Homeಮುಖಪುಟರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ಹೆಸರಾಂತ ಇತಿಹಾಸಕಾರರಾದ ರಾಮಚಂದ್ರ ಗುಹಾರವರು ಎನ್‌ಡಿಟಿವಿಗೆ ಬರೆದ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ನಾನುಗೌರಿ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.

- Advertisement -
- Advertisement -

ನನ್ನ ದೇಶ ‘ಮೇರಾ ಭಾರತ್ ಮಹಾನ್’ ಸದೃಢ, ಸುರಕ್ಷಿತ ಮತ್ತು ಸ್ವಾವಲಂಬಿ (ಒಂದು ಪದದಲ್ಲಿ ಆತ್ಮನಿರ್ಭರ್) ಎಂಬ ಅರಿವಿನಲ್ಲಿ ನಾನು ಫೆಬ್ರವರಿ 2 ರ ರಾತ್ರಿ ಸುರಕ್ಷಿತವಾಗಿ ನಿದ್ರೆಗೆ ಜಾರಿದೆ.

ಮರುದಿನ ಬೆಳಿಗ್ಗೆ ಎಚ್ಚರವಾದಾಗ, ನಮ್ಮ ಭದ್ರತೆ ಮತ್ತು ಸಾರ್ವಭೌಮತ್ವದ ಅಡಿಪಾಯವು, ಒಬ್ಬ ವಿದೇಶಿಯ ಒಂದು ಟ್ವೀಟ್ ಹೊಡೆತಕ್ಕೆ ಅಲುಗಾಡಿದೆ ಎಂದು ಗೊತ್ತಾಯಿತು. ಆದಾಗ್ಯೂ, ಸಂಜೆಯ ಹೊತ್ತಿಗೆ, ನನ್ನ ಭಯ ಮತ್ತು ಆತಂಕಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದವು. ಸದಾ ‘ಸತ್ಯವನ್ನೆ’ ಪ್ರತಿಪಾದಿಸುವ ವಿದೇಶಾಂಗ ಸಚಿವಾಲಯದ ಹೇಳಿಕೆ, ಗೌರವಾನ್ವಿತ ಗೃಹ ಸಚಿವರ ಟ್ವೀಟ್, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಆ ಮಹಾನ್ ಮತ್ತು ದೂರದೃಷ್ಟಿಯ ರಾಜಕೀಯ ಸಿದ್ಧಾಂತಿಗಳಾದ ಅಕ್ಷಯ್ ಕುಮಾರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಕೆಲವು ಆಳವಾದ ಆಲೋಚನೆಗಳು – ಇವೆಲ್ಲವು ಒಟ್ಟಾಗಿ ನನ್ನ ಮನಸ್ಸನ್ನು ಕದಲಿದವು. ಕಳೆದ ರಾತ್ರಿ (ಫೆ.3) ನಮ್ಮ ರಾಷ್ಟ್ರದ ಹೆಮ್ಮೆ ಮತ್ತು ಸ್ವಾವಲಂಬನೆ ಸಂಪೂರ್ಣ ಅಖಂಡವಾಗಿದೆ ಎಂಬ ವಿಶ್ವಾಸವಿದಿಂದ ಮಲಗಿದೆ.

