Homeಮುಖಪುಟರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

ರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

- Advertisement -
- Advertisement -

– ಗಿರೀಶ್ ತಾಳಿಕಟ್ಟೆ /

ಈ ಸಲದ ಎಲೆಕ್ಷನ್‍ನ ಹೈವೋಲ್ಟೇಜ್ ಕ್ಷೇತ್ರ ಅಂತ್ಯಾವುದಾದರು ಇದ್ದರೆ ಅದು ಬದಾಮಿ ಅನ್ನೋದ್ರಲ್ಲಿ ಯಾವ ಡೌಟೂ ಇಲ್ಲ. ಸಿಎಂ ಸಿದ್ರಾಮಯ್ಯ ಅಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿ ತೇಲಾಡಿದಾಗಲೇ ಬದಾಮಿ ಹೈಲೈಟಿಗೆ ಬಂದಿತ್ತು. ಆದರೆ ಯಾವಾಗ ಬಿಜೆಪಿ, ಶ್ರೀರಾಮುಲು ಎಂಬ ರೆಡ್ಡಿ ಬೆಟಾಲಿಯನ್ ಬಂಟನನ್ನು ತಂದು ಸಿದ್ರಾಮಯ್ಯನ ಎದುರು ನಿಲ್ಲಿಸಿತೋ ಆಗಿನಿಂದ ಅದು ಸಿಕ್ಕಾಪಟ್ಟೆ ಸೆನ್ಸೇಷನಲ್ ಕ್ಷೇತ್ರವಾಗಿದೆ. ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ ಅಂತಾ, ಕುರುಬರ ಸಾಲಿಡ್ ಮತಗಳಿರುವ ಬದಾಮಿಗೂ ಸಿದ್ರಾಮಯ್ಯ ತನ್ನ ಸ್ಪರ್ಧೆ ವಿಸ್ತರಿಸಿದರೆ ಬಿಜೆಪಿ ಅಲ್ಲಿಯೂ ಶ್ರೀರಾಮುಲು ಎಂಬ ರೊಕ್ಕಸ್ಥ ಆಸಾಮಿಯನ್ನು ಕಣಕ್ಕಿಳಿಸಿ ಬೆವರಿಳಿಸುವಂತೆ ಮಾಡುತ್ತಿದೆ ಎಂಬ ವೆರಿ ಸೂಪರ್‍ಫಿಶಿಯಲ್ ಅಭಿಪ್ರಾಯ ಜನರ ನಡುವೆ ಹರಿದಾಡುತ್ತಿದೆ, ಅಥವಾ ಹರಿದಾಡಿಸಲಾಗುತ್ತಿದೆ.
ಕಾಂಗ್ರೆಸ್ ಪಾಲಿಗೆ ದಿಲ್ಲಿ ಕೂಸು ರಾಹುಲ್‍ಗಿಂತಲೂ ಸ್ಟಾರ್ ಕ್ಯಾಂಪೇನರ್ ಅಂತಂದರೆ ಅದು ಸಿಎಂ ಸಿದ್ರಾಮಯ್ಯ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಜನರನ್ನು ಕೈ ಪಾರ್ಟಿಯತ್ತ ಸೆಳೆದಿವೆ. ಇನ್ನು ಸಿದ್ರಾಮಯ್ಯನಂತ ಮಾಸ್ ಲೀಡರ್ರು ಪ್ರಚಾರ ಮಾಡಿಬಿಟ್ರೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯೋದ್ರಲ್ಲಿ ಸಂಶಯವಿಲ್ಲ. ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಹಾಗಾಗಿ ಸಿಎಂ ಸಿದ್ರಾಮಯ್ಯರನ್ನು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಸಬೇಕು ಅನ್ನೊ ಪ್ಲ್ಯಾನು ಹಾಕಿಕೊಂಡೇ ಬಿಜೆಪಿ ಬದಾಮಿಯಲ್ಲಿ ಶ್ರೀರಾಮುಲುರನ್ನು ಫೀಲ್ಡಿಗಿಳಿಸಿದೆ. ಇದು ರಾಮುಲು