Homeಕರ್ನಾಟಕಬೆಳಗಾವಿ: ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿ ಸೋತುಹೋದ ಬ್ರಾಹ್ಮಣ ಮಹಾಸಭಾ

ಬೆಳಗಾವಿ: ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿ ಸೋತುಹೋದ ಬ್ರಾಹ್ಮಣ ಮಹಾಸಭಾ

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |

ಸತೀಶ ಜಾರಕಿಹೊಳಿಯಂತಹ ಪ್ರಬುದ್ಧ, ಜನಬೆಂಬಲಿತ ರಾಜಕಾರಣಿಯ ವಿರುದ್ಧ ತಮ್ಮ ಸಮುದಾಯವನ್ನು ಅವಹೇಳನ ಮಾಡಿದ್ದಾರೆಂದು ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಮುನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ವಲ್ಪ ವಿವೇಚನೆಯಿಂದ ಆಲೋಚಿಸಿದ್ದರೆ ಇಂತಹ ಒಂದು ಮುಜುಗರ ಅನುಭವಿಸುವ ಸಂದರ್ಭವನ್ನು ಎದುರಿಸುತ್ತಿರಲಿಲ್ಲ. ಆದರೆ ಅದರ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅವಸರಕ್ಕೆ ಬಿದ್ದು ಇಡೀ ಸಮುದಾಯ ಸಂಘಟನೆಯೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ. ಆದರೆ ಇಂಥ ಒಂದು ಸಂದರ್ಭಕ್ಕೆ ಸಿಲುಕಿಕೊಳ್ಳಲು ಕಾರಣವೇನು ಎಂಬುದನ್ನು ಬ್ರಾಹ್ಮಣ ಮಹಾಸಭಾ ಪರಾಮರ್ಶಿಸಿಕೊಳ್ಳಲೇಬೇಕಿದೆ. ಅಷ್ಟಕ್ಕೂ ನಡೆದ್ದಾದರೂ ಏನು ಎಂಬುದನ್ನು ಕಂಡುಕೊಂಡರೆ ಈ ನಡೆಯ ಹಿಂದಿನ ಅಪ್ರಬುದ್ಧತೆ ಎದ್ದು ಕಾಣುತ್ತದೆ.

ಎಲ್ಲರಿಗೂ ಗೊತ್ತಿರುವಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಹಾಗು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿಯವರ ಮೇಲಿದೆ. ಅಣ್ಣ ರಮೇಶ ಜಾರಕಿಹೊಳಿ ಬಿ.ಜೆ.ಪಿಯ ಬಾಗಿಲಲ್ಲಿ ನಿಂತಿರುವುದರಿಂದ ಇವರ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕು ಮತ್ತು ಬಿ.ಜೆ.ಪಿಯ ಕೋಮು ರಾಜಕಾರಣವನ್ನು ಸೋಲಿಸಬೇಕು ಎಂದು ಹಟಕ್ಕೆ ಬಿದ್ದಿರುವ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಹಗಲೂ ರಾತ್ರಿ ಎನ್ನದೇ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ.

ಹಾಗೆಯೇ ಇದೇ 16 ನೇ ತಾರಿಖು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತ “ಬಿಜೆಪಿ ಸೇನೆಯನ್ನು ಮತ್ತು ಸೇನಾ ಕಾರ್ಯಾಚರಣೆಯನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತಿದೆ. ದಲಿತರು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರ ಭದ್ರ ನೆಲೆ ಹೊಂದಿರುವ ಕಾಂಗ್ರೇಸ್ ಪಕ್ಷ ಎಂದೂ ಕೂಡ ಸೈನಿಕರನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಹಾಗೇ ನೋಡಿದರೇ ದೇಶಕ್ಕಾಗಿ ಹುತಾತ್ಮರಾದ ಸೈನಿಕರಲ್ಲಿ ಬಹುಪಾಲು ಕೆಳವರ್ಗದವರೇ ಆಗಿರುತ್ತಾರೆ. ಕುಲಕರ್ಣಿ, ದೇಸಾಯಿ, ದೇಶಪಾಂಡೆ ಇಂಥ ಅಡ್ಡ ಹೆಸರು ಕೇಳುವುದು ಕಡಿಮೆ. ನಾವು ನಿಜವಾದ ಅರ್ಥದಲ್ಲಿ ದೇಶ ಭಕ್ತರಾದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಂಡು ಸೇನೆಯ ಘನತೆಗೆ ಕುಂದು ತರುವುದಿಲ್ಲ. ಆದರೇ ಯಾವ ಜನಪರ ಕೆಲಸವನ್ನೂ ಮಾಡದವರು ಇಂದು ಸೇನೆಯ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ” ಎಂದು ಮಾತನಾಡಿದ್ದಾರೆ.

