Homeಮುಖಪುಟ’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

- Advertisement -
- Advertisement -

ಮಧ್ಯಪ್ರದೇಶದ ಪ್ರಸಿದ್ಧ ವಿಡಂಬನಕಾರ ಹರಿಶಂಕರ್ ಪಾರ್ಸಾಯಿ ಅವರು ಗಣರಾಜ್ಯೋತ್ಸವದಂದು ’ತಿಥುರ್ತಾ ಗಣತಂತ್ರ್ ಔರ್ ಭೀಗ್ತಿ ಸ್ವತಂತ್ರ್’ (ನಡುಗುತ್ತಿರುವ ಗಣತಂತ್ರ ಮತ್ತು ಸೊರಗುತ್ತಿರುವ ಸ್ವಾತಂತ್ರ್ಯ ದಿವಸ) ಎಂಬ ಶೀರ್ಷಿಕೆಯ ಕಿರು ಪ್ರಬಂಧವನ್ನು ಬರೆದಿದ್ದಾರೆ. ಇದರಲ್ಲಿ ’ನಮ್ಮ ಗಣರಾಜ್ಯ ದಿನ ನಡುಗುತ್ತಿದೆ, ಸ್ವಾತಂತ್ರ್ಯ ದಿನ ಸೊರಗುತ್ತಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಈ ರಾಷ್ಟ್ರೀಯ ದಿನಗಳು ಮತ್ತು ಅಧಿಕೃತ ರಜಾದಿನಗಳ ಹಿನ್ನೆಲೆಯಲ್ಲಿ ಪಾರ್ಸಾಯಿ ಈ ವಿಡಂಬನೆ ಬರೆದಿದ್ದಾರೆ. ದೆಹಲಿಯಲ್ಲೆ ನಡೆದ ಗಣರಾಜ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಮೆರವಣಿಗೆಯ ವಾತಾವರಣವನ್ನು ಪಾರ್ಸಾಯಿ ವಿವರಿಸಿದ್ದಾರೆ. ರೇಡಿಯೊ ಅನೌನ್ಸರ್ (ಉದ್ಘೋಷಕಿ), ’ಜೋರಾಗಿ ಚಪ್ಪಾಳೆ ಕೇಳಿಸುತ್ತಿವೆ’ ಎಂದು ವಿವರಿಸುವುದನ್ನು ಲೇಖಕ ಕೇಳಿಸಿಕೊಳ್ಳುತ್ತಾರೆ. ಆದರೆ ಪಾರ್ಸಾಯ್‌ಗೆ ಆ ಚಪ್ಪಾಳೆಗಳು ಎಲ್ಲಿಂದ ಬರುತ್ತವೆ ಎಂದು ನೋಡಲು/ತಿಳಿಯಲು ಸಾಧ್ಯವಾಗುವುದಿಲ್ಲ. ಓವರ್‌ಕೋಟ್ ಧರಿಸಿ, ಕುರ್ಚಿಗಳ ಮೇಲೆ ಕುಳಿತ ಪ್ರೇಕ್ಷಕರಿಂದ ಈ ಚಪ್ಪಾಳೆಗಳು ಬರುತ್ತಿಲ್ಲ. ಕೈ ಬೆಚ್ಚಗಾಗಲು ಓವರ್‌ಕೋಟ್ ಪಾಕೆಟ್‌ಗಳಿಲ್ಲದ, ನೆಲದ ಮೇಲೆ ಕುಳಿತಿರುವ ಜನರ ನಿರಂತರ ಚಪ್ಪಾಳೆಯಿಂದ ಈ ಶಬ್ದ ಬರುತ್ತಿದೆ. ಈ ನಡುಗುವ ಕೈಗಳ ಚಪ್ಪಾಳೆಯನ್ನು ಗಣತಂತ್ರವು ಹಿಡಿದಿಟ್ಟುಕೊಂಡಿದೆ ಎಂದು ತೋರುತ್ತದೆ.

ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತೀಕ್ಷ್ಣ ವಿಡಂಬನೆ ಮತ್ತು ವ್ಯಾಖ್ಯಾನಕ್ಕೆ ಹೆಸರುವಾಸಿಯಾದ ಪಾರ್ಸಾಯಿ ವಸ್ತುಸ್ಥಿತಿಯನ್ನು ಬಿಂಬಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಪುನರಾವರ್ತಿತ ಭರವಸೆಗಳಿಂದ ಮತ್ತೆ ಮತ್ತೆ ಮೂರ್ಖರಾಗುವ ಜನರನ್ನು ಸಹ ಅವರು ಟೀಕಿಸಿದ್ದಾರೆ. ಬಹುಷಃ ಪಾರ್ಸಾಯಿ ಹೇಳಿದಂತೆ, ಚಪ್ಪಾಳೆ ಹೊಡಿ ಯುತ್ತಿರುವ ಕೈಗಳ ಶಾಖದ ಹೊರತಾಗಿ ಜನರ ಬಳಿ ಏನೂ ಇಲ್ಲ.

ಚಳವಳಿಯ ಬೆಂಕಿ

ಪ್ರತಿಯೊಬ್ಬ ಸಿನಿಕ ವ್ಯಕ್ತಿಯ ಹಿಂದೆ ಒಬ್ಬ ನಿರಾಶೆಗೊಂಡ ಆದರ್ಶವಾದಿ ಇರುತ್ತಾನೆ

– ಜಾರ್ಜ್ ಕ್ಯಾರ್ಲಿನ್.

ಪರ್ಸಾಯಿ ಅವರ ವಿಡಂಬನೆಯು ಜಯಪ್ರಕಾಶ್ ನಾರಾಯಣರು ನೀಡಿದ್ದ ಭರವಸೆಗಳ ವೈಫಲ್ಯ ಮತ್ತು ಲೋಹಿಯಾವಾದಿ ಚಳವಳಿಯಿಂದಾದ ನಿರಾಸೆಯಿಂದ ಹುಟ್ಟುತ್ತದೆ.

ರೈತ ಹೋರಾಟವನ್ನು ನೋಡಲು ಅವರು ಬದುಕಿರಬೇಕಿತ್ತೆಂದು ನನಗೆಷ್ಟು ಅನ್ನಿಸುತ್ತಿದೆ ನೋಡಿ.
ಅವರಂತಹ ಸಿನಿಕ ವ್ಯಕ್ತಿಯನ್ನು ಅದು ಜನಶಕ್ತಿಯ ಮೇಲೆ ಭರವಸೆಯಿಟ್ಟಿರುವ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಿತ್ತು.

ಮಾಸ್ಟರ್‌ಸ್ಟ್ರೋಕ್

ದೆಹಲಿಯಲ್ಲಿ ಇಳಿಯುವ ಮುಂಚೆ ಕುಟುಂಬ ಮತ್ತು ಸ್ನೇಹಿತರು ದೆಹಲಿಯ ಚಳವಳಿಯ ಕುರಿತು ಮತ್ತು ಸರ್ಕಾರ ಹಾಗೂ ಚಳವಳಿಕಾರರಿಂದ ಉಂಟಾಗಬಹುದಾದ ಹಿಂಸೆಯ ಕುರಿತು ಎಚ್ಚರಿಸಿದ್ದರು. ದೆಹಲಿಯ ಚಳಿಯು ದಿನೇ ದಿನೇ ಹೆಚ್ಚೆಚ್ಚು ಕೊರೆಯುತ್ತಿದ್ದು, ಪ್ರತೀ ವರ್ಷ 20-40-50 ವರ್ಷಗಳ ದಾಖಲೆಯನ್ನು ಮುರಿಯುತ್ತಲೇ ಇದೆ. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧಳಾಗಿಯೇ ಬಂದಿದ್ದೆ. ಸಿಂಘು ಗಡಿಯಲ್ಲಿ ಬೆಳಿಗಿನ ಚಳಿಯು ಮಂಜಿನ ಕಾರಣದಿಂದ ಇನ್ನೂ ತೀವ್ರವಾಗಿತ್ತು. ಸಿಂಘು ಗಡಿಯ ಪ್ರವೇಶದಲ್ಲಿ ವಿಪರೀತವಾಗಿ ನಿಯೋಜಿಸಲಾಗಿದ್ದ ಪೊಲೀಸ್ ಮತ್ತು ಮೀಸಲುಪಡೆಯು ಪ್ರತಿಭಟನಾಕಾರರನ್ನು ಸದೆಬಡಿಯಲು ದೆಹಲಿ ಪೊಲೀಸರ ಕುಪ್ರಸಿದ್ಧ ಆಯುಧಗಳಾದ ಜಲಫಿರಂಗಿ, ಲಾಠಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿತು.

