Homeಕರ್ನಾಟಕಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

ಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

- Advertisement -
- Advertisement -

ಹಳ್ಳಿಯ ಹುರುಪಿನ ಹುರಿಯಾಳುಗಳ ಜಟಾಪಟಿಯ ಕ್ಷೇತ್ರ ಗ್ರಾಮ ಪಂಚಾಯತ್ ಚುನಾವಣೆ. ಇಲ್ಲಿಯೂ ಕೂಡ ಹೆಣ್ಣಿನ ಸ್ಥಾನ ಕೇವಲ ಮೀಸಲಾತಿಯ ನೆಪದಲ್ಲಿ ಹೆಸರು ಮತ್ತೊಂದು ಫೋಟೋಗಷ್ಟೆ ಸೀಮಿತ.

ಈ ಚುನಾವಣೆಗಳು ಜನರನ್ನು ಭ್ರಷ್ಟರನ್ನಾಗಿ ಮಾಡುವುದಷ್ಟೆಯಲ್ಲದೆ ಪುರುಷಪ್ರಾಧಾನ್ಯತೆಯ ಝಂಡಾಗಳನ್ನು ನೆಟ್ಟು ನೀರೆರೆಯುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.

1992ರ ಪಂಚಾಯತ್ ರಾಜ್ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಅನುಪಾತದಲ್ಲಿ ಸ್ಥಾನಗಳು ಮೀಸಲಾಗಿದ್ದವು. ಅಂದರೆ, ಮಹಿಳೆಯರ ಸಂಖ್ಯೆಯ ಅನುಪಾತದಲ್ಲಿ ಒಟ್ಟು 1/3 ಸೀಟುಗಳು ಮೀಸಲಿರಬೇಕು ಎಂದು. ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮೀಸಲಾತಿ ನೀಡಲಾಯಿತು. ಆದರೆ ಇದಕ್ಕೊಪ್ಪದ ಮಹಿಳೆಯರ ದಶಕಗಳ ಹೋರಾಟದ ಫಲವಾಗಿ ಪಂಚಾಯಿತಿ ಚುನಾವಣೆಗಳಲ್ಲಿ ಶೇ 33ರಷ್ಟು ಇದ್ದ ಮಹಿಳಾ ಮೀಸಲಾತಿ ಇನ್ನೂ ಹೆಚ್ಚಾಯಿತು. ಭಾರತ ಸರ್ಕಾರದ ಕೇಂದ್ರ ಸಚಿವ ಸಂಪುಟ 27 ಆಗಸ್ಟ್ 2009ರಲ್ಲಿ ನೀಡಲಾದ ಅನುಮೋದನೆಯ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲು ಒಪ್ಪಿಗೆ ನೀಡಿತು. ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಛತ್ತೀಸ್‌ಘಡ, ಜಾರ್ಖಂಡ್, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತ್ರಿಪುರದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಅಳವಡಿಸಲಾಯಿತು.

ಮಹಾತ್ಮಗಾಂಧಿಯವರ ಕನಸು ಗ್ರಾಮ ಸ್ವರಾಜ್ ಅಂದರೆ ಹಳ್ಳಿಯ ಜನಗಳಿಗೆ ಅಧಿಕಾರ ವರ್ಗಾವಣೆ ಮಾಡುವುದು. ಅವರ ಪ್ರಕಾರ ಹಳ್ಳಿಗಳು ಸಾಕಷ್ಟು ಸ್ವಾಯತ್ತವಾಗಲು, ಪಂಚಾಯತ್ ವ್ಯವಸ್ಥೆ ಮೂಲಕ ಗ್ರಾಮಗಳು ತಮ್ಮ ಆಡಳಿತ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸ್ಥಳೀಯ ಸ್ವಾಯತ್ತತೆಯನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ ಭಾರತೀಯ ಸರ್ಕಾರಿ ಆಡಳಿತವು ಆಧುನಿಕ ವ್ಯವಸ್ಥೆ ತರಲು ನಿರ್ಧರಿಸಿತು. ಅತಿಯಾಗಿ ಕೇಂದ್ರೀಕೃತವಾದ ಆಡಳಿತವನ್ನು ವಿಕೇಂದ್ರೀಕೃತಗೊಳಿಸಿ ಕೆಳ ಹಂತದ ಸ್ಥಳೀಯ ವಿವಿಧ ಸಮಿತಿಗಳು ಆಡಳಿತ ನಡೆಸುವುದರ ಮೂಲಕ ಎಲ್ಲಾ ಸ್ತರದ ಜನರಿಗೆ ಅನುಕೂಲ ಮಾಡಲೆಂದೆ ತಂದದ್ದು ಈ ಪಂಚಾಯತ್ ವ್ಯವಸ್ಥೆ. ಇವೆಲ್ಲದರ ಭಾಗವಾಗಿ ಬಂದ ಮಹಿಳಾ ಮೀಸಲಾತಿಗಳು ಕೇವಲ ಪುಸ್ತಕದಲ್ಲಿವೆಯಷ್ಟೇ! ಇನ್ನುಳಿದಂತೆ ಆಡಳಿತವೆಲ್ಲ ಗಂಡ, ಮಗ ಅಥವಾ ಮನೆಯ ಇತರ ಪುರುಷರೆ ನಿಭಾಯಿಸುತ್ತಾರೆ ಎಂಬ ನಿಚ್ಚಳ ಸತ್ಯ. ಕೆಲವು ದಿನಗಳ ಮೊದಲು ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ನಾನೇ ಪ್ರತ್ಯಕ್ಷವಾಗಿ ಕಂಡಂತೆ, ನಾಮಿನೇಷನ್ ಸಲ್ಲಿಕೆಯ ಸಂದರ್ಭ ಜೊತೆಗೆ ಒಂದೆರಡು ದಿನ ಚುನಾವಣೆಯ ಪ್ರಚಾರದಲ್ಲಿ ಈ ಮಹಿಳೆಯರು ಕಾಣಿಸಿಕೊಂಡರೆ ಹೊರತು ಇನ್ನುಳಿದ ಯಾವ ಪ್ರಕ್ರಿಯೆಗಳಲ್ಲೂ ಅವರ ಪಾಲು ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ.

