Homeಕರ್ನಾಟಕಬೆಳಗಾವಿ: ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿ ಸೋತುಹೋದ ಬ್ರಾಹ್ಮಣ ಮಹಾಸಭಾ

ಬೆಳಗಾವಿ: ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿ ಸೋತುಹೋದ ಬ್ರಾಹ್ಮಣ ಮಹಾಸಭಾ

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |

ಸತೀಶ ಜಾರಕಿಹೊಳಿಯಂತಹ ಪ್ರಬುದ್ಧ, ಜನಬೆಂಬಲಿತ ರಾಜಕಾರಣಿಯ ವಿರುದ್ಧ ತಮ್ಮ ಸಮುದಾಯವನ್ನು ಅವಹೇಳನ ಮಾಡಿದ್ದಾರೆಂದು ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಮುನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ವಲ್ಪ ವಿವೇಚನೆಯಿಂದ ಆಲೋಚಿಸಿದ್ದರೆ ಇಂತಹ ಒಂದು ಮುಜುಗರ ಅನುಭವಿಸುವ ಸಂದರ್ಭವನ್ನು ಎದುರಿಸುತ್ತಿರಲಿಲ್ಲ. ಆದರೆ ಅದರ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅವಸರಕ್ಕೆ ಬಿದ್ದು ಇಡೀ ಸಮುದಾಯ ಸಂಘಟನೆಯೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ. ಆದರೆ ಇಂಥ ಒಂದು ಸಂದರ್ಭಕ್ಕೆ ಸಿಲುಕಿಕೊಳ್ಳಲು ಕಾರಣವೇನು ಎಂಬುದನ್ನು ಬ್ರಾಹ್ಮಣ ಮಹಾಸಭಾ ಪರಾಮರ್ಶಿಸಿಕೊಳ್ಳಲೇಬೇಕಿದೆ. ಅಷ್ಟಕ್ಕೂ ನಡೆದ್ದಾದರೂ ಏನು ಎಂಬುದನ್ನು ಕಂಡುಕೊಂಡರೆ ಈ ನಡೆಯ ಹಿಂದಿನ ಅಪ್ರಬುದ್ಧತೆ ಎದ್ದು ಕಾಣುತ್ತದೆ.

ಎಲ್ಲರಿಗೂ ಗೊತ್ತಿರುವಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಹಾಗು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿಯವರ ಮೇಲಿದೆ. ಅಣ್ಣ ರಮೇಶ ಜಾರಕಿಹೊಳಿ ಬಿ.ಜೆ.ಪಿಯ ಬಾಗಿಲಲ್ಲಿ ನಿಂತಿರುವುದರಿಂದ ಇವರ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕು ಮತ್ತು ಬಿ.ಜೆ.ಪಿಯ ಕೋಮು ರಾಜಕಾರಣವನ್ನು ಸೋಲಿಸಬೇಕು ಎಂದು ಹಟಕ್ಕೆ ಬಿದ್ದಿರುವ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಹಗಲೂ ರಾತ್ರಿ ಎನ್ನದೇ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ.

ಹಾಗೆಯೇ ಇದೇ 16 ನೇ ತಾರಿಖು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತ “ಬಿಜೆಪಿ ಸೇನೆಯನ್ನು ಮತ್ತು ಸೇನಾ ಕಾರ್ಯಾಚರಣೆಯನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತಿದೆ. ದಲಿತರು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರ ಭದ್ರ ನೆಲೆ ಹೊಂದಿರುವ ಕಾಂಗ್ರೇಸ್ ಪಕ್ಷ ಎಂದೂ ಕೂಡ ಸೈನಿಕರನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಹಾಗೇ ನೋಡಿದರೇ ದೇಶಕ್ಕಾಗಿ ಹುತಾತ್ಮರಾದ ಸೈನಿಕರಲ್ಲಿ ಬಹುಪಾಲು ಕೆಳವರ್ಗದವರೇ ಆಗಿರುತ್ತಾರೆ. ಕುಲಕರ್ಣಿ, ದೇಸಾಯಿ, ದೇಶಪಾಂಡೆ ಇಂಥ ಅಡ್ಡ ಹೆಸರು ಕೇಳುವುದು ಕಡಿಮೆ. ನಾವು ನಿಜವಾದ ಅರ್ಥದಲ್ಲಿ ದೇಶ ಭಕ್ತರಾದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಂಡು ಸೇನೆಯ ಘನತೆಗೆ ಕುಂದು ತರುವುದಿಲ್ಲ. ಆದರೇ ಯಾವ ಜನಪರ ಕೆಲಸವನ್ನೂ ಮಾಡದವರು ಇಂದು ಸೇನೆಯ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ” ಎಂದು ಮಾತನಾಡಿದ್ದಾರೆ.

