Homeಮುಖಪುಟಪಿಕೆ ಟಾಕಿಸ್: ಯೊರ್ಗೊಸ್ ಲಾಂತಿಮೊಸ್‌ನ ವಿಲಕ್ಷಣ ಮತ್ತು ಕಠೋರ ಪ್ರಪಂಚ

ಪಿಕೆ ಟಾಕಿಸ್: ಯೊರ್ಗೊಸ್ ಲಾಂತಿಮೊಸ್‌ನ ವಿಲಕ್ಷಣ ಮತ್ತು ಕಠೋರ ಪ್ರಪಂಚ

- Advertisement -
- Advertisement -

[ಜಾಗತಿಕ ಸಿನೆಮಾಗಳ ಈ ಸರಣಿಯಲ್ಲಿ ಮೊದಲ ಹತ್ತು ವಾರಗಳವರೆಗೆ ಗ್ರೀಸ್ ದೇಶದ ಚಲನಚಿತ್ರಗಳು ಮತ್ತು ನಿರ್ದೇಶಕರ ಬಗ್ಗೆ ಬರಹಗಳು ಮೂಡಿ ಬರಲಿವೆ]

ಡಾಗ್‌ಟೂತ್(2009, ಗ್ರೀಕ್)

ಡಾಗ್‌ಟೂತ್ ಅಂದರೆ ಕೋರೆಹಲ್ಲು. ಒಂದು ಕುಟುಂಬ ಊರಿನಾಚೆ, ಹೊರಗಿನ ಪ್ರಪಂಚದ ಸಂಬಂಧ ಮತ್ತು ಸಂಪರ್ಕವೇ ಇಲ್ಲದೆ ಬದುಕುತ್ತಿರುತ್ತದೆ. ಕೇವಲ ತಂದೆ ಮಾತ್ರ ಮನೆಯಿಂದಾಚೆಗೆ ಹೋಗಿ ತನ್ನ ಕೆಲಸವನ್ನು ಮುಗಿಸಿಕೊಂಡು ಮನೆಯವರಿಗೆ ಬೇಕಾದದ್ದನ್ನು ತಂದು ಕೊಡುತ್ತಿರುತ್ತಾನೆ. ಮುಚ್ಚಿಟ್ಟ ಟೆಲಿಫೋನಿನ ಮೂಲಕ ತಾಯಿ ಅಗತ್ಯ ಬಿದ್ದಾಗ ಮಾತ್ರ ಮಕ್ಕಳಿಗೆ ತಿಳಿಯದಂತೆ ರಹಸ್ಯವಾಗಿ ತಂದೆಯನ್ನು ಸಂಪರ್ಕಿಸುತ್ತಾಳೆ. ಮನೆಯ ಪ್ರಪಂಚದಲ್ಲಿ ತಂದೆ ಹೇಳಿದನ್ನೇ ಮತ್ತು ತೋರಿಸದನ್ನೇ ಬೆಳೆದ ಮೂವರು ಮಕ್ಕಳು (ಒಂದು ಗಂಡು, ಎರಡು ಹೆಣ್ಣು) ನಂಬಿಕೊಂಡಿರುತ್ತಾರೆ.

