Homeನ್ಯಾಯ ಪಥಮೋದಿ ಭಕ್ತರು ಎಂಬ Cult of stupidity

ಮೋದಿ ಭಕ್ತರು ಎಂಬ Cult of stupidity

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಬರಹಗಾರ ಸರ್ಜಾಶಂಕರ ಹರಳಿಮಠರು, ಇತ್ತೀಚಿನ ಬೆಳವಣಿಗೆಗಳನ್ನು ಇಟ್ಟುಕೊಂಡು ರಚಿಸಿದ ’ನಾನೂ ದೇಶದ್ರೋಹಿ’ ಎಂಬ ಕವನವನ್ನು ತಮ್ಮ ಹೈಸ್ಕೂಲ್ ಸಹಪಾಠಿಗಳ ವ್ಯಾಟ್ಸಪ್ ಗ್ರೂಪ್‌ನಲ್ಲಿ ಹಾಕುತ್ತಾರೆ. ಹಾಕಿದ ಸ್ವಲ್ಪೇ ಸಮಯದಲ್ಲಿ ಅವರನ್ನು ಗ್ರೂಪ್‌ನಿಂದ ಹೊರ ಹಾಕಲಾಗುತ್ತದೆ.

ಪದವಿ ಕಲಿಯುವ ಹೊತ್ತಿನಲ್ಲಿ ಸ್ನೇಹಿತರಾದ ಒಂದಿಪ್ಪತ್ತು ಜನರ ವ್ಯಾಟ್ಸಪ್ ಗ್ರೂಪ್. ಪುಲ್ವಾಮಾ ಮತ್ತು ವಾಯುದಾಳಿಯ ನಂತರದ ಸಂದರ್ಭದಲ್ಲಿ ಮೋದಿಯ ವೈಫಲ್ಯಗಳನ್ನು ಆಧಾರಸಮೇತ ಬರೆದದ್ದಕ್ಕೆ ನನ್ನನ್ನು ಆ ಗ್ರೂಪ್‌ನಿಂದ ತೆಗೆದು ಹಾಕಲಾಗುತ್ತದೆ. ಇನ್ನಿಬ್ಬರು ಆಕ್ಷೇಪಣೆ ಎತ್ತಿದ ನಂತರ ಮತ್ತೆ ಸೇರಿಸಿಕೊಳ್ಳಲಾಗುತ್ತದೆ.

ಇಂತಹ ಪ್ರಸಂಗಗಳನ್ನು ನೀವು ಎದುರಿಸಿರಬಹುದು… ಪತ್ರಿಕೆಯ ಸಂಗಾತಿ ಸರ್ಜಾಶಂಕರ ಆಗಲೀ, ನಾನಾಗಲೀ ವ್ಯಕ್ತಿದ್ವೇಷ ಮಾಡಿದವರಲ್ಲ. ಇಬ್ಬರ ಗ್ರೂಪ್‌ನಲ್ಲೂ ಮಾನವೀಯ ಆಶಯಗಳ ಸದಸ್ಯರ ಸಂಖ್ಯೆಯೇ ಜಾಸ್ತಿಯಿದೆ. ಆದರೆ ಇಂತಹ ಬಹುತೇಕ ಗ್ರೂಪ್‌ಗಳ ನಿಯಂತ್ರಣ ಚೆಡ್ಡಿ ಆರಾಧಕರ ಕೈಗೆ ಬಂದು ಬಿಟ್ಟಿದೆ….