ಇದರಲ್ಲಿ ಬ್ರಾಹ್ಮಣ ಮಹಾಸಭಾದವರಿಗೆ ತಮ್ಮ ಸಮುದಾಯವನ್ನು ಅವಹೇಳನ ಮಾಡಿರುವಂತದ್ದು ಏನು ಕಂಡು ಬಂತು ಎಂಬುದು ಎಂಬುದು ಬಹುಮುಖ್ಯವಾದ ಪ್ರಶ್ನೆ. ಆದರೂ ಅದರ ಅಧ್ಯಕ್ಷರಾದ ಕೆ.ಎನ್. ವೆಂಕಟನಾರಾಯಣರವರು ತಮ್ಮ ಸಮುದಾಯದ ಕುರಿತು ಸತೀಶ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸತೀಶ ಜಾರಕಿಹೊಳಿ ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ. ಅಧಿಕಾರದ ಆಸೆಗಾಗಿ ಸ್ವಾಭಿಮಾನ ಬಿಟ್ಟು ಇನ್ನೊಬ್ಬರ ಹಿಂದೆ ಅಲೆಯುವುದು ಅವರ ಜಾಯಮಾನವಲ್ಲ. ಅವರು ಮಾನವ ಬಂಧುತ್ವ ವೇದಿಕೆಯನ್ನು ಕಟ್ಟಿ ರಾಜ್ಯಾದ್ಯಂತ ಅಂಬೇಡ್ಕರ್ ಸಿದ್ಧಾಂತದ ಆಧಾರದ ಮೇಲೆ ಚಳುವಳಿ ನಡೆಸುತ್ತಿರುವವರು. ಲಕ್ಷಾಂತರ ಜನರನ್ನು ಸ್ಮಶಾನಕ್ಕೆ ಕರೆಸಿ ಹಗಲು-ರಾತ್ರಿ ಮೂಢನಂಬಿಕೆ ವಿರುದ್ಧ ಕಾರ್ಯಕ್ರಮ ಮಾಡುವ ಛಾತಿ ಇರುವ ವ್ಯಕ್ತಿ. ಅವರಿಗಿರುವ ಕಳಕಳಿ, ಬದುಕಿನ ಸರಳ ಸಹಜತೆಯ ಕಾರಣಕ್ಕೆ ನಾಡಿನ ಮೂಲೆ ಮೂಲೆಯಲ್ಲಿ ಕಾರ್ಯಕರ್ತರ ಪಡೆಹೊಂದಿರುವ, ಹಳ್ಳಿಗಳ ಮಟ್ಟದಲ್ಲೂ ಅಂಬೇಡ್ಕರ, ಬುದ್ಧ, ಬಸವಣ್ಣನವರ ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕುತ್ತಿರುವ ಇವರು ಸಹಜವಾಗಿಯೇ ಸಂಘ ಪರಿವಾರದ ಕೋಮುವಾದಿ, ಜಾತಿವಾದಿ ರಾಜಕಾರಣವನ್ನು ವಿರೋಧಿಸುತ್ತ ಬಂದಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಂತೂ ಮಾನವ ಬಂಧುತ್ವ ವೇದಿಕೆ ಆರ್.ಎಸ್.