Homeಮುಖಪುಟಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

- Advertisement -
- Advertisement -

ಆಕಾಶ ವೀಕ್ಷಣೆಯಲ್ಲಿ ಗ್ರಹಗಳು ಮತ್ತು ನಕ್ಷತ್ರ ಪುಂಜಗಳನ್ನು ನೋಡುವುದಷ್ಟೇ ಅಲ್ಲ, ಇತರೆ ಖಗೋಳೀಯ ಕಾಯಗಳಾದ ನಿಹಾರಿಕೆಗಳು (ನೆಬುಲ್ಲಾಗಳು), ತೆರೆದ ಕ್ಲಸ್ಟರ್‌ಗಳು (ನಕ್ಷತ್ರಗಳ ಗೊಂಚಲು) ಮತ್ತು ಗೋಳಾಕಾರ ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳನ್ನು ಕೂಡ ನೋಡಬಹುದು. ಇಂತಹ ಆಕಾಶ ಕಾಯಗಳನ್ನು ಆಕಾಶ ವೀಕ್ಷಣಾಕಾರರು ಆಳವಾದ ಆಕಾಶಕಾಯಗಳು (Deep Sky Objects- DSO’s)ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ DSO’s ನೋಡಲು ಕನಿಷ್ಠ ಅಂದರೂ ಬೈನಾಕ್ಯೂಲರ್ ಮುಂದುವರೆದು ಟೆಲಿಸ್ಕೋಪ್ ಅತ್ಯಗತ್ಯ. ಬರಿಕಣ್ಣಿನಲ್ಲೂ ನೋಡಬಹುದಾದ ಕೆಲವು ನಿಹಾರಿಕೆಗಳು, ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳು ಇವೆ. ನಗರ ಪ್ರದೇಶಗಳಲ್ಲಿ ಬೆಳಕಿನ ಮಾಲಿನ್ಯ ಹೆಚ್ಚು ಇರುವುದರಿಂದ ಈ ಕಾಯಗಳನ್ನು ನೋಡಲು ಕಷ್ಟವಿದ್ದರೂ ಪ್ರಯತ್ನಿಸಬಹುದು.

ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆ

ಚಿತ್ರ(1)

ಡಿಸೆಂಬರ್ ತಿಂಗಳನಲ್ಲಿ ನಾವು ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆಯನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡಿದೆವು. ಈ ತಿಂಗಳೂ ಕೂಡ ಯಾವುದೇ ರಾತ್ರಿಯಂದು 8 ಗಂಟೆಯ ಸುಮಾರಿಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ, ಅಂದಾಜು 45 ಡಿಗ್ರಿ ಎತ್ತರದಲ್ಲಿ ಈ ಒರಿಯಾನ್ ನಕ್ಷತ್ರ ಪುಂಜ ಕಾಣುತ್ತದೆ (ಚಿತ್ರ- 1ನ್ನು ಗಮನಿಸಿ). ಒರಿಯಾನ್ ಬಹಳ ಸುಲಭವಾಗಿ ಗುರುತಿಸಬಹುದಾದ ನಕ್ಷತ್ರ ಪುಂಜ. ಚಿತ್ರ(1)ರಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರು ನಕ್ಷತ್ರಗಳು ಗೋಚರಿಸುತ್ತವೆ. ಅದರಲ್ಲಿ ಮಧ್ಯ ಭಾಗದಲ್ಲಿರುವುದು ಒರಿಯಾನ್ ನಿಹಾರಿಕೆ. ನಕ್ಷತ್ರಗಳು ಹುಟ್ಟುವ ಪ್ರದೇಶ!