ಅಂದರೆ, ಇಲ್ಲಿ ಜಾಲತಾಣಗಳಲ್ಲಿ ಕೆಲವೇ ಕೆಲವರು ನಿಯಂತ್ರಣ ಹೊಂದುತ್ತ ಬಂದಿದ್ದಾರೆ. ಪ್ರತಿಭಟನೆ ಎದುರಾದ ಕೂಡಲೇ ತಮ್ಮ ಸುಳ್ಳು ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ಡಿಲೀಟ್ ಮಾಡುತ್ತಾರೆ. ನನ್ನ ಪರವಾಗಿ ಒಬ್ಬ ಮುಸ್ಲಿಂ, ಒಬ್ಬ ತಳವಾರ ಯುವಕ ಧ್ವನಿ ಎತ್ತಿದಕೂಡಲೇ ಅರ್ಧ ಗಂಟೆಯಲ್ಲೇ ಮತ್ತೆ ಗ್ರೂಪ್‌ಗೆ  ಸೇರಿಸಿಕೊಳ್ಳುತ್ತಾರೆ….

ಇಷ್ಟಾದರೂ, ಹೊಸ ಪೀಳಿಗೆಯ ಒಂದು ಸಮೂಹವನ್ನು ಪ್ರೀತಿ, ವಿಶ್ವಾಸದಿಂದ ಗೆಲ್ಲುವುದೊಂದೇ ಮಾರ್ಗ. ಆದರೆ ಇವರಿಗೆ ಓದಿನ ಆಸಕ್ತಿಯೇ ಇಲ್ಲವಾದ್ದರಿಂದ ಅದು ಸದ್ಯಕ್ಕೆ ಕಷ್ಟವೇ!

Cult of stupidity

ಸತ್ಯ ಏನೆಂದು ಪರೀಕ್ಷಿಸಲು ಒಲ್ಲದ, ತಮಗೆ ಅನಿಸಿದ್ದೇ ಅಥವಾ ತಮಗೆ ಸಿಕ್ಕ ಮಾಹಿತಿಯೇ ಸತ್ಯ ಎಂದು ನಂಬುವ ಒಂದು ದೊಡ್ಡ ಸಮೂಹ (ಸಾಪೇಕ್ಷವಾಗಿ ಇದು ಸಣ್ಣದೇ) ಈ ದೇಶದಲ್ಲಿ ಈ ಐದು ವರ್ಷಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿದೆ. ಅದು ಮುಗುಮ್ಮಾಗಿ ಒಬ್ಬ ಹೀರೊನನ್ನು ಆರಾಧಿಸುತ್ತದೆ. ಪೇಯ್ಡ್ ಮೀಡಿಯಾ ಮತ್ತು ಸಂಘ ಪರಿವಾರ ನೀಡುವ ಕಂಟೆಂಟೇ ಅದಕ್ಕೆ ಅಂತಿಮ ಸತ್ಯ. ಉತ್ತರಿಸಲಾಗದ ಹೊತ್ತಿನಲ್ಲಿ ಅದು ಮತ್ತೆ ಮತ್ತೆ ಸುಳ್ಳುಗಳ ಮೊರೆ ಹೋಗುತ್ತದೆ. ಅವರ ನಾಯಕನನ್ನು ಎತ್ತಿ ಹಿಡಿಯಲು, ಹಿಂದಿನವರು ಏನು ಮಾಡಿದರು ಎಂದು ಪ್ರಶ್ನೆ ಎತ್ತುತ್ತದೆ. ತಮ್ಮ ನೆಚ್ಚಿನ ನಾಯಕ ಮತ್ತು ಪಕ್ಷದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅದು ಆತ್ಮ ವಂಚನೆಗೆ ಇಳಿಯುತ್ತದೆ…ಅಂತಿಮವಾಗಿ ಅದು ತನ್ನ ಆತ್ಮಸಾಕ್ಷಿಯನ್ನೇ ಮಾರಾಟಕ್ಕಿಡುತ್ತದೆ.

