Homeಮುಖಪುಟಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

- Advertisement -
- Advertisement -

ಭೂಮಂಡಲದ ಹೊರಗಿನ ಲೋಕದ ಎಷ್ಟು ವಿಸ್ಮಯಗಳನ್ನೂ ಭೇದಿಸಿದ್ದರೂ ಅದು ಇನ್ನೂ ಮುಗಿಯದ ಪಯಣ. ಅದೇ ರೀತಿಯಲ್ಲಿ ಆಕಾಶ ವೀಕ್ಷಣೆ ಕೂಡ ಎಂದಿಗೂ ಮುಗಿಯದ, ಎಂದಿಗೂ ಬೇಸರ ತರಿಸದ ಹವ್ಯಾಸ.

ಜನವರಿ 21 ರಂದು ಚಂದಿರನ ಪಕ್ಕದಲ್ಲಿ ಕಾಣುವ ಮಂಗಳ ಗ್ರಹ

ಅಮಾವಾಸ್ಯೆ ಕಳೆದು ಒಂದು ವಾರವಾಗಿದೆ. ಚಂದ್ರ ಈಗ ವೃದ್ಧಿಸುತ್ತಿರುವ ಚಂದ್ರ. ಅಂದರೆ, ದಿನೆ ದಿನೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಹೆಚ್ಚುತ್ತಾ ಹೋಗುತ್ತದೆ. ಈ ತಿಂಗಳ 20ಕ್ಕೆ ಅಮಾವಾಸ್ಯೆ ಕಳೆದು ಒಂದು ವಾರವಾಗುತ್ತದೆ, ಅಂದರೆ ಏಳನೇ ದಿನ. ಈ ದಿನ ಚಂದ್ರನ ಅಧದಷ್ಟು ಭಾಗ ಕಾಣುತ್ತದೆ. ಅಲ್ಲದೆ, ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದರೆ, ಚಂದ್ರ ನೆತ್ತಿಯ ಮೇಲೆ ಕಾಣುತ್ತಾನೆ. 20ರಂದು ಸೂರ್ಯಾಸ್ತದ ಸಮಯದಲ್ಲಿ ನೆತ್ತಿಯ ಮೇಲೆ ಕಾಣುತ್ತಾನಾ? ಇದನ್ನು ನೀವು ಆಕಾಶ ವೀಕ್ಷಣೆ ಮೂಲಕ ಪರೀಕ್ಷಿಸಿ.

ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶ ಏನೆಂದರೆ, ಚಂದ್ರನ ಯಾವ ಭಾಗ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ ಎಂದು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇನೆಂದರೆ, ಚಂದ್ರನಿಗೆ ತನ್ನದೇ ಆದ ಸ್ವಂತ ಬೆಳಕಿಲ್ಲ. ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾನೆ. ಈ ಕಾರಣದಿಂದ 20ರಂದು ಸೂರ್ಯಾಸ್ತವನ್ನು ನೋಡುತ್ತಿದ್ದರೆ, ನೆತ್ತಿಯ ಮೇಲೆ ಕಾಣುವ ಚಂದ್ರನ ಯಾವ ಭಾಗ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ ಮತ್ತು ಆ ಭಾಗ ಯಾವ ದಿಕ್ಕಿಗಿದೆ ಎಂದು ಗಮನಿಸಿ. ಇದರಿಂದ ಸೂರ್ಯ ಮುಳುಗಿದ ನಂತರ ರಾತ್ರಿ ಆಕಾಶದಲ್ಲಿ, ಚಂದ್ರನ ಸಹಾಯದಿಂದ ಸುಲಭವಾಗಿ ದಿಕ್ಕನ್ನು ಗುರುತಿಸಲು ಸಹಾಯವಾಗುತ್ತದೆ. ಅಲ್ಲದೆ, ಈ ಚಟುವಟಿಕೆಯನ್ನು ೨೦ರಂದೇ ಮಾಡಬೇಕೆಂದೇನಿಲ್ಲ. ಯಾವ ದಿನವೇ ಆಗಲಿ, ಚಂದ್ರನ ಬೆಳಕಿನ ಭಾಗ ಯಾವ ದಿಕ್ಕಿಗೆ ಮುಖ ಮಾಡಿದೆ ಎಂದು ಗಮನಿಸುತ್ತಿರಿ.

