Homeನೂರರ ನೋಟಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

- Advertisement -
- Advertisement -

ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ International Day for Universal Access to Information ದಿನವನ್ನಾಗಿ ಆಚರಿಸಲಾಯಿತು. ಆದರೆ ಮೋದಿ ಸರ್ಕಾರ ಸುದ್ದಿಯನ್ನು ಮುಚ್ಚಿಡುವ ಕಾಯಕದಲ್ಲಿ ತೊಡಗಿದೆ.
ಸೆಪ್ಟೆಂಬರ್ ಮೊದಲಲ್ಲಿ ವಿರೋಧ ಪಕ್ಷದ ಸದಸ್ಯರೊಬ್ಬರು ಪಾರ್ಲಿಮೆಂಟ್‌ನಲ್ಲಿ ಪ್ರಶ್ನಿಸಿದಾಗ ಗೃಹಸಚಿವಾಲಯದ ಮಿನಿಸ್ಟರ್ ಆಫ್ ಸ್ಟೇಟ್ ನಿತ್ಯಾನಂದ ರಾಯ್ ಅವರು ‘ವಲಸೆ ಕಾರ್ಮಿಕರ ದಂಡು ನಗರಗಳನ್ನು ಬಿಟ್ಟು ಹಿಂಡುಹಿಂಡಾಗಿ ತಮ್ಮ ಊರುಗಳಿಗೆ ಹೋದರೆಂಬ ಬೋರಂಟಿ ಬಿಡಲಾಗಿದೆ ಈ ಪತ್ರಿಕಾ ವರದಿಗಳು ಶುದ್ಧ ಸುಳ್ಳು’ ಎಂದು ಉತ್ತರಿಸಿದರು. ಸರ್ಕಾರದ ಪರಿಸ್ಥಿತಿಯ ಅರಿವಿನ ಕೊರತೆಯಿಂದಾಗಿ ಈ ಮಂತ್ರಿಗಳು ಈ ಉಡಾಫೆ ಉತ್ತರ ಕೊಟ್ಟರು. ಸರ್ಕಾರದ ಉದಾಸೀನ ಭಾವನೆಯಿಂದ ಹಾಗೂ ಮಾಹಿತಿಯ ಕೊರತೆಯಿಂದ, ಆಹಾರ ದೊರೆಯದೆ ಅನೇಕರು ಹಸಿವಿನಿಂದ ಪ್ರಾಣ ಬಿಟ್ಟರು. ಸರ್ಕಾರ ಆತುರಆತುರವಾಗಿ ಕೊರೊನಾ ಹೆಸರಿನಲ್ಲಿ ದಿಢೀರನೆ ಲಾಕ್‌ಡೌನ್ ಜಾರಿಗೆ ತಂದು ವಲಸೆ ಕಾರ್ಮಿಕರ ಮೇಲೆ ನಿರ್ಬಂಧಗಳನ್ನು ಹೇರಿತು. ಊಟವಿಲ್ಲದೆ, ಕೆಲಸವಿಲ್ಲದೆ ವಲಸೆ ಕಾರ್ಮಿಕರು ಇಲ್ಲಿ ಸಾಯುವುದಕ್ಕಿಂತ ತಮ್ಮ ಊರುಗಳಿಗೆ ಹೋಗಿ ಪ್ರಾಣ ಬಿಡುವುದು ಮೇಲು ಎಂದು ಯೋಚಿಸಿದರು. ಶ್ರಮಿಕ್ ರೈಲುಗಳಲ್ಲಿ ಹೊಟ್ಟೆಗಿಲ್ಲದೆ ಸತ್ತವರು, ವಾಹನಗಳ ಸೌಕರ್ಯವಿಲ್ಲದೆ ನಡೆದುಹೋದ ಲಕ್ಷಾಂತರ ವಲಸೆ ಕಾರ್ಮಿಕರು, ಅವರು ಅನುಭವಿಸಿದ ಕಷ್ಟಗಳು ಮತ್ತು ಹೊಟ್ಟೆಗಿಲ್ಲದೆ ದಾರಿಯಲ್ಲಿ ಸತ್ತವರ ಮಾಹಿತಿ ಸರ್ಕಾರದಲ್ಲಿ ಇಲ್ಲ ಎಂದ ಮೇಲೆ ಇದು ಬೇಜವಾಬ್ದಾರಿ ಸರ್ಕಾರವಲ್ಲದೆ ಬದ್ಧತೆಯುಳ್ಳ ಸರ್ಕಾರವೇ?

