Homeಅಂಕಣಗಳುಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ - ಎಚ್. ಎಸ್ ದೊರೆಸ್ವಾಮಿ

ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ.

- Advertisement -
- Advertisement -

ಆರ್ಥಿಕ ಶೋಷಣೆಯನ್ನ ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಸರ್ಕಾರಗಳ ಮತ್ತು ಸಂಸತ್ತಿನ ಗುರಿಯಾಗಬೇಕು. ಸ್ವಾತಂತ್ರ್ಯವೆಂದರೆ ದುರ್ಬಲವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಹೋಗುವುದಲ್ಲ. ಶೋಷಣೆಯನ್ನು ತಡೆಗಟ್ಟುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ, ಸಂಪನ್ಮೂಲಗಳ ಸ್ವಾಮ್ಯ ಒಡೆತನ ಸರ್ಕಾರದ ಕೈಯಲ್ಲಿ ಉಳಿಸಿಕೊಳ್ಳುವುದು. ಪ್ರಮುಖ ಉದ್ಯೋಗಗಳು ರಾಜ್ಯಾಡಳಿತದ ವ್ಯಾಪ್ತಿಯಲ್ಲಿರಬೇಕು. ಕೃಷಿಭೂಮಿ ಸರ್ಕಾರದ ಸ್ವಾಮ್ಯದಲ್ಲಿರಬೇಕು. ಹಾಗೆಂದರೆ ಸರ್ಕಾರ ಜಮೀನನ್ನು ಯಾರಿಗೆ ಅಂದರೆ ಅವರಿಗೆ, ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಿಕ್ಕಿದಂತೆ ಹಂಚುವ ಅಧಿಕಾರ ಅದಕ್ಕಿರಬೇಕೆಂಬ ಅರ್ಥವಲ್ಲ. ಪ್ರಮುಖ ಉದ್ಯಮಗಳು ಸರ್ಕಾರದ ವ್ಯಾಪ್ತಿಯಲ್ಲಿ ನಿರ್ವಹಣೆಯಾಗಬೇಕು. ವಿಮಾ ಸಂಸ್ಥೆಗಳ, ಲೇವಾದೇವಿ ಸಂಸ್ಥೆಗಳ ರಾಷ್ಟ್ರೀಕರಣ ಆಗಬೇಕು. ಜಮೀನ್ದಾರ, ಜೀತಗಾರ, ಕೃಷಿಕಾರ್ಮೀಕ ಮುಂತಾದ ಬರ್ಬರ ವ್ಯವಸ್ಥೆಗಳು ಕೊನೆಗೊಳ್ಳಬೇಕು. ದುರ್ಬಲವರ್ಗದವರಿಗೆ ಒದಗಿಸುವ ವಿಶೇಷ ರಕ್ಷಣಾ ನಿಬಂಧನೆಗಳನ್ನು ಸಂವಿಧಾನದ ಮೂಲಭೂತಹಕ್ಕುಗಳ ಪಟ್ಟಿಗೆ ಸೇರಿಸಬೇಕು. ಇದನ್ನು ಈಗ ಸಂವಿಧಾನದ ನಿರ್ದೇಶಕ ತತ್ವಗಳನ್ನಾಗಿ ಸೇರಿಸಲಾಗಿದೆ.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ವ್ಯಾಪಕ ತಳಹದಿಯ ಮೇಲೆ ರಚಿತವಾಗಿದೆ. ಸಮಗ್ರ ದೇಶದ ಹಿತದೃಷ್ಟಿಯಿಂದ ರಚಿತವಾಗಿದೆ.

ವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿಗಳಿಗೆ ಮಾತ್ರ ಅನ್ವಯವಾಗುವ ಮಹಾಮಂತ್ರ ಎಂದು ಪಟ್ಟಭದ್ರರು ಭಾವಿಸುತ್ತಾರೆ. ಅದರಿಂದಾಗಿ ಇದು ಶ್ರಮಜೀವಿಗಳ ದಾಸ್ಯಕ್ಕೆ ದಾರಿಮಾಡುತ್ತದೆ. ಹಿಂದೆ ದಲಿತರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ತಮ್ಮ ಶ್ರಮಶಕ್ತಿಗೆ ಸರಿಯಾದ ಪರಿಹಾರ ಪಡೆಯುವ ಅಧಿಕಾರ ಇರಲಿಲ್ಲ. ಶ್ರೀಮಂತ ರೈತರಿಗೆ ಅವರು ಖಾಯಂ ಜೀತದಾಳುಗಳಾಗಿದ್ದರು. ಅವರಿಗೆ ವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಅದು ಏನಿದ್ದರೂ ಶ್ರೀಮಂತರ ಸ್ವತ್ತಾಗಿತ್ತು.

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ. ಆ ಸಂಕೋಲೆಗಳನ್ನು ಕಳಚಿಕೊಳ್ಳುವುದೊಂದೇ ಇರುವ ಪರಿಹಾರ ಮಾರ್ಗ.

