Homeಅಂಕಣಗಳುಬೆಂಗಳೂರು ಭೇಲ್ - 2:ಲಾಕ್ ಡೌನ್ ನಡುವೆ ಬೆಂಗಳೂರಿನ ಬೀದಿ ವ್ಯಾಪಾರಿಗಳು ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದು...

ಬೆಂಗಳೂರು ಭೇಲ್ – 2:ಲಾಕ್ ಡೌನ್ ನಡುವೆ ಬೆಂಗಳೂರಿನ ಬೀದಿ ವ್ಯಾಪಾರಿಗಳು ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದು ಏಕೆ?

- Advertisement -
- Advertisement -

ಶನಿವಾರ, ಜುಲೈ 18ನೇ ತಾರೀಖು , ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿ ಸಂಘಟನೆ ಸತ್ಯಾಗ್ರಹಕ್ಕೆ ಕರೆ ಕೊಟ್ಟರು. ಇದಕ್ಕೆ ಸ್ಪಂದಿಸಿ ರಾಜ್ಯದ ಇತರೆ ಬೀದಿ ವ್ಯಾಪಾರಿ ಸಂಘಟನೆಗಳು ಹಾಗು ಅನೇಕ ಜಿಲ್ಲೆಗಳ ಬೀದಿ ವ್ಯಾಪಾರಿಗಳು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅಂದು ಅವರ ಮಾರುಕಟ್ಟೆಗಳಲ್ಲಿ, ಮನೆಗಳಲ್ಲಿ ಫಲಕಗಳನ್ನು ಪ್ರದರ್ಶಿಸುವುದರ ಮೂಲಕ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಈ ಸತ್ಯಾಗ್ರಹ ನಡೆದದ್ದು ಏತಕ್ಕೆ? ಬೀದಿ ವ್ಯಾಪಾರಿಗಳು ದಿನವೂ ವ್ಯಾಪಾರ ಮಾಡಿ, ಆ ದಿನದ ಆದಾಯದ ಫಲದಿಂದ ಜೀವನ ನಡೆಸುತ್ತಾರೆ.  ಲಾಕ್  ಡೌನ್ ಗು ಮುನ್ನವೇ ಬೀದಿ ವ್ಯಾಪಾರಿಗಳು ಕಷ್ಟದ ಜೀವನ ನಡೆಸುತಿದ್ದರು. ಈಗ ಮಾರ್ಚ್ 3 ನೇ ವಾರದಿಂದ, 4 ತಿಂಗಳ ಕಾಲ ವ್ಯಾಪಾರ ಇಲ್ಲದೆ ಅವರ ಜೀವನ ತತ್ತರಿಸಿ ಹೋಗಿದೆ.

ಬೀದಿಲಿ ವ್ಯಾಪಾರ ಮಾಡುವವರು ಬಹುಪಾಲು ಬಡವರೇ. ಅಂಗಡಿ ಬಾಡಿಗೆ ಕಟ್ಟಲು ಸಾಧ್ಯವಿರುವವರು, ಅಂಗಡಿ ಕೊಳ್ಳಲು  / ಅಂಗಡಿ ವಂಶಪಾರಂಪರ್ಯವಾಗಿ ಪಡೆದವರು ಯಾರು ಬೀದಿಲಿ ವ್ಯಾಪಾರ ಮಾಡೋಲ್ಲ. ನಗರಗಳ ಧೂಳು, ಮಳೆ, ಬಿಸಿಲುಗಳ ನಡುವೆ ವ್ಯಾಪಾರ ಮಾಡುವುದು ಸುಲಭವಲ್ಲ. ಇದರ ಜೊತೆಗೆ ಇರುವ ‘ಎತ್ತಂಗಡಿ’ಯ  ಭೀತಿ . ಇವತ್ತು ವ್ಯಾಪಾರ ಮಾಡುವ ಸ್ಥಳದಲ್ಲಿ ನಾಳೆ ವ್ಯಾಪಾರ ಮಾಡಬಹುದೋ ಇಲ್ಲವೋ ತಿಳಿಯದು. ಸಂಚಾರಿ ಪೊಲೀಸ್, ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ನಿವಾಸಿ ಸಂಘಟನೆಗಳು (ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್) ಅವರ ಕಿರುಕುಳ ಯಾವಾಗಲೂ ಇದ್ದೆ ಇರುತ್ತದೆ. ಬೀದಿ ವ್ಯಾಪಾರಿಗಳ  ಜೀವನೋಪಾಯ ರಕ್ಷಣೆಗೆ, ಕೇಂದ್ರ ಸರ್ಕಾರ 2014 ನಲ್ಲಿ ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ಕಾಯ್ದೆ 2014 ಅನ್ನು ತಂದಿತು. ಇದರ ಪ್ರಕಾರ ಯಾವುದೇ ಬೀದಿ ವ್ಯಾಪಾರಿಗಳನ್ನು ದಿಢೀರ್ ಎತ್ತಂಗಡಿ ಮಾಡುವಂತಿಲ್ಲ. ಆದರೆ ಬಹುಪಾಲು ಅಧಿಕಾರಿಗಳು  ಈ ಕಾನೂನು ಬಗ್ಗೆ ತಿಳಿದುಕೊಳ್ಳದೆ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಆಡಿ ಬೀದಿ ವ್ಯಾಪಾರಿಗಳನ್ನು ದಿಡೀರ್ ಓಡಿಸುವುದನ್ನು ಮಾಡುತ್ತಲೇ ಇದ್ದಾರೆ.

ಆಗೀಗ ಎತ್ತಂಗಡಿಗಳನ್ನು ಎದುರಿಸುತ್ತಿದ್ದ ಬೀದಿ ವ್ಯಾಪಾರಿಗಳಿಗೆ ಮೋದಿಯವರ  ಆಯೋಜಿತ , ದಿಢೀರ್ ಲಾಕ್ ಡೌನ್ ಒಂದು ದೇಶವ್ಯಾಪಿ ಎತ್ತಂಗಡಿ ಆಯಿತು. ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಬಿಬಿಎಂಪಿ ಕಾಲೇರಾ ಹರಡುತ್ತಿದೆ ಎಂದು ಹೇಳುತ್ತಾ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಟ್ಟಿರಲಿಲ್ಲ.  ಲಾಕ್  ಡೌನ್  ನಲ್ಲಿ ಅಲ್ಲಿ ಇಲ್ಲಿ,  ಮೂಲೆಗಳಲ್ಲಿ  ನಿಂತು ವ್ಯಾಪಾರ ಮಾಡುವ, ಕೆಲವು ತಳ್ಳೋ ಗಾಡಿ ಉಳ್ಳ ಕೇವಲ 10% ಹಣ್ಣು ತರಕಾರಿಯವರಿಗೆ ಸ್ವಲ್ಪ ವ್ಯಾಪಾರ ಆಯಿತು. ಮಿಕ್ಕ 90% ವ್ಯಾಪಾರಿಗಳಿಗೆ ಯಾವುದೇ ವ್ಯಾಪಾರ ಇರಲಿಲ್ಲ.  ಈಗ ಸುಮಾರು  4  ತಿಂಗಳಾಗಿದ್ದರೂ ಅವರ ಕಷ್ಟ ಮುಗಿದಿಲ್ಲ. ಜುಲೈ ತಿಂಗಳಲ್ಲೂ ಸಹ  ಕೆಲವು ಕಡೆ ಇನ್ನು ವ್ಯಾಪಾರ ಪ್ರಾರಂಭವಾಗಿಲ್ಲ. (ಉದಾಹರಣೆ: ಶಿವಾಜಿನಗರ), ಮಿಕ್ಕಿರುವ ಕಡೆ, ವ್ಯಾಪಾರ ನಡೀತಿದೆ ಆದರೆ ತೀರಾ ಕಡಿಮೆ.  