ಅಂದಹಾಗೆ, 21ರಂದು ರಾತ್ರಿ ಆಕಾಶದಲ್ಲಿ ನೀವು ಚಂದ್ರನನ್ನು ಗಮನಿಸಿದರೆ, ಚಂದ್ರನ ಆಸು ಪಾಸಿನಲ್ಲಿಯೇ ಪ್ರಕಾಶಮಾನವಾದ ಕೆಂಪು ಚುಕ್ಕೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿ, ಈ ಚುಕ್ಕೆ ಮಿನುಗುವುದಿಲ್ಲಾ. ಇದೇ ಮಂಗಳ ಗ್ರಹ.

ಜನವರಿ 28ರಂದು ಹುಣ್ಣಿಮೆ. ಅಂದು ಸೂರ್ಯಾಸ್ತವನ್ನು ಗಮನಿಸಿ. ಚಂದ್ರ ಅವೊತ್ತು ನೆತ್ತಿಯಲ್ಲಿ ಕಾಣುತ್ತಾನಾ ಅಥವಾ ಬೇರೆಡೆ ಕಾಣುತ್ತಾ ಅನ್ನುವುದನ್ನು ಗಮನಿಸಿ.

ಬುಧ ಗ್ರಹವನ್ನು ಸೂರ್ಯಾಸ್ತ ನಂತರ ನೋಡಬಹುದು

ಕಳೆದ ಡಿಸೆಂಬರ್‌ನಲ್ಲಿ, ಗುರು ಮತ್ತು ಶನಿ ಗ್ರಹಗಳ ಸಮಾಗಮವನ್ನು ಆಗಸದಲ್ಲಿ ಕಂಡೆವು. ಅಂದರೆ, ಗುರು ಮತ್ತು ಶನಿ ಗ್ರಹಗಳು ಆಗಸದಲ್ಲಿ ಹಿಂದೆಂದಿಗಿಂತಲೂ ಸನಿಹ ಬಂದಿದ್ದನ್ನು ನಾವು ವೀಕ್ಷಿಸಿದೆವು. ಸದ್ಯ ಈಗ ಎರಡೂ ಗ್ರಹಗಳ ಸೂರ್ಯನ ಆಸುಪಾಸಿನಲ್ಲಿಯೇ ಇರುವುದರಿಂದ, ಸೂರ್ಯನ ತೀಕ್ಷ್ಣವಾದ ಬೆಳಕಿನ ಕಾರಣ ಈ ಗ್ರಹಗಳನ್ನು ನೋಡುವುದು ಕಷ್ಟವಾಗಿರುತ್ತದೆ. ಆದರೆ, ಸೌರಮಂಡಲದ ಮೊದಲ ಗ್ರಹವಾದ ಬುಧ ಗ್ರಹವನ್ನು ನೋಡಬಹುದು.

ಈ ತಿಂಗಳಿನಲ್ಲಿ, ಸೂರ್ಯ ಮುಳುಗಿದ ನಂತರ ದಿಗಂತದಲ್ಲಿನ ಸೂರ್ಯನ ಸ್ಥಾನದಿಂದ ಸುಮಾರು 20 ಡಿಗ್ರಿ ಎತ್ತರದಲ್ಲಿ ಒಂದು ಚುಕ್ಕಿ ಕಾಣುತ್ತದೆ. ಈ ಚುಕ್ಕಿಯೇ ಬುಧ ಗ್ರಹ. ಬೈನಾಕ್ಯುಲರ್ ಅಥವಾ ದೂರದರ್ಶಕದಲ್ಲಿ ಬುಧ ಗ್ರಹವನ್ನು ಚೆನ್ನಾಗಿ ನೋಡಬಹುದು. ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಥವಾ ಸೂರ್ಯ ಉದಯಿಸುವ ಮೊದಲು ಸುಮಾರು ಒಂದೂವರೆ ಗಂಟೆಯವರೆಗೆ ಮಾತ್ರ ಬುಧ ಗ್ರಹವನ್ನು ನಾವು ನೋಡಬಹುದಾಗಿದೆ.

