Homeಅಂಕಣಗಳುಹೊಸ ಸವಾಲುಗಳ ಕಾಲದಲ್ಲಿ ರೈತ ಮತ್ತು ಪ್ರಗತಿಪರರು

ಹೊಸ ಸವಾಲುಗಳ ಕಾಲದಲ್ಲಿ ರೈತ ಮತ್ತು ಪ್ರಗತಿಪರರು

- Advertisement -
- Advertisement -

ಗೌರಿ ಲಂಕೇಶ್
28 ಫೆಬ್ರವರಿ, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ರೈತರ ಆತ್ಮಹತ್ಯೆಗಳ ಬಗ್ಗೆ ಅಧ್ಯಯನ ಮಾಡಿರುವವರು ಮತ್ತು ಕೋಮುಗಲಭೆಗಳ ಬಗ್ಗೆ ವಿಶ್ಲೇಷಿಸಿರುವವರು ಇವೆರಡರ ಮಧ್ಯೆ ಒಂದು ಸಾಮ್ಯತೆಯನ್ನು ಗುರುತಿಸುತ್ತಾರೆ. ಉದಾಹರಣೆಗೆ, ಅತ್ಮಹತ್ಯೆ ತರಹದ ತೀವ್ರವಾದ ವ್ಯಕ್ತಿಗತ ನಿರ್ಣಯವನ್ನು ತೆಗೆದುಕೊಳ್ಳುವಾಗ ರೈತನೊಬ್ಬ ತನ್ನ ಸುತ್ತಮುತ್ತಲಿನ ಸಮಾಜದಿಂದ ಸಂಪೂರ್ಣವಾಗಿ ಬೇರ್ಪಟ್ಟು ಏಕಾಂಗಿಯಾಗಿರುತ್ತಾನೆ. ಆತನನ್ನು ಸಮಾಜದೊಂದಿಗೆ, ಸಾಮಾಜಿಕ ಆಸರೆಯೊಂದಿಗೆ ಬೆಸೆಯುವ ಕೊಂಡಿ ಕಳಚಿ ಹೋಗಿರುತ್ತದೆ. ರೈತ ಸಂಘ ಇದ್ದ ಕಡೆ, ಅದು ಸಮರ್ಥವಾಗಿ ಕಾರ್ಯನಿರ್ವಹಿಸಿದ ಕಡೆ ರೈತನೊಬ್ಬ ಎಷ್ಟೇ ಸಂಕಷ್ಟದಲ್ಲಿದ್ದರೂ ಆತ ಆತ್ಮಹತ್ಯೆಯಂತಹ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳದಂತೆ ಒಂದು ಸಾಮಾಜಿಕ ಆಸರೆಯಾಗಿರುತ್ತಿತ್ತು. ಇದನ್ನು ಅರಿತುಕೊಂಡಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು “ರೈತ ಸಂಘ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಕಡೆ ಆತ್ಮಹತ್ಯೆಗಳಾಗಿಲ್ಲ” ಎಂದೇ ಹೇಳುತ್ತಿದ್ದರು.
ಆದರೆ, ದುರದೃಷ್ಟವಶಾತ್ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಳೆದ ಒಂದು ದಶಕದುದ್ದಕ್ಕೂ ರೈತ ಸಮುದಾಯಕ್ಕೆ ಆಸರೆಯಾಗಬೇಕಿದ್ದ ರೈತ ಸಂಘವೇ ವಿಭಜನೆಗೊಂಡು, ನಾಯಕರ ಸ್ವಪ್ರತಿಷ್ಟೆಗೆ ಬಲಿಯಾಗಿತ್ತು. ಈಗ ಅವೆಲ್ಲ ಮುಗಿದ ಕತೆ ಎಂದು ಆಶಿಸಬಹುದಾಗಿದೆ.
ಕರ್ನಾಟಕದಲ್ಲಿ ಕೋಮುವಾದ ಹೆಚ್ಚಾಗಿರುವುದರ ಹಿಂದೆಯೂ ಇಂತಹದ್ದೇ ಕಾರಣಗಳಿವೆ. 1969ರಲ್ಲಿ ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಹೊರತುಪಡಿಸಿದರೆ 70 ಮತ್ತು 80ರ ದಶಕದಲ್ಲಿ ಅಲ್ಲಲ್ಲಿ ಮಾತ್ರ ಕೋಮುಗಲಭೆಗಳು ನಡೆದಿತ್ತು. ಆದರೆ 90ರ ದಶಕದಲ್ಲಿ ಆರಂಭಗೊಂಡ ಕೋಮುಗಲಭೆಗಳು ಇವತ್ತಿನವರೆಗೂ ನಿಂತಿಲ್ಲ.
