Homeಮುಖಪುಟಜನಪರ ಹೋರಾಟಗಳ ಸಂಗಾತಿ ಮೈಸೂರಿನ ಮರಿದಂಡಯ್ಯ ಬುದ್ಧ ನಿಧನ

ಜನಪರ ಹೋರಾಟಗಳ ಸಂಗಾತಿ ಮೈಸೂರಿನ ಮರಿದಂಡಯ್ಯ ಬುದ್ಧ ನಿಧನ

- Advertisement -
- Advertisement -

ಚಳವಳಿಗಳು ನದಿಯಂತೆ. ಕಾಲದ ಅಡೆತಡೆಗಳನ್ನು ಎದುರಿಸುತ್ತ ನಿಲ್ಲದೇ ಹರಿಯುತ್ತಿರಬೇಕು. ಚಳವಳಿ ಎಂದೂ ನಿಂತ ನೀರಲ್ಲ. ಧುಮ್ಮಿಕ್ಕಿ ಹರಿವ ವರ್ಷಧಾರೆ. ನಿರಂತರ ಹರಿವ ಹೋರಾಟದ ನದಿಯಲ್ಲಿ ಸಹಸ್ರ ಸಹಸ್ರ ಮಂದಿ ಈಜಿದ್ದಾರೆ. ಗುರಿ ಮುಟ್ಟುವ ಮುನ್ನವೇ ಅರ್ಧದಲ್ಲಿಯೇ ನಿರ್ಗಮಿಸಿದ ಚಳವಳಿಗಾರರೇ ಬಹುತೇಕರು. ಅಂತವರ ಸಾಲಿಗೆ ಮತ್ತೊಬ್ಬ ಹೋರಾಟಗಾರ ಸೇರಿದ್ದಾರೆ. ಮೂರುವರೆ ದಶಕಗಳು ಸಾಮಾಜಿಕ ಶುದ್ಧೀಕರಣ ಕ್ರಿಯೆಯಲ್ಲಿ ನಿರತರಾಗಿದ್ದ ಮೈಸೂರಿನ ಜನಪರ ಚಳವಳಿಗಳ ಸಂಗಾತಿ ಮರಿದಂಡಯ್ಯ ಬುದ್ಧ, ಮಧ್ಯದಲ್ಲಿಯೇ ನಿರ್ಗಮಿಸಿ ಸಂಗಾತಿಗಳಲ್ಲಿ ಶೂನ್ಯಭಾವ ತುಂಬಿದ್ದಾರೆ.

ಮೈಸೂರಿನ ಎಲ್ಲಾ ಮಾದರಿಯ ಚಳವಳಿಗಳಲ್ಲಿ, ಎಡಪಂಥೀಯ, ಪ್ರಗತಿಪರ ನಿಲುವಿನ ಸಮಾರಂಭಗಳಲ್ಲಿ ಕಾಣುತ್ತಿದ್ದವರು ಮರಿದಂಡಯ್ಯ ಬುದ್ಧ. ಪತ್ರಿಕಾ ಕಚೇರಿಗಳಿಗೆ ಒಂದಿಲ್ಲೊಂದು ಪತ್ರಿಕಾ ಹೇಳಿಕೆ ಹಿಡಿದು ಬರುತ್ತಿದ್ದ ಅವರು ಮಿತಭಾಷಿ. ಸಾರ್ವಜನಿಕ ವೇದಿಕೆಗಳಲ್ಲಿ ಮಾತಾಡಿದ್ದು ಇಲ್ಲವೇ ಇಲ್ಲ. ಪ್ರಚಾರಕ್ಕೆಂದೂ ಹಪಾಹಪಿಸಿದವರಲ್ಲ. ಪ್ರತಿಭಟನೆಗಳಲ್ಲಿ ತಮ್ಮ ಹೆಸರು ಬರೆದುಕೊಳ್ಳುವಂತೆ ಒಮ್ಮೆಯೂ ಹೇಳಿದವರಲ್ಲ. ಆದರೆ ಮೈಸೂರಿನ ಎಲ್ಲಾ ಚಳವಳಿಗಳಲ್ಲಿ ಅವರ ದನಿ ಇದ್ದೇ ಇರುತ್ತಿತ್ತು.