ಮೊದಲ ದೃಶ್ಯದಲ್ಲಿ ಸರಾಸರಿ ಹತ್ತೊಂಬತ್ತು ವಯಸ್ಸಿನ ಈ ಮೂರೂ ಮಕ್ಕಳು, ಟೇಪ್ರಿಕಾರ್ಡರಿನ ಸಹಾಯದಿಂದ ಪದಗಳ ತಪ್ಪಾದ ಅರ್ಥಗಳನ್ನು ಗಂಭೀರವಾಗಿ ಕಲಿಯುತ್ತಿರುತ್ತಾರೆ. ಅವರ ಲೋಕದಲ್ಲಿ ಟೆಲಿಫೋನ್ ಎಂದರೆ ಉಪ್ಪಿನ ಡಬ್ಬಿಯಂತಲೂ ಮತ್ತು ಸಮುದ್ರ ಎಂದರೆ ಚರ್ಮದಿಂದ ಮಾಡಿದ ಕುರ್ಚಿ ಎಂದು ಕಲಿಯುವುದು ಅವರ ಮನೆಶಾಲೆಯ ಭಾಗವಾಗಿರುತ್ತದೆ. ಹೀಗೆ ವಿಲಕ್ಷಣ ರೀತಿಯಲ್ಲಿ ಮುಂದುವರೆಯುವ ಸಿನಿಮಾದಲ್ಲಿ, ಈ ಮನೆ ಸದಸ್ಯರು ಒಂದು ದೇಶದ ಪ್ರಜೆಗಳಿಗೆ ಸಾಂಕೇತಿಕವಾಗಿಯೂ ಮತ್ತು ತಂದೆ ಫ್ಯಾಸಿಸ್ಟ್ ನಾಯಕನ ಪ್ರತೀಕವಾಗಿಯೂ ಕಾಣತೊಡಗುತ್ತಾನೆ. ಸಿನಿಮಾದಲ್ಲಿ ಯಾವುದೇ ರೀತಿಯ ವಿವರಣೆಯಾಗಲೀ ಅಥವಾ ಪೂರ್ವದ ಕಥೆಗಳನ್ನಾಗಲೀ ನಿರ್ದೇಶಕ ಹೇಳದೆ ಅಥವಾ ತೋರಿಸದೆ, ಪ್ರೇಕ್ಷಕನ ಮನಸ್ಸಿನಲ್ಲಿ ವಿವಿಧ ಪ್ರಶ್ನೆಗಳು ಹುಟ್ಟುವಂತೆ ಮಾಡುತ್ತಾನೆ.

ಫಾಸಿವಾದದ ದುರಾಡಳಿತದಲ್ಲಾಗುವ ವಿವಿಧ ಲಕ್ಷಣಗಳನ್ನು ನಿರ್ದೇಶಕ ಅದ್ಭುತವಾಗಿ ಕಟ್ಟಿಕೊಡುತ್ತಾನೆ. ಉದಾಹರಣೆಗೆ ತಪ್ಪು ಮಾಹಿತಿ/ಸಮಾಚಾರ, ಸಂಪೂರ್ಣವಾಗಿ ಸುದ್ದಿ ಮಾಧ್ಯಮಗಳ ಮೇಲಿನ ಹಿಡಿತ, ಅದನ್ನು ದಾಟಲು ಪ್ರಯತ್ನಿಸಿದವರನ್ನು ಕ್ರೂರವಾಗಿ ಶಿಕ್ಷಿಸುವುದು, ಇಡೀ ದೇಶವನ್ನು ಒಬ್ಬನೇ ಒಬ್ಬ ನಾಯಕ ಮಾತ್ರ ಮುನ್ನಡೆಸಲು ಸರ್ವಶಕ್ತ-ಮಿಕ್ಕವರೆಲ್ಲ ಅಸಮರ್ಥರು ಎಂಬ ತಪ್ಪು ಕಲ್ಪನೆ, ದೇಶಕ್ಕೆ ಅಪಾಯಕಾರಿ ವೈರಿಗಳಿಂದ ತೀವ್ರ ದಾಳಿಗಳಾಗಬಹುದೆಂಬ ಭ್ರಾಂತಿ ಮತ್ತು ಈ ಒಬ್ಬ ನಾಯಕನಿರುವುದರಿಂದಲೇ ಸುರಕ್ಷಿತರಾಗಿದ್ದೇವೆ ಎಂಬ ಪ್ರಪೊಗಾಂಡ, ಈ ನಾಯಕ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾನೆಂಬ ಭ್ರಮೆಗಳನ್ನು ಪ್ರಜೆಗಳ ಮನಸ್ಸಿನಲ್ಲಿ ತುಂಬಿಸಿ, ಪ್ರಶ್ನಾತೀತ ನಾಯಕನನ್ನಾಗಿಸಿ ವ್ಯಕ್ತಿಪೂಜೆ ಮಾಡುವಂತಹ ಸಂಗತಿಗಳನ್ನು ಈ ಸಿನಿಮಾದಲ್ಲಿ ರೂಪಕವಾಗಿ ಕಾಣಬಹುದು.