ಸ್ಪರ್ಧೆಯ ನೇರಾನೇರ ವಾಸ್ತವ. ಆದ್ರೆ ಪಾಲಿಟಿಕ್ಸ್ ಅನ್ನೋದು ಇಷ್ಟು ಸರಳವಾದ ಸಂಗತಿ ಅಲ್ಲ. ಒಂದೊಂದು ತಿರುವಿನೊಳಗೂ ಹತ್ತಾರು ಒಳಹುಗಳು ಮಲಗಿರುತ್ತವೆ. ರಾಮುಲು ಸ್ಪರ್ಧೆಯ ಹಿಂದೆಯೂ ಇಂತದ್ದೇ ಒಂದು ಹಿಡನ್ ಕಾರ್ಯತಂತ್ರವಿದೆ. ಅದು ಸ್ವತಃ ಬಿಜೆಪಿಯೇ ಅಳೆದು-ತೂಗಿ ಮಡಗಿದ ಮಹೂರ್ತ! ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸೋ ಅಮಿತ್ ಶಾ ಸ್ಕೆಚ್ಚು!!

ಸೋಲಿನ ಪಾಕ

ಎತ್ತಿಂದೆತ್ತ ಲೆಕ್ಕ ಹಾಕಿದರೂ, ಏನೆಲ್ಲಾ ಪರ್ಮುಟೇಷನ್-ಕಾಂಬಿನೇಷನ್ ಗುಣಿಸಿ ಗುಡ್ಡೆ ಹಾಕಿದರೂ ಬದಾಮಿಯಲ್ಲಿ ಸಿದ್ರಾಮಯ್ಯನ ಎದುರು ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಜಾತಿ ಕೆಮಿಸ್ಟ್ರಿಯನ್ನೇ ಅಪ್ಲೈ ಮಾಡಿ ನೋಡೋಣ. ಅಜಮಾಸು ಎರಡು ಕಾಲು ಲಕ್ಷದಷ್ಟು ಮತದಾರರಿರುವ ಬದಾಮಿಯಲ್ಲಿ ಕುರುಬರದ್ದೇ ಮೇಲುಗೈ. ಏನಿಲ್ಲವೆಂದರು 46 ಸಾವಿರ ಓಟುಗಳಿವೆ. 36 ಸಾವಿರ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಪಂಚಮಸಾಲಿ ಮತ್ತು ಬಣಜಿಗ ಎಂಬ ಎರಡು ಪಂಗಡಗಳಾಗಿ ಇಬ್ಬಾಗವಾಗಿವೆ. ಇನ್ನು ಗಾಣಿಗರ 26 ಸಾವಿರ, ನೇಕಾರರ 17 ಸಾವಿರ, ದಲಿತರ 25 ಸಾವಿರ, ನಾಯಕರ 13 ಸಾವಿರ, ಅಲ್ಪಸಂಖ್ಯಾತರ 12 ಸಾವಿರ ಮತಗಳಿವೆ. ಕುರುಬರ, ದಲಿತರ, ಅಲ್ಪಸಂಖ್ಯಾತರ ಮತಗಳು ಒಗ್ಗೂಡಿದರೆ ಸಾಕು ಸಿದ್ರಾಮಯ್ಯ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದಾಗ್ಯೂ ಇನ್ನುಳಿದ ಜಾತಿಗಳ ಮೇಲೂ ಆರ್.ಬಿ.ತಿಮ್ಮಾಪೂರ, ಬಿ.ಬಿ.ಚಿಮ್ಮನಕಟ್ಟಿ, ಸತೀಶ್ ಜಾರಕಿಹೊಳಿಯಂತಹ ಲೋಕಲ್ ಲೀಡರುಗಳ ಪವರ್‍ಫುಲ್ ಪ್ರಭಾವವಿದೆ. ಇನ್ನು ಲಿಂಗಾಯತ ಮತಗಳನ್ನು ಸೆಳೆಯಲು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಲೀಡರುಗಳ ದಂಡೇ ಕಾರ್ಯಪ್ರವೃತ್ತವಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಬಿಜೆಪಿಯ ರಾಮುಲುಗೆ ತನ್ನದೇ ಜಾತಿಯ ನಾಯಕರ ಮತಗಳು ಬೀಳೋದೂ ಡೌಟು. ಯಾಕೆಂದ್ರೆ ಅವು ಅದೇ ಸಮುದಾಯದ ಸತೀಶ್ ಜಾರಕಿಹೊಳಿಯ ಸ್ಥಳೀಯ ಪ್ರಭಾವಳಿಯಲ್ಲಿವೆ.
