Homeಅಂಕಣಗಳುಹೊಸ ಸವಾಲುಗಳ ಕಾಲದಲ್ಲಿ ರೈತ ಮತ್ತು ಪ್ರಗತಿಪರರು

ಹೊಸ ಸವಾಲುಗಳ ಕಾಲದಲ್ಲಿ ರೈತ ಮತ್ತು ಪ್ರಗತಿಪರರು

- Advertisement -
- Advertisement -

ಗೌರಿ ಲಂಕೇಶ್
28 ಫೆಬ್ರವರಿ, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ರೈತರ ಆತ್ಮಹತ್ಯೆಗಳ ಬಗ್ಗೆ ಅಧ್ಯಯನ ಮಾಡಿರುವವರು ಮತ್ತು ಕೋಮುಗಲಭೆಗಳ ಬಗ್ಗೆ ವಿಶ್ಲೇಷಿಸಿರುವವರು ಇವೆರಡರ ಮಧ್ಯೆ ಒಂದು ಸಾಮ್ಯತೆಯನ್ನು ಗುರುತಿಸುತ್ತಾರೆ. ಉದಾಹರಣೆಗೆ, ಅತ್ಮಹತ್ಯೆ ತರಹದ ತೀವ್ರವಾದ ವ್ಯಕ್ತಿಗತ ನಿರ್ಣಯವನ್ನು ತೆಗೆದುಕೊಳ್ಳುವಾಗ ರೈತನೊಬ್ಬ ತನ್ನ ಸುತ್ತಮುತ್ತಲಿನ ಸಮಾಜದಿಂದ ಸಂಪೂರ್ಣವಾಗಿ ಬೇರ್ಪಟ್ಟು ಏಕಾಂಗಿಯಾಗಿರುತ್ತಾನೆ. ಆತನನ್ನು ಸಮಾಜದೊಂದಿಗೆ, ಸಾಮಾಜಿಕ ಆಸರೆಯೊಂದಿಗೆ ಬೆಸೆಯುವ ಕೊಂಡಿ ಕಳಚಿ ಹೋಗಿರುತ್ತದೆ. ರೈತ ಸಂಘ ಇದ್ದ ಕಡೆ, ಅದು ಸಮರ್ಥವಾಗಿ ಕಾರ್ಯನಿರ್ವಹಿಸಿದ ಕಡೆ ರೈತನೊಬ್ಬ ಎಷ್ಟೇ ಸಂಕಷ್ಟದಲ್ಲಿದ್ದರೂ ಆತ ಆತ್ಮಹತ್ಯೆಯಂತಹ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳದಂತೆ ಒಂದು ಸಾಮಾಜಿಕ ಆಸರೆಯಾಗಿರುತ್ತಿತ್ತು. ಇದನ್ನು ಅರಿತುಕೊಂಡಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು “ರೈತ ಸಂಘ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಕಡೆ ಆತ್ಮಹತ್ಯೆಗಳಾಗಿಲ್ಲ” ಎಂದೇ ಹೇಳುತ್ತಿದ್ದರು.
ಆದರೆ, ದುರದೃಷ್ಟವಶಾತ್ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಳೆದ ಒಂದು ದಶಕದುದ್ದಕ್ಕೂ ರೈತ ಸಮುದಾಯಕ್ಕೆ ಆಸರೆಯಾಗಬೇಕಿದ್ದ ರೈತ ಸಂಘವೇ ವಿಭಜನೆಗೊಂಡು, ನಾಯಕರ ಸ್ವಪ್ರತಿಷ್ಟೆಗೆ ಬಲಿಯಾಗಿತ್ತು. ಈಗ ಅವೆಲ್ಲ ಮುಗಿದ ಕತೆ ಎಂದು ಆಶಿಸಬಹುದಾಗಿದೆ.
ಕರ್ನಾಟಕದಲ್ಲಿ ಕೋಮುವಾದ ಹೆಚ್ಚಾಗಿರುವುದರ ಹಿಂದೆಯೂ ಇಂತಹದ್ದೇ ಕಾರಣಗಳಿವೆ. 1969ರಲ್ಲಿ ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಹೊರತುಪಡಿಸಿದರೆ 70 ಮತ್ತು 80ರ ದಶಕದಲ್ಲಿ ಅಲ್ಲಲ್ಲಿ ಮಾತ್ರ ಕೋಮುಗಲಭೆಗಳು ನಡೆದಿತ್ತು. ಆದರೆ 90ರ ದಶಕದಲ್ಲಿ ಆರಂಭಗೊಂಡ ಕೋಮುಗಲಭೆಗಳು ಇವತ್ತಿನವರೆಗೂ ನಿಂತಿಲ್ಲ.
