Homeಅಂಕಣಗಳುಪುಟಕ್ಕಿಟ್ಟ ಪುಟಗಳು; ಜೋಸೆಫ್ ಕ್ಯಾಂಬಲ್ ಅವರ 'ಮಿಥಿಕದ ಶಕ್ತಿ': ಪುರಾಣಗಳ ಶಕ್ತಿಯ ಶೋಧ

ಪುಟಕ್ಕಿಟ್ಟ ಪುಟಗಳು; ಜೋಸೆಫ್ ಕ್ಯಾಂಬಲ್ ಅವರ ‘ಮಿಥಿಕದ ಶಕ್ತಿ’: ಪುರಾಣಗಳ ಶಕ್ತಿಯ ಶೋಧ

- Advertisement -
- Advertisement -

’ದಪವರ್ ಆಫ್ ಮಿಥ್’ ಎಂಬ ಈ ಕೃತಿಯು 1988ರಲ್ಲಿ ಪಿಬಿಎಸ್ ವಾಹಿನಿಯು ನಿರ್ಮಿಸಿದ ಅಮೆರಿಕೆಯ ಜೋಸೆಫ್ ಕ್ಯಾಂಬಲ್ ಅವರ ಸಂದರ್ಶನದ ಸಾಕ್ಷ್ಯಚಿತ್ರವನ್ನು ಆಧರಿಸಿದೆ. ಪುರಾಣಗಳ ಅಥವಾ ಮಿಥಿಕಗಳ ಸಂಶೋಧಕ ವಿದ್ವಾಂಸರಾದ ಜೋಸೆಫ್ ಕ್ಯಾಂಬಲ್ ಮತ್ತು ಪತ್ರಕರ್ತ ಬಿಲ್ ಮಾಯರ್ಸ್ ನಡುವಿನ ಸಂಭಾಷಣೆಯ ಫಲವಿದು.

ಈ ಚರ್ಚೆಗಳಲ್ಲಿ ಕ್ಯಾಂಬಲ್ ವಿಶ್ವದ ವಿವಿಧ ಮಿಥಿಕಗಳ ನಡುವಿನ ತುಲನೆಯನ್ನು ಮತ್ತು ಪುರಾಣಗಳು ಮಾನವ ಸಮಾಜದ ಮೇಲೆ ಬೀರುವ ಪ್ರಭಾವವನ್ನು ತಮ್ಮ ದೃಷ್ಟಿ, ಧೋರಣೆ ಮತ್ತು ಗ್ರಹಿಕೆಯಿಂದ ವಿಶ್ಲೇಷಿಸಿದ್ದಾರೆ. ಪುರಾಣಗಳ ಬಗೆಗಿನ ತಮ್ಮ ’ದ ಹೀರೋ ವಿತ್ ಎ ಥೌಸಂಡ್ ಫೇಸಸ್’ ಕೃತಿಯ ಮುಂದುವರಿಕೆಯ ಭಾಗದಂತೆ ಈ ಕೃತಿಯು ಕಂಡರೂ, ಹಿಂದಿನ ಕೃತಿಯನ್ನು ಮತ್ತಷ್ಟು ಸ್ಪಷ್ಟಗೊಳಿಸುವ ಮತ್ತು ವಿಸ್ತರಿಸುವ ರೀತಿಯಂತೆ ಕಾಣುತ್ತದೆ.