ವಿಡಂಬನೆ ನನ್ನ ಸಹಜ ಶೈಲಿಯಲ್ಲ, ಮತ್ತು ನಾನು ಇನ್ನೊಂದೆರಡು ವಾಕ್ಯ ಬರೆದು ಆ ಶೈಲಿಯಿಂದ ನಿರ್ಗಮಿಸುತ್ತೇನೆ. ಆದರೆ ರಿಹಾನ್ನಾ ಎಂಬ ಹೆಸರಿನ ಮಹಿಳೆಯ ಒಂದು ಪುಟ್ಟ ಟ್ವೀಟ್‌ಗೆ ನಮ್ಮ ಸರ್ಕಾರ ಮತ್ತು ಅದರ ‘ಉಪಯುಕ್ತ’ ಮೂರ್ಖರು ಪ್ರತಿಕ್ರಿಯಿಸಿದ ರೀತಿಗೆ ಅಪಹಾಸ್ಯ ಮತ್ತು ವಿಡಂಬನೆ ಮಾತ್ರ ನ್ಯಾಯ ಒದಗಿಸಬಲ್ಲವು. ಅವರ ಪ್ರತಿಕ್ರಿಯೆಯು ಬೂಟಾಟಿಕೆ ಮತ್ತು ಅಪ್ರಾಮಾಣಿಕತೆಯಲ್ಲಿ ಮುಳುಗಿತ್ತು, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಇದು ಯಾವ ಬಗೆಯಲ್ಲೂ ಸಮತೂಕದ ಪ್ರಜ್ಞೆಯನ್ನು ಹೊಂದಿರಲಿಲ್ಲ. ಆ ಸಾಮೂಹಿಕ, ಸಮನ್ವಯಿತ, ಹೆಮ್ಮೆಯ ಅಭಿವ್ಯಕ್ತಿಗಳು, ಒಗ್ಗಟ್ಟು ಇತ್ಯಾದಿ ಎಲ್ಲ ಒಳಗೊಂಡ ನಿರ್ಣಯವು ನಮ್ಮ ರಾಷ್ಟ್ರೀಯತೆ ಈಗ ನಿಂತಿರುವ ದುರ್ಬಲವಾದ ಅಡಿಪಾಯಗಳನ್ನು ಗಮನಾರ್ಹವಾಗಿ ಬಹಿರಂಗಪಡಿಸಿತು.

ಇದನ್ನೂ ಓದಿ: ’ಒಂದು ಟ್ವೀಟ್‌ನಿಂದ ನಿಮ್ಮ ಐಕ್ಯತೆ ಧಕ್ಕೆ ಆಗುವುದಾದರೆ…’ ಭಾರತೀಯ ಸಲೆಬ್ರಿಟಿಗಳ ಕಪಾಳಕ್ಕೆ ಬಾರಿಸಿದ ತಾಪ್ಸಿ ಪನ್ನು!

ಹದಿನೇಳನೇ ಶತಮಾನದ ಫ್ರೆಂಚ್ ಬರಹಗಾರ ಲಾ ರೋಚೆಫೌಕಾಲ್ಡ್ ಬೂಟಾಟಿಕೆಯನ್ನು ಸದ್ಗುಣಕ್ಕೆ ಪ್ರತಿಯಾಗಿ ನೀಡಿದ ಗೌರವ ಎಂದು ಪ್ರಸಿದ್ಧವಾಗಿ ವಿವರಿಸಿದ್ದಾನೆ. ಈ ಪೌರುಷವು ಈ ಸಂದರ್ಭದಲ್ಲಿ ವಿಶೇಷವಾಗಿ ಸೂಕ್ತವಾಗಿದೆ. ಏಕೆಂದರೆ 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಮತ ಚಲಾಯಿಸುವಂತೆ ಭಾರತೀಯ ಮೂಲದ ಅಮೆರಿಕನ್ನರನ್ನು ಕೇಳುವ ಮೂಲಕ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಮತ್ತೊಂದು ರಾಷ್ಟ್ರದ ರಾಜಕೀಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಿದರು ಎಂಬುದನ್ನು ನಾವು ಎಂದಿಗೂ ಮರೆಯಬಾರದು.

