Homeಕರ್ನಾಟಕಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

ಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

- Advertisement -
- Advertisement -

ಹಳ್ಳಿಯ ಹುರುಪಿನ ಹುರಿಯಾಳುಗಳ ಜಟಾಪಟಿಯ ಕ್ಷೇತ್ರ ಗ್ರಾಮ ಪಂಚಾಯತ್ ಚುನಾವಣೆ. ಇಲ್ಲಿಯೂ ಕೂಡ ಹೆಣ್ಣಿನ ಸ್ಥಾನ ಕೇವಲ ಮೀಸಲಾತಿಯ ನೆಪದಲ್ಲಿ ಹೆಸರು ಮತ್ತೊಂದು ಫೋಟೋಗಷ್ಟೆ ಸೀಮಿತ.

ಈ ಚುನಾವಣೆಗಳು ಜನರನ್ನು ಭ್ರಷ್ಟರನ್ನಾಗಿ ಮಾಡುವುದಷ್ಟೆಯಲ್ಲದೆ ಪುರುಷಪ್ರಾಧಾನ್ಯತೆಯ ಝಂಡಾಗಳನ್ನು ನೆಟ್ಟು ನೀರೆರೆಯುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.

1992ರ ಪಂಚಾಯತ್ ರಾಜ್ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಅನುಪಾತದಲ್ಲಿ ಸ್ಥಾನಗಳು ಮೀಸಲಾಗಿದ್ದವು. ಅಂದರೆ, ಮಹಿಳೆಯರ ಸಂಖ್ಯೆಯ ಅನುಪಾತದಲ್ಲಿ ಒಟ್ಟು 1/3 ಸೀಟುಗಳು ಮೀಸಲಿರಬೇಕು ಎಂದು. ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮೀಸಲಾತಿ ನೀಡಲಾಯಿತು. ಆದರೆ ಇದಕ್ಕೊಪ್ಪದ ಮಹಿಳೆಯರ ದಶಕಗಳ ಹೋರಾಟದ ಫಲವಾಗಿ ಪಂಚಾಯಿತಿ ಚುನಾವಣೆಗಳಲ್ಲಿ ಶೇ 33ರಷ್ಟು ಇದ್ದ ಮಹಿಳಾ ಮೀಸಲಾತಿ ಇನ್ನೂ ಹೆಚ್ಚಾಯಿತು. ಭಾರತ ಸರ್ಕಾರದ ಕೇಂದ್ರ ಸಚಿವ ಸಂಪುಟ 27 ಆಗಸ್ಟ್ 2009ರಲ್ಲಿ ನೀಡಲಾದ ಅನುಮೋದನೆಯ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲು ಒಪ್ಪಿಗೆ ನೀಡಿತು. ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಛತ್ತೀಸ್‌ಘಡ, ಜಾರ್ಖಂಡ್, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತ್ರಿಪುರದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಅಳವಡಿಸಲಾಯಿತು.

ಮಹಾತ್ಮಗಾಂಧಿಯವರ ಕನಸು ಗ್ರಾಮ ಸ್ವರಾಜ್ ಅಂದರೆ ಹಳ್ಳಿಯ ಜನಗಳಿಗೆ ಅಧಿಕಾರ ವರ್ಗಾವಣೆ ಮಾಡುವುದು. ಅವರ ಪ್ರಕಾರ ಹಳ್ಳಿಗಳು ಸಾಕಷ್ಟು ಸ್ವಾಯತ್ತವಾಗಲು, ಪಂಚಾಯತ್ ವ್ಯವಸ್ಥೆ ಮೂಲಕ ಗ್ರಾಮಗಳು ತಮ್ಮ ಆಡಳಿತ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸ್ಥಳೀಯ ಸ್ವಾಯತ್ತತೆಯನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ ಭಾರತೀಯ ಸರ್ಕಾರಿ ಆಡಳಿತವು ಆಧುನಿಕ ವ್ಯವಸ್ಥೆ ತರಲು ನಿರ್ಧರಿಸಿತು. ಅತಿಯಾಗಿ ಕೇಂದ್ರೀಕೃತವಾದ ಆಡಳಿತವನ್ನು ವಿಕೇಂದ್ರೀಕೃತಗೊಳಿಸಿ ಕೆಳ ಹಂತದ ಸ್ಥಳೀಯ ವಿವಿಧ ಸಮಿತಿಗಳು ಆಡಳಿತ ನಡೆಸುವುದರ ಮೂಲಕ ಎಲ್ಲಾ ಸ್ತರದ ಜನರಿಗೆ ಅನುಕೂಲ ಮಾಡಲೆಂದೆ ತಂದದ್ದು ಈ ಪಂಚಾಯತ್ ವ್ಯವಸ್ಥೆ. ಇವೆಲ್ಲದರ ಭಾಗವಾಗಿ ಬಂದ ಮಹಿಳಾ ಮೀಸಲಾತಿಗಳು ಕೇವಲ ಪುಸ್ತಕದಲ್ಲಿವೆಯಷ್ಟೇ! ಇನ್ನುಳಿದಂತೆ ಆಡಳಿತವೆಲ್ಲ ಗಂಡ, ಮಗ ಅಥವಾ ಮನೆಯ ಇತರ ಪುರುಷರೆ ನಿಭಾಯಿಸುತ್ತಾರೆ ಎಂಬ ನಿಚ್ಚಳ ಸತ್ಯ. ಕೆಲವು ದಿನಗಳ ಮೊದಲು ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ನಾನೇ ಪ್ರತ್ಯಕ್ಷವಾಗಿ ಕಂಡಂತೆ, ನಾಮಿನೇಷನ್ ಸಲ್ಲಿಕೆಯ ಸಂದರ್ಭ ಜೊತೆಗೆ ಒಂದೆರಡು ದಿನ ಚುನಾವಣೆಯ ಪ್ರಚಾರದಲ್ಲಿ ಈ ಮಹಿಳೆಯರು ಕಾಣಿಸಿಕೊಂಡರೆ ಹೊರತು ಇನ್ನುಳಿದ ಯಾವ ಪ್ರಕ್ರಿಯೆಗಳಲ್ಲೂ ಅವರ ಪಾಲು ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ.

