Homeಆರೋಗ್ಯಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಮತ್ತು ಕಳವಳಗಳು: ಜನ ಆರೋಗ್ಯ ಚಳವಳಿ

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಮತ್ತು ಕಳವಳಗಳು: ಜನ ಆರೋಗ್ಯ ಚಳವಳಿ

ಯಾವ ಲಸಿಕೆ ಪಡೆಯಬೇಕು ಎಂಬ ಆಯ್ಕೆ ಜನರಿಗಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಆದರೆ ಇದರ ದುಷ್ಪರಿಣಾಮ ಅಗಾಧವೂ ಆಗಬಹುದು.

- Advertisement -
- Advertisement -

2021ರ ಜನವರಿ 16ರಂದು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ 19 ವ್ಯಾಕ್ಸಿನೇಷನ್‌ನ ಮೊದಲ ಹಂತವನ್ನು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಆರಂಭಿಸಿಯಾಗಿದೆ.

ಭಾರತದಲ್ಲಿ ಸದ್ಯ ಅನುಮತಿ ಪಡೆದಿರುವ ಎರಡು ಲಸಿಕೆಗಳಿಗೆ ಸಂಬಂಧಿಸಿದ ಕೆಲವು ಗೊಂದಲದ ಘಟನೆಗಳು ಇನ್ನೂ ಮುಂದುವರೆದಿವೆ. ಅದರಲ್ಲೂ ಕೊವ್ಯಾಕ್ಸಿನ್ ಲಸಿಕೆಯ 3ನೆ ಹಂತದ ಟ್ರಯಲ್ ಕೂಡ ಪೂರ್ಣಗೊಂಡಿಲ್ಲ ಮತ್ತು ಅದರ ಪರಿಣಾಮಾಕಾರಿತ್ವದ ಬಗ್ಗೆ ಸಿಕ್ಕಾಪಟ್ಟೆ ಸಂಶಯಗಳು ಉಳಿದಿದ್ದು, ಪ್ರಶ್ನಾರ್ಹವಾಗಿವೆ. ಭೋಪಾಲ್‌ನಲ್ಲಿ ಕೋವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗ  ಈ ಅನುಮಾನಕ್ಕೆ ದಟ್ಟ ಸಾಕ್ಷಿ ಒದಗಿಸಿದೆ. ಈ ಕಾರಣಕ್ಕೆ ಲಸಿಕಾ ಅಭಿಯಾನದಲ್ಲಿ  ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸವನ್ನು ಕುಂದಿಸಿವೆ.

ಸಾಂಕ್ರಾಮಿಕದ ಸಂದರ್ಭಗಳಲ್ಲಿ ಮರಣ ಮತ್ತು ಕಾಯಿಲೆ ಪ್ರಮಾಣ ಕುಗ್ಗಿಸಲು ಲಸಿಕೆಗಳು ಅಮೂಲ್ಯವಾದ ಕೊಡುಗೆಗಳನ್ನು ನೀಡಿವೆ  ಎಂದು ಕರ್ನಾಟಕ ಜನಾರೋಗ್ಯ ಚಳುವಳಿ (ಕೆಜೆಸಿ) ಅಭಿಪ್ರಾಯಪಟ್ಟಿದೆ. ಈ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ, ಸಾರ್ವಜನಿಕರ ನಂಬಿಕೆಯನ್ನು ಕಡಿಮೆ ಮಾಡುವ ಯಾವುದೇ ಕ್ರಮವು, ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ತೆಗೆದುಕೊಳ್ಳುತ್ತಿರುವ ದೇಶದ ನಿರಂತರ ಮತ್ತು ಗಂಭೀರ ಪ್ರಯತ್ನಗಳಿಗೆ ಅಡಚಣೆಯಾಗಿದೆ. ಈ ಸನ್ನಿವೇಶದಲ್ಲಿಯೇ ಕೆಜೆಸಿ ತನ್ನ ಕಳವಳಗಳನ್ನು ಮುಂದಿಡಲು ಬಯಸುತ್ತದೆ.

ಕರ್ನಾಟಕ ಸರ್ಕಾರವು ಈ ಕಳವಳಗಳಿಗೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮನೋಭಾವದಿಂದ ಸ್ಪಂದಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಸಾಂಕ್ರಾಮಿಕ ನಿರ್ವಹಣೆಯ ಆರಂಭದಲ್ಲಿ ಹರಡಿದ್ದ ಸುಳ್ ಸುದ್ದಿಗಳು ಮತ್ತು ತಪ್ಪು ಮಾಹಿತಿಗಳಿಗೆ ತಡೆ ಹಾಕಲು ಇದು ಸಹಕರಿಯಗಲಿದೆ.

