Homeನೂರರ ನೋಟಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

- Advertisement -
- Advertisement -

ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ International Day for Universal Access to Information ದಿನವನ್ನಾಗಿ ಆಚರಿಸಲಾಯಿತು. ಆದರೆ ಮೋದಿ ಸರ್ಕಾರ ಸುದ್ದಿಯನ್ನು ಮುಚ್ಚಿಡುವ ಕಾಯಕದಲ್ಲಿ ತೊಡಗಿದೆ.
ಸೆಪ್ಟೆಂಬರ್ ಮೊದಲಲ್ಲಿ ವಿರೋಧ ಪಕ್ಷದ ಸದಸ್ಯರೊಬ್ಬರು ಪಾರ್ಲಿಮೆಂಟ್‌ನಲ್ಲಿ ಪ್ರಶ್ನಿಸಿದಾಗ ಗೃಹಸಚಿವಾಲಯದ ಮಿನಿಸ್ಟರ್ ಆಫ್ ಸ್ಟೇಟ್ ನಿತ್ಯಾನಂದ ರಾಯ್ ಅವರು ‘ವಲಸೆ ಕಾರ್ಮಿಕರ ದಂಡು ನಗರಗಳನ್ನು ಬಿಟ್ಟು ಹಿಂಡುಹಿಂಡಾಗಿ ತಮ್ಮ ಊರುಗಳಿಗೆ ಹೋದರೆಂಬ ಬೋರಂಟಿ ಬಿಡಲಾಗಿದೆ ಈ ಪತ್ರಿಕಾ ವರದಿಗಳು ಶುದ್ಧ ಸುಳ್ಳು’ ಎಂದು ಉತ್ತರಿಸಿದರು. ಸರ್ಕಾರದ ಪರಿಸ್ಥಿತಿಯ ಅರಿವಿನ ಕೊರತೆಯಿಂದಾಗಿ ಈ ಮಂತ್ರಿಗಳು ಈ ಉಡಾಫೆ ಉತ್ತರ ಕೊಟ್ಟರು. ಸರ್ಕಾರದ ಉದಾಸೀನ ಭಾವನೆಯಿಂದ ಹಾಗೂ ಮಾಹಿತಿಯ ಕೊರತೆಯಿಂದ, ಆಹಾರ ದೊರೆಯದೆ ಅನೇಕರು ಹಸಿವಿನಿಂದ ಪ್ರಾಣ ಬಿಟ್ಟರು. ಸರ್ಕಾರ ಆತುರಆತುರವಾಗಿ ಕೊರೊನಾ ಹೆಸರಿನಲ್ಲಿ ದಿಢೀರನೆ ಲಾಕ್‌ಡೌನ್ ಜಾರಿಗೆ ತಂದು ವಲಸೆ ಕಾರ್ಮಿಕರ ಮೇಲೆ ನಿರ್ಬಂಧಗಳನ್ನು ಹೇರಿತು. ಊಟವಿಲ್ಲದೆ, ಕೆಲಸವಿಲ್ಲದೆ ವಲಸೆ ಕಾರ್ಮಿಕರು ಇಲ್ಲಿ ಸಾಯುವುದಕ್ಕಿಂತ ತಮ್ಮ ಊರುಗಳಿಗೆ ಹೋಗಿ ಪ್ರಾಣ ಬಿಡುವುದು ಮೇಲು ಎಂದು ಯೋಚಿಸಿದರು. ಶ್ರಮಿಕ್ ರೈಲುಗಳಲ್ಲಿ ಹೊಟ್ಟೆಗಿಲ್ಲದೆ ಸತ್ತವರು, ವಾಹನಗಳ ಸೌಕರ್ಯವಿಲ್ಲದೆ ನಡೆದುಹೋದ ಲಕ್ಷಾಂತರ ವಲಸೆ ಕಾರ್ಮಿಕರು, ಅವರು ಅನುಭವಿಸಿದ ಕಷ್ಟಗಳು ಮತ್ತು ಹೊಟ್ಟೆಗಿಲ್ಲದೆ ದಾರಿಯಲ್ಲಿ ಸತ್ತವರ ಮಾಹಿತಿ ಸರ್ಕಾರದಲ್ಲಿ ಇಲ್ಲ ಎಂದ ಮೇಲೆ ಇದು ಬೇಜವಾಬ್ದಾರಿ ಸರ್ಕಾರವಲ್ಲದೆ ಬದ್ಧತೆಯುಳ್ಳ ಸರ್ಕಾರವೇ?