ಇಂತಹವರಿಗೆ ಜಾಲತಾಣದಲ್ಲಿ ಈಗ ಭಕ್ತರು, ಮಬ್ಭಕ್ತರು ಅಂತೆಲ್ಲ ಹೆಸರು. ಆದರೆ ಈ ಕುರಿತು ಮನಶಾಸ್ತ್ರಜ್ಞರು ಅಳೆದೂ ತೂಗಿ ಒಂದು ಪದವನ್ನು ನಮಗೆ ಕೊಟ್ಟಿದ್ದಾರೆ: ಇಂತಹ ವರ್ತನೆಯನ್ನು ಅವರು ’Cult of stupidity’ ಎನ್ನುತ್ತಿದ್ದಾರೆ. ಇದನ್ನು ಕನ್ನಡದಲ್ಲಿ ’ಮೂರ್ಖತನದ ಆರಾಧನೆ’ ಎನ್ನಬಹುದು. ಈಗಿನ ಸಂದರ್ಭಕ್ಕೆ ’ಮೋದಿಯ ಮಬ್ಭಕ್ತರು’ ಎನ್ನುವುದೇ ಸೂಕ್ತ.

ಪಾಜಿಟಿವ್ ಸೈಕಾಲಜಿ ಮತ್ತು ಸೈಕೊಮೆಟ್ರಿಕ್ಸ್‌ನಲ್ಲಿ ಅನುಭವ ಹೊಂದಿರುವ ರೋಹಿತ್ ಕುಮಾರ್ ಅವರು ಬರೆದ ಲೇಖನದ ಪ್ರಕಾರ, ಇಂತಹ ಒಂದು ಸಂತತಿ ಸಂಖ್ಯೆಯಲ್ಲಿ ಸಾಪೇಕ್ಷವಾಗಿ ದೊಡ್ಡದಲ್ಲದಿದ್ದರೂ ಅದು ಭಾರಣದಾದ್ಯಂತ ಅಸ್ತಿತ್ವ ಹೊಂದಿದೆ ಮತ್ತು ಅದು ತನಗೆ ಸಿಕ್ಕ ಆಧಾರವಿಲ್ಲದ ಕಂಟೆಂಟನ್ನು ಅಮಾಯಕರ ತಲೆಗೆ ತುಂಬಲು ಯತ್ನಿಸುತ್ತಿದೆ…..

ನಾವೆಲ್ಲ  ನಮ್ಮ ಸುತ್ತಮುತ್ತಲೇ ನೋಡಿರುವ ಪ್ರಕಾರ, ಈ ಒಂದು ’ಸಂತತಿ’ಯಲ್ಲಿ ಹಲವು ವಿಧಗಳಿವೆ:

  1. 1. ಮೊದಲಿನಿಂದಲೂ ಆರೆಸ್ಸೆಸ್ ಶಾಖೆಗಳಲ್ಲಿ ಭಾಗವಹಿಸುತ್ತ ಬಂದವರು.
  2. 2. 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ’ಹಿಂದೂತ್ವದ ಅಮಲಿಗೆ ಗುರಿಯಾದವರು.
  3. 3. ಕಳೆದ ಐದಾರು ವರ್ಷಗಳಲ್ಲಿ ಮೀಡಿಯಾಗಳು ನೀಡಿದ ಕಂಟೆಂಟ್ ಆಧಾರದ ಮೇಲೆಯೇ ತಮ್ಮ ಆಲೋಚನಾ ಕ್ರಮವನ್ನು ರೂಪಿಸಿಕೊಂಡವರು.
  4. 4. ಈ ಮೇಲಿನ ’ಆರಾಮದಾಯಕ’ ಗುಂಪುಗಳಿಂದ ಮೋಸ ಹೋಗುತ್ತಿರುವ ವ್ಯಾಟ್ಸಾಪ್ ಅಮಾಯಕರು….