’ಹಳ್ಳಿ ರಾಜಕೀಯ ಕಲಿತರೆ ದೆಲ್ಲಿ ರಾಜಕೀಯ ಕಲಿತಂಗೆ’ ಎಂಬ ಆಡುಮಾತಿದೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಯ ಎಲ್ಲಾ ಮಜಲುಗಳನ್ನು ತಿಳಿಯಲೇಬೇಕೆಂಬ ಕಾರಣಕ್ಕೆ ಮತ ಎಣಿಕೆಯ ಏಜೆಂಟ್ ಆಗಿಯ ನಮ್ಮ ತಾಲೂಕು ಕೇಂದ್ರದ ಮತ ಎಣಿಕೆ ನಡೆಯುತ್ತಿದ್ದ ಕಾಂಪೌಂಡಿನೊಳಗೆ ಕಾಲಿಟ್ಟರೆ ಸಾವಿರಾರು ಗಂಡಸರೆ ತುಂಬಿದ್ದ ಆ ಶಾಲಾ ಮೈದಾನದಲ್ಲಿ ಕಂಡದ್ದು ಕೇವಲ ಇಬ್ಬರು ಹೆಂಗಸರು ಮಾತ್ರ ಮತ್ತು ನಾನು ಮೂರನೆಯವಳು.

PC : Dailyhunt

ತಮಗೆ ಬಿದ್ದ ಮತಗಳ ಲೆಕ್ಕವನ್ನು ನೋಡಲು ಸಹ ಹೆಣ್ಣಿಗೆ ಅವಕಾಶವನ್ನು ನೀಡದಿರುವ ಈ ಪುರುಷ ಪ್ರಧಾನ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೆಂದೆ ಕರೆಯಲ್ಪಡುವ ಪಂಚಾಯಿತಿ ಚುನಾವಣೆಗಳ ಮೂಲ ಆಶಯವಾದ ಸರ್ವರಿಗು ಸಮಾನ ಹಕ್ಕುಗಳನ್ನು ಮೊಟಕುಗೊಳಿಸಿ ಹಳ್ಳಿಯ ಮಟ್ಟದಲ್ಲೆ ಹೆಣ್ಣುಮಕ್ಕಳು ರಾಜಕೀಯ ಅಭಿಲಾಷೆಗಳನ್ನು ಚಿವುಟಿ ಹಾಕುತ್ತಿವೆ.

ಸ್ತ್ರೀ ಸಬಲೀಕರಣಕ್ಕಾಗಿ ಬಂದ ಈ ಮೀಸಲಾತಿ ಹೀಗೆ ದುರುಪಯೋಗವಾಗುತ್ತಿರುವಾಗ ಇದಕ್ಕೆ ಕಡಿವಾಣ ಹಾಕಲು ಹೊಸದೊಂದು ಕಾನೂನಿನ ಅಗತ್ಯಕ್ಕಿಂತ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ತಾವೆ ದುಡಿದು ಇಡೀ ಕುಟುಂಬ ನಿರ್ವಹಿಸುವ ಹೆಂಗಸರ ಬಳಿ ಮತಯಾಚನೆ ಮಾಡಲು ಹೋದಾಗ ಮುಲಾಜಿಲ್ಲದೆ “ನಮ್ಮ ಗಂಡ ಹೇಳಿದವರಿಗೆ ನಾನು ವೋಟ್ ಹಾಕೋದು” ಎನ್ನುವಾಗ ಪುಸ್ತಕದಲ್ಲಿ ಓದಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಎಲ್ಲಾ ಕಲ್ಪನೆಗಳು ಬುಡಮೇಲಾಗುತ್ತಿದ್ದವು.

ಎಷ್ಟೇ ಅರ್ಥ ಮಾಡಿಸಿದರೂ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವವರು 50 ಪ್ರತಿಶತ ಜನರಿಗಿಂತಲೂ ಕಡಿಮೆ. ನಂಬಲಿಕ್ಕೆ ಸಾಧ್ಯವಾದಷ್ಟು ಮೊಂಡು ಹಿಡಿಸಿಬಿಟ್ಟಿದೆ ಈ ಚುನಾವಣಾ ವ್ಯವಸ್ಥೆ.

