Homeಕರ್ನಾಟಕಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ - ದೇವನೂರು

ಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ – ದೇವನೂರು

- Advertisement -
- Advertisement -

ಸಂದರ್ಶನ
| ಡಾ.ಎಸ್ ತುಕಾರಾಂ |

ಪರ್ಯಾಯ ರಾಜಕಾರಣದ ಪ್ರಯತ್ನಗಳನ್ನು ನಡೆಸುತ್ತಾ ಸಕ್ರಿಯವಾಗಿರುವ ಕನ್ನಡದ ಮಹತ್ವದ ಲೇಖಕ ದೇವನೂರ ಮಹಾದೇವ ಅವರನ್ನು ತುಕಾರಾಂ ಅವರು ಸಂಯುಕ್ತ ಕರ್ನಾಟಕಕ್ಕಾಗಿ ಸಂದರ್ಶಿಸಿದ್ದರು. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಇದನ್ನು ಪ್ರಕಟಿಸಲು ಅನುಮತಿ ಕೊಟ್ಟ ದೇವನೂರ ಮಹಾದೇವ, ತುಕಾರಾಂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್ ಅವರಿಗೆ ಧನ್ಯವಾದಗಳು ತಿಳಿಸಲು ಬಯಸುತ್ತೇವೆ.

ನಿಮ್ಮ ಸ್ವರಾಜ್ ಇಂಡಿಯಾ ಪಕ್ಷ ಲೋಕಸಭೆಗೆ ರಾಜ್ಯದಲ್ಲಿ ಯಾವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿಲ್ಲವಲ್ಲ, ಯಾಕೆ?
ರೈತ ಮತ್ತು ದಲಿತ ಸಂಘಟನೆಗಳ ಕೂಡಿಕೆಯ ಸ್ವರಾಜ್ ಇಂಡಿಯಾದ ನೆಲೆ ಇರುವುದು ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ್ ಕ್ಷೇತ್ರಗಳಲ್ಲಿ. ಹಾಗಾಗಿ ನಿಲ್ಲಿಸಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಿದ್ದೇವೆ.

• ಹಾಗದರೆ ಉಳಿದೆಡೆ ಲೋಕಸಭಾ ಕ್ಷೇತ್ರಗಳಲ್ಲಿ ನಿಮ್ಮ ಕೆಲಸ ಏನು?
ಸ್ವರಾಜ್ ಇಂಡಿಯಾ “ದೇಶಕ್ಕಾಗಿ ನಾವು” ಎಂಬ ಜಾಗೃತಿಯ ಆಂದೋಲನದ ಭಾಗವಾಗಿದೆ. ದೇಶವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ, ತತ್ತರಿಸುತ್ತಿರುವ ಕೃಷಿ ಇತ್ಯಾದಿ ವಿಷಯಗಳನ್ನು ಮುನ್ನೆಲೆಗೆ ತಂದು ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುವಂತೆ ವಾತಾವರಣ ಉಂಟುಮಾಡಿದ್ದೇವೆ. ಇದೇನು ಕಮ್ಮಿ ರಾಜಕಾರಣವಲ್ಲ!

• ನೀವು “ದೇಶಕ್ಕಾಗಿ ನಾವು” ಅನ್ನುತ್ತಿದ್ದರೆ ಬಿಜೆಪಿಯವರು “ದೇಶಕ್ಕಾಗಿ ಮೋದಿ” ಅನ್ನುತ್ತಿದ್ದಾರಲ್ಲ!
ಅವರು ಭಾವನಾತ್ಮಕ ವಿಷಯಗಳನ್ನು ಚುನಾವಣಾ ವಿಷಯವಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿ ದಿಕ್ಕೆಟ್ಟು ‘ಮೋದಿ ಮೋದಿ’ ಎಂದು ಕಿರುಚುತ್ತಿದ್ದಾರೆ. ಹೀಗೆ ಕಿರುಚುತ್ತಿರುವವರು ಬಹುತೇಕ ನಿರುದ್ಯೋಗ ಯುವಕರು. ನಿರುದ್ಯೋಗ ಕಳೆದ ನಲವತ್ತೈದು ವರ್ಷಗಳಲ್ಲಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ನೀಡುತ್ತೇವೆ ಎಂದು ಜನತೆಗೆ ವಚನ ನೀಡಿ ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬ ನೀಡುವುದಿರಲಿ, ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಉದ್ಯೋಗ ನಷ್ಟ ಮಾಡಿಬಿಟ್ಟ. ವಚನಪಾಲಕ ರಾಮನನ್ನು ಈ ವಚನ ಭ್ರಷ್ಟರು ಹೇಗೆ ಉಚ್ಚಾರಣೆ ಮಾಡುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಆತ್ಮಸಾಕ್ಷಿ ಅಳುಕು ಇಲ್ಲದವರಿಗೆ ಇದು ಸಾಧ್ಯವಾಗಬಹುದು. ಅದಕ್ಕೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮನ್ನು ಅಧಿಕಾರಕ್ಕೆ ತಂದ ತಮ್ಮ ಪ್ರಣಾಳಿಕೆಯ ಚುನಾವಣಾ ಭರವಸೆಗಳನ್ನು `ಚುನಾವಣಾ ಜುಮ್ಲಾ (ಸುಳ್ಳು)’ ಎಂದು ಹೇಳುತ್ತಾರೆ. ಇದು ನಿರ್ಲಜ್ಜತೆಯ ತುಟ್ಟತುದಿ.