ಆ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನನ್ನೊಳಗೆ ಭಯವೂ ಪ್ರವೇಶಿಸಿತು. ಆದರೆ, ಇನ್ನಷ್ಟು ಒಳಗೆ ಹೋದಂತೆ ರೈತರ ಬೆಚ್ಚಗಿನ ನಡವಳಿಕೆಯಿಂದ ಚಳಿಯು ಮಾಯವಾಯಿತು. ಈ ರೈತರು 60 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಇಲ್ಲಿದ್ದು ಕಟ್ಟಿರುವ ಚಳವಳಿಯು ಇನ್ನೂ ಎಷ್ಟೋ ಚಳವಳಿಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಮ್ಮ ಮೊದಲ ಅನಿಸಿಕೆಯು ಅದುವರೆಗೆ ಮನದಲ್ಲಿ ಮೂಡಿರುವ ಪೂರ್ವಗ್ರಹಗಳಿಂದ ರೂಪುಗೊಳ್ಳುತ್ತದೆ ಮತ್ತು ಪಂಜಾಬಿನ ಕುರಿತು ಅಂತಹವು ಸಾಕಷ್ಟಿವೆ. ಪಂಜಾಬಿನ ಸಂಪತ್ತು ಮತ್ತು ಮಹಿಳೆಯರ ಕುರಿತಂತೆ ಇರುವ ಪಾಪ್ ಹಾಡುಗಳು ಮತ್ತು ರ್‍ಯಾಪ್ ಸಂಗೀತವು ಬಹಳ ಸಾಮಾನ್ಯ. ಆದರೆ ಈ ಚಳವಳಿಯು ವಿದೇಶದಿಂದ ಬಂದ ಸಂಪತ್ತು ಮತ್ತು ಉಪಭೋಗಿತನದಲ್ಲಿ ಬಹುಕಾಲ ಮುಳುಗಿದ್ದ ಪಂಜಾಬಿನ ಇನ್ನೊಂದು ಮುಖದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಬಹುತೇಕ ಕುಟುಂಬಗಳ ಒಬ್ಬ ಸದಸ್ಯ ವಿದೇಶದಲ್ಲಿದ್ದು, ಇನ್ನೊಬ್ಬರು ಕೃಷಿ ಮಾಡುತ್ತಿರುವುದನ್ನು ನೀವು ನೋಡಬಹುದು.

