Homeಕರ್ನಾಟಕಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

ಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

- Advertisement -
- Advertisement -

Tಹಳಿಯಾಳದ ಸಕ್ಕರೆ ಕಾರ್ಖಾನೆ ತಮ್ಮ ಭಾಗ್ಯದ ಬಾಗಿಲನ್ನೇ ತೆರೆಯಲಿದೆಯೆಂದು ಸ್ಥಳೀಯ ಕಬ್ಬು ಬೆಳೆಗಾರರು ಕನಸು ಕಂಡಿದ್ದರು. ಆದರೆ ಹಳಿಯಾಳ, ದಾಂಡೇಲಿ, ಮುಂಡಗೋಡ ಸೀಮೆಯಲ್ಲಿ ಕಬ್ಬು ಬೆಳೆಯುವ ರೈತರ ಪಾಲಿಗೆ ಈ ಸಕ್ಕರೆ ಕಾರ್ಖಾನೆ ಘೋರ ಶಾಪವಾಗಿ ಈಗ ಪರಿಣಮಿಸಿದೆ! ಒಂದು ದಶಕದ ಹಿಂದೆ ಹಳಿಯಾಳದಲ್ಲಿ ಶುರುವಾದ ಸಕ್ಕರೆ ಕಾರ್ಖಾನೆಯ ಹಿಂದೆ ರೈತರ ಬಹುದೊಡ್ಡ ಹೋರಾಟದ ಇತಿಹಾಸವೇ ಇದೆ. ಸಹಕಾರ ತತ್ವದ ಒಂದು ಸಕ್ಕರೆ ಕಾರ್ಖಾನೆ ತಮ್ಮೂರಲ್ಲಿ ಸ್ಥಾಪನೆ ಆಗಬೇಕೆಂಬುದು ರೈತರ ಬೇಡಿಕೆಯಾಗಿತ್ತು. ಆದರೆ ದೀರ್ಘ ಕಾಲದಿಂದ ಹಳಿಯಾಳವನ್ನು ಆಳುತ್ತಿದ್ದ ಬಲಾಢ್ಯ ರಾಜಕಾರಣಿಯ ತಂಡಕ್ಕದು ಬೇಡವಾಗಿತ್ತು. ಸಹಕಾರಿ ರಂಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾದರೆ ರೈತರು ರಾಜಕೀಯ ಮತ್ತು ಆರ್ಥಿಕವಾಗಿ ಸಬಲರಾಗಿ ತಮ್ಮ ಮಂಕು ಬೂದಿ ರಾಜಕಾರಣಕ್ಕೆ ಸವಾಲಾಗುತ್ತಾರೆಂಬ ದೂ(ದು)ರಾಲೋಚನೆ ಪಟ್ಟಭದ್ರರದಾಗಿತ್ತು.

PC : Public TV, (ಆರ್.ವಿ ದೇಶಪಾಂಡೆ)

ಚುನಾವಣೆ ಎದುರಾದಾಗ ಸ್ಥಳೀಯ ಶಾಸಕ ಕಮ್ ರಾಜ್ಯದ ಪ್ರಭಾವಿ ರಾಜಕಾರಣಿ ಪಟು ಆರ್.ವಿ ದೇಶಪಾಂಡೆ ಸಕ್ಕರೆ ಕಾರ್ಖಾನೆ ತೆರೆಯುವ ಮಾತಾಡುತ್ತಿದ್ದರು; ಫ್ಯಾಕ್ಟರಿಗೆ ಅಡಿಗಲ್ಲನ್ನು ಯಾವ್ಯಾವುದೋ ಸ್ವಾಮಿ ಮುಖಂಡರ ಕರೆತಂದು ಹಾಕಿಸುತ್ತಿದ್ದರು. ಎಲೆಕ್ಷನ್ ಮುಗಿದ ಮೇಲೆ ಸಕ್ಕರೆ ಕಾರ್ಖಾನೆ ಕೆಲಸ ಕಾಮಗಾರಿ ಮುಂದಕ್ಕೆ ಹೋಗುತ್ತಿರಲಿಲ್ಲ! ಈ ನಾಟಕದ ಹಿಂದಿನ ಹಿಕಮತ್ತು ರೈತರಿಗೆ ಅರ್ಥವಾದಾಗ ರೋಚಕ ಹೋರಾಟ ಚಳವಳಿಗಳೇ ಆಗಿಹೋದವು. ಅನಿವಾರ್ಯವಾಗಿ ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕಾಗಿ ಬಂತು. ಆದರದು ರೈತರ ಇಚ್ಛೆಯ ಸಹಕಾರಿ ಕಾರ್ಖಾನೆ ಆಗಿರಲಿಲ್ಲ ಬದಲಿಗೆ ಬಂಡವಾಳಶಾಹಿಗಳ ಖಾಸಗಿ ಫ್ಯಾಕ್ಟರಿಯಾಗಿತ್ತು. ಜೆಎಂಆರ್ ಗ್ರೂಪ್ ಹುಲ್ಲಟ್ಟಿ ಗ್ರಾಮದಲ್ಲಿ ಬರೋಬ್ಬರಿ 250 ಎಕರೆ ಭೂಮಿಯನ್ನು 60 ರೈತರಿಂದ ತೀರಾ ಅಗ್ಗಕ್ಕೆ ಖರೀದಿಸಿ ಕಾರ್ಖಾನೆ ನಿರ್ಮಿಸಿತ್ತು.