ಎತ್ತರ ನಿಲುವು, ಪೈಲ್ವಾನನ ದೇಹಾಕೃತಿ, ಸದಾ ಬಿಳಿಯ ಜುಬ್ಬಾ ಧರಿಸುತ್ತಿದ್ದ ಅವರ ಹೆಸರೇ ವಿಚಿತ್ರ ಅನಿಸಿತ್ತು. ಮರಿದಂಡಯ್ಯ ಬುದ್ಧ ಅವರ ಹೆಸರು. ಮಾನವತಾವಾದಿ ಬುದ್ಧನ ಹೆಸರನ್ನು ತಮ್ಮ ಹೆಸರ ಜೊತೆ ಇಟ್ಟುಕೊಂಡಿದ್ದ ಅವರು ಸಮಾಜದ ತರತಮಗಳ ಬಗೆಗೆ ನೋಯುತ್ತ ಮೌನಿಯಾಗಿರುವಂತೆ ಕಾಣುತ್ತಿದ್ದರು. ಅನ್ಯಾಯದ ವಿರುದ್ಧದ ಹೆಜ್ಜೆ ಹಾಕುತ್ತಿದ್ದ ಎಲ್ಲರೊಂದಿಗೂ ನಡೆದರು. ನಡೆಯುತ್ತ ನಡೆಯುತ್ತ ದಣಿದು ಅನಾರೋಗ್ಯ ಪೀಡಿತರಾಗಿ ತಮ್ಮ ನಡಿಗೆ ನಿಲ್ಲಿಸಿಬಿಟ್ಟರು.

ಇತ್ತೀಚೆಗೆ ಗುರುಗಳಾದ ನಾ.ದಿವಾಕರ ಅವರು ‘ಮರಿದಂಡಯ್ಯ ಬುದ್ಧ ತೀವ್ರ ಅನಾರೋಗ್ಯದಲ್ಲಿದ್ದಾರೆ ಎಂದು ತಿಳಿಸಿದ್ದರು. ಅದಾಗಿ ಎರಡು ದಿನಗಳಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಸಮಾಜದ ತರಮತಗಳ ವಿರುದ್ಧ ಹೋರಾಡುತ್ತಿದ್ದ ಅವರು ತಮ್ಮ ದೇಹದ ವಿರುದ್ಧ ಹೋರಾಡಿ ಗೆಲ್ಲಲಾಗದಿದ್ದು ನೋವಿನ ಸಂಗತಿ.

“ದಲಿತ ಚಳುವಳಿಯಲ್ಲಿ, ಕಮ್ಯುನಿಸ್ಟ್ ಚಳುವಳಿಯಲ್ಲಿ, ಮಾನವ ಹಕ್ಕು ಹೋರಾಟಗಳಲ್ಲಿ, ಎಲ್ಲ ರೀತಿಯ ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿದ್ದ ಮರಿದಂಡಯ್ಯ ಬುದ್ಧ ತಮ್ಮ ಸರಳ ಜೀವನದಿಂದಲೇ ಜನಾನುರಾಗಿಯಾಗಿದ್ದರು. ಕೂಲಿಕಾರ್ಮಿಕ ಸಂಘದ ಮೂಲಕ ಮೈಸೂರಿನ ಸಾವಿರಾರು ಕೂಲಿ ಕಾರ್ಮಿಕರಿಗೆ, ಪೌರ ಕಾರ್ಮಿಕರಿಗೆ ಆಸರೆಯಾಗಿದ್ದ ಮರಿದಂಡಯ್ಯ ಬುದ್ಧ ಕಾಯಕ ಜೀವಿ. ನಡೆದಾಡುವ ಚೇತನ. ಸ್ವಂತ ವಾಹನ ಇಲ್ಲದೆಯೇ ಅಗತ್ಯವಿದ್ದೆಡೆ, ಅವಶ್ಯಕತೆ ಇದ್ದವರಿಗೆ ಸಹಾಯ ಹಸ್ತ ನೀಡುತ್ತಲೇ ತಮ್ಮ ಬದುಕು ಸವೆಸಿದ ಬುದ್ಧ ಸಾಂಸಾರಿಕ ಜೀವನಕ್ಕಿಂತಲೂ ಸಮಾಜಮುಖಿಯಾಗಿಯೇ ಬದುಕಲು ಇಚ್ಚಿಸಿದವರು” ಎಂದು ಚಿಂತಕರಾದ ನಾ ದಿವಾಕರ್‌ರವರು ನುಡಿನಮನ ಸಲ್ಲಿಸಿದ್ದಾರೆ.

‘ಓಹೊ… ದಿನಾ ನೋಡ್ತಾ ಇದ್ದೆ ಇವರನ್ನ ಒಂದು ಜುಬ್ಬ ಹಾಕೊಂಡು ಓಡಾಡೋರು, ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುವವರು’ ಎಂದು ಗೆಳೆಯ ರಂಗಕರ್ಮಿ ಶಿರಾ ಸೋಮಶೇಖರ್ ನೆನಪಿಸಿಕೊಳ್ಳುತ್ತಾನೆ. ಅವರನ್ನು ಮೈಸೂರಿನ ರಸ್ತೆಗಳಲ್ಲಿ ಮುಂದೆ ಎಂದೆಂದೂ ಕಾಣಲಾಗುವುದಿಲ್ಲ. ಹೋರಾಟಗಾರರ ಎದೆಯಲ್ಲಿ ಅವರು ಸದಾ ಜೀವಂತ.

ವಿನೋದ್ ಮಹದೇವಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...