Homeಮುಖಪುಟಭೀಮಸೇನ ನಳಮಹರಾಜ, ಅಸ್ಮಿತೆ ಚಿತ್ರಗಳ ಕುರಿತು ಅನಿಸಿಕೆಗಳು

ಭೀಮಸೇನ ನಳಮಹರಾಜ, ಅಸ್ಮಿತೆ ಚಿತ್ರಗಳ ಕುರಿತು ಅನಿಸಿಕೆಗಳು

ಯಾವುದೇ ಸಂಘರ್ಷವನ್ನು ಗಹನವಾಗಿ ಶೋಧಿಸದೆ ಹಲವು ಟ್ವಿಸ್ಟ್ ಗಳ ಮೇಲೆಯೇ ಭಾರ ಹಾಕಿರುವ ಭೀಮಸೇನ ನಳಮಹರಾಜ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಷ್ಟು ಪರ-ವಿರೋಧ ಚರ್ಚೆ ಹುಟ್ಟಿಸಿದೆ.

- Advertisement -
- Advertisement -

ಸಾಹಿತ್ಯ ಕೃತಿ ಆಗಲೀ, ಸಿನೆಮಾ ಆಗಲಿ ಅದರ ಯಶಸ್ಸು ಅಡಗಿರುವುದು, ಅದು ಪರಿಣಾಮಕಾರಿಯಾಗುವುದು ತಾನೆತ್ತಿಕೊಳ್ಳುವ ಸಂಘರ್ಷದ ಬಹುಮುಖ ಆಯಾಮಗಳನ್ನು ಚರ್ಚಿಸಿ ಮಾನವೀಯ ಮುಖವನ್ನು ಶೋಧಿಸಿ ಓದುಗರನ್ನು-ವೀಕ್ಷಕರನ್ನು ಚಿಂತನೆಗೆ ಹಚ್ಚುವುದರಲ್ಲಿರುತ್ತದೆ. ಸಿನಿಮಾದ ಉದಾಹರಣೆಯಲ್ಲಿ ಹೇಳುವುದಾದರೆ ಅದು ಕಟ್ಟಿಕೊಡುವ ಪಾತ್ರದಲ್ಲಿ ಆಗುವ ಮಾನವೀಯ ಬದಲಾವಣೆಯನ್ನು ಹಿಡಿಯುವುದರ ಮೂಲಕ ಇರಬಹುದು, ಒಂದು ಘಟನೆಗೆ ವಿವಿಧ ಪಾತ್ರಗಳು ಪ್ರತಿಕ್ರಿಯಿಸುವುದನ್ನು ಜನಪರವಾಗಿ-ವಿಚಾರಪರವಾಗಿ ಕಟ್ಟಿಕೊಡುವುದರಿಂದ ಇರಬಹುದು. ಒಟ್ಟಿನಲ್ಲಿ ಜಗತ್ತಿನ ಯಾವುದೇ ಸಾಹಿತಿ, ಕಲಾವಿದ, ನಿರ್ದೇಶಕ ಅಂತಹ ಮಾನವೀಯ ಅನ್ವೇಷಣೆಯಲ್ಲಿ ತೊಡಗಿರುತ್ತಾನೆನ್ನಬಹುದು.

ಭೀಮಸೇನ ನಳಮಹರಾಜ

ಕಾರ್ತಿಕ್ ಸರಗೂರ್ ನಿರ್ದೇಶನದ ‘ಭೀಮಸೇನ ನಳಮಹರಾಜ’ ಚಲನಚಿತ್ರ ಒಟಿಟಿ ವೇದಿಕೆಯಲ್ಲಿ ಕಳೆದ ವಾರ ಬಿಡುಗಡೆ ಕಂಡಿದೆ. ಪ್ರವಾಸಿ ತಾಣವೊಂದರ ಮಾಲೀಕ ಮತ್ತು ಅಡುಗೆ ಮಾಡುವ ಲತ್ತೇಶ (ಅರವಿಂದ ಅಯ್ಯರ್) ಆಗ ತಾನೆ ಅಲ್ಲಿಗೆ ಆಗಮಿಸಿದ ಸಾರಾಳಿಗೆ (ಪ್ರಿಯಾಂಕ ತಿಮ್ಮೇಶ್) ತನ್ನ ಬಾಳಸಂಗಾತಿ ವೇದವಲ್ಲಿಯ (ಅರೋಹಿ ನಾರಾಯಣ್) ಕಥೆ ಹೇಳುತ್ತಾ ಸಾಗುವ ಸಿನೆಮಾ ಫ್ಲ್ಯಾಶ್‍ಬ್ಯಾಕ್‍ಗೆ ಹೊರಳುತ್ತದೆ.

