Homeನೂರರ ನೋಟಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ

ಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ

ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಓಟು ಕಿತ್ತುಕೊಂಡರು. ಈಗಲಾದರೂ ಯುವ ಮತದಾರರು ಎಚ್ಚೆತ್ತುಕೊಳ್ಳಬೇಡವೆ?

- Advertisement -
- Advertisement -

ಭಾರತೀಯ ಮತದಾರರಲ್ಲಿ ಕೆಲವರು ಜಾತಿಗೆ, ದುಡ್ಡಿಗೆ, ಹೆಂಡಕ್ಕೆ ತಮ್ಮನ್ನು ಮಾರಾಟ ಮಾಡಿಕೊಂಡರೂ, ಒಟ್ಟಿನಲ್ಲಿ ಅವರು ಜಾಣರಾಗಿದ್ದರು. ಒಮ್ಮೆ ಕಾಂಗ್ರೆಸ್ಸಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುತ್ತಿದ್ದರು. ಅವರು ಸರಿಯಾಗಿ ಸರ್ಕಾರ ನಿರ್ವಹಿಸಿಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಎಲ್ಲ ಮತದಾರರೂ ಕುಳಿತು ಮಾತಾಡಿಕೊಂಡು, ತೀರ್ಮಾನ ಕೈಗೊಂಡಹಾಗೆ ಮುಂದಿನ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಬಹುಮತ ನೀಡಿ ಹಿಂದಿನ ಸರ್ಕಾರವನ್ನು ಉರುಳಿಸುತ್ತಿದ್ದರು. ಇದು ಸ್ವಾತಂತ್ರ್ಯ ಪ್ರಾಪ್ತವಾದ 30 ವರ್ಷಗಳ ಮೇಲೆ ಮತದಾರರಲ್ಲಿ ಆದ ಬದಲಾವಣೆ. ಮತದಾರರು ಹೆಚ್ಚು ಓದಿಲ್ಲದಿರಬಹುದು. ಆದರೆ ಅವರಿಗೆ ವ್ಯವಹಾರ ಜ್ಞಾನ ಬಹಳಷ್ಟಿತ್ತು. ಯಾವುದು ಒಳ್ಳೆಯ ಆಡಳಿತ, ಕೆಟ್ಟ ಆಡಳಿತ ಯಾವುದು ಎನ್ನುವುದನ್ನು ಗ್ರಹಿಸುವಷ್ಟು ತಿಳಿವಳಿಕೆ ಇತ್ತು. ಆದರೆ ಅವರಿಗಿದ್ದ ಅವಕಾಶ ಸೀಮಿತ. ಸ್ಪರ್ಧಿಸಿರುವ ರಾಜಕೀಯ ಪಕ್ಷಗಳಲ್ಲಿ ಒಂದನ್ನು ಆಯ್ಕೆ ಮಾಡುವ ಹಕ್ಕು ಮಾತ್ರ ಇದ್ದು ಆದ್ದರಿಂದ ಅವರು ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಎಲ್ಲಾ ತಲೆಕೆಳಗಾಯಿತು. ಮತದಾರ ತನ್ನ ಆಲೋಚನಾ ಶಕ್ತಿಯನ್ನು ಕಳೆದುಕೊಂಡ. ದೇಶ ಮತ್ತು ತನ್ನ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಮತದಾರ ಈಗ ಮೋದಿ, ಅವರ ಪೊಳ್ಳು ಘೋಷಣೆಗೆ ಬಲಿಯಾಗುತ್ತಿದ್ದಾನೆ. ಸ್ವಂತಿಕೆಯ ಗುಣ ಏಕೆ ಕಳೆದುಕೊಂಡ ಎಲ್ಲದರ ಕುರಿತು ಗಂಭೀರವಾಗಿ ವಿಚಾರ ಮಾಡಬೇಕೆಂದು ಮತದಾರರಲ್ಲಿ ವಿನಂತಿಮಾಡಿಕೊಳ್ಳುತ್ತೇನೆ. ಆವೇಶಕ್ಕೆ ಎಡೆಮಾಡದೆ ಮತದಾರ ದೇಶದ ಪರಿಸ್ಥಿತಿಯ ಬಗೆಗೆ ಗಮನ ಕೊಡಬೇಕು. ಅಬ್ಬರದ ಪ್ರಚಾರ ಭಾಷಣಗಳು, ಪೊಳ್ಳು ಘೋಷಣೆಗಳು, ಯುದ್ಧದ ಮಾತನಾಡಿ ತನ್ನಿಂದಲೇ ಈ ದೇಶದ ರಕ್ಷಣೆ ಸಾಧ್ಯ, ಹಿಂದಿನವರು ಏನೂ ಮಾಡದೆ ನಿಷ್ಕ್ರೀಯರಾಗಿದ್ದರು ನಾನು ದೇವದೂತ ಅವತರಿಸಿ ಬಂದಿದ್ದೇನೆ ಎಂಬ ರೀತಿಯಲ್ಲಿ ಮೋದಿಯವರು ಮಾತನಾಡುತ್ತಾರೆ. ಹಿಂದೆ ಸರ್ಕಾರ ನಡೆಸಿದವರು ಪಾಕಿಸ್ತಾನದ ಮೇಲೆ 2 ಸಾರಿ ಯುದ್ಧದಲ್ಲಿ ಗೆದ್ದಿದ್ದಾರೆ ಎಂಬುದನ್ನು ಮೋದಿ ತಿಳಿಯಬೇಕು. ನೆಹರು ಕಾಲದಲ್ಲಿ ಚೀನೀಯರು ಭಾರತ ಭಾಯಿ ಭಾಯಿ ಎಂದು ಸ್ಲೋಗನ್ ಹಾಕುತ್ತ ಏಮಾರಿಸಿ ಭಾರತದ ಮೇಲೆ ಏಕಾಏಕಿ ಯುದ್ಧ ಹೂಡಿದರು. ಚೀನೀಯರು ನಂಬಿಕೆದ್ರೋಹಿಗಳು ಎಂಬುದನ್ನು ಸಾಬೀತುಮಾಡಿಕೊಟ್ಟರು. ಯುದ್ಧದ ಸುಳಿವು ಕೂಡ ಕೊಡದೆ ಹಠಾತ್ತಾಗಿ ಮೇಲೆ ಏರಗಿದರು. ಭಾರತೀಯ ಸೈನ್ಯ ಯುದ್ಧದ ಮೂಡಿನಲ್ಲೇ ಇರಲಿಲ್ಲ. ಆದರೆ ಮೋದಿಯವರು, ಜವಾಹರ್‌ಲಾಲ್‌ರನ್ನು ಹಂಗಿಸಲು ಚೈನಾದ ವಿಚಾರ ಪ್ರಸ್ತಾಪ ಮಾಡುತ್ತಾರೆ. ಯಾವ ಸರ್ಕಾರ ಬರಲಿ ದೇಶ ರಕ್ಷಣೆ ಮಾಡಬೇಕಾದದ್ದು ಅವರ ಕರ್ತವ್ಯ. ಅದನ್ನು ಅವರು ಮಾಡೇ ಮಾಡುತ್ತಾರೆ. ಭಾರತ ಸೈನ್ಯವನ್ನು ಮೊದಲ ಬಾರಿಗೆ ಮೋದಿ ಬಂದು ಸಂಘಟಿಸಲಿಲ್ಲ ಭಾರತೀಯ ಸೈನ್ಯ ಮೊದಲಿನಿಂದಲೂ ಬಲಿಷ್ಠವಾಗಿದೆ. ಸುಸಂಘಟಿತವಾಗಿದೆ. ಇದನ್ನು ನಮ್ಮ ಮತದಾರರು ತಿಳಿಯಬೇಕು. ಆವೇಶ ತೋರುವವರಿಗೆ ನಮಗೂ ಭಾರತೀಯ ಸೈನ್ಯದ ಬಲದ ಬಗೆಗೆ ಅರಿವಿದೆ, ನೀವು ಉತ್ಪ್ರೇಕ್ಷೆ ಮಾಡಿ ಸುಳ್ಳು ಪ್ರಚಾರ ಮಾಡಬೇಡಿ ಎಂದು ಖಡಕ್ಕಾಗಿ ಹೇಳಬೇಕು.

