Homeಮುಖಪುಟ’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

- Advertisement -
- Advertisement -

ಮಧ್ಯಪ್ರದೇಶದ ಪ್ರಸಿದ್ಧ ವಿಡಂಬನಕಾರ ಹರಿಶಂಕರ್ ಪಾರ್ಸಾಯಿ ಅವರು ಗಣರಾಜ್ಯೋತ್ಸವದಂದು ’ತಿಥುರ್ತಾ ಗಣತಂತ್ರ್ ಔರ್ ಭೀಗ್ತಿ ಸ್ವತಂತ್ರ್’ (ನಡುಗುತ್ತಿರುವ ಗಣತಂತ್ರ ಮತ್ತು ಸೊರಗುತ್ತಿರುವ ಸ್ವಾತಂತ್ರ್ಯ ದಿವಸ) ಎಂಬ ಶೀರ್ಷಿಕೆಯ ಕಿರು ಪ್ರಬಂಧವನ್ನು ಬರೆದಿದ್ದಾರೆ. ಇದರಲ್ಲಿ ’ನಮ್ಮ ಗಣರಾಜ್ಯ ದಿನ ನಡುಗುತ್ತಿದೆ, ಸ್ವಾತಂತ್ರ್ಯ ದಿನ ಸೊರಗುತ್ತಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಈ ರಾಷ್ಟ್ರೀಯ ದಿನಗಳು ಮತ್ತು ಅಧಿಕೃತ ರಜಾದಿನಗಳ ಹಿನ್ನೆಲೆಯಲ್ಲಿ ಪಾರ್ಸಾಯಿ ಈ ವಿಡಂಬನೆ ಬರೆದಿದ್ದಾರೆ. ದೆಹಲಿಯಲ್ಲೆ ನಡೆದ ಗಣರಾಜ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಮೆರವಣಿಗೆಯ ವಾತಾವರಣವನ್ನು ಪಾರ್ಸಾಯಿ ವಿವರಿಸಿದ್ದಾರೆ. ರೇಡಿಯೊ ಅನೌನ್ಸರ್ (ಉದ್ಘೋಷಕಿ), ’ಜೋರಾಗಿ ಚಪ್ಪಾಳೆ ಕೇಳಿಸುತ್ತಿವೆ’ ಎಂದು ವಿವರಿಸುವುದನ್ನು ಲೇಖಕ ಕೇಳಿಸಿಕೊಳ್ಳುತ್ತಾರೆ. ಆದರೆ ಪಾರ್ಸಾಯ್‌ಗೆ ಆ ಚಪ್ಪಾಳೆಗಳು ಎಲ್ಲಿಂದ ಬರುತ್ತವೆ ಎಂದು ನೋಡಲು/ತಿಳಿಯಲು ಸಾಧ್ಯವಾಗುವುದಿಲ್ಲ. ಓವರ್‌ಕೋಟ್ ಧರಿಸಿ, ಕುರ್ಚಿಗಳ ಮೇಲೆ ಕುಳಿತ ಪ್ರೇಕ್ಷಕರಿಂದ ಈ ಚಪ್ಪಾಳೆಗಳು ಬರುತ್ತಿಲ್ಲ. ಕೈ ಬೆಚ್ಚಗಾಗಲು ಓವರ್‌ಕೋಟ್ ಪಾಕೆಟ್‌ಗಳಿಲ್ಲದ, ನೆಲದ ಮೇಲೆ ಕುಳಿತಿರುವ ಜನರ ನಿರಂತರ ಚಪ್ಪಾಳೆಯಿಂದ ಈ ಶಬ್ದ ಬರುತ್ತಿದೆ. ಈ ನಡುಗುವ ಕೈಗಳ ಚಪ್ಪಾಳೆಯನ್ನು ಗಣತಂತ್ರವು ಹಿಡಿದಿಟ್ಟುಕೊಂಡಿದೆ ಎಂದು ತೋರುತ್ತದೆ.

ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತೀಕ್ಷ್ಣ ವಿಡಂಬನೆ ಮತ್ತು ವ್ಯಾಖ್ಯಾನಕ್ಕೆ ಹೆಸರುವಾಸಿಯಾದ ಪಾರ್ಸಾಯಿ ವಸ್ತುಸ್ಥಿತಿಯನ್ನು ಬಿಂಬಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಪುನರಾವರ್ತಿತ ಭರವಸೆಗಳಿಂದ ಮತ್ತೆ ಮತ್ತೆ ಮೂರ್ಖರಾಗುವ ಜನರನ್ನು ಸಹ ಅವರು ಟೀಕಿಸಿದ್ದಾರೆ. ಬಹುಷಃ ಪಾರ್ಸಾಯಿ ಹೇಳಿದಂತೆ, ಚಪ್ಪಾಳೆ ಹೊಡಿ ಯುತ್ತಿರುವ ಕೈಗಳ ಶಾಖದ ಹೊರತಾಗಿ ಜನರ ಬಳಿ ಏನೂ ಇಲ್ಲ.

ಚಳವಳಿಯ ಬೆಂಕಿ

ಪ್ರತಿಯೊಬ್ಬ ಸಿನಿಕ ವ್ಯಕ್ತಿಯ ಹಿಂದೆ ಒಬ್ಬ ನಿರಾಶೆಗೊಂಡ ಆದರ್ಶವಾದಿ ಇರುತ್ತಾನೆ

– ಜಾರ್ಜ್ ಕ್ಯಾರ್ಲಿನ್.

ಪರ್ಸಾಯಿ ಅವರ ವಿಡಂಬನೆಯು ಜಯಪ್ರಕಾಶ್ ನಾರಾಯಣರು ನೀಡಿದ್ದ ಭರವಸೆಗಳ ವೈಫಲ್ಯ ಮತ್ತು ಲೋಹಿಯಾವಾದಿ ಚಳವಳಿಯಿಂದಾದ ನಿರಾಸೆಯಿಂದ ಹುಟ್ಟುತ್ತದೆ.

ರೈತ ಹೋರಾಟವನ್ನು ನೋಡಲು ಅವರು ಬದುಕಿರಬೇಕಿತ್ತೆಂದು ನನಗೆಷ್ಟು ಅನ್ನಿಸುತ್ತಿದೆ ನೋಡಿ.
ಅವರಂತಹ ಸಿನಿಕ ವ್ಯಕ್ತಿಯನ್ನು ಅದು ಜನಶಕ್ತಿಯ ಮೇಲೆ ಭರವಸೆಯಿಟ್ಟಿರುವ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಿತ್ತು.

ಮಾಸ್ಟರ್‌ಸ್ಟ್ರೋಕ್

ದೆಹಲಿಯಲ್ಲಿ ಇಳಿಯುವ ಮುಂಚೆ ಕುಟುಂಬ ಮತ್ತು ಸ್ನೇಹಿತರು ದೆಹಲಿಯ ಚಳವಳಿಯ ಕುರಿತು ಮತ್ತು ಸರ್ಕಾರ ಹಾಗೂ ಚಳವಳಿಕಾರರಿಂದ ಉಂಟಾಗಬಹುದಾದ ಹಿಂಸೆಯ ಕುರಿತು ಎಚ್ಚರಿಸಿದ್ದರು. ದೆಹಲಿಯ ಚಳಿಯು ದಿನೇ ದಿನೇ ಹೆಚ್ಚೆಚ್ಚು ಕೊರೆಯುತ್ತಿದ್ದು, ಪ್ರತೀ ವರ್ಷ 20-40-50 ವರ್ಷಗಳ ದಾಖಲೆಯನ್ನು ಮುರಿಯುತ್ತಲೇ ಇದೆ. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧಳಾಗಿಯೇ ಬಂದಿದ್ದೆ. ಸಿಂಘು ಗಡಿಯಲ್ಲಿ ಬೆಳಿಗಿನ ಚಳಿಯು ಮಂಜಿನ ಕಾರಣದಿಂದ ಇನ್ನೂ ತೀವ್ರವಾಗಿತ್ತು. ಸಿಂಘು ಗಡಿಯ ಪ್ರವೇಶದಲ್ಲಿ ವಿಪರೀತವಾಗಿ ನಿಯೋಜಿಸಲಾಗಿದ್ದ ಪೊಲೀಸ್ ಮತ್ತು ಮೀಸಲುಪಡೆಯು ಪ್ರತಿಭಟನಾಕಾರರನ್ನು ಸದೆಬಡಿಯಲು ದೆಹಲಿ ಪೊಲೀಸರ ಕುಪ್ರಸಿದ್ಧ ಆಯುಧಗಳಾದ ಜಲಫಿರಂಗಿ, ಲಾಠಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿತು.

