Homeಮುಖಪುಟವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

ವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

- Advertisement -
- Advertisement -

ಇತಿಹಾಸದ ಅಧ್ಯಯನ ಅಂದರೆ ಹಳೆ ಪುಸ್ತಕ ಮತ್ತು ದಾಖಲೆಗಳ ನಡುವೆ ಸಹಜೀವನ. ಮನುಷ್ಯ ಬರೆದ ಕೃತಿ ಅಥವಾ ಬಿಡಿಸಿದ ಚಿತ್ರ ಆ ಸಮಯದ, ಇತಿಹಾಸದ ಪ್ರಮುಖ ಮೂಲ. ಇಂತಹ ಮೂಲ ಕೃತಿಗಳನ್ನು, ದಾಖಲೆಗಳನ್ನು ಹುಡುಕಿ, ಅವುಗಳನ್ನು ಅಭ್ಯಾಸ ಮಾಡಿ, ಅವುಗಳಲ್ಲಿ ಇರುವ ಪ್ರಮುಖ ಮಾಹಿತಿಗಳನ್ನು ಒರೆಗೆ ಹಚ್ಚಿ ಹೊರತರುವುದು ಇತಿಹಾಸಕಾರರ ಕೆಲಸ. ನಾನು ಇತಿಹಾಸ ಕಲಿಯಲು ಕಾಲೇಜಿಗೆ ಹೋದವನಲ್ಲ. ಆದರೆ ನನಗೆ ನಾನಾ ತರಹದ ಇತಿಹಾಸಗಳಲ್ಲಿ ಆಸಕ್ತಿ.

ಸುಮಾರು ವರ್ಷಗಳ ಹಿಂದೆ, ನನಗೆ ಇತಿಹಾಸದ ಹುಚ್ಚು ಹಿಡಿದ ಹರೆಯದಲ್ಲಿ, ನಾನು ಬೆಂಗಳೂರಿನ ಬ್ರಿಗೇಡ್ ರೋಡಿನ ಸಂದಿಯಲ್ಲಿ ಇರುವ ’ಸೆಲೆಕ್ಟ್’ ಬುಕ್ ಅಂಗಡಿಗೆ ಹೋಗುತ್ತಿದ್ದೆ. ಎರಡೇ ಕೋಣೆ ಇರುವ ಈ ಚಿಕ್ಕ ಅಂಗಡಿಯಲ್ಲಿ ನಾನಾ ತರಹದ-ನಮೂನೆಯ ಪುಸ್ತಕಗಳು. ನನಗೆ ಫಜ್ಲುಲ್ ಹಸನ್ ಅವರ “Bangalore through Centuries” ಪುಸ್ತಕ ಬೇಕಾಗಿತ್ತು. ಆದರೆ ಅಲ್ಲಿಯ ಸಂಗ್ರಹ ನೋಡಿ ಯಾವುದ್ಯಾವದೋ ಪುಸ್ತಕಗಳಲ್ಲಿ ಮೈಮರೆತುಬಿಟ್ಟೆ. ನನ್ನ ವಿಚಿತ್ರ ನಡವಳಿಕೆ ಗಮನಿಸಿದ ಸೆಲೆಕ್ಟ್ ಮಾಲೀಕರಾದ ಮೂರ್ತಿ ಅವರು “ನೀವು ಇಲ್ಲಿಗೆ ಮೊದಲು ಸರ್ತಿ ಬಂದಿದ್ದು, ಅಲ್ವ, ಏನು ಹುಡುಕ್ತಾ ಇದ್ದೀರಾ” ಅಂತ ಕೇಳಿದರು. ನಾನು ಹಸನ್ ಅವರ ಪುಸ್ತಕದ ಹೆಸರು ಹೇಳಿದ ತಕ್ಷಣ ಅವರು “ಅಯ್ಯೋ, ನಿಮಗೆ ಬೆಂಗಳೂರು ಇತಿಹಾಸದಲ್ಲಿ ಆಸಕ್ತಿನಾ? ಬನ್ನಿ ಇಲ್ಲಿ” ಅಂದು, ಹಸನ್ ಅವರ ಪುಸ್ತಕದ ಜೆರಾಕ್ಸ್ ಜೊತೆಗೆ ಇನ್ನು ಎರಡು ಮೂರು ಬೆಂಗಳೂರಿನ ಬಗೆಗಿನ ಪುಸ್ತಕಗಳನ್ನು ಕೊಟ್ಟರು. ಆ ದಿನದ ನಂತರ, ಸೆಲೆಕ್ಟ್ ಅಂಗಡಿ ಹೋಗೋದು ಒಂದು ರೂಢಿಯಾಯಿತು. ಒಂದ ಸರ್ತಿ ಅಂತೂ, ಮೂರ್ತಿ ಅವರು ಮಹಡಿಯ ಕೋಣೆಗೆ ಕರೆದೊಯ್ದರು; ಅಲ್ಲಿ ಸಿಕ್ಕಾಪಟ್ಟೆ ನಕ್ಷೆಗಳು ಇದ್ದವು. ಅವತ್ತು, ನಾನು, ಏನಿಲ್ಲ ಅಂದರು ಮೂರು ಗಂಟೆಗಳ ಕಾಲ ಆ ಹಳೆ ನಕ್ಷೆಗಳನ್ನು ನೋಡುತ್ತಾ ಕೂತಿರಬೇಕು. ನನ್ನನ್ನು ಆ ಕೋಣೆಯಲ್ಲಿ ಬಿಟ್ಟು ಮೂರ್ತಿಯವರು ಅಂಗಡಿಯಲ್ಲಿ ಕುಳಿತಿದ್ದರು. ಹೀಗೆ ಅವರ ಜೊತೆ ಒಂದು ಸಂಬಂಧ ಬೆಳೆಯಿತು. ಅಗಾಗ, ಹೊಸ ಯಾವುದಾದರೂ ಹೊಸ ಪುಸ್ತಕ ಬಂದರೆ ಮೂರ್ತಿ ಅವರು ಫೋನ್ ಮಾಡಿ ತಿಳಿಸುವರು. ಒಂದೊಂದು ಸಾರಿ ಬರಿ ಕಷ್ಟ ಸುಖ ಹಂಚಿಕೊಳ್ಳಕ್ಕೆ ಮಾತ್ರ ಅಲ್ಲಿ ಹೋಗ್ತಾ ಇದ್ದೆ.

