Homeಮುಖಪುಟವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

ವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

- Advertisement -
- Advertisement -

ಇತಿಹಾಸದ ಅಧ್ಯಯನ ಅಂದರೆ ಹಳೆ ಪುಸ್ತಕ ಮತ್ತು ದಾಖಲೆಗಳ ನಡುವೆ ಸಹಜೀವನ. ಮನುಷ್ಯ ಬರೆದ ಕೃತಿ ಅಥವಾ ಬಿಡಿಸಿದ ಚಿತ್ರ ಆ ಸಮಯದ, ಇತಿಹಾಸದ ಪ್ರಮುಖ ಮೂಲ. ಇಂತಹ ಮೂಲ ಕೃತಿಗಳನ್ನು, ದಾಖಲೆಗಳನ್ನು ಹುಡುಕಿ, ಅವುಗಳನ್ನು ಅಭ್ಯಾಸ ಮಾಡಿ, ಅವುಗಳಲ್ಲಿ ಇರುವ ಪ್ರಮುಖ ಮಾಹಿತಿಗಳನ್ನು ಒರೆಗೆ ಹಚ್ಚಿ ಹೊರತರುವುದು ಇತಿಹಾಸಕಾರರ ಕೆಲಸ. ನಾನು ಇತಿಹಾಸ ಕಲಿಯಲು ಕಾಲೇಜಿಗೆ ಹೋದವನಲ್ಲ. ಆದರೆ ನನಗೆ ನಾನಾ ತರಹದ ಇತಿಹಾಸಗಳಲ್ಲಿ ಆಸಕ್ತಿ.

ಸುಮಾರು ವರ್ಷಗಳ ಹಿಂದೆ, ನನಗೆ ಇತಿಹಾಸದ ಹುಚ್ಚು ಹಿಡಿದ ಹರೆಯದಲ್ಲಿ, ನಾನು ಬೆಂಗಳೂರಿನ ಬ್ರಿಗೇಡ್ ರೋಡಿನ ಸಂದಿಯಲ್ಲಿ ಇರುವ ’ಸೆಲೆಕ್ಟ್’ ಬುಕ್ ಅಂಗಡಿಗೆ ಹೋಗುತ್ತಿದ್ದೆ. ಎರಡೇ ಕೋಣೆ ಇರುವ ಈ ಚಿಕ್ಕ ಅಂಗಡಿಯಲ್ಲಿ ನಾನಾ ತರಹದ-ನಮೂನೆಯ ಪುಸ್ತಕಗಳು. ನನಗೆ ಫಜ್ಲುಲ್ ಹಸನ್ ಅವರ “Bangalore through Centuries” ಪುಸ್ತಕ ಬೇಕಾಗಿತ್ತು. ಆದರೆ ಅಲ್ಲಿಯ ಸಂಗ್ರಹ ನೋಡಿ ಯಾವುದ್ಯಾವದೋ ಪುಸ್ತಕಗಳಲ್ಲಿ ಮೈಮರೆತುಬಿಟ್ಟೆ. ನನ್ನ ವಿಚಿತ್ರ ನಡವಳಿಕೆ ಗಮನಿಸಿದ ಸೆಲೆಕ್ಟ್ ಮಾಲೀಕರಾದ ಮೂರ್ತಿ ಅವರು “ನೀವು ಇಲ್ಲಿಗೆ ಮೊದಲು ಸರ್ತಿ ಬಂದಿದ್ದು, ಅಲ್ವ, ಏನು ಹುಡುಕ್ತಾ ಇದ್ದೀರಾ” ಅಂತ ಕೇಳಿದರು. ನಾನು ಹಸನ್ ಅವರ ಪುಸ್ತಕದ ಹೆಸರು ಹೇಳಿದ ತಕ್ಷಣ ಅವರು “ಅಯ್ಯೋ, ನಿಮಗೆ ಬೆಂಗಳೂರು ಇತಿಹಾಸದಲ್ಲಿ ಆಸಕ್ತಿನಾ? ಬನ್ನಿ ಇಲ್ಲಿ” ಅಂದು, ಹಸನ್ ಅವರ ಪುಸ್ತಕದ ಜೆರಾಕ್ಸ್ ಜೊತೆಗೆ ಇನ್ನು ಎರಡು ಮೂರು ಬೆಂಗಳೂರಿನ ಬಗೆಗಿನ ಪುಸ್ತಕಗಳನ್ನು ಕೊಟ್ಟರು. ಆ ದಿನದ ನಂತರ, ಸೆಲೆಕ್ಟ್ ಅಂಗಡಿ ಹೋಗೋದು ಒಂದು ರೂಢಿಯಾಯಿತು. ಒಂದ ಸರ್ತಿ ಅಂತೂ, ಮೂರ್ತಿ ಅವರು ಮಹಡಿಯ ಕೋಣೆಗೆ ಕರೆದೊಯ್ದರು; ಅಲ್ಲಿ ಸಿಕ್ಕಾಪಟ್ಟೆ ನಕ್ಷೆಗಳು ಇದ್ದವು. ಅವತ್ತು, ನಾನು, ಏನಿಲ್ಲ ಅಂದರು ಮೂರು ಗಂಟೆಗಳ ಕಾಲ ಆ ಹಳೆ ನಕ್ಷೆಗಳನ್ನು ನೋಡುತ್ತಾ ಕೂತಿರಬೇಕು. ನನ್ನನ್ನು ಆ ಕೋಣೆಯಲ್ಲಿ ಬಿಟ್ಟು ಮೂರ್ತಿಯವರು ಅಂಗಡಿಯಲ್ಲಿ ಕುಳಿತಿದ್ದರು. ಹೀಗೆ ಅವರ ಜೊತೆ ಒಂದು ಸಂಬಂಧ ಬೆಳೆಯಿತು. ಅಗಾಗ, ಹೊಸ ಯಾವುದಾದರೂ ಹೊಸ ಪುಸ್ತಕ ಬಂದರೆ ಮೂರ್ತಿ ಅವರು ಫೋನ್ ಮಾಡಿ ತಿಳಿಸುವರು. ಒಂದೊಂದು ಸಾರಿ ಬರಿ ಕಷ್ಟ ಸುಖ ಹಂಚಿಕೊಳ್ಳಕ್ಕೆ ಮಾತ್ರ ಅಲ್ಲಿ ಹೋಗ್ತಾ ಇದ್ದೆ.