ಮೋದಿಯವರು ಅಧಿಕಾರಕ್ಕೆ ಬಂದು 6 ವರ್ಷ ಆಯಿತು. ಈ 6 ವರ್ಷದಲ್ಲಿ ಏನೇನು ನಡೆಯಿತು ಎಂಬುದನ್ನು ಮತದಾರರು ಗಮನಿಸಬೇಕು. 1000, 500ರೂಗಳ ಹಳೇ ನೋಟುನ್ನು ರದ್ದು ಮಾಡಿದ್ದರಿಂದ ಕಪ್ಪು ಹಣ ಹೊರಬರಲಿಲ್ಲ, ಭ್ರಷ್ಟಾಚಾರ ಕಡಿಮೆಯಾಗಲಿಲ್ಲ. ಅದರ ಬದಲು ಬ್ಯಾಂಕ್ ಅಧಿಕಾರಿಗಳು, ರಾಜಕಾರಣಿಗಳು ಕೂಡಿಕೊಂಡು ಲಕ್ಷಾಂತರ ಕಪ್ಪುಹಣವನ್ನೆಲ್ಲ ಬಿಳೀದು ಮಾಡಿಕೊಂಡರು. ಪಟ್ಟಭದ್ರರ ಹಿತಕಾಯ್ದರು.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಓಟು
ಕಿತ್ತುಕೊಂಡರು. ಈಗಲಾದರೂ ಯುವ ಮತದಾರರು ಎಚ್ಚೆತ್ತುಕೊಳ್ಳಬೇಡವೆ?

