ಮೌನವಾಗಿ ತಮ್ಮ ನೋವನ್ನು ಅದುಮಿಕೊಂಡು ಕಷ್ಟಪಡುತ್ತಿದ್ದಾರೆ.

ಈ ಬಿಕ್ಕಟ್ಟಿನ ಮುಂಚೂಣಿಯಲ್ಲಿ ಆರೋಗ್ಯ ಕಾರ್ಯಕರ್ತೆಯರಾಗಿರುವ, ಆಯಾಗಳು, ದಾದಿಯರು ಮತ್ತು ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ 70 ಶೇಕಡಾದಷ್ಟು ಮಹಿಳೆಯರೇ ಇರುವುದೆಂದು ನಮಗೆಲ್ಲಾ ಗೊತ್ತಿದೆ. ಆದರೂ, ಅವರ ಸಹಜ ಹಕ್ಕುಗಳಿಗೆ ಯಾವುದೇ ಖಾತರಿಯಿಲ್ಲ. ಸಾಮಾನ್ಯವಾಗಿ ಆರೋಗ್ಯ ವ್ಯವಸ್ಥೆಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ ಇರುವವರೇ ಮಹಿಳೆಯರು. 10 ಲಕ್ಷಕ್ಕೂ ಹೆಚ್ಚು  ಹಲವಾರು ರಾಜ್ಯಗಳಲ್ಲಿ ಕನಿಷ್ಟ ವೇತನವನ್ನೂ ಪಡೆಯದೇ ಅತ್ಯಂತ ಹೆಚ್ಚು ಅಪಾಯವಿರುವ ಸಮುದಾಯ ಕಣ್ಗಾವಲಿನಲ್ಲಿ ತೊಡಗಿರುವುದು ನಮಗೆ ಕಾಣಿಸುತ್ತಿಲ್ಲ.

ದಾದಿಯರು ಹೇಗೆ ಆಸ್ಪತ್ರೆಗಳು ಸಂಬಳವಿಲ್ಲದೇ ಕೆಲಸ ಮಾಡಲು ಕೆಲವು ತಿಂಗಳುಗಳಿಂದ ಒತ್ತಾಯಿಸುತ್ತಿವೆ ಎಂಬ ಕುರಿತು ಗಮನ ಸೆಳೆಯಲು ಸಾಂಕೇತಿಕ ಮುಷ್ಕರವನ್ನೂ ನಡೆಸಿದ್ದಾರೆ. ವೈದ್ಯರುಗಳಿಗಿಂತ ಹೆಚ್ಚು ಸಮಯವನ್ನು ಕೊರೋನ ರೋಗಿಗಳ ಸಂಪರ್ಕದಲ್ಲಿ ಕಳೆಯುವ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಾದ ಪಿಪಿಇ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಮಹಿಳಾ ದಾದಿಯರು ಅಶೌಚ ಮತ್ತು ಅಸುರಕ್ಷಿತ ತಾಣಗಳಲ್ಲಿ ರಾತ್ರಿ ಹೊತ್ತು ಉಳಿಯುವಂತೆ ಮಾಡಲಾಗಿದ್ದರೆ, ಹೆಚ್ಚಾಗಿ ಪುರುಷರೇ ಆಗಿರುವ ವೈದ್ಯರುಗಳನ್ನು ಹೊಟೇಲುಗಳಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ.

ಮನೆಯೊಳಗೂ ಮಹಿಳೆಯರು ಮಾಡುವ ಸಂಬಳವಿಲ್ಲದ ಕಾಯಕದ ಹೊರೆಯು ಹೆಚ್ಚಿದೆ.  ಏಕೆಂದರೆ, ಮನೆಯಲ್ಲಿ ಅಸ್ವಸ್ಥ ಕುಟುಂಬದ ಸದಸ್ಯರ ಆರೈಕೆ ಮಾಡುವವರೂ ಅವರೇ, ಕ್ವಾರಂಟೈನ್‌ನಲ್ಲಿರುವವರನ್ನು ನೋಡಿಕೊಳ್ಳುವವರೂ ಅವರೇ, ಮನೆಗಳಿಗೆ ಪಡಿತರ ತರುವವರು, ಕೆಲವು ಕಡೆಗಳಲ್ಲಿ ದೂರದೂರದಿಂದ ನೀರು ತರುವವರೂ ಅವರೇ. ಇವೆಲ್ಲವೂ ಅವರನ್ನು ಹೆಚ್ಚಿನ ಸೋಂಕು ಅಪಾಯಕ್ಕೆ ತಳ್ಳುತ್ತದೆ.

ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮತ್ತು ಅಂಗನವಾಡಿಗಳ ಪೌಷ್ಠಿಕ ಪೂರಕ ಆಹಾರ ಲಭಿಸದೇ ಇರುವುದರಿಂದ ಮತ್ತು ನಗರಗಳಿಗೆ ವಲಸೆ ಹೋಗಿದ್ದ ಹೆಚ್ಚಿನ ಪುರುಷರು ಮನೆಗೆ ಮರಳಿರುವುದರಿಂದ ಪ್ರತಿಯೊಂದು ಮನೆಯಲ್ಲಿ, ಮುಖ್ಯವಾಗಿ ಬಡವರ ಮನೆಗಳಲ್ಲಿ ಆಹಾರಕ್ಕಾಗಿ ಒತ್ತಡವು ಹೆಚ್ಚಿದೆ. ಸಾಮಾನ್ಯವಾಗಿ ಮಹಿಳೆಯರು ಕೊನೆಗೆ ಉಣ್ಣುತ್ತಾರೆ ಮತ್ತು ಪುರುಷರಿಗೆ ಹೋಲಿಸಿದರೆ ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಈಗ ಆಹಾರದ ಲಭ್ಯತೆ ಕಡಿಮೆಯಾಗಿರುವಾಗ, ಮುಖ್ಯವಾಗಿ ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರ ಪರಿಸ್ಥಿತಿ ಹದಗೆಡಲಿದೆ. ಇದು ಒಂದು ಆತಂಕಕಾರಿ ವಿಷಯವಾಗಿದೆ. ಯಾಕೆಂದರೆ, ಭಾರತವು ಈಗಾಗಲೇ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ದೈಹಿಕ ದೌರ್ಬಲ್ಯದ ಮಟ್ಟದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದು, ನಾಚಿಕೆಗೇಡಿನ ಪರಿಸ್ಥಿತಿಯಲ್ಲಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 2016 (NFHS-4) ತೋರಿಸಿರುವಂತೆ, ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರೂ ಸೇರಿದಂತೆ ಒಟ್ಟಾರೆ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಮನೆಗಳ ಒಳಗೆಯೇ, ಅತ್ಯಂತ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಲಾಕ್‌ಡೌನ್ ಸಮಯದಲ್ಲಿ ಹಿಂಸಾಚಾರದ ವರದಿ ಮಾಡುವುದು ಅಥವಾ ಔಷಧಾಲಯಗಳು ಮುಚ್ಚಿರುವುದರಿಂದ ಸೂಕ್ತವಾದ ಚಿಕಿತ್ಸೆ ಪಡೆಯುವುದು ಕೂಡಾ ಅತ್ಯಂತ ಕಷ್ಟಸಾಧ್ಯ ವಿಷಯವಾಗಿದೆ. ಅದಕ್ಕಿಂತ ಹೆಚ್ಚಾಗಿ ಹಿಂಸಾತ್ಮಕವಾಗಿ ಲಾಕ್‌ಡೌನ್ ಅನುಷ್ಟಾನಗೊಳಿಸುತ್ತಿರುವ ಪೊಲೀಸರನ್ನು ಸಂಪರ್ಕಿಸಿ ನೆರವು ಪಡೆಯುವುದೂ ಕೂಡಾ ತುಂಬಾ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಮತ್ತು ಅಸಮ ಲಿಂಗತ್ವ ಹೊಂದಿರುವ ವ್ಯಕ್ತಿಗಳು ಹಾಗೂ ಲೈಂಗಿಕ ಕಾರ್ಮಿಕರು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಕಿರುಕುಳ ಹೊಂದಿರುವ ಸಾಧ್ಯತೆಗಳು ಇವೆ. ಅವರಿಗೆ ಈ ಬಲಾತ್ಕಾರದ ಲಾಕ್‌ಡೌನ್ ಸಂದರ್ಭದಲ್ಲಿ ರಕ್ಷಣೆ, ಸಂತಾನೋತ್ಪತ್ತಿ ನಿರೋಧಕ ಸಾಧನಗಳ ಲಭ್ಯತೆ ಇರುವುದು ಸಾಧ್ಯವಿಲ್ಲ. ಇದು ಎಚ್ಐವಿ ಮತ್ತಿತರ ಲೈಂಗಿಕವಾಗಿ ಹರಡುವ ರೋಗಗಳ, ಬಯಸದಿರುವ ಗರ್ಭ, ಗರ್ಭಪಾತ ಇತ್ಯಾದಿ ಅಪಾಯಗಳನ್ನು ಗಣನೀಯವಾಗಿ ಹೆಚ್ಚುಮಾಡುತ್ತದೆ.

ಭಾರತದಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಪ್ರತಿಷ್ಠಾನ (FRHSI) ಅಧ್ಯಯನದ ಪ್ರಕಾರ ಈ ಲಾಕ್‌ಡೌನ್ ಎಂಟು ಲಕ್ಷಕ್ಕೂ ಹೆಚ್ಚು ಅಸುರಕ್ಷಿತ ಗರ್ಭಪಾತಕ್ಕೆ ಕಾರಣವಾಗಲಿದೆ. 23 ಲಕ್ಷ ಬಯಸದ ಗರ್ಭಗಳಿಂದ 1,750ರಷ್ಟು ತಾಯಂದಿರ ಮರಣವು (ಎಂಎಂಅರ್) ಸಂಭವಿಸಲಿವೆ. ಹೆಣ್ಣುಮಕ್ಕಳ ಋತುಕಾಲದ (ಮುಟ್ಟು ಕಾಲದ) ಸುರಕ್ಷಾ ಸಾಧನಗಳು ಸ್ಯಾನಿಟರಿ ಪ್ಯಾಡ್) ಇತ್ಯಾದಿ ಇಲ್ಲಿಯವರೆಗೆ ಶಾಲೆಯಿಂದ, ಅಂಗನವಾಡಿಯಿಂದ ಅಥವಾ ಆಶಾ ಕಾರ್ಯಕರ್ತೆಯರಿಂದ ದೊರಕುತ್ತಿದ್ದವು. ಈಗ ಅದೂ ಇಲ್ಲವಾಗಿದೆ. ದುಬಾರಿಯಾದ ಇಂತಹ ಉತ್ಪನ್ನಗಳನ್ನು ಖರೀದಿಸಲು ಎಷ್ಟು ಹೆಣ್ಣುಮಕ್ಕಳಿಗೆ ಸಾಧ್ಯವಿದೆ ಮತ್ತು ಎಷ್ಟು ಜನ ಈ ಲಾಕ್‌ಡೌನ್ ಸಂದರ್ಭದಲ್ಲಿ ಹೋಗಿ ಕೊಳ್ಳಲು ಸಾಧ್ಯ?

ಅವಸರದ ಲಾಕ್‌ಡೌನ್ ನಿರ್ಧಾರದ ಸಂದರ್ಭದಲ್ಲಿ ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ವಿಶೇಷ ಶುಶ್ರೂಷೆ ಬೇಕಾಗಿರುವ ಹೆರಿಗೆ ಸಂಬಂಧಿ ಕಷ್ಟಗಳು ಎದುರಾಗುತ್ತವೆ ಎಂಬುದೂ ಸರಕಾರಕ್ಕೆ ಮರೆತುಹೋದಂತಿದೆ. ಇಂತವರಿಗೆ ಸರಕಾರಿ ಆಗಲೀ, ಖಾಸಗಿಯಾಗಲೀ ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