ಇದಕ್ಕೆ ಪ್ರಮುಖ ಕಾರಣ 80ರ ದಶಕದವರೆಗೂ ಹಲವಾರು ಪ್ರಗತಿಪರರು ಮತ್ತು ಎಡಪಂಥೀಯರು ಈ ನಾಡಿನ ರೈತ, ಕೂಲಿ, ಕಾರ್ಮಿಕ, ದಲಿತ, ಶೂದ್ರ, ಯುವ ಜನಾಂಗ-ಇವರೆಲ್ಲರನ್ನೂ ಸಂಘಟಿಸುತ್ತಿದ್ದದ್ದು ಮತ್ತು ಚಿಂತನೆಗೆ, ಚಳವಳಿಗೆ ಪ್ರೇರೇಪಿಸುತ್ತಿದ್ದದ್ದು. ಆದರೆ 90ರ ದಶಕದಲ್ಲಿ ನಡೆದ ದುಷ್ಟ ರಾಜಕಾರಣದಿಂದಾಗಿ ಪ್ರಗತಿಪರ, ದಲಿತ, ಎಡಪಂಥೀಯರ ನಡುವೆ ಒಡಕು ಸೃಷ್ಟಿಯಾದದಲ್ಲದೆ, ಅದರಲ್ಲಿ ಹಲವರಿಗೆ ಆಮಿಷಗಳನ್ನು ನೀಡಿ ಭ್ರಷ್ಟಗೊಳಿಸಲಾಯಿತು. ರೈತಸಂಘದಲ್ಲಿ ಮಾತ್ರವಲ್ಲ, ದಲಿತ ಸಂಘರ್ಷ ಸಮಿತಿ ಕೂಡ ಛಿದ್ರಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ ರೈತ ಸಂಘಟನೆ ಮತ್ತು ಪ್ರಗತಿಪರರು ಈಗಲಾದರೂ ತಾವು ಹಿಂದೆ ಸೋತಿದ್ದೆಲ್ಲಿ ಎಂಬುದರ ಬಗ್ಗೆ ಆತ್ಮವಿಮರ್ಷೆ ಮಾಡಿಕೊಂಡರೆ ಒಳ್ಳೆಯದು ಅನ್ನಿಸುತ್ತದೆ. ಯಾಕೆಂದರೆ ಇವುಗಳು ಹಿಂದೊಮ್ಮೆ ವಿಫಲಗೊಂಡಿದ್ದರ ಹಿಂದಿದ್ದ ಹಲವು ಕಾರಣಗಳಲ್ಲಿ ಅವಕಾಶವಾದ, ಸ್ವಾರ್ಥ, ಅಧಿಕಾರ ಲಾಲಸೆ ಪ್ರಮುಖ. ಅಂದಿನ ನಾಯಕರ ಸ್ವಪ್ರತಿಷ್ಠೆ ಮತ್ತು ಸ್ವಾರ್ಥ ಹೆಚ್ಚಾದಂತೆ ಅವರ ಸಂಘಟನೆಗಳ ಶಕ್ತಿ ಕಳೆದುಕೊಂಡವಲ್ಲದೆ, ಅವುಗಳ ರಾಜಿರಹಿತ ಹೋರಾಟವೂ ಮೂಲೆಗುಂಪಾದವು. ಅಂತಹ ಅಪಾಯಗಳು ಈಗ ಎದುರಾಗದಂತೆ ಎಚ್ಚರ ವಹಿಸಬೇಕಿದೆ.