ಒಕ್ಕಲಿಗ ಸಣ್ಣ ರೈತರು ಮತ್ತು ಕಾರ್ಮಿಕರು, ಒಕ್ಕಲಿಗ White Collar ಗಿಂತ ತಾವು ಕೀಳು ಎಂದು ಭಾವಿಸುವರಾದರೂ ತಾವು ಅಸ್ಪೃಶ್ಯ ವರ್ಗದವರಿಗಿಂತ ಮೇಲ್ವರ್ಗದವರು ಎಂದು ಗರ್ವಪಡುತ್ತಾರೆ. ತಮ್ಮಂತೆಯೇ ಆರ್ಥಿಕವಾಗಿ ಹಿಂದುಳಿದ ಅಸ್ಪೃಶ್ಯರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ವೈರಿಗಳಂತೆ ನೋಡುತ್ತಾರೆ.

ಅಸ್ಪೃಶ್ಯರಿಗೆ ಸಮಾಜದಲ್ಲಿ ಗೌರವ ದೊರೆಯಬೇಕಾದರೆ ಅವರು ಮೊದಲು ಮಾಡಬೇಕಾದ ಕೆಲಸ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು. ಹಣದಿಂದಲೇ ಸಮಾಜ ಜನರನ್ನು ಅಳೆಯುವ ಈ ಕಾಲದಲ್ಲಿ ಅಸ್ಪೃಶ್ಯರು ಆರ್ಥಿಕವಾಗಿ ಚೇತರಿಸಿಕೊಳ್ಳದಿದ್ದರೆ ಸಮಾಜ ಅವರನ್ನು ತಿರಸ್ಕಾರ ಬುದ್ಧಿಯಿಂದ ನೋಡುತ್ತದೆ, ಕೀಳಾಗಿ ಕಾಣುತ್ತದೆ. ವೈರಿಗಳಂತೆ ಕಾಣುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಅಸ್ಪೃಶ್ಯರು ನಡೆದುಕೊಳ್ಳಬೇಕು.

ಆದರೆ ಒಂದು ಎಚ್ಚರಿಕೆ. ಭೌತಿಕ ಸುಖವೊಂದೇ ಸಾರಸರ್ವಸ್ವ ಎಂದು ಅಸ್ಪೃಶ್ಯರು ಭಾವಿಸಬಾರದು. ಅಸ್ಪೃಶ್ಯಯರಿಗೂ ಉಳಿದ ಎಲ್ಲರಂತೆ ಮನಸ್ಸು, ಹೃದಯಗಳಿವೆ. ಆ ಮನಸ್ಸಿಗೆ, ಹೃದಯಕ್ಕೆ ವಿಚಾರದ ಆಹಾರ ಅತ್ಯಗತ್ಯ. ವೈಚಾರಿಕತೆ ಮಾನವನ ಮನಸ್ಸಿನಲ್ಲಿ ಆಸೆಗಳನ್ನು ಹುಟ್ಟು ಹಾಕುತ್ತದೆ. ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅಸ್ಪೃಶ್ಯ ಸಂಘಟನೆಗಳು ವಿಚಾರಕ್ರಾಂತಿಯ ಬೀಜವನ್ನು ಅಸ್ಪೃಶ್ಯರ ಮನಸ್ಸಿನಲ್ಲಿ ಬಿತ್ತಬೇಕು.

ಆರ್ಥಿಕ ಬೆಳವಣಿಗೆ ಅಸ್ಪೃಶ್ಯರ ಸರ್ವತೋಮುಖ ಬೆಳವಣಿಗೆಗೆ ಒಂದು ಸಾಧನ. ಆರ್ಥಿಕ ಅಭಿವೃದ್ಧಿ ಆಯಿತು ಎಂದರೆ ಅಸ್ಪೃಶ್ಯನಿಗೆ ಸಮಾಜ ತನ್ನತಾನಾಗೇ ಗೌರವ ನೀಡಲು ಆರಂಭ ಮಾಡುತ್ತದೆ.