PC : Wikipedia, (ಕಾರ್ತಿಕ್ ಸರಗೂರ್)

ವಲ್ಲಿಯ ಅಪ್ಪ ವರದರಾಜನ ಅಯ್ಯಂಗಾರ್ (ಅಚ್ಯುತ್ ಕುಮಾರ್) ಬೇಕರಿ ನಡೆಸುವ ವ್ಯಕ್ತಿ. ವಲ್ಲಿ ಅತಿ ಹೆಚ್ಚು ತಿನ್ನುತ್ತಾಳೆ, ಬೆಣ್ಣೆ ಖಾಲಿ ಮಾಡುತ್ತಾಳೆ ಎಂಬ ಕಾರಣಕ್ಕೆ ಮಗಳಿಗೆ ಉಗ್ರ ಶಿಕ್ಷೆ ನೀಡುವುದಕ್ಕೆ ಮುಂದಾಗುವ ಹಿಟ್ಲರ್ ಆತ. ಹಿಟ್ಲರ್ ವೇಷದಲ್ಲಿಯೂ ಆತನನ್ನು ತೋರಿಸಲಾಗುತ್ತದೆ. ಒಮ್ಮೆ ದೇವಸ್ಥಾನದಲ್ಲಿ ಮಗಳು ಬೆಣ್ಣೆ ಕದ್ದು ತಿಂದಳು ಎಂಬ ಕಾರಣಕ್ಕೆ, ತನ್ನ ಹೆಂಡತಿಯನ್ನು ಮತ್ತು ಮಗಳನ್ನು ನದಿಯ ನಡುವೆ ತೆಪ್ಪದಲ್ಲಿ ಕೂರಿಸಿ ವೇಗವಾಗಿ ತಿರುಗಿಸಿ ಬೆದರಿಸುತ್ತಾನೆ. ಆಗ ತೆಪ್ಪ ಉರುಳಿ ತಾಯಿ ಮರಣ ಹೊಂದುತ್ತಾಳೆ. ಮಗಳು ಅಪ್ಪನನ್ನು ದ್ವೇಶಿಸುತ್ತಾ ಬೆಳೆಯುತ್ತಾಳೆ. ಸಿನೆಮಾದ ಅಂತ್ಯ ಭಾಗದಲ್ಲಿ ಅಪ್ಪ ತನ್ನ ತಪ್ಪಿನ ಬಗ್ಗೆ ನಿವೇದಿಸಿಕೊಳ್ಳುತ್ತಾ, ತನ್ನ ಪತ್ನಿ ಒವರ್‌ವೇಯ್ಟ್ ಇದ್ದು ಬಿಪಿ, ಸಕ್ಕರೆ ಖಾಯಿಲೆಯಿಂದ ನರಳುತ್ತಿದ್ದಳು, ಮಗಳಿಗೂ ಖಾಯಿಲೆ ಬರುವುದಾಗಿ ವೈದ್ಯರು ಹೆದರಿಸಿದ್ದರಿಂದ ಅಂತಹ ಶಿಕ್ಷೆ ನೀಡುತ್ತಿದ್ದೆ. ನಾನು ಅಂತಹ ಉಗ್ರ ಶಿಕ್ಷೆ ನೀಡಿದ್ದು ತಪ್ಪು ಎಂದು ನನ್ನ ಮಗಳಿಗೆ ನಿವೇದಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಎಂದು ಭಾವನಾತ್ಮಕವಾಗಿ ನಿವೇದಿಸಿಕೊಳ್ಳುತ್ತಾನೆ. ಸುತ್ತ ನೆರೆದವರು ಕನಿಕರಿಸಿಸುತ್ತಾರೆ.