PC : Amargi Istanbul -WordPress.com (ಡಾಗ್‌ಟೂತ್)

ಡಾಗ್‌ಟೂತ್ ಸಿನಿಮಾದಲ್ಲಿ ಚಿತ್ರಿತವಾಗುವ ಈ ಕುಟುಂಬದಲ್ಲಿ, ಮನೆಯಿಂದ ಹೊರಗೆ ಹೋದರೆ ಅತಿ ಅಪಾಯ, ಬದುಕುಳಿಯುವುದು ಅಸಾಧ್ಯ ಎಂಬ ಭ್ರಮೆಯನ್ನು ಬೆಳೆದು ನಿಂತ, ಆದರೂ ಚಿಕ್ಕ ಮಕ್ಕಳಂತೆ ವರ್ತಿಸುವ ತರುಣ ವಯಸ್ಸಿನವರಲ್ಲಿ ತಲೆಯಲ್ಲಿ ಗಾಢಾವಾಗಿ ತುಂಬಲಾಗಿರುತ್ತದೆ. ಆಕಾಶದಲ್ಲಿ ಹಾರುವ ವಿಮಾನಗಳು ಅವರ ಅಂಗಳದಲ್ಲಿ ಆಟಿಕೆಯಾಗಿ ಬೀಳುವುದು ನಿಜವೆಂದುಕೊಂಡು ಬೆಳೆದಿರುತ್ತಾರೆ ಅವರು. ಆ ವಿಮಾನದ ಆಟಿಕೆಗಾಗಿ ಸಣ್ಣ ಮಕ್ಕಳಂತೆ ಹೊಡೆದಾಡುವ ಮತ್ತು ಒಮ್ಮೆ ಅಣ್ಣತಂಗಿಯರು ಸೇರಿ ಒಂದು ಹೊಸ ಆಟದ ಕುರಿತು ಮಾತನಾಡುವಾಗ, ಈ ಆಟದ ಹೆಸರೇನು ಚರ್ಚಿಸುವಾಗ, ಅರ್ಥವಾಗದೆ ಖಾಲಿಯಾಗಿ ನಿಂತು ಬಿಡುವ ದೃಶ್ಯಗಳಲ್ಲಿ, ಅವರು ಯೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡ ಜೈವಿಕ ಗೊಂಬೆಗಳಂತೆ ಕಾಣುತ್ತಾರೆ.

ಇಲ್ಲಿ ಯಾವ ಪಾತ್ರಗಳಿಗೂ ಹೆಸರುಗಳಿಲ್ಲ. ತಂದೆ ತನ್ನ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಆಗಿ ಕೆಲಸ ಮಾಡುವ ಹೆಣ್ಣನ್ನು ಕಣ್ಣಿಗೆ ಬಟ್ಟೆ ಕಟ್ಟಿ ಮನೆಗೆ ಕರೆತರುತ್ತಾನೆ. ಹೊರಗಿನ ಲೋಕದ ಬೇರೆ ವ್ಯಕ್ತಿಯನ್ನು ನೋಡಿದ ಮಕ್ಕಳು(ಬೆಳೆದ) ಖುಷಿಯಿಂದ ಅವಳ ಜೊತೆಯಲ್ಲಿ ಕುಳಿತುಕೊಳ್ಳುತ್ತಾರೆ. ತಂದೆ ಅವರನ್ನೆಲ್ಲ ಕೂರಿಸಿ ಸಂತೋಷಕ್ಕಾಗಿ ವಿಡಿಯೋ ಮಾಡುತ್ತಾನೆ. ಅವಳನ್ನು ಮನೆಗೆ ತಂದ ಉದ್ದೇಶವೆಂದರೆ ಬೆಳೆದ ಮಗನ ಲೈಂಗಿಕ ಕ್ರಿಯೆಗಾಗಿ ಮಾತ್ರ. ಮಕ್ಕಳ ಮುಗ್ಧತೆಯನ್ನು ಗಮನಿಸುವ ಗಾರ್ಡ್ ಒಬ್ಬ ಹುಡುಗಿಯನ್ನು ತನ್ನ ಲೈಂಗಿಕಾಸಕ್ತಿಗೆ ಬಳಸಿಕೊಳ್ಳುತ್ತಾಳೆ ಮತ್ತು ಅದಕ್ಕೆ ಬದಲಾಗಿ ಸಿನಿಮಾದ ಕ್ಯಾಸೆಟೊಂದನ್ನು ಕೊಡುತ್ತಾಳೆ. ಆ ಸಿನಿಮಾ ಕ್ಯಾಸೆಟ್‌ಅನ್ನು ಕದ್ದು ನೋಡುತ್ತಿರುವಾಗ ತಂದೆಯ ಕೈಗೆ ಸಿಕ್ಕಿಬಿದ್ದು ಕ್ರೂರವಾದ ಶಿಕ್ಷೆಗೆ ಒಳಪಡುತ್ತಾಳೆ.

