Homeಅಂಕಣಗಳುಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ - ಎಚ್. ಎಸ್ ದೊರೆಸ್ವಾಮಿ

ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ.

- Advertisement -
- Advertisement -

ಆರ್ಥಿಕ ಶೋಷಣೆಯನ್ನ ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಸರ್ಕಾರಗಳ ಮತ್ತು ಸಂಸತ್ತಿನ ಗುರಿಯಾಗಬೇಕು. ಸ್ವಾತಂತ್ರ್ಯವೆಂದರೆ ದುರ್ಬಲವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಹೋಗುವುದಲ್ಲ. ಶೋಷಣೆಯನ್ನು ತಡೆಗಟ್ಟುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ, ಸಂಪನ್ಮೂಲಗಳ ಸ್ವಾಮ್ಯ ಒಡೆತನ ಸರ್ಕಾರದ ಕೈಯಲ್ಲಿ ಉಳಿಸಿಕೊಳ್ಳುವುದು. ಪ್ರಮುಖ ಉದ್ಯೋಗಗಳು ರಾಜ್ಯಾಡಳಿತದ ವ್ಯಾಪ್ತಿಯಲ್ಲಿರಬೇಕು. ಕೃಷಿಭೂಮಿ ಸರ್ಕಾರದ ಸ್ವಾಮ್ಯದಲ್ಲಿರಬೇಕು. ಹಾಗೆಂದರೆ ಸರ್ಕಾರ ಜಮೀನನ್ನು ಯಾರಿಗೆ ಅಂದರೆ ಅವರಿಗೆ, ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಿಕ್ಕಿದಂತೆ ಹಂಚುವ ಅಧಿಕಾರ ಅದಕ್ಕಿರಬೇಕೆಂಬ ಅರ್ಥವಲ್ಲ. ಪ್ರಮುಖ ಉದ್ಯಮಗಳು ಸರ್ಕಾರದ ವ್ಯಾಪ್ತಿಯಲ್ಲಿ ನಿರ್ವಹಣೆಯಾಗಬೇಕು. ವಿಮಾ ಸಂಸ್ಥೆಗಳ, ಲೇವಾದೇವಿ ಸಂಸ್ಥೆಗಳ ರಾಷ್ಟ್ರೀಕರಣ ಆಗಬೇಕು. ಜಮೀನ್ದಾರ, ಜೀತಗಾರ, ಕೃಷಿಕಾರ್ಮೀಕ ಮುಂತಾದ ಬರ್ಬರ ವ್ಯವಸ್ಥೆಗಳು ಕೊನೆಗೊಳ್ಳಬೇಕು. ದುರ್ಬಲವರ್ಗದವರಿಗೆ ಒದಗಿಸುವ ವಿಶೇಷ ರಕ್ಷಣಾ ನಿಬಂಧನೆಗಳನ್ನು ಸಂವಿಧಾನದ ಮೂಲಭೂತಹಕ್ಕುಗಳ ಪಟ್ಟಿಗೆ ಸೇರಿಸಬೇಕು. ಇದನ್ನು ಈಗ ಸಂವಿಧಾನದ ನಿರ್ದೇಶಕ ತತ್ವಗಳನ್ನಾಗಿ ಸೇರಿಸಲಾಗಿದೆ.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ವ್ಯಾಪಕ ತಳಹದಿಯ ಮೇಲೆ ರಚಿತವಾಗಿದೆ. ಸಮಗ್ರ ದೇಶದ ಹಿತದೃಷ್ಟಿಯಿಂದ ರಚಿತವಾಗಿದೆ.

ವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿಗಳಿಗೆ ಮಾತ್ರ ಅನ್ವಯವಾಗುವ ಮಹಾಮಂತ್ರ ಎಂದು ಪಟ್ಟಭದ್ರರು ಭಾವಿಸುತ್ತಾರೆ. ಅದರಿಂದಾಗಿ ಇದು ಶ್ರಮಜೀವಿಗಳ ದಾಸ್ಯಕ್ಕೆ ದಾರಿಮಾಡುತ್ತದೆ. ಹಿಂದೆ ದಲಿತರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ತಮ್ಮ ಶ್ರಮಶಕ್ತಿಗೆ ಸರಿಯಾದ ಪರಿಹಾರ ಪಡೆಯುವ ಅಧಿಕಾರ ಇರಲಿಲ್ಲ. ಶ್ರೀಮಂತ ರೈತರಿಗೆ ಅವರು ಖಾಯಂ ಜೀತದಾಳುಗಳಾಗಿದ್ದರು. ಅವರಿಗೆ ವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಅದು ಏನಿದ್ದರೂ ಶ್ರೀಮಂತರ ಸ್ವತ್ತಾಗಿತ್ತು.

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ. ಆ ಸಂಕೋಲೆಗಳನ್ನು ಕಳಚಿಕೊಳ್ಳುವುದೊಂದೇ ಇರುವ ಪರಿಹಾರ ಮಾರ್ಗ.