ಹಿಟ್ಲರ್ ಸ್ವಭಾವದವನು ಎಂದು ಕಟ್ಟಿಕೊಟ್ಟ ಈ ಪಾತ್ರಕ್ಕೆ ಕೊಟ್ಟ ಈ ವಿಮೋಚನೆಯನ್ನು ಪ್ರೇಕ್ಷಕನಿಗೆ ಅರ್ಥ ಮಾಡಿಸಲು ನಿರ್ದೇಶಕನಿಗೆ ಸಾಧ್ಯವಾಗಿದ್ದರೆ ಒಂದು ನೆಮ್ಮದಿಯ ನಿಟ್ಟುಸಿರು ಬಿಡಬಹುದಿತ್ತೇನೋ! ಆದರೆ ಈ ಪಾತ್ರ ಹೇಗೆ ಬದಲಾಯಿತು ಎಂಬುದಕ್ಕೆ ಯಾವುದೇ ದೃಶ್ಯಗಳು ಸಿನೆಮಾದಲ್ಲಿ ಇಲ್ಲ. ಪತ್ನಿ ಮತ್ತು ಮಗಳ ತೂಕದ ಸಮಸ್ಯೆಗೆ ಸಾಯಿಸುವ ಶಿಕ್ಷೆ ಕೊಡುವ ‘ಮಾನಸಿಕ ಅಸ್ವಸ್ಥ’ ಅಪ್ಪನಿಗೆ ನಿರ್ದೇಶಕ ಕೊಡುವ ವಿಮೋಚನೆ ಹಾಸ್ಯಾಸ್ಪದವಾಗಿದೆಯಷ್ಟೇ ಅಲ್ಲ, ಅಮಾನವೀಯವಾಗಿಯೂ ಇದೆ.

ವರದರಾಜನ್‍ನ ಕಥೆ ಇಡೀ ಸಿನೆಮಾ ಅಲ್ಲ ಅಂದಾದರೆ, ಆತನ ಹಿಟ್ಲರ್ ಮತ್ತು ಸುಧಾರಿತ ಅವಸ್ಥೆಗಳ ನಡುವೆ ಬೇರೊಂದು ಕಥೆ ಇರಲೇಬೇಕು ಎಂದು ನೀವು ಊಹಿಸಿದ್ದರೆ, ಹೌದು ಇದೆ. ಆ ಕಥೆಯಲ್ಲಿಯಾದರೂ ನಿರ್ವಹಿಸಿರುವ ಸಂಘರ್ಷ ಪರಿಣಾಮಕಾರಿಯಾಗಿ ಮೂಡಿದೆಯೇ ಎಂದರೆ ನಿರಾಶೆ ಉತ್ತರವೇ ಖಾತ್ರಿ. ವಲ್ಲಿಯ ಪಾತ್ರವನ್ನು ಸಿಡುಕುವ, ದ್ವೇಶದಲ್ಲಿ ನರಳುವ, ತನ್ನ ಪ್ರಿಯತಮನನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವಂತೆ ಚಿತ್ರಿಸಿರುವ ರೀತಿಗೂ, ಅದೇ ನಾಯಕ ನಟ ಲತ್ತೀಶನ ಪಾತ್ರವನ್ನು ವಿಶಾಲ ವ್ಯಕ್ತಿತ್ವವಾಗಿ ಚಿತ್ರಿಸುವ ಬಗೆಗೂ ಇವತ್ತು ನಮ್ಮ ಕಲೆ-ಸಾಹಿತ್ಯಗಳಲ್ಲಿ ಬೀಡುಬಿಟ್ಟಿರುವ ಸಂಗತಿ ಪುರುಷಪ್ರಾಧಾನ್ಯತೆಯನ್ನು ಎತ್ತಿಹಿಡಿಯುತ್ತದೆ. ಮಗಳ ಮೇಲಿನ ದ್ವೇಶಕ್ಕಾಗಿ ರಸ್ತೆ ನಡುವೆಯೇ ವಲ್ಲಿಗೆ ಲತ್ತೀಶನಿಂದ ವರದರಾಜನ್ ತಾಲಿ ಕಟ್ಟಿಸುವಂತೆ ತೋರಿಸಿ, ಚಲನಚಿತ್ರದ ಕೊನೆಗೆ ನನ್ನ ಮಗಳ ಒಳಿತಿಗೆ ಹಾಗೆ ಮಾಡಿದೆ ಎಂದು ಹೇಳಿಸುವುದು – ಹೀಗೆ ಸೂತ್ರ ಸಂಬಂಧವಿಲ್ಲದೆ ಬರೀ ‘ಮ್ಯಾನಿಪ್ಯುಲೇಶನ್’ಗಳ ಸರಣಿಯಂತೆ ಚಿತ್ರ ಸಾಗುತ್ತದೆ. ಸಿನೆಮಾದುದ್ದಕ್ಕೂ ಲತ್ತೀಶನ ಗೆಳೆಯನಾಗಿ ಕೆಂಡ ಎಂಬ ಪಾತ್ರವನ್ನು ವಿಕ್ಷಿಪ್ತವಾಗಿ ಚಿತ್ರಿಸಿ, ಆತನೂ ಯಾವುದೋ ಒಳ್ಳೆ ಕಾರಣಕ್ಕೆ ಹಾಗೆಲ್ಲಾ ಆಡುತ್ತಿರುತ್ತಾನೆ ಎಂಬ ಕನ್ಕ್ಲೂಶನ್ ಕೂಡ ಇದೆ!