ಹಿಂದಿನ ದಶಕಗಳಿಂದ ತತ್ವಬದ್ಧ ದ್ವಿಪಕ್ಷೀಯತೆ ಕಾಪಾಡಿಕೊಂಡು ಬಂದಿದ್ದ ನಮ್ಮ ಹಿಂದಿನ ಪ್ರಧಾನಮಂತ್ರಿಗಳ ನಡೆ ಗಮನಿಸಿದಾಗ, ಮೋದಿಯವರ ಆ ಅನುಮೋದನೆಯು (ಮತ ಬೇಡುವಿಕೆ) ದೊಡ್ಡ ಮೂರ್ಖತನವಾಗಿತ್ತು. ಇದು ಕೌಂಟರ್ ಪ್ರಾಡಕ್ಟಿವ್ ಕೂಡ ಆಗಿತ್ತು. ಖಂಡಿತವಾಗಿಯೂ ಭಾರತದ ಪ್ರಧಾನ ಮಂತ್ರಿಯೊಬ್ಬರು ಅಮೆರಿಕನ್ನರನ್ನು ತಮ್ಮ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಸೂಚಿಸಿದ್ದು , ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಕೆಲವು ಸಂಗತಿಗಳನ್ನು ವಿವರಿಸುವ ಸುದ್ದಿ ಲೇಖನವೊಂದರತ್ತ ಗಮನ ಸೆಳೆದ ಬಾರ್ಬಡಿಯನ್ ಗಾಯಕಿಯ ಪ್ರಯತ್ನಕ್ಕಿಂತ ಹೆಚ್ಚು ಅತಿಶಯವಾದ ಕಾರ್ಯವಾಗಿದೆ, ನಿಜಕ್ಕೂ, ಹೂಸ್ಟನ್‌ನಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ನಿಂತು, ಟ್ರಂಪ್ ಆಯ್ಕೆಗೆ ಮನವಿ ಮಾಡಿದ ನಂತರ, ವಿದೇಶಿಯರಿಂದ ಭಾರತ ಸರ್ಕಾರದ ಬಗ್ಗೆ ಯಾವುದೇ ಟೀಕೆ ಬಂದರೂ ಅದನ್ನು ಟೀಕಿಸುವ ನೈತಿಕತೆಯನ್ನೇ ಸರ್ಕಾರ ಕಳೆದುಕೊಂಡಿದೆ.

ಗೃಹ ಸಚಿವರ ಟ್ವೀಟ್‌ನಲ್ಲಿ ಸರ್ಕಾರದ ಪ್ರತಿಕ್ರಿಯೆಯಲ್ಲಿನ ಬೂಟಾಟಿಕೆ ಕೂಡ ಸ್ಪಷ್ಟವಾಗಿದೆ. ಆಡಳಿತ ಪಕ್ಷದ ಐಟಿ ಸೆಲ್‌ನ ಆವಿಷ್ಕಾರಕ ಮತ್ತು ಮೇಲ್ವಿಚಾರಕ ಮತ್ತು ಈ ಅಸ್ಪಷ್ಟತೆಯ ಗ್ರ‍್ಯಾಂಡ್ ಮಾಸ್ಟರ್ (ಶಾ) ಇತರರನ್ನು ‘ಪ್ರೊಪಗಂಡಾ’ ಮಾಡುತ್ತಿದ್ದಾರೆ ಎಂದು ಆರೋಪಿಸುವುದು ಇದ್ದಿಲು ಮಸೆ ಅರಿವೆಗೆ (ಅಡುಗೆ ಮನೆಯಲ್ಲಿ ಕಟ್ಟೆ ಒರೆಸಲು, ಬಿಸಿ ಪಾತ್ರೆ ಹಿಡಿಯಲು ಬಳಸುವ ಬಟ್ಟೆ|) ಬುದ್ಧಿ ಹೇಳಿದಂತಿದೆ.

ಧರ್ಮ, ಜಾತಿ, ಭಾಷೆ ಮತ್ತು ಪ್ರದೇಶದ ವಿಭಜನೆಗಳನ್ನು ಹುಟ್ಟುಹಾಕುವಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ರಾಜಕಾರಣಿ, ದೇಶವನ್ನು ಒಗ್ಗಟ್ಟಾಗಿರಲು ಸೂಚಿಸುವ ಪರಿಯೇ ಹಾಸ್ಯಾಸ್ಪದ. ಭಾರತದಲ್ಲಿ, ಬೇರೆಡೆಗಿಂತಲೂ ಹೆಚ್ಚಾಗಿ, ಬೂಟಾಟಿಕೆ ಎನ್ನುವುದು ನಿಜಕ್ಕೂ ಸದ್ಗುಣಕ್ಕೆ ಪಾವತಿಸುವ ಬೆಲೆ.