ಮನೆಯಿಂದ ಯಾವಾಗ ಹೊರಹೋಗಬೇಕೆಂಬ ಪ್ರಶ್ನೆಯನ್ನು ಮಕ್ಕಳು ಕೇಳಿದಾಗ, ಅವರ ಕೋರೆಹಲ್ಲು ಬಿದ್ದ ಹೋದ ನಂತರ ಎನ್ನುವ ಉತ್ತರ ಸಿಗುತ್ತದೆ. ಕದ್ದು ಸಿನಿಮಾ ನೋಡಿದ ಹುಡುಗಿ ಕಬ್ಬಿಣದ ರಾಡಿನಿಂದ ತನ್ನ ಕೋರೆಹಲ್ಲನ್ನು ಹೊಡೆದು ಕಿತ್ತು, ಮನೆಯಿಂದ ಹೊರಹೋಗಲು ಪ್ರಯತ್ನಿಸುವುದೇ ಸಿನಿಮಾದ ಅಂತ್ಯ.

ದಿ ಲಾಬ್ಸ್‌ಟರ್(2015, ಇಂಗ್ಲಿಷ್)

ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ನಾಯಿಯಾಗಿರುವ ತನ್ನ ಅಣ್ಣನನ್ನು ಹಿಡಿದುಕೊಂಡು ಹೋಟಲಿಗೆ ಬರುತ್ತಾನೆ. ಅಲ್ಲಿದ್ದ ಸಿಬ್ಬಂದಿ, ನಲವತ್ತೈದು ದಿನಗಳಲ್ಲಿ ನಿಮ್ಮ ಬಾಳ ಸಂಗಾತಿಯನ್ನು ಹುಡುಕಿ ಸೇರದೆಹೋದರೆ ನೀವು ಯಾವ ಪ್ರಾಣಿಯಾಗಲು ಇಚ್ಛಿಸುತ್ತೀರಾ? ಎಂದು ಕೇಳಿದಾಗ, ಅದಕ್ಕೆ ಅವನು ಲಾಬ್ಸ್‌ಟರ್ ಎನ್ನುತ್ತಾನೆ.

ಈ ಸಿನಿಮಾ ನಮ್ಮ ಬದುಕಿನಲ್ಲಿ ಬಾಳ ಸಂಗಾತಿಯನ್ನು ಪಡೆಯುವ ಪ್ರಕ್ರಿಯೆ ಮತ್ತು ಇದರಲ್ಲಿ ಸೋತವರ ಬಗೆಗಿನ ಸಮಾಜದ ಕಠೋರತೆ, ಒಂಟಿಯಾಗಿ ಬದುಕುತ್ತಿರುವವರನ್ನು ಪ್ರಾಣಿಯಂತೆ ನೋಡುವ ದೃಷ್ಟಿಕೋನ, ನಿಗದಿತ ಅವಧಿಯಲ್ಲಿ ಮದುವೆಯಾಗದೇ ಹೋದರೆ ಬದುಕೆ ವ್ಯರ್ಥ ಎನ್ನುವ ಸಮಾಜದ ವಾದವನ್ನು ತನ್ನದೇ ಶೈಲಿಯಲ್ಲಿ ನಿರ್ದೇಶಕ ಚಿತ್ರಿಸಿದ್ದಾನೆ.