ಆ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನನ್ನೊಳಗೆ ಭಯವೂ ಪ್ರವೇಶಿಸಿತು. ಆದರೆ, ಇನ್ನಷ್ಟು ಒಳಗೆ ಹೋದಂತೆ ರೈತರ ಬೆಚ್ಚಗಿನ ನಡವಳಿಕೆಯಿಂದ ಚಳಿಯು ಮಾಯವಾಯಿತು. ಈ ರೈತರು 60 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಇಲ್ಲಿದ್ದು ಕಟ್ಟಿರುವ ಚಳವಳಿಯು ಇನ್ನೂ ಎಷ್ಟೋ ಚಳವಳಿಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಮ್ಮ ಮೊದಲ ಅನಿಸಿಕೆಯು ಅದುವರೆಗೆ ಮನದಲ್ಲಿ ಮೂಡಿರುವ ಪೂರ್ವಗ್ರಹಗಳಿಂದ ರೂಪುಗೊಳ್ಳುತ್ತದೆ ಮತ್ತು ಪಂಜಾಬಿನ ಕುರಿತು ಅಂತಹವು ಸಾಕಷ್ಟಿವೆ. ಪಂಜಾಬಿನ ಸಂಪತ್ತು ಮತ್ತು ಮಹಿಳೆಯರ ಕುರಿತಂತೆ ಇರುವ ಪಾಪ್ ಹಾಡುಗಳು ಮತ್ತು ರ್‍ಯಾಪ್ ಸಂಗೀತವು ಬಹಳ ಸಾಮಾನ್ಯ. ಆದರೆ ಈ ಚಳವಳಿಯು ವಿದೇಶದಿಂದ ಬಂದ ಸಂಪತ್ತು ಮತ್ತು ಉಪಭೋಗಿತನದಲ್ಲಿ ಬಹುಕಾಲ ಮುಳುಗಿದ್ದ ಪಂಜಾಬಿನ ಇನ್ನೊಂದು ಮುಖದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಬಹುತೇಕ ಕುಟುಂಬಗಳ ಒಬ್ಬ ಸದಸ್ಯ ವಿದೇಶದಲ್ಲಿದ್ದು, ಇನ್ನೊಬ್ಬರು ಕೃಷಿ ಮಾಡುತ್ತಿರುವುದನ್ನು ನೀವು ನೋಡಬಹುದು.