ಒಕ್ಕಲಿಗ ಸಣ್ಣ ರೈತರು ಮತ್ತು ಕಾರ್ಮಿಕರು, ಒಕ್ಕಲಿಗ White Collar ಗಿಂತ ತಾವು ಕೀಳು ಎಂದು ಭಾವಿಸುವರಾದರೂ ತಾವು ಅಸ್ಪೃಶ್ಯ ವರ್ಗದವರಿಗಿಂತ ಮೇಲ್ವರ್ಗದವರು ಎಂದು ಗರ್ವಪಡುತ್ತಾರೆ. ತಮ್ಮಂತೆಯೇ ಆರ್ಥಿಕವಾಗಿ ಹಿಂದುಳಿದ ಅಸ್ಪೃಶ್ಯರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ವೈರಿಗಳಂತೆ ನೋಡುತ್ತಾರೆ.

ಅಸ್ಪೃಶ್ಯರಿಗೆ ಸಮಾಜದಲ್ಲಿ ಗೌರವ ದೊರೆಯಬೇಕಾದರೆ ಅವರು ಮೊದಲು ಮಾಡಬೇಕಾದ ಕೆಲಸ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು. ಹಣದಿಂದಲೇ ಸಮಾಜ ಜನರನ್ನು ಅಳೆಯುವ ಈ ಕಾಲದಲ್ಲಿ ಅಸ್ಪೃಶ್ಯರು ಆರ್ಥಿಕವಾಗಿ ಚೇತರಿಸಿಕೊಳ್ಳದಿದ್ದರೆ ಸಮಾಜ ಅವರನ್ನು ತಿರಸ್ಕಾರ ಬುದ್ಧಿಯಿಂದ ನೋಡುತ್ತದೆ, ಕೀಳಾಗಿ ಕಾಣುತ್ತದೆ. ವೈರಿಗಳಂತೆ ಕಾಣುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಅಸ್ಪೃಶ್ಯರು ನಡೆದುಕೊಳ್ಳಬೇಕು.

ಆದರೆ ಒಂದು ಎಚ್ಚರಿಕೆ. ಭೌತಿಕ ಸುಖವೊಂದೇ ಸಾರಸರ್ವಸ್ವ ಎಂದು ಅಸ್ಪೃಶ್ಯರು ಭಾವಿಸಬಾರದು. ಅಸ್ಪೃಶ್ಯಯರಿಗೂ ಉಳಿದ ಎಲ್ಲರಂತೆ ಮನಸ್ಸು, ಹೃದಯಗಳಿವೆ. ಆ ಮನಸ್ಸಿಗೆ, ಹೃದಯಕ್ಕೆ ವಿಚಾರದ ಆಹಾರ ಅತ್ಯಗತ್ಯ. ವೈಚಾರಿಕತೆ ಮಾನವನ ಮನಸ್ಸಿನಲ್ಲಿ ಆಸೆಗಳನ್ನು ಹುಟ್ಟು ಹಾಕುತ್ತದೆ. ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅಸ್ಪೃಶ್ಯ ಸಂಘಟನೆಗಳು ವಿಚಾರಕ್ರಾಂತಿಯ ಬೀಜವನ್ನು ಅಸ್ಪೃಶ್ಯರ ಮನಸ್ಸಿನಲ್ಲಿ ಬಿತ್ತಬೇಕು.

ಆರ್ಥಿಕ ಬೆಳವಣಿಗೆ ಅಸ್ಪೃಶ್ಯರ ಸರ್ವತೋಮುಖ ಬೆಳವಣಿಗೆಗೆ ಒಂದು ಸಾಧನ. ಆರ್ಥಿಕ ಅಭಿವೃದ್ಧಿ ಆಯಿತು ಎಂದರೆ ಅಸ್ಪೃಶ್ಯನಿಗೆ ಸಮಾಜ ತನ್ನತಾನಾಗೇ ಗೌರವ ನೀಡಲು ಆರಂಭ ಮಾಡುತ್ತದೆ.