ಇತಿಹಾಸದ ಅಧ್ಯಯನ ಮುಂದುವರಿದಂತೆ ಹೊಸ ಹೊಸ ಜಾಗಗಳು ಪರಿಚಯವಾದವು. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಮಿಥಿಕ್ ಸೊಸೈಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಮತ್ತೆ ನಗರದ ಕೇಂದ್ರ ಗ್ರಂಥಾಲಯಗಳು ನನ್ನ ಮನೆಯಷ್ಟೇ ಪ್ರಿಯವಾದವು. ಇಲ್ಲಿಯ ಸಿಬ್ಬಂದಿ ಕೂಡ ತುಂಬಾ ಸಹಾಯಕಾರಿ. ಅವರಿಗೆ ಪುಸ್ತಕಪ್ರಿಯರನ್ನು ಕಂಡರೆ ಅದೇನೋ ಪ್ರೀತಿ. ಖುಷಿಖುಶಿಯಾಗಿ ಬೇಕಾದ್ದನ್ನು ಹುಡುಕಿ, ಸ್ವಚ್ಛ ಮಾಡಿಕೊಡ್ತಾರೆ. ಕೆಲವರಂತೂ ಟೀ, ಕಾಫಿ ಮತ್ತೆ ತಿಂಡಿಯನ್ನೂ ಕೇಳಿ ಕೊಟ್ಟಿದ್ದುಂಟು.