ಈ ಬೇಜವಾಬ್ದಾರಿ ಮಂತ್ರಿಗಳ ಉತ್ತರ ಮಾನವನ ಹಕ್ಕುಗಳ ಮೇಲಿನ ಮತ್ತು ಪ್ರಜಾಸತ್ತೆಯ ಮೇಲಿನ ದಾಳಿ ಇದ್ದಹಾಗೆ ಕಾಣುತ್ತದೆ.

ದೇವಿಕಾ ಎಂಬ ಕೇರಳದ ದಲಿತ ವಿದ್ಯಾರ್ಥಿನಿ ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದ ಕಾರಣದಿಂದ ಆನ್‌ಲೈನ್ ಕ್ಲಾಸ್‌ಗಳಿಗೆ ಹಾಜರಾಗಲು ಆಗಲಿಲ್ಲ. ಆ ಹುಡುಗಿ ಬುದ್ಧಿವಂತಳು ಮತ್ತು ಸ್ಕಾಲರ್‌ಷಿಪ್ ಪಡೆಯುತ್ತಿದ್ದವಳು. ಆದರೆ ಬಡತನದಿಂದ ಸ್ಮಾರ್ಟ್ ಫೋನ್ ಕೊಳ್ಳಲಾರದೆಹೋದಳು. ಇದರಿಂದ ಬೇಸರಗೊಂಡ ದೇವಕಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ತಂದೆ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಯಾಗಿದ್ದು ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮೋದಿಯವರಿಗೆ ಕಾಗದ ಬರೆದಿದ್ದರೆ ಈ ಹುಡುಗಿಗೆ ಸ್ಮಾರ್ಟ್ ಫೋನ್ ಕೊಡಿಸುತ್ತಾ ಇದ್ದರೋ ಏನೋ? ಈ ಸಮಸ್ಯೆ ದೇವಿಯದು ಮಾತ್ರವಲ್ಲ ಬಡತನದಲ್ಲಿ ತತ್ತರಿಸುತ್ತಿರುವ ಸಹಸ್ರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರದು. ಸರ್ಕಾರ ಆನ್‌ಲೈನ್ ಶಿಕ್ಷಣ ಕೊಡುವ ನಿರ್ಧಾರ ಕೈಗೊಳ್ಳುವ ಮೊದಲು ಈ ಬಡ ಜನರ ಕೈಯ್ಯಲ್ಲೆೆಲ್ಲಾ ಸ್ಮಾರ್ಟ್ ಫೋನ್ ಇದೆಯೇ ಎಂದು ಯೋಚಿಸಬೇಕಾಗಿತ್ತು. ಕಾರ್ಪೊರೇಟ್ ಸಂಸ್ಥೆಗಳನ್ನು ಸಂರಕ್ಷಿಸುವುದಕ್ಕೆ ಆದ್ಯತೆ ನೀಡುವ ಈ ಸರ್ಕಾರಕ್ಕೆ ಬಡವರ ಪ್ರಶ್ನೆ ಗೌಣ ಅಲ್ಲವೇ?

ಹಣಕಾಸಿನ ಸಂಗ್ರಹ ಮತ್ತು ವೆಚ್ಚದ ಬಗೆಗೆ ಸರ್ಕಾರ ಸಂಬಂಧಪಟ್ಟ ವಿವರಗಳನ್ನು ಕಾಲಕಾಲಕ್ಕೆ ಜನತೆಯ ಮುಂದಿಡಬೇಕು. ಸರ್ಕಾರ ಮನಸೋಇಚ್ಛೆ ಜನರ ಹಣವನ್ನು ಪೋಲು ಮಾಡುತ್ತಿದೆ. ಮೋದಿ ಅವರ ಹೊರರಾಷ್ಟ್ರೀಯ ಪ್ರಯಾಣ ವೆಚ್ಚಕ್ಕೆ ಕಡಿವಾಣವೇ ಇಲ್ಲ. ಕೋಟಿ ಕೋಟಿ ರೂಪಾಯಿಗಳನ್ನು ಅವರ ಪ್ರವಾಸಕ್ಕಾಗಿ, ಪ್ರವಾಸ ಭತ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ.