ಈ ಬೇಜವಾಬ್ದಾರಿ ಮಂತ್ರಿಗಳ ಉತ್ತರ ಮಾನವನ ಹಕ್ಕುಗಳ ಮೇಲಿನ ಮತ್ತು ಪ್ರಜಾಸತ್ತೆಯ ಮೇಲಿನ ದಾಳಿ ಇದ್ದಹಾಗೆ ಕಾಣುತ್ತದೆ.

ದೇವಿಕಾ ಎಂಬ ಕೇರಳದ ದಲಿತ ವಿದ್ಯಾರ್ಥಿನಿ ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದ ಕಾರಣದಿಂದ ಆನ್‌ಲೈನ್ ಕ್ಲಾಸ್‌ಗಳಿಗೆ ಹಾಜರಾಗಲು ಆಗಲಿಲ್ಲ. ಆ ಹುಡುಗಿ ಬುದ್ಧಿವಂತಳು ಮತ್ತು ಸ್ಕಾಲರ್‌ಷಿಪ್ ಪಡೆಯುತ್ತಿದ್ದವಳು. ಆದರೆ ಬಡತನದಿಂದ ಸ್ಮಾರ್ಟ್ ಫೋನ್ ಕೊಳ್ಳಲಾರದೆಹೋದಳು. ಇದರಿಂದ ಬೇಸರಗೊಂಡ ದೇವಕಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ತಂದೆ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಯಾಗಿದ್ದು ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮೋದಿಯವರಿಗೆ ಕಾಗದ ಬರೆದಿದ್ದರೆ ಈ ಹುಡುಗಿಗೆ ಸ್ಮಾರ್ಟ್ ಫೋನ್ ಕೊಡಿಸುತ್ತಾ ಇದ್ದರೋ ಏನೋ? ಈ ಸಮಸ್ಯೆ ದೇವಿಯದು ಮಾತ್ರವಲ್ಲ ಬಡತನದಲ್ಲಿ ತತ್ತರಿಸುತ್ತಿರುವ ಸಹಸ್ರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರದು. ಸರ್ಕಾರ ಆನ್‌ಲೈನ್ ಶಿಕ್ಷಣ ಕೊಡುವ ನಿರ್ಧಾರ ಕೈಗೊಳ್ಳುವ ಮೊದಲು ಈ ಬಡ ಜನರ ಕೈಯ್ಯಲ್ಲೆೆಲ್ಲಾ ಸ್ಮಾರ್ಟ್ ಫೋನ್ ಇದೆಯೇ ಎಂದು ಯೋಚಿಸಬೇಕಾಗಿತ್ತು. ಕಾರ್ಪೊರೇಟ್ ಸಂಸ್ಥೆಗಳನ್ನು ಸಂರಕ್ಷಿಸುವುದಕ್ಕೆ ಆದ್ಯತೆ ನೀಡುವ ಈ ಸರ್ಕಾರಕ್ಕೆ ಬಡವರ ಪ್ರಶ್ನೆ ಗೌಣ ಅಲ್ಲವೇ?

ಹಣಕಾಸಿನ ಸಂಗ್ರಹ ಮತ್ತು ವೆಚ್ಚದ ಬಗೆಗೆ ಸರ್ಕಾರ ಸಂಬಂಧಪಟ್ಟ ವಿವರಗಳನ್ನು ಕಾಲಕಾಲಕ್ಕೆ ಜನತೆಯ ಮುಂದಿಡಬೇಕು. ಸರ್ಕಾರ ಮನಸೋಇಚ್ಛೆ ಜನರ ಹಣವನ್ನು ಪೋಲು ಮಾಡುತ್ತಿದೆ. ಮೋದಿ ಅವರ ಹೊರರಾಷ್ಟ್ರೀಯ ಪ್ರಯಾಣ ವೆಚ್ಚಕ್ಕೆ ಕಡಿವಾಣವೇ ಇಲ್ಲ. ಕೋಟಿ ಕೋಟಿ ರೂಪಾಯಿಗಳನ್ನು ಅವರ ಪ್ರವಾಸಕ್ಕಾಗಿ, ಪ್ರವಾಸ ಭತ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ.