ತುರ್ತು ಬಳಕೆಗೆ ಎರಡು ಲಸಿಕೆಗಳಿಗೆ ಅಧಿಕೃತತೆ

ಸಾವಿನ ಪ್ರಮಾಣವು ತುಂಬಾ ಹೆಚ್ಚಿರುವ ಸಾಂಕ್ರಾಮಿಕ ರೋಗವನ್ನು ನಾವು ಎದುರಿಸಿದಾಗ ಮಾತ್ರ ಲಸಿಕೆಗಳಿಗೆ ತುರ್ತು ಬಳಕೆಯ ಅಧಿಕೃತತೆಯನ್ನು ನೀಡಲಾಗುತ್ತದೆ. ಎಬೋಲಾ ಸಾಂಕ್ರಾಮಿಕದ  ಸಾವಿನ ಪ್ರಮಾಣ 40% ಆಗಿದ್ದರಿಂದ ಆಫ್ರಿಕಾದಲ್ಲಿ ಈ ಕ್ರಮವನ್ನು  ಅನುಸರಿಸಲಾಯಿತು. ಕೋವಿಡ್ 19 ಸನ್ನಿವೇಶದಲ್ಲಿ, ಕೆಲವು ದೇಶಗಳ ಸೋಂಕು ಪ್ರಮಾಣದಲ್ಲಿ ವಿಪರೀತ ಹೆಚ್ಚಳ  ಮತ್ತು ಸಾವಿನ ಸಂಖ್ಯೆಯಲ್ಲಿ ಪ್ರಮಾಣಾನುಗುಣವಾಗಿ ಹೆಚ್ಚಳವನ್ನು ಕಾಣುತ್ತಿವೆ. ಆದ್ದರಿಂದ ಅಂತಹ ದೇಶಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿರುವ ಯಾವುದೇ ಲಸಿಕೆಗಳಿಗೆ ತುರ್ತು ಬಳಕೆಗೆ ಅವಕಾಶ ನೀಡಬಹುದು.

ಆ ದೇಶಗಳಿಗೆ (ಯುಎಸ್ ಮತ್ತು ಯುಕೆನಂತಹ) ವ್ಯತಿರಿಕ್ತವಾಗಿ, ಕರ್ನಾಟಕ ಮತ್ತು ಬೆಂಗಳೂರು ಸೇರಿದಂತೆ ಭಾರತದಲ್ಲಿ ಸೋಂಕಿನ ಸಂಖ್ಯೆಯು ಕಳೆದ ಕೆಲವು ತಿಂಗಳುಗಳಿಂದ ಇಳಿಮುಖವಾಗಿದೆ. ಉದಾಹರಣೆಗೆ, 2021ರ ಜನವರಿ 14 ರ ಹೊತ್ತಿಗೆ ಭಾರತವು ಸತತ 7 ದಿನಗಳ ಕಾಲದಲ್ಲಿ 20,000 ಕ್ಕಿಂತ ಕಡಿಮೆ ಸೋಂಕುಗಳನ್ನು ಕಂಡಿದೆ.  ಎರಡನೆಯದಾಗಿ, ಸಾವಿನ ಪ್ರಮಾಣ 40% ಆಗಿದ್ದ ಎಬೊಲಾದಂತಹ ಕಾಯಿಲೆಗಳಿಗೆ ಹೋಲಿಸಿದರೆ, ಕೋವಿಡ್ 19 ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ. ಭಾರತದಲ್ಲಿ ಕೋವಿಡ್ 19ರ ಸಾವಿನ ಪ್ರಮಾಣ 1.4% ಆಗಿದ್ದು, ಕೋವಿಡ್ 19 ಸಂಬಂಧಿತ ತೊಡಕುಗಳನ್ನು ನಿರ್ವಹಿಸುವ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ, ಇದನ್ನು ನಿಯಂತ್ರಿಸಲು ಯತ್ನಿಸಬಹುದು.

ಇಂತಹ ಸನ್ನಿವೇಶದಲ್ಲಿ, SARS CoV2 ವೈರಸ್ ಹರಡುವುದನ್ನು ತಡೆಯದ, ಆದರೆ ಕೋವಿಡ್ 19 ರೋಗದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿರುವ ಲಸಿಕೆಗಳನ್ನು ಅನುಮೋದಿಸಲು ಸರ್ಕಾರ ಏಕೆ ಮುಂದಾಗುತ್ತಿದೆ? ಅದೂ ಇದರ ಪರಿಣಾಮಕಾರಿತ್ವವು ಪ್ರಶ್ನಾರ್ಹವಾಗಿರುವ ಸಂದರ್ಭದಲ್ಲಿ?