ಪಿಎಂ ಕೇರ್ಸ್ ನಿಧಿಯ ವಿಷಯದಲ್ಲಿ ಸರ್ಕಾರ ಬಾಯಿ ಬಿಡುತ್ತಿಲ್ಲ. ಎಷ್ಟು ಹಣ ಬಂತು, ಯಾರಿಂದ ಬಂತು ಎಂಬ ವಿವರವನ್ನು ಕೊಡುವುದಕ್ಕೆ ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಸರ್ಕಾರ ಪಡೆದ ನಿಧಿಯಲ್ಲ. ಮೋದಿಯವರು ಅಧ್ಯಕ್ಷತೆಯಲ್ಲಿ ಟ್ರಸ್ಟ್ ಒಂದು ಖಾಸಗಿಯಾಗಿ ಪಡೆದ ಹಣ. ಇದರ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿಲ್ಲ ಎನ್ನುತ್ತಿದೆ ಸರ್ಕಾರ. ಪ್ರಧಾನಿ ಸ್ಥಾನದಲ್ಲಿದ್ದುಕೊಂಡು ಈ ಅಪಾರ ಧನ ಪಡೆದಿರುವಾಗ ಈ ಬಗ್ಗೆ ಪ್ರಶ್ನಿಸುವ ಹಕ್ಕು ಮಹಾಜನರಿಗಿದೆ ಎಂಬುದನ್ನು ಮೋದಿ ತಿಳಿಯಬೇಕು.

ಸಾರ್ವಜನಿಕ ಹಣವನ್ನು ಕೋವಿಡ್ ಬಂದ ಮೇಲೆ ಪ್ರಧಾನಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಮನಸೋಇಚ್ಛೆ ಖರ್ಚು ಮಾಡಲು ಹೊರಟಿದ್ದಾರೆ. ಸರ್ಕಾರಗಳು ಬೇರೆ ಬೇರೆ ಬಾಬತ್ತುಗಳಿಗಾಗಿ ಎತ್ತಿಟ್ಟಿರುವ ಹಣವನ್ನು ಕೊರೊನಾ ನೆಪ ಹೇಳಿ ದುರ್ಬಳಕೆ ಮಾಡಿವೆ. ‘ಹುಚ್ಚು ಮುಂಡೆ ಮದುವೇಲಿ ಉಂಡವನೇ ಜಾಣ’ ಎಂಬ ಗಾದೆಯಂತೆ ಕೊರೊನಾ ಸಮಯದಲ್ಲಿ ಅಧಿಕಾರಿಗಳು, ಮಂತ್ರಿಗಳು ಎಲ್ಲ ಬಾಬತ್ತಿನ ಹಣವನ್ನು ದುಂದುವೆಚ್ಚ ಮಾಡಿ ಜೋಬು ತುಂಬಿಸಿಕೊಂಡಿದ್ದಾರೆ. ಇದರ ಬಗೆಗೆ ನಿಷ್ಪಕ್ಷಪಾತವಾದ ಒಂದು ತನಿಖೆಯಾಗಲಿ ಎಂದರೆ ಯಡಿಯೂರಪ್ಪನವರು ನಾವು ಸತ್ಯ ಹರಿಶ್ಚಂದ್ರರು, ಒಂದು ಕಾಸೂ ದುರುಪಯೋಗವಾಗಿಲ್ಲ ನಾವೇಕೆ ತನಿಖೆಗೆ ಒಳಪಡಿಸಬೇಕು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವ ನಡೆಸುವವರು ಸೀತಾ ದೇವಿಯಂತೆ ತನ್ನ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಅಗ್ನಿಪ್ರವೇಶಕ್ಕೆ ತಯಾರಿರಬೇಕು. ಆದರೆ ಈಗ ಅಧಿಕಾರ ನಡೆಸುವವರು ಗದ್ದಿಗೆಗೆ ಅಂಟಿಕೊಳ್ಳುವವರೇ ಹೊರತು ಪ್ರಜಾಪ್ರಭುತ್ವ ಎತ್ತಿ ಹಿಡಿಯುವವರಲ್ಲ. ಹಿಂದೆ ರಾಜ ಪ್ರಭುತ್ವ ಇದ್ದಾಗ The King does no wrong – ರಾಜ ತಪ್ಪು ಮಾಡುವುದೇ ಇಲ್ಲ ಎಂಬ ಮಾತು ಪ್ರತೀತಿಯಲ್ಲಿತ್ತು. ಈಗ ಹೊಸರಾಜರ ಆಳ್ವಿಕೆಯಲ್ಲಿ ನಾವಿದ್ದೇವೆ ಇವರೂ ತಪ್ಪು ಮಾಡುವವರೇ ಅಲ್ಲ. ತಪ್ಪು ಮಾಡಿದರೂ ಅದು ತಪ್ಪಲ್ಲ