ಪಿಎಂ ಕೇರ್ಸ್ ನಿಧಿಯ ವಿಷಯದಲ್ಲಿ ಸರ್ಕಾರ ಬಾಯಿ ಬಿಡುತ್ತಿಲ್ಲ. ಎಷ್ಟು ಹಣ ಬಂತು, ಯಾರಿಂದ ಬಂತು ಎಂಬ ವಿವರವನ್ನು ಕೊಡುವುದಕ್ಕೆ ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಸರ್ಕಾರ ಪಡೆದ ನಿಧಿಯಲ್ಲ. ಮೋದಿಯವರು ಅಧ್ಯಕ್ಷತೆಯಲ್ಲಿ ಟ್ರಸ್ಟ್ ಒಂದು ಖಾಸಗಿಯಾಗಿ ಪಡೆದ ಹಣ. ಇದರ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿಲ್ಲ ಎನ್ನುತ್ತಿದೆ ಸರ್ಕಾರ. ಪ್ರಧಾನಿ ಸ್ಥಾನದಲ್ಲಿದ್ದುಕೊಂಡು ಈ ಅಪಾರ ಧನ ಪಡೆದಿರುವಾಗ ಈ ಬಗ್ಗೆ ಪ್ರಶ್ನಿಸುವ ಹಕ್ಕು ಮಹಾಜನರಿಗಿದೆ ಎಂಬುದನ್ನು ಮೋದಿ ತಿಳಿಯಬೇಕು.

ಸಾರ್ವಜನಿಕ ಹಣವನ್ನು ಕೋವಿಡ್ ಬಂದ ಮೇಲೆ ಪ್ರಧಾನಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಮನಸೋಇಚ್ಛೆ ಖರ್ಚು ಮಾಡಲು ಹೊರಟಿದ್ದಾರೆ. ಸರ್ಕಾರಗಳು ಬೇರೆ ಬೇರೆ ಬಾಬತ್ತುಗಳಿಗಾಗಿ ಎತ್ತಿಟ್ಟಿರುವ ಹಣವನ್ನು ಕೊರೊನಾ ನೆಪ ಹೇಳಿ ದುರ್ಬಳಕೆ ಮಾಡಿವೆ. ‘ಹುಚ್ಚು ಮುಂಡೆ ಮದುವೇಲಿ ಉಂಡವನೇ ಜಾಣ’ ಎಂಬ ಗಾದೆಯಂತೆ ಕೊರೊನಾ ಸಮಯದಲ್ಲಿ ಅಧಿಕಾರಿಗಳು, ಮಂತ್ರಿಗಳು ಎಲ್ಲ ಬಾಬತ್ತಿನ ಹಣವನ್ನು ದುಂದುವೆಚ್ಚ ಮಾಡಿ ಜೋಬು ತುಂಬಿಸಿಕೊಂಡಿದ್ದಾರೆ. ಇದರ ಬಗೆಗೆ ನಿಷ್ಪಕ್ಷಪಾತವಾದ ಒಂದು ತನಿಖೆಯಾಗಲಿ ಎಂದರೆ ಯಡಿಯೂರಪ್ಪನವರು ನಾವು ಸತ್ಯ ಹರಿಶ್ಚಂದ್ರರು, ಒಂದು ಕಾಸೂ ದುರುಪಯೋಗವಾಗಿಲ್ಲ ನಾವೇಕೆ ತನಿಖೆಗೆ ಒಳಪಡಿಸಬೇಕು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವ ನಡೆಸುವವರು ಸೀತಾ ದೇವಿಯಂತೆ ತನ್ನ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಅಗ್ನಿಪ್ರವೇಶಕ್ಕೆ ತಯಾರಿರಬೇಕು. ಆದರೆ ಈಗ ಅಧಿಕಾರ ನಡೆಸುವವರು ಗದ್ದಿಗೆಗೆ ಅಂಟಿಕೊಳ್ಳುವವರೇ ಹೊರತು ಪ್ರಜಾಪ್ರಭುತ್ವ ಎತ್ತಿ ಹಿಡಿಯುವವರಲ್ಲ. ಹಿಂದೆ ರಾಜ ಪ್ರಭುತ್ವ ಇದ್ದಾಗ The King does no wrong – ರಾಜ ತಪ್ಪು ಮಾಡುವುದೇ ಇಲ್ಲ ಎಂಬ ಮಾತು ಪ್ರತೀತಿಯಲ್ಲಿತ್ತು. ಈಗ ಹೊಸರಾಜರ ಆಳ್ವಿಕೆಯಲ್ಲಿ ನಾವಿದ್ದೇವೆ ಇವರೂ ತಪ್ಪು ಮಾಡುವವರೇ ಅಲ್ಲ. ತಪ್ಪು ಮಾಡಿದರೂ ಅದು ತಪ್ಪಲ್ಲ