ಕೊನೆಗೆ ನೀವು ನೋಡುತ್ತಿದ್ದ ವಲ್ಲಿ ಆಕೆಯೇ ಅಲ್ಲ ಮತ್ತೊಬ್ಬಳು ಎನ್ನುವ ಇನ್ನೊಂದು ಅರ್ಥವಿಲ್ಲದ ಟ್ವಿಸ್ಟ್. ಆ ಟ್ವಿಸ್ಟ್ ಮೂಲಕ ಹಿಂದಿನ ಕೆಲವು ದೃಶ್ಯಗಳನ್ನು ನೆನಪಿಸಿಕೊಂಡರೆ ನಿಮ್ಮ ತಲೆ ಗೊಂದಲದ ಗೂಡಾಗಬಹುದು. ಒಟ್ಟಿನಲ್ಲಿ ಯಾವುದೇ ಸಂಘರ್ಷವನ್ನು ಗಹನವಾಗಿ ಶೋಧಿಸದೆ ಹಲವು ಟ್ವಿಸ್ಟ್ ಗಳ ಮೇಲೆಯೇ ಭಾರ ಹಾಕಿರುವ ಈ ಚಲನಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟಿಸಿದೆ.

ಕನ್ನಡ ಭಾಷೆಯ ಸಿನೆಮಾಗಳು ಎಂಬ ಕಾರಣಕ್ಕೆ ಸ್ವಲ್ಪ ಲೀನಿಯೆನ್ಸ್ ಕೊಟ್ಟು ಹೊಗಳಬೇಕು ಎಂಬ ಹಳೆಯ ಕೂಗು ಇದರೊಟ್ಟಿಗೆ ಎದ್ದಿರುವುದು ವಿಶೇಷವೇನಲ್ಲ. ಆದರೆ ಯಾವುದೇ ಒಂದು ಕಲಾಕೃತಿ ಮೂಡಿಬಂದ ಮೇಲೆ ಅದರ ವಿವಿಧ ಮೊಗ್ಗಲುಗಳನ್ನು ಚರ್ಚಿಸದೆ ಸಂಭ್ರಮ ಪಡುವುದರಿಂದ ಹೆಚ್ಚಿನ ಉಪಯೋಗವೇನಿಲ್ಲ. ಕನ್ನಡದಲ್ಲಿ ಮೂಡುವ ಕಲೆ ಮಾನವೀಯತೆಗೆ ಸ್ಪಂದಿಸಬೇಕು ಮತ್ತು ವಿಶಾಲ ಅರ್ಥದಲ್ಲಿ ಜನರ ನಡುವೆ ಇರುವ ಸಂಕುಚಿತತೆಯನ್ನು ಪ್ರಶ್ನಿಸುವ, ಅವುಗಳ ಬಗ್ಗೆ ತಿಳುವಳಿಕೆ ನೀಡುವಂತವಾಗಬೇಕು ಎನ್ನುವ ಹಂಬಲ-ಅಪೇಕ್ಷೆ ಹೆಚ್ಚಬೇಕಿದೆ. ಅದು ಜನಪ್ರಿಯ ಶೈಲಿಯ ಸಿನೆಮಾಗಳಲ್ಲು ಸಾಧ್ಯವಿದೆ ಎಂಬುದಕ್ಕೆ ಕನ್ನಡ ಚಿತ್ರರಂಗದಲ್ಲಿ ಸ್ವಲ್ಪ ಹಿಂದಕ್ಕೆ ಸರಿದರೂ ಸಾಕು. ‘ಭೂತಯ್ಯನ ಮಗ ಅಯ್ಯು’, ‘ಕಸ್ತೂರಿ ನಿವಾಸ’, ‘ಬಂಗಾರದ ಪಂಜರ’, ‘ಭುಜಂಗಯ್ಯನ ದಶಾವತಾರಗಳು’ ಇಂತಹ ನೂರಾರು ಸಿನೆಮಾಗಳು ಸಿಕ್ಕಾವು. ಅಕ್ಕಪಕ್ಕದ ರಾಜ್ಯಗಳ ಸಿನೆಮಾಗಳಲ್ಲಿಯೂ ಹಲವು ಸಿಕ್ಕುವುದರಲ್ಲಿ ಸಂಶಯವಿಲ್ಲ.