ಮಧ್ಯಪ್ರದೇಶ: ಇದು ಪ್ರಯೋಗ ಎಂದು ಹೇಳದೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!
PC: Google

ತುರ್ತು ಬಳಕೆಯ ಅನುಮತಿಗೆ  ಅನುಸರಿಸಿದ ಪ್ರಕ್ರಿಯೆ

ಇಂಗ್ಲೆಂಡ್ ಮತ್ತು ಬ್ರೆಜಿಲ್‌ನಲ್ಲಿ ನಡೆಸಿದ ಪ್ರಯೋಗಗಳ ಪರಿಣಾಮಕಾರಿತ್ವದ ಮಾಹಿತಿಯ ಆಧಾರದ ಮೇಲೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆ ಇಲ್ಲಿ ಪರಿಣಾಮಕಾರಿತ್ವದ (ಇಯುಎ) ಸರ್ಟಿಫಿಕೇಟ್ ಪಡೆದಿದೆ. ಭಾರತದಲ್ಲಿ 1600 ಸ್ವಯಂಸೇವಕರ ಮೇಲೆ ನಡೆಸಿದ ಟ್ರಯಲ್ ಡೇಟಾವನ್ನು ಆ ಈ ಕಂಪನಿ ಪ್ರಸ್ತುತಪಡಿಸಿಲ್ಲ. ಮತ್ತೊಂದೆಡೆ ಕೋವಾಕ್ಸಿನ್ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಡೇಟಾವೂ ಲಭ್ಯವಿಲ್ಲ. ಆದರೂ ಇದು CDSCO (ಕೇಂದ್ರ ಔಷಧ ನಿಯಂತ್ರಕ ಮಂಡಳಿ) ಪ್ರೋಟೋಕಾಲ್ ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಇಯುಎಯನ್ನು ಸ್ವೀಕರಿಸಿದೆ. ಆದ್ದರಿಂದ ಈ ಲಸಿಕೆಗಳು ಕಡಿಮೆ ಮಟ್ಟದ ಪರಿಣಾಮಕಾರಿತ್ವವನ್ನು ಹೊಂದಿರಬಹುದು ಅಥವಾ ಅವುಗಳ ವ್ಯಾಪಕ ಬಳಕೆಯನ್ನು ಖಾತರಿಪಡಿಸುವಷ್ಟು ಪರಿಣಾಮಕಾರಿಯಾಗಿಲ್ಲ ಎಂದು ತೋರುತ್ತದೆ. ಅನುಮೋದಕರು ಇಟ್ಟ ತಪ್ಪು ಹೆಜ್ಜೆಯ ಕಾರಣಕ್ಕೆ  ಅಮೂಲ್ಯ ಸಾರ್ವಜನಿಕ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ ಎಂದು ಅನಿಸುವುದಿಲ್ಲವೆ? ನಿಯಂತ್ರಕರು ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸಿದರು ಮತ್ತು ಅವರಿಗೆ ಸುಳ್ಳು ಭದ್ರತೆಯ ಭಾವನೆಯನ್ನು ಮೂಡಿಸಿದರು ಎಂದು ಸಹ ಇದು ಸೂಚಿಸುವುದಿಲ್ಲವೇ?

ಈ ಎರಡು ಅಧಿಕೃತ ಲಸಿಕೆಗಳು ನಿಜವಾಗಿ ಏನು ಮಾಡುತ್ತವೆ?