ಇದಕ್ಕೆ ಕಾರಣ, ಸೌರಮಂಡಲದಲ್ಲಿ ಭೂಮಿಯ ಕಕ್ಷೆಯಿಂದ ಹೊರಗಿರುವ ಗ್ರಹಗಳನ್ನು ಹೊರಗ್ರಹಗಳು ಮತ್ತು ಒಳಗಿರುವ ಗ್ರಹಗಳನ್ನು ಒಳಗ್ರಹಗಳು ಎಂದು ಕರೆಯುತ್ತೇವೆ. ಬುಧ ಒಳಗ್ರಹಗಳ ಪಟ್ಟಿಗೆ ಸೇರುತ್ತದೆ. ಒಳಗ್ರಹಗಳು ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಥವಾ ಸೂರ್ಯ ಉದಯಿಸುವ ಮೊದಲ ನಾಲ್ಕು ಗಂಟೆಯವರೆಗೆ ಕಾಣುತ್ತದೆ. ಬುಧ ಗ್ರಹಕ್ಕೆ ಈ ಸಮಯ ಸುಮಾರು ಎರಡು ಗಂಟೆಯಾಗಿದೆ. ಹಾಗಾಗಿ, ಒಳ ಗ್ರಹಗಳಾದ ಬುಧ ಮತ್ತು ಶುಕ್ರ ಆಗಸದಲ್ಲಿ ಎತ್ತರದಲ್ಲಿ ಕಾಣಸಿಗುವುದಿಲ್ಲ. ಆಗಸದಲ್ಲಿ, ಬುಧ ಗ್ರಹ ಕ್ಷಿತಿಜದಿಂದ (Horizon) ಹೆಚ್ಚು ಎಂದರೆ 20 ಡಿಗ್ರಿ ಎತ್ತರದಲ್ಲಿ ಕಾಣಿಸಿದರೆ, ಶುಕ್ರ ಗ್ರಹ 45 ಡಿಗ್ರಿವರೆಗೆ ತಲುಪುತ್ತದೆ. ಈ ಎತ್ತರ ಬಿಟ್ಟು ಈ ಎರಡೂ ಗ್ರಹಗಳು ಎಂದಿಗೂ ನೆತ್ತಿಯಲ್ಲಿ ಕಾಣಿಸುವುದಿಲ್ಲ.

ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ಆಗಸವನ್ನು 88 ನಕ್ಷತ್ರ ಪುಂಜಗಳಿಂದ ಗುರುತಿಸಿರುವುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇವುಗಳಲ್ಲಿ ಕೆಲವು ನಕ್ಷತ್ರ ಪುಂಜಗಳ ಆಕೃತಿಗಳು ಆಗಸದಲ್ಲಿ ಗುರುತಿಸಲು ಬಹಳ ಸುಲಭ ಮತ್ತು ಈ ನಕ್ಷತ್ರ ಪುಂಜದಲ್ಲಿನ ನಕ್ಷತ್ರಗಳು ಹೆಚ್ಚು ಪ್ರಕಾಶಮಾನ ಹೊಂದಿರುವುದರಿಂದ, ನಗರ ಪ್ರದೇಶದಿಂದಲೂ ಇವುಗಳನ್ನು ಸುಲಭವಾಗಿ ಕಾಣಬಹುದು. ಇಂತಹ ಪ್ರಕಾಶಮಾನವಾದ ನಕ್ಷತ್ರ ಪುಂಜಗಳನ್ನು ಆಗಸದಲ್ಲಿನ ಗ್ರಹ, ನಕ್ಷತ್ರ ಮತ್ತು ಧೂಮಕೇತುಗಳನ್ನು ಗುರುತಿಸಲು ಮಾರ್ಗದರ್ಶಕವಾಗಿ ಬಳಸುತ್ತೇವೆ. ಇಂತಹ ಒಂದು ನಕ್ಷತ್ರ ಪುಂಜ ಉತ್ತರ ದಿಕ್ಕಿನಲ್ಲಿ ಕಾಣುವ ಕ್ಯಾಸಿಯೋಪಿಯ (ದಿ ಕ್ವೀನ್), ಕನ್ನಡದಲ್ಲಿ ಇದನ್ನು ಕುಂತಿ ನಕ್ಷತ್ರ ಪುಂಜ ಎಂದು ಕರೆಯುತ್ತಾರೆ.