PC : Edex live

ಈ ಗ್ರಂಥಾಲಯ ಜಗತ್ತು ಮತ್ತೊಂದು ಬೇರೆಯದೇ ಲೋಕ. ಇಲ್ಲಿ ರೀಡಿಂಗ್ ಕೋಣೆಗಳಲ್ಲಿ ಸಾಮೂಹಿಕವಾಗಿ ಓದುತ್ತಿರುವ ಜನರನ್ನು ನೋಡಿದರೆ ನನ್ನ ಮನಸ್ಸಿಗೆ ಏನೋ ಒಂದು ಹಿಗ್ಗು. ಕಬ್ಬನ್‌ಪಾರ್ಕಿನ ಸೆಂಟ್ರಲ್ ಲೈಬ್ರರಿ ಅಂತೂ ಯಾವಾಗಲೂ ಜನರಿಂದ ಕಿಕ್ಕಿರುತ್ತದೆ. ಬಹಳ ವರ್ಷಗಳ ಹಿಂದೆ ಈ ಜನ ಸಮುದ್ರದ ನಡುವೆ ಕುಳಿತು ನಾನು ರಾಮಚಂದ್ರ ಗುಹಾ ಅವರ “A Corner Field” ಓದಿದ್ದೆ. ಇನ್ನೊಂದು ಸಾರಿ ಬೆಂಗಳೂರಿನ ಹಳೆ ನಕ್ಷೆಗಳನ್ನು ಹುಡುಕುತ್ತ ಇದ್ದಾಗ, ಒಬ್ಬ ಗೆಳೆಯ ನೃಪತಂಗ ರೋಡ್‌ನಲ್ಲಿ ಇರುವ ಮಿಥಿಕ್ ಸೊಸೈಟಿಗೆ ಕರೆದೊಯ್ದ. ಅಲ್ಲಿನ ಗ್ರಂಥಾಲಯದಲ್ಲಿ ಬೆಂಗಳೂರು ನಗರದ 1880ರ ಭೂಗೋಳ ನಕ್ಷೆ ಸಿಕ್ಕಿತು. ಆ ದೊಡ್ಡ ನಕ್ಷೆಯನ್ನು ಸಿಬ್ಬಂದಿಯೊಬ್ಬರು ಸೂಕ್ಷ್ಮದಿಂದ ಟೇಬಲ್ ಮೇಲೆ ಹರಡಿ ತೋರಿಸಿದರು. ನಾನು ಬೀದರ್ ಮತ್ತು ಬಿಜಾಪುರ್ ಸುಲ್ತಾನೇಟ್ ಕಲೆ ಇತಿಹಾಸ ಸಂಶೋಧಿಸುವಾಗ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಿಬ್ಬಂದಿಯೊಬ್ಬರು ನನಗೆ ಮಾರ್ಗ್ ಸಾಂಸ್ಕೃತಿಕ ಪತ್ರಿಕೆಯ ನೂರಾರು ಸಂಚಿಕೆಗಳನ್ನು ಕೊಟ್ಟರು. ಅದೇ ದಿನ ಬೀದರ್ ಮೇಲೆ ಒಬ್ಬ ಬ್ರಿಟಿಷ್ ಆಫೀಸರ್ ಬರೆದ ಪ್ರವಾಸಕಥನವನ್ನು ಹುಡುಕಿ ಕೊಟ್ಟರು. ಈ ತರಹದ ಆಕಸ್ಮಿಕ ಕಥನಗಳು ಗ್ರಂಥಾಲಯಗಳಲ್ಲಿ ಸಹಜ. ಯಾವಾಗಾದರೂ ಜೆರಾಕ್ಸ್ ಬೇಕಾದರೆ ಇಂಡಿಯನ್ ಕೌನ್ಸಿಲ್ ಆ ಹಿಸ್ಟಾರಿಕಲ್ ರಿಸರ್ಚ್‌ನ ಸಿಬ್ಬಂದಿ ಅವೆನ್ಯೂ ರೋಡಿನ ಅಂಗಡಿಯಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಡುತ್ತಾರೆ. ಕನ್ನಡ ರಂಗಭೂಮಿಯ ಬಗ್ಗೆ ಸಂಶೋಧಿಸುತ್ತಿರುವಾಗ ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಕ್ಕ ಹಳೆ ರಂಗಭೂಮಿ ಎಂಬ ಪತ್ರಿಕೆಯ ಸಂಚಿಕೆಗಳು ಹಾಗು ಬೇರೆ ಪತ್ರಿಕೆಗಳಲ್ಲಿ ಮೂಡಿಬಂದ ವಿಮರ್ಶೆಗಳು ತುಂಬಾ ಸಹಾಯವಾದವು. ಇದೇ ಗ್ರಂಥಾಲಯದಲ್ಲಿ ಪ್ರಜಾವಾಣಿ ಹಾಗು ಹಲವಾರು ಪತ್ರಿಕೆಗಳ 30 ವರ್ಷಕ್ಕಿಂತ ಹಿಂದಿನ ಸಂಚಿಕೆಗಳು ಲಭ್ಯವಿವೆ.