ಅಂದು ಬಲಾಢ್ಯ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದ ದೇಶಪಾಂಡೆ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ನೋಡಿಕೊಂಡಿದ್ದರೆಂಬ ಪುಕಾರು ಇವತ್ತಿಗೂ ರೈತ ಸಮುದಾಯದಲ್ಲಿದೆ. ಬಡ ರೈತರಿಂದ ದುಗ್ಗಾಣಿ ಕಾಸಿಗೆ ಅಮೂಲ್ಯ ಜಾಗವನ್ನು ಜೆಎಂಆರ್ ಕಂಪನಿಗೆ ಕೊಡಿಸಿದ್ದ ರಾಜಕಾರಣಿ ತಾವೂ ಸಕ್ಕರೆ ಕಾರ್ಖಾನೆಯ ರಹಸ್ಯ ಪಾಲುದಾರಿಕೆ ಪಡೆದುಕೊಂಡಿದ್ದರು! ಭೂಮಿ ಕೊಟ್ಟ ರೈತ ಪರಿವಾರಕ್ಕೆ ಕಾರ್ಖಾನೆಯಲ್ಲಿ ನೌಕರಿ ಕೊಡಿಸುವ ಆಸೆಯೂ ತೋರಿಸಲಾಗಿತ್ತು. ಅದು ಇವತ್ತಿಗೂ ಈಡೇರಿಲ್ಲ! ಈ ಒಳ ಮಸಲತ್ತುಗಳೇನೇ ಇರಲಿ, ಸ್ಥಳೀಯ ಕಬ್ಬು ಬೆಳೆಗಾರರು ಮಾತ್ರ ಕಾರ್ಖಾನೆಯಿಂದ ತಮ್ಮ ಕಷ್ಟ ಕರಗಬಹುದೆಂದೇ ನಂಬಿಕೊಂಡಿದ್ದರು. ಆರಂಭದಲ್ಲಿ ಜೆಎಂಆರ್ ಕಂಪನಿಯೂ ರೈತರಿಗೆ ಅನುಕೂಲಕರವಾದ ಒಂದಿಷ್ಟು ಕಾರ್ಯಕ್ರಮ ಹಾಕಿಕೊಂಡಿತ್ತು.