ಶಿವಾಜಿನಗರದ ವ್ಯಾಪಾರಿಯಾದ ಬಾಬುರವರು ಜೊಮೆಟೋ ಡೆಲಿವರಿ ಕೆಲಸ ಕೈಗೊಂಡರು “ಅದರಲ್ಲೂ 2 ತಿಂಗಳ ಸ್ವಲ್ಪ ಆದಾಯ ಇತ್ತು , ಈಗ ದಿವಸಕ್ಕೆ  ಎರಡು  ಡೆಲಿವರಿ ಬಂದರೆ ಹೆಚ್ಚು, ಏನು ಮಾಡುವುದೋ ಗೊತ್ತಿಲ್ಲ” ಎನ್ನುತ್ತಾರೆ. ಶಿವಾಜಿನಗರ ಬಸ್ ನಿಲ್ದಾಣ ಸುತ್ತಲೂ 250ಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಅವರಲ್ಲಿ ಮಾರ್ಚ್ 15 ರಿಂದ  ಒಬ್ಬರಿಗೂ  ವ್ಯಾಪಾರ ಮಾಡಲು ಬಿಟ್ಟಿಲ್ಲ.  ವಿಜಯನಗರದ ಮಾರುಕಟ್ಟೆಯಲ್ಲಿ ಜೂನ್ ನಲ್ಲಿ ವ್ಯಾಪಾರ ಪ್ರಾರಂಭ ಮಾಡಿದರು. ಆದರೆ ವ್ಯಾಪಾರ ಇಲ್ಲ. ಅಲ್ಲಿ ಬಟ್ಟೆ ವ್ಯಾಪಾರ ಮಾಡುವ ಬೀದಿ ವ್ಯಾಪಾರಿ ಹಾಗು ಸಂಘಟನೆಯ ನಾಯಕರಾದ ಸ್ವಾಮಿ ಅವರು ಹೇಳುವಂತೆ “ಕೆಲವು ದಿವಸ ಬೋಣಿ  ಸಹ ಆಗೋದಿಲ್ಲ. ಒಂದು ಕಡೆ ವ್ಯಾಪಾರ ಆಗೋಲ್ಲ, ಇನ್ನೊಂದು ಕಡೆ ಎಲ್ಲಿ ಕರೋನಾ ತಟ್ಟುತ್ತೇವೆಯೋ ಎಂದು ಭಯ” ಎನ್ನುತ್ತಾರೆ.

ಬಿಬಿಎಂಪಿ ಕಚೇರಿಯಾಚೆ ಜೂನ್ ತಿಂಗಳಲ್ಲಿ ಒಂದು ದಿವಸ  ಲಕ್ಷ್ಮಿಯವರು ಸಿಕ್ಕಿದ್ದರು. ಸುಮಾರು 50 ವಯಸ್ಸಿನ ಅವರು ಬುಟ್ಟಿಯಲ್ಲಿ ಕಡ್ಲೇಕಾಯಿ ವ್ಯಾಪಾರ ಮಾಡುತಿದ್ದರು .  ಅಲ್ಲಿಂದ ಸುಮಾರು 5 ಕಿಲೋಮೀಟರ್ ದೂರದ ಕಸ್ತೂರಿ ಬಾಯಿ ನಗರದಿಂದ ನಡೆದುಕೊಂಡು ಬಂದಿದ್ದರು . “ಬಿಬಿಎಂಪಿ ಕಚೇರಿಯೊಳಗೆ ಬಿಡಲು ಹೇಳಿ ಸರ್, ಅಲ್ಲಿ ಸ್ವಲ್ಪ ವ್ಯಾಪಾರ ಆಗುತ್ತದೆ, ಇಲ್ಲಿ ರಸ್ತೇಲಿ ಏನೂ ವ್ಯಾಪಾರ ಇಲ್ಲ” ಎಂದರು. ಅವರೊಬ್ಬರೇ ಇರುವುದಂತೆ, ಕುಟುಂಬದವರು ಯಾರು ಇಲ್ಲ, ವ್ಯಾಪಾರ  ಇಲ್ಲದೆ ಊಟಕ್ಕೂ ಕಷ್ಟ ಪಡುತ್ತಿದ್ದರು.  ನಗರಗಳಲ್ಲಿ ಸುಮಾರು ಜನ ವಯಸ್ಸಾಗಿರುವವರು, ಬೇರೆ ಕೆಲಸ ಸಿಗದೇ  ಬೀದಿ ವ್ಯಾಪಾರ ಮೇಲೆ ಅವಲಂಬಿತರಾಗಿದ್ದಾರೆ. ಅವರು ತೀವ್ರ ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಹೀಗೆ ವ್ಯಾಪಾರ ಇಲ್ಲದೆ, ಬೀದಿ ವ್ಯಾಪಾರಿಗಳಿಗೆ ಮನೆ ಬಾಡಿಗೆ ಸಹ ಕಟ್ಟಲು ಆಗುತ್ತಿಲ್ಲ. ಅವರ ಮಕ್ಕಳ ಶಿಕ್ಷಣ ಅಪಾಯದಲ್ಲಿದೆ.  