• ಆದರೆ ಬಿಜೆಪಿಯವರು ‘ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ’ ಅನ್ನುತ್ತಾರಲ್ಲ?
ಅವರ ನುಡಿ ನೋಡಬೇಡಿ, ನಡೆ ನೋಡಿ. ದೇಶದ ಸಾರ್ವಜನಿಕ ಸಂಪತ್ತನ್ನು ಮಾರುತ್ತಿರುವವರು ಯಾವ ನಾಲಿಗೆಯಲ್ಲಿ ದೇಶ ಮೊದಲು ಅನ್ನುತ್ತಿದ್ದಾರೆ? ಇದು ದೇಶವನ್ನೇ ಮಾರಿದಂತಾಗುವುದಿಲ್ಲವೇ? ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ಮಾತುಗಾರಿಕೆಯ ಏರಿಳಿತ, ಹಾವಭಾವ ನೋಡಿದರೆ ಏನನ್ನಿಸುತ್ತದೆ? ಇದು ಹಾರಾಜು ಹಾಕುವವರ ಹಾವಭಾವ, ಮಾತುಗಾರಿಕೆಯಂತೆ ಕಾಣುವುದಿಲ್ಲವೆ? ಇನ್ನು ಪಕ್ಷಕ್ಕೆ ಬಂದರೆ ಬಿಜೆಪಿ ಪಕ್ಷ ಎಲ್ಲಿದೆ? ಅದೊಂದು ಕೂಗುಮಾರಿ ಗುಂಪುಮಂದೆಯಾಗಿದೆ. ಅಲ್ಲಿರುವುದು ಇಬ್ಬರೆ. ಮೂರನೆಯವರಿಗೆ ಸ್ಥಾನವಿಲ್ಲ. ಜೊತೆಗೆ ಕೇಂದ್ರ ಸಚಿವ ಸಂಪುಟವನ್ನೇ ನೋಡಿ- ಅಲ್ಲಿರುವುದು ಒಬ್ಬರೆ! ಉಳಿದ ಸಚಿವರು ಪ್ರಧಾನಮಂತ್ರಿಗಳ ಪರಿಚಾರಕರು. ಬಿಜೆಪಿಯವರು ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ ಅಂತಾರಲ್ಲ ಅದನ್ನು ಮೋದಿಯವರು ತಲೆಕೆಳಗೆ ಮಾಡಿಬಿಟ್ಟರು. ಈ ಸಲದ ಚುನಾವಣಾ ಪ್ರಣಾಳಿಕೆ ನೋಡಿ- ಅಲ್ಲಿ ಮೋದಿಯವರೊಬ್ಬರ ಫೋಟೋ ಮಾತ್ರವಿದೆ.

• ಅಂದರೆ ಮೋದಿಯವರು ಏಕವ್ಯಕ್ತಿ ಅಧಿಕಾರ ಕೇಂದ್ರದತ್ತ ನಡೆಯುತ್ತಿದ್ದಾರೆ ಎನ್ನುವುದು ನಿಮ್ಮ ಆರೋಪವೇ?
ಶಾಸ್ತ್ರ ಕೇಳಲೇಬೇಕಾಗಿಲ್ಲ. ಮೋದಿಯವರದು ಏಕವ್ಯಕ್ತಿ ಕೇಂದ್ರಿತ ಅಧಿಕಾರ ಅನ್ನುವ ಮಾತು ಬಿಜೆಪಿ ಪಕ್ಷದ ನಾಯಕರ ಅಸಹಾಯಕ ಪಿಸುನುಡಿಗಳು.