ಅಸ್ಮಿತೆ

ಕರ್ನಾಟಕದ ಮೇಲೆ ಹಲವು ಒಕ್ಕೂಟ ಸರ್ಕಾರಗಳು ಮತ್ತು ಅತಿಯಾಗಿ ಹಿಂದುತ್ವವನ್ನು ಪ್ರತಿಪಾದಿಸುವ ಸರ್ಕಾರಗಳು ಹಿಂದಿ ಹೇರಿಕೆ ಮಾಡುವುದರ ಸಮಸ್ಯೆಯ ಚರ್ಚೆಯ ನಡುವೆ, ಕನ್ನಡದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ಅವರು ಅಷ್ಟೇನು ಗಹನವಲ್ಲದ ಪ್ರತಿಕ್ರಿಯೆ ನೀಡಿದ್ದು ಸಾಮಾಜಿಕ ಜಾಲತಾಣಗಲಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರಿಂದ ಉತ್ತೇಜಿತರಾಗಿ, ತಾವು ಹಿಂದಿ ಹೇರಿಕೆಯನ್ನು ಕಲಾತ್ಮಕವಾಗಿ ವಿರೋಧಿಸುವುದಾಗಿ ಘೋಷಿಸಿದ್ದರಲ್ಲದೆ ಅದರ ಕುರಿತು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸುವುದಾಗಿಯೂ ಹೇಳಿದ್ದರು. ಇದರ ಭಾಗವಾಗಿಯೆ ಕೆಲವು ದಿನಗಳ ಹಿಂದೆ ಅವರ ನಿರ್ದೇಶನದ ‘ಅಸ್ಮಿತೆ’ ಎಂಬ ಕಿರುಚಿತ್ರ ಯುಟ್ಯೂಬ್‍ನಲ್ಲಿ ಬಿಡುಗಡೆ ಆಗಿದೆ.

ತಮ್ಮ ಜನಪ್ರಿಯ ಶೈಲಿಯ ಚಲನಚಿತ್ರಗಳ ಮೂಲಕ (ಯು-ಟರ್ನ್, ಲೂಸಿಯಾ, ಲೈಫು ಇಷ್ಟೇನೆ) ಪವನ್ ಕುಮಾರ್ ಕನ್ನಡ ಸಿನೆಮಾ ಪ್ರೇಕ್ಷಕರ ನಡುವೆ ಚಿರಪರಿಚಿತ. ಪವನ್ ಪ್ರಚಲಿತ ಸಮಸ್ಯೆಯೊಂದನ್ನು ಎತ್ತಿಕೊಂಡು ಸಿನೆಮಾ ಮಾಡಿರುವುದೇ ಸ್ವಾಗತಾರ್ಹ ಮತ್ತು ಅನುಕರಣೀಯ.