ಏತನ್ಮಧ್ಯೆ, ವಿದೇಶಾಂಗ ಸಚಿವಾಲಯ ಅಥವಾ ಎಂಇಎ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿತು, ಅದು ಸುಳ್ಳಿನಿಂದ ಪ್ರಾರಂಭವಾಯಿತು. ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ‘ಪೂರ್ಣ ಚರ್ಚೆಯ ನಂತರ’ ಅಂಗೀಕರಿಸಲಾಗಿದೆ ಎಂದು ಅದು ಹೇಳಿದೆ. ವಾಸ್ತವವಾಗಿ, ಕೃಷಿ ಕ್ಷೇತ್ರದಲ್ಲಿ ಇಂತಹ ದೂರಗಾಮಿ ಬದಲಾವಣೆಗಳನ್ನು ಪ್ರಸ್ತಾಪಿಸುವ ಕಾನೂನುಗಳನ್ನು ಮೊದಲು ರಾಜ್ಯಗಳೊಂದಿಗೆ ಚರ್ಚಿಸಬೇಕಾಗಿತ್ತು. ಅದನ್ನು ಮಾಡಲೇ ಇಲ್ಲ. ಕಾನೂನುಗಳನ್ನು ಸಂಸದೀಯ ಸಮಿತಿಗೆ ಉಲ್ಲೇಖಿಸಬೇಕಾಗಿತ್ತು; ಅದನ್ನೂ ಮಾಡಲಿಲ್ಲ. ಈ ಕಾರ್ಯವಿಧಾನಗಳನ್ನು ಬೈಪಾಸ್ ಮಾಡಿದ ನಂತರ, ರಾಜ್ಯಸಭೆಯಲ್ಲಿ ವಿಭಾಗ ಮತ್ತು ಮತಗಳನ್ನು (ಡಿವಿಜನ್ & ವೋಟ್ಸ್) ಔಪಚಾರಿಕವಾಗಿ ಎಣಿಸಲು ಸಹ ಅವಕಾಶ ನೀಡದೆ ಮೋದಿ ಸರ್ಕಾರ ಧಾರ್ಷ್ಟ್ಯದಿಂದ ವರ್ತಿಸಿತು. ಆ ಸಮಯದಲ್ಲಿ ಪ್ರತಾಪ್ ಭಾನು ಮೆಹ್ತಾ ಬರೆದಂತೆ, “ಇದು ಸಂಸತ್ತಿನ ಅಪಹಾಸ್ಯ. ಇದು ಮಸೂದೆಯನ್ನು ರೈಲ್‌ರೋಡಿಂಗ್ ಮಾಡುತ್ತಿದೆ, ಅದರ ಉದ್ದೇಶಪೂರ್ವಕ ಅರ್ಹತೆಗಳ ಮೇಲೆ ಅಲ್ಲ, ಆದರೆ ಅಧಿಕಾರದ ಗರ್ವದ ಮೇಲೆ…..’

ಕೃಷಿ ಪ್ರತಿಭಟನೆಗಳನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ, “ಭಾರತದ ಪ್ರಜಾಪ್ರಭುತ್ವ ನೀತಿ ಮತ್ತು ರಾಜಕೀಯ”ದ ಪುರಾವೆಯಾಗಿದೆ ಎಂದು ಎಂಇಎ ಹೇಳಿಕೊಂಡಿದೆ. ಸತ್ಯದಲ್ಲಿ, ಮೋದಿ ಸರ್ಕಾರವು ಸಂಸತ್ತಿನ ಒಳಗೆ ಮತ್ತು ಹೊರಗೆ ಅಪನಂಬುಗೆಯಿಂದ ವರ್ತಿಸಿದೆ. ಕಾನೂನುಗಳನ್ನು ಅಂತಹ ಅನಾಹುತ ಮತ್ತು ಮೋಸದ ರೀತಿಯಲ್ಲಿ ಅಂಗೀಕರಿಸದಿದ್ದಲ್ಲಿ, ಪ್ರತಿಭಟನೆಗಳು ಅಂತಿಮವಾಗಿ ಈ ದೊಡ್ಡ ಆಕಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳು ಎಂದು ಕರೆದು, ದೇಶದ ರಾಜಧಾನಿಯಾದ್ಯಂತ ಮೊಳೆಗಳು ಮತ್ತು ಬೇಲಿಗಳನ್ನು ನೆಟ್ಟು ಸಿಮೆಂಟ್ ಗೋಡೆಗಳ ಬ್ಯಾರಿಕೇಡಿಂಗ್ ಮಾಡಿ, ಜಿಲ್ಲೆಯ ನಂತರ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿ, ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿ, ಟ್ವಿಟರ್‌ನಲ್ಲಿ ಹೋರಾಟದ ಖಾತೆಗಳನ್ನು ನಿರ್ಬಂಧಿಸಲು ಒತ್ತಡ ಹೇರಿದ ನಂತರವೂ “ಭಾರತದ ಪ್ರಜಾಪ್ರಭುತ್ವದ ನೀತಿಗಳನ್ನು” ಎತ್ತಿ ಹಿಡಿಯಲು ಮೋದಿ ಸರ್ಕಾರ ಬದ್ಧವಾಗಿದೆ ಎಂಬ ಹೇಳಿಕೆಗೆ ವಿಶ್ವಾಸಾರ್ಹತೆಯೇ ಉಳಿದಿಲ್ಲ.