ಇದಕ್ಕೆ ಪ್ರಮುಖ ಕಾರಣ 80ರ ದಶಕದವರೆಗೂ ಹಲವಾರು ಪ್ರಗತಿಪರರು ಮತ್ತು ಎಡಪಂಥೀಯರು ಈ ನಾಡಿನ ರೈತ, ಕೂಲಿ, ಕಾರ್ಮಿಕ, ದಲಿತ, ಶೂದ್ರ, ಯುವ ಜನಾಂಗ-ಇವರೆಲ್ಲರನ್ನೂ ಸಂಘಟಿಸುತ್ತಿದ್ದದ್ದು ಮತ್ತು ಚಿಂತನೆಗೆ, ಚಳವಳಿಗೆ ಪ್ರೇರೇಪಿಸುತ್ತಿದ್ದದ್ದು. ಆದರೆ 90ರ ದಶಕದಲ್ಲಿ ನಡೆದ ದುಷ್ಟ ರಾಜಕಾರಣದಿಂದಾಗಿ ಪ್ರಗತಿಪರ, ದಲಿತ, ಎಡಪಂಥೀಯರ ನಡುವೆ ಒಡಕು ಸೃಷ್ಟಿಯಾದದಲ್ಲದೆ, ಅದರಲ್ಲಿ ಹಲವರಿಗೆ ಆಮಿಷಗಳನ್ನು ನೀಡಿ ಭ್ರಷ್ಟಗೊಳಿಸಲಾಯಿತು. ರೈತಸಂಘದಲ್ಲಿ ಮಾತ್ರವಲ್ಲ, ದಲಿತ ಸಂಘರ್ಷ ಸಮಿತಿ ಕೂಡ ಛಿದ್ರಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ ರೈತ ಸಂಘಟನೆ ಮತ್ತು ಪ್ರಗತಿಪರರು ಈಗಲಾದರೂ ತಾವು ಹಿಂದೆ ಸೋತಿದ್ದೆಲ್ಲಿ ಎಂಬುದರ ಬಗ್ಗೆ ಆತ್ಮವಿಮರ್ಷೆ ಮಾಡಿಕೊಂಡರೆ ಒಳ್ಳೆಯದು ಅನ್ನಿಸುತ್ತದೆ. ಯಾಕೆಂದರೆ ಇವುಗಳು ಹಿಂದೊಮ್ಮೆ ವಿಫಲಗೊಂಡಿದ್ದರ ಹಿಂದಿದ್ದ ಹಲವು ಕಾರಣಗಳಲ್ಲಿ ಅವಕಾಶವಾದ, ಸ್ವಾರ್ಥ, ಅಧಿಕಾರ ಲಾಲಸೆ ಪ್ರಮುಖ. ಅಂದಿನ ನಾಯಕರ ಸ್ವಪ್ರತಿಷ್ಠೆ ಮತ್ತು ಸ್ವಾರ್ಥ ಹೆಚ್ಚಾದಂತೆ ಅವರ ಸಂಘಟನೆಗಳ ಶಕ್ತಿ ಕಳೆದುಕೊಂಡವಲ್ಲದೆ, ಅವುಗಳ ರಾಜಿರಹಿತ ಹೋರಾಟವೂ ಮೂಲೆಗುಂಪಾದವು. ಅಂತಹ ಅಪಾಯಗಳು ಈಗ ಎದುರಾಗದಂತೆ ಎಚ್ಚರ ವಹಿಸಬೇಕಿದೆ.