ಪರಂಪರಾಗತ ಉದ್ಯೋಗಗಳನ್ನು ದಲಿತರು ಬಿಡಬೇಕು. ಸತ್ತ ಪ್ರಾಣಿಗಳನ್ನು ಹೊತ್ತು ಹೂಳುವುದು ಮತ್ತು ತಿನ್ನುವುದು, ತೋಟಿ ತಳವಾರ ಹುದ್ದೆಗಳನ್ನು ವಂಶಪಾರಂಪರ್ಯದ ಕಸುಬು ಎಂದು ಊರು ಕೇರಿಯಲ್ಲಿ ಭಾವಿಸುವುದು, ಮೇಲ್ಜಾತಿಯವರ ಆಣತಿಯಂತೆ ತಮಟೆ ಹೊಡೆದು ಸಾರುವುದು ಎಲ್ಲ ನಿಲ್ಲಬೇಕು. ವಿದ್ಯಾಭ್ಯಾಸ ಪಡೆಯಲು ಎರಡು ವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವೆಂದರೆ ಬ್ರಾಹ್ಮಣವಾದ ಮತ್ತು ಬಂಡವಾಳವಾದ. ಬ್ರಾಹ್ಮಣವಾದ ಎಂಬುದನ್ನು ತಪ್ಪಾಗಿ ಅರ್ಥೈಸಬಾರದು. ಬ್ರಾಹ್ಮಣವಾದವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ವಿರೋಧಿಸುವ ಪ್ರವೃತ್ತಿ. ಈ ಪ್ರವೃತ್ತಿ ಬ್ರಾಹ್ಮಣರ ಗುತ್ತಿಯಾಗಿ ಏನೂ ಉಳಿದಿಲ್ಲ. ಎಲ್ಲ ಜಾತಿಗಳಲ್ಲೂ ಇಂತಹ ಜನ ಇದ್ದಾರೆ. ಈಗ ಇದು ಎಲ್ಲ ವರ್ಗದವರ ಸಿದ್ಧಾಂತವಾಗಿದೆ. ಈ ಪ್ರವೃತ್ತಿಯನ್ನು ದಲಿತರು ಹೋರಾಟದ ಮೂಲಕ ಬದಲಿಸಬೇಕು.

ಇನ್ನೊಂದು ಬಂಡವಾಳಶಾಹಿ ನೀತಿ. ಅದು ಲಾಭಕೋರರ ಸಂತೆ. ಬಂಡವಾಳಶಾಹಿಗಳ ಆರ್ಥಿಕನೀತಿ, ಧರ್ಮವೋ ಅಧರ್ಮವೋ ಯಾವುದೇ ಮಾರ್ಗವಾಗಲಿ ಲಾಭಗಳಿಸುವುದು. ಆಳುವ ಸರ್ಕಾರವನ್ನು ತನ್ನ ವಶ ಮಾಡಿಕೊಂಡು ಕೂಡಿಕೊಳ್ಳುವುದು. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿಸುವುದು. ಅವರಿಗೆ ಸರ್ಕಾರ ಸಕಲ ಸವಲತ್ತುಗಳನ್ನು ನೀಡಲು ತುದಿಗಾಲ ಮೇಲೆ ನಿಲ್ಲುತ್ತದೆ. ಅದಕ್ಕೆ ಕಾರಣ ಅವರು ಪಕ್ಷಕ್ಕೆ ನೀಡುವ ಎಂಜಲು ಹಣ. ಸರ್ಕಾರ ಸಮಾಜವಾದದಿಂದ ಬಂಡವಾಳಶಾಹಿ ನೀತಿಗೆ ತಿರುಗುವಂತೆ ಮಾಡುವುದು ಬಂಡವಾಳಶಾಹಿಯ ಪ್ರಥಮ ಆದ್ಯತೆ. ಮಾಲಿಕರು, ಕಾರ್ಮಿಕರು ಸರ್ಕಾರ ಮೂವರೂ ಸೇರಿ ಕಾರ್ಮಿಕ ನೀತಿ ರೂಪಿಸಬೇಕು, ಶ್ರಮಿಕರ ಕೈಗೆ ಸರ್ಕಾರ ಹೋಗಬೇಕು, ಶ್ರಮಿಕರಲ್ಲಿ ಬೇರುಬಿಟ್ಟಿರುವ ಜಾತಿ,ಭಾವನೆ, ಉಚ್ಚ ನೀಚಭಾವನೆ, ಮೇಲುಕೀಳು ಭಾವನೆ ಹೋಗದೆ ಇದ್ದರೆ ಶ್ರಮಿಕರು ಒಂದಾಗುವುದು ಹೇಗೆ ಸಾಧ್ಯವಾದೀತು? ಸಮಾಜದಲ್ಲಿ ಕ್ರಾಂತಿತರಲು ಹೇಗೆ ಸಾಧ್ಯವಾದೀತು?

ಅಂಬೇಡ್ಕರರ ಆರ್ಥಿಕನೀತಿ ಯಾವುದೇ ಜಾತಿ, ಪಕ್ಷ, ಕಾಲ, ದೇಶಗಳಿಗೆ ಸೀಮಿತವಾಗಿರದೆ ಇಡೀ ಮಾನವಕುಲದಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ನೆಮ್ಮದಿ ಬದುಕನ್ನು ಬದುಕಲು ನೆರವಾಗುವುದಾಗಿದೆ. ಇಡೀ ಮಾನವಸಮೂಹದಲ್ಲಿ ಸಮಾನತೆಯನ್ನು ತರುವುದೇ ಅಂಬೇಡ್ಕರರ ಆರ್ಥಿಕ ಗುರಿ.


ಇದನ್ನೂ ಓದಿ: ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...