ಇಲ್ಲಿ ಬಿಜೆಪಿಗೆ ನಿಜಕ್ಕೂ ಸಿದ್ರಾಮಯ್ಯನ ನಿದ್ದೆಗೆಡಿಸುವುದೇ ಏಕಮೇವ ಇರಾದೆಯಾಗಿದ್ದಿದ್ದರೆ ಯಾರಾದರು ಪವರ್‍ಫುಲ್ ಲಿಂಗಾಯತ ಲೀಡರನ್ನು ಚುನಾವಣೆಗೆ ಇಳಿಸಬೇಕಿತ್ತು. ಕೇವಲ ಇದೊಂದು ಕ್ಷೇತ್ರದ ಲಿಂಗಾಯತರ ಮತಗಾತ್ರವನ್ನು ಕಬ್ಜಾ ಮಾಡಿಕೊಳ್ಳುವುದಲ್ಲದೇ ಇಡೀ ಉತ್ತರ ಕರ್ನಾಟಕದಲ್ಲಿ ಈಗಲೂ ಲಿಂಗಾಯತರ ಜೊತೆ ನಾವೇ ಹೆಜ್ಜೆ ಹಾಕುತ್ತಿದ್ದೇವೆ ಎಂಬ ಸಂದೇಶ ಹೊರಬೀಳುವಂತೆ ಮಾಡುವಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಹಾಗೆ ಮಾಡದೆ ಜಾತಿ ಲೆಕ್ಕಾಚಾರದಲ್ಲೂ ಹಿಂದೆ ಬಿದ್ದಿರುವ, ಕ್ಷೇತ್ರ ಒಡನಾಟದಲ್ಲೂ ತಾಳೆಯಾಗದ ರೆಡ್ಡಿ ಪಾಳೆಯದ ಶ್ರೀರಾಮುಲುವನ್ನು ಬಿಜೆಪಿ ಕಣಕ್ಕಿಳಿಸಿರೋದು ಯಾಕೆ?