ಈ ಚಳವಳಿಯು ಪಂಜಾಬನ್ನು ಎಷ್ಟರಮಟ್ಟಿಗೆ ಬಡಿದೆಬ್ಬಿಸಿದೆಯೆಂದರೆ, ತಪ್ಪುದಾರಿಗೆ ಹೋಗಿರುವವರನ್ನೂ ಸರಿದಾರಿಗೆ ಕರೆತರುವ ರೀತಿಯ ಬದಲಾವಣೆಗೆ ಕಾರಣವಾಗಿ, ಸರ್ವರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಿದೆ. ಪ್ರತೀ ಮೂಲೆಗೂ ಏನೋ ಒಂದು ಸೌಲಭ್ಯ ಕಲ್ಪಿಸುವ ಜನರಿದ್ದಾರೆ. ಅದು ಊಟದ ಮನೆಯಾಗಿರಬಹುದು, ಶೂ ಪಾಲಿಷ್, ಕಾಲಿನ ಮಸಾಜ್, ಹೊದಿಕೆಗಳು, ಟೆಂಟುಗಳು ಇತ್ಯಾದಿ ಇತ್ಯಾದಿ. ನೀವು ದೂರದ ಊರಿಂದ ಹೋರಾಟವನ್ನು ಬೆಂಬಲಿಸಲು ಬಂದಿದ್ದೀರೆಂದು ಗೊತ್ತಾದರೆ ಇಲ್ಲಿನ ಜನರು ಬಹಳ ಸಂತಸಗೊಳ್ಳುತ್ತಾರೆ.
ಹಿಂದೆಂದೂ ಹೋರಾಟದಲ್ಲಿ ಪಾಲ್ಗೊಂಡ ಅನುಭವವಿಲ್ಲದ ರೈತರು ಈ ಸಾರಿಯ ಹೋರಾಟದಲ್ಲಿ ಸೇರಿಕೊಂಡು ಸಂಗಾತಿಗಳು, ಸ್ನೇಹಿತರು, ಕುಟುಂಬಸ್ಥರೇ ಆಗಿ ಹೋಗಿದ್ದಾರೆ. ಈ ಆಂದೋಲನದಲ್ಲಿ ಅವರು ಹೊಸ ಮನುಷ್ಯರೇ ಆಗಿದ್ದಾರೆ. ಕೆನಡಾಕ್ಕೆ ಹೋಗುವುದಕ್ಕಿಂತ ಸಾರ್ಥಕವಾದ ಹೊಸ ಬದುಕು ಇಲ್ಲಿನ ಬಾಂಧವ್ಯದಲ್ಲಿದೆ ಎನ್ನುವಂತಾಗಿದೆ. ಸಮಾಜದ ಕುರಿತಾದ ವಿಶೇಷ ಚಿಂತನೆಯ ಅಗತ್ಯವಿಲ್ಲದಂತೆ ಗಂಡು ಹೆಣ್ಣಿನ ಪಾತ್ರಗಳಲ್ಲೂ ನಿಧಾನದ ಬದಲಾವಣೆ ಕಾಣಸಿಗುತ್ತದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುತ್ತಾ ಗಂಡು ಹೆಣ್ಣುಗಳಿಬ್ಬರೂ ಒಟ್ಟಿಗೆ ಅಡಿಗೆ ಮಾಡುತ್ತಾರೆ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು ಹಾಗೂ ವಿಶ್ವವಿದ್ಯಾಲಯಗಳ ಖಾಸಗೀಕರಣದ ಕುರಿತು ಚರ್ಚಿಸುವ ವಿದ್ಯಾರ್ಥಿಗಳು ಈ ಹೋರಾಟದ ನಂತರ ಮೂಡಿಬರುವ ಹೊಸ ಹೋರಾಟಗಳ ಕುರಿತು ಭರವಸೆಯಿಂದ ಚರ್ಚಿಸುತ್ತಾರೆ. ಚೆ, ಕ್ಯಾಸ್ಟ್ರೋ ಮತ್ತು ಚೇತನ್ ಭಗತ್‌ರನ್ನೂ ಅವರಲ್ಲಿ ಓದುತ್ತಿದ್ದಾರೆ. ಸಂಜೆಯ ಚಹಾ ಮತ್ತು ತಡರಾತ್ರಿಯವರೆಗಿನ ಚರ್ಚೆಗಳು ದೇಶವನ್ನು ಕಾಡುತ್ತಿರುವ ಸಂಗತಿಗಳು ಮತ್ತು ಅಸಮಾನತೆ, ಜಾತಿ, ಜೆಂಡರ್‌ಗಳ ಸಂಕೋಲೆಗಳನ್ನು ಒಡೆದು ಅವರವರ ಹಕ್ಕುಗಳನ್ನು ಪಡೆಯುವ ಬಗ್ಗೆ ನಡೆಯುತ್ತವೆ.

ಇಂದು ನಡುಗುತ್ತಿರುವ ಗಣರಾಜ್ಯದಲ್ಲಿ ಜನರು ಚಪ್ಪಾಳೆಗಳ ಮೂಲಕ ಬೆಚ್ಚಗಾಗುತ್ತಿಲ್ಲ; ಬದಲಿಗೆ ಅವರ ಜಠರದಲ್ಲಿ ಉರಿಯುತ್ತಿರುವ ಬೆಂಕಿ ಮತ್ತು ಹೃದಯದ ಬೆಚ್ಚಗಿನ ಭಾವನೆಗಳು ಬೆಚ್ಚಗಾಗಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...