ಯಾವುದೇ ಸಮುದಾಯ ಅಥವಾ ಸಮೂಹದ ನಾಯಕನು ತನ್ನ ಪ್ರೀತಿಯ ಜನಾಂಗವನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತೀಕರಿಸಲು ಯತ್ನಿಸಿದ ನಂತರ ಅವನ ಮೇಲಿನ ಅಭಿಮಾನ ಮತ್ತು ಪ್ರೇಮವು ಅವನ ನಂತರದ ಜನರಿಗೆ ಮಿಥಿಕಗಳನ್ನು ಕಟ್ಟಲು ಪ್ರೇರೇಪಿಸುತ್ತದೆ. ಇಂತಹ ನಾಯಕರು ಹಲವು ಬಗೆಗಳಲ್ಲಿ ಪ್ರಕಟಗೊಳ್ಳುತ್ತಾರೆ. ಯೇಸು, ಬುದ್ಧ, ಕೃಷ್ಣ; ಯಾರೇ ಆಗಲಿ ಅವರ ವಾಸ್ತವದ ಸಾಧನೆಯನ್ನು ಮೀರಿ ಅತಿಮಾನುಷತನದಲ್ಲಿ ಪೌರಾಣಿಕವಾಗಿ ಚಿತ್ರಿಸುವುದರಲ್ಲಿ ಅವರ ಅಭಿಮಾನಿಗಳು ಹಿಂದೆ ಬೀಳಲಿಲ್ಲ. ಕ್ರಾಂತಿಕಾರಿ ಮತ್ತು ಪ್ರೇಮಮಯಿ ಯೇಸುವಿನ ವಾಸ್ತವವನ್ನು ಪವಾಡಗಳಿಂದಲೇ ತುಂಬಿರುವ ಬೈಬಲ್ಲಿನಲ್ಲಿ ಹುಡುಕಬೇಕಾಗುತ್ತದೆ. ಬುದ್ಧನೂ ಇಂತಹ ಅತಿಮಾನುಷ ಸಂಗತಿಗಳಿಂದ ಹೊರತಾಗಲಿಲ್ಲ.

ತಾಯಿ ಮಾಯಾದೇವಿಯ ಗರ್ಭದಿಂದ ಬಂದ ಕೂಡಲೇ ಹೆಜ್ಜೆಗಳನ್ನು ಇರಿಸುವಂತೆ ಮಾಡುವ ಪೌರಾಣಿಕ ಚಿತ್ರಣವು ತಾಯಿಯ ಗರ್ಭದೊಳಗೆ ಬಿಳಿಯ ಆನೆಯು ಪ್ರವೇಶಿಸುವ ಮಿಥಿಕವನ್ನು ವಿಜೃಂಭಿಸುತ್ತದೆ. ಹಾಗೆಯೇ ಕೃಷ್ಣನ ಎಲ್ಲಾ ಮಾನುಷ ಚಟುವಟಿಕೆಗಳು ಅತ್ಯುತ್ಪ್ರೇಕ್ಷೆಯಿಂದ ಕೂಡಿದ್ದು ಜಗದೋದ್ಧಾರಕನನ್ನಾಗಿಸುತ್ತದೆ. ಮಹಾನ್ ನಾಯಕರ ಇಂತಹ ಪೌರಾಣಿಕ ಚಿತ್ರಣಗಳಿಂದ ಜಗತ್ತಿನ ಯಾವುದೇ ಭಾಗವು ಮುಕ್ತವಾಗಿಲ್ಲ. ಬರೀ ಧಾರ್ಮಿಕವಾಗಿಯಷ್ಟೇ ಅಲ್ಲದೇ ಮನರಂಜನೆಯ ದೃಷ್ಟಿಯಲ್ಲಿ ಬರೆಯುವ ಸೃಜನಶೀಲ ಸಾಹಿತ್ಯ ಕೃತಿಗಳು, ಸಿನಿಮಾಗಳು ಕೂಡಾ ನಾಯಕರ ವಿಜೃಂಭಣೆಯಿಂದ ಹಿಂದೆ ಸರಿಯುವುದಿಲ್ಲ. ಕ್ಯಾಂಬಲ್ ಇವನ್ನೂ ಮನಶಾಸ್ತ್ರೀಯವಾಗಿ ಮತ್ತು ಸಾಂಸ್ಕೃತಿಕವಾಗಿ ವಿವರಿಸಲು ಯತ್ನಿಸುತ್ತಾರೆ.