ಸಾಮಾಜಿಕ ಕಾರ್ಯಕರ್ತೆಯಾಗಿ ರಾಜಕೀಯವನ್ನು ವಿಶ್ಲೇಷಿಸುವುದೆ ಬೇರೆ. ಸಕ್ರಿಯ ರಾಜಕಾರಣಿಯಾಗಿ ರಾಜಕೀಯದೊಳಗಿನ ರಾಜಕೀಯ ಮಾಡುವುದೆ ಬೇರೆ ಎಂಬುದನ್ನು ನನ್ನ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ದಿನದಿಂದ ಹಿಡಿದು ಮತ ಎಣಿಕೆಯ ಕೊನೆ ಘಳಿಗೆಯವರೆಗು ನಡೆದ ಬೆಳವಣಿಗೆಗಳು ಪಾಠ ಕಲಿಸಿದವು.

“ಏನ್ ಹೇಳ್ತಿರಾ ಮೇಡಮ್ ದುಡ್ಡಿಲ್ದೆ ರಾಜಕೀಯ ಮಾಡಕ್ಕಾಯ್ತದ” ಎನ್ನುತ್ತಲೆ ಮನೆ ಚಿನ್ನ ಅಡವಿಟ್ಟು ಸೈಟುಗಳನ್ನು ಮಾರಿಯಾದರು ಗೆಲ್ಲಲೆಬೇಕೆಂಬ ಜಿದ್ದಿಗೆ ಬಿದ್ದು ಜೀವನವನ್ನೆ ಹರಾಜಿಗಿಟ್ಟವರನ್ನು ಕಣ್ಣಾರೆ ಕಂಡೆ.

ಮತದಾರರನ್ನು ಅತ್ಯಂತ ನಿಕೃಷ್ಟ ಮಟ್ಟಕ್ಕೆ ಭ್ರಷ್ಟರನ್ನಾಗಿ ಮಾಡಿದ ಸಕಲ ಕೀರ್ತಿಗಳು ಈ ಹಳ್ಳಿ ರಾಜಕೀಯಕ್ಕೆ ಸಲ್ಲುತ್ತದೆ ಎಂಬುದು ’ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎನ್ನುವ ಗಾದೆಮಾತಿನ ತಿಳಿವಳಿಕೆಯಷ್ಟೇ ಸತ್ಯ. ಹಣ, ಹೆಂಡ, ಮೂಗುಬೊಟ್ಟುಗಳ ಸುತ್ತ ನಡೆಯುವ ರಾಜಕೀಯದ ಹೊಲಸಿನ ನಡುವೆ ವ್ಯಕ್ತಿಯ ದೂರದೃಷ್ಟಿಯ ಆಶಯಗಳು ಪೇಲವವಾಗಿಬಿಡುತ್ತವೆ.

ಇದರ ನಡುವೆಯು 50-50 ಎನ್ನುವಂತೆ ಇಂದಿನ ಯುವ ಸಮುದಾಯದ ವಿವೇಚನಾಯುತ ಹೆಜ್ಜೆಗಳು ಆಶಾದಾಯಕವೆನಿಸುತ್ತವೆ.

ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲು ಹಿಂದಿನ ಯಜಮಾನಿಕೆ ಪದ್ಧತಿಯಂತೆ ತನ್ನ ಮಾತು ಕೇಳುವವರನ್ನೆ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಿ, ಗೆಲ್ಲಿಸಿ ವಂಶಪಾರಂಪರ್ಯದ ಯಜಮಾನಿಕೆ ಪದ್ಧತಿಯನ್ನು ನಡೆಸಿಕೊಂಡೆ ಬರುತ್ತಿದ್ದವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಿ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡಲು ಯುವಕರು ಶ್ರಮಿಸಿದ್ದಾರೆ.

ಒಂದೆಡೆ ನವ ಯುವ ರಾಜಕಾರಣದ ಅಲೆ ಸಮಾಧಾನ ತಂದರೂ ಕೂಡ ಹಣದ ಹೊಳೆ, ಮಹಿಳೆಯರನ್ನು ಚುನಾವಣಾ ದಾಳಗಳಾಗಿಯಷ್ಟೆ ಬಳಸಿಕೊಳ್ಳುತ್ತಿರುವ ವ್ಯವಸ್ಥೆಯ ಬಗ್ಗೆ ವಿದ್ರಾವಕ ಕೋಪವಂತೂ ಇದ್ದೆ ಇದೆ.


ಇದನ್ನೂ ಓದಿ: ಬೆಂಗಳೂರು IISc ಪ್ರಾಧ್ಯಾಪಕಿ ರೋಹಿಣಿ ಗೋಡ್ಬೋಲೆಗೆ ಫ್ರಾನ್ಸ್‌‌ನ ಅತ್ಯುನ್ನತ ಗೌರವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....