’ಹಳ್ಳಿ ರಾಜಕೀಯ ಕಲಿತರೆ ದೆಲ್ಲಿ ರಾಜಕೀಯ ಕಲಿತಂಗೆ’ ಎಂಬ ಆಡುಮಾತಿದೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಯ ಎಲ್ಲಾ ಮಜಲುಗಳನ್ನು ತಿಳಿಯಲೇಬೇಕೆಂಬ ಕಾರಣಕ್ಕೆ ಮತ ಎಣಿಕೆಯ ಏಜೆಂಟ್ ಆಗಿಯ ನಮ್ಮ ತಾಲೂಕು ಕೇಂದ್ರದ ಮತ ಎಣಿಕೆ ನಡೆಯುತ್ತಿದ್ದ ಕಾಂಪೌಂಡಿನೊಳಗೆ ಕಾಲಿಟ್ಟರೆ ಸಾವಿರಾರು ಗಂಡಸರೆ ತುಂಬಿದ್ದ ಆ ಶಾಲಾ ಮೈದಾನದಲ್ಲಿ ಕಂಡದ್ದು ಕೇವಲ ಇಬ್ಬರು ಹೆಂಗಸರು ಮಾತ್ರ ಮತ್ತು ನಾನು ಮೂರನೆಯವಳು.

PC : Dailyhunt

ತಮಗೆ ಬಿದ್ದ ಮತಗಳ ಲೆಕ್ಕವನ್ನು ನೋಡಲು ಸಹ ಹೆಣ್ಣಿಗೆ ಅವಕಾಶವನ್ನು ನೀಡದಿರುವ ಈ ಪುರುಷ ಪ್ರಧಾನ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೆಂದೆ ಕರೆಯಲ್ಪಡುವ ಪಂಚಾಯಿತಿ ಚುನಾವಣೆಗಳ ಮೂಲ ಆಶಯವಾದ ಸರ್ವರಿಗು ಸಮಾನ ಹಕ್ಕುಗಳನ್ನು ಮೊಟಕುಗೊಳಿಸಿ ಹಳ್ಳಿಯ ಮಟ್ಟದಲ್ಲೆ ಹೆಣ್ಣುಮಕ್ಕಳು ರಾಜಕೀಯ ಅಭಿಲಾಷೆಗಳನ್ನು ಚಿವುಟಿ ಹಾಕುತ್ತಿವೆ.

ಸ್ತ್ರೀ ಸಬಲೀಕರಣಕ್ಕಾಗಿ ಬಂದ ಈ ಮೀಸಲಾತಿ ಹೀಗೆ ದುರುಪಯೋಗವಾಗುತ್ತಿರುವಾಗ ಇದಕ್ಕೆ ಕಡಿವಾಣ ಹಾಕಲು ಹೊಸದೊಂದು ಕಾನೂನಿನ ಅಗತ್ಯಕ್ಕಿಂತ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ತಾವೆ ದುಡಿದು ಇಡೀ ಕುಟುಂಬ ನಿರ್ವಹಿಸುವ ಹೆಂಗಸರ ಬಳಿ ಮತಯಾಚನೆ ಮಾಡಲು ಹೋದಾಗ ಮುಲಾಜಿಲ್ಲದೆ “ನಮ್ಮ ಗಂಡ ಹೇಳಿದವರಿಗೆ ನಾನು ವೋಟ್ ಹಾಕೋದು” ಎನ್ನುವಾಗ ಪುಸ್ತಕದಲ್ಲಿ ಓದಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಎಲ್ಲಾ ಕಲ್ಪನೆಗಳು ಬುಡಮೇಲಾಗುತ್ತಿದ್ದವು.

ಎಷ್ಟೇ ಅರ್ಥ ಮಾಡಿಸಿದರೂ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವವರು 50 ಪ್ರತಿಶತ ಜನರಿಗಿಂತಲೂ ಕಡಿಮೆ. ನಂಬಲಿಕ್ಕೆ ಸಾಧ್ಯವಾದಷ್ಟು ಮೊಂಡು ಹಿಡಿಸಿಬಿಟ್ಟಿದೆ ಈ ಚುನಾವಣಾ ವ್ಯವಸ್ಥೆ.