 

ಹೋಟಲಿನ ನಲವತ್ತೈದು ದಿನಗಳ ವಾಸದಲ್ಲಿ ಅಲ್ಲಿ ನೆಲೆಸಿದವರು ಜೋಡಿಯಾಗಿ ಬದುಕುವ ಅನುಕೂಲಗಳು ಮತ್ತು ಒಂಟಿಯಾಗಿರುವವರ ತೊಂದರೆಗಳನ್ನು ಚಿತ್ರಿಸಲಾಗಿದೆ. ದೈಹಿಕ ಊನಗಳನ್ನು ಹೊಂದಿರುವವರು ಬಾಳಸಂಗಾತಿಯನ್ನು ಹುಡುಕಿದರೆ ಮಾತ್ರ ಅದು ಒಳ್ಳೆಯ ಜೋಡಿ ಎನ್ನುವ ವಾದವನ್ನು ಕೆಲವರು ಮಂಡಿಸುತ್ತಾರೆ. ನೆಲೆಸಿರುವ ಸಮಯ ಹತ್ತಿರವಾದಂತೆ ಹೆಣ್ಣು, ಗಂಡುಗಳು ಜೋಡಿಯನ್ನು ಪಡೆಯುವ ಸಲುವಾಗಿ ಮಾಡುವ ಸುಳ್ಳು, ಮೋಸಗಳು, ಇವು ಫಲಿಸದೆ ಹೋದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಕೆಲವರು, ಹೋಟಲಿನಿಂದ ಹೊರಗೆ ಹೋಗಿ, ಕಾಡಿನಲ್ಲಿ ಒಂಟಿಯಾಗಿ ಬದುಕುವವರ ಗುಂಪಿಗೆ ಸೇರಿಕೊಳ್ಳುವ ಮತ್ತಷ್ಟು ಜನ, ಹೀಗೆ ಸಿನಿಮಾ ಮುಂದುವರೆಯುತ್ತದೆ.

ಈ ಕಥೆಯ ಮುಖ್ಯಪಾತ್ರಧಾರಿಯೂ ಕಾಡಿನ ಗುಂಪಿನೊಳಗೆ ಸೇರಿಕೊಳ್ಳುತ್ತಾನೆ. ಆದರೆ ಈ ಗುಂಪಿನ ನಿಯಮಗಳು ತದ್ವಿರುದ್ಧವಾಗಿರುತ್ತವೆ. ಒಂಟಿಯಾಗಿಯೇ ಇರಬೇಕು, ಯಾವುದೇ ಕಾರಣಕ್ಕೂ ಪ್ರೇಮ ಸ್ನೇಹ ಸಂಬಂಧಗಳನ್ನು ಇಟ್ಟುಕೊಳ್ಳಬಾರದು. ಆದರೆ ಮುಖ್ಯಪಾತ್ರಧಾರಿ ತನ್ನಂತೆಯೇ ದೃಷ್ಟಿದೋಷವಿರುವ ಹೆಣ್ಣನ್ನು ಇಷ್ಟಪಡುತ್ತಾನೆ. ಪರಸ್ಪರ ರಹಸ್ಯವಾಗಿ ಮೋಹಿಸುತ್ತಾರೆ. ಈ ವಿಷಯವನ್ನು ಗುಟ್ಟಾಗಿಡಲು ಪ್ರಯತ್ನಿಸಿದರೂ, ಅವರ ರಹಸ್ಯ ಮುರಿದಾಗ ಈ ಜೋಡಿಯಲ್ಲಿ ಆಗುವ ಬದಲಾವಣೆಗಳೇ ಸಿನಿಮಾದ ಕೊನೆ.

PC : Medium, (ದಿ ಲಾಬ್ಸ್‌ಟರ್)

ಒಂದು ಕಡೆ ಹೋಟಲಿನವರು ಮತ್ತೊಂದು ಕಡೆ ಕಾಡಿನವರನ್ನು ಬಿಟ್ಟು ಮೂರನೇ ಸಮೂಹವಿರುತ್ತದೆ. ಅಲ್ಲಿ ಸಾಮಾವಾಗಿ ಮಾಲ್‌ಗಳು, ಅಂಗಡಿಗಳು, ಮನೆಗಳು ಇರುತ್ತವೆ. ಅಲ್ಲಿ ಮದುವೆಯಾಗಿ/ಜೋಡಿಯಾಗಿ ಬದುಕುತ್ತಿರುವ ಸಮೂಹ ಇರುತ್ತದೆ. ಅದೇ ಮುಖ್ಯವಾಹಿನಿ. ಒಮ್ಮೆ ಮುಖ್ಯಪಾತ್ರಧಾರಿ ಒಂಟಿಯಾಗಿ ನಿಂತಿರುವಾಗ ಒಬ್ಬ ಪೊಲೀಸ್ ಅಧಿಕಾರಿ ಬಂದು, ನಿನ್ನ ಬಾಳಸಂಗಾತಿ ಎಲ್ಲಿ? ಮತ್ತು ನಿನ್ನ ಮದುವೆಯ ಪುರಾವೆಗಳನ್ನು ತೋರಿಸು ಎನ್ನುವಾಗ ಈ ನಮ್ಮ ನಾಗರಿಕ ಸಮಾಜ ಮದುವೆ/ಬಾಳಸಂಗಾತಿ ವಿಷಯದಲ್ಲಿ ನಿಯಮಗಳು, ನಿಬಂಧನೆಗಳನ್ನು ಮಾಡಿ, ವೈಯಕ್ತಿಕ ಬದುಕಿನ ಮೇಲೆ ಹೇರುವ ಒತ್ತಡಗಳು ಕಾಣತೊಡಗುತ್ತವೆ.