ಬಹಳಷ್ಟು ಬೆಂಗಳೂರಿನ ಸುಂದರ ದಿನಗಳನ್ನು ನಾನು ಈ ನಗರದ ಗ್ರಂಥಾಲಯಗಳಲ್ಲಿ ಕಳೆದಿದ್ದೀನಿ. ಅವರ ಸಿಬ್ಬಂದಿಗಳ ಜೊತೆ ಟೀ, ಕಾಫಿ, ಊಟ ಸವಿದಿದ್ದೀನಿ. ಪುಸ್ತಕಗಳ ವಿಶಾಲ ಜಗತ್ತಿನಲ್ಲಿ ವಿದ್ಯೆಯಷ್ಟೇ ಅಲ್ಲ, ಸರಳ ಮನಸ್ಸಿನ ಒಳ್ಳೆ ಜನ ಕೂಡ ಇದ್ದಾರೆ ಅಂತ ನನ್ನ ಅನುಭವಗಳು ನನಗೆ ಕಲಿಸಿವೆ.

ಹಳೆ ಪುಸ್ತಕ ಅಂಗಡಿಗಳ ಅನುಭವ ಕೂಡ ಬೇರೆಯಲ್ಲ. ’ಸೆಲೆಕ್ಟ್’ನಲ್ಲಿ ಮೂರ್ತಿ, ’ನಾಗಶ್ರೀ’ಯಲ್ಲಿ ಪ್ರಸಾದ್, ’ಬುಕ್‌ವರ್ಮ್’ನಲ್ಲಿ ಕೃಷ್ಣರವರ ಜೊತೆಗೆ ಇಂಥವೇ ಸಿಹಿ ಕ್ಷಣಗಳನ್ನು ಕಳೆದಿದ್ದೇನೆ. ನಾನು ಕೆ.ಜಿ.ಎಫ್ ಮೇಲೆ ಒಂದು ಸಾಕ್ಷ್ಯಚಿತ್ರ ಮಾಡುವಾಗ ಪ್ರಸಾದ್‌ರವರನ್ನು ಭೇಟಿ ಆಗಿದ್ದೆ. ಅವರಿಗೆ ಈ ತರಹ ಒಂದು ಚಿತ್ರ ಮಾಡ್ತಿದ್ದೇನೆ ಅಂತ ಹೇಳಿದಾಗ, ಅವರು ದಿಢೀರನೆ ತಾವು ಕುಡಿಯುತ್ತಿದ್ದ ಕಾಫಿ ಬಿಟ್ಟು ಅಂಗಡಿಯೊಳಗೆ ಹೋಗಿ ಗಾಯತ್ರಿ ಚಂದ್ರಶೇಖರ್ ಅವರ “Grit and gold” ಪುಸ್ತಕವನ್ನ ತಂದುಕೊಟ್ಟರು. ಅದರ ಬಗ್ಗೆ ನಾನು ಅಲ್ಲೇ ಮೊದಲು ತಿಳಿದಿದ್ದು. ಅದಷ್ಟೇ ಅಲ್ಲ, ಗಾಯತ್ರಿಯವರ ಮನೆ ಅಡ್ರೆಸ್ ಕೂಡ ಪ್ರಸಾದ್‌ರವರು ಕೊಟ್ಟು ಅವರನ್ನ ಭೇಟಿಯಾಗಲು ಪ್ರೋತ್ಸಾಹಿಸಿದರು. ಕಡೆಗೆ ಗಾಯತ್ರಿ ಅವರು ನನ್ನ ಸಾಕ್ಷ್ಯಚಿತ್ರಕ್ಕೆ ಬಹಳ ಸಹಾಯ ಮಾಡಿದರು ಹಾಗು ಚಿತ್ರದಲ್ಲಿ ಅವರ ಸಂದರ್ಶನ ಕೂಡ ಮೂಡಿಬಂತು.