ಇತಿಹಾಸದ ಅಧ್ಯಯನ ಮುಂದುವರಿದಂತೆ ಹೊಸ ಹೊಸ ಜಾಗಗಳು ಪರಿಚಯವಾದವು. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಮಿಥಿಕ್ ಸೊಸೈಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಮತ್ತೆ ನಗರದ ಕೇಂದ್ರ ಗ್ರಂಥಾಲಯಗಳು ನನ್ನ ಮನೆಯಷ್ಟೇ ಪ್ರಿಯವಾದವು. ಇಲ್ಲಿಯ ಸಿಬ್ಬಂದಿ ಕೂಡ ತುಂಬಾ ಸಹಾಯಕಾರಿ. ಅವರಿಗೆ ಪುಸ್ತಕಪ್ರಿಯರನ್ನು ಕಂಡರೆ ಅದೇನೋ ಪ್ರೀತಿ. ಖುಷಿಖುಶಿಯಾಗಿ ಬೇಕಾದ್ದನ್ನು ಹುಡುಕಿ, ಸ್ವಚ್ಛ ಮಾಡಿಕೊಡ್ತಾರೆ. ಕೆಲವರಂತೂ ಟೀ, ಕಾಫಿ ಮತ್ತೆ ತಿಂಡಿಯನ್ನೂ ಕೇಳಿ ಕೊಟ್ಟಿದ್ದುಂಟು.