ನಾವು ಕೇಳುವ ಪ್ರತಿ ಕಥೆಯಲ್ಲೂ ನಾಯಕ ತನ್ನ ಬಾಳಸಂಗಾತಿಯನ್ನು ಗೆಲ್ಲಲೇಬೇಕು, ಅವಳನ್ನು ತೊಂದರೆಗಳಿಂದ ಕಾಪಾಡಲೇಬೇಕು, ಅದೇ ಕಥೆಯ ಸುಖಾಂತ್ಯ ಮತ್ತು ಸಮಾಜದ ಪದ್ಧತಿ ಎಂಬುದಾಗಿ ನಂಬಿಸಲಾಗಿಬಿಟ್ಟಿದೆ. ಈಗಲೂ ಒಬ್ಬ ವ್ಯಕ್ತಿ ಒಂಟಿಯಾಗಿ ಬದುಕುತ್ತಿದ್ದರೆ ಸಾಕು, ಅವನಲ್ಲಿ ದೋಷವಿರಬಹುದೆಂದು ಸಮಾಜವೇ ಊಹಿಸಿಕೊಳ್ಳುತ್ತದೆ. ಸಮಾಜದ ಯಾವುದೇ ಹಂತಗಳಲ್ಲಿಯಾದರೂ ಸರಿ, ಮದುವೆಯಾಗಿರುವವರ ಕುರಿತು ಮೃದು ಧೋರಣೆ, ಒಂಟಿಯಾಗಿರುವವರನ್ನು ಅಪರಾಧಿಗಳೆಂದು ನೋಡುವ ಸಮಾಜದ ಕಠೋರ ನಂಬಿಕೆಗಳನ್ನು ಈ ಸಿನಿಮಾ ನೈಜವಾಗಿ ತೋರಿಸುತ್ತದೆ.

ಯೊರ್ಗೊಸ್ ಲಾಂತಿಮೊಸ್

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪಾತ್ರಗಳು ಮತ್ತು ಅವುಗಳ ನಡುವಿನ ಸಂಘರ್ಷಗಳಿಂದ ಉಂಟಾಗುವ ಸನ್ನಿವೇಶಗಳನ್ನು ಕಥೆಯಾಗಿ ಚಿತ್ರಿಸಿ ಸಿನಿಮಾ ಮಾಡುತ್ತಾರೆ. ಆದರೆ ಗ್ರೀಸ್‌ನ ಯೊರ್ಗೊಸ್ ಲಾಂತಿಮೊಸ್ ಸೃಷ್ಟಿಸುವ ಪಾತ್ರಗಳು ಬದುಕುವ ಪ್ರಪಂಚ ಮತ್ತು ಅವರ ಬದುಕಿನ ನಿಯಮಗಳನ್ನು ಹೆಚ್ಚು ವಿಲಕ್ಷಣವಾಗಿರುತ್ತವೆ. ಇಲ್ಲಿ ಕಾಣುವ ಪ್ರಪಂಚ ನಾವು ಬದುಕುತ್ತಿರುವ ಸಮಾಜದ ನಂಬಿಕೆ ಮತ್ತು ಲೋಪಗಳನ್ನು ಪ್ರತಿಬಿಂಬಿಸುತ್ತಿದ್ದರೂ, ಅಲ್ಲಿ ಒಂದು ರೀತಿಯ ನಿರ್ಭಾವುಕತೆ ಇರುತ್ತದೆ ಮತ್ತು ಇವರು ಸಿನೆಮಾ ಕಟ್ಟಿಕೊಡುವ ಶೈಲಿ ನಿರ್ದಯಿಯಾಗಿರುತ್ತದೆ.