ಜಯನಗರ 9ನೇ ಬ್ಲಾಕ್ ನ ಶಾಂತಿಯವರೊಡನೆ ಮಾತನಾಡುತ್ತಿದ್ದಾಗ “ಸಾರ್, ನನ್ನ ಮಗನ ಸ್ಕೂಲ್ ಫೀಸ್ ಗೆ ಸಾಲ ಮಾಡಿ ಕಟ್ಟಿದ್ದೀನಿ ಸಾರ್” ಎಂದರು.  ಎಷ್ಟೋ ಜನ ಇಲ್ಲಿ ಮನೆ ನಡೆಸಲು ಸಾಧ್ಯವಾಗದೆ ಊರಿಗೆ ಹೋಗಿದ್ದಾರೆ.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಸರ್ಕಾರದಿಂದ ಪರಿಹಾರ ಕೊಡುವಂತೆ ಒತ್ತಾಯ ಮಾಡುವುದು ಸೂಕ್ತ ಎಂದು ಬೀದಿ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿದವು. ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಎಸ್ ಬಾಬು ಅವರು  – “ನಮಗೆ  ಮಾರ್ಚ್  ಇಂದ ವ್ಯಾಪಾರ ಇಲ್ಲ. ಮುಂದೇನು – ಹೇಗಿರುತ್ತೋ ಗೊತ್ತಿಲ್ಲ.  ಜನರ ಬಳಿ ದುಡಿಲ್ಲ, ಜೊತೆಗೆ  ಈಗಾಗಲೇ  ಹರಡಿರುವ ಫೇಕ್ ನ್ಯೂಸ್ ಇಂದ, ಬೀದಿ ವ್ಯಾಪಾರಿಗಳು ಕೊರೊನಾ ಹಬ್ಬುತ್ತಾರೆ ಎಂದು ಬೇರೆ ಸಾಕಷ್ಟು ಜನ ಭಯ ಪಡುತ್ತಿದ್ದಾರೆ. ಯಾವಾಗ ವ್ಯಾಪಾರ ಮುಂಚೆಯಂತೆ ಆಗುತ್ತದೆಯೋ ಗೊತ್ತಿಲ್ಲ. ನಾವು ನಮ್ಮ ಕಷ್ಟಗಳ ಬಗ್ಗೆ ಮಾನ್ಯ ಮಹಾಪೌರರು ಹಾಗು ಆಯುಕ್ತರನ್ನು ಭೇಟಿ ಆಗಿ ಪರಿಹಾರ ನೀಡಿ ಎಂದು ಮನವಿ ಸಲ್ಲಿಸಿದೆವು. ಅದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಿಗೆ ನಮ್ಮ ಕಷ್ಟ ಹೇಳಿಕೊಳ್ಳೋಣ ಎಂದು ಸಮಯ ಕೋರಿದರೆ ನಮಗೆ ಅಪ್ಪಾಯಿಂಟ್ಮೆಂಟ್ ನೀಡಲಿಲ್ಲ, ಈ-ಮೇಲ್ ಮಾಡಲು ಹೇಳಿದರು, ಆಗ ನಾವು  ಮುಖ್ಯಮಂತ್ರಿಗಳಿಗೆ ಈ-ಮೇಲ್ ಮೂಲಕ ಮನವಿ ಸಲ್ಲಿಸಿದೆವು. ಅದಕ್ಕೆ ಉತ್ತರ ಸಿಕ್ಕಿಲ್ಲ.  ಪ್ರತಿಭಟನೆ ಮಾಡೋಣ ಎಂದರೆ ಸೆಕ್ಷನ್ 144 ಹಾಕಿದ್ದಾರೆ. ಬೇರೆ ದಾರಿ ಇಲ್ಲದೆ ಉಪವಾಸ ಸತ್ಯಾಗ್ರಹ ಮಾಡಿದೆವು” ಎನ್ನುತ್ತಾರೆ.