ಆದರೆ ಬರಬರುತ್ತ ಜೆಎಂಆರ್ ಕಂಪನಿ ಕಾರ್ಖಾನೆ ನಡೆಸುವ ಆಸಕ್ತಿ ಕಳೆದುಕೊಂಡಿತ್ತು. ಸ್ಥಳೀಯ ಪ್ರಚಂಡ ಪುಢಾರಿಗಳು ಕಾರ್ಖಾನೆ ಆಡಳಿತದಲ್ಲಿ ಕೈಯ್ಯಾಡಿಸುತ್ತಿದ್ದುದು ಜೆಎಂಆರ್ ಕಂಪನಿಯವರಲ್ಲಿ ಜಿಗುಪ್ಸೆ ಮೂಡಿಸಿತ್ತು. ಬಚಾವಾಗಲು ಜೆಎಂಆರ್ ಪಾಲುದಾರ ಕಂಪನಿಗಾಗಿ ಹುಡುಕಾಡತೊಡಗಿತು. ಈ ಐಡಿ ಪ್ಯಾರಿ ಶುಗರ್ ಲಿಮಿಟೆಡ್ ಪಾಲುದಾರಿಕೆಗೆ ಸೇರಿಕೊಂಡಿತು. ಕೊನೆಗೊಂದು ದಿನ ಜೆಎಂಆರ್ ಕಂಪನಿಯವರು ಪ್ಯಾರಿ ಶುಗರ್ಸ್‌ಗೆ ಕಾರ್ಖಾನೆ ಮಾರಾಟಮಾಡಿ ಹೋದರು! ಆಗ ಆರಂಭವಾದ ರೈತರ ಗೋಳು ಇನ್ನೂ ಮುಗಿದಿಲ್ಲ. ಪ್ಯಾರಿ ಕಂಪನಿಯವರದು ಪಕ್ಕಾ ಲಾಭಬಡುಕ ನೀತಿ-ನಿಯಮ! ರೈತರನ್ನು ಶೋಷಿಸುವುದು ಮತ್ತು ವಂಚಿಸುವುದು ನಡೆಯುತ್ತಲೇ ಇದೆ ಎಂಬ ಆರೋಪಗಳಿಗೆ ಕೊನೆಯೇ ಇಲ್ಲ. ಪ್ಯಾರಿ ಕಂಪನಿಯ ಕರಾಮತ್ತಿನ ಆಡಳಿತದಿಂದ ರೋಸತ್ತು ಹೋಗಿರುವ ರೈತರು ಆರೋಪಿಸುತ್ತಲೇ ಹೇಳುತ್ತಿದ್ದಾರೆ.

ದುರಂತ ಎಂದರೆ, ಸುದೀರ್ಘ ಕಾಲದ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ, ಎಂಎಲ್‌ಸಿ ಎಸ್.ಎಲ್ ಘೋಟನೇಕರ್ ಮತ್ತು ಮಾಜಿ ಶಾಸಕ ಬಿಜೆಪಿಯ ಸುನಿಲ್ ಹೆಗಡೆಯಂಥ ಘಟಾನುಘಟಿಗಳು ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ರೈತರು ತಮಗಾಗುತ್ತಿರುವ ಅನ್ಯಾಯ ಪ್ರತಿಭಟಿಸಿ ಬಂದ್, ರ್‍ಯಾಲಿ, ಸಭೆ, ಹೋರಾಟ ನಡೆಸುತ್ತಿದ್ದರೂ ಇವರ್‍ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ರೈತ ಪರ ಪೋಸು ಕೊಡುತ್ತಾರೆಯೇ ಹೊರತು ಪ್ಯಾರಿ ಶುಗರ್ಸ್ ಸರದಾರರಿಗೆ ಮೂಗುದಾರ ಹಾಕಲು ಯೋಚಿಸುತ್ತಿಲ್ಲ. ಸಕ್ಕರೆ ಧಣಿಗಳು ಎಲೆಕ್ಷನ್ ಫಂಡ್ ಪುಷ್ಕಳವಾಗಿ ಕೊಡುವುದೇ ಇದಕ್ಕೆಲ್ಲ ಕಾರಣವೆಂಬ ವಾದವೂ ಬಲವಾಗಿದೆ. ಬೇಡಿಕೆ ಈಡೇರಿಕೆಗೆ ರೈತರು ಸೊಲ್ಲೆತ್ತಿದ್ದರೆ ಕ್ರಿಮಿನಲ್ ಕೇಸ್ ಹಾಕಿ ಹಣಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ! ಕಷ್ಟ-ನಷ್ಟಕ್ಕೆ ಎದೆಯೊಡ್ಡಿ ರೈತರು ಹೋರಾಡುತ್ತಲೇ ಇದ್ದಾರೆ.