ಈ ಮಿಥಿಕಗಳು ಬರಿಯ ಮನರಂಜನೆ ಮಾತ್ರವಲ್ಲದೇ ಮನಶಾಸ್ತ್ರೀಯವಾಗಿ ಗಮನಿಸಿದಾಗ, ಅವುಗಳು ತಮ್ಮ ನಾನಾ ಸಂದೇಶಗಳಿಂದ ಸಮಾಜದಲ್ಲಿ ಅನಾವರಣಗೊಳ್ಳುತ್ತವೆ. ಸಮಾಜದಲ್ಲಿ ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘರ್ಷಗಳು, ದೈವತ್ವದ ಪರಿಕಲ್ಪನೆ ಮತ್ತು ಪ್ರಕೃತಿ, ನೈತಿಕತೆಗೆ ಒಗ್ಗಿಸುವ ಪಾಪಪುಣ್ಯಗಳ ನೇಮಗಳು, ಮಾನುಷ ಸಹಜವಾಗಿ ಎದುರಾಗುವ ದುಃಖ ದುಮ್ಮಾನಗಳನ್ನು ಎದುರಿಸುವಲ್ಲಿ ಮಿಥಿಗಳಿರುವ ಶಕ್ತಿ ಎಲ್ಲವೂ ಮನುಷ್ಯನಲ್ಲಿ ಸಾಫ್ಟ್-ವೇರ್ ರೀತಿಯಲ್ಲಿ ಧಾರ್ಮಿಕವಾಗಿ ಕೆಲಸ ಮಾಡುತ್ತಿರುತ್ತವೆ.
ಮಿಥಿಕಗಳನ್ನು ಸೃಷ್ಟಿಸುವವರು ಕತೆಗಾರರು. ಅವರ ಭಾವಾತಿರೇಕವು ಮತ್ತು ಅಭಿಮಾನವು ತನ್ನ ಕೇಳುಗರಿಗೆ ಚಿತ್ರಣಗಳನ್ನು ಕಟ್ಟಿಕೊಡುತ್ತದೆ. ಅವುಗಳನ್ನು ಪೀಳಿಗೆಯಿಂದ ಪೀಳಿಗೆಗೆ ಸ್ಮೃತಿಯಲ್ಲಿ ಸಾಗಿಸಲಾಗುತ್ತದೆ.

ಭೌತಿಕವಾಗಿದ್ದು ಒಂದು ದಿನ ಬಿದ್ದುಹೋಗುವ ಮನುಷ್ಯನ ಶರೀರ ಮತ್ತು ಅವನ ಜೀವನಚಕ್ರದ ಬಗ್ಗೆ ಅತೀವ ಕುತೂಹಲ ಮತ್ತು ಪ್ರೇಮವಿರುವ ಈ ಕಥನಕಾರರು ಮಿಥಿಕಗಳಿಂದ ಮತ್ತಷ್ಟು ಗಾಢಗೊಳಿಸುತ್ತಾರೆ. ಅಸ್ಮಿತೆಯ ಹುಡುಕಾಟದಲ್ಲಿ ಸಾಹಿತಿಗಳು, ಕಲಾವಿದರು ಈ ಮಿಥಿಕಗಳಿಂದ ಹೊರಬರುವುದೇ ಇಲ್ಲ. ಅದನ್ನೇ ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸುತ್ತಾ ಮುಂದುವರಿಸಿದರೆ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಸಮುದಾಯಗಳು ಅವನ್ನು ಜೀವಂತವಾಗಿರಿಸಿರುತ್ತಾರೆ. ತಮಾಷೆಯೆಂದರೆ, ಸಾಂಪ್ರದಾಯಿಕ ಆಚಾರ ವಿಚಾರಗಳಲ್ಲಿ ತೊಡಗಿರುವವರಿಗೆ ತಮ್ಮ ನೇಮಗಳ ಮೂಲಸ್ವರೂಪವೇ ಗೊತ್ತಿರುವುದಿಲ್ಲ. ಜಿಜ್ಞಾಸುಗಳು ಕೇಳಿದರೆ ಪುರಾಣದ ಅಥವಾ ಮಿಥಿಕದ ಸ್ವರೂಪವನ್ನೇ ಪುನರುಚ್ಚರಿಸುತ್ತಾರೆ. ಏಕೆಂದರೆ, ತಮ್ಮ ಈ ಆಚರಣೆಗಳು ಸಾಂಕೇತಿಕವೂ ಮತ್ತು ವಾಸ್ತವದ ನೆಲೆಗಟ್ಟಿನದ್ದಲ್ಲ ಎಂದು ತಿಳಿದುಬಿಟ್ಟರೆ ಅವುಗಳನ್ನು ಈ ಕಾಲಘಟ್ಟದಲ್ಲಿ ಮುಂದುವರಿಸುವ ಅಗತ್ಯವೇ ಕಂಡುಬರುವುದಿಲ್ಲ. ಆಗ ಪುರೋಹಿತರ, ಧಾರ್ಮಿಕ ಮುಂದಾಳುಗಳ ಕೆಲಸವೇ ಇಲ್ಲದಂತಾಗುತ್ತದೆ.