ಲಸಿಕೆಯ ನಿರ್ದಿಷ್ಟ ಕ್ರಿಯೆಯ ಬಗ್ಗೆ ಜನರಲ್ಲಿ ಸ್ವಲ್ಪವೂ ಸ್ಪಷ್ಟತೆ ಇಲ್ಲ. ಇದು ವ್ಯಕ್ತಿಯನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸುತ್ತದೆಯೇ? ಅಥವಾ ಸೋಂಕಿತ ವ್ಯಕ್ತಿಯಿಂದ ಇತರರಿಗೆ ಹರಡುವುದನ್ನು ಇದು ತಡೆಯುತ್ತದೆಯೇ? ಅಥವಾ ಇದು ಕೋವಿಡ್ 19 ರೋಗವು ತೀವ್ರ ಹಂತಕ್ಕೆ ಹೋಗುವುದನ್ನು ತಡೆಯುತ್ತದೆಯೇ? ಮತ್ತು ಅದು ಯಾವ ರೀತಿಯ ರಕ್ಷಣೆಯನ್ನು ನೀಡುತ್ತದೆ, ಅಂತಹ ರಕ್ಷಣೆ ಎಷ್ಟು ಕಾಲ ಉಳಿಯುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಇದರ ಪರಿಣಾಮ  ವಾರಗಳು, ತಿಂಗಳುಗಳು ಅಥವಾ ವರ್ಷಗಳವರೆಗೆ ಉಳಿಯುತ್ತದೆಯೇ? ಈ ಲಸಿಕೆ ಬಹಳ ಕಡಿಮೆ ಅವಧಿಗೆ ರಕ್ಷಣೆ ನೀಡಿದರೆ, ಅದಕ್ಕಾಗಿ ವ್ಯಯಿಸುವ ಶ್ರಮ ಮತ್ತು ಸಂಪನ್ಮೂಲಗಳು ಯೋಗ್ಯವಾಗಿದೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡನ್ನೂ ನೀಡಲಾಗುತ್ತದೆಯೇ?

2021ರ ಜನವರಿ 13ರಂದು ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಆರೋಗ್ಯ ಸಚಿವರು, ಲಸಿಕೆ  ಸ್ವೀಕರಿಸುವವರು ಎರಡು ಲಸಿಕೆಗಳ ನಡುವೆ ತಮ್ಮ ಆಯ್ಕೆಯನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೆಲವು ಘಟ್ಟಗಳಲ್ಲಿ ಸಾಬೀತಾದ ಪರಿಣಾಮಕಾರಿತ್ವವನ್ನು ಹೊಂದಿರುವ ಕೋವಿಶೀಲ್ಡ್  ಅನ್ನು ಕೆಲವರಿಗೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಡೇಟಾವನ್ನು ಹೊಂದಿಲ್ಲದ  ಕೋವಾಕ್ಸಿನ್ ಅನ್ನು ಕೆಲವರಿಗೆ ನೀಡುವುದು ಅನೈತಿಕವಾಗುತ್ತದೆ.  ಯಾರಿಗೆ ಕೊವ್ಯಾಕ್ಸಿನ್, ಯಾರಿಗೆ ಕೊವಿಶೀಲ್ಡ್ ಎಂಬುದನ್ನು ಸರ್ಕಾರ ಯಾವ ಆಧಾರದಲ್ಲಿ ನಿರ್ಧರಿಸುತ್ತಿದೆ? ಕೋವಿಶೀಲ್ಡ್ ಸರಬರಾಜಿನಲ್ಲಿ ಕೆಲವು ಸಮಸ್ಯೆಗಳಿದ್ದರೆ ಅಥವಾ ಅಂತಹ ಇತರ ಸಮಸ್ಯೆಗಳಿದ್ದರೆ ಮಾತ್ರ ಕೋವಾಕ್ಸಿನ್  ಅನ್ನು ಬಳಸಬಹುದು  ಎಂದು ವಿಷಯ ತಜ್ಞರ ಸಮಿತಿಯು ಸೂಚಿಸಿದೆ.

ಆದರೆ ಕನಿಷ್ಠ ಕರ್ನಾಟಕದಲ್ಲಾದರೂ ಅದು ಹಾಗೆ ಕಾಣುತ್ತಿಲ್ಲ. ಅದರ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಯಾವುದೇ ಮಾಹಿತಿಯಿಲ್ಲದ ಕೋವಾಕ್ಸಿನ್ ಅನ್ನು ಪ್ರಯೋಗಿಸಲು ರಾಜ್ಯ ಸರ್ಕಾರ ಏಕೆ ಉತ್ಸುಕವಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಕೊವಾಕ್ಸಿನ್: ‘ಕ್ಲಿನಿಕಲ್ ಟ್ರಯಲ್ ಮೋಡ್’

‘ಕ್ಲಿನಿಕಲ್ ಟ್ರಯಲ್ ಮೋಡ್’ನ ಅರ್ಥವನ್ನು ಯಾರೂ ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. ಲಸಿಕೆ ತೆಗೆದುಕೊಳ್ಳುವವರನ್ನು ಕೊವಾಕ್ಸಿನ್‌ನ 3ನೇ ಹಂತದ ಪ್ರಯೋಗದಲ್ಲಿ ಭಾಗವಹಿಸುವವರು ಎಂದು ಪರಿಗಣಿಸಲಾಗಿದೆಯೆ? ಅದು ನಿಜವಾಗಿದ್ದರೆ, ಲಸಿಕೆ ತೆಗೆದುಕೊಳ್ಳುವವರಲ್ಲಿ ಹೆಚ್ಚಿನವರು ತಾವು ತೆಗೆದುಕೊಂಡದ್ದನ್ನು ತಿಳಿದಿರುವುದರಿಂದ ಅದು ಯಾವ ರೀತಿಯ ಕ್ಲಿನಿಕಲ್ ಪ್ರಯೋಗವಾಗಿರುತ್ತದೆ?

