Homeನೂರರ ನೋಟಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

- Advertisement -
- Advertisement -

ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ International Day for Universal Access to Information ದಿನವನ್ನಾಗಿ ಆಚರಿಸಲಾಯಿತು. ಆದರೆ ಮೋದಿ ಸರ್ಕಾರ ಸುದ್ದಿಯನ್ನು ಮುಚ್ಚಿಡುವ ಕಾಯಕದಲ್ಲಿ ತೊಡಗಿದೆ.
ಸೆಪ್ಟೆಂಬರ್ ಮೊದಲಲ್ಲಿ ವಿರೋಧ ಪಕ್ಷದ ಸದಸ್ಯರೊಬ್ಬರು ಪಾರ್ಲಿಮೆಂಟ್‌ನಲ್ಲಿ ಪ್ರಶ್ನಿಸಿದಾಗ ಗೃಹಸಚಿವಾಲಯದ ಮಿನಿಸ್ಟರ್ ಆಫ್ ಸ್ಟೇಟ್ ನಿತ್ಯಾನಂದ ರಾಯ್ ಅವರು ‘ವಲಸೆ ಕಾರ್ಮಿಕರ ದಂಡು ನಗರಗಳನ್ನು ಬಿಟ್ಟು ಹಿಂಡುಹಿಂಡಾಗಿ ತಮ್ಮ ಊರುಗಳಿಗೆ ಹೋದರೆಂಬ ಬೋರಂಟಿ ಬಿಡಲಾಗಿದೆ ಈ ಪತ್ರಿಕಾ ವರದಿಗಳು ಶುದ್ಧ ಸುಳ್ಳು’ ಎಂದು ಉತ್ತರಿಸಿದರು. ಸರ್ಕಾರದ ಪರಿಸ್ಥಿತಿಯ ಅರಿವಿನ ಕೊರತೆಯಿಂದಾಗಿ ಈ ಮಂತ್ರಿಗಳು ಈ ಉಡಾಫೆ ಉತ್ತರ ಕೊಟ್ಟರು. ಸರ್ಕಾರದ ಉದಾಸೀನ ಭಾವನೆಯಿಂದ ಹಾಗೂ ಮಾಹಿತಿಯ ಕೊರತೆಯಿಂದ, ಆಹಾರ ದೊರೆಯದೆ ಅನೇಕರು ಹಸಿವಿನಿಂದ ಪ್ರಾಣ ಬಿಟ್ಟರು. ಸರ್ಕಾರ ಆತುರಆತುರವಾಗಿ ಕೊರೊನಾ ಹೆಸರಿನಲ್ಲಿ ದಿಢೀರನೆ ಲಾಕ್‌ಡೌನ್ ಜಾರಿಗೆ ತಂದು ವಲಸೆ ಕಾರ್ಮಿಕರ ಮೇಲೆ ನಿರ್ಬಂಧಗಳನ್ನು ಹೇರಿತು. ಊಟವಿಲ್ಲದೆ, ಕೆಲಸವಿಲ್ಲದೆ ವಲಸೆ ಕಾರ್ಮಿಕರು ಇಲ್ಲಿ ಸಾಯುವುದಕ್ಕಿಂತ ತಮ್ಮ ಊರುಗಳಿಗೆ ಹೋಗಿ ಪ್ರಾಣ ಬಿಡುವುದು ಮೇಲು ಎಂದು ಯೋಚಿಸಿದರು. ಶ್ರಮಿಕ್ ರೈಲುಗಳಲ್ಲಿ ಹೊಟ್ಟೆಗಿಲ್ಲದೆ ಸತ್ತವರು, ವಾಹನಗಳ ಸೌಕರ್ಯವಿಲ್ಲದೆ ನಡೆದುಹೋದ ಲಕ್ಷಾಂತರ ವಲಸೆ ಕಾರ್ಮಿಕರು, ಅವರು ಅನುಭವಿಸಿದ ಕಷ್ಟಗಳು ಮತ್ತು ಹೊಟ್ಟೆಗಿಲ್ಲದೆ ದಾರಿಯಲ್ಲಿ ಸತ್ತವರ ಮಾಹಿತಿ ಸರ್ಕಾರದಲ್ಲಿ ಇಲ್ಲ ಎಂದ ಮೇಲೆ ಇದು ಬೇಜವಾಬ್ದಾರಿ ಸರ್ಕಾರವಲ್ಲದೆ ಬದ್ಧತೆಯುಳ್ಳ ಸರ್ಕಾರವೇ?