ಹಾಗಾಗಿ ಸತ್ಯಾಗ್ರಹ ಮಾಡಿದ ಬೀದಿ ವ್ಯಾಪಾರಿಗಳು “ಬೀದಿ ವ್ಯಾಪಾರ ಮಾಡಲು ಅನುಮತಿ ನೀಡಿ”, “ಮಾನ್ಯ ಮುಖ್ಯಮಂತ್ರಿಗಳೇ, ಬೀದಿ ವ್ಯಾಪಾರಿಗಳ ಕಷ್ಟ ನಿಮ್ಮ ಕಣ್ಣಿಗೆ ಏಕೆ ಕಾಣುತ್ತಿಲ್ಲ, ನಮಗೂ ಪರಿಹಾರ ನೀಡಿ”, ” ಮಾನ್ಯ ಪ್ರಧಾನ ಮಂತ್ರಿಗಳೇ, ನಮಗೆ ಸಾಲದ ಬದಲು ಪರಿಹಾರ ನೀಡಿ” ಎಂಬಂತಹ ಸಂದೇಶಗಳನ್ನು ಉಲ್ಲಾ ಭಿತ್ತಿ ಪತ್ರಗಳನ್ನು ಸತ್ಯಾಗ್ರಹದಲ್ಲಿ ಪ್ರದರ್ಶಿಸಿದರು.

ತಿಂಗಳಿಗೆ 15,000 ದಂತೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರದ ಮೇಲೆ  ಬೀದಿ ವ್ಯಾಪಾರಿಗಳ ಒತ್ತಾಯ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ಬೀದಿ  ವ್ಯಾಪಾರಿಗಳಿಗೆ ಪ್ರಧಾನ್ ಮಂತ್ರೀ ಆತ್ಮನಿರ್ಭರ್ ಯೋಜನೆ ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಬೀದಿ ವ್ಯಾಪಾರಿಗಳಿಗೆ 10,000 ರೂಪಾಯಿಗಳ ಸಾಲ ನೀಡುತ್ತಿದೆ. ನಮಗೆ ವ್ಯಾಪಾರ  ಇಲ್ಲದಿರುವಾಗ ಸಾಲ  ಹೇಗೆ ತೀರಿಸುವುದು, ಹಾಗಾಗಿ ನಮಗೆ ಸಾಲ ಬೇಡ ಪರಿಹಾರ ನೀಡಿ ಎಂದು ಈಗಾಗಲೇ ಸಾಲಗಳಲ್ಲಿ ಮುಳುಗಿರುವ ವ್ಯಾಪಾರಿಗಳ ಒತ್ತಾಯ.  ಇನ್ನು ಬಿಬಿಎಂಪಿಗೆ ಬಂದರೆ, ಮೂರೂ ವರ್ಷದಿಂದಲೂ ಸ್ಥಳೀಯ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಎಂದು 2 ಕೋಟಿ ಹಣ ಮೀಸಲಿಟ್ಟಿದೆ, ಆದರೆ ಇದುವರೆಗೂ ಒಂದು ರೂಪಾಯಿ ಸಹ ಬಳಸಿಲ್ಲ. ಈಗಲಾದರೂ ಅದನ್ನು ನಮ್ಮ ಕಲ್ಯಾಣಕ್ಕಾಗಿ ಉಪಯೋಗಿಸಿ ಎಂಬುದು ಅವರ ಒತ್ತಾಯ.  