ಕೋವಿಡ್ 19 ವ್ಯಾಕ್ಸಿನೇಷನ್ ಅಭಿಯಾನದಲ್ಲಿ  ಭಾಗವಹಿಸುವುದು ಆರೋಗ್ಯ ಕಾರ್ಯಕರ್ತರಿಗೆ ಸ್ವಯಂಪ್ರೇರಿತವಾಗಿದೆಯೇ?

ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರನ್ನು ಸ್ವಯಂಪ್ರೇರಣೆಯಿಂದ ಮುಂದೆ ಬರಲು ಕೇಳಲಾಗುತ್ತಿದೆ ಎಂದು ಸರ್ಕಾರ ಹೇಳುತ್ತದೆ.  ಇದರರ್ಥ, ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನಿರಾಕರಿಸಬಹುದು ಎಂದಲ್ಲವೆ? ಅವರು ಈ ಆಯ್ಕೆಯನ್ನು ಒಪ್ಪಿದರೆ  ಅದರ ಪರಿಣಾಮಗಳು ಯಾವುವು? ವ್ಯಾಕ್ಸಿನೇಷನ್ ಅಭಿಯಾನದಲ್ಲಿ  ಭಾಗವಹಿಸಲು ನಿರಾಕರಿಸುವುದುಯಿಂ, ಅವರ ಲಭಿಸುವ ಪ್ರಯೋಜನಗಳ ನಷ್ಟಕ್ಕೆ ಕಾರಣವಾಗುವುದೇ? ಗುತ್ತಿಗೆ ನೌಕರರು ಮತ್ತು ಉದ್ಯೋಗ ಭದ್ರತೆಯ ಕೊರತೆಯಿರುವ ಆಶಾ ಕಾರ್ಮಿಕರ ಸಂದರ್ಭದಲ್ಲಿ ಈ ಪ್ರಶ್ನೆಯು ಇನ್ನು ಮುಖ್ಯವಾಗಿದೆ.

ಲಸಿಕೆ ಪಡೆಯುವವರು ನಿಯೋಜಿಸಲಾಗಿರುವ ಎರಡು ಲಸಿಕೆಗಳ ನಡುವೆ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.  ಎರಡರಲ್ಲಿ ಇದೇ ಲಸಿಕೆ ಬೇಕು ಎಂದು ಕೇಳುವಂತಿಲ್ಲ! ಆರೋಗ್ಯ ಕಾರ್ಯಕರ್ತರು ಅಂತಹ ಆಯ್ಕೆಯನ್ನು (ಇಂಥದ್ದೇ ಲಸಿಕೆಯಿರಲಿ ಎಂಬ ಆಯ್ಕೆ) ಚಲಾಯಿಸಿದರೆ ಅನೇಕ ಜನರು ಒಂದು ನಿರ್ದಿಷ್ಟ ಲಸಿಕೆಯನ್ನು ಆರಿಸಿಕೊಳ್ಳದಿರಬಹುದು ಎಂಬ ಆತಂಕ ಸರ್ಕಾರಕ್ಕಿದೆಯೇ? ಇದು ನಿಜವಾಗಿದ್ದರೂ ಸಹ ಸರ್ಕಾರ ಯಾಕೆ ಕೊವಾಕ್ಸಿನ್ ಬಗ್ಗೆ ಪ್ರೀತಿ ತೊರಬೇಕು?

ಪ್ರತಿಕೂಲ ಘಟನೆಗಳು ಯಾವುವು?