ಈ ಭೀತಿ ಎಲ್ಲಾ ಸ್ಥಾಪಕ ಧರ್ಮದವರಲ್ಲಿಯೂ ಮೂಲದಲ್ಲಿ ಇದ್ದೇ ಇರುತ್ತದೆ. ಹಾಗಾಗಿಯೇ ಪಾದ್ರಿಗಳಾಗಲಿ, ಇತರ ಧಾರ್ಮಿಕ ಪುರೋಹಿತರಾಗಲಿ, ಅರ್ಚಕ ಅಥವಾ ಪ್ರವಚಕರಾಗಲಿ ಮಿಥಿಕಗಳನ್ನು ಪ್ರಸ್ತುತ ಕಾಲಕ್ಕೆ ಅನುಸಂಧಾನ ಮಾಡಿ ಹೊಸ ವಿವರಣೆಗಳನ್ನು ಕೊಡಲು ಯತ್ನಿಸುವರೇ ಹೊರತು ಮಿಥಿಕದ ಒಗಟನ್ನು ಬಿಡಿಸಿ ಜನರ ಮನಸ್ಸನ್ನು ಮುಕ್ತವಾಗಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ಇಡೀ ಧಾರ್ಮಿಕ ವ್ಯವಸ್ಥೆಯೇ ಇದರಿಂದಾಗಿ ಕುಸಿದುಬೀಳುತ್ತದೆ. ಜೊತೆಗೆ ಸಾಮಾನ್ಯ ಜನರೂ ಮಿಥಿಕಗಳ ಆವರಣಗಳಿಂದ ಹೊರಗೆ ಬರುವಷ್ಟು ಪ್ರಬುದ್ಧರಾಗಿಯೂ ಇರುವುದಿಲ್ಲ. ಧಾರ್ಮಿಕ ಮತ್ತು ಸಾಮುದಾಯಿಕ ವ್ಯವಸ್ಥೆಗಳೆರಡೂ ಕುಸಿದು ಬೀಳಬಹುದು ಎಂದೇ ಸಾಂಪ್ರದಾಯಿಕ ಆಚಾರಗಳನ್ನು ಪುನಶ್ಚೇತನಗೊಳಿಸಿಕೊಂಡಿರಲು ಯತ್ನಿಸುತ್ತಾರೆ. ಆಸ್ತಿಕರಲ್ಲಿ ಇರುವಷ್ಟು ತಾತ್ವಿಕ ಗೊಂದಲಗಳು, ಪರಾಧೀನ ಸ್ಥಿತಿಗಳು, ವಿವಿಧ ಬಗೆಯ ತೊಳಲಾಟದ ಮನೋಭಾವಗಳು ನಾಸ್ತಿಕರಲ್ಲಿ ಅಷ್ಟು ಕಂಡುಬರುವುದಿಲ್ಲ. ತನ್ನ ಉತ್ಥಾನ ಮತ್ತು ಪತನಗಳಿಗೆ ತಾನೇ ಹೊಣೆಗಾರನನ್ನಾಗಿಸಿಕೊಳ್ಳುತ್ತಾನೆ. ಅಷ್ಟೂ ಆತ್ಮರತಿಯವನಾಗಿದ್ದರೆ ಇತರ ವ್ಯಕ್ತಿಗಳನ್ನು ದೂಷಿತ್ತಾನೆ, ಸಂದರ್ಭ, ಸನ್ನಿವೇಶಗಳನ್ನು ದೂರುತ್ತಾನೆ. ಆದರೆ, ಪೂರ್ವಾರ್ಜಿತ ಕರ್ಮ, ವಿಧಿ, ಹಣೆಬರಹ, ದೈವದ ಕೃಪೆ, ಶಾಪ ಇತ್ಯಾದಿಗಳಂತಹ ಅತಿಮಾನುಷ ಆರೋಪಗಳನ್ನು ಮಾಡುವುದಿಲ್ಲ.