ಈ ಬೇಜವಾಬ್ದಾರಿ ಮಂತ್ರಿಗಳ ಉತ್ತರ ಮಾನವನ ಹಕ್ಕುಗಳ ಮೇಲಿನ ಮತ್ತು ಪ್ರಜಾಸತ್ತೆಯ ಮೇಲಿನ ದಾಳಿ ಇದ್ದಹಾಗೆ ಕಾಣುತ್ತದೆ.

ದೇವಿಕಾ ಎಂಬ ಕೇರಳದ ದಲಿತ ವಿದ್ಯಾರ್ಥಿನಿ ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದ ಕಾರಣದಿಂದ ಆನ್‌ಲೈನ್ ಕ್ಲಾಸ್‌ಗಳಿಗೆ ಹಾಜರಾಗಲು ಆಗಲಿಲ್ಲ. ಆ ಹುಡುಗಿ ಬುದ್ಧಿವಂತಳು ಮತ್ತು ಸ್ಕಾಲರ್‌ಷಿಪ್ ಪಡೆಯುತ್ತಿದ್ದವಳು. ಆದರೆ ಬಡತನದಿಂದ ಸ್ಮಾರ್ಟ್ ಫೋನ್ ಕೊಳ್ಳಲಾರದೆಹೋದಳು. ಇದರಿಂದ ಬೇಸರಗೊಂಡ ದೇವಕಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ತಂದೆ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಯಾಗಿದ್ದು ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮೋದಿಯವರಿಗೆ ಕಾಗದ ಬರೆದಿದ್ದರೆ ಈ ಹುಡುಗಿಗೆ ಸ್ಮಾರ್ಟ್ ಫೋನ್ ಕೊಡಿಸುತ್ತಾ ಇದ್ದರೋ ಏನೋ? ಈ ಸಮಸ್ಯೆ ದೇವಿಯದು ಮಾತ್ರವಲ್ಲ ಬಡತನದಲ್ಲಿ ತತ್ತರಿಸುತ್ತಿರುವ ಸಹಸ್ರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರದು. ಸರ್ಕಾರ ಆನ್‌ಲೈನ್ ಶಿಕ್ಷಣ ಕೊಡುವ ನಿರ್ಧಾರ ಕೈಗೊಳ್ಳುವ ಮೊದಲು ಈ ಬಡ ಜನರ ಕೈಯ್ಯಲ್ಲೆೆಲ್ಲಾ ಸ್ಮಾರ್ಟ್ ಫೋನ್ ಇದೆಯೇ ಎಂದು ಯೋಚಿಸಬೇಕಾಗಿತ್ತು. ಕಾರ್ಪೊರೇಟ್ ಸಂಸ್ಥೆಗಳನ್ನು ಸಂರಕ್ಷಿಸುವುದಕ್ಕೆ ಆದ್ಯತೆ ನೀಡುವ ಈ ಸರ್ಕಾರಕ್ಕೆ ಬಡವರ ಪ್ರಶ್ನೆ ಗೌಣ ಅಲ್ಲವೇ?

ಹಣಕಾಸಿನ ಸಂಗ್ರಹ ಮತ್ತು ವೆಚ್ಚದ ಬಗೆಗೆ ಸರ್ಕಾರ ಸಂಬಂಧಪಟ್ಟ ವಿವರಗಳನ್ನು ಕಾಲಕಾಲಕ್ಕೆ ಜನತೆಯ ಮುಂದಿಡಬೇಕು. ಸರ್ಕಾರ ಮನಸೋಇಚ್ಛೆ ಜನರ ಹಣವನ್ನು ಪೋಲು ಮಾಡುತ್ತಿದೆ. ಮೋದಿ ಅವರ ಹೊರರಾಷ್ಟ್ರೀಯ ಪ್ರಯಾಣ ವೆಚ್ಚಕ್ಕೆ ಕಡಿವಾಣವೇ ಇಲ್ಲ. ಕೋಟಿ ಕೋಟಿ ರೂಪಾಯಿಗಳನ್ನು ಅವರ ಪ್ರವಾಸಕ್ಕಾಗಿ, ಪ್ರವಾಸ ಭತ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ.