ಪರಂಪರಾಗತ ಉದ್ಯೋಗಗಳನ್ನು ದಲಿತರು ಬಿಡಬೇಕು. ಸತ್ತ ಪ್ರಾಣಿಗಳನ್ನು ಹೊತ್ತು ಹೂಳುವುದು ಮತ್ತು ತಿನ್ನುವುದು, ತೋಟಿ ತಳವಾರ ಹುದ್ದೆಗಳನ್ನು ವಂಶಪಾರಂಪರ್ಯದ ಕಸುಬು ಎಂದು ಊರು ಕೇರಿಯಲ್ಲಿ ಭಾವಿಸುವುದು, ಮೇಲ್ಜಾತಿಯವರ ಆಣತಿಯಂತೆ ತಮಟೆ ಹೊಡೆದು ಸಾರುವುದು ಎಲ್ಲ ನಿಲ್ಲಬೇಕು. ವಿದ್ಯಾಭ್ಯಾಸ ಪಡೆಯಲು ಎರಡು ವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವೆಂದರೆ ಬ್ರಾಹ್ಮಣವಾದ ಮತ್ತು ಬಂಡವಾಳವಾದ. ಬ್ರಾಹ್ಮಣವಾದ ಎಂಬುದನ್ನು ತಪ್ಪಾಗಿ ಅರ್ಥೈಸಬಾರದು. ಬ್ರಾಹ್ಮಣವಾದವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ವಿರೋಧಿಸುವ ಪ್ರವೃತ್ತಿ. ಈ ಪ್ರವೃತ್ತಿ ಬ್ರಾಹ್ಮಣರ ಗುತ್ತಿಯಾಗಿ ಏನೂ ಉಳಿದಿಲ್ಲ. ಎಲ್ಲ ಜಾತಿಗಳಲ್ಲೂ ಇಂತಹ ಜನ ಇದ್ದಾರೆ. ಈಗ ಇದು ಎಲ್ಲ ವರ್ಗದವರ ಸಿದ್ಧಾಂತವಾಗಿದೆ. ಈ ಪ್ರವೃತ್ತಿಯನ್ನು ದಲಿತರು ಹೋರಾಟದ ಮೂಲಕ ಬದಲಿಸಬೇಕು.

ಇನ್ನೊಂದು ಬಂಡವಾಳಶಾಹಿ ನೀತಿ. ಅದು ಲಾಭಕೋರರ ಸಂತೆ. ಬಂಡವಾಳಶಾಹಿಗಳ ಆರ್ಥಿಕನೀತಿ, ಧರ್ಮವೋ ಅಧರ್ಮವೋ ಯಾವುದೇ ಮಾರ್ಗವಾಗಲಿ ಲಾಭಗಳಿಸುವುದು. ಆಳುವ ಸರ್ಕಾರವನ್ನು ತನ್ನ ವಶ ಮಾಡಿಕೊಂಡು ಕೂಡಿಕೊಳ್ಳುವುದು. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿಸುವುದು. ಅವರಿಗೆ ಸರ್ಕಾರ ಸಕಲ ಸವಲತ್ತುಗಳನ್ನು ನೀಡಲು ತುದಿಗಾಲ ಮೇಲೆ ನಿಲ್ಲುತ್ತದೆ. ಅದಕ್ಕೆ ಕಾರಣ ಅವರು ಪಕ್ಷಕ್ಕೆ ನೀಡುವ ಎಂಜಲು ಹಣ. ಸರ್ಕಾರ ಸಮಾಜವಾದದಿಂದ ಬಂಡವಾಳಶಾಹಿ ನೀತಿಗೆ ತಿರುಗುವಂತೆ ಮಾಡುವುದು ಬಂಡವಾಳಶಾಹಿಯ ಪ್ರಥಮ ಆದ್ಯತೆ. ಮಾಲಿಕರು, ಕಾರ್ಮಿಕರು ಸರ್ಕಾರ ಮೂವರೂ ಸೇರಿ ಕಾರ್ಮಿಕ ನೀತಿ ರೂಪಿಸಬೇಕು, ಶ್ರಮಿಕರ ಕೈಗೆ ಸರ್ಕಾರ ಹೋಗಬೇಕು, ಶ್ರಮಿಕರಲ್ಲಿ ಬೇರುಬಿಟ್ಟಿರುವ ಜಾತಿ,ಭಾವನೆ, ಉಚ್ಚ ನೀಚಭಾವನೆ, ಮೇಲುಕೀಳು ಭಾವನೆ ಹೋಗದೆ ಇದ್ದರೆ ಶ್ರಮಿಕರು ಒಂದಾಗುವುದು ಹೇಗೆ ಸಾಧ್ಯವಾದೀತು? ಸಮಾಜದಲ್ಲಿ ಕ್ರಾಂತಿತರಲು ಹೇಗೆ ಸಾಧ್ಯವಾದೀತು?

ಅಂಬೇಡ್ಕರರ ಆರ್ಥಿಕನೀತಿ ಯಾವುದೇ ಜಾತಿ, ಪಕ್ಷ, ಕಾಲ, ದೇಶಗಳಿಗೆ ಸೀಮಿತವಾಗಿರದೆ ಇಡೀ ಮಾನವಕುಲದಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ನೆಮ್ಮದಿ ಬದುಕನ್ನು ಬದುಕಲು ನೆರವಾಗುವುದಾಗಿದೆ. ಇಡೀ ಮಾನವಸಮೂಹದಲ್ಲಿ ಸಮಾನತೆಯನ್ನು ತರುವುದೇ ಅಂಬೇಡ್ಕರರ ಆರ್ಥಿಕ ಗುರಿ.


ಇದನ್ನೂ ಓದಿ: ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...