ಕರ್ಮ ಎಂದರೆ ಮಾಡಿದ್ದುಣ್ಣೋ ಮಾರಾಯಾ ಅಷ್ಟೇ. ಮಾಡಿದ ಕೆಲಸಗಳು, ಆಲೋಚನೆಗಳು ಮನುಷ್ಯನ ಮನಸ್ಸಿನ ಸುಪ್ತಾವಸ್ಥೆಯಲ್ಲಿ ಅಡಗಿದ್ದು, ಅದು ಜಾಗೃತ ಮನಸ್ಸಿನ ಬಲವನ್ನು ಮೀರಿ ತನ್ನ ಪ್ರಭಾವಗಳನ್ನು ತೋರಿಸುವುದರಲ್ಲಿ ಯಶಸ್ವಿಯಾಗುವುದು. ಒಬ್ಬ ವ್ಯಕ್ತಿಗೆ ಲೋಕವು ಕೆಟ್ಟದ್ದು ಎಂದು ಕರೆಯುವ ಕೆಲಸವನ್ನು ಮಾಡುವುದರಲ್ಲಿ ಯಾವ ಅಪರಾಧಿ ಭಾವವೂ ಇಲ್ಲದಿದ್ದ ಪಕ್ಷದಲ್ಲಿ ಅವನಿಗೆ ಕರ್ಮ ಎಂಬುದೇ ಇಲ್ಲ. ಅದೇ ಓರ್ವ ವ್ಯಕ್ತಿ ಲೋಕವು ಸಮ್ಮತಿಸಿದ ಕೆಲಸವನ್ನು ಮಾಡಿದ್ದರೂ ಅವನಿಗೆ ಅದರ ಬಗ್ಗೆ ಅಳುಕು, ಅಂಜಿಕೆ ಮತ್ತು ಅಪರಾಧ ಪ್ರಜ್ಞೆ ಇದ್ದಲ್ಲಿ, ಅವನ ಸುಪ್ತಮನಸ್ಥಿತಿಯು ತನ್ನ ಪರಿಣಾಮವನ್ನು ಅವನ ಮೇಲೆ ಉಂಟು ಮಾಡುತ್ತದೆ. ಆಗ ಆತ ತನ್ನ ಕರ್ಮಫಲಾಧೀನ.

ಕರ್ಮ ಎಂಬುದು ಮನಶಾಸ್ತ್ರೀಯ ವಿಚಾರವೇ ಹೊರತು ಪಾಪಪುಣ್ಯಗಳ ಪ್ರತಿಫಲಗಳಲ್ಲ. ಉದಾಹರಿಸುವುದಾದರೆ, ಲೋಕವು ಖಂಡಿಸುವ ಅತ್ಯಾಚಾರದಂತಹ ಕೃತ್ಯವನ್ನು ಮಾಡಿದ್ದರೂ ಅಪರಾಧ ಪ್ರಜ್ಞೆ ಇಲ್ಲದೇ ನಿರುಮ್ಮಳನಾಗಿರುವವನಿಗೆ ಕರ್ಮ ಬಾಧೆ ಇಲ್ಲ. ಆದರೆ, ಸಮಾಜ ಸಮ್ಮತದ ವಿವಾಹವಾಗಿದ್ದರೂ ಒಲ್ಲದ ಮದುವೆ ಅದಾಗಿದ್ದರೆ ಅಥವಾ ಯಾವುದೇ ಕಾರಣಕ್ಕೆ ಅಪರಾಧ ಪ್ರಜ್ಞೆಯೋ ಮತ್ತೊಂದೋ ನಕಾರಾತ್ಮಕವಾದ ಮನಸ್ಥಿತಿ ಇದ್ದಲ್ಲಿ ಅವನಿಗೆ ಅದು ಕರ್ಮ. ಮೋಸ ಮಾಡಿ ಅಮಾಯಕ ಜನರನ್ನು ಸುಲಿಗೆ ಮಾಡಿ ಶ್ರೀಮಂತರಾಗಿರುವವರು ಅಪರಾಧ ಪ್ರಜ್ಞೆಯನ್ನು ಹೊಂದಿದ್ದವರಾಗಿದ್ದರೆ ದೇವರ ಕೆಲಸ ಅಥವಾ ಧಾರ್ಮಿಕ ಚಟುವಟಿಕೆಗಳು ಅಥವಾ ಅನಾಥಾಲಯಕ್ಕೆ ದಾನ, ಸಾಮೂಹಿಕ ಅನ್ನದಾನದಂತಹ ಇನ್ನಾವುದೇ ಸಮಾಜಸೇವೆಗಳಿಂದ ಆ ಅಪರಾಧ ಪ್ರಜ್ಞೆಯಿಂದ ಮುಕ್ತರಾಗಲು ಯತ್ನಿಸುತ್ತಿರುತ್ತಾರೆ. ಅಪರಾಧ ಪ್ರಜ್ಞೆಯೇ ಇಲ್ಲದಿದ್ದಲ್ಲಿ ಆರಾಮವಾಗಿ ವೈಭವದ ಜೀವನವನ್ನು ನಡೆಸುತ್ತಿರುತ್ತಾರೆ.