ಇದರಲ್ಲಿ ಬ್ರಾಹ್ಮಣ ಮಹಾಸಭಾದವರಿಗೆ ತಮ್ಮ ಸಮುದಾಯವನ್ನು ಅವಹೇಳನ ಮಾಡಿರುವಂತದ್ದು ಏನು ಕಂಡು ಬಂತು ಎಂಬುದು ಎಂಬುದು ಬಹುಮುಖ್ಯವಾದ ಪ್ರಶ್ನೆ. ಆದರೂ ಅದರ ಅಧ್ಯಕ್ಷರಾದ ಕೆ.ಎನ್. ವೆಂಕಟನಾರಾಯಣರವರು ತಮ್ಮ ಸಮುದಾಯದ ಕುರಿತು ಸತೀಶ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸತೀಶ ಜಾರಕಿಹೊಳಿ ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ. ಅಧಿಕಾರದ ಆಸೆಗಾಗಿ ಸ್ವಾಭಿಮಾನ ಬಿಟ್ಟು ಇನ್ನೊಬ್ಬರ ಹಿಂದೆ ಅಲೆಯುವುದು ಅವರ ಜಾಯಮಾನವಲ್ಲ. ಅವರು ಮಾನವ ಬಂಧುತ್ವ ವೇದಿಕೆಯನ್ನು ಕಟ್ಟಿ ರಾಜ್ಯಾದ್ಯಂತ ಅಂಬೇಡ್ಕರ್ ಸಿದ್ಧಾಂತದ ಆಧಾರದ ಮೇಲೆ ಚಳುವಳಿ ನಡೆಸುತ್ತಿರುವವರು. ಲಕ್ಷಾಂತರ ಜನರನ್ನು ಸ್ಮಶಾನಕ್ಕೆ ಕರೆಸಿ ಹಗಲು-ರಾತ್ರಿ ಮೂಢನಂಬಿಕೆ ವಿರುದ್ಧ ಕಾರ್ಯಕ್ರಮ ಮಾಡುವ ಛಾತಿ ಇರುವ ವ್ಯಕ್ತಿ. ಅವರಿಗಿರುವ ಕಳಕಳಿ, ಬದುಕಿನ ಸರಳ ಸಹಜತೆಯ ಕಾರಣಕ್ಕೆ ನಾಡಿನ ಮೂಲೆ ಮೂಲೆಯಲ್ಲಿ ಕಾರ್ಯಕರ್ತರ ಪಡೆಹೊಂದಿರುವ, ಹಳ್ಳಿಗಳ ಮಟ್ಟದಲ್ಲೂ ಅಂಬೇಡ್ಕರ, ಬುದ್ಧ, ಬಸವಣ್ಣನವರ ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕುತ್ತಿರುವ ಇವರು ಸಹಜವಾಗಿಯೇ ಸಂಘ ಪರಿವಾರದ ಕೋಮುವಾದಿ, ಜಾತಿವಾದಿ ರಾಜಕಾರಣವನ್ನು ವಿರೋಧಿಸುತ್ತ ಬಂದಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಂತೂ ಮಾನವ ಬಂಧುತ್ವ ವೇದಿಕೆ ಆರ್.ಎಸ್.