ಚಿತ್ರ (1)- ಒರಿಯಾನ್ ನಕ್ಷತ್ರ ಪುಂಜ ಮತ್ತು ಒರಿಯಾನ್ ನಿಹಾರಿಕೆ

ಚಿತ್ರ(1)

ಚಳಿಗಾಲದ ಆಕಾಶ ವೀಕ್ಷಣೆಗೆ ಒರಿಯಾನ್ ನಕ್ಷತ್ರ ಪುಂಜ ಒಂದು ದಿಕ್ಸೂಚಿ. ಈ ನಕ್ಷತ್ರ ಪುಂಜದ ಸಹಾಯದಿಂದ ಇತರೆ ನಕ್ಷತ್ರ ಪುಂಜಗಳು, ನಿಹಾರಿಕೆಗಳು ಮತ್ತು ಕ್ಲಸ್ಟರ್‌ಗಳನ್ನು (ನಕ್ಷತ್ರಗಳ ಗೊಂಚಲು) ಸುಲಭವಾಗಿ ನೋಡಬಹುದಾಗಿದೆ.

ಕೃತಿಕಾ ನಕ್ಷತ್ರಗಳ ಗೊಂಚಲು

ಚಿತ್ರ (2)ರಲ್ಲಿ ತೋರಿಸಿರುವಂತೆ, ಒರಿಯಾನ್ ನಕ್ಷತ್ರ ಪುಂಜದ ಮಧ್ಯಭಾಗದ ಮೂರು ಪ್ರಕಾಶಮಾನವಾದ ನಕ್ಷತ್ರಗಳನ್ನು ಸೇರಿಸಿದಂತೆ ಒಂದು ಕಾಲ್ಪನಿಕ ಗೆರೆಯನ್ನು ಕಲ್ಪಿಸಿಕೊಂಡು ಅದೇ ಚಿತ್ರದಲ್ಲಿ ತೋರಿಸಿರುವ ದಿಕ್ಕಿನಲ್ಲಿ ನಕ್ಷತ್ರಗಳನ್ನು ಗಮನಿಸುತ್ತಾ ಬನ್ನಿ. ಹಾಗೆ ಗಮನಿಸುವಾಗ, ಆ ಕಾಲ್ಪನಿಕ ರೇಖೆಯು ಒಂದು ನಕ್ಷತ್ರ ಗೊಂಚಲುಗಳ ಬಳಿ ಹಾದುಹೋಗುತ್ತದೆ. ಇದೇ ಕೃತಿಕಾ ನಕ್ಷತ್ರಗಳ ಗೊಂಚಲು.

ಚಿತ್ರ(2)

ಕೃತಿಕಾ ನಕ್ಷತ್ರ ಗೊಂಚಲು ಒಂದು ತೆರೆದ ನಕ್ಷತ್ರಗಳ ಗೊಂಚಲುಗಳಾಗಿದ್ದು (Open Cluster) ಅತ್ಯಂತ ಸುಂದರವಾಗಿ ಬರಿಗಣ್ಣಿಗೆ ಕಾಣುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ Pleiades Cluster ಎಂದು ಕರೆಯುತ್ತಾರೆ. ಕೃತಿಕಾ ನಕ್ಷತ್ರಗಳ ಗೊಂಚಲುಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಗೊಂಚಲಿನಲ್ಲಿ ಏಳು ನಕ್ಷತ್ರಗಳನ್ನು ಗುರುತಿಸಬಹುದು. ಪುರಾಣ ಕಥೆಗಳಿಗೆ ಹೋಲಿಸಿಕೊಂಡು ಈ ಏಳು ನಕ್ಷತ್ರಗಳನ್ನು ಸೆವೆನ್ ಸಿಸ್ಟ್‌ರ್‍ಸ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಬೈನಾಕ್ಯೂಲರ್‌ನಲ್ಲಿ ನೋಡಿದರೆ ಈ ನಕ್ಷತ್ರಗಳ ಗೊಂಚಲು ಇನ್ನೂ ಚಂದವಾಗಿ ಕಾಣುತ್ತದೆ.