ಬಿಸಿ ತುಪ್ಪಕ್ಕೆ ದ್ವಂದ್ವ ಸೂತ್ರ
ಗಣಿ ಮಾಫಿಯಾದ ಕಾರಣಕ್ಕೆ ಜೈಲುಪಾಲಾಗಿ, ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದರೂ ಬಳ್ಳಾರಿ ಜಿಲ್ಲೆಯೊಳಗೆ ಕಾಲಿಡದಂತೆ ನಿರ್ಬಂಧ ಹೇರಿಸಿಕೊಂಡಿರುವ ಜನಾರ್ಧನ ರೆಡ್ಡಿ ಮತ್ತವರ ಟೀಮು ಬಿಜೆಪಿ ಪಾಲಿಗೆ ಬಿಸಿ ತುಪ್ಪದಂತಾಗಿದ್ದಾರೆ. ಅತ್ತ ನುಂಗುವಂತೆಯೂ ಇಲ್ಲ, ಇತ್ತ ಉಗುಳುವಂತೆಯೂ ಇಲ್ಲ. ರೆಡ್ಡಿಗಳ ಕಾಸು, ವರ್ಚಸ್ಸು ಬೇಕು ಆದರೆ ಪಕ್ಷದೊಳಗೆ ಅವರು ಪ್ರಭಾವಿಗಳಾಗೋದು ಬೇಡ. ಇದು ಬಿಜೆಪಿಯ ಆಂತರಿಕ ಇಂಗಿತ. ಚುನಾವಣೆ ಗೆಲ್ಲೋದಕ್ಕೆ, ಅಗತ್ಯ ಬಿದ್ದರೆ ಆಪರೇಷನ್ ಕಮಲಕ್ಕೆ ರೆಡ್ಡಿಗಳೇ ಫೈನಾನ್ಸ್ ಮಾಡಬೇಕಾಗಿರೋದ್ರಿಂದ ಅವರನ್ನು ಅಷ್ಟು ಸುಲಭಕ್ಕೆ ಸೈಡ್‍ಲೈನ್ ಮಾಡಲಾಗದು. ಹಾಗಂತ ಈ ಹಿಂದೆ ಅವರೇ ಪಕ್ಷವನ್ನು ಹೈಜಾಕ್ ಮಾಡುವಷ್ಟರ ಮಟ್ಟಕ್ಕೆ ಬೆಳೆಯಲೂ ಬಿಡುವಂತಿಲ್ಲ. ಇಂಥಾ ಇಕ್ಕಟ್ಟನ್ನು ನಿಭಾಯಿಸಿಕೊಳ್ಳಲೇ ಅಮಿತ್ ಷಾ, ಸಂಘ ಪರಿವಾರದ ಜೊತೆಗೆ ಸಮಾಲೋಚನೆ ನಡೆಸಿ ಶ್ರೀರಾಮುಲುವನ್ನು ಸಿದ್ರಾಮಯ್ಯ ವಿರುದ್ಧ ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಮಾಡೋದ್ರಿಂದ ಷಾ ಮತ್ತು ಸಂಘ, ಒಂದೇ ಕಲ್ಲಿಗೆ ಎರಡು ಹಕ್ಕಿಯ ಕಾಲು ಮುರಿಯಲು ಹೊರಟಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ಬದಾಮಿಯಲ್ಲಿ ತಮ್ಮ ಪಕ್ಷದ ಕ್ಯಾಂಡಿಡೇಟು ಸಿದ್ರಾಮಯ್ಯನ ವಿರುದ್ಧ ಗೆಲ್ಲೊಲ್ಲ ಅನ್ನೋದು ಅಮಿತ್ ಷಾಗೂ ಗೊತ್ತಿತ್ತು. ಆದರೆ ಆ ಸೋಲಿನಿಂದಲೂ ಒಂದು ಲಾಭ ಮಾಡಿಕೊಳ್ಳುವ ತಂತ್ರ ಹೆಣೆದೇ ರಾಮುಲುವನ್ನು ಕಣಕ್ಕಿಳಿಸುವಂತೆ ಜನಾರ್ಧನ ರೆಡ್ಡಿಯ ಮುಂದೆ ಅಮಿತ್ ಶಾ ಆಫರ್ ಇಟ್ಟಿದ್ದಾರೆ. ಅದು ಪಕ್ಷದೊಳಗೆ ರೆಡ್ಡಿಗಳನ್ನು