ಪಿಎಂ ಕೇರ್ಸ್ ನಿಧಿಯ ವಿಷಯದಲ್ಲಿ ಸರ್ಕಾರ ಬಾಯಿ ಬಿಡುತ್ತಿಲ್ಲ. ಎಷ್ಟು ಹಣ ಬಂತು, ಯಾರಿಂದ ಬಂತು ಎಂಬ ವಿವರವನ್ನು ಕೊಡುವುದಕ್ಕೆ ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಸರ್ಕಾರ ಪಡೆದ ನಿಧಿಯಲ್ಲ. ಮೋದಿಯವರು ಅಧ್ಯಕ್ಷತೆಯಲ್ಲಿ ಟ್ರಸ್ಟ್ ಒಂದು ಖಾಸಗಿಯಾಗಿ ಪಡೆದ ಹಣ. ಇದರ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿಲ್ಲ ಎನ್ನುತ್ತಿದೆ ಸರ್ಕಾರ. ಪ್ರಧಾನಿ ಸ್ಥಾನದಲ್ಲಿದ್ದುಕೊಂಡು ಈ ಅಪಾರ ಧನ ಪಡೆದಿರುವಾಗ ಈ ಬಗ್ಗೆ ಪ್ರಶ್ನಿಸುವ ಹಕ್ಕು ಮಹಾಜನರಿಗಿದೆ ಎಂಬುದನ್ನು ಮೋದಿ ತಿಳಿಯಬೇಕು.

ಸಾರ್ವಜನಿಕ ಹಣವನ್ನು ಕೋವಿಡ್ ಬಂದ ಮೇಲೆ ಪ್ರಧಾನಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಮನಸೋಇಚ್ಛೆ ಖರ್ಚು ಮಾಡಲು ಹೊರಟಿದ್ದಾರೆ. ಸರ್ಕಾರಗಳು ಬೇರೆ ಬೇರೆ ಬಾಬತ್ತುಗಳಿಗಾಗಿ ಎತ್ತಿಟ್ಟಿರುವ ಹಣವನ್ನು ಕೊರೊನಾ ನೆಪ ಹೇಳಿ ದುರ್ಬಳಕೆ ಮಾಡಿವೆ. ‘ಹುಚ್ಚು ಮುಂಡೆ ಮದುವೇಲಿ ಉಂಡವನೇ ಜಾಣ’ ಎಂಬ ಗಾದೆಯಂತೆ ಕೊರೊನಾ ಸಮಯದಲ್ಲಿ ಅಧಿಕಾರಿಗಳು, ಮಂತ್ರಿಗಳು ಎಲ್ಲ ಬಾಬತ್ತಿನ ಹಣವನ್ನು ದುಂದುವೆಚ್ಚ ಮಾಡಿ ಜೋಬು ತುಂಬಿಸಿಕೊಂಡಿದ್ದಾರೆ. ಇದರ ಬಗೆಗೆ ನಿಷ್ಪಕ್ಷಪಾತವಾದ ಒಂದು ತನಿಖೆಯಾಗಲಿ ಎಂದರೆ ಯಡಿಯೂರಪ್ಪನವರು ನಾವು ಸತ್ಯ ಹರಿಶ್ಚಂದ್ರರು, ಒಂದು ಕಾಸೂ ದುರುಪಯೋಗವಾಗಿಲ್ಲ ನಾವೇಕೆ ತನಿಖೆಗೆ ಒಳಪಡಿಸಬೇಕು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವ ನಡೆಸುವವರು ಸೀತಾ ದೇವಿಯಂತೆ ತನ್ನ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಅಗ್ನಿಪ್ರವೇಶಕ್ಕೆ ತಯಾರಿರಬೇಕು. ಆದರೆ ಈಗ ಅಧಿಕಾರ ನಡೆಸುವವರು ಗದ್ದಿಗೆಗೆ ಅಂಟಿಕೊಳ್ಳುವವರೇ ಹೊರತು ಪ್ರಜಾಪ್ರಭುತ್ವ ಎತ್ತಿ ಹಿಡಿಯುವವರಲ್ಲ. ಹಿಂದೆ ರಾಜ ಪ್ರಭುತ್ವ ಇದ್ದಾಗ The King does no wrong – ರಾಜ ತಪ್ಪು ಮಾಡುವುದೇ ಇಲ್ಲ ಎಂಬ ಮಾತು ಪ್ರತೀತಿಯಲ್ಲಿತ್ತು. ಈಗ ಹೊಸರಾಜರ ಆಳ್ವಿಕೆಯಲ್ಲಿ ನಾವಿದ್ದೇವೆ ಇವರೂ ತಪ್ಪು ಮಾಡುವವರೇ ಅಲ್ಲ. ತಪ್ಪು ಮಾಡಿದರೂ ಅದು ತಪ್ಪಲ್ಲ