ಪ್ಯಾರಿ ಶುಗರ್ಸ್‌ನ ಪ್ರತಿ ನೀತಿ ನಿಯಮವೂ ಕಬ್ಬು ಬೆಳೆಗಾರರಿಗೆ ಕಂಟಕಕಾರಿಯಾಗಿದೆ. 2017ರಿಂದ ರೈತರಿಗೆ ಪ್ಯಾರಿಯವರು 20 ಕೋಟಿಯಷ್ಟು ಪ್ರೋತ್ಸಾಹಧನ ಕೊಡದೆ ಕಾಡುತ್ತಿದ್ದಾರೆ! ಪ್ರತಿ ವರ್ಷ ಕಬ್ಬು ನುರಿಯುವ ಹಂಗಾಮಿನ ಶುರುವಿನಲ್ಲಿ ಕಬ್ಬಿಗೆ ಬೆಲೆ ಕಾರ್ಖಾನೆಯವರು ನಿರ್ಧರಿಸಬೇಕೆಂಬ ಕಟ್ಟು ನಿಟ್ಟಿನ ನಿಯಮವಿದೆ. ಆದರೆ ಪ್ಯಾರಿ ಆಡಳಿತಗಾರರು ಬೇಕಂತಲೇ ಕಬ್ಬಿನ ಬೆಲೆ ನಿಗದಿಸದೇ ರೈತರಿಗೆ ಮೋಸ ಮಾಡಲು ಹವಣಿಸುತ್ತಾರೆ. ರಾಜ್ಯದ ಬೇರೆ ಬೇರೆ ಸಕ್ಕರೆ ಫ್ಯಾಕ್ಟರಿಯವರು ಪ್ರತಿ ಟನ್ ಕಬ್ಬಿಗೆ ಕಟ್ಟುವ ದರಕ್ಕೆ ಹೋಲಿಸಿದರೆ ಪ್ಯಾರಿಯವರದ್ದು ತೀರಾ ಕಮ್ಮಿ. ಮೊದಲ ಆದ್ಯತೆಯ ಮೇರೆಗೆ ಸ್ಥಳೀಯರ ಕಬ್ಬನ್ನು ಪ್ಯಾರಿ ಕೊಳ್ಳಬೇಕೆಂಬುದು ಕರಾರಿನ ಷರತ್ತು. ಆದರೆ ಪ್ಯಾರಿ ಸ್ಥಳೀಯ ರೈತರಿಗೆ ವಂಚನೆ ಮಾಡಿ ಪಕ್ಕದ ಧಾರವಾಡ, ಕಲಘಟಗಿ, ಅಳ್ನಾವರ, ಖಾನಾಪುರ ಮತ್ತು ಬೈಲಹೊಂಗಲದಿಂದ ಕಬ್ಬನ್ನು ಪ್ರಥಮ ಆದ್ಯತೆಯಲ್ಲಿ ತರಿಸಿಕೊಳ್ಳುತ್ತಿದೆ. ಹಳಿಯಾಳ ಸುತ್ತಮುತ್ತಲಿನಲ್ಲಿ ಸಾಕಷ್ಟು ಕಬ್ಬು ಇಳುವರಿ ಇದ್ದರೂ ಬೇರೆಡೆಯಿಂದ ಕಬ್ಬು ಖರೀದಿಸಿ ಸ್ಥಳೀಯ ರೈತರಿಗೆ ನಷ್ಟವುಂಟು ಮಾಡುತ್ತಿದೆ.

PC : The Hindu, (ಶಿವರಾಮ ಹೆಬ್ಬಾರ್)