ಇಲ್ಲಿ ಮೊದಲನೇ ಗುಂಪು ಹಿಂದೆ ನಿಂತು ಕಂಟೆಂಟ್ ಒದಗಿಸುತ್ತಿದೆ. ಅದು ಸತ್ಯವೋ ಅಲ್ಲವೋ ಎಂಬುದನ್ನು ಪರೀಕ್ಷಿಸದ ಎರಡು ಮತ್ತು ಮೂರನೇ ಗುಂಪುಗಳು ಸುಳ್ಳನ್ನು ಹರಡುತ್ತ ಹೋಗುತ್ತಿವೆ. ಎರಡನೇ ಗುಂಪಿನಲ್ಲಿ ನಿರುದ್ಯೋಗಿ, ಸಾಹಸಪ್ರಿಯ ಮತ್ತು ಭಾರಿ ಆಕಾಂಕ್ಷೆಗಳ ಶೂದ್ರ ಯುವಜನ ಜಾಸ್ತಿಯಿದ್ದರೆ, ಮೂರನೇ ಗುಂಪಿನಲ್ಲಿ ನವ ಉದ್ಯಮಗಳಲ್ಲಿ ’ಸಂತೃಪ್ತ’ ಸಂಬಳ ಪಡೆಯುತ್ತಿರುವ ಯುವಜನರಿದ್ದಾರೆ. ಇವರಲ್ಲಿ ಮೇಲ್ವರ್ಗದವರೇ ಹೆಚ್ಚಿದ್ದು, ಇದು ಮೀಸಲಾತಿ ವಿರೋಧಿಸುವ ಗುಂಪೂ ಹೌದು. ಇದರಲ್ಲಿರುವ ಶೂದ್ರರು, ದಲಿತರು ತಾವೇನೋ ಸಾಧಿಸಿಬಿಟ್ಟಿದ್ದೇವೆ, ತಮ್ಮಂತಹ ಜಾಣರಾರಿಲ್ಲ ಎಂಬ ಧಿಮಾಕಿನಲ್ಲಿ ಮೇಲ್ವರ್ಗದ, ಮೇಲ್ ಜಾತಿಯ ಗುಲಾಮರಂತೆ ವರ್ತಿಸುತ್ತಿದ್ದಾರೆ. ಕೊನೆಯ ಗುಂಪಿನಲ್ಲಿ ಅಸಹಾಯಕ, ಅಮಾಯಕ ಯುವಜನತೆಯಿದ್ದು, ಇವರನ್ನು ಹಿಂದೂತ್ವ ಮತ್ತು ದೇಶಭಕ್ತಿಯ ಹೆಸರಲ್ಲಿ ದಾರಿ ತಪ್ಪಿಸಲಾಗುತ್ತಿದೆ.

ಇದನ್ನು ಗೌರಿ ಮೇಡಮ್ ಪದೇ ಪದೇ ಬಿಡಿಬಿಡಿಯಾಗಿ, ಬೇರೆ ಬೇರೆ ಸಂದರ್ಭಗಳಲ್ಲಿ  ಉಲ್ಲೇಖಿಸುತ್ತಲೇ ಬಂದಿದ್ದರು. ನೂರಾರು ಪ್ರಗತಿಪರರೂ ಈ ವಿಷಯವಾಗಿ ದನಿ ಎತ್ತುತ್ತಲೇ ಬಂದಿದ್ದರೂ, ಮೇಲಿನ ಗುಂಪುಗಳಿಗೆ ಮನದಟ್ಟಾಗುತ್ತಲೇ ಇಲ್ಲ. ಅವರ ಮೂಲಭೂತ ಸಮಸ್ಯೆ ಎಂದರೆ ಓದಿನ ಕೊರತೆ. ರವೀಶಕುಮಾರ್ (ಎನ್‌ಡಿಟಿವಿ) ಹೇಳುವಂತೆ, ಅವರೆಲ್ಲ ವ್ಯಾಟ್ಸಾಪ್ ಯುನಿವರ್ಸಿಟಿಯ ವಿದ್ಯಾರ್ಥಿಗಳು.

