Homeಅಂಕಣಗಳುಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ - ಎಚ್. ಎಸ್ ದೊರೆಸ್ವಾಮಿ

ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ.

- Advertisement -
- Advertisement -

ಆರ್ಥಿಕ ಶೋಷಣೆಯನ್ನ ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಸರ್ಕಾರಗಳ ಮತ್ತು ಸಂಸತ್ತಿನ ಗುರಿಯಾಗಬೇಕು. ಸ್ವಾತಂತ್ರ್ಯವೆಂದರೆ ದುರ್ಬಲವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಹೋಗುವುದಲ್ಲ. ಶೋಷಣೆಯನ್ನು ತಡೆಗಟ್ಟುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ, ಸಂಪನ್ಮೂಲಗಳ ಸ್ವಾಮ್ಯ ಒಡೆತನ ಸರ್ಕಾರದ ಕೈಯಲ್ಲಿ ಉಳಿಸಿಕೊಳ್ಳುವುದು. ಪ್ರಮುಖ ಉದ್ಯೋಗಗಳು ರಾಜ್ಯಾಡಳಿತದ ವ್ಯಾಪ್ತಿಯಲ್ಲಿರಬೇಕು. ಕೃಷಿಭೂಮಿ ಸರ್ಕಾರದ ಸ್ವಾಮ್ಯದಲ್ಲಿರಬೇಕು. ಹಾಗೆಂದರೆ ಸರ್ಕಾರ ಜಮೀನನ್ನು ಯಾರಿಗೆ ಅಂದರೆ ಅವರಿಗೆ, ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಿಕ್ಕಿದಂತೆ ಹಂಚುವ ಅಧಿಕಾರ ಅದಕ್ಕಿರಬೇಕೆಂಬ ಅರ್ಥವಲ್ಲ. ಪ್ರಮುಖ ಉದ್ಯಮಗಳು ಸರ್ಕಾರದ ವ್ಯಾಪ್ತಿಯಲ್ಲಿ ನಿರ್ವಹಣೆಯಾಗಬೇಕು. ವಿಮಾ ಸಂಸ್ಥೆಗಳ, ಲೇವಾದೇವಿ ಸಂಸ್ಥೆಗಳ ರಾಷ್ಟ್ರೀಕರಣ ಆಗಬೇಕು. ಜಮೀನ್ದಾರ, ಜೀತಗಾರ, ಕೃಷಿಕಾರ್ಮೀಕ ಮುಂತಾದ ಬರ್ಬರ ವ್ಯವಸ್ಥೆಗಳು ಕೊನೆಗೊಳ್ಳಬೇಕು. ದುರ್ಬಲವರ್ಗದವರಿಗೆ ಒದಗಿಸುವ ವಿಶೇಷ ರಕ್ಷಣಾ ನಿಬಂಧನೆಗಳನ್ನು ಸಂವಿಧಾನದ ಮೂಲಭೂತಹಕ್ಕುಗಳ ಪಟ್ಟಿಗೆ ಸೇರಿಸಬೇಕು. ಇದನ್ನು ಈಗ ಸಂವಿಧಾನದ ನಿರ್ದೇಶಕ ತತ್ವಗಳನ್ನಾಗಿ ಸೇರಿಸಲಾಗಿದೆ.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ವ್ಯಾಪಕ ತಳಹದಿಯ ಮೇಲೆ ರಚಿತವಾಗಿದೆ. ಸಮಗ್ರ ದೇಶದ ಹಿತದೃಷ್ಟಿಯಿಂದ ರಚಿತವಾಗಿದೆ.

ವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿಗಳಿಗೆ ಮಾತ್ರ ಅನ್ವಯವಾಗುವ ಮಹಾಮಂತ್ರ ಎಂದು ಪಟ್ಟಭದ್ರರು ಭಾವಿಸುತ್ತಾರೆ. ಅದರಿಂದಾಗಿ ಇದು ಶ್ರಮಜೀವಿಗಳ ದಾಸ್ಯಕ್ಕೆ ದಾರಿಮಾಡುತ್ತದೆ. ಹಿಂದೆ ದಲಿತರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ತಮ್ಮ ಶ್ರಮಶಕ್ತಿಗೆ ಸರಿಯಾದ ಪರಿಹಾರ ಪಡೆಯುವ ಅಧಿಕಾರ ಇರಲಿಲ್ಲ. ಶ್ರೀಮಂತ ರೈತರಿಗೆ ಅವರು ಖಾಯಂ ಜೀತದಾಳುಗಳಾಗಿದ್ದರು. ಅವರಿಗೆ ವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಅದು ಏನಿದ್ದರೂ ಶ್ರೀಮಂತರ ಸ್ವತ್ತಾಗಿತ್ತು.

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ. ಆ ಸಂಕೋಲೆಗಳನ್ನು ಕಳಚಿಕೊಳ್ಳುವುದೊಂದೇ ಇರುವ ಪರಿಹಾರ ಮಾರ್ಗ.