 

ಲಾಕ್‌ಡೌನ್‌ನ ಅವಸರದ ನಿರ್ಧಾರದ ಈ ಸಂದರ್ಭದಲ್ಲಿ ಹಲವಾರು ಗರ್ಭಿಣಿಯರು ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ ಮಾಧ್ಯಮ ವರದಿಗಳಿವೆ. ಅವುಗಳು ರೋಗಿಗಳನ್ನು ದಾಖಲಿಸಲು ಹಿಂಜರಿಯುತ್ತಿರುವುದೇ ಇದಕ್ಕೆ ಕಾರಣ. ಮಹಿಳೆಯರು ಮನೆಗಳಲ್ಲಿ, ರೈಲುಗಳಲ್ಲಿ, ವಾಹನಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂತಹ ಪ್ರಕರಣಗಳ ಕುರಿತು ದೂರುಗಳು ತೆಲಂಗಾಣ, ಮುಂಬಯಿ ಮತ್ತು ದಿಲ್ಲಿ ಹೈಕೋರ್ಟ್‌ಗಳಲ್ಲಿ ದಾಖಲಾಗಿವೆ. ಹಲವಾರು ಮಹಿಳೆಯರು ಬಹಿರಂಗವಾಗಿ ತಮ್ಮ ಊರುಗಳಿಗೆ ನೂರಾರು ಮೈಲಿ ನಡೆಯುತ್ತಾ ರಸ್ತೆಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಮಾಲಕರಾಗಲೀ, ಸರಕಾರವಾಗಲೀ ಅವರ ನೆರವಿಗೆ ಬಂದಿಲ್ಲ. ಇದಕ್ಕಿಂತ ನಾಚಿಕೆಗೆಡು ಬೇರೆ ಇದೆಯೇ ಒಂದು ದೇಶಕ್ಕೆ?

ಇದು ಭಾರತವು ಎದುರಿಸಬೇಕಾಗಿರುವ ಮೊದಲ ಬಿಕ್ಕಟ್ಟು ಏನೂ ಅಲ್ಲ. ಈ ದೇಶದಲ್ಲಿ ಮಹಿಳೆಯರು ಮತ್ತವರ ಆರೋಗ್ಯದ ಬಗ್ಗೆ ದಂಗುಬಡಿಸುವಂತಹ ಅಸಡ್ಡೆ ತೋರಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗವು ಪುರುಷರು, ಮಹಿಳೆಯರು, ಅಸಮ ಲಿಂಗತ್ವ ಹೊಂದಿರುವವರು ಮತ್ತು ಮಕ್ಕಳ ಮೇಲೆ ಬೇರೆಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎಂಬ ಸೂಕ್ಷ್ಮತೆಯನ್ನು ನಮ್ಮ ಯೋಜಕರು ತಿಳಿದುಕೊಳ್ಳಬೇಕಾಗುತ್ತದೆ. ಜಾತಿ, ಧರ್ಮ, ಅಂತಸ್ತು, ಪ್ರಾದೇಶಿಕತೆ, ಸಂಪನ್ಮೂಲ ಮತ್ತು ಸೌಲಭ್ಯಗಳ ಲಭ್ಯತೆಯ ಆಧಾರದಲ್ಲೂ ಇವುಗಳು ಬದಲಾಗುತ್ತವೆ ಎಂಬುದನ್ನು ಕೂಡಾ ಅವರು ತಿಳಿದುಕೊಳ್ಳಬೇಕು. ಈ ಪಿಡುಗು ಈಗಾಗಲೇ ನಮ್ಮ ಸಮಾಜದಲ್ಲಿ ಇರುವ ಲಿಂಗತ್ವ ಸಂಬಂಧಿ ಕಂದರವನ್ನು ಇನ್ನಷ್ಟು ಆಲ, ಅಗಲ ಮಾಡದಂತೆ ತಡೆಯಬೇಕು.

  • ಜಶೋಧರ ದಾಸ್‌ಗುಪ್ತಾ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...