ಇವರೆಲ್ಲರ ಮಾಹಿತಿ ಮೂಲ ಬಿಜೆಪಿಯ ಐಟಿ ಸೆಲ್ಲು ಮತ್ತು ಪೇಯ್ಡ್ ಮೀಡಿಯಾ. ಅರ್ನಾಬ್ ಗೋಸ್ವಾಮಿ ಇಂಗ್ಲಿಷ್ ಬಲ್ಲವರನ್ನು, ರಂಗ, ಹನುಮಕ್ಕನವರ್ ತರದವರು ಪ್ರಾದೇಶಿಕ ಭಾಷೆಯಷ್ಟೇ ಗೊತ್ತಿರುವವರನ್ನು ’ರೋಚಕ’ ಸ್ಟೋರಿಗಳ ಮೂಲಕ ಯಾಮಾರಿಸುತ್ತಲೇ ಇದ್ದಾರೆ.

ಇತರರು ಎರಡನೇ ದರ್ಜೆ

ಈ ಮೂರ್ಖತನದ ಆರಾಧಕರ ಪ್ರಕಾರ, ಅವರು ಹೇಳಿದ್ದೆಲ್ಲ ಸತ್ಯ, ಅವರ ನಾಯಕನ ವಿರುದ್ಧ ಪ್ರಶ್ನೆ ಎತ್ತುವುದೇ ದೇಶದ್ರೋಹ. ತಮ್ಮನ್ನು ಒಪ್ಪದ ಇತರರೆಲ್ಲ ಇವರ ಪಾಲಿಗೆ ಎರಡನೇ ದರ್ಜೆಯ ನಾಗರಿಕರು. ಇದು ಫ್ಯಾಸಿಸಂ ಅಲ್ಲದೇ ಇನ್ನೇನು? ಅಘೋಷಿತ ತುರ್ತು ಪರಿಸ್ಥಿತಿಯೇ ಅಲ್ಲವಾ? ಧರ್ಮ, ಭಾಷೆ, ಧ್ವಜ, ಭಾರತಮಾತೆಯ ಫೋಟೊ-ಇವೆಲ್ಲ ಸಂಕೇತಗಳು ಇವರ ಪಾಲಿಗೆ ಓಟಿನ ಸರಕುಗಳಷ್ಟೇ. ಹುಬ್ಬಳ್ಳಿಯಲ್ಲಿ ಈದ್ಗಾ ವಿವಾದಕ್ಕೆ ರಾಷ್ಟ್ರಧ್ವಜವನ್ನು ತಳುಕು ಹಾಕಿ, ಧ್ವಜವನ್ನು ಬೀದಿಪಾಲು ಮಾಡಿ, ಅಮಾಯಕರ ಹೆಣಗಳ ಮೇಲೆ ಅಲ್ಲಿ ಪ್ರಾಬಲ್ಯ ಸಾಧಿಸಿದ ಗುಂಪಿದು ಎಂದು ಭಕ್ತರಿಗೆ ಮನದಟ್ಟು ಮಾಡಲು ಹೋದರೆ ಅವರಿಗ್ಯಾರಿಗೂ ತಾಳ್ಮೆ, ಸಹನೆಯೇ ಇಲ್ಲ. 1947, 1952ರ ನಂತರ ಆರೆಸ್ಸೆಸ್ ತನ್ನ ನಾಗಪುರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದು 50 ವರ್ಷಗಳ ನಂತರ ಎಂಬ ಸತ್ಯವನ್ನು ಎತ್ತಿದ ಕೂಡಲೇ ವಿಷಯಾಂತರ ಮಾಡುವುದು ಈ ಆರಾಧಕರ ಕಸುಬು. ಹೆಡಗೆವಾರ್, ಗೋಲ್ವಾಳ್ಕರ್ ಎಂಬ ಮೋದಿ ಗುರುಗಳು ಈ ದೇಶಕ್ಕೆ ನೀಡಿದ ಕೊಡುಗೆಯೇನು ಎಂದು ಕೇಳಿದರೆ ಮತ್ತದೇ ಪಲಾಯನವಾದ.

ಗೂಂಡಾಗಿರಿಗೆ ’ಧರ್ಮದೇಟು’ಎಂಬ ಹೆಸರು!

ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡುವುದನ್ನು, ಕೊಲ್ಲುವುದನ್ನು ಈ ಆರಾಧಕರು ಬೆಂಬಲಿಸುತ್ತಾರೆ. ಇಲ್ಲಿನ ಪೊಲೀಸ್ ವ್ಯವಸ್ಥೆಯ ಮೇಲೂ ಇವರಿಗೆ ನಂಬಿಕೆಯಿಲ್ಲ. ಕನ್ನಡದ ಕೆಲವು ಮತಾಂಧ ಮಾಧ್ಯಮಗಳು ಇಂತಹ ಬೀದಿನ್ಯಾಯಕ್ಕೆ ’ಧರ್ಮದೇಟು’ ಎಂದೆಲ್ಲ ಸ್ಕೋಪು ಕೊಟ್ಟು ಬೆಂಬಲಿಸುತ್ತ ಬಂದಿವೆ.

ಇತ್ತೀಚೆಗಷ್ಟೇ ಮಲ್ಪೆಯಲ್ಲಿ ಮುಸ್ಲಿಮರ ಹೆಸರಲ್ಲಿ ವಿಡಿಯೋ ಹಾಕಿ, ಭಾರತವನ್ನು ನಿಂದಿಸಿ, ಮಲ್ಪೆಗೆ ಬಾಂಬ್ ಹಾಕುತ್ತೇನೆ ಎಂದು ಬೆದರಿಸಿದವನು ಭಜರಂಗಿ ಗುಂಪಿಗೆ ಸೇರಿದವನು. ರಾಮದುರ್ಗದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಕಾರ್ಯಕರ್ತನ ಫೇಸ್‌ಬುಕ್ ಪೇಜ್‌ನಲ್ಲಿ ದೇಶದ್ರೋಹಿ ಬರಹ ಹಾಕಿ ಸಿಕ್ಕವನು ಬಿಜೆಪಿಯ ’ಹಿಂದೂ’. ಸತ್ಯ ಗೊತ್ತಾದಾಕ್ಷಣ ತಮ್ಮ ಕಾರ್ಯಕರ್ತರನ್ನು ’ಮಾನಸಿಕ ಅಸ್ವಸ್ಥ’ ಎಂದು ಬಿಂಬಿಸಿ ಕೈ ತೊಳೆದುಕೊಳ್ಳುವುದು ಇವರ ಜಾಯಮಾನ. ಇದಕ್ಕೆ ಜನಪ್ರಿಯ ಮೀಡಿಯಾಗಳ ಸಾಥ್ ಕೂಡ ಇದೆ.

ವಿಜಯಪುರದ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರು ಪಾಕಿಸ್ತಾನದ ಸಂಸತ್ತಿನಲ್ಲಿ ಶಾಂತಿ ಸ್ಥಾಪನೆ ಕುರಿತು ಇಮ್ರಾನ್ ಖಾನ್ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಎಬಿವಿಪಿಯ ಪುಂಡರು ಅದನ್ನು ದೇಶದ್ರೋಹ ಎಂದು ಕರೆದು, ಕಾಲೇಜಿಗೆ ನುಗ್ಗಿ, ಆ ಉಪನ್ಯಾಸಕ ಮಂಡಿಯೂರಿ ಕ್ಷಮೆ ಕೇಳುವಂತೆ ಮಾಡಿತು. ಕಾಲೇಜಿನ ಆಡಳಿತ ಮಂಡಳಿ ಆತನ ನೆರವಿಗೆ ಬರಲಿಲ್ಲ. ಅದು ಗೃಹ ಸಚಿವ ಎಂ.ಬಿ. ಪಾಟೀಲರ ಕಾಲೇಜು!