ಒಕ್ಕಲಿಗ ಸಣ್ಣ ರೈತರು ಮತ್ತು ಕಾರ್ಮಿಕರು, ಒಕ್ಕಲಿಗ White Collar ಗಿಂತ ತಾವು ಕೀಳು ಎಂದು ಭಾವಿಸುವರಾದರೂ ತಾವು ಅಸ್ಪೃಶ್ಯ ವರ್ಗದವರಿಗಿಂತ ಮೇಲ್ವರ್ಗದವರು ಎಂದು ಗರ್ವಪಡುತ್ತಾರೆ. ತಮ್ಮಂತೆಯೇ ಆರ್ಥಿಕವಾಗಿ ಹಿಂದುಳಿದ ಅಸ್ಪೃಶ್ಯರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ವೈರಿಗಳಂತೆ ನೋಡುತ್ತಾರೆ.

ಅಸ್ಪೃಶ್ಯರಿಗೆ ಸಮಾಜದಲ್ಲಿ ಗೌರವ ದೊರೆಯಬೇಕಾದರೆ ಅವರು ಮೊದಲು ಮಾಡಬೇಕಾದ ಕೆಲಸ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು. ಹಣದಿಂದಲೇ ಸಮಾಜ ಜನರನ್ನು ಅಳೆಯುವ ಈ ಕಾಲದಲ್ಲಿ ಅಸ್ಪೃಶ್ಯರು ಆರ್ಥಿಕವಾಗಿ ಚೇತರಿಸಿಕೊಳ್ಳದಿದ್ದರೆ ಸಮಾಜ ಅವರನ್ನು ತಿರಸ್ಕಾರ ಬುದ್ಧಿಯಿಂದ ನೋಡುತ್ತದೆ, ಕೀಳಾಗಿ ಕಾಣುತ್ತದೆ. ವೈರಿಗಳಂತೆ ಕಾಣುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಅಸ್ಪೃಶ್ಯರು ನಡೆದುಕೊಳ್ಳಬೇಕು.

ಆದರೆ ಒಂದು ಎಚ್ಚರಿಕೆ. ಭೌತಿಕ ಸುಖವೊಂದೇ ಸಾರಸರ್ವಸ್ವ ಎಂದು ಅಸ್ಪೃಶ್ಯರು ಭಾವಿಸಬಾರದು. ಅಸ್ಪೃಶ್ಯಯರಿಗೂ ಉಳಿದ ಎಲ್ಲರಂತೆ ಮನಸ್ಸು, ಹೃದಯಗಳಿವೆ. ಆ ಮನಸ್ಸಿಗೆ, ಹೃದಯಕ್ಕೆ ವಿಚಾರದ ಆಹಾರ ಅತ್ಯಗತ್ಯ. ವೈಚಾರಿಕತೆ ಮಾನವನ ಮನಸ್ಸಿನಲ್ಲಿ ಆಸೆಗಳನ್ನು ಹುಟ್ಟು ಹಾಕುತ್ತದೆ. ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅಸ್ಪೃಶ್ಯ ಸಂಘಟನೆಗಳು ವಿಚಾರಕ್ರಾಂತಿಯ ಬೀಜವನ್ನು ಅಸ್ಪೃಶ್ಯರ ಮನಸ್ಸಿನಲ್ಲಿ ಬಿತ್ತಬೇಕು.

ಆರ್ಥಿಕ ಬೆಳವಣಿಗೆ ಅಸ್ಪೃಶ್ಯರ ಸರ್ವತೋಮುಖ ಬೆಳವಣಿಗೆಗೆ ಒಂದು ಸಾಧನ. ಆರ್ಥಿಕ ಅಭಿವೃದ್ಧಿ ಆಯಿತು ಎಂದರೆ ಅಸ್ಪೃಶ್ಯನಿಗೆ ಸಮಾಜ ತನ್ನತಾನಾಗೇ ಗೌರವ ನೀಡಲು ಆರಂಭ ಮಾಡುತ್ತದೆ.