PC : Edex live

ಈ ಗ್ರಂಥಾಲಯ ಜಗತ್ತು ಮತ್ತೊಂದು ಬೇರೆಯದೇ ಲೋಕ. ಇಲ್ಲಿ ರೀಡಿಂಗ್ ಕೋಣೆಗಳಲ್ಲಿ ಸಾಮೂಹಿಕವಾಗಿ ಓದುತ್ತಿರುವ ಜನರನ್ನು ನೋಡಿದರೆ ನನ್ನ ಮನಸ್ಸಿಗೆ ಏನೋ ಒಂದು ಹಿಗ್ಗು. ಕಬ್ಬನ್‌ಪಾರ್ಕಿನ ಸೆಂಟ್ರಲ್ ಲೈಬ್ರರಿ ಅಂತೂ ಯಾವಾಗಲೂ ಜನರಿಂದ ಕಿಕ್ಕಿರುತ್ತದೆ. ಬಹಳ ವರ್ಷಗಳ ಹಿಂದೆ ಈ ಜನ ಸಮುದ್ರದ ನಡುವೆ ಕುಳಿತು ನಾನು ರಾಮಚಂದ್ರ ಗುಹಾ ಅವರ “A Corner Field” ಓದಿದ್ದೆ. ಇನ್ನೊಂದು ಸಾರಿ ಬೆಂಗಳೂರಿನ ಹಳೆ ನಕ್ಷೆಗಳನ್ನು ಹುಡುಕುತ್ತ ಇದ್ದಾಗ, ಒಬ್ಬ ಗೆಳೆಯ ನೃಪತಂಗ ರೋಡ್‌ನಲ್ಲಿ ಇರುವ ಮಿಥಿಕ್ ಸೊಸೈಟಿಗೆ ಕರೆದೊಯ್ದ. ಅಲ್ಲಿನ ಗ್ರಂಥಾಲಯದಲ್ಲಿ ಬೆಂಗಳೂರು ನಗರದ 1880ರ ಭೂಗೋಳ ನಕ್ಷೆ ಸಿಕ್ಕಿತು. ಆ ದೊಡ್ಡ ನಕ್ಷೆಯನ್ನು ಸಿಬ್ಬಂದಿಯೊಬ್ಬರು ಸೂಕ್ಷ್ಮದಿಂದ ಟೇಬಲ್ ಮೇಲೆ ಹರಡಿ ತೋರಿಸಿದರು. ನಾನು ಬೀದರ್ ಮತ್ತು ಬಿಜಾಪುರ್ ಸುಲ್ತಾನೇಟ್ ಕಲೆ ಇತಿಹಾಸ ಸಂಶೋಧಿಸುವಾಗ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಿಬ್ಬಂದಿಯೊಬ್ಬರು ನನಗೆ ಮಾರ್ಗ್ ಸಾಂಸ್ಕೃತಿಕ ಪತ್ರಿಕೆಯ ನೂರಾರು ಸಂಚಿಕೆಗಳನ್ನು ಕೊಟ್ಟರು. ಅದೇ ದಿನ ಬೀದರ್ ಮೇಲೆ ಒಬ್ಬ ಬ್ರಿಟಿಷ್ ಆಫೀಸರ್ ಬರೆದ ಪ್ರವಾಸಕಥನವನ್ನು ಹುಡುಕಿ ಕೊಟ್ಟರು. ಈ ತರಹದ ಆಕಸ್ಮಿಕ ಕಥನಗಳು ಗ್ರಂಥಾಲಯಗಳಲ್ಲಿ ಸಹಜ. ಯಾವಾಗಾದರೂ ಜೆರಾಕ್ಸ್ ಬೇಕಾದರೆ ಇಂಡಿಯನ್ ಕೌನ್ಸಿಲ್ ಆ ಹಿಸ್ಟಾರಿಕಲ್ ರಿಸರ್ಚ್‌ನ ಸಿಬ್ಬಂದಿ ಅವೆನ್ಯೂ ರೋಡಿನ ಅಂಗಡಿಯಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಡುತ್ತಾರೆ. ಕನ್ನಡ ರಂಗಭೂಮಿಯ ಬಗ್ಗೆ ಸಂಶೋಧಿಸುತ್ತಿರುವಾಗ ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಕ್ಕ ಹಳೆ ರಂಗಭೂಮಿ ಎಂಬ ಪತ್ರಿಕೆಯ ಸಂಚಿಕೆಗಳು ಹಾಗು ಬೇರೆ ಪತ್ರಿಕೆಗಳಲ್ಲಿ ಮೂಡಿಬಂದ ವಿಮರ್ಶೆಗಳು ತುಂಬಾ ಸಹಾಯವಾದವು. ಇದೇ ಗ್ರಂಥಾಲಯದಲ್ಲಿ ಪ್ರಜಾವಾಣಿ ಹಾಗು ಹಲವಾರು ಪತ್ರಿಕೆಗಳ 30 ವರ್ಷಕ್ಕಿಂತ ಹಿಂದಿನ ಸಂಚಿಕೆಗಳು ಲಭ್ಯವಿವೆ.