ಜಿಲ್ಲಾ ಅದಿರು ಫೌಂಡೇಷನ್ ನಿಧಿಯನ್ನು ಕೊರೊನಾ ನೆಪ ಹೇಳಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಖನಿಜ ತೆಗೆಯುವುದರಿಂದ ಅಲ್ಲಿಯ ಜನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವರಿಗೆ ಶುದ್ಧ ನೀರು, ಶುದ್ಧ ಗಾಳಿ ಒದಗಿಸುವುದಕ್ಕೆ, ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗುವುದರಿಂದ ಅವುಗಳ ದುರಸ್ತಿಗಾಗಿ ಈ ನಿಧಿಯನ್ನು ಮೀಸಲಿರಿಸಲಾಗಿತ್ತು. ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

ಪಾರ್ಲಿಮೆಂಟ್‌ನಲ್ಲಿ, ಅಸೆಂಬ್ಲಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ಆರ್ಡಿನೆನ್ಸಗಳ ಮುಖಾಂತರ ರೈತರ, ಕಾರ್ಮಿಕರ, ಬಡಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಆರ್ಡಿನೆನ್ಸ್ಗಳನ್ನೇ ಶಾಸನವನ್ನಾಗಿ ಮಾಡುವ ಸಂದರ್ಭದಲ್ಲಾದರೂ ಆ ಬಿಲ್‌ಗಳ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗಿತ್ತು.

ರೈತರು ಮತ್ತು ಕಾರ್ಮಿಕರ ಹತ್ತಿರ ತಾವು ತರಲು ತೀರ್ಮಾನಿಸಿರುವ ಸುಗ್ರೀವಾಜ್ಞೆಗಳ ಬಗೆಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಸರ್ಕಾರಗಳು ಸರ್ವಾಧಿಕಾರಿ ನೀತಿಯನ್ನು ಅನುಸರಿಸಿವೆ. ರಚನಾತ್ಮಕ ಟೀಕೆಗಳನ್ನು ಮಾಡುವುದು ಪ್ರಜೆಯ ಹಕ್ಕು. ಈ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಸರ್ಕಾರಗಳ ಕರ್ತವ್ಯ. ಈ ಮೂಲಭೂತ ಅಧಿಕಾರವನ್ನೇ ಕಡೆಗಣಿಸಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಸ್ವೇಚ್ಛೆಯಿಂದ ನಡೆದುಕೊಂಡಿರುವುದನ್ನು ಪ್ರಜೆಯಾದವನು ಲಘುವಾಗಿ ಸ್ವೀಕರಿಸಬಾರದು. ರೈತರ ಮತ್ತು ಕಾರ್ಮಿಕರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವನ್ನು ಪ್ರಜೆಗಳೂ ಸೇರಿದಂತೆ ರೈತರು, ಕಾರ್ಮಿಕರು ವಿರೋಧಿಸಲು ಸಂಘಟಿತ ಪ್ರಯತ್ನವನ್ನು ಮಾಡಿರುವುದು ಸ್ತುತ್ಯ ವಿಚಾರ.

ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಚೈನಾ ಮತ್ತು ಪಾಕಿಸ್ತಾನಗಳು ಆಕ್ರಮಣಕಾರಿ ನಿಲುವನ್ನು ತಾಳಿರುವುದು ಒಂದು ಗಂಭೀರ ವಿಷಯ. ಭಾರತದ ಭೂಭಾಗವನ್ನು ಆಕ್ರಮಿಸಲು ಚೈನಾ ಹೊರಟಿದೆ ಎಂದು ರಕ್ಷಣಾ ವಿಭಾಗ ಹೇಳುವುದು ಮೋದಿಯವರು ಅಂಥದೇನೂ ನಡೆದಿಲ್ಲವೆಂದು ಹೇಳುವುದು ಆ ಮೂಲಕ ಜನರನ್ನು ನಿಜಸ್ಥಿತಿ ಏನೆಂದು ತಿಳಿಯಲು ಅವಕಾಶ ನೀಡದೆ ಕತ್ತಲಲ್ಲಿ ಇಡುವುದು ಯಾವ ಘನಂದಾರಿ ಕೆಲಸ? ರಾಷ್ಟ್ರದ ಭದ್ರತೆಯ ಬಗೆಗೆ ಇಂತಹ ದ್ವಂದ್ವಗಳನ್ನು ಸರ್ಕಾರ ತಳೆಯುವುದು ಅಪಾಯಕಾರಿ ನಿಲುವು. ಪ್ರಜೆಗಳು ಈ ಬೇಜವಾಬ್ದಾರಿ ನಿಲುವನ್ನು ತಾಳಿರುವ ಮೋದಿ ಸರ್ಕಾರದ ಬಗೆಗೆ ಗಂಭೀರವಾಗಿ ವಿಚಾರ ಮಾಡುವ ಕಾಲ ಸನ್ನಿಹಿತವಾಗಿದೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...