109 ರೈಲು ಮಾರ್ಗಗಳನ್ನು ಖಾಸಗಿಯವರಿಗೆ ವಹಿಸುವ, ಕಲ್ಲಿದ್ದಲು ಗಣಿಗಳನ್ನು ಖಾಸಗಿಯವರಿಗೆ ಹರಾಜು ಮಾಡುವ ಸರ್ಕಾರದ ಷೇರುಗಳನ್ನು ಮಾರಿಹಾಕುತ್ತ ಇಂತಹ ಎಷ್ಟೋ ಅವಿವೇಕದ ಕೆಲಸಗಳನ್ನು ಮೋದಿ ಕೈಗೆತ್ತಿಕೊಂಡಿದ್ದಾರೆ. ದೊಡ್ಡ ಬಹುಮತ ಇದೆಯೆಂದು ಜನದ್ರೋಹಿ ಕೆಲಸಗಳನ್ನು ಎಗ್ಗಿಲ್ಲದೆ ಮಾಡುತ್ತಿದ್ದಾರೆ. ಕೊರೊನಾದಿಂದ ಜನ ಒಂದೇಸಮನೆ ಸಾಯುತ್ತಿದ್ದರೆ, ಜನಪರ ಕಾಯ್ದೆಗಳಿಗೆ ತಮಗೆ ಬೇಕಾದಂತೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವುದರಲ್ಲಿ ಮೋದಿ ಮಗ್ನರಾಗಿದ್ದಾರೆ. ಇದನ್ನು ಪ್ರಶ್ನಿಸಿದರೆ ಅಂಥವರ ಧ್ವನಿಯನ್ನು ಅಡಗಿಸಲಾಗುತ್ತದೆ.

ಕಾಶ್ಮೀರಕ್ಕೆ ಸಂಬಂಧಪಟ್ಟ 371ನೇ ವಿಧಿಯನ್ನು ಸಂವಿಧಾನ ಬದಲಾಯಿಸಿದೆ ರದ್ದುಗೊಳಿಸಲಾಗಿದೆ. ಕಾಶ್ಮೀರದ ಜನತೆಯಲ್ಲಿ ಈ ವಿಚಾರ ಪ್ರಸ್ತಾಪಿಸದೆ ಸರ್ವಾಧಿಕಾರಿ ಮನೋಭಾವದಿಂದ ಈ ವಿಧಿಯನ್ನು ರದ್ದು ಮಾಡಲಾಗಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಹಿಂದುತ್ವ ಪ್ರತಿಪಾದಕರನ್ನೇ ನೇಮಿಸಲಾಗುತ್ತಿದೆ. ನಾಯಕರನ್ನು ಪ್ರಶ್ನಿಸಬಾರದು ಅವರು ಹೇಳಿದಂತೆ ಕೇಳಿಕೊಂಡಿರಬೇಕು ಎಂದು ಆರ್‌ಎಸ್‌ಎಸ್ ಸಿದ್ಧಾಂತ ಹೇಳುತ್ತದೆ. ಅದನ್ನೇ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಅನ್ವಯಿಸುವ ಕೆಲಸ ಆರಂಭವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಸಿ ಪೌರತ್ವ(ತಿದ್ದುಪಡಿ) ಶಾಸನವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಸಾಕಷ್ಟು ಪ್ರತಿಭಟನೆ ನಡೆದಿದೆ. ವೈಚಾರಿಕ ಚಿಂತನೆ ಮಾಡುವವರ ಮೇಲೆ ದಾಳಿ ನಡೆಸಲಾಗಿದೆ. ಈ 6 ವರ್ಷಗಳಲ್ಲಿ 200 ಪತ್ರಕರ್ತರ ಮೇಲೆ ದಾಳಿ ನಡೆದಿದೆ. ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಯಾವುದರ ವಿಚಾರಣೆಯೂ ಆಗಿಲ್ಲ. ಇದೆಲ್ಲವನ್ನೂ ಮತದಾರರು ಪ್ರಶ್ನಿಸದಿದ್ದಲ್ಲಿ ಮುಂದೆ ಭಾರೀ ಅನಾಹುತ ಎದುರಿಸಬೇಕಾಗುತ್ತದೆ.

  • ಎಚ್.ಎಸ್ ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಜನಪರ ಚಿಂತಕರು.

ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...