ಈ ತಿಂಗಳಿನಲ್ಲಿ, ಮೋಡವಿಲ್ಲದ ರಾತ್ರಿಯಂದು ಸುಮಾರು 7.30 ಗಂಟೆಗೆ, ಆಗಸದ ಉತ್ತರ ದಿಕ್ಕಿನಲ್ಲಿ ಗಮನಿಸಿದರೆ ಚಿತ್ರ 1 ರಲ್ಲಿ ಗುರುತಿಸಿರುವ ಒ ಆಕಾರದ ಒಂದು ನಕ್ಷತ್ರ ಪುಂಜವನ್ನು ನೋಡಬಹುದು. ಈ ಒ ಆಕಾರದ ನಕ್ಷತ್ರ ಪುಂಜವೇ ಕುಂತಿ ನಕ್ಷತ್ರ ಪುಂಜ.

ಈಗ ಚಿತ್ರ 2ನ್ನು ಗಮನಿಸಿ, ಕುಂತಿ ನಕ್ಷತ್ರ ಪುಂಜದಲ್ಲಿ ಪ್ರಕಾಶಮಾನವಾದ 5 ನಕ್ಷತ್ರಗಳನ್ನು ಗುರುತಿಸಲಾಗಿದೆ. ಇಲ್ಲಿ, 3 ಮತ್ತು 4ನೇ ನಕ್ಷತ್ರದ ಕಾಲ್ಪನಿಕ S ಕ್ಷಿತಿಜಕ್ಕೆ (Horizon) ಲಂಬ ಕೋನದಲ್ಲಿ ಒಂದು ಗೆರೆಯನ್ನು ಎಳೆದುಕೊಂಡು ಬಂದರೆ, ಅದು ಒಂದು ನಕ್ಷತ್ರಕ್ಕೆ ತಾಗುವುದು. ಈ ನಕ್ಷತ್ರವೇ ಧ್ರುವ ನಕ್ಷತ್ರ, ಅಂದರೆ Pole Star. ಈ ನಕ್ಷತ್ರದ ವಿಶೇಷತೆ ಏನೆಂದರೆ, ಬೇರೆ ಆಕಾಶಕಾಯಗಳಂತೆ ಈ ನಕ್ಷತ್ರ ಪೂರ್ವದಲ್ಲಿ ಹುಟ್ಟುವುದಿಲ್ಲ ಅಥವಾ ಪಶ್ಚಿಮದಲ್ಲಿ ಮುಳುಗುವುದೂ ಇಲ್ಲ. ಈ ನಕ್ಷತ್ರ ನಿಶ್ಚಲ ಸ್ಥಿತಿಯಲ್ಲಿ ಅದೇ ದಿಕ್ಕಿನಲ್ಲಿ ಯಾವಾಗಲೂ ಇರುತ್ತದೆ. ನಕ್ಷತ್ರ ಪುಂಜಗಳ ಸಹಾಯದಿಂದ ಧ್ರುವ ನಕ್ಷತ್ರವನ್ನು ಗುರುತಿಸಲು ನಾವು ಕಲಿತರೆ, ದಿಕ್ಕುಗಳನ್ನು ಬೇರ್‍ಯಾವುದೇ ಸಹಾಯ ಇಲ್ಲದೆ ಗುರುತಿಸಬಹುದು. ಹಿಂದೆ, ರಾತ್ರಿ ಸಮಯದಲ್ಲಿ ಕಾಡಿನಲ್ಲಿ ಸಂಚರಿಸಲು, ಸಮುದ್ರಯಾನ ಕೈಗೊಳ್ಳಲು ಧ್ರುವ ನಕ್ಷತ್ರವನ್ನು ಈ ರೀತಿ ಗುರುತಿಸಿಯೇ, ದಿಕ್ಕುಗಳನ್ನು ಕಂಡುಕೊಳ್ಳುತ್ತಿದ್ದರು.

ಧ್ರುವ ನಕ್ಷತ್ರ ಏಕೆ ಹುಟ್ಟುವುದಿಲ್ಲ ಮತ್ತು ಮುಳುಗುವುದಿಲ್ಲ ಎಂಬ ವಿಷಯವನ್ನು ಯೋಚಿಸುತ್ತಿದ್ದೀರಿ ಅಲ್ಲವೇ? ಮುಂದಿನ ಸಂಚಿಕೆಯಲ್ಲಿ ಅದರ ಬಗ್ಗೆ ಚರ್ಚಿಸೋಣ.

(ಚಿತ್ರ ಕೃಪೆ: Stellarium Software)


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...