ಐಡೆಂಟಿಟಿ ಎಂಬುದಕ್ಕೆ ಕನ್ನಡದಲ್ಲಿ ಸಂವಾದಿಯಾಗಿ ಬಳಸುವ ಸಂಸ್ಕೃತ ಮೂಲದ ‘ಅಸ್ಮಿತೆ’ಯ ಶೀರ್ಷಿಕೆಯಿಂದಲೇ ಈ ಕಿರುಚಿತ್ರದ ವಸ್ತು ಮತ್ತು ವಿಷಯ ಸ್ಪಷ್ಟವಾಗುತ್ತದೆ. ಸಂಭಾಷಣೆಯಿಲ್ಲದೆ ಮುಂದುವರೆಯುವ ಈ ಕಿರುಚಿತ್ರ, ತಾನು ಹೇಳಬೇಕಿರುವುದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ದಾಟಿಸುವಲ್ಲಿ ಸಫಲವಾಗಿದ್ದರೂ, ಹಿಂದಿ ಹೇರಿಕೆಯ ಹುನ್ನಾರ ನಿಜವಾಗಿಯೂ ನಿರ್ದೇಶಕರಿಗೆ ಅರ್ಥವಾಗಿದೆಯೇ ಎಂಬ ಪ್ರಶ್ನೆ ತಲೆದೋರುತ್ತದೆ.

PC : Filmfare.com, (ಪವನ್ ಕುಮಾರ್)

ಯಾವಾಗಲೂ ಲ್ಯಾಪ್‍ಟಾಪ್‍ನೊಂದಿಗೆ ಕಾರ್ಯನಿರತ ಗಂಡ, ತನ್ನ ಹೆಂಡತಿ ಮತ್ತು ಸಣ್ಣ ಮಗುವಿನ ನೋವು ನಲಿವಿಗೆ ಸ್ಪಂದಿಸದೆ ಬದುಕುತ್ತಿರುತ್ತಾನೆ. ಈ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಸಿ, ಕನ್ನಡ ಸಿನೆಮಾಗಳನ್ನು ತೋರಿಸಿ, ಚೆನ್ನಾಗಿ ಊಟ ತಿನ್ನಿಸಿ ಮಗುವನ್ನು ಸಂತಸದಿಂದ ನೋಡಿಕೊಳ್ಳುವ ತಾಯಿ ಒಂದು ದಿನ ಮನೆಯಿಂದ ಕಣ್ಮರೆಯಾಗುತ್ತಾಳೆ. (ಈ ಸಮಯದಲ್ಲಿ ಮಾಸ್ಕ್ ತೋರಿಸುವ ದೃಶ್ಯವನ್ನು, ಆಕೆ ಗಂಡ ಮತ್ತು ಮಗುವನ್ನು ತೊರೆದು ಹೋದಳು ಎಂದು ಅರ್ಥೈಸಬೇಕೋ ಅಥವಾ ಅಕಾಲಿಕ ಮೃತ್ಯುವಿಗೆ ತುತ್ತಾದಳೋ ಎಂಬುದು ವೀಕ್ಷಕನ ಗ್ರಹಿಕೆಗೆ ಬಿಟ್ಟಿದ್ದು). ಆತ ಮರುಮದುವೆಯಾಗಿ ಮನೆಗೆ ಬರುವಾಕೆ, ಕನ್ನಡ ಸೊಲ್ಲನ್ನು ತಿಳಿಯದವಳು. ಮಗುವನ್ನು ಚೆನ್ನಾಗಿ ನೋಡಿಕೊಂಡರೂ ಕನ್ನಡದ ಓದು, ಸಿನೆಮಾ ಇಲ್ಲವಾಗುತ್ತದೆ. ಇಡ್ಲಿ ವಡಾ ಜಾಗದಲ್ಲಿ ಆಲು ಪರೋಟ ಬಂದು ಕೂರುತ್ತದೆ. ಹೀಗೆ ಮುಂದುವರೆಯುವ ಸಿನೆಮಾ ‘ಕನ್ನಡದಲ್ಲಿ ಸೇವೆಯನ್ನು ಒದಗಿಸಿ’ ಎಂಬ ಸಾಲು ತೆರೆಯ ಮೇಲೆ ಮೂಡುವುದರೊಂದಿಗೆ ಅಂತ್ಯವಾಗುತ್ತದೆ.