• ಹಾಗಾದರೆ ಈ ಹಿಂದೆ ಇಂದಿರಾಗಾಂಧಿಯವರಿಗೂ ಏಕವ್ಯಕ್ತಿ ಅಧಿಕಾರ ಕೇಂದ್ರಿತ ಎಂಬ ಆರೋಪ ಇತ್ತಲ್ಲ?
ಹೌದು ಇತ್ತು. ಆದರೆ ಈ ಇಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಇಂದಿರಾ ಅವರ ಆಡಳಿತದಲ್ಲಿ- ಬಡವರು, ಧ್ವನಿ ಇಲ್ಲದವರು, ಅಸಹಾಯಕರು ಉಸಿರಾಡುವಂತಹ ಸುಧಾರಣೆಗಳನ್ನು ತಂದರು. ಆದರೆ ಮೋದಿಯವರ ಆಡಳಿತದಲ್ಲಿ ಕೆಲವೇ ಕೆಲವು ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳ ಬೆಳವಣಿಗೆಯಾಗುವುದಕ್ಕೆ ದೇಶದ ಪ್ರಧಾನಿ ಮೋದಿಯವರು ಒಬ್ಬ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸಿಬಿಟ್ಟರು. ಅದಕ್ಕಾಗೇ, ಮೋದಿಯವರ ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.

• ನೀವು ವಿದ್ಯಾರ್ಥಿದೆಸೆಯಲ್ಲಿ ಲೋಹಿಯಾ ವಿಚಾರಧಾರೆಯ ಸಮಾಜವಾದಿ ಯುವಜನ ಸಭಾದಲ್ಲಿ ಇದ್ದವರು. ಲೋಹಿಯಾ ಅವರ ‘ಕಾಂಗ್ರೆಸ್ ವಿರೋಧಿ’ (Anti-Congress) ನಿಲುವಿಗೆ ಈಗ ನಿಮ್ಮ ಅಭಿಪ್ರಾಯ?
ಅಕ್ಷರ, ಪದಕ್ಕೆ ಅರ್ಥ ನೀಡಬಾರದು. ಅದರ ಆಂತರ್ಯ (Spirit) ನೋಡಬೇಕು. ಆ ಕಾಲಘಟ್ಟದಲ್ಲಿ ಲೋಹಿಯಾ ಹಾಗೂ ಅಂಬೇಡ್ಕರ್ ಅವರ ‘ಕಾಂಗ್ರೆಸ್ ವಿರೋಧಿ’ ಎಂದರೆ ಅದು ಆಂತರ್ಯದಲ್ಲಿ `ವ್ಯವಸ್ಥೆ ವಿರೋಧಿ’ (Anti- establishment) ಎಂದೇ ಅರ್ಥ. ಈ ಅರ್ಥದಲ್ಲಿ ಇಂದು ‘ವ್ಯವಸ್ಥೆ ವಿರೋಧಿ’ ನಿಲುವು ಎಂದರೆ ಏನು? ಇಂದು ಬಿಜೆಪಿ ದೇಶವನ್ನು ಆಳುತ್ತಿದೆ. ಈಗ ವ್ಯವಸ್ಥೆ ವಿರೋಧಿ ನಿಲುವು ಎಂದರೆ ಅದು ಬಿಜೆಪಿ ವಿರೋಧಿ ನಿಲುವು ಎಂದೇ ಆಗುತ್ತದೆ. ಸಮಾಜದ ಸಾಮರಸ್ಯ ಮತ್ತು ಸಮಾನತೆಗಾಗಿ ಅಂದರೆ ಮುಂಚಲನೆಗಾಗಿ ಬದಲಾವಣೆ ಬೇಕೆಂದಿದ್ದರೆ ಸಮುದಾಯ ಪ್ರಜ್ಞೆ ಯಾವಾಗಲೂ ವ್ಯವಸ್ಥೆ ವಿರೋಧಿ ನಿಲುವನ್ನು ಜಾಗೃತವಾಗಿರಿಸಿಕೊಂಡಿರಬೇಕಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...