ಈ ಚಳವಳಿಯು ಪಂಜಾಬನ್ನು ಎಷ್ಟರಮಟ್ಟಿಗೆ ಬಡಿದೆಬ್ಬಿಸಿದೆಯೆಂದರೆ, ತಪ್ಪುದಾರಿಗೆ ಹೋಗಿರುವವರನ್ನೂ ಸರಿದಾರಿಗೆ ಕರೆತರುವ ರೀತಿಯ ಬದಲಾವಣೆಗೆ ಕಾರಣವಾಗಿ, ಸರ್ವರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಿದೆ. ಪ್ರತೀ ಮೂಲೆಗೂ ಏನೋ ಒಂದು ಸೌಲಭ್ಯ ಕಲ್ಪಿಸುವ ಜನರಿದ್ದಾರೆ. ಅದು ಊಟದ ಮನೆಯಾಗಿರಬಹುದು, ಶೂ ಪಾಲಿಷ್, ಕಾಲಿನ ಮಸಾಜ್, ಹೊದಿಕೆಗಳು, ಟೆಂಟುಗಳು ಇತ್ಯಾದಿ ಇತ್ಯಾದಿ. ನೀವು ದೂರದ ಊರಿಂದ ಹೋರಾಟವನ್ನು ಬೆಂಬಲಿಸಲು ಬಂದಿದ್ದೀರೆಂದು ಗೊತ್ತಾದರೆ ಇಲ್ಲಿನ ಜನರು ಬಹಳ ಸಂತಸಗೊಳ್ಳುತ್ತಾರೆ.
ಹಿಂದೆಂದೂ ಹೋರಾಟದಲ್ಲಿ ಪಾಲ್ಗೊಂಡ ಅನುಭವವಿಲ್ಲದ ರೈತರು ಈ ಸಾರಿಯ ಹೋರಾಟದಲ್ಲಿ ಸೇರಿಕೊಂಡು ಸಂಗಾತಿಗಳು, ಸ್ನೇಹಿತರು, ಕುಟುಂಬಸ್ಥರೇ ಆಗಿ ಹೋಗಿದ್ದಾರೆ. ಈ ಆಂದೋಲನದಲ್ಲಿ ಅವರು ಹೊಸ ಮನುಷ್ಯರೇ ಆಗಿದ್ದಾರೆ. ಕೆನಡಾಕ್ಕೆ ಹೋಗುವುದಕ್ಕಿಂತ ಸಾರ್ಥಕವಾದ ಹೊಸ ಬದುಕು ಇಲ್ಲಿನ ಬಾಂಧವ್ಯದಲ್ಲಿದೆ ಎನ್ನುವಂತಾಗಿದೆ. ಸಮಾಜದ ಕುರಿತಾದ ವಿಶೇಷ ಚಿಂತನೆಯ ಅಗತ್ಯವಿಲ್ಲದಂತೆ ಗಂಡು ಹೆಣ್ಣಿನ ಪಾತ್ರಗಳಲ್ಲೂ ನಿಧಾನದ ಬದಲಾವಣೆ ಕಾಣಸಿಗುತ್ತದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುತ್ತಾ ಗಂಡು ಹೆಣ್ಣುಗಳಿಬ್ಬರೂ ಒಟ್ಟಿಗೆ ಅಡಿಗೆ ಮಾಡುತ್ತಾರೆ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು ಹಾಗೂ ವಿಶ್ವವಿದ್ಯಾಲಯಗಳ ಖಾಸಗೀಕರಣದ ಕುರಿತು ಚರ್ಚಿಸುವ ವಿದ್ಯಾರ್ಥಿಗಳು ಈ ಹೋರಾಟದ ನಂತರ ಮೂಡಿಬರುವ ಹೊಸ ಹೋರಾಟಗಳ ಕುರಿತು ಭರವಸೆಯಿಂದ ಚರ್ಚಿಸುತ್ತಾರೆ. ಚೆ, ಕ್ಯಾಸ್ಟ್ರೋ ಮತ್ತು ಚೇತನ್ ಭಗತ್‌ರನ್ನೂ ಅವರಲ್ಲಿ ಓದುತ್ತಿದ್ದಾರೆ. ಸಂಜೆಯ ಚಹಾ ಮತ್ತು ತಡರಾತ್ರಿಯವರೆಗಿನ ಚರ್ಚೆಗಳು ದೇಶವನ್ನು ಕಾಡುತ್ತಿರುವ ಸಂಗತಿಗಳು ಮತ್ತು ಅಸಮಾನತೆ, ಜಾತಿ, ಜೆಂಡರ್‌ಗಳ ಸಂಕೋಲೆಗಳನ್ನು ಒಡೆದು ಅವರವರ ಹಕ್ಕುಗಳನ್ನು ಪಡೆಯುವ ಬಗ್ಗೆ ನಡೆಯುತ್ತವೆ.

ಇಂದು ನಡುಗುತ್ತಿರುವ ಗಣರಾಜ್ಯದಲ್ಲಿ ಜನರು ಚಪ್ಪಾಳೆಗಳ ಮೂಲಕ ಬೆಚ್ಚಗಾಗುತ್ತಿಲ್ಲ; ಬದಲಿಗೆ ಅವರ ಜಠರದಲ್ಲಿ ಉರಿಯುತ್ತಿರುವ ಬೆಂಕಿ ಮತ್ತು ಹೃದಯದ ಬೆಚ್ಚಗಿನ ಭಾವನೆಗಳು ಬೆಚ್ಚಗಾಗಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...