ಈಗಿನ ಜಾಗತೀಕರಣವಂತೂ ರೈತ, ದಲಿತ, ಎಡಪಂಥೀಯ ಮತ್ತು ಮಹಿಳಾವಾದಿಗಳ ಚಳವಳಿಗಳಿಗೆ ಹೊಸ ಸವಾಲುಗಳನ್ನು ಹಾಕಿದೆ. ಇದೇ ಹೊತ್ತಿಗೆ ಸರ್ಕಾರಗಳೂ ಕೂಡ ಅನ್ಯಾಯಕ್ಕೆ, ಶೋಷಣೆಗೆ, ದಬ್ಬಾಳಿಕೆಗೆ ಒಳಗಾಗುತ್ತಿರುವ ಸಮುದಾಯಗಳ ಪರವಿಲ್ಲದೆ ಡಬ್ಲ್ಯೂಟಿಓ, ಐಎಂಎಫ್ ವಿಶ್ವಬ್ಯಾಂಕ್‍ನಂತಹ ಸಂಸ್ಥೆಗಳ ಪರವಾಗಿ ನಿಂತಿದೆ. ಅದರೊಂದಿಗೆ ಜನಪರ ಹೋರಾಟಗಳನ್ನು, ಚಳವಳಿಗಳನ್ನು ದಮನ ಮಾಡಲೆಂದೇ ಕರಾಳ ಕಾನೂನುಗಳನ್ನು ಜಾರಿಗೆ ತಂದಿದೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಎಂಐಎಸ್‍ಎ(ಮಿಸಾ) ಗಿಂತಲೂ ಟಿಎಡಿಎ(ಟಾಡಾ) ಕರಾಳವಾಗಿದ್ದರೆ, 90ರ ದಶಕದಲ್ಲಿ ಟಿಎಡಿಎ(ಟಾಡಾ) ಜಾಗಕ್ಕೆ ಬಂದಿದ್ದೆ ಪೊಟಾ(ಪಿಓಟಿಎ) ಮತ್ತು ಈಗ ಅದರ ಬದಲಿಗೆ ಯುಪಿಎ ಸರ್ಕಾರ ತಂದಿರುವ ಯುಎಲ್‍ಪಿಎ ಮಾನವ ಹಕ್ಕುಗಳನ್ನೇ ನಿರಾಕರಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಕಪಟ ಶಾಸಕ, ಭ್ರಷ್ಟ ಅಧಿಕಾರಿ, ಲಂಪಟ ಪೊಲೀಸ್ ಮತ್ತು ಹಿಂದೂತ್ವವಾದಿ ಪುಡಾರಿ ಜೊತೆಗೂಡಿದರೆ ಯಾರನ್ನು ಬೇಕಾದರೂ ಕೊಲ್ಲಬಹುದು, ಯಾರನ್ನು ಬೇಕಾದರೂ ಜೈಲಿಗೆ ದೂಡಬಹುದು, ಯಾರ ಚಳವಳಿಯನ್ನಾದರೂ ಮುರಿದುಹಾಕಬಹುದು.
ಕರ್ನಾಟಕ ಇವತ್ತು ಎಲ್ಲ ರೀತಿಯಲ್ಲೂ ಸಂಕ್ರಮಣ ಕಾಲದಲ್ಲಿದೆ. ಆದ್ದರಿಂದ ಈಗ ನಮ್ಮೆಲ್ಲರ ಶತ್ರಯ ಯಾರೆಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕಾಗಿದೆಯಲ್ಲದೆ, ನಮ್ಮೊಳಗಿನ ಶತ್ರುವನ್ನೂ ಗುರುತಿಸಿ ಹೋರಾಟಗಳು ವಿಫಲವಾಗದಂತೆ ನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲಾ ಸಮಾನ ಮನಸ್ಕರು ತಮ್ಮ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದುಗೂಡಬೇಕಿದೆ. ನಮ್ಮೆಲ್ಲರ ಶತ್ರುಗಳು ಒಂದಾಗಿರುವ ಈ ಕಾಲದಲ್ಲಿ ನಾವೆಲ್ಲರೂ ದಾಯಾದಿಗಳಂತೆ ಕಚ್ಚಾಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.
ರೈತ ಸಂಘಗಳ ವಿಲೀನ, ಕೋಮುವಾದದ ವಿರುದ್ಧದ ಪ್ರಗತಿಪರರ ಹೊಸ ಯತ್ನ ಹಳೇ ಅನುಭವಗಳಿಂದ ಪಾಠಗಳನ್ನು ಕಲಿತು, ಸಂಘಟನಾತ್ಮಕ ಚಳವಳಿಯನ್ನು ಮಾಡುತ್ತವೆ ಎಂದು ಆಶಿಸುತ್ತೇನೆ. ಅವರ ಅಂತಹ ಎಲ್ಲಾ ಪ್ರಯತ್ನಗಳಿಗೆ ನಿಮ್ಮ ಮತ್ತು ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದೂ ಹೇಳಲು ಇಚ್ಛಿಸುತ್ತೇನೆ…….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....