ಬಹಳಷ್ಟು ಬೆಂಗಳೂರಿನ ಸುಂದರ ದಿನಗಳನ್ನು ನಾನು ಈ ನಗರದ ಗ್ರಂಥಾಲಯಗಳಲ್ಲಿ ಕಳೆದಿದ್ದೀನಿ. ಅವರ ಸಿಬ್ಬಂದಿಗಳ ಜೊತೆ ಟೀ, ಕಾಫಿ, ಊಟ ಸವಿದಿದ್ದೀನಿ. ಪುಸ್ತಕಗಳ ವಿಶಾಲ ಜಗತ್ತಿನಲ್ಲಿ ವಿದ್ಯೆಯಷ್ಟೇ ಅಲ್ಲ, ಸರಳ ಮನಸ್ಸಿನ ಒಳ್ಳೆ ಜನ ಕೂಡ ಇದ್ದಾರೆ ಅಂತ ನನ್ನ ಅನುಭವಗಳು ನನಗೆ ಕಲಿಸಿವೆ.

ಹಳೆ ಪುಸ್ತಕ ಅಂಗಡಿಗಳ ಅನುಭವ ಕೂಡ ಬೇರೆಯಲ್ಲ. ’ಸೆಲೆಕ್ಟ್’ನಲ್ಲಿ ಮೂರ್ತಿ, ’ನಾಗಶ್ರೀ’ಯಲ್ಲಿ ಪ್ರಸಾದ್, ’ಬುಕ್‌ವರ್ಮ್’ನಲ್ಲಿ ಕೃಷ್ಣರವರ ಜೊತೆಗೆ ಇಂಥವೇ ಸಿಹಿ ಕ್ಷಣಗಳನ್ನು ಕಳೆದಿದ್ದೇನೆ. ನಾನು ಕೆ.ಜಿ.ಎಫ್ ಮೇಲೆ ಒಂದು ಸಾಕ್ಷ್ಯಚಿತ್ರ ಮಾಡುವಾಗ ಪ್ರಸಾದ್‌ರವರನ್ನು ಭೇಟಿ ಆಗಿದ್ದೆ. ಅವರಿಗೆ ಈ ತರಹ ಒಂದು ಚಿತ್ರ ಮಾಡ್ತಿದ್ದೇನೆ ಅಂತ ಹೇಳಿದಾಗ, ಅವರು ದಿಢೀರನೆ ತಾವು ಕುಡಿಯುತ್ತಿದ್ದ ಕಾಫಿ ಬಿಟ್ಟು ಅಂಗಡಿಯೊಳಗೆ ಹೋಗಿ ಗಾಯತ್ರಿ ಚಂದ್ರಶೇಖರ್ ಅವರ “Grit and gold” ಪುಸ್ತಕವನ್ನ ತಂದುಕೊಟ್ಟರು. ಅದರ ಬಗ್ಗೆ ನಾನು ಅಲ್ಲೇ ಮೊದಲು ತಿಳಿದಿದ್ದು. ಅದಷ್ಟೇ ಅಲ್ಲ, ಗಾಯತ್ರಿಯವರ ಮನೆ ಅಡ್ರೆಸ್ ಕೂಡ ಪ್ರಸಾದ್‌ರವರು ಕೊಟ್ಟು ಅವರನ್ನ ಭೇಟಿಯಾಗಲು ಪ್ರೋತ್ಸಾಹಿಸಿದರು. ಕಡೆಗೆ ಗಾಯತ್ರಿ ಅವರು ನನ್ನ ಸಾಕ್ಷ್ಯಚಿತ್ರಕ್ಕೆ ಬಹಳ ಸಹಾಯ ಮಾಡಿದರು ಹಾಗು ಚಿತ್ರದಲ್ಲಿ ಅವರ ಸಂದರ್ಶನ ಕೂಡ ಮೂಡಿಬಂತು.