ಇದನ್ನೂ ಓದಿ: ರಿಹಾನ್ನಾ, ಗ್ರೇಟಾ ಯಾರೆಂದು ಗೊತ್ತಿಲ್ಲ, ಅವರು ಹೋರಾಟ ಬೆಂಬಲಿಸಿದರೆ ತಪ್ಪೇನಿದೆ-ಟಿಕಾಯತ್‌

ನಿನ್ನೆಗೆ ಮೊದಲು, ರಿಹಾನ್ನಾ ಯಾರೆಂದು ನನಗೆ ತಿಳಿದಿರಲಿಲ್ಲ. ನಮ್ಮ ಗೃಹ ಸಚಿವ ಅಥವಾ ನಮ್ಮ ವಿದೇಶಾಂಗ ಸಚಿವರಿಗೂ ಗೊತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆಕೆಯ 100 ಮಿಲಿಯನ್ ಟ್ವಿಟರ್ ಫಾಲೋವರ್ಸ್‌ಗಳಿಗೆ ಸಮಗೊಳಿಸಲು ಇಲ್ಲಿನ ಎಲ್ಲ ಸೆಲೆಬ್ರಿಟಿಗಳ ಫಾಲೋವರ್ಸ್ ಸಂಖ್ಯೆಯನ್ನು ಒಟ್ಟುಗೂಡಿಸಲು ಅವರು ಯತ್ನಿಸಿದರು. ಚಲನಚಿತ್ರ ತಾರೆಯರು ಮತ್ತು ಕ್ರೀಡಾಪಟುಗಳು ಸರ್ಕಾರಿ ಮಾರ್ಗವನ್ನು ಉತ್ತೇಜಿಸಲು ಅದೇ ವಾಕ್ಯಗಳನ್ನು, ಅದೇ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿದ್ದು ನಗೆಪಾಟಲು ವಿಷಯವಾಗಿದೆ.

ವಿದೇಶಿಯರೊಬ್ಬರ ಆರು ಪದಗಳ ಟ್ವೀಟ್‌ಗೆ ಸರ್ಕಾರದ ಪ್ರತಿಕ್ರಿಯೆ ಅಸಹ್ಯಕರ, ಅಪ್ರಾಮಾಣಿಕ ಮತ್ತು ಸಂಪೂರ್ಣವಾಗಿ ಜಾಳುಜಾಳಾಗಿದೆ. ವಿದೇಶಾಂಗ ಸಚಿವರು ತಮ್ಮದೇ ಆದ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾರೆ: “ಭಾರತವನ್ನು ಗುರಿಯಾಗಿಸಿಕೊಂಡ ಪ್ರಚೋದಿತ ಅಭಿಯಾನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮದನ್ನು ಕಾಪಾಡಿಕೊಳ್ಳಲು ನಮಗೆ ಇಂದು ಆತ್ಮವಿಶ್ವಾಸವಿದೆ. ಈ ಭಾರತ ಪುಟಿದೇಳುತ್ತದೆ”. ಈ ಟ್ವೀಟ್‌ನ ಮಾತುಗಳು ಅದರಲ್ಲಿ ಮಾಡಿದ ಹೆಗ್ಗಳಿಕೆಯ ಶೂನ್ಯತೆಯನ್ನು ತೋರಿಸಿದೆ. ತಮ್ಮ ಸಹೋದ್ಯೋಗಿಗಳೊಂದಿಗೆ ವಿದೇಶಾಂಗ ಸಚಿವರು ನಮ್ಮ ಸಾಮೂಹಿಕ ರಾಷ್ಟ್ರೀಯ ಅಹಂನ ದುರ್ಬಲತೆ ಮತ್ತು ಅಭದ್ರತೆಯನ್ನು ಜಗತ್ತಿಗೆ ಬಹಿರಂಗಪಡಿಸಿದರು. ಏಕೆಂದರೆ, ಸರ್ಕಾರದ ಪ್ರಭಾವಕ್ಕೆ ಒಳಗಾಗಿ ನಮ್ಮ ‘ಸೆಲೆಬ್ರಿಟಿ’ಗಳು ಮಾತನಾಡಿದರೆ, ಬಾರ್ಬಡಿಯನ್ ಗಾಯಕಿ ಯಾರ ಹಂಗೂ ಇಲ್ಲದೇ ಸ್ವತಂತ್ರ ಯೋಚನೆಯನ್ನು ಹರಿಬಿಟ್ಟಿದ್ದಾರೆ. ಆತ್ಮವಿಶ್ವಾಸವಿದ್ದಿದ್ದರೆ ಸರ್ಕಾರ ಗಾಯಕಿಯ ಟ್ವೀಟ್ ಅನ್ನು ನಿರ್ಲಕ್ಷ್ಯ ಮಾಡಬೇಕಿತ್ತು.