ಇಷ್ಟೆಲ್ಲಾ ಅಲ್ಲದೆ, ವ್ಯಾಪಾರಿಗಳದ್ದು ಒಂದು ಮುಖ್ಯ ಹಕ್ಕೊತ್ತಾಯವಿದೆ – ಈ ಮೇಲಿನ ಪರಿಹಾರ ಎಲ್ಲಾ ಬೀದಿ ವ್ಯಾಪಾರಿಗಳಿಗೂ ತಲುಪಬೇಕೆಂಬುದು. ಸರ್ಕಾರ ಸಾಲ ಕೊಡುತ್ತಿರುವುದು ಕೇವಲ ಸಮೀಕ್ಷೆಗೆ ಒಳಗೊಂಡಂತ ವ್ಯಾಪಾರಿಗಳಿಗೆ. ಆದೆರೆ ಒಂದು ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳುಳ್ಳ ಬೆಂಗಳೂರು ನಗರದಲ್ಲಿ ಕೇವಲ 25,000 ವ್ಯಾಪಾರಿಗಳು ಸಮೀಕ್ಷೆಗೆ ಒಳಪಟ್ಟಿದ್ದಾರೆ.

ಬೀದಿ ವ್ಯಾಪಾರಿಗಳ ನಮ್ಮ ನಗರಕ್ಕೆ ದೊಡ್ಡ ಸೇವೆ ಸಲ್ಲಿಸಿದವರು. ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಉತ್ತಮ ವಸ್ತುಗಳು ಸಿಗಬೇಕಾದರೆ, ಅದು ಬಿಡಿ ವ್ಯಾಪಾರಿಗಳಿಂದ ಮಾತ್ರ ಸಾಧ್ಯ. ಬೀದಿ ವ್ಯಾಪಾರ ನಮ್ಮ ನಗರಗಳ ಪರಂಪರೆಯ ಮುಖ್ಯ ಭಾಗ. ಅಧಿಕಾರಿಗಳ ಬೈಗುಳ, ಮಳೆ, ಬಿಸಿಲು, ಧೂಳು, ಹೊಗೆ ಮಧ್ಯೆ ನಮಗೆ ದಿನಾ ಸೇವೆ ಸಲ್ಲಿಸುವ ವ್ಯಾಪಾರಿಗಳ ನೆರವಿಗೆ ಸರ್ಕಾರ ಮುಂದೆ ಬರಲೇಬೇಕು.  ಈ ನಗರ ಸೃಷ್ಟಿ ಮಾಡಿದ ಕೆಂಪೇಗೌಡರು ಎಲ್ಲರೂ ಬದುಕುವಂತ ಊರಾಗಬೇಕೆಂದು ಬಯಸಿದವರು. ಅವರ ನೆನಪಿನಲ್ಲಿ ಅತಿ ದೊಡ್ಡ ಪ್ರತಿಮೆ ಕಟ್ಟುತ್ತಿರುವ ರಾಜ್ಯ ಸರ್ಕಾರ ಈಗ ಅವರ ಈ ಉದಾರ ಆದರ್ಶವನ್ನು ತನ್ನದಾಗಿಸಿಕೊಂಡು, ಬೀದಿ ವ್ಯಾಪಾರಿಗಳಿಗೆ ಸಾಥ್ ನೀಡಬೇಕಾಗಿದೆ.

ವಿನಯ್ ಕೂರಗಾಯಲ ಶ್ರೀನಿವಾಸ, ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...