ಮಿಥಿಕಗಳು ಮತ್ತು ಆಧುನಿಕ ಜಗತ್ತು, ಅಂತರಂಗದ ಯಾನ, ಬಲಿದಾನ ಮತ್ತು ಅದರಲ್ಲಿ ದೊರಕುವ ಆನಂದ, ಸಮುದಾಯದ ನಾಯಕರ ಸಾಹಸಗಳು, ಪ್ರೇಮ ಮತ್ತು ವಿವಾಹದ ಕತೆಗಳು, ಅನಂತತೆಯ ಮುಸುಕು, ತಮ್ಮ ಅಭಿಮಾನದ ವ್ಯಕ್ತಿಗಳಿಗೆ ದೇವರ ಮುಖವಾಡವನ್ನು ತೊಡಿಸುವುದು; ಹೀಗೆ ಹಲವಾರು ವಿಷಯಗಳನ್ನು ಅನಾವರಣ ಮಾಡುತ್ತಾ ಹೋಗುವ ಕ್ಯಾಂಬಲ್ ಭಾರತದ ಪುರಾಣಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಲಕರಣೆಗಳನ್ನು ಒದಗಿಸುತ್ತಾರೆ.

ಸರ್ವವ್ಯಾಪಿಯಾದ ಪೌರಾಣಿಕ ಕಥನಗಳು ಮನುಕುಲದ ಚರಿತ್ರೆಯಲ್ಲಿ ಹೇಗೆ ಬೆಸೆದುಕೊಂಡೇ ಬಂದಿದೆ ಎಂಬುದನ್ನು ವಿಸ್ತಾರವಾಗಿ ಹೇಳುವ ಕ್ಯಾಂಬಲ್ ಅವರಿಗೆ ಭಾರತದ ಜಾತಿ, ಗೋತ್ರ ಮತ್ತು ಬುಡಕಟ್ಟುಗಳ ಸೂಕ್ಷ್ಮತೆ ದೇಸೀಯವಾಗಿ ಇಲ್ಲದಿದ್ದರೂ ಅಧ್ಯಯನಕ್ಕೆ ಪೂರಕವಾಗುವಂತಹ ತಾಂತ್ರಿಕ ವಿಧಾನಗಳನ್ನು ಒದಗಿಸುತ್ತಾರೆ. ಅದು ಅವರ ದೃಷ್ಟಿಕೋನವಷ್ಟೇ ಎಂದು ತೆಗೆದುಹಾಕದಿರುವಷ್ಟು ಗಂಭೀರವಾಗಿ ಸಂಶೋಧನಾ ವಿದ್ಯಾರ್ಥಿಗಳು ಪರಿಗಣಿಸಿ ನಂತರ ತಮ್ಮ ದೇಸೀಮೂಲದ ಸೂಕ್ಷ್ಮತೆಗಳಿಂದ ವಿಷಯಗಳನ್ನು ಗ್ರಹಿಸಬಹುದಾದಷ್ಟು ಅಧ್ಯಯನಕ್ಕೆ ಪೂರಕವಾದ ವಿಷಯಗಳಿವೆ.

ಬರಹದ ರೂಪದಲ್ಲಿ ದಾಖಲಿಸುವ ಮುನ್ನ ಬಾಯಿಂದ ಬಾಯಿಗೆ ದಾಟುತ್ತಾ ಬಂದಂತಹ ಕತೆಗಳು ಮತ್ತು ಐತಿಹ್ಯಗಳು ದಟ್ಟಗೊಂಡವು. ಪುರಾಣಗಳಿಗಿರುವ ಆ ಮೌಖಿಕ ಪರಂಪರೆಯ ಶಕ್ತಿಯು ಇನ್ನೂ ನಮ್ಮ ಜನರಲ್ಲಿ ಕುಂದಿಲ್ಲ. ಅದನ್ನೇ ಶ್ರದ್ಧೆ, ನಂಬುಗೆ, ವಿಶ್ವಾಸ, ನಡೆದುಕೊಂಡು ಬಂದಿರುವುದು ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾ ಪ್ರಸ್ತುತವೋ ಅಪ್ರಸ್ತುತವೋ, ಸಂಪ್ರದಾಯವು ಇರಬೇಕೆನ್ನುವ ಮನಸ್ಥಿತಿ ಬಹುಪಾಲು ಜನರಲ್ಲಿ ಗಾಢವಾಗಿದೆ. ಅದರಿಂದಾಚೆಗೆ ಆಲೋಚನೆಯನ್ನೇ ಮಾಡಲಾಗದಷ್ಟು ಸೂಕ್ಷ್ಮಾವಸ್ಥೆಯಲ್ಲಿ ಪ್ರತಿಷ್ಟಾಪಿತವಾಗಿದೆ.