ಎಸ್ ಮತ್ತು ಅದರ ಪರಿವಾರಕ್ಕಿಂತಲೂ ಬಲಿಷ್ಟವಾಗಿ ಬೆಳೆದು ನಿಂತಿದೆ. ಇದು ಬ್ರಾಹ್ಮಣ ಮಹಾಸಭಾದ ವೆಂಕಟನಾರಾಯಣರನ್ನು ಸತೀಶ ಜಾರಕಿಹೊಳಿಯವರ ವಿರುದ್ಧ ದೂರು ನೀಡುವ ಅವಸರಕ್ಕೆ ದೂಡಿತೇ? ಅಥವಾ ಬಿಜೆಪಿ, ಸಂಘ ಪರಿವಾರದ ಅನತಿಯಂತೆ ಹಗೆತನಕ್ಕೆ ಇಳಿದರಾ? ಸಮುದಾಯದ ಸಂಘಟನೆಯೊಂದು ಪಕ್ಷಾತೀತವಾಗಿರಬೇಕು ಆದರೆ ಅದರ ಅಧ್ಯಕ್ಷರು ಸಮುದಾಯ ಸಂಘಟನೆಯನ್ನು ವೈಯಕ್ತಿಕ ರಾಜಕಾರಣಕ್ಕೆ ಬಳಸಿಕೊಂಡರಾ? ಇದನ್ನೆಲ್ಲ ಗಮನಿಸಬೇಕಾದದ್ದು ಸಂಘಟನೆಯ ಹೊಣೆಗಾರಿಕೆ. ಇವರು ನೀಡಿದ ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ಚುನಾವಣಾ ಆಯೋಗ ಸತೀಶ ಜಾರಕಿಹೊಳಿಯವರು ಮಾಡಿದ ಇಡೀ ಭಾಷಣದಲ್ಲಿ ಯಾವುದೇ ಸಮುದಾಯದ ಕುರಿತು ಅವಹೇಳನಕಾರಿಯಾದ ಯಾವುದೇ ಮಾತುಗಳೂ ಇಲ್ಲ ಎಂದು ತಿಳಿಸಿದೆ. ಸುಳ್ಳು ಆರೋಪ ಮಾಡಿ ಪ್ರಚಾರ ಮಾಡಿ ತೇಜೋವಧೆ ಮಾಡಿದ ಸ್ಥಾನದಲ್ಲೀಗ ಬ್ರಾಹ್ಮಣ ಮಹಾಸಭಾ ಬಂದು ನಿಂತಿದೆ. ಅದಕ್ಕಾಗಿ ಅದರ ಅಧ್ಯಕ್ಷ ವೆಂಕಟನಾರಾಯಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಪ್ರಕರಣ ದಾಖಲಿಸುತ್ತಾರೋ ಇಲ್ಲವೋ ಏಕೆಂದರೆ ಬ್ರಾಹ್ಮಣ ಸಮುದಾಯದಲ್ಲೂ ಬಹಳಷ್ಟು ಜನ ಅವರ ಬೆಂಬಲಿಗರಿದ್ದಾರೆ. ಆದರೆ ಸಮುದಾಯವೊಂದನ್ನು ಪ್ರತಿನಿಧಿಸುವ ಸಂಘಟನೆಯ ಅಧ್ಯಕ್ಷನ ಅವಸರ ಮತ್ತು ಅವಿವೇಕದ ನಡೆಯಿಂದಾಗಿ ಕೆಳಸಮುದಾಯಗಳ ಆಕ್ರೋಶಕ್ಕೆ ತುತ್ತಾಗಿದ್ದು ಮಾತ್ರ ಸತ್ಯ. ಕೋಮುರಾಜಕಾರಣದ ಸುಳಿಗೆ ಬಲಿಯಾಗಿ ಜನರ ವಿರೋಧವನ್ನು ಎದರಿಸುವ ಮುನ್ನ ಇಂಥ ಸಂಘಟನೆಗಳು ಮತ್ತೇ ಮತ್ತೇ ಯೋಚಿಸುವ ಅಗತ್ಯವಿದೆ.