ಈಗ ಸರ್ಫ್ ಎಕ್ಸೆಲ್ ಜಾಹಿರಾತಿನಲ್ಲೂ ಈ ಮೂರ್ಖರು ತಪ್ಪು ಹುಡುಕುತ್ತಿದ್ದಾರೆ. ಯಾರೂ ಸರ್ಫ್ ಎಕ್ಸೆಲ್ ಕೊಳ್ಳಬಾರದು ಎಂದೆಲ್ಲ ಮೆಸ್ಸೇಜ್ ಮಾಡುತ್ತಾರೆ. ಇದರಿಂದ ಸರ್ಫ್ ಎಕ್ಸೆಲ್‌ಗೆ ಲಾಭವೇ ಆಯಿತು ಎನ್ನುವುದೂ ಈ ಅರಿವುಗೇಡಿಗಳಿಗೆ ಗೊತ್ತಾಗಲ್ಲ.

ಇವತ್ತಷ್ಟೇ ಸೇನೆಯ ಕ್ಯಾಂಪ್ ಬಳಿ ಗ್ರೇನೇಡ್ ಮತ್ತು ಇತರ ಸ್ಫೋಟಕ ಇಟ್ಟುಕೊಂಡು ಸಿಕ್ಕಿಬಿದ್ದವನು ಸಂಘ ಪರಿವಾರಕ್ಕೆ ಸೇರಿದವನು. ಈ ಕುರಿತು ಮುಖ್ಯವಾಹಿನಿ ಮಾಧ್ಯಮಗಳದ್ದು ಮತ್ತದೇ ತಾತ್ಸಾರ!

1925ರಿಂದಲೇ ಬ್ರೇನ್‌ವಾಶ್

1925ರಲ್ಲಿ ಆರೆಸ್ಸೆಸ್‌ನ ಸ್ಥಾಪನೆಯಾದಾಗಿನಿಂದ ಈ ಬ್ರೇನ್‌ವಾಶ್ ಕೆಲಸ ಶುರುವಾಗಿದೆ. ವೈದಿಕಶಾಹಿಯ ಹಿಡಿತದಲ್ಲೇ ಇದ್ದ ಆರೆಸ್ಸೆಸ್ ಬ್ರಿಟಿಷರ ಗುಲಾಮಿತನದಲ್ಲೇ ಕಾಲ ಹಾಕುತ್ತ, ತನ್ನ ಹಿಂದೂ ರಾಷ್ಟ್ರದ ಪ್ರಚಾರ ಮಾಡುತ್ತಿತ್ತು. ಆಗಿಂದಲೇ ಹಿಂದೂಗಳಿಗೆ ಒಂದು ಕಲ್ಪಿತ ಶತ್ರುವನ್ನು ಸೃಷ್ಟಿಸಲು ಯತ್ನಿಸುತ್ತ ಬಂದಿದ್ದ ಅದು, ದೇಶ ವಿಭಜನೆಯ ನಂತರ ಬಹಿರಂಗವಾಗಿಯೇ ಮುಸ್ಲಿಮರನ್ನು ಆ ಕಲ್ಪಿತ ಶತ್ರುವಿನ ಸ್ಥಾನದಲ್ಲಿ ಕೂಡಿಸಿತು. ಈ ದೇಶದಲ್ಲಿ ಹಿಂದೆಲ್ಲ ಮುಸ್ಲಿಮ್ ರಾಜರು ಮಾಡಿದ ಅನಾಚಾರಗಳನ್ನಷ್ಟೇ ಮುಂದು ಮಾಡಿ, ಹಿಂದೂ ರಾಜರು ಮಾಡಿದ ಜನದ್ರೋಹಿ ಕೆಲಸಗಳನ್ನು ಮರೆಮಾಚುವ ನಕಲಿ ಇತಿಹಾಸವನ್ನು ಹರಡುತ್ತ ಬಂದಿತು.