ಚಿತ್ರ (3) ಕೃಪೆ: Hubble Site

ಈ ನಕ್ಷತ್ರಗಳ ಗೊಂಚಲುಗಳ ಚಿತ್ರವನ್ನು ಸಾಮಾನ್ಯವಾಗಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳಲ್ಲಿ ಚಿತ್ರಿಸಿರುತ್ತಾರೆ. ಹೆಚ್ಚು ಸಮಯದ ಎಕ್ಸ್‌ಪೋಶರ್ ಹೊಂದಿರುವ ಕ್ಯಾಮರಾದಿಂದ ಈ ನಕ್ಷತ್ರಗಳ ಗೊಂಚಲಿನ ಫೋಟೋ ತೆಗೆದರೆ, ಈ ಏಳು ನಕ್ಷತ್ರಗಳ ಸುತ್ತಲೂ ತಿಳಿ ನೀಲಿ ಬಣ್ಣದ ಮೋಡಗಳನ್ನು ಕಾಣಬಹುದು. ಈ ಮೋಡಗಳು ಹೈಡ್ರೋಜನ್ ಅನಿಲಗಳಿಂದ ಕೊಡಿದೆ. ಹೈಡ್ರೋಜನ್ ಅನಿಲದ ಮೋಡಗಳು ನಕ್ಷತ್ರಗಳ ಉಗಮಕ್ಕೆ ಕಾರಣ.

ಚಿತ್ರ(3), ಕೃಪೆ: Hubble Site

ಖಗೋಳೀಯ ಅಧ್ಯಯನಗಳ ಪ್ರಕಾರ ನಕ್ಷತ್ರಗಳ ಗೊಂಚಲುಗಳು ಅಥವಾ ಕ್ಲಸ್ಟರ್‌ಗಳಲ್ಲಿರುವ ನಕ್ಷತ್ರಗಳು ಸಾಮಾನ್ಯವಾಗಿ ಒಂದೇ ಮೋಡಗಳಿಂದ ಒಂದೇ ಸಮಯದಲ್ಲಿ ಹುಟ್ಟಿರುತ್ತವೆ. ಈ ಕೃತಿಕಾ ನಕ್ಷತ್ರ ಪುಂಜದ ನಕ್ಷತ್ರಗಳೂ ಸಹ ಒಂದೇ ಮೋಡದಿಂದ ಹುಟ್ಟಿದ್ದು. ಇವು ನಕ್ಷತ್ರಗಳ ಜೀವಿತಾವಧಿಯ ಯೌವ್ವನದ ಅವಧಿಗಳಲ್ಲಿವೆ ಅಂದರೆ, all these are young stars. ನಕ್ಷತ್ರಗಳ ಹುಟ್ಟು ಮತ್ತು ಸಾವಿನ ಬಗ್ಗೆ ಅಧ್ಯಯನ ನಡೆಸುವ ಖಗೋಳ ವಿಜ್ಞಾನಿಗಳಿಗೆ ಯೌವ್ವನದ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಲು ಕೃತಿಕಾ ನಕ್ಷತ್ರ ಗೊಂಚಲು ಒಂದು ಪ್ರಯೋಗಾಲಯವೇ ಸರಿ.

ರೋಹಿಣಿ ನಕ್ಷತ್ರ, ವೃಷಭ ರಾಶಿ

ಮತ್ತೊಮ್ಮೆ ಒರಿಯಾನ್ ನಕ್ಷತ್ರ ಪುಂಜಕ್ಕೆ ಹೋಗೋಣ. ಚಿತ್ರ (2) ರಲ್ಲಿ ಒರಿಯಾನ್ ನಕ್ಷತ್ರ ಪುಂಜದಿಂದ ಎಳೆದ ಕಾಲ್ಪನಿಕ ರೇಖೆ ಒಂದು ಕಿತ್ತಳೆ ಬಣ್ಣದ ನಕ್ಷತ್ರದ ಆಸು ಪಾಸಿನಲ್ಲಿ ಹಾದು ಹೋಗುವುದನ್ನ ಕಾಣುತ್ತೇವೆ. ಈ ಕಿತ್ತಳೆ ಬಣ್ಣದ ನಕ್ಷತ್ರವೇ ರೋಹಿಣಿ ನಕ್ಷತ್ರ. ಈ ರೋಹಿಣಿ ನಕ್ಷತ್ರ ಮತ್ತು ಕೃತಕಾ ನಕ್ಷತ್ರದ ಗೊಂಚಲುಗಳು ವೃಷಭ ರಾಶಿಯಲ್ಲಿವೆ/ ನಕ್ಷತ್ರ ಪುಂಜದಲ್ಲಿದೆ. ಅಂತೆಯೇ, ಚಿತ್ರ (2)ರಲ್ಲಿನ ಕಾಲ್ಪನಿಕೆ ಗೆರೆಗಳ ಸಹಾಯದಿಂದ ವೃಷಭ ರಾಶಿಯ ಇತರೆ ನಕ್ಷತ್ರಗಳನ್ನು ನೀವು ನೋಡಬಹುದು.

ಚಂದ್ರನ ಸಹಾಯದಿಂದ ದಿಕ್ಕು ಕಂಡುಹಿಡಿಯುವುದು ಹೇಗೆ?

ಚಂದ್ರ ರಾತ್ರಿ ಆಕಾಶದಲ್ಲಿ ಕಾಣುವ ದೊಡ್ಡದಾದ ಆಕಾಶ ಕಾಯ. ಕೆಲವೊಂದು ಸಾರಿ ಇಳಿಸಂಜೆಯಲ್ಲೂ, ಮುಂಜಾನೆಯಲ್ಲೂ ಮತ್ತು ಸೂರ್ಯನಿದ್ದಾಗಲೂ ಕಾಣುತ್ತಾನೆ. ಚಂದ್ರನ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದು ಹೇಗೆ?

ಚಿತ್ರ(4)

ವೃದ್ಧಿಸುವ ಚಂದ್ರ ಮತ್ತು ಕ್ಷೀಣಿಸುವ ಚಂದ್ರನ ಬಿಂಬಾವಸ್ಥೆಗಳ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದನ್ನು ನೋಡೋಣ.

ಚಿತ್ರ (4)ನ್ನು ನೋಡಿ, ಫೆಬ್ರವರಿ ಐದರಂದು ಮುಂಜಾನೆ 4.10ಕ್ಕೆ ಆಕಾಶದಲ್ಲಿ ಚಂದ್ರ ಕಾಣಿಸುತ್ತಿರುವುದನ್ನು ಈ ಚಿತ್ರವು ಸೂಚಿಸುತ್ತದೆ. ಚಂದ್ರ ಕಾಣುತ್ತಿರುವ ದಿಕ್ಕು ಯಾವುದು ಅಂತ ಚಿತ್ರ (4)ನ್ನು ನೋಡಿ ಹೇಳಬಹುದಾ? ಚಿತ್ರ (5)ರಲ್ಲಿ ಪೂರ್ವ ದಿಕ್ಕು ಅಂತ ಸೂಚಿಸಲಾಗಿದೆ. ಆದರೆ, ಚಿತ್ರ (4)ರಿಂದಲೇ ಈ ದಿಕ್ಕನ್ನು ಗುರುತಿಸಬಹುದಾ ಎನ್ನುವುದು ಪ್ರಶ್ನೆ.

ಚಿತ್ರ (5)

ಚಿತ್ರ(5)

ಚಿತ್ರ (4)ರಲ್ಲಿ ಅರ್ಧ ಚಂದ್ರ ಕಾಣುತ್ತಿದೆ. ನಮಗೆ ಕಾಣುತ್ತಿರುವ ಚಂದ್ರನ ಅರ್ಧ ಭಾಗವನ್ನು(A)ಎಂದು, ಕಾಣದಿರದ ಅರ್ಧ ಭಾಗವನ್ನು (B) ಎಂದು ಕರೆಯೋಣ. ಚಂದ್ರನಿಗೆ ತನ್ನದೇ ಆದ ಬೆಳಕು ಇಲ್ಲದಿರುವುದು ನಮಗೆ ತಿಳಿದ ವಿಚಾರ. ಹಾಗಾಗಿ, ಚಂದ್ರನನ್ನು ನಾವು ನೋಡುತ್ತಿದ್ದರೆ ಅದು ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರತಿಫಲಿತ ಕಿರಣಗಳು ನಮ್ಮ ಕಣ್ಣಿಗೆ ಬರುತ್ತಿರುವುದರಿಂದ ಮಾತ್ರ. ಚಿತ್ರ (4)ರಲ್ಲಿ ತೋರಿಸಿರುವಂತೆ ಚಂದ್ರನ(A) ಭಾಗದ ಪ್ರದೇಶದಲ್ಲಿ ಸೂರ್ಯನ ಬೆಳಕು ಬೀಳಬೇಕೆಂದರೆ ಸೂರ್ಯ ಕ್ಷಿತಿಜದ (Horizan) ಕೆಳಗೆ ಇದ್ದರೇ ಮಾತ್ರ ಸಾಧ್ಯ. ಸೂರ್ಯ ಬೇರೆ ಕಡೆಗೆ ಇದ್ದರೆ, ಈ ರೀತಿ ಚಂದ್ರನ(B) ಭಾಗದಲ್ಲಿ ಬೆಳಕು ಬಿದ್ದು, ಪ್ರತಿಫಲಿಸುವುದು ಅಸಾಧ್ಯ. ಇದಲ್ಲದೆ ಚಂದ್ರ ಕಾಣುತ್ತಿರುವ ಸಮಯವನ್ನು ಗಮನಿಸಿದರೆ ಅದು ಮುಂಜಾನೆ 04 ಗಂಟೆಯ ಸಮಯ. ಒಂದೆರಡು ಗಂಟೆಯಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಎಂಬುದು ತಿಳಿದ ವಿಚಾರ. ಚಂದ್ರನ(A) ಭಾಗದ ಮೇಲೆ ಸೂರ್ಯನ ಬೆಳಕು ಬಿದ್ದು, ಪ್ರತಿಫಲಿಸುತ್ತಿರುವುದರಿಂದ, ಸೂರ್ಯ ಈ ಕ್ಷಿತಿಜದಿಂದಲೇ ಉದಯಿಸಬೇಕು. ಹಾಗಾಗಿ ಇದು ಪೂರ್ವ ದಿಕ್ಕು ಎನ್ನುವ ಅಭಿಪ್ರಾಯಕ್ಕೆ ಬರಬಹುದು.

ನಾನು ಈ ಚಿತ್ರಗಳನ್ನು Stellariumತಂತ್ರಾಂಶದ ಮುಖಾಂತರ ಸೃಷ್ಟಿಸಿರುವುದರಿಂದ, ಇದರಲ್ಲಿ ಸಮಯವನ್ನು ಮುಂದಕ್ಕೆ ಹಾಕಿ ಸೂರ್ಯ ಉದಯಿಸುವುದನ್ನು ಕೂಡ ನೋಡಬಹುದು. ಅದೇ ಚಿತ್ರ (5). ಈ ಚಿತ್ರದಲ್ಲಿ, ಸೂರ್ಯ ಮತ್ತು ಚಂದ್ರ ಮತ್ತು ಅದರ(A)& (B) ಭಾಗಗಳನ್ನು ಗಮನಿಸಿ, ಬೆಳಕಿನ ಪ್ರತಿಫಲನ ನಿಯಮ ಸರಿ ಇದೆಯೇ ಪರೀಕ್ಷಿಸಿ.

ಇದೇ ವಿಧಾನದಲ್ಲಿ ಚಂದ್ರನನ್ನು ನೀವು ನೋಡಿದಾಗಲೆಲ್ಲಾ ದಿಕ್ಕುಗಳನ್ನು ಗುರುತಿಸಲು ಪ್ರಯತ್ನಿಸಿ. ಅಲ್ಲದೆ, ಆಕಾಶ ವೀಕ್ಷಣೆಯ ಬಗ್ಗೆ ನಿಮ್ಮ ಪ್ರಶ್ನೆಗಳನ್ನು, ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಲು ಈಮೇಲ್ ವಿಳಾಸಕ್ಕೆ ಬರೆಯಿರಿ: [email protected].


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...