ಪರಂಪರಾಗತ ಉದ್ಯೋಗಗಳನ್ನು ದಲಿತರು ಬಿಡಬೇಕು. ಸತ್ತ ಪ್ರಾಣಿಗಳನ್ನು ಹೊತ್ತು ಹೂಳುವುದು ಮತ್ತು ತಿನ್ನುವುದು, ತೋಟಿ ತಳವಾರ ಹುದ್ದೆಗಳನ್ನು ವಂಶಪಾರಂಪರ್ಯದ ಕಸುಬು ಎಂದು ಊರು ಕೇರಿಯಲ್ಲಿ ಭಾವಿಸುವುದು, ಮೇಲ್ಜಾತಿಯವರ ಆಣತಿಯಂತೆ ತಮಟೆ ಹೊಡೆದು ಸಾರುವುದು ಎಲ್ಲ ನಿಲ್ಲಬೇಕು. ವಿದ್ಯಾಭ್ಯಾಸ ಪಡೆಯಲು ಎರಡು ವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವೆಂದರೆ ಬ್ರಾಹ್ಮಣವಾದ ಮತ್ತು ಬಂಡವಾಳವಾದ. ಬ್ರಾಹ್ಮಣವಾದ ಎಂಬುದನ್ನು ತಪ್ಪಾಗಿ ಅರ್ಥೈಸಬಾರದು. ಬ್ರಾಹ್ಮಣವಾದವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ವಿರೋಧಿಸುವ ಪ್ರವೃತ್ತಿ. ಈ ಪ್ರವೃತ್ತಿ ಬ್ರಾಹ್ಮಣರ ಗುತ್ತಿಯಾಗಿ ಏನೂ ಉಳಿದಿಲ್ಲ. ಎಲ್ಲ ಜಾತಿಗಳಲ್ಲೂ ಇಂತಹ ಜನ ಇದ್ದಾರೆ. ಈಗ ಇದು ಎಲ್ಲ ವರ್ಗದವರ ಸಿದ್ಧಾಂತವಾಗಿದೆ. ಈ ಪ್ರವೃತ್ತಿಯನ್ನು ದಲಿತರು ಹೋರಾಟದ ಮೂಲಕ ಬದಲಿಸಬೇಕು.

ಇನ್ನೊಂದು ಬಂಡವಾಳಶಾಹಿ ನೀತಿ. ಅದು ಲಾಭಕೋರರ ಸಂತೆ. ಬಂಡವಾಳಶಾಹಿಗಳ ಆರ್ಥಿಕನೀತಿ, ಧರ್ಮವೋ ಅಧರ್ಮವೋ ಯಾವುದೇ ಮಾರ್ಗವಾಗಲಿ ಲಾಭಗಳಿಸುವುದು. ಆಳುವ ಸರ್ಕಾರವನ್ನು ತನ್ನ ವಶ ಮಾಡಿಕೊಂಡು ಕೂಡಿಕೊಳ್ಳುವುದು. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿಸುವುದು. ಅವರಿಗೆ ಸರ್ಕಾರ ಸಕಲ ಸವಲತ್ತುಗಳನ್ನು ನೀಡಲು ತುದಿಗಾಲ ಮೇಲೆ ನಿಲ್ಲುತ್ತದೆ. ಅದಕ್ಕೆ ಕಾರಣ ಅವರು ಪಕ್ಷಕ್ಕೆ ನೀಡುವ ಎಂಜಲು ಹಣ. ಸರ್ಕಾರ ಸಮಾಜವಾದದಿಂದ ಬಂಡವಾಳಶಾಹಿ ನೀತಿಗೆ ತಿರುಗುವಂತೆ ಮಾಡುವುದು ಬಂಡವಾಳಶಾಹಿಯ ಪ್ರಥಮ ಆದ್ಯತೆ. ಮಾಲಿಕರು, ಕಾರ್ಮಿಕರು ಸರ್ಕಾರ ಮೂವರೂ ಸೇರಿ ಕಾರ್ಮಿಕ ನೀತಿ ರೂಪಿಸಬೇಕು, ಶ್ರಮಿಕರ ಕೈಗೆ ಸರ್ಕಾರ ಹೋಗಬೇಕು, ಶ್ರಮಿಕರಲ್ಲಿ ಬೇರುಬಿಟ್ಟಿರುವ ಜಾತಿ,ಭಾವನೆ, ಉಚ್ಚ ನೀಚಭಾವನೆ, ಮೇಲುಕೀಳು ಭಾವನೆ ಹೋಗದೆ ಇದ್ದರೆ ಶ್ರಮಿಕರು ಒಂದಾಗುವುದು ಹೇಗೆ ಸಾಧ್ಯವಾದೀತು? ಸಮಾಜದಲ್ಲಿ ಕ್ರಾಂತಿತರಲು ಹೇಗೆ ಸಾಧ್ಯವಾದೀತು?

ಅಂಬೇಡ್ಕರರ ಆರ್ಥಿಕನೀತಿ ಯಾವುದೇ ಜಾತಿ, ಪಕ್ಷ, ಕಾಲ, ದೇಶಗಳಿಗೆ ಸೀಮಿತವಾಗಿರದೆ ಇಡೀ ಮಾನವಕುಲದಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ನೆಮ್ಮದಿ ಬದುಕನ್ನು ಬದುಕಲು ನೆರವಾಗುವುದಾಗಿದೆ. ಇಡೀ ಮಾನವಸಮೂಹದಲ್ಲಿ ಸಮಾನತೆಯನ್ನು ತರುವುದೇ ಅಂಬೇಡ್ಕರರ ಆರ್ಥಿಕ ಗುರಿ.


ಇದನ್ನೂ ಓದಿ: ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...