ಲಾಂತಿಮೊಸ್ ತಮ್ಮ ಸಿನಿಮಾ ಪ್ರಯಾಣವನ್ನು ಗ್ರೀಕ್ ಭಾಷೆಯ ಕೆನಿಟ್ಟಾ(2005), ಡಾಗ್‌ಟೂತ್(2009) ಮತ್ತು ಆಲ್ಪ್ಸ್(2011)ಗಳನ್ನು ಬರೆದು ನಿರ್ದೇಶನ ಮಾಡುವುದರ ಮೂಲಕ ಪ್ರಾರಂಭಿಸಿದರೂ, ಡಾಗ್‌ಟೂತ್ ಸಿನಿಮಾದ ಖ್ಯಾತಿಯಿಂದ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಮಾಡುವ ಅವಕಾಶಗಳು ಅವರಿಗೆ ತೆರೆದುಕೊಳ್ಳುತ್ತವೆ. ದಿ ಲ್ಯಾಬ್‌ಸ್ಟರ್(2015), ದಿ ಕಿಲ್ಲಿಂಗ್ ಅಫ್ ಎ ಸೇಕ್ರೆಡ್ ಡೀರ್(2017) ಮತ್ತು ದಿ ಫೇವರೆಟ್(2018) ಸಿನಿಮಾಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದು ನಿರ್ದೇಶಿಸುತ್ತಾರೆ. ಇವರ ಎಲ್ಲ ಸಿನಿಮಾಗಳು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿವೆ.

ಇವರ ಮೊದಲ ಸಿನಿಮಾಗಳ ಶೈಲಿಯನ್ನು ಗಮನಿಸಿದರೆ, ಕೇವಲ ದೃಶ್ಯಗಳು ಮತ್ತು ಶಬ್ದಗಳಿಂದಲೇ ಸಿನಿಮಾ ಕಟ್ಟುವುದು, ಹಿನ್ನೆಲೆ ಸಂಗೀತವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಶೈಲಿ ಇದೆ. ಕಥೆ ಕೇವಲ ನೆಪಾ ಮಾತ್ರ. ದೃಶ್ಯ ಮತ್ತು ಶಬ್ದಗಳಿಂದಲೇ ಪ್ರೇಕ್ಷಕನ ಮನಸ್ಸಿನಲ್ಲಿ ಭಾವನೆಗಳು ಅಥವಾ ಪ್ರಶ್ನೆಗಳನ್ನು ಮೂಡಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಡಾಗ್‌ಟೂತ್ ಸಿನಿಮಾದಲ್ಲಿ ಮೂವರು ಬೆಳೆದ ಮಕ್ಕಳನ್ನು, ಫ್ರೇಮ್‌ನಲ್ಲಿ ತಲೆಗಳಿಲ್ಲದೇ ಬರೀ ದೇಹ, ಕೈಗಳು ಮತ್ತು ಕಾಲುಗಳನ್ನು ಮಾತ್ರ ತೋರಿಸುವುದರಿಂದ, ಅವರು ತಲೆಯಿಲ್ಲದ ಅಂದರೆ ಯೋಚಿಸಲಾಗದ ಗೊಂಬೆಗಳು ಎನ್ನುವುದನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತಾರೆ.

PC : IMDb, (ಯೊರ್ಗೊಸ್ ಲಾಂತಿಮೊಸ್)