ಬೆಂಗಳೂರಿನಲ್ಲಿ ಅತಿ ಮುಖ್ಯವಾದ ದಾಖಲೆಗಳಿರುವ ಜಾಗವೆಂದರೆ ವಿಧಾನಸೌಧ. ಇಲ್ಲಿಯ ಸಂಗ್ರಹದಲ್ಲಿ 19ನೆ ಶತಮಾನದಿಂದ ಹಿಡಿದು ಈವರೆಗಿನ ರಾಜ್ಯದ ಅಫಿಷಿಯಲ್ ದಾಖಲೆಗಳು ಇವೆ. ಆದರೆ ಇಲ್ಲಿ ಸಂಶೋಧಕರಿಗೆ ಮಾತ್ರ ಪ್ರವೇಶ. ಮೈಸೂರು ರಾಜ್ಯದ ಆಧುನಿಕ ಇತಿಹಾಸ ಓದುವವರಿಗೆ ಇದು ಪ್ರಮುಖ ಸಂಗ್ರಹ. ನಾನು ಇಲ್ಲಿ ಒಂದೇ ಸಲ ಹೋಗಿದ್ದು. ಇಲ್ಲಿ ಮೂರ್ತಿ, ಪ್ರಸಾದ್ ಅಂಥವರು ಇಲ್ಲ. ಆದರೆ ಪದೇಪದೇ ಹೋದರೆ ಅವರೂ ಸ್ನೇಹಿತರಾಗ್ತಾರೆ ಅನ್ನೋದರಲ್ಲಿ ಸಂದೇಹವೇ ಇಲ್ಲ.

ಅಂತರ್ಜಾಲದ ಸಂಶೋಧನೆಯಲ್ಲಿ ಈ ತರಹ ಮರೆಯಲಾಗದಂತಹ ಅನುಭವಗಳು ಕಮ್ಮಿ. ಆಮೇಲೆ ಆಕಸ್ಮಿಕ ಅನುಭವಗಳೂ ಸಿಗುವುದು ಕಷ್ಟ. ಹಳೆ ಗೆಜೆಟಿಯರ್‌ಗಳು ಮತ್ತೆ “Indian Antiquary” ಮತ್ತೆ “Indian Archaeology Review” ಪತ್ರಿಕೆಗಳು ಆನ್‌ಲೈನ್‌ನಲ್ಲಿ ಸಿಕ್ಕರೂ, ಅವುಗಳನ್ನು ಶೆಲ್ಫ್‌ಗಳಲ್ಲಿ ಹುಡುಕಿ, ಕೈಯಲ್ಲಿ ಹಿಡಿದು, ನೋಟ್ಸ್ ಮಾಡಿಕೊಂಡು, ಗ್ರಂಥಪಾಲಕರ ಅಭಿಪ್ರಾಯ ಕೇಳಿ ಅಭ್ಯಾಸ ಮಾಡೋದು ನನಗೆ ತುಂಬಾ ಅನನ್ಯವಾದ ಅನುಭವವಾಗಿದೆ.

ಕೋವಿಡ್ ರೋಗ ಈ ಗ್ರಂಥಾಲಯಗಳು ಮತ್ತು ಪುಸ್ತಕದ ಅಂಗಡಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗ ಓದುವ ಕೋಣೆಗಳು ಮುಚ್ಚಿವೆ. ಮತ್ತೆ ಯಾವಾಗ ಸಾಮೂಹಿಕವಾಗಿ ನಾವು ಓದನ್ನು ಸವಿಯುತ್ತೇವೋ ಹೇಳೋದು ಕಷ್ಟ. ಈ ಕಷ್ಟದ ಕಾಲದಲ್ಲಿ ಈ ವಿದ್ಯೆಯ ದೇಗುಲಗಳನ್ನು ನಮ್ಮ ಪ್ರಾರ್ಥನೆಗಳಲ್ಲಿ ಇಟ್ಟುಕೊಳ್ಳೋಣ ಬನ್ನಿ.

ಬಸವ ಬಿರಾದರ್

ಬಸವ ಬಿರಾದರ್
ಬಸವ ಸ್ವತಂತ್ರ ಸಂಶೋಧಕ ಮತ್ತು ಚಿತ್ರನಿರ್ದೇಶಕ. ಇತಿಹಾಸ, ಸಂಶೋಧನೆ ಮತ್ತು ಚಲನಚಿತ್ರಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಇವರು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಿಯತವಾಗಿ ಪತ್ರಿಕೆಗಳಿಗೆ ಬರೆಯುತ್ತಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ವಿಶ್ವ ಪುಸ್ತಕ ದಿನ ವಿಶೇಷ; ಪುಸ್ತಕಗಳು ಅಳಿವಿನಂಚಿನಲ್ಲಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...