ಭಾರತ ಆಲಿಪ್ತ ಗುಂಪಿಗೆ ಸೇರಿದ ಮೇಲೆ ರಷ್ಯಾಕ್ಕೆ ಹತ್ತಿರವಾಯಿತು. ಆಗಲೇ ಅಮೆರಿಕ ಪಾಕಿಸ್ತಾನದ ಪೋಷಕನಾಗಿತ್ತು. 1970ರ ದಶಕದ ಅಂತ್ಯದಲ್ಲಿ ರಷ್ಯಾ ನೆರವಿನಿಂದ ಅಫಘಾನಿಸ್ತಾನದಲ್ಲಿ ಮುಲ್ಲಾಗಳ ಆಡಳಿತ ಕಿತ್ತೊಗೆದು, ಪ್ರಜಾತಾಂತ್ರಿಕ ಚಳವಳಿ ಹುಟ್ಟಿತು. ಆಗ ಪಾಕಿಸ್ತಾನದಲ್ಲಿ 112 ತರಬೇತಿ ಕೇಂದ್ರಗಳನ್ನು ತೆರೆದ ಅಮೆರಿಕ ತಾಲಿಬಾನಿಗಳ, ಮುಂದೆ ಒಸಮಾ ಬಿನ್ ಲಾಡೆನ್‌ಗಳ ಸೃಷ್ಟಿಗೆ ಕಾರಣವಾಯ್ತು.

ನಂತರ ತಿರುಗಿಬಿದ್ದ ಅವರ ವಿರುದ್ಧವೇ ’ಯುದ್ಧ’ ಸಾರಿ ಜಗತ್ತಿನಾದ್ಯಂತ ಕ್ಷೆಭೆ ಹುಟ್ಟಿಸಲು ಯತ್ನಿಸಿತು. ಅಮೆರಿಕಕ್ಕೆ ಜಗತ್ತಿನ ಹಲವು ಕಡೆ ಕ್ಷೆಭೆ ಇರಬೇಕು, ತನ್ನ ಶಸ್ತ್ರಾಸ್ತಗಳು ಮಾರಾಟವಾಗಬೇಕು ಅಷ್ಟೇ. ಇದನ್ನೆಲ್ಲ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ಭಕ್ತರು ಅಮೆರಿಕದ ಗುಣಗಾನದಲ್ಲಿ ತೊಡಗಿದ್ದಾರೆ. ಈ ದೇಶದ ಸಂವಿಧಾನ, ರಾಷ್ಟ್ರಧ್ವಜವನ್ನು ಎಂದೂ ಮನಸಾರೆ ಗೌರವಿಸದ ಸಂಘ ಪರಿವಾರ ತೇಲಿಬಿಟ್ಟಿರುವ ಸುಳ್ಳು ಚರಿತ್ರೆಯನ್ನೇ ಸತ್ಯ ಎಂಬಂತೆ ಹರಡುತ್ತಿದ್ದಾರೆ.

ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ, ಅದೊಂದು ಹಿಡನ್ ಅಜೆಂಡಾ ಇರುವ ಪಕ್ಷ ಎಂಬುದು ಅರ್ಥವಾದಾಗ ಮಾತ್ರ ಅವರು ಬದಲಾಗಲು ಸಾಧ್ಯ.

ಅಲ್ಲಿವರೆಗೆ ಅವರೆಲ್ಲ ಭಾರತೀಯ ರಕ್ತ ಎಂದೆಲ್ಲ ಅರಚುತ್ತ, ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡುತ್ತ ಸಾಗುತ್ತಾರೆ. ಇದಕ್ಕೂ ಭೀಕರವಾಗಿ ಟ್ರಾಲ್ ಕೂಡ ಮಾಡಬಲ್ಲರು…

ಇವರಲ್ಲಿ ಬಹುಪಾಲು ಜನ ಮೂಲತ: ಸಂಘಿಗಳೇನೂ ಅಲ್ಲ. ಹಾಗಂತ ಇವರನ್ನು Cult of stupidity’  ಗುಂಪಿಗೆ ಸೇರಿಸದೇ ಇರಲು ಆಗುತ್ತಾ? ಅವರು ಮಾಡುತ್ತಿರುವ ಅನಾಹುತಗಳೇ ಹಾಗಿವೆಯಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...