ದಿ ಲಾಬ್ಸ್‌ಟರ್ ಸಿನಿಮಾದಲ್ಲಿ ಬಳಸುವ ಬಣ್ಣಗಳು ಅತ್ಯಂತ ಖಿನ್ನತೆ ಮತ್ತು ಕೊರಗನ್ನು ಸಂಕೇತಿಸುತ್ತವೆ. ಯಾವುದೇ ಪಾತ್ರಗಳು ಭಾವೋದ್ವೇಗವನ್ನು ಪ್ರದರ್ಶಿಸದೆ, ಎಲ್ಲ ಭಾವನೆಗಳನ್ನು ಅಮುಕಿ ಹಿಡಿದಾಗ ಮೂಡುವ ನಿರ್ಭಾವುಕತೆಯನ್ನು ವೀಕ್ಷಕ ಅನುಭವಿಸುವಂತೆ ಮಾಡುವುದೇ ವಿಚಿತ್ರ. ಸಾಮಾನ್ಯವಾಗಿ ನಿರ್ದೇಶಕರು ಸಿನಿಮಾ ನೋಡುತ್ತಿದ್ದೇವೆಂಬ ಪ್ರಜ್ಞೆಯನ್ನು ಮರೆಸುವಂತೆ ಕಥೆಯೊಳಗೆ ಕರೆದುಕೊಂಡು ಹೋಗುವುದು ವಾಡಿಕೆ, ಆದರೆ ಲಾಂತಿಮೊಸ್ ಮಾತ್ರ ವೀಕ್ಷಕನಿಗೆ ಇದು ಸಿನಿಮಾ ಎಂಬುದನ್ನು ತನ್ನ ಫ್ರೇಮ್ ಸಂಯೋಜನೆಯಲ್ಲಿ ಮತ್ತು ಕ್ಯಾಮರಾದ ಚಲನೆಯಲ್ಲಿ ಸದಾ ನೆನಪಿಸುತ್ತಾನೆ.

ದಿ ಫೇವರಿಟ್ ಸಿನಿಮಾದಲ್ಲಿ ಇಂಗ್ಲೆಂಡಿನ ರಾಣಿಯ ಅರಮನೆಯಲ್ಲಿ ರಾಣಿಯ ಫೇವರಿಟ್ ಆಗಲು ನಡೆಯುವ ಇಬ್ಬರು ಹೆಂಗಸರ ಪ್ರಯತ್ನಗಳೇ ಕಥೆ. ಈ ಸಿನಿಮಾದಲ್ಲಿ ಬರುವ ಗಂಡಸರೆಲ್ಲ ಅತಿ ಹೆಚ್ಚಾಗಿ ಮೇಕಪ್ ಹಾಕಿ, ವಿಧೇಯಕವಾಗಿರುತ್ತಾರೆ ಆದರೆ ಹೆಂಗಸರು ಸಹಜವಾಗಿ ಯಾವುದೇ ಮೇಕಪ್ ಇಲ್ಲದೆ, ಬಲಿಷ್ಠರಾಗಿ ಅಧಿಕಾರವನ್ನು ಮುನ್ನೆಡೆಸುತ್ತಾರೆ.

ದಿ ಕಿಲ್ಲಿಂಗ್ ಅಫ್ ಎ ಸೇಕ್ರೆಡ್ ಡೀರ್ ಸಿನಿಮಾ ಸಹಜವಾಗಿ ಶುರುವಾದರೂ ಕೊನೆಗೆ ಮ್ಯಾಜಿಕ್ ರಿಯಲಿಸಂನತ್ತ ಸಾಗಿ, ಪಾತ್ರಗಳು ತಮ್ಮ ನಿಯಂತ್ರಣ ಕಳೆದುಕೊಂಡು ತರ್ಕಕ್ಕೆ ನಿಲುಕದಂತಾಗುತ್ತವೆ.

ಹೀಗೆ ಲಾಂತಿಮೊಸ್‌ನ ಪ್ರತಿ ಸಿನಿಮಾವೂ ವೀಕ್ಷಕನ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳಾಗದೆ, ಪ್ರೇಕ್ಷಕನ ಬುದ್ಧಿಮತ್ತೆಯನ್ನು ಮೇಲೆಕ್ಕೇರಿಸುವ ಮತ್ತು ಪ್ರಶ್ನೆಗಳನ್ನು ಹೆಚ್ಚಿಸುವ ಸಿನಿಮಾಗಳಾಗಿವೆ.


ಇದನ್ನೂ ಓದಿ: ತಾರಾ ದಂಪತಿಯ ಖಾಸಗಿ ಸಂಗತಿಗಳನ್ನೆ ಬಂಡವಾಳವಾಗಿರಿಸಿಕೊಂಡಿರುವ ಪತ್ರಿಕೋದ್ಯಮದ ನಡುವೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...