ಜಿಲ್ಲಾ ಅದಿರು ಫೌಂಡೇಷನ್ ನಿಧಿಯನ್ನು ಕೊರೊನಾ ನೆಪ ಹೇಳಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಖನಿಜ ತೆಗೆಯುವುದರಿಂದ ಅಲ್ಲಿಯ ಜನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವರಿಗೆ ಶುದ್ಧ ನೀರು, ಶುದ್ಧ ಗಾಳಿ ಒದಗಿಸುವುದಕ್ಕೆ, ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗುವುದರಿಂದ ಅವುಗಳ ದುರಸ್ತಿಗಾಗಿ ಈ ನಿಧಿಯನ್ನು ಮೀಸಲಿರಿಸಲಾಗಿತ್ತು. ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

ಪಾರ್ಲಿಮೆಂಟ್‌ನಲ್ಲಿ, ಅಸೆಂಬ್ಲಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ಆರ್ಡಿನೆನ್ಸಗಳ ಮುಖಾಂತರ ರೈತರ, ಕಾರ್ಮಿಕರ, ಬಡಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಆರ್ಡಿನೆನ್ಸ್ಗಳನ್ನೇ ಶಾಸನವನ್ನಾಗಿ ಮಾಡುವ ಸಂದರ್ಭದಲ್ಲಾದರೂ ಆ ಬಿಲ್‌ಗಳ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗಿತ್ತು.

ರೈತರು ಮತ್ತು ಕಾರ್ಮಿಕರ ಹತ್ತಿರ ತಾವು ತರಲು ತೀರ್ಮಾನಿಸಿರುವ ಸುಗ್ರೀವಾಜ್ಞೆಗಳ ಬಗೆಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಸರ್ಕಾರಗಳು ಸರ್ವಾಧಿಕಾರಿ ನೀತಿಯನ್ನು ಅನುಸರಿಸಿವೆ. ರಚನಾತ್ಮಕ ಟೀಕೆಗಳನ್ನು ಮಾಡುವುದು ಪ್ರಜೆಯ ಹಕ್ಕು. ಈ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಸರ್ಕಾರಗಳ ಕರ್ತವ್ಯ. ಈ ಮೂಲಭೂತ ಅಧಿಕಾರವನ್ನೇ ಕಡೆಗಣಿಸಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಸ್ವೇಚ್ಛೆಯಿಂದ ನಡೆದುಕೊಂಡಿರುವುದನ್ನು ಪ್ರಜೆಯಾದವನು ಲಘುವಾಗಿ ಸ್ವೀಕರಿಸಬಾರದು. ರೈತರ ಮತ್ತು ಕಾರ್ಮಿಕರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವನ್ನು ಪ್ರಜೆಗಳೂ ಸೇರಿದಂತೆ ರೈತರು, ಕಾರ್ಮಿಕರು ವಿರೋಧಿಸಲು ಸಂಘಟಿತ ಪ್ರಯತ್ನವನ್ನು ಮಾಡಿರುವುದು ಸ್ತುತ್ಯ ವಿಚಾರ.

ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಚೈನಾ ಮತ್ತು ಪಾಕಿಸ್ತಾನಗಳು ಆಕ್ರಮಣಕಾರಿ ನಿಲುವನ್ನು ತಾಳಿರುವುದು ಒಂದು ಗಂಭೀರ ವಿಷಯ. ಭಾರತದ ಭೂಭಾಗವನ್ನು ಆಕ್ರಮಿಸಲು ಚೈನಾ ಹೊರಟಿದೆ ಎಂದು ರಕ್ಷಣಾ ವಿಭಾಗ ಹೇಳುವುದು ಮೋದಿಯವರು ಅಂಥದೇನೂ ನಡೆದಿಲ್ಲವೆಂದು ಹೇಳುವುದು ಆ ಮೂಲಕ ಜನರನ್ನು ನಿಜಸ್ಥಿತಿ ಏನೆಂದು ತಿಳಿಯಲು ಅವಕಾಶ ನೀಡದೆ ಕತ್ತಲಲ್ಲಿ ಇಡುವುದು ಯಾವ ಘನಂದಾರಿ ಕೆಲಸ? ರಾಷ್ಟ್ರದ ಭದ್ರತೆಯ ಬಗೆಗೆ ಇಂತಹ ದ್ವಂದ್ವಗಳನ್ನು ಸರ್ಕಾರ ತಳೆಯುವುದು ಅಪಾಯಕಾರಿ ನಿಲುವು. ಪ್ರಜೆಗಳು ಈ ಬೇಜವಾಬ್ದಾರಿ ನಿಲುವನ್ನು ತಾಳಿರುವ ಮೋದಿ ಸರ್ಕಾರದ ಬಗೆಗೆ ಗಂಭೀರವಾಗಿ ವಿಚಾರ ಮಾಡುವ ಕಾಲ ಸನ್ನಿಹಿತವಾಗಿದೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...