ಸ್ಥಳೀಯ ಕಬ್ಬು ಕಟಾವುದಾರರಿಗೆ (ತೋಡ್ನಿ) ಅವಕಾಶ ಕೊಡದೆ, ಪ್ಯಾರಿ ಆಡಳಿತಗಾರರು ಮಹಾರಾಷ್ಟ್ರದ ಬೀಡ, ಸತಾರ ಮತ್ತು ರಾಜ್ಯದ ಬಳ್ಳಾರಿ ಕಡೆಯಿಂದ ಕೂಲಿಗಳನ್ನು ಕರೆಸಿಕೊಳ್ಳುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ “ನೀವ್ಯಾರು ಕೇಳೋದಕ್ಕೆ. ಫ್ಯಾಕ್ಟರಿ ನಮ್ದು. ನಮ್ಮ ಖುಷಿ” ಎಂಬ ಅಧಿಕ ಪ್ರಸಂಗದ ಉತ್ತರ! ತಾಲ್ಲೂಕಿನ ರೈತರ ಕಬ್ಬು ಸಾಗಿಸುವ ವಾಹನಗಳಿಗೆ ದಿನದಲ್ಲಷ್ಟೇ ಫ್ಯಾಕ್ಟರಿ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿದೆ. ಇದರಿಂದ ಹಳಿಯಾಳ ಪಟ್ಟಣದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಪ್ರತಿ ದಿನ ಕಬ್ಬು ತುಂಬಿದ ವಾಹನಗಳು ಸಾಲುಗಟ್ಟಿ ಪ್ಯಾರಿ ಪ್ರವೇಶಕ್ಕೆ ಕಾದು ನಿಲ್ಲುವಂತಾಗಿದೆ. ಈ ಎಡವಟ್ಟಿನಿಂದ ಹಳಿಯಾಳದಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸಿದೆ. ಪ್ಯಾರಿಯಿಂದ ಪರಿಸರ ಮಾಲಿನ್ಯವೂ ನಿರಂತರವಾಗಿ ಆಗುತ್ತಿದೆ. ಕಾರ್ಖಾನೆಯಿಂದ ಹೊರಬರುವ ಅಪಾಯಕಾರಿ ಹೊಗೆಯಿಂದ ವಾಯುಮಾಲಿನ್ಯ ಉಂಟಾಗಿ ಹಳಿಯಾಳ ಸುತ್ತಲಿನ ಹಲವು ಹಳ್ಳಿಗಳ ಆರೋಗ್ಯ ಹಾಳಾಗುತ್ತಿದೆ. ಫ್ಯಾಕ್ಟರಿಯ ಸಾಮಾಜಿಕ ಹೊಣೆಗಾರಿಕಾ ನಿಧಿಯನ್ನು ತಾಲ್ಲೂಕಿನ ಮೂಲಸೌಕರ್ಯ ಅಭಿವೃದ್ಧಿ ಪರಿಸರ ನಿರ್ವಹಣೆಗೆಗೂ ಬಳಸದ ಪ್ಯಾರಿ ಆಡಳಿತಗಾರರು ಸ್ಥಳೀಯರಿಗೆ ಉದ್ಯೋಗವನ್ನೂ ಕೊಡುತ್ತಿಲ್ಲ ಎಂಬ ಆರೋಪ ಇದೆ.

ಪ್ಯಾರಿ ಕಂಪನಿಯಿಂದ ಎದುರಾಗಿರುವ ಸಂಕಷ್ಟದ ಬಗ್ಗೆ ಮೊನ್ನೆಮೊನ್ನೆವರೆಗೂ ಸಕ್ಕರೆ ಸಚಿವರಾಗಿದ್ದ ಹಳಿಯಾಳದ ಪಕ್ಕದ ಕ್ಷೇತ್ರ ಶಾಸಕರೂ ಆಗಿರುವ ಶಿವರಾಮ ಹೆಬ್ಬಾರ್‌ಗೆ ರೈತರು ದೂರಿದ್ದರು. ಹೆಬ್ಬಾರ್ ಅದ್ಯಾಕೋ ಇದೆಲ್ಲ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಸಾರಾಸಗಟಾಗಿ ಕಡೆಗಣಿಸಿ ಕೂತಿದ್ದರು! ನ್ಯಾಯಕ್ಕಾಗಿ ಹೋರಾಟ ಪ್ರತಿಭಟನೆ ವರ್ಷಾನುಗಟ್ಟಲೆಯಿಂದ ಮುಂದುವರೆಸುತ್ತಲೇ ಇರುವ ಕಬ್ಬು ಬೆಳೆಗಾರರು ಸಹನೆಗೆಡುವ ಮೊದಲೇ ಸಂಬಂಧಿಸಿದವರು ಎಚ್ಚತ್ತುಕೊಳ್ಳಬೇಕಿದೆ. ಅಭೂತಪೂರ್ವ ಚಳವಳಿಯಿಂದ ಸಕ್ಕರೆ ಕಾರ್ಖಾನೆ ಪಡೆದಿದ್ದ ಹಳಿಯಾಳದ ರೈತರಿಗೆ ಅದೇ ಕಾರ್ಖಾನೆ ನೆಮ್ಮದಿಗೆಡಿಸಿರುವುದು ದುರಂತ!


ಇದನ್ನೂ ಓದಿ: ಯೋಗೇಂದ್ರ ಯಾದವ್ ಸೇರಿ 20 ರೈತ ಮುಖಂಡರಿಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...