ಕೋವಿಶೀಲ್ಡ್ ನ ಫ್ಯಾಕ್ಟ್-ಶೀಟ್ “ಬಹಳ ಸಾಮಾನ್ಯ”, “ಸಾಮಾನ್ಯ” ಮತ್ತು “ಅಸಾಮಾನ್ಯ” ಅಡ್ಡಪರಿಣಾಮಗಳನ್ನು ಈ ಕೆಳಗಿನಂತೆ ಉಲ್ಲೇಖಿಸುತ್ತದೆ:

“10 ಜನರಲ್ಲಿ 1 ಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಅಡ್ಡಪರಿಣಾಮಗಳು ನೋವು, ಉಷ್ಣತೆ, ಚರ್ಮದ ಕೆಂಪಾಗುವಿಕೆ, ತುರಿಕೆ ಅಥವಾ ಚುಚ್ಚುಮದ್ದನ್ನು ನೀಡಿದ ಸ್ಥಳದಲ್ಲಿ ಬಾವು,  ಸಾಮಾನ್ಯವಾಗಿ ಅನಾರೋಗ್ಯ, ಆಯಾಸ, ಶೀತ, ತಲೆನೋವು, ವಾಕರಿಕೆ ಮತ್ತು ಕೀಲುನೋವು”.

“10 ಜನರಲ್ಲಿ 1 ರವರೆಗೆ ಪರಿಣಾಮ ಬೀರುವ ಸಾಮಾನ್ಯ ಅಡ್ಡಪರಿಣಾಮಗಳು ಇಂಜೆಕ್ಷನ್ ಸ್ಥಳದಲ್ಲಿ ಬಾವು, ಜ್ವರ, ವಾಂತಿ ಮತ್ತು ಜ್ವರ ತರಹದ ರೋಗಲಕ್ಷಣಗಳಾದ ಅಧಿಕ ತಾಪಮಾನ, ನೋಯುತ್ತಿರುವ ಗಂಟಲು, ಸ್ರವಿಸುವ ಮೂಗು, ಕೆಮ್ಮು ಮತ್ತು ಶೀತ”.

“100 ಜನರಲ್ಲಿ 1 ರವರೆಗೆ ಪರಿಣಾಮ ಬೀರುವ ಅಸಾಮಾನ್ಯ ಅಡ್ಡಪರಿಣಾಮಗಳು ತಲೆತಿರುಗುವಿಕೆ, ಹಸಿವು ಕಡಿಮೆಯಾಗುವುದು, ಹೊಟ್ಟೆ ನೋವು, ವಿಸ್ತರಿಸಿದ ದುಗ್ಧರಸ ಗ್ರಂಥಿಗಳು, ಅತಿಯಾದ ಬೆವರು ಮತ್ತು ಚರ್ಮದ ದದ್ದುಗಳು”.

ಆದಾಗ್ಯೂ, ಲಸಿಕೆ ಹಾಕಿದ ಹತ್ತು ದಿನಗಳ ನಂತರ ತೀವ್ರವಾದ ಎನ್ಸೆಫಲೋಪತಿಯನ್ನು ಅಭಿವೃದ್ಧಿಯಾದ ಕಾರಣ ಚೆನ್ನೈನ ಒಬ್ಬ ಸ್ವಯಂಸೇವಕರು  ಎಸ್‌ಐಐ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಎಸ್‌ಐಐ ಮತ್ತು ಟ್ರಯಲ್ ನಡೆಯುತ್ತಿರುವ ಆಸ್ಪತ್ರೆಯು ದೂರನ್ನು ತಳ್ಳಿ ಹಾಕಿದ್ದು,  ಪ್ರಯೋಗದಿಂದ ಆದ ಸಮಸ್ಯೆ ಇದಲ್ಲ ಎಮದು ಜಾರಿಕೊಂಡಿವೆ. ಆದರೆ ನಂತರ ಈ ಸ್ಥಿತಿಗೆ ಕಾರಣವೇನು ಎಂಬುದನ್ನು ಅವರು ವಿವರಿಸುವುದಿಲ್ಲ. ಅದೇ ರೀತಿ ಭೋಪಾಲ್‌ನಲ್ಲಿ ನಡೆದ ಕೋವಾಕ್ಸಿನ್ ಟ್ರಯಲ್ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಭೋಪಾಲ್ ಅನಿಲ ದುರಂತದ ಸಂತ್ರಸ್ತರನ್ನು ಈ ಟ್ರಯಲ್ ನಲ್ಲಿ ಭಾಗವಹಿಸಲು ಅನೈತಿಕವಾಗಿ ಆಯ್ಕೆ  ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಹಲವು ಸಂಘಟನೆಗಳು  ಭಾರತ್ ಬಯೋಟೆಕ್ ವಿರುದ್ಧ ಪ್ರತಿಭಟನೆ ದಾಖಲಿಸಿವೆ. ಆದರೆ ಭಾರತ್ ಬಯೋಟೆಕ್ ಈ ಯಾವುದೇ ಲೋಪಗಳ ಜವಾಬ್ದಾರಿ ಹೊತ್ತುಕೊಳ್ಳು ಸಿದ್ಧವಿಲ್ಲ. ಇಂತಹ ಘಟನೆಗಳು ಲಸಿಕೆ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟು ಮಾಡುತ್ತವೆ.  ಇದಕ್ಕೆ ಲಸಿಕೆ ತಯಾರಕರ ಪ್ರತಿಕ್ರಿಯೆ ಇನ್ನಷ್ಟು ಕಳವಳ ಮೂಡಿಸುತ್ತದೆ.