ನಿರ್ದೇಶಕರಿಗೆ ಕನ್ನಡ ಪರಿಸರದ ಬಗ್ಗೆ ಒಂದು ಮಟ್ಟದ ಕಾಳಜಿ ಇದ್ದರೂ, ಅವರು ಉಪಯೋಗಿಸಿರುವ ಸಂಕೇತಗಳು ಹಿಂದಿ ಹೇರಿಕೆ ಎಂಬ ವ್ಯವಸ್ಥೆಯ ಸಮಸ್ಯೆಯನ್ನು ಹಿಡಿಯಲು ಅಥವಾ ಬಿಂಬಿಸಲು ಶಕ್ತವಾಗಿಲ್ಲ. ಆಲೂ ಪರೋಟ ಹಿಂದಿ ಹೇರಿಕೆಯನ್ನು ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ಅದು ವೈಯಕ್ತಿಕ ಆಯ್ಕೆಯ ಪ್ರಶ್ನೆಯಾಗಿ ಉಳಿಯುತ್ತದೆಯೇ ಹೊರತು, ಹಿಂದಿ-ಹಿಂದುತ್ವ ಪ್ರಭುತ್ವಗಳ ಮತ್ತು ಕಾರ್ಪೋರೆಟ್ ಹೊಂದಾಣಿಕೆ ಹೇಗೆ ಬಹುಸಂಸ್ಕೃತಿಗಳನ್ನು, ಬಹುಭಾಷೆಗಳನ್ನು ನೆಲಸಮ ಮಾಡಲು ಮುಂದಾಗುತ್ತದೆ ಎಂಬ ಬಿಕ್ಕಟ್ಟಿನ ಪ್ರಶ್ನೆಯನ್ನು ಅದು ಶೋಧನೆಗೆ ತೊಡಗಿಸಿಕೊಳ್ಳುವುದಿಲ್ಲ. ಜನರ ವೈಯಕ್ತಿಕ ಆಯ್ಕೆಯ ಆಯಾಮ ಒಂದಿದ್ದರೂ, ಇಲ್ಲಿ ಬದಲಾಗಬೇಕಿರುವ ವ್ಯವಸ್ಥೆಯ ಶೋಷಣೆಯ ಎದುರು ಅದು ಬಹಳ ಸಣ್ಣ ಸಮಸ್ಯೆ. ಆಂತಹ ಅಧಿಕಾರದ ಅಸಮಾನತೆಯನ್ನು ಚರ್ಚೆ ಮಾಡುವುದಕ್ಕೆ ಕಲಾವಿದರು ಮುಂದಾಗಬೇಕಿದೆ.

ಕಿರುಚಿತ್ರದ ಫಾರ್ಮಟ್ ಕೂಡ ವಿಶಾಲ ಚರ್ಚೆಗೆ ಅವಕಾಶ ನೀಡದೆ ಇರಬಹುದು. ಆದರೂ ಹಿಂದಿ ಹೇರಿಕೆಯ ಗಂಭೀರ ಬಿಕ್ಕಟ್ಟಿನ ಆಯಾಮಗಳನ್ನು ಪವನ ಕುಮಾರ್ ತಮ್ಮ ಮುಂದಿನ ಸಿನೆಮಾಗಳಲ್ಲಿ ಒಳಗೊಂಡು ಹೆಚ್ಚಿನ ಜನರಿಗೆ ಅದು ತಲುಪುವಂತಾಗಲಿ ಎಂಬ ಆಶಯ ನಮ್ಮದಾಗಿದೆ.


ಇದನ್ನೂ ಓದಿ: ಆಶಾನಿ ಸಂಕೇತ ಸಿನಿಮಾ ಮತ್ತು ಜಮೀನ್ದಾರಿ ಪದ್ದತಿ ನೆನಪಿಸುವ ಕೃಷಿ ಕಾಯ್ದೆಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...