ಒಟ್ಟಾರೆ ಗಮನಿಸಿ ನೋಡಲು ಈ ಮಿಥಿಕಗಳು ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆಯನ್ನು ತನ್ನಲ್ಲಿ ಹುದುಗಿಸಿಕೊಂಡಿವೆ. ಈ ಸತ್ಯವನ್ನು ಅನಾವರಣ ಮಾಡಲು ಧಾರ್ಮಿಕರಿಗೆ ಆಸಕ್ತಿ ಇಲ್ಲ. ಏಕೆಂದರೆ ತಮ್ಮ ಗುರುತನ್ನೇ ಕಳೆದುಕೊಳ್ಳುವ ಭಯ ಮತ್ತು ಅದರಿಂದಾಗಿಯೇ ಸುಖವಾಗಿರುವ ಆಸೆ. ಆದ್ದರಿಂದಲೇ ಅಧಾರ್ಮಿಕರು, ವಾಸ್ತವವಾದಿಗಳು, ನಾಸ್ತಿಕರು ತಮ್ಮ ವಾದಗಳನ್ನು ಮುಂದಿಟ್ಟಾಗ ಅವರು ಕನಲುವುದು. ಈ ಪುರಾಣವು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸುವ ಕ್ಯಾಂಬಲ್, ತೀರಾ ಖಂಡಿಸುವ ಮತ್ತು ಮಂಡಿಸುವ ಗೋಜಿಗೆ ಹೋಗದೇ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಮರಣದವರೆಗೆ ಅವನ ಜೀವನವನ್ನು ಈ ಮಿಥಿಕಗಳು ಎಷ್ಟರಮಟ್ಟಿಗೆ ಸೈದ್ಧಾಂತಿಕವಾಗಿ ನಿಯಂತ್ರಿಸುತ್ತಾ ಹೋಗುತ್ತದೆ ಎಂದು ತಿಳಿಸುವ ಯತ್ನ ಮಾಡುತ್ತಾರೆ.

ಪುರಾಣಗಳ ಶಕ್ತಿಗೆ ಅಧೀನವಾಗಿರುವ ಮನುಷ್ಯ ಧಾರ್ಮಿಕವಾಗಿ ಅಲ್ಲದಿದ್ದರೂ ಯಾವುದಾದರೊಂದು ಬಗೆಯಲ್ಲಿ ಮಿಥಿಕಗಳನ್ನು ವಿಜೃಂಭಿಸುತ್ತಲೇ ಇರುತ್ತಾನೆ. ಇದಕ್ಕೆ ದೇಶಕಾಲಗಳ ಇತಿಮಿತಿಗಳಿಲ್ಲ. ಧಾರ್ಮಿಕರಾಗಿಲ್ಲದವರೂ ಸಿನಿಮಾ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಿಥಿಕಗಳನ್ನು ಜೀವಂತವಾಗಿಟ್ಟಿರುತ್ತಾರೆ.

ಯಹೂದಿಗಳಿಗಿಂತ ಮುನ್ನಾ ಕಾಲದ ಬುಡಕಟ್ಟುಗಳಿಂದ ಹಿಡಿದು ನವನವೀನ ಜನಾಂಗದವರೆಗೂ ಮಿಥಿಕಗಳ ಶಕ್ತಿಯು ಮನುಷ್ಯನ ಚರಿತ್ರೆಯಲ್ಲಿ ಎಷ್ಟರಮಟ್ಟಿಗೆ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ ಎಂಬುದನ್ನು ಬಹಳ ಪಾಂಡಿತ್ಯಪೂರ್ಣವಾಗಿ ಜೋಸೆಫ್ ಕ್ಯಾಂಬಲ್ ಪ್ರಸ್ತುತಪಡಿಸುತ್ತಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಇಸ್ಲಾಂ ಅರ್ಥದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಇಸ್ಲಾಂ ಸಮೀಕ್ಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...