ಈಗಿನ ಜಾಗತೀಕರಣವಂತೂ ರೈತ, ದಲಿತ, ಎಡಪಂಥೀಯ ಮತ್ತು ಮಹಿಳಾವಾದಿಗಳ ಚಳವಳಿಗಳಿಗೆ ಹೊಸ ಸವಾಲುಗಳನ್ನು ಹಾಕಿದೆ. ಇದೇ ಹೊತ್ತಿಗೆ ಸರ್ಕಾರಗಳೂ ಕೂಡ ಅನ್ಯಾಯಕ್ಕೆ, ಶೋಷಣೆಗೆ, ದಬ್ಬಾಳಿಕೆಗೆ ಒಳಗಾಗುತ್ತಿರುವ ಸಮುದಾಯಗಳ ಪರವಿಲ್ಲದೆ ಡಬ್ಲ್ಯೂಟಿಓ, ಐಎಂಎಫ್ ವಿಶ್ವಬ್ಯಾಂಕ್‍ನಂತಹ ಸಂಸ್ಥೆಗಳ ಪರವಾಗಿ ನಿಂತಿದೆ. ಅದರೊಂದಿಗೆ ಜನಪರ ಹೋರಾಟಗಳನ್ನು, ಚಳವಳಿಗಳನ್ನು ದಮನ ಮಾಡಲೆಂದೇ ಕರಾಳ ಕಾನೂನುಗಳನ್ನು ಜಾರಿಗೆ ತಂದಿದೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಎಂಐಎಸ್‍ಎ(ಮಿಸಾ) ಗಿಂತಲೂ ಟಿಎಡಿಎ(ಟಾಡಾ) ಕರಾಳವಾಗಿದ್ದರೆ, 90ರ ದಶಕದಲ್ಲಿ ಟಿಎಡಿಎ(ಟಾಡಾ) ಜಾಗಕ್ಕೆ ಬಂದಿದ್ದೆ ಪೊಟಾ(ಪಿಓಟಿಎ) ಮತ್ತು ಈಗ ಅದರ ಬದಲಿಗೆ ಯುಪಿಎ ಸರ್ಕಾರ ತಂದಿರುವ ಯುಎಲ್‍ಪಿಎ ಮಾನವ ಹಕ್ಕುಗಳನ್ನೇ ನಿರಾಕರಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಕಪಟ ಶಾಸಕ, ಭ್ರಷ್ಟ ಅಧಿಕಾರಿ, ಲಂಪಟ ಪೊಲೀಸ್ ಮತ್ತು ಹಿಂದೂತ್ವವಾದಿ ಪುಡಾರಿ ಜೊತೆಗೂಡಿದರೆ ಯಾರನ್ನು ಬೇಕಾದರೂ ಕೊಲ್ಲಬಹುದು, ಯಾರನ್ನು ಬೇಕಾದರೂ ಜೈಲಿಗೆ ದೂಡಬಹುದು, ಯಾರ ಚಳವಳಿಯನ್ನಾದರೂ ಮುರಿದುಹಾಕಬಹುದು.
ಕರ್ನಾಟಕ ಇವತ್ತು ಎಲ್ಲ ರೀತಿಯಲ್ಲೂ ಸಂಕ್ರಮಣ ಕಾಲದಲ್ಲಿದೆ. ಆದ್ದರಿಂದ ಈಗ ನಮ್ಮೆಲ್ಲರ ಶತ್ರಯ ಯಾರೆಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕಾಗಿದೆಯಲ್ಲದೆ, ನಮ್ಮೊಳಗಿನ ಶತ್ರುವನ್ನೂ ಗುರುತಿಸಿ ಹೋರಾಟಗಳು ವಿಫಲವಾಗದಂತೆ ನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲಾ ಸಮಾನ ಮನಸ್ಕರು ತಮ್ಮ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದುಗೂಡಬೇಕಿದೆ. ನಮ್ಮೆಲ್ಲರ ಶತ್ರುಗಳು ಒಂದಾಗಿರುವ ಈ ಕಾಲದಲ್ಲಿ ನಾವೆಲ್ಲರೂ ದಾಯಾದಿಗಳಂತೆ ಕಚ್ಚಾಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.
ರೈತ ಸಂಘಗಳ ವಿಲೀನ, ಕೋಮುವಾದದ ವಿರುದ್ಧದ ಪ್ರಗತಿಪರರ ಹೊಸ ಯತ್ನ ಹಳೇ ಅನುಭವಗಳಿಂದ ಪಾಠಗಳನ್ನು ಕಲಿತು, ಸಂಘಟನಾತ್ಮಕ ಚಳವಳಿಯನ್ನು ಮಾಡುತ್ತವೆ ಎಂದು ಆಶಿಸುತ್ತೇನೆ. ಅವರ ಅಂತಹ ಎಲ್ಲಾ ಪ್ರಯತ್ನಗಳಿಗೆ ನಿಮ್ಮ ಮತ್ತು ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದೂ ಹೇಳಲು ಇಚ್ಛಿಸುತ್ತೇನೆ…….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...