ವ್ಯಾಕ್ಸಿನೇಷನ್
PC: PTI

ಗಂಭೀರ ಸ್ಥಿತಿ ಮತ್ತು ಟೋಲ್ ಫ್ರೀ ಕಾಲ್

ಕೋವಿಡ್‌ಶೀಲ್ಡ್ ಫ್ಯಾಕ್ಟ್ ಶೀಟ್ ಯಾವುದೇ ಪ್ರತಿಕೂಲ ಘಟನೆಗಳ ಸಂದರ್ಭದಲ್ಲಿ ಕರೆ ಮಾಡಲು ಟೋಲ್ ಫ್ರೀ ಸಂಖ್ಯೆಯನ್ನು ನೀಡೀದೆ. ಆದರೆ ಈ ಟೋಲ್ ಫ್ರೀ ಸಂಖ್ಯೆ ತುರ್ತು ಸಂದರ್ಭದಲ್ಲಿ ತಕ್ಷಣದ ವೈದ್ಯಕೀಯ ಸಹಾಯವನ್ನು ಖಚಿತಪಡಿಸುವುದಿಲ್ಲ.

ಈಗ ಲಸಿಕೆ ಪಡೆಯುತ್ತಿರುವ ಸ್ವಚ್ಛತಾ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರು  ಗಂಭೀರವಾದ “ಅಸಾಮಾನ್ಯ” ಪ್ರತಿಕೂಲ ಘಟನೆಯ ಸಂದರ್ಭದಲ್ಲಿ, ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಯಾರನ್ನು ಸಂರ್ಕಿಸಬೇಕು ಎಂಬುದೂ ಸ್ಪಷ್ಟವಿಲ್ಲ.

ವ್ಯಾಕ್ಸಿನೇಷನ್ ನಂತರದ ಪ್ರತಿಕೂಲ ಘಟನೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರತಿಕ್ರಿಯಿಸಲು ವ್ಯವಸ್ಥಿತ ಕ್ರಮಗಳು ಯಾವುವು? ಇದು ಕೂಡ ಸ್ಪಷ್ಟವಿಲ್ಲ.

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇಂತಹ  ಪ್ರತಿಕೂಲ ಘಟನೆಗಳನ್ನು  (ಅಡ್ಡ ಪರಿಣಾಮಗಳು) ನಿವಾರಿಸಲು ರಾಜ್ಯ ಸರ್ಕಾರ  ಸಮಿತಿಗಳನ್ನು ರಚಿಸಿದೆಯೇ? ಹಾಗಿದ್ದರೆ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಸದಸ್ಯರು ಯಾರು?

ಲಸಿಕೆ ತಯಾರಕರು ಯಾವುದೇ ಗಂಭೀರ ಪ್ರತಿಕೂಲ ಘಟನೆಯನ್ನು ವರದಿ ಮಾಡದಿದ್ದರೂ, ಅವುಗಳು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಗಂಭೀರ ಪ್ರತಿಕೂಲ ಘಟನೆಯ ಸಂದರ್ಭದಲ್ಲಿ, ಅದಕ್ಕೆ ಪರಿಹಾರ ನೀಡುವುದಕ್ಕೆ ಯಾರು ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ?

ಅದು ರಾಜ್ಯ ಸರ್ಕಾರ, ಲಸಿಕೆ ತಯಾರಕ ಅಥವಾ ಕೇಂದ್ರ ಸರ್ಕಾರವಾಗಲಿದೆಯೇ?

ಆರೋಗ್ಯ ಸೇವಕನು ಗಂಭೀರ ಪ್ರತಿಕೂಲ ಘಟನೆಯಿಂದ ಬಳಲುತ್ತಿದ್ದರೆ ಅದು ದೀರ್ಘಾವಧಿಯ ಚಿಕಿತ್ಸೆಯ ಅಗತ್ಯವಿರುತ್ತದೆ. ಚಿಕಿತ್ಸೆಯ ಅವಧಿಗೆ ಅವಳು / ಅವನಿಗೆ ವೇತನ ರಜೆ ನೀಡಲಾಗುತ್ತದೆಯೇ?