ಅಡ್ಡಡ್ಡ ಮಲಗಿಸುವ ನಾಜೂಕಯ್ಯನ ತಂತ್ರ. ಹೇಗೂ ರೆಡ್ಡಿ ಬ್ರಿಗೇಡು ಪೊಲಿಟಿಕಲ್ ಪುನರ್ಜನ್ಮಕ್ಕಾಗಿ ಹಾತೊರೆಯುತ್ತಾ ಇರೋದ್ರಿಂದ ಪಕ್ಷ ಇಟ್ಟ ಈ ಆಫರ್ರನ್ನು ಜನಾರ್ಧನ್ ರೆಡ್ಡಿ ತಿರಸ್ಕರಿಸಲು ಬರುವುದಿಲ್ಲ. ಒಂದೊಮ್ಮೆ ಆತ ಅಲ್ಲಿ ಸೋಲುವ ಸುಳಿವಿಡಿದು ತನ್ನ ಭಂಟನ ಸ್ಪರ್ಧೆಗೆ ಅಡ್ಡಡ್ಡ ತಲೆಯಾಡಿಸಿದರೆ ಪಕ್ಷದೊಳಗೆ ರೆಡ್ಡಿ ತಾನಾಗೇ ಆತ್ಮಹತ್ಯೆ ಮಾಡಿಕೊಂಡಂತಾಗುತ್ತಿತ್ತು. ಧೈರ್ಯ ಮಾಡಿ ಸ್ಪರ್ಧೆಗೆ ಸೈ ಅಂದರೂ, ಶ್ರೀರಾಮುಲುಗೆ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಆ ಸೋಲು ಸಹಾ ರೆಡ್ಡಿ ಬೆಟಾಲಿಯನನ್ನು ಪಕ್ಷದೊಳಗೆ ಕೆಡವಿ ಬಿಡುತ್ತೆ! ಅಲ್ಲಿಗೆ ಯಾವ ದುಶ್ಮನಿ, ಮನಸ್ತಾಪವನ್ನೂ ಕಟ್ಟಿಕೊಳ್ಳದೆ ರೆಡ್ಡಿಗಳನ್ನು ಮಟ್ಟ ಹಾಕಿದಂತೆ ಆಯ್ತಲ್ಲವೇ!! ಅಪ್ಪಿತಪ್ಪಿ, ಶ್ರೀರಾಮುಲು ಗೆದ್ದೇ ಬಿಟ್ಟರು ಅಂತಿಟ್ಟುಕೊಳ್ಳಿ ಆಗಲೂ ಲಾಭ ಬಿಜೆಪಿಗೇ ತಾನೇ.

ಒಂದು ಕಡೆ ಸಿದ್ರಾಮಯ್ಯರನ್ನು ವಿಚಲಿತ ಮಾಡಿದಂತಾಗುತ್ತೆ. ಮತ್ತೊಂದೆಡೆ ರೆಡ್ಡಿಗಳನ್ನು ಎರಡು ತುದಿಯ ಖಡ್ಗದಿಂದ ಇರಿದಂತಾಗುತ್ತೆ! ಇದು ಅಮಿತ್ ಷಾ ಲೆಕ್ಕಾಚಾರ. ಒಟ್ಟಿನಲ್ಲಿ ರೆಡ್ಡಿಗಳನ್ನು ಕಟ್ಟಿಹಾಕಲು ರಾಮುಲು ಎಂಬ ಹರಕೆಯ ಕುರಿಯನ್ನು ಷಾ ಬಳಸಿಕೊಳ್ಳುತ್ತಿರೋದು ಸ್ಪಷ್ಟ. ಕಾಕತಾಳೀಯ ಅಂದ್ರೆ, ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯ ಮಿನುಗು`ತಾರೆ’ ಸುಷ್ಮಾ ಸ್ವರಾಜ್ ಪರ ರಿಸ್ಕನ್ನು ಕೈಗೆತ್ತಿಕೊಂಡು ಬಿಜೆಪಿಯೊಳಗೆ ಬಲಾಢ್ಯರಾಗಿ ಬೆಳೆದಿದ್ದ ರೆಡ್ಡಿಗಳನ್ನು ಮಟ್ಟ ಹಾಕಲು ಇದೀಗ ಅಂತದ್ದೇ ಚಾಲೆಂಜಿಂಗ್ ಚುನಾವಣೆ ಬಳಕೆಯಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...