ಸಂಘಕ್ಕೆ ಎದುರು ನಿಂತ ಯುವ ಪಡೆ.
ಬೆಳಗಾವಿ ಜಿಲ್ಲೆ ತುಂಬ ತನ್ನ ಬೇರುಗಳನ್ನು ಚಾಚಲು ಸಂಘಪರಿವಾರದ ಸಂಘಟನೆಗಳು ಕೆಳಸಮುದಾಯದ ಅಮಾಯಕ ಯುವಕರನ್ನು ಬಳಸಿಕೊಂಡು ಕೈಬಿಡುವುದು ಹೆಚ್ಚಾಗುತ್ತಿದ್ದ ಸಮಯದಲ್ಲಿಯೇ ಯುವಕರನ್ನು ಸಂಘಪರಿವಾರಕ್ಕೆ ಬಲಿಯಾಗದಂತೆ ತಡೆದು ಅವರನ್ನು ಅಂಬೇಡ್ಕರ, ಬುದ್ಧ, ಬಸವಣ್ಣನವರ ಆದರ್ಶ ಮಾರ್ಗದಲ್ಲಿ ಮುನ್ನಡೆಸುತ್ತೇವೆ ಎಂದು ಐದು ವರ್ಷಗಳ ಹಿಂದೇ ಆರಂಭವಾದ ಮಾನವ ಬಂಧುತ್ವ ವೇದಿಕೆ ಇಂದು ಸಂಘಪರಿವಾರವನ್ನು ಎದುರಿಸುವ ಮಟ್ಟದಲ್ಲಿ ಬೆಳೆದು ನಿಂತಿದೆ.
ಯಾವುದೇ ಕೋಮು, ಜಾತಿ ಗಲಭೆಗಳಿಗೆ ಪ್ರಚೋಧಿಸದೇ ಅಂಬೇಡ್ಕರ್ ತತ್ವಗಳನ್ನು ಹರಡುತ್ತ, ಯುವ ಜನರು ಬದುಕು ಕಟ್ಟಿಕೊಳ್ಳಲು ವ್ಯಾಪಾರ ಮಾಡುವ, ಸಣ್ಣ ಪುಟ್ಟ ಉದ್ಯಮಗಳನ್ನು ಸ್ಥಾಪಿಸಿ ಕೆಲಸ ನೀಡುವ ಕುರಿತು ತರಬೇತಿ ನೀಡುತ್ತ ಅದು ಬೆಳೆದು ನಿಂತ ಪರಿ ಸಂಘಪರಿವಾರಕ್ಕೆ ಸವಾಲಾಗಿದೆ. ಇದರಿಂದಾಗಿ ಕೆಳಸಮುದಾಯಗಳಲ್ಲಿ ಅದರ ಆಟ ನಿಂತು ಹೋಗುವ ಮಟ್ಟಕ್ಕೆ ಬಂದು ನಿಂತಿದೆ. ಮೂಢ ನಂಬಿಕೆಯ ವಿರುದ್ಧದ ಹೋರಾಟವಂತೂ ಕೆಸರಿ ಪಡೆಗಳ ನಿದ್ದೆಗೆಡಿಸಿದೆ. ಚಕ್ರವರ್ತಿ ಸೂಲಿಬೆಲಿಯಂತಹ ಕೋಮು ದ್ವೇಷದ ಭಾಷಣಕಾರರನ್ನು ಜಿಲ್ಲೆಗೆ ಕಾಲಿಡದಂತೆ ತಡೆಯುವ ತಾಕತ್ತು ಅವರನ್ನು ಚಿಂತೆಗೀಡು ಮಾಡಿರುವುದು ಕೂಡ ಜಾರಕಿಹೊಳಿಯವರ ಮೇಲೆ ಹಗೇ ಸಾಧಿಸಿ ತೇಜೋವಧೆಗಿಳಿಯುವ ಕೆಲಸಕ್ಕೆ ಕಾರಣವಾಯಿತೇ……ಎಲ್ಲಕ್ಕೂ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳೇ ಉತ್ತರಿಸಬೇಕು.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...