ಮೋದಿಯವರ ಭಾರತದಲ್ಲಿ ಪ್ರಚಲಿತಕ್ಕೆ ಬಂದಿರುವ ಈ ದೇಶಭಕ್ತಿಯ ಮಾದರಿಗೆ ಗಾಂಧೀಜಿ ಹೇಗೆ ಪ್ರತಿಕ್ರಿಯಿಸುತ್ತಿದ್ದರು? 1938 ರಲ್ಲಿ ಗಾಂಧಿಯವರು ಮಾಡಿದ ಕೆಲವು ಟೀಕೆಗಳು ಒಂದು ಸುಳಿವನ್ನು ನೀಡುತ್ತವೆ: “ಈ ಯುಗದಲ್ಲಿ, ದೂರವನ್ನು ಅಳಿಸಿ ಹಾಕಿದಾಗ, (ಜಗತ್ತಿನ ವಿವಿದ ಭಾಗಗಳ ಸಂಪರ್ಕ ಸುಲಭವಾದಾಗ) ಬಾವಿಯಲ್ಲಿರುವ ಕಪ್ಪೆಯನ್ನು ಅನುಕರಿಸಲು ಯಾವುದೇ ರಾಷ್ಟ್ರವು ಶಕ್ತವಾಗಿಲ್ಲ. ಕೆಲವೊಮ್ಮೆ ಇತರರು ನಮ್ಮನ್ನು ನೋಡುವಂತೆ ನಮ್ಮನ್ನು ನಾವೇ ನೋಡುವುದು ಉಲ್ಲಾಸಕರವಾಗಿರುತ್ತದೆ.”

  • ರಾಮಚಂದ್ರ ಗುಹಾ

(ಬೆಂಗಳೂರಿನಲ್ಲಿ ವಾಸವಾಗಿರುವ ರಾಮಚಂದ್ರ ಗುಹಾ ಹೆಸರಾಂತ ಇತಿಹಾಸಕಾರರು. ಕ್ರಿಕೆಟ್ ಬಗ್ಗೆಯೂ ಅಪಾರ ಒಲವು ಇರುವ ಅವರು ಕ್ರಿಕೆಟ್ ಕುರಿತು ಹಲವು ಪುಸ್ತಕ ಬರೆದಿದ್ದಾರೆ. ಲೇಖನದ ಅಭಿಪ್ರಾಯಗಳು ಅವರ ಸ್ವತಂತ್ರ ಅಭಿಪ್ರಾಯಗಳು)
ಲೇಖನ ಕೃಪೆ: ಎನ್‌ಡಿಟಿವಿ.ಕಾಂ


ಇದನ್ನೂ ಓದಿ: ಹಸ್ತಕ್ಷೇಪವಲ್ಲ, ಮನುಷ್ಯರಿಗಾಗಿ ಮನುಷ್ಯ ನಿಲ್ಲುವ ಮಾನವೀಯತೆ: ಸೋನಾಕ್ಷಿ ಸಿನ್ಹಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...