ಬೆಂಗಳೂರಿನಲ್ಲಿ ಅತಿ ಮುಖ್ಯವಾದ ದಾಖಲೆಗಳಿರುವ ಜಾಗವೆಂದರೆ ವಿಧಾನಸೌಧ. ಇಲ್ಲಿಯ ಸಂಗ್ರಹದಲ್ಲಿ 19ನೆ ಶತಮಾನದಿಂದ ಹಿಡಿದು ಈವರೆಗಿನ ರಾಜ್ಯದ ಅಫಿಷಿಯಲ್ ದಾಖಲೆಗಳು ಇವೆ. ಆದರೆ ಇಲ್ಲಿ ಸಂಶೋಧಕರಿಗೆ ಮಾತ್ರ ಪ್ರವೇಶ. ಮೈಸೂರು ರಾಜ್ಯದ ಆಧುನಿಕ ಇತಿಹಾಸ ಓದುವವರಿಗೆ ಇದು ಪ್ರಮುಖ ಸಂಗ್ರಹ. ನಾನು ಇಲ್ಲಿ ಒಂದೇ ಸಲ ಹೋಗಿದ್ದು. ಇಲ್ಲಿ ಮೂರ್ತಿ, ಪ್ರಸಾದ್ ಅಂಥವರು ಇಲ್ಲ. ಆದರೆ ಪದೇಪದೇ ಹೋದರೆ ಅವರೂ ಸ್ನೇಹಿತರಾಗ್ತಾರೆ ಅನ್ನೋದರಲ್ಲಿ ಸಂದೇಹವೇ ಇಲ್ಲ.

ಅಂತರ್ಜಾಲದ ಸಂಶೋಧನೆಯಲ್ಲಿ ಈ ತರಹ ಮರೆಯಲಾಗದಂತಹ ಅನುಭವಗಳು ಕಮ್ಮಿ. ಆಮೇಲೆ ಆಕಸ್ಮಿಕ ಅನುಭವಗಳೂ ಸಿಗುವುದು ಕಷ್ಟ. ಹಳೆ ಗೆಜೆಟಿಯರ್‌ಗಳು ಮತ್ತೆ “Indian Antiquary” ಮತ್ತೆ “Indian Archaeology Review” ಪತ್ರಿಕೆಗಳು ಆನ್‌ಲೈನ್‌ನಲ್ಲಿ ಸಿಕ್ಕರೂ, ಅವುಗಳನ್ನು ಶೆಲ್ಫ್‌ಗಳಲ್ಲಿ ಹುಡುಕಿ, ಕೈಯಲ್ಲಿ ಹಿಡಿದು, ನೋಟ್ಸ್ ಮಾಡಿಕೊಂಡು, ಗ್ರಂಥಪಾಲಕರ ಅಭಿಪ್ರಾಯ ಕೇಳಿ ಅಭ್ಯಾಸ ಮಾಡೋದು ನನಗೆ ತುಂಬಾ ಅನನ್ಯವಾದ ಅನುಭವವಾಗಿದೆ.

ಕೋವಿಡ್ ರೋಗ ಈ ಗ್ರಂಥಾಲಯಗಳು ಮತ್ತು ಪುಸ್ತಕದ ಅಂಗಡಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗ ಓದುವ ಕೋಣೆಗಳು ಮುಚ್ಚಿವೆ. ಮತ್ತೆ ಯಾವಾಗ ಸಾಮೂಹಿಕವಾಗಿ ನಾವು ಓದನ್ನು ಸವಿಯುತ್ತೇವೋ ಹೇಳೋದು ಕಷ್ಟ. ಈ ಕಷ್ಟದ ಕಾಲದಲ್ಲಿ ಈ ವಿದ್ಯೆಯ ದೇಗುಲಗಳನ್ನು ನಮ್ಮ ಪ್ರಾರ್ಥನೆಗಳಲ್ಲಿ ಇಟ್ಟುಕೊಳ್ಳೋಣ ಬನ್ನಿ.

ಬಸವ ಬಿರಾದರ್

ಬಸವ ಬಿರಾದರ್
ಬಸವ ಸ್ವತಂತ್ರ ಸಂಶೋಧಕ ಮತ್ತು ಚಿತ್ರನಿರ್ದೇಶಕ. ಇತಿಹಾಸ, ಸಂಶೋಧನೆ ಮತ್ತು ಚಲನಚಿತ್ರಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಇವರು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಿಯತವಾಗಿ ಪತ್ರಿಕೆಗಳಿಗೆ ಬರೆಯುತ್ತಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ವಿಶ್ವ ಪುಸ್ತಕ ದಿನ ವಿಶೇಷ; ಪುಸ್ತಕಗಳು ಅಳಿವಿನಂಚಿನಲ್ಲಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...