ಜಿಲ್ಲಾ ಅದಿರು ಫೌಂಡೇಷನ್ ನಿಧಿಯನ್ನು ಕೊರೊನಾ ನೆಪ ಹೇಳಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಖನಿಜ ತೆಗೆಯುವುದರಿಂದ ಅಲ್ಲಿಯ ಜನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವರಿಗೆ ಶುದ್ಧ ನೀರು, ಶುದ್ಧ ಗಾಳಿ ಒದಗಿಸುವುದಕ್ಕೆ, ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗುವುದರಿಂದ ಅವುಗಳ ದುರಸ್ತಿಗಾಗಿ ಈ ನಿಧಿಯನ್ನು ಮೀಸಲಿರಿಸಲಾಗಿತ್ತು. ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

ಪಾರ್ಲಿಮೆಂಟ್‌ನಲ್ಲಿ, ಅಸೆಂಬ್ಲಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ಆರ್ಡಿನೆನ್ಸಗಳ ಮುಖಾಂತರ ರೈತರ, ಕಾರ್ಮಿಕರ, ಬಡಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಆರ್ಡಿನೆನ್ಸ್ಗಳನ್ನೇ ಶಾಸನವನ್ನಾಗಿ ಮಾಡುವ ಸಂದರ್ಭದಲ್ಲಾದರೂ ಆ ಬಿಲ್‌ಗಳ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗಿತ್ತು.

ರೈತರು ಮತ್ತು ಕಾರ್ಮಿಕರ ಹತ್ತಿರ ತಾವು ತರಲು ತೀರ್ಮಾನಿಸಿರುವ ಸುಗ್ರೀವಾಜ್ಞೆಗಳ ಬಗೆಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಸರ್ಕಾರಗಳು ಸರ್ವಾಧಿಕಾರಿ ನೀತಿಯನ್ನು ಅನುಸರಿಸಿವೆ. ರಚನಾತ್ಮಕ ಟೀಕೆಗಳನ್ನು ಮಾಡುವುದು ಪ್ರಜೆಯ ಹಕ್ಕು. ಈ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಸರ್ಕಾರಗಳ ಕರ್ತವ್ಯ. ಈ ಮೂಲಭೂತ ಅಧಿಕಾರವನ್ನೇ ಕಡೆಗಣಿಸಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಸ್ವೇಚ್ಛೆಯಿಂದ ನಡೆದುಕೊಂಡಿರುವುದನ್ನು ಪ್ರಜೆಯಾದವನು ಲಘುವಾಗಿ ಸ್ವೀಕರಿಸಬಾರದು. ರೈತರ ಮತ್ತು ಕಾರ್ಮಿಕರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವನ್ನು ಪ್ರಜೆಗಳೂ ಸೇರಿದಂತೆ ರೈತರು, ಕಾರ್ಮಿಕರು ವಿರೋಧಿಸಲು ಸಂಘಟಿತ ಪ್ರಯತ್ನವನ್ನು ಮಾಡಿರುವುದು ಸ್ತುತ್ಯ ವಿಚಾರ.

ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಚೈನಾ ಮತ್ತು ಪಾಕಿಸ್ತಾನಗಳು ಆಕ್ರಮಣಕಾರಿ ನಿಲುವನ್ನು ತಾಳಿರುವುದು ಒಂದು ಗಂಭೀರ ವಿಷಯ. ಭಾರತದ ಭೂಭಾಗವನ್ನು ಆಕ್ರಮಿಸಲು ಚೈನಾ ಹೊರಟಿದೆ ಎಂದು ರಕ್ಷಣಾ ವಿಭಾಗ ಹೇಳುವುದು ಮೋದಿಯವರು ಅಂಥದೇನೂ ನಡೆದಿಲ್ಲವೆಂದು ಹೇಳುವುದು ಆ ಮೂಲಕ ಜನರನ್ನು ನಿಜಸ್ಥಿತಿ ಏನೆಂದು ತಿಳಿಯಲು ಅವಕಾಶ ನೀಡದೆ ಕತ್ತಲಲ್ಲಿ ಇಡುವುದು ಯಾವ ಘನಂದಾರಿ ಕೆಲಸ? ರಾಷ್ಟ್ರದ ಭದ್ರತೆಯ ಬಗೆಗೆ ಇಂತಹ ದ್ವಂದ್ವಗಳನ್ನು ಸರ್ಕಾರ ತಳೆಯುವುದು ಅಪಾಯಕಾರಿ ನಿಲುವು. ಪ್ರಜೆಗಳು ಈ ಬೇಜವಾಬ್ದಾರಿ ನಿಲುವನ್ನು ತಾಳಿರುವ ಮೋದಿ ಸರ್ಕಾರದ ಬಗೆಗೆ ಗಂಭೀರವಾಗಿ ವಿಚಾರ ಮಾಡುವ ಕಾಲ ಸನ್ನಿಹಿತವಾಗಿದೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...