ಸಾಮಾಜಿಕ ಕಾರ್ಯಕರ್ತೆಯಾಗಿ ರಾಜಕೀಯವನ್ನು ವಿಶ್ಲೇಷಿಸುವುದೆ ಬೇರೆ. ಸಕ್ರಿಯ ರಾಜಕಾರಣಿಯಾಗಿ ರಾಜಕೀಯದೊಳಗಿನ ರಾಜಕೀಯ ಮಾಡುವುದೆ ಬೇರೆ ಎಂಬುದನ್ನು ನನ್ನ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ದಿನದಿಂದ ಹಿಡಿದು ಮತ ಎಣಿಕೆಯ ಕೊನೆ ಘಳಿಗೆಯವರೆಗು ನಡೆದ ಬೆಳವಣಿಗೆಗಳು ಪಾಠ ಕಲಿಸಿದವು.

“ಏನ್ ಹೇಳ್ತಿರಾ ಮೇಡಮ್ ದುಡ್ಡಿಲ್ದೆ ರಾಜಕೀಯ ಮಾಡಕ್ಕಾಯ್ತದ” ಎನ್ನುತ್ತಲೆ ಮನೆ ಚಿನ್ನ ಅಡವಿಟ್ಟು ಸೈಟುಗಳನ್ನು ಮಾರಿಯಾದರು ಗೆಲ್ಲಲೆಬೇಕೆಂಬ ಜಿದ್ದಿಗೆ ಬಿದ್ದು ಜೀವನವನ್ನೆ ಹರಾಜಿಗಿಟ್ಟವರನ್ನು ಕಣ್ಣಾರೆ ಕಂಡೆ.

ಮತದಾರರನ್ನು ಅತ್ಯಂತ ನಿಕೃಷ್ಟ ಮಟ್ಟಕ್ಕೆ ಭ್ರಷ್ಟರನ್ನಾಗಿ ಮಾಡಿದ ಸಕಲ ಕೀರ್ತಿಗಳು ಈ ಹಳ್ಳಿ ರಾಜಕೀಯಕ್ಕೆ ಸಲ್ಲುತ್ತದೆ ಎಂಬುದು ’ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎನ್ನುವ ಗಾದೆಮಾತಿನ ತಿಳಿವಳಿಕೆಯಷ್ಟೇ ಸತ್ಯ. ಹಣ, ಹೆಂಡ, ಮೂಗುಬೊಟ್ಟುಗಳ ಸುತ್ತ ನಡೆಯುವ ರಾಜಕೀಯದ ಹೊಲಸಿನ ನಡುವೆ ವ್ಯಕ್ತಿಯ ದೂರದೃಷ್ಟಿಯ ಆಶಯಗಳು ಪೇಲವವಾಗಿಬಿಡುತ್ತವೆ.

ಇದರ ನಡುವೆಯು 50-50 ಎನ್ನುವಂತೆ ಇಂದಿನ ಯುವ ಸಮುದಾಯದ ವಿವೇಚನಾಯುತ ಹೆಜ್ಜೆಗಳು ಆಶಾದಾಯಕವೆನಿಸುತ್ತವೆ.

ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲು ಹಿಂದಿನ ಯಜಮಾನಿಕೆ ಪದ್ಧತಿಯಂತೆ ತನ್ನ ಮಾತು ಕೇಳುವವರನ್ನೆ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಿ, ಗೆಲ್ಲಿಸಿ ವಂಶಪಾರಂಪರ್ಯದ ಯಜಮಾನಿಕೆ ಪದ್ಧತಿಯನ್ನು ನಡೆಸಿಕೊಂಡೆ ಬರುತ್ತಿದ್ದವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಿ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡಲು ಯುವಕರು ಶ್ರಮಿಸಿದ್ದಾರೆ.

ಒಂದೆಡೆ ನವ ಯುವ ರಾಜಕಾರಣದ ಅಲೆ ಸಮಾಧಾನ ತಂದರೂ ಕೂಡ ಹಣದ ಹೊಳೆ, ಮಹಿಳೆಯರನ್ನು ಚುನಾವಣಾ ದಾಳಗಳಾಗಿಯಷ್ಟೆ ಬಳಸಿಕೊಳ್ಳುತ್ತಿರುವ ವ್ಯವಸ್ಥೆಯ ಬಗ್ಗೆ ವಿದ್ರಾವಕ ಕೋಪವಂತೂ ಇದ್ದೆ ಇದೆ.


ಇದನ್ನೂ ಓದಿ: ಬೆಂಗಳೂರು IISc ಪ್ರಾಧ್ಯಾಪಕಿ ರೋಹಿಣಿ ಗೋಡ್ಬೋಲೆಗೆ ಫ್ರಾನ್ಸ್‌‌ನ ಅತ್ಯುನ್ನತ ಗೌರವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...