ಅವಳು / ಅವನಿಗೆ ಉಚಿತ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆಯೇ?

ಗುತ್ತಿಗೆ  ಒಪ್ಪಂದದಲ್ಲಿರುವವರಿಗೆ ಅಥವಾ ಆಶಾ ಕೆಲಸಗಾರರಿಗೆ, ಚಿಕಿತ್ಸೆಯ ಅವಧಿಗೆ ಅವರ ಕೆಲಸ ಸುರಕ್ಷಿತವಾಗಿರುತ್ತದೆಯೇ?

ಶಾಶ್ವತ ಅಂಗವೈಕಲ್ಯವನ್ನು ಉಂಟುಮಾಡುವ ಹಾನಿಯ ಸಂದರ್ಭದಲ್ಲಿ ಅವರು ಜೀವನೋಪಾಯ ಹೇಗೆ? ಪರಿಹಾರಕ್ಕಾಗಿ ಯಾವುದೇ ನಿಬಂಧನೆಗಳಿವೆಯೇ?

ಜನವರಿ 16ರಂದು ಲಸಿಕಾ ಕೇಂದ್ರವೊಂದರಲ್ಲಿ ನಡೆದ ಘಟನೆಗಳ ಅವಲೋಕನ ಮಾಡೋಣ. ನಿಗದಿಪಡಿಸಿದ ಆರೋಗ್ಯ ಕಾರ್ಯಕರ್ತರಿಗೆ ಅವರು ಯಾವ ಎರಡು ಲಸಿಕೆಗಳನ್ನು ಸ್ವೀಕರಿಸುತ್ತಿದ್ದಾರೆಂದು ತಿಳಿದಿರಲಿಲ್ಲ. ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದವರಿಂದ ಯಾವುದೇ ಲಿಖಿತ ಒಪ್ಪಿಗೆ ತೆಗೆದುಕೊಳ್ಳಲಾಗಿಲ್ಲ. ಈ ಬಗ್ಗೆ ಕೇಳಿದರೆ  ಒಪ್ಪಿಗೆಯ ಯಾವುದೇ ಲಿಖಿತ ದಾಖಲಾತಿಗಳ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆ ಸ್ವಾತಂತ್ರ್ಯವನ್ನು ಅವರಿಗೆ ಕೊಡಲಾಗಿದೆ! ಆದರೆ ಆರೋಗ್ಯ ಸಿಬ್ಬಂದಿಗಳಲ್ಲಿ ಸಾಕಷ್ಟು ಆತಂಕಗಳಿವೆ ಎಂದು ಕೂಡ ಅವರು ಒಪ್ಪಿಕೊಂಡರು!

ಹೀಗೆ ಉತ್ತರಿಸಲಾಗದ ಹಲವು ಪ್ರಶ್ನೆಗಳಿವೆ ಎಂಬ ಕಾರಣಕ್ಕೆ, ಇಲ್ಲಿ ಎದ್ದಿರುವ ಸಮಸ್ಯೆಗಳ ಬಗ್ಗೆ ಗಂಭೀರವಾದ ಅರಿವನ್ನು ತೆಗೆದುಕೊಳ್ಳಬೇಕೆಂದು ನಾವು ಸರ್ಕಾರವನ್ನು ಕೋರುತ್ತೇವೆ. ಇದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಬೇಕು. ಇದರಿಂದ ಲಸಿಕೆ ಪಡೆಯುವ ವ್ಯಕ್ತಿಯು ತನ್ನ ಆಯ್ಕೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.  ಲಸಿಕೆ ಪಡೆಯಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಮತ್ತು ಪಡೆಯಲೇಬೇಕು ಎಂದರೆ ಯಾವ ಕಂಪನಿ ಲಸಿಕೆ ಎಂಬ ಬಗ್ಗೆ ನಿರ್ಧಾರ ಮಾಡಲು ಇದು ಸಹಾಯವಾಗುತ್ತದೆ.  ಇದಲ್ಲದೆ, ಗಂಭೀರ ಪ್ರತಿಕೂಲ ಘಟನೆಗಳಿಗೆ ಪರಿಹಾರ ಕ್ರಮಗಳ

(ಜನ ಆರೋಗ್ಯ ಚಳವಳಿ ತಂಡ ಸಿದ್ಧಪಡಿಸಿರುವ ವರದಿ ಇದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...