ಎಸ್ ಮತ್ತು ಅದರ ಪರಿವಾರಕ್ಕಿಂತಲೂ ಬಲಿಷ್ಟವಾಗಿ ಬೆಳೆದು ನಿಂತಿದೆ. ಇದು ಬ್ರಾಹ್ಮಣ ಮಹಾಸಭಾದ ವೆಂಕಟನಾರಾಯಣರನ್ನು ಸತೀಶ ಜಾರಕಿಹೊಳಿಯವರ ವಿರುದ್ಧ ದೂರು ನೀಡುವ ಅವಸರಕ್ಕೆ ದೂಡಿತೇ? ಅಥವಾ ಬಿಜೆಪಿ, ಸಂಘ ಪರಿವಾರದ ಅನತಿಯಂತೆ ಹಗೆತನಕ್ಕೆ ಇಳಿದರಾ? ಸಮುದಾಯದ ಸಂಘಟನೆಯೊಂದು ಪಕ್ಷಾತೀತವಾಗಿರಬೇಕು ಆದರೆ ಅದರ ಅಧ್ಯಕ್ಷರು ಸಮುದಾಯ ಸಂಘಟನೆಯನ್ನು ವೈಯಕ್ತಿಕ ರಾಜಕಾರಣಕ್ಕೆ ಬಳಸಿಕೊಂಡರಾ? ಇದನ್ನೆಲ್ಲ ಗಮನಿಸಬೇಕಾದದ್ದು ಸಂಘಟನೆಯ ಹೊಣೆಗಾರಿಕೆ. ಇವರು ನೀಡಿದ ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ಚುನಾವಣಾ ಆಯೋಗ ಸತೀಶ ಜಾರಕಿಹೊಳಿಯವರು ಮಾಡಿದ ಇಡೀ ಭಾಷಣದಲ್ಲಿ ಯಾವುದೇ ಸಮುದಾಯದ ಕುರಿತು ಅವಹೇಳನಕಾರಿಯಾದ ಯಾವುದೇ ಮಾತುಗಳೂ ಇಲ್ಲ ಎಂದು ತಿಳಿಸಿದೆ. ಸುಳ್ಳು ಆರೋಪ ಮಾಡಿ ಪ್ರಚಾರ ಮಾಡಿ ತೇಜೋವಧೆ ಮಾಡಿದ ಸ್ಥಾನದಲ್ಲೀಗ ಬ್ರಾಹ್ಮಣ ಮಹಾಸಭಾ ಬಂದು ನಿಂತಿದೆ. ಅದಕ್ಕಾಗಿ ಅದರ ಅಧ್ಯಕ್ಷ ವೆಂಕಟನಾರಾಯಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಪ್ರಕರಣ ದಾಖಲಿಸುತ್ತಾರೋ ಇಲ್ಲವೋ ಏಕೆಂದರೆ ಬ್ರಾಹ್ಮಣ ಸಮುದಾಯದಲ್ಲೂ ಬಹಳಷ್ಟು ಜನ ಅವರ ಬೆಂಬಲಿಗರಿದ್ದಾರೆ. ಆದರೆ ಸಮುದಾಯವೊಂದನ್ನು ಪ್ರತಿನಿಧಿಸುವ ಸಂಘಟನೆಯ ಅಧ್ಯಕ್ಷನ ಅವಸರ ಮತ್ತು ಅವಿವೇಕದ ನಡೆಯಿಂದಾಗಿ ಕೆಳಸಮುದಾಯಗಳ ಆಕ್ರೋಶಕ್ಕೆ ತುತ್ತಾಗಿದ್ದು ಮಾತ್ರ ಸತ್ಯ. ಕೋಮುರಾಜಕಾರಣದ ಸುಳಿಗೆ ಬಲಿಯಾಗಿ ಜನರ ವಿರೋಧವನ್ನು ಎದರಿಸುವ ಮುನ್ನ ಇಂಥ ಸಂಘಟನೆಗಳು ಮತ್ತೇ ಮತ್ತೇ ಯೋಚಿಸುವ ಅಗತ್ಯವಿದೆ.

ಸಂಘಕ್ಕೆ ಎದುರು ನಿಂತ ಯುವ ಪಡೆ.
ಬೆಳಗಾವಿ ಜಿಲ್ಲೆ ತುಂಬ ತನ್ನ ಬೇರುಗಳನ್ನು ಚಾಚಲು ಸಂಘಪರಿವಾರದ ಸಂಘಟನೆಗಳು ಕೆಳಸಮುದಾಯದ ಅಮಾಯಕ ಯುವಕರನ್ನು ಬಳಸಿಕೊಂಡು ಕೈಬಿಡುವುದು ಹೆಚ್ಚಾಗುತ್ತಿದ್ದ ಸಮಯದಲ್ಲಿಯೇ ಯುವಕರನ್ನು ಸಂಘಪರಿವಾರಕ್ಕೆ ಬಲಿಯಾಗದಂತೆ ತಡೆದು ಅವರನ್ನು ಅಂಬೇಡ್ಕರ, ಬುದ್ಧ, ಬಸವಣ್ಣನವರ ಆದರ್ಶ ಮಾರ್ಗದಲ್ಲಿ ಮುನ್ನಡೆಸುತ್ತೇವೆ ಎಂದು ಐದು ವರ್ಷಗಳ ಹಿಂದೇ ಆರಂಭವಾದ ಮಾನವ ಬಂಧುತ್ವ ವೇದಿಕೆ ಇಂದು ಸಂಘಪರಿವಾರವನ್ನು ಎದುರಿಸುವ ಮಟ್ಟದಲ್ಲಿ ಬೆಳೆದು ನಿಂತಿದೆ.
ಯಾವುದೇ ಕೋಮು, ಜಾತಿ ಗಲಭೆಗಳಿಗೆ ಪ್ರಚೋಧಿಸದೇ ಅಂಬೇಡ್ಕರ್ ತತ್ವಗಳನ್ನು ಹರಡುತ್ತ, ಯುವ ಜನರು ಬದುಕು ಕಟ್ಟಿಕೊಳ್ಳಲು ವ್ಯಾಪಾರ ಮಾಡುವ, ಸಣ್ಣ ಪುಟ್ಟ ಉದ್ಯಮಗಳನ್ನು ಸ್ಥಾಪಿಸಿ ಕೆಲಸ ನೀಡುವ ಕುರಿತು ತರಬೇತಿ ನೀಡುತ್ತ ಅದು ಬೆಳೆದು ನಿಂತ ಪರಿ ಸಂಘಪರಿವಾರಕ್ಕೆ ಸವಾಲಾಗಿದೆ. ಇದರಿಂದಾಗಿ ಕೆಳಸಮುದಾಯಗಳಲ್ಲಿ ಅದರ ಆಟ ನಿಂತು ಹೋಗುವ ಮಟ್ಟಕ್ಕೆ ಬಂದು ನಿಂತಿದೆ. ಮೂಢ ನಂಬಿಕೆಯ ವಿರುದ್ಧದ ಹೋರಾಟವಂತೂ ಕೆಸರಿ ಪಡೆಗಳ ನಿದ್ದೆಗೆಡಿಸಿದೆ. ಚಕ್ರವರ್ತಿ ಸೂಲಿಬೆಲಿಯಂತಹ ಕೋಮು ದ್ವೇಷದ ಭಾಷಣಕಾರರನ್ನು ಜಿಲ್ಲೆಗೆ ಕಾಲಿಡದಂತೆ ತಡೆಯುವ ತಾಕತ್ತು ಅವರನ್ನು ಚಿಂತೆಗೀಡು ಮಾಡಿರುವುದು ಕೂಡ ಜಾರಕಿಹೊಳಿಯವರ ಮೇಲೆ ಹಗೇ ಸಾಧಿಸಿ ತೇಜೋವಧೆಗಿಳಿಯುವ ಕೆಲಸಕ್ಕೆ ಕಾರಣವಾಯಿತೇ……ಎಲ್ಲಕ್